Friday, May 15, 2026
Home Blog Page 220

ಕಾಮನ್ವೆಲ್ತ್ ಗೇಮ್ಸ್ – ಪದಕ ಪಟ್ಟಿ – 05.08.2022, Commonwealth Games 2022 Medal Tally Latest

ಕಾಮನ್ವೆಲ್ತ್ ಗೇಮ್ಸ್ 2022 ರ  ಇತ್ತೀಚೆಗಿನ ವರೆಗಿನ ಪದಕ ಪಟ್ಟಿವಿವರ ಇಲ್ಲಿದೆ. 

RankCountryGoldSilverBronzeTotal
7India67720
1Australia504240132
2England424432118
3Canada17202259
4New Zealand16101137
5Scotland781934
6South Africa77822
8Nigeria53513
9Wales441018
10Malaysia4239
11Jamaica2215
12Cyprus2147
13Uganda2002
14Northern Ireland1438
15Kenya1348
16Singapore1315
17Samoa1304
18Trinidad and Tobago1113
19Pakistan1012
20Bahamas1001
20Bermuda1001
20Cameroon1001
23Fiji0224
23Mauritius0224
25Sri Lanka0123
26Barbados0101
26Gambia0101
26Guernsey0101
26Papua New Guinea0101
26Saint Lucia0101
26Tanzania0101
32Namibia0033
33Malta0011
33Nauru0011

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ 

ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇವರನ್ನು ಯಕ್ಷ ಭಾರತಿ ( ರಿ) ಕನ್ಯಾಡಿ ವತಿಯಿಂದ ಅಭಿನಂದಿಸಲಾಯಿತು.

ಯಕ್ಷ ಭಾರತಿ ಸಂಸ್ಥೆಯ ಎಂಟನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಗೌರವ ಪೂರ್ವಕವಾಗಿ ಹೆಗ್ಗಡವರಿಗೆ ನೀಡಲಾಯಿತು.

ಯಕ್ಷ ಭಾರತಿ ಅಧ್ಯಕ್ಷರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ವಿಶ್ವಸ್ಥರಾದ ವಿದ್ಯಾಕುಮಾರ್ ಕಾಂಚೊಡು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯಕ್ಷ ಭಾರತಿ ವಾರ್ಷಿಕೋತ್ಸವದ ಅಂಗವಾಗಿ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಸಹಯೋಗದಲ್ಲಿ ನಡೆಸಲಾಗುವ ಆರೋಗ್ಯ ತಪಾಸಣಾ ಶಿಬಿರ ,  ಮಂಗಳೂರಿನ ರೆಡ್ ಕ್ರಾಸ್ ಸಂಸ್ಥೆ ಸಹಕಾರದಲ್ಲಿ ರಕ್ತದಾನ ಶಿಬಿರ ,ಯಕ್ಷ ಭಾರತಿ ಪ್ರಶಸ್ತಿ ಪ್ರದಾನ, ವಿದ್ಯಾನಿಧಿ ವಿತರಣೆ, ಸೇವಾ ಗೌರವ ಸನ್ಮಾನ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ  ಬಗ್ಗೆ ತಿಳಿದು ಹೆಗ್ಗಡಯವರು ಸಂತಸ ವ್ಯಕ್ತಪಡಿಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ವಿಶಿಷ್ಟ ಪ್ರಯತ್ನ – ಆಜಾದಿ ಕಾ ಅಮೃತ ಮಹೋತ್ಸವ ಪ್ರಯುಕ್ತ  75 ರಾಷ್ಟ್ರನಾಯಕರ ಸಂಗ್ರಹಿತ ಲೇಖನಗಳು

ಸಮಯದ ಸದುಪಯೋಗವನ್ನು ಸಮರ್ಪಕವಾಗಿ ಮಾಡಿಕೊಂಡಲ್ಲಿ ಜ್ಞಾನವನ್ನು ಸ್ಪಲ್ಪ ಮಟ್ಟಿಗಾದರೂ ವೃದ್ಧಿಸಿಕೊಳ್ಳಬಹುದು ಎಂದು ಮನಗಂಡು ಆಜಾದಿಕಾ ಅಮೃತ ಮಹೋತ್ಸವದ ಸವಿನೆನಪಿಗಾಗಿ 75 ರಾಷ್ಟ್ರನಾಯಕರ ಸಂಗ್ರಹಿತ ಲೇಖನಗಳನ್ನು ಸಂಗ್ರಹಿಸಿ ತಮ್ಮದೇ ಕೈಬರಹದ ಮೂಲಕ ಜೋಡಿಸಿ ಉಳಿದ ವಿದ್ಯಾರ್ಥಿಗಳಿಗೂ ಸ್ಪೂರ್ತಿ ನೀಡುವತ್ತ ಕಿರುಪ್ರಯತ್ನ ಮಾಡಿದ್ದರು.

ದಿನಾಂಕ 03-08-2022ರಂದು ಅದರ ಉದ್ಘಾಟನಾ ಸಮಾರಂಭವು ನಡೆಯಿತು.ಉದ್ಘಾಟನಾ ಸಮಾರಂಭವನ್ನು ಶ್ರೀ  ರೋ. ಜಗಜೀವನದಾಸ್ ರೈ ಇವರು ದೀಪ ಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು, ಅಲ್ಲದೇ 10ನೇ ತರಗತಿಯ ವಿದ್ಯಾರ್ಥಿನಿಯರಾದ ಕು.ಯುಕ್ತಶ್ರೀ ಮತ್ತು ಕು.ದೃಶಾ ಇವರ ಕಾರ್ಯತತ್ಪರತೆಯನ್ನು ಮೆಚ್ಚಿ, ಇನ್ನೂ ಇಂತಹ ಕಾರ್ಯವನ್ನು ಮುಂದುವರೆಸುವಂತೆ ಹುರಿದುಂಬಿಸಿದರು.ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

ಕೊರೋನ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಆ ದಿನಗಳಲ್ಲಿ ಅಧ್ಯಾಪಕವೃಂದ ನಮಗೆ ಪಾಠವನ್ನು ಆನ್‍ಲೈನ್ ಮೂಲಕ ಬೋಧನೆ ಮಾಡುತ್ತಿದ್ದರು. ಬೋಧನೆಯ ಬಳಿಕ ನಮ್ಮ ಸಮಯವನ್ನು ಹೇಗೆ ಸದುಪಯೋಗಿಸಿಕೊಳ್ಳಬಹುದು ಎಂದು ಯೋಚಿಸಿದಾಗ ನನಗೆ ಮತ್ತು ನನ್ನ ಗೆಳತಿಗೆ ಒಂದು ಉಪಾಯ ಹೊಳೆಯಿತು.

ನಾವಿಬ್ಬರೂ ದಿನಪತ್ರಿಕೆಗಳನ್ನು ಗಮನಿಸಿದಾಗ ಥಟ್ಟನೆ ರಾಷ್ಟ್ರನಾಯಕರ ಲೇಖನಗಳನ್ನು ಸಂಗ್ರಹಿಸಿ ಬರೆದಿಡುವ ಯೋಚನೆ ಮಾಡಿದೆವು. ಇಬ್ಬರೂ ಸೇರಿ 75 ಮಹಾಪುರುಷರ ಬಗ್ಗೆ ಸಂಗ್ರಹಿಸಿ ಬರವಣಿಗೆ ರೂಪಕ್ಕಿಳಿಸಿದೆವು. ಈ ಲೇಖನಗಳಲ್ಲಿ ನಮ್ಮ ದೇಶಕ್ಕಾಗಿ ಅವಿರತವಾಗಿ ಹೋರಾಡಿ ವೀರಮರಣವನ್ನು ಗೈದವರ ಕುರಿತು ಸಂಗ್ರಹಿಸಿ ಬರೆಯಲಾಗಿದೆ.

ಇದು ಒಂದು ರೀತಿಯಲ್ಲಿ ನಮಗೆ ಸ್ಪೂರ್ತಿಯ ವಿಚಾರವೂ ಆಗಿದೆ. ಸಮಯದ ಸದುಪಯೋಗವನ್ನು ಹೀಗೂ ಮಾಡಬಹುದು ಎಂಬುದನ್ನು ಅರಿತೆವು” – ಇದು ಸಂಗ್ರಹಿತ ಲೇಖನಗಳನ್ನು ತಯಾರಿಸಿ ಒಂದು ವಿಶಿಷ್ಟ ಪ್ರಯತ್ನವನ್ನು ಮಾಡಿದ 10ನೇ ತರಗತಿಯ ವಿದ್ಯಾರ್ಥಿನಿಯರಾದ ಕು.ಯುಕ್ತಶ್ರೀ ಮತ್ತು ಕು.ದೃಶಾ ಇವರ ಅನಿಸಿಕೆಯ ಮಾತುಗಳು. 

Breaking News ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಬಲ್ ರೈಡಿಂಗ್ ನಿರ್ಬಂಧ ಹೇರಿಕೆ ಆದೇಶ ವಾಪಾಸ್ – ಸಾರ್ವಜನಿಕರು ನಿರಾಳ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಬಲ್ ರೈಡಿಂಗ್ ನಿರ್ಬಂಧಿಸಿ ಹೇರಿದ್ದ ಆದೇಶವನ್ನು ವಾಪಾಸ್ ಪಡೆದುಕೊಳ್ಳಲಾಗಿದೆ.

ಮಧ್ಯಾಹ್ನವಷ್ಟೇ  ಎಡಿಜಿಪಿ ಅಲೋಕ್ ಕುಮಾರ್ ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿ ಮೌಖಿಕ ಆದೇಶ ನೀಡಿದ್ದರು.

ಆದರೆ ಎಲ್ಲಾ ವಲಯಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಆದೇಶವನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಸಾರ್ವಜನಿಕರು ನಿರಾಳರಾಗಿ ನಿಟ್ಟುಸಿರು ಬಿಡುವಂತಾಗಿದೆ.

ಈ ಬಾರಿಯ ಚೌತಿ ಹಬ್ಬಕ್ಕೆ ಬ್ರಿಟನ್ ರಾಯಲ್ ಮಿಂಟ್ ಬಿಡುಗಡೆ ಮಾಡಿದ ಹೊಸ ಚಿನ್ನದ ಬಿಸ್ಕೆಟ್ – ಚಿನ್ನದ ಬಾರ್ ನಲ್ಲಿ ಗಣೇಶನ ಚಿತ್ರದ ಕೆತ್ತನೆ 

ಬ್ರಿಟನ್  ರಾಯಲ್ ಮಿಂಟ್  ಹೊಸ ಚಿನ್ನದ ಬಿಸ್ಕೆಟ್  ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಥಮ ವಂದ್ಯನಾದ ಗಣೇಶನ ಚಿತ್ರವಿದೆ. 

“ಲಾರ್ಡ್ ಆಫ್ ಬಿಗಿನಿಂಗ್ಸ್’ ಎಂದು ಉಲ್ಲೇಖಿಸಲ್ಪಡುವ ಗಣೇಶ್ ಹಿಂದೂ ನಂಬಿಕೆಯ ಅತ್ಯಂತ ಪ್ರಸಿದ್ಧ ದೇವರುಗಳಲ್ಲಿ ಒಬ್ಬರು” ಎಂದು ರಾಯಲ್ ಮಿಂಟ್ ಹೇಳಿದೆ. ಯುಕೆಯ ರಾಯಲ್ ಮಿಂಟ್ ಆಗಸ್ಟ್ 31 ರಂದು ಗಣೇಶ ಚತುರ್ಥಿಯ ಮುನ್ನಾದಿನದಂದು ಮಾರಾಟಕ್ಕೆ ಲಭ್ಯವಿರುವಂತೆ ಗಣೇಶನ ಚಿತ್ರವನ್ನು ಕೆತ್ತಿರುವ ಹೊಸ 24-ಕ್ಯಾರಟ್ ಚಿನ್ನದ ಬಾರ್ ಅನ್ನು ಬಿಡುಗಡೆ ಮಾಡಿದೆ,

ಇದು ತನ್ನ ಭಾರತೀಯ-ಪ್ರೇರಿತ ಚಿನ್ನದ ಮುದ್ರಿತ ಬುಲಿಯನ್ ಬಾರ್ ಶ್ರೇಣಿಯ ವಿಸ್ತರಣೆಯನ್ನು ಗುರುತಿಸುತ್ತದೆ. 20-ಗ್ರಾಂ “999.9 ಫೈನ್ ಗೋಲ್ಡ್” ಗಣೇಶ್ ಬುಲಿಯನ್ ಬಾರ್ ಅನ್ನು ಈ ವಾರದಿಂದ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ ಮತ್ತು GBP 1,110.80 ಬೆಲೆಯಲ್ಲಿದೆ, ( ಸುಮಾರು 1.06,500 ರೂಪಾಯಿಗಳು)

ಕಳೆದ ವರ್ಷ ದೀಪಾವಳಿಗೆ ರಾಯಲ್ ಮಿಂಟ್‌ನ 24-ಕ್ಯಾರಟ್ ಗಾಡೆಸ್ ಲಕ್ಷ್ಮಿ ಗೋಲ್ಡ್ ಬಾರ್ ಅನ್ನು ಬಿಡುಗಡೆ ಮಾಡಿದೆ. ಎರಡೂ ಬಾರ್‌ಗಳನ್ನು ಅದೇ ಡಿಸೈನರ್, ಎಮ್ಮಾ ನೋಬಲ್ ಅವರು ಸಂಕೀರ್ಣವಾಗಿ ವಿನ್ಯಾಸಗೊಳಿಸಿದ್ದಾರೆ ಮತ್ತು ಗಣೇಶನನ್ನು ಅವರ ಪಾದಗಳ ಮೇಲೆ ಲಡ್ಡೂಗಳ ತಟ್ಟೆಯೊಂದಿಗೆ ಅವರ ಸರ್ವೋತ್ಕೃಷ್ಟ ಭಂಗಿಯಲ್ಲಿ ಚಿತ್ರಿಸಿದ್ದಾರೆ.

“ಅದೃಷ್ಟ, ಹೊಸ ಆರಂಭಗಳು ಮತ್ತು ಬುದ್ಧಿವಂತಿಕೆಯ ದೇವರಾಗಿ, ಗಣೇಶನನ್ನು ಸಾಮಾನ್ಯವಾಗಿ ದೇವಾಲಯಗಳು ಮತ್ತು ಪವಿತ್ರ ಕಟ್ಟಡಗಳ ಪ್ರವೇಶದ್ವಾರದಲ್ಲಿ ಕಾಣಬಹುದು, ಕಾವಲುಗಾರ ಮತ್ತು ರಕ್ಷಕನಾಗಿ ಕಾರ್ಯನಿರ್ವಹಿಸುತ್ತಾನೆ. ಈ ವರ್ಷ, ಮೊದಲ ಬಾರಿಗೆ, ಶಿವ ಮತ್ತು ಪಾರ್ವತಿಯ ಪುತ್ರನು ರಾಯಲ್ ಮಿಂಟ್‌ನಿಂದ 20 ಗ್ರಾಂ ಚಿನ್ನದ ಟಂಕಿಸಿದ ಬುಲಿಯನ್ ಬಾರ್‌ನಲ್ಲಿ ಕಾಣಿಸಿಕೊಳ್ಳುತ್ತಾನೆ, ”ಎಂದು ಅದು ಹೇಳಿದೆ.

ಗಣೇಶ ಚತುರ್ಥಿಯ ಮುಂಚೆಯೇ ಬಾರ್ ಲಭ್ಯವಿರುತ್ತದೆ, ಗಣೇಶನ ಜನ್ಮವನ್ನು ಆಚರಿಸಲು “ಉತ್ತೇಜಕ ಸಮಯ” ಎಂದು ಕರೆಯಲಾಗುತ್ತದೆ – ಇದು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ನಿರಂತರ ಸಂಕೇತವಾಗಿದೆ ಮತ್ತು ಲಕ್ಷ್ಮಿ ಜೊತೆಗೆ ದೀಪಾವಳಿ ಸೇರಿದಂತೆ ವರ್ಷವಿಡೀ ಉಡುಗೊರೆ ಆಯ್ಕೆಯಾಗಿದೆ.

ಮಾನಿಷಾದ – ಯಕ್ಷಗಾನ ಪ್ರದರ್ಶನ 

ಶ್ರೀ ಕಟೀಲು ಯಕ್ಷಕಲಾ ವೇದಿಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಚತುರ್ಥ ವಾರ್ಷಿಕೋತ್ಸವದ ಪ್ರಯುಕ್ತ ಯಕ್ಷಸಂಭ್ರಮ – 2022 ನಡೆಯಲಿದೆ.

ಇದರ ಅಂಗವಾಗಿ ದಿನಾಂಕ 15.08.2022ರಂದು ಅಪರಾಹ್ನ ಘಂಟೆ 3ರಿಂದ ಮಾನಿಷಾದ ಎಂಬ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಶ್ರೀ ಗಣೇಶ್ ಶೆಟ್ಟಿ ಕಟೀಲ್ ಇವರ ನಿರ್ದೇಶನದಲ್ಲಿ  ಶ್ರೀ ಕಟೀಲು ಯಕ್ಷಕಲಾ ವೇದಿಕೆಯ ಬಾಲಕಲಾವಿದರಿಂದ ಈ ಪ್ರದರ್ಶನ ನಡೆಯಲಿದೆ.

ಮುಂಬಯಿಯ ವಸಯಿ ಪಶ್ಚಿಮದ ದತ್ತಾನಿ ಮಾಲ್ ನಲ್ಲಿ ಈ ಪ್ರದರ್ಶನ ನಡೆಯಲಿದೆ. ವಿವರಗಳಿಗಾಗಿ ಕರಪತ್ರದ ಚಿತ್ರವನ್ನು ನೋಡಿ. 

ದಕ್ಷಿಣ ಕನ್ನಡದಲ್ಲಿ ಹೊಸ ಸಂಚಾರೀ ನಿಯಮ – ನಾಳೆಯಿಂದಲೇ (ಶುಕ್ರವಾರ) ದ್ವಿಚಕ್ರ ವಾಹನದಲ್ಲಿ ವಯಸ್ಕ, ಪುರುಷ ಹಿಂಬದಿ ಸವಾರರಿಗೆ ಅನುಮತಿ ಇಲ್ಲ

ದಕ್ಷಿಣ ಕನ್ನಡದಲ್ಲಿ ಹೊಸ ಸಂಚಾರೀ ನಿಯಮ ಹೊಸ ಸಂಚಾರೀ ನಿಯಮ ಜಾರಿಗೆ ತರಲಾಗಿದೆ. ದ್ವಿಚಕ್ರ ವಾಹನಗಳಲ್ಲಿ ಪುರುಷರಿಗೆ ಹಿಂದುಗಡೆ ಕುಳಿತುಕೊಳ್ಳಲು ಅವಕಾಶ ಇಲ್ಲ.

ಆದರೆ ಹಿರಿಯ ನಾಗರಿಕರು, ಮಕ್ಕಳು ಮತ್ತು ಮಹಿಳೆಯರಿಗೆ ಅವಕಾಶ ಇರುತ್ತದೆ.

ಅಂದರೆ 18 ವರ್ಷದ ಕೆಳಗಿನವರು, ಮಹಿಳೆಯರು ಮತ್ತು ಹಿರಿಯ ನಾಗರಿಕರು ಹಿಂದುಗಡೆ ಕುಳಿತು ಪ್ರಯಾಣಿಸಬಹುದು.

“ಇತ್ತೀಚಿಗೆ ನಡೆದ ಅಪರಾಧ ಕೃತ್ಯಗಳಲ್ಲಿ ಹಿಂದುಗಡೆ ಸವಾರರೇ ಕೃತ್ಯ ಎಸಗಿರುವುದನ್ನು ಗಮನದಲ್ಲಿರಿಸಿ ಈ ಬದಲಾವಣೆ ಮಾಡಲಾಗಿದೆ. ಈ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗುವುದು.

ಕೆಲವು ಇತರ ರಾಜ್ಯಗಳಲ್ಲಿ ಈ ಕ್ರಮ ಈಗಾಗಲೇ ಜಾರಿಯಲ್ಲಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದನ್ನು ಜಾರಿಗೊಳಿಸಲಾಗುತ್ತದೆ. ವಯಸ್ಕ ಪುರುಷರಿಗೆ ಮಾತ್ರ ನಿರ್ಬಂಧ ಎಂದು  ಎಡಿಜಿಪಿ ಅಲೋಕ್ ಕುಮಾರ್  ಹೇಳಿದ್ದಾರೆ.

ಕುದಿಯುತ್ತಿದ್ದ ಗಂಜಿ ಇದ್ದ ದೊಡ್ಡ ಪಾತ್ರೆಗೆ ಬಿದ್ದ ವ್ಯಕ್ತಿ – ಶೇ.65 ರಷ್ಟು ಸುಟ್ಟಗಾಯಗಳಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತ್ಯು

ತಮಿಳುನಾಡಿನ ಮಧುರೈನಲ್ಲಿ ಕುದಿಯುವ ಗಂಜಿ ಪಾತ್ರೆಯಲ್ಲಿ ಬಿದ್ದು ಸುಟ್ಟ ಗಾಯಗಳಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಶುಕ್ರವಾರ ಮುತ್ತುಕುಮಾರ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಕುದಿಯುವ ಗಂಜಿ ಪಾತ್ರೆಯಲ್ಲಿ ಬಿದ್ದಿದ್ದಾರೆ.

ಶೇ.65ರಷ್ಟು ಸುಟ್ಟಗಾಯಗಳಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಂಗಳವಾರ ಮೃತಪಟ್ಟಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಶುಕ್ರವಾರ, ಜುಲೈ 29 ರಂದು ತಮಿಳುನಾಡಿನ ಮಧುರೈನಲ್ಲಿ ಕುದಿಯುವ ಗಂಜಿ ಪಾತ್ರೆಯಲ್ಲಿ ಬಿದ್ದು ಸುಟ್ಟ ಗಾಯಗಳಿಂದ ಮುತ್ತುಕುಮಾರ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಸಾವನ್ನಪ್ಪಿದರು. 65% ಸುಟ್ಟ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಅವರು ಆಗಸ್ಟ್ 2, ಮಂಗಳವಾರ ನಿಧನರಾದರು.

‘ಆಡಿ ವೆಲ್ಲಿ’ ತಮಿಳುನಾಡಿನಾದ್ಯಂತ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದ್ದು, ದೇವಿಯ ಅಮ್ಮನ್‌ನ ಗೌರವಾರ್ಥವಾಗಿ ಗಂಜಿ ಬೇಯಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತದೆ. ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಮಧುರೈನ ಪಜಂಗನಾಥಂನಲ್ಲಿ ಮುತ್ತು ಮಾರಿಯಮ್ಮ ದೇವಸ್ಥಾನದ ಭಕ್ತರಿಗಾಗಿ ದೊಡ್ಡ ಪಾತ್ರೆಗಳಲ್ಲಿ ಗಂಜಿ ಬೇಯಿಸಲಾಗುತ್ತಿದೆ.

ಗಂಜಿ ತಯಾರಿಕೆಯಲ್ಲಿ ಸಹಕರಿಸುತ್ತಿದ್ದ ಮುತ್ತುಕುಮಾರ್ ಎಂಬುವವರಿಗೆ ತಲೆಸುತ್ತು ಬಂದು ಕುದಿಯುತ್ತಿದ್ದ ಗಂಜಿ ಇದ್ದ ದೊಡ್ಡ ಪಾತ್ರೆಯಲ್ಲಿ ಬಿದ್ದಿದ್ದಾರೆ. ಆಘಾತಕ್ಕೊಳಗಾದ ಅಕ್ಕಪಕ್ಕದ ಜನರು ಮುತ್ತುಕುಮಾರ್‌ಗೆ ಸಹಾಯ ಮಾಡಲು ಪ್ರಯತ್ನಿಸಿದರೂ ಅವರನ್ನು ಹೊರಗೆಳೆಯಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ, ಅವರು ಅವನನ್ನು ರಕ್ಷಿಸಲು ಇಡೀ ಪಾತ್ರೆಯನ್ನೇ ಮುಗುಚಿ ಉರುಳಿಸಬೇಕಾಯಿತು. 65% ಸುಟ್ಟ ಗಾಯಗಳೊಂದಿಗೆ ಮುತ್ತುಕುಮಾರ್ ಅವರನ್ನು ರಾಜಾಜಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮುತ್ತುಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.

ಈ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದ್ದು, ಅದು ಮುತ್ತುಕುಮಾರ್ ಕುದಿಯುವ ಗಂಜಿಗೆ ಬಿದ್ದ ನಿಖರವಾದ ಕ್ಷಣವನ್ನು ತೋರಿಸುತ್ತದೆ.

15 ಮಂದಿ ಮನೆಗೆ ನುಗ್ಗಿ ಯುವತಿಯ ಅಪಹರಣ – ಮನೆಯ ಕಬ್ಬಿಣದ ಗೇಟಿನ ಬೀಗ ಒಡೆದು ಮನೆಗೆ ನುಗ್ಗಿ ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ – ವೀಡಿಯೊ

ತಮಿಳುನಾಡಿನ

ಮೈಲಾಡುತುರೈನಲ್ಲಿ 15 ಮಂದಿ ಮನೆಗೆ ನುಗ್ಗಿ ಮಹಿಳೆಯನ್ನು ಅಪಹರಿಸಿದ್ದಾರೆ. 15 ಮಂದಿ ಮನೆಯ ಕಬ್ಬಿಣದ ಗೇಟಿನ ಬೀಗ ಒಡೆದು ಮನೆಗೆ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೆಲವು ಸೆಕೆಂಡುಗಳ ನಂತರ, ಕೆಲವು ಪುರುಷರು ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋದರು.

ತಮಿಳುನಾಡಿನ ಮೈಲಾಡುತುರೈ ಎಂಬಲ್ಲಿ ಮಂಗಳವಾರ ರಾತ್ರಿ ಸುಮಾರು 15 ಜನರು ಮನೆಗೆ ನುಗ್ಗಿ ಮಹಿಳೆಯನ್ನು ಅಪಹರಿಸಿದ್ದಾರೆ. ಇಡೀ ಘಟನೆ ಮನೆಯ ಪ್ರವೇಶ ದ್ವಾರದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ, ಘಟನೆ ನಡೆದ ಅದೇ ರಾತ್ರಿ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಯುವಕರನ್ನು ಬಂಧಿಸಲಾಗಿದೆ.

15 ಮಂದಿ ಮನೆಯ ಕಬ್ಬಿಣದ ಗೇಟ್‌ನ ಬೀಗ ಒಡೆದು ಮನೆಗೆ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೆಲವು ಸೆಕೆಂಡುಗಳ ನಂತರ, ಕೆಲವು ಪುರುಷರು ಮಹಿಳೆಯನ್ನು ಮನೆಯಿಂದ ಹೊರಗೆ ಎಳೆದೊಯ್ದರು, ಮಕ್ಕಳು ಸೇರಿದಂತೆ ಕುಟುಂಬದ ಇತರ ಸದಸ್ಯರು ಯುವಕರನ್ನು ಬೇಡಿಕೊಳ್ಳುವುದು ಮತ್ತು ಸಹಾಯಕ್ಕಾಗಿ ಕಿರುಚುವುದನ್ನು ಕಾಣಬಹುದು.

ನಂತರ, ಕುಟುಂಬದವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರು, ಅವರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು ಮತ್ತು ಅದೇ ರಾತ್ರಿ ಮಹಿಳೆಯನ್ನು ರಕ್ಷಿಸಿದರು. ನಂತರ ಮಹಿಳೆಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಆರೋಪಿಗಳ ಪೈಕಿ ವಿಘ್ನೇಶ್ವರನ್ (34) ಎಂಬಾತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ ಆಕೆಯನ್ನು ಹಿಂಬಾಲಿಸಲು ಆರಂಭಿಸಿದ್ದ ಎಂಬುದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಮೈಲಾಡುತುರೈ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ದೂರಿನ ಮೇರೆಗೆ ಮೈಲಾಡುತುರೈ ಪೊಲೀಸರು ವಿಘ್ನೇಶ್ವರನ್‌ಗೆ ಎಚ್ಚರಿಕೆ ನೀಡಿ ಲಿಖಿತ ಹೇಳಿಕೆ ಪಡೆದು ಬಿಡುಗಡೆಗೊಳಿಸಿದ್ದರು.

ವಿಘ್ನೇಶ್ವರನ್ ಈ ಹಿಂದೆ ಜುಲೈ 12 ರಂದು ಮಹಿಳೆಯನ್ನು ಅಪಹರಿಸಲು ಯತ್ನಿಸಿದ್ದರು. ಆದರೆ, ಆಕೆ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದಳು ಮತ್ತು ಪೊಲೀಸರನ್ನು ಸಂಪರ್ಕಿಸಿದ್ದಳು. ಇದರಿಂದಾಗಿ ಪೊಲೀಸರಿಗೆ ಮೊನ್ನೆ ನಡೆದ ಕೃತ್ಯದಲ್ಲಿ ಈತನ ಕೈವಾಡವಿದೆ ಎಂದು ಮನದಟ್ಟಾಗಿತ್ತು.

‘ಸಂಖ್ಯಾ ಸಿದ್ದಾಂತಕ್ಕೆ ರಾಮಾನುಜನ್ ಅವರ ಕೊಡುಗೆ ಮತ್ತು ಅದರ ಅನ್ವಯಿಸುವಿಕೆ’ – ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ಉಪಾನ್ಯಾಸಕರ ಉದ್ದೀಪನಾ ಕಾರ್ಯಕ್ರಮ

ಪುತ್ತೂರು: ದೇಶ ಕಂಡ ಅಪ್ರತಿಮ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಸಂಖ್ಯಾ ಶಾಸ್ತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದದ್ದು, ಕನಿಷ್ಟ ಜೀವಿತಾವದಿಯಲ್ಲಿ ಅವರು ಸಾಧಿಸಿದ್ದು ಅಪಾರ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಂಶುಪಾಲ ಡಾ. ರಾಘವೇಂದ್ರ.ಎ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲ ವಿಜ್ಞಾನ ವಿಭಾಗ, ವಿಶನ್ ಗ್ರೂಪ್ ಆಫ್ ಸೈನ್ಸ್ ಎಂಡ್ ಟೆಕ್ನಾಲಜಿ ಮತ್ತು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಪರಿಷತ್ತು ಇದರ ಸಂಯುಕ್ತ ಆಶ್ರಯದಲ್ಲಿ ಆನ್‌ಲೈನ್ ಮೂಲಕ ನಡೆಯುವ ಸಂಖ್ಯಾ ಸಿದ್ದಾಂತಕ್ಕೆ ರಾಮಾನುಜನ್ ಅವರ ಕೊಡುಗೆ ಮತ್ತು ಅದರ ಅನ್ವಯಿಸುವಿಕೆ ಎನ್ನುವ ವಿಷಯದ ಬಗ್ಗೆ ನಾಲ್ಕು ದಿನಗಳ ಉಪಾನ್ಯಾಸಕರ ಉದ್ದೀಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾಡಿದರು.

ತನ್ನ ಜೀವನವನ್ನಿಡೀ ಗಣಿತಕ್ಕೇ ಮುಡಿಪಾಗಿಟ್ಟಿದ್ದ ರಾಮಾನುಜನ್ ಅವರು ತನ್ನದೇ ಪ್ರಮೇಯಗಳನ್ನು ಸೃಷ್ಟಿಸಿ ಅದಕ್ಕೆ ಸೂಕ್ತ ಉತ್ತರಗಳನ್ನು ಕಂಡುಕೊಂಡಿದ್ದರು. ಅವೆಲ್ಲವೂ ನಿಜವೆಂದು ಸಾಬೀತಾಗಿದೆ ಎಂದರು.


ಪ್ರಾಂಶುಪಾಲ ಡಾ. ಮಹೇಶ್ ಪ್ರಸನ್ನ.ಕೆ ಮಾತನಾಡಿ ಕೇವಲ 32 ವರ್ಷಗಳ ತನ್ನ ಜೀವಿತದ ಸಮಯದಲ್ಲಿ ರಾಮಾನುಜನ್ ಅವರು ಗಣಿತದ 3900 ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಂಡಿದ್ದರು ಎಂದರು. ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ಪ್ರಾಧ್ಯಾಪಕರು ತಮ್ಮನ್ನು ತಾವು ಎತ್ತರಿಸಿಕೊಳ್ಳುವುದು ಅವಶ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಧ್ಯಾಪಕರು ಅಧುನೀಕರಿಸಿಕೊಳ್ಳುವುದು ಅನಿವಾರ್ಯ ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ತುಂಬ ಸಹಕಾರಿಯಾಗುತ್ತವೆ ಎಂದರು. ನಾಲ್ಕು ದಿನಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿನಂತಿಸಿದರು.


ಮೂಲ ವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ.ರಮಾನಂದ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು.


ಪ್ರೊ.ಮಾಧವಿ ಪೈ ಸ್ವಾಗತಿಸಿ, ಪ್ರೊ.ನಯನಾ.ಪಿ ವಂದಿಸಿದರು. ಪ್ರೊ.ಶ್ವೇತಾಂಬಿಕಾ.ಪಿ ಹಾಗೂ ಪ್ರೊ.ಲತಾ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.