ಅಪೇಕ್ಷಣೀಯ ಬೆಳವಣಿಗೆಯೊಂದರಲ್ಲಿ ನಾಲ್ವರು ಉಗ್ರಗಾಮಿಗಳು ಮತ್ತು ಉಗ್ರಗಾಮಿ ಸಂಘಟನೆಯ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್ಎಲ್ಎಫ್ಟಿ-ಬಿಸ್ವ ಮೋಹನ್ ಬಣ)ದ ಇಬ್ಬರು ಸಹಯೋಗಿಗಳು ನಿನ್ನೆ ತ್ರಿಪುರಾ ಪೊಲೀಸರ ಮುಂದೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಶರಣಾಗಿದ್ದಾರೆ.
ಅವರು ಬಾಂಗ್ಲಾದೇಶದ ಶಿಬಿರದಿಂದ ಓಡಿಬಂದ ಉಗ್ರಗಾಮಿಗಳು.
ಎನ್ಎಲ್ಎಫ್ಟಿ (ಬಿಎಂ) ಯ ನಾಲ್ಕು ಉನ್ನತ ಸಿಬ್ಬಂದಿಗಳು – ಸ್ವಯಂ-ಶೈಲಿಯ ಕರ್ನಲ್ ಉಮೇಶ್ ಕೊಲೊಯ್ (42), ಸ್ವಯಂ-ಶೈಲಿಯ ವಾರಂಟ್ ಅಧಿಕಾರಿ ಫನಿಜೋಯ್ ರಿಯಾಂಗ್ (39), ಸ್ವಯಂ-ಶೈಲಿಯ ಲೆಫ್ಟಿನೆಂಟ್ ಕರ್ನಲ್ ವಿಕ್ಟರ್ ಜಮಾಟಿಯಾ (47) ಮತ್ತು ಉತ್ತಮ್ ಕಿಶೋರ್ ಜಮಾತಿಯಾ (42) ಬಾಂಗ್ಲಾದೇಶದಿಂದ ಧಲೈ ಜಿಲ್ಲೆಯ ಗಂಗಾನಗರ್ ಗಡಿಯ ಮೂಲಕ ತ್ರಿಪುರಾ ಪ್ರವೇಶಿಸಿದ್ದರು.
ಉಗ್ರಗಾಮಿ ಸಂಘಟನೆ ಹಣದ ಕೊರತೆ ಎದುರಿಸುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಗ್ರರು ಎರಡು ನಿಯತಕಾಲಿಕೆಗಳು ಮತ್ತು 60 ಬುಲೆಟ್ಗಳಿರುವ ಒಂದು ಎಕೆ-56 ರೈಫಲ್, ಒಂದು ಮ್ಯಾಗಜೀನ್ ಮತ್ತು ಐದು ಬುಲೆಟ್ಗಳಿರುವ ಒಂದು ಎಂ-20 ಪಿಸ್ತೂಲ್, ಒಂದು ಮ್ಯಾಗಜೀನ್ನೊಂದಿಗೆ ಒಂದು ಪಾಯಿಂಟ್ 38 ಪಿಸ್ತೂಲ್ ಮತ್ತು 15 ಸುತ್ತಿನ ಬುಲೆಟ್ಗಳು ಮತ್ತು ಸುಲಿಗೆ ನೋಟಿಸ್ ಪುಸ್ತಕವನ್ನು ಜಮಾ ಮಾಡಿದ್ದಾರೆ.
Four extremists and two collaborators of militant outfit National Liberation Front of Tripura (NLFT-Biswa Mohan faction) surrendered along with arms & ammunition before the Tripura police yesterday. pic.twitter.com/FiiXsWVsjt
ಮಿನಿ ಬಸ್ ರಸ್ತೆಯಿಂದ ಜಾರಿ ಕಮರಿಗೆ ಬಿದ್ದ ಕಾರಣದಿಂದಾಗಿ ೮ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಉಧಂಪುರ ಜಿಲ್ಲೆಯ ಮಸ್ಸೋರಾ ಬಳಿ ಪ್ರಯಾಣಿಸುತ್ತಿದ್ದ ಮಿನಿ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದ ಪರಿಣಾಮ 8 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಬಸ್ ಬರ್ಮೀನ್ ಗ್ರಾಮದಿಂದ ಉಧಂಪುರಕ್ಕೆ ತೆರಳುತ್ತಿತ್ತು. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
J&K | 8 students injured after a mini bus in which they were travelling skidded off the road and fell into a gorge near Massora in Udhampur district. The bus was enroute to Udhampur from Barmeen village. Injured shifted to a district hospital. Further details shall follow pic.twitter.com/K5oguxh3I5
ಶ್ರೀ ದಿನಕರ ರಂಗನಾಥ ಗೋಖಲೆ ಅವರು ಕಟೀಲು ಮೇಳದ ಹಿರಿಯ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಅನುಭವೀ ಕಲಾವಿದರಾಗಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ಕಳೆದ ಇಪ್ಪತ್ತೇಳು ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಸಹೃದಯೀ ಕಲಾವಿದರಿವರು.
ಸಾತ್ವಿಕ ಪಾತ್ರಗಳಲ್ಲಿ ಇವರಿಗೆ ಆಸಕ್ತಿ ಹೆಚ್ಚು. ಕಥಾ ಜ್ಞಾನ, ಪ್ರಸಂಗ ನಡೆ, ಪಾತ್ರದ ಸ್ವಭಾವ, ಭಾಷಾಶುದ್ಧಿ ಮೊದಲಾದ ವಿಚಾರಗಳಲ್ಲಿ ಪಕ್ವರಾಗಿ ಪಾತ್ರಗಳನ್ನು ಚಿತ್ರಿಸುವ ಕಲೆಯು ಇವರಿಗೆ ಕರಗತವಾಗಿದೆ. ಎಲ್ಲಾ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರೂ ಹೌದು. ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಕಿರಿಯ ಅಭ್ಯಾಸಿಗಳಿಗೆ ಮೇಳದಲ್ಲಿ ಇವರು ನಿರ್ದೇಶಕರೂ ಹೌದು.
ಶ್ರೀ ದಿನಕರ ರಂಗನಾಥ ಗೋಖಲೆ ಅವರು ಜನಿಸಿದ್ದು ಬೆಳ್ತಂಗಡಿ ತಾಲೂಕು ಹತ್ಯಡ್ಕ ಗ್ರಾಮದ ತೆಪ್ಪದಗುಂಡಿ ಮನೆಯಲ್ಲಿ. ಶ್ರೀ ರಂಗನಾಥ ಗೋಖಲೆ ಮತ್ತು ಶ್ರೀಮತಿ ಪಾರ್ವತೀ ಅಮ್ಮ ದಂಪತಿಗಳ ಪುತ್ರನಾಗಿ 1957ನೇ ಇಸವಿ ದಶಂಬರ 22ನೇ ತಾರೀಕಿನಂದು ಜನನ. ಇವರ ಮೂಲಮನೆ ಮುಂಡಾಜೆ ಗ್ರಾಮದ ಕುಡೆಂಞ ಎಂಬಲ್ಲಿ. ದಿನಕರ ಗೋಖಲೆ ಅವರ ತಂದೆ ಶ್ರೀ ರಂಗನಾಥ ಗೋಖಲೆ ಅವರು ಮನೆ ಅಳಿಯನಾಗಿ ಹತ್ಯಡ್ಕ ಗ್ರಾಮದ ತೆಪ್ಪದಗುಂಡಿ ಮನೆಗೆ ಬಂದಿದ್ದರು. ದಿನಕರ ಗೋಖಲೆ ಅವರು ಪದವೀಧರರು. (ಬಿ,ಕಾಂ )4ನೇ ತರಗತಿ ವರೆಗೆ ಓದಿದ್ದು ಕುಂಟಾಲುಪಲ್ಕೆ ಸರಕಾರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.
7ನೇ ತರಗತಿ ವರೆಗೆ ಮೂಡಿಗೆರೆ ತಾಲೂಕಿನ ಜಾವಳೆ ಶಾಲೆಯಲ್ಲಿ. 10ನೇ ತರಗತಿ ವರೆಗೆ ನಿಡ್ಲೆ ಸರಕಾರೀ ಪ್ರಾಢಶಾಲೆಯಲ್ಲಿ. ಬಳಿಕ ಉದ್ಯೋಗವನ್ನರಸಿ ಬೆಂಗಳೂರಿಗೆ ತೆರಳಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುತ್ತಿದ್ದರು. 9ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಶಾಲಾ ತಾಳಮದ್ದಳೆಯಲ್ಲಿ ಪಂಚವಟಿ ಪ್ರಸಂಗದ ಶ್ರೀರಾಮನಾಗಿ ಅರ್ಥ ಹೇಳಿದ್ದರು. ಬಳಿಕ ಊರ ತಾಳಮದ್ದಳೆ ಶ್ರೀಕೃಷ್ಣ ಸಂಧಾನ ಪ್ರಸಂಗದಲ್ಲಿ ಸಂಜಯನಾಗಿ ಅರ್ಥ ಹೇಳಿದ್ದರು. ನೆಡ್ಲೆಯಲ್ಲಿ ವಾರಕ್ಕೊಂದು ದಿನ ನಡೆಯುವ ತಾಳಮದ್ದಲೆಗಳಲ್ಲೂ ಅರ್ಥಧಾರಿಯಾಗಿ ಭಾಗವಹಿಸಿದ್ದರು.
ಎಸ್. ಎಸ್. ಎಲ್. ಸಿ ಓದಿನ ಬಳಿಕ ಶ್ರೀ ಗೋಖಲೆ ಅವರು ಬೆಂಗಳೂರಿನಲ್ಲಿ ಔಷಧಿ ಕಂಪೆನಿಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಅಫಾರಿ ಸೌತ್ ಇಂಡಿಯಾ ಮತ್ತು ಗ್ಲೆಸೋ ಕಂಪೆನಿಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ನರಸಿಂಹರಾಜ್ ಕಾಲನಿಯ ಆಚಾರ್ಯ ಪಾಠಶಾಲೆಗೆ (ರಾತ್ರಿ ಕಾಲೇಜು) ತೆರಳಿ ಬಿ. ಕಾಂ ವರೆಗೆ ವಿದ್ಯಾರ್ಜನೆ ಮಾಡಿದ್ದರು. 1983ರಲ್ಲಿ ಊರಿಗೆ ಮರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಈ ಸಂದರ್ಭದಲ್ಲಿ ಯಕ್ಷಗಾನದತ್ತ ಮತ್ತೆ ಆಕರ್ಷಿತರಾದರು.
ನಾವಳೆ ಶ್ರೀ ವಿಠಲ ಹೆಬ್ಬಾರರಿಂದ ಯಕ್ಷಗಾನ ಹಿಮ್ಮೇಳ ಕಲಿತು ಊರವರ ಜತೆ ಸೇರಿ ದರ್ಬೆತಡ್ಕ ದೇವಸ್ಥಾನದಲ್ಲಿ ಶ್ರೀ ಪರಶುರಾಮ ಯಕ್ಷಗಾನ ಸಂಘವನ್ನು ಸ್ಥಾಪಿಸಿದರು. ಹಿರಿಯ ಕಲಾವಿದರನ್ನು ಕರೆಸಿ ವಾರಕ್ಕೊಂದು ಇಡೀ ರಾತ್ರಿಯ ತಾಳಮದ್ದಳೆ ನಡೆಸಿದರು. ಬಳಿಕ ರಾಮಾಯಣ, ಮಹಾಭಾರತ, ಭಾಗವತ ಪ್ರಸಂಗಗಳ ಸರಣಿ ತಾಳಮದ್ದಲೆಗಳನ್ನೂ ನಡೆಸಿದರು. ಊರವರ ಸಹಕಾರ ಪ್ರೋತ್ಸಾಹದಿಂದ ಪೂಜೆ, ಶ್ರಾದ್ಧ ಕಾರ್ಯಕ್ರಮಗಳ ನಂತರ ಮನೆ ಮನೆಗಳಲ್ಲೂ ತಾಳಮದ್ದಳೆ ನಡೆಸುವಂತಾಗಿತ್ತು. ಹೀಗೆ ದಿನಕರ ಗೋಖಲೆ ಅವರು ಯಕ್ಷಗಾನ ಸಂಘಟಕರಾಗಿಯೂ ಅನುಭವ ಗಳಿಸಿದರು.
ಈ ಸಮಯದಲ್ಲಿ ಬಂಡೀಹೊಳೆ ಯಕ್ಷಗಾನ ಮೇಳದವರು ಈ ಕೂಟಗಳಿಗೆ ಬಂದು ತರಬೇತಿಯನ್ನೂ ನೀಡುತ್ತಿದ್ದರು. ಶ್ರೀ ಪಡ್ರೆ ಚಂದು ಅವರ ಶಿಷ್ಯ ಶ್ರೀ ವಿಷ್ಣು ಭಟ್ ಶೆಂಡ್ಯೆ ಅವರಿಂದ ಗೋಖಲೆ ಅವರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ರಾಮಾಯಣ ಸಪ್ತಾಹ ಪ್ರದರ್ಶನ, ಪುತ್ರಕಾಮೇಷ್ಟಿ ಪ್ರಸಂಗದಲ್ಲಿ ಕೌಸಲ್ಯೆಯಾಗಿ ಗೋಖಲೆ ಅವರು ರಂಗಪ್ರವೇಶ ಮಾಡಿದರು. ಮುಂದಿನ ವರ್ಷ ಮಹಾಭಾರತ ಸಪ್ತಾಹ. ಈ ಪ್ರದರ್ಶನಗಳಲ್ಲಿ ಎಲ್ಲಾ ಪ್ರಸಂಗಗಳಲ್ಲೂ ಅವಕಾಶವಾಗಿತ್ತು. ಇವರ ಅರ್ಥಗಾರಿಕೆ ವೇಷಗಳನ್ನು ನೋಡಿ ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರು ಮೆಚ್ಚಿಕೊಂಡಿದ್ದರು.
ಬಳಿಕ ಶ್ರೀ ಗಣಾಧಿರಾಜ ಉಪಾಧ್ಯಾಯ ಕೊಲ್ಲಂಗಾನ ಮತ್ತು ಶ್ರೀ ಸತ್ಯಶಂಕರ ಮಲೆಯಾಳ ಅವರ ಸಹಕಾರವೂ ದೊರಕಿತ್ತು. ಬಣ್ಣದ ವೇಷಧಾರಿಯಾಗಿ ಗೋಖಲೆಯವರು ಕಾಣಿಸಿಕೊಂಡರು. ಅನಿವಾರ್ಯ ಸಂದರ್ಭಗಳಲ್ಲಿ ಎಲ್ಲಾ ತರದ ವೇಷಗಳನ್ನೂ ನಿರ್ವಹಿಸುತ್ತಿದ್ದರು. ಒಮ್ಮೆ ಶಶಿಪ್ರಭಾ ಪರಿಣಯ ಪ್ರಸಂಗದಲ್ಲಿ ಕಮಲಗಂಧಿನಿ ಪಾತ್ರವನ್ನೂ ಮಾಡಿದ್ದರು. ಇವರಲ್ಲಿರುವ ಕಲಾಸಕ್ತಿಯನ್ನು ಗುರುತಿಸಿ ಇವರ ತಾಯಿ ಮೇಳಕ್ಕೆ ಕಳುಹಲು ತೀರ್ಮಾನಿಸಿದ್ದರು. ಶ್ರೀ ಉಮೇಶ ಹೆಬ್ಬಾರರನ್ನು ಕರೆಸಿ ಈ ವಿಚಾರವನ್ನು ಪ್ರಸ್ತಾಪಿಸಿದರು. ಉಮೇಶ ಹೆಬ್ಬಾರರು ದಿನಖರ ಗೋಖಲೆ ಅವರನ್ನು ಶ್ರೀ ಕಟೀಲು ಮೇಳಕ್ಕೆ ಕರೆದೊಯ್ದವರು.
ಶ್ರೀ ದಿನಕರ ರಂಗನಾಥ ಗೋಖಲೆ ಅವರು ತಿರುಗಾಟ ಆರಂಭಿಸಿದ್ದು 1996ರಲ್ಲಿ. ಕಟೀಲು ನಾಲ್ಕನೇ ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ಭಾಗವತಿಕೆ. ಆಗ ಸ್ಥಾನ ನಿರ್ಣಯವಿರಲಿಲ್ಲ. ಪುಂಡು ವೇಷ, ಕಿರೀಟ ವೇಷ ಮತ್ತು ಸ್ತ್ರೀವೇಷಗಳನ್ನು ನಿರ್ವಹಿಸಬೇಕಾಗಿತ್ತು. ಪುರಾಣ ಪ್ರಸಂಗಗಳ ಅನುಭವ ಮತ್ತು ಮಾತುಗಾರಿಕೆಯಲ್ಲಿ ಪಕ್ವರಾಗಲು ಇದರಿಂದ ಅನುಕೂಲವಾಗಿತ್ತು. ಬಳಿಕ ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಭಾಗವತರಾಗಿದ್ದ ಒಂದನೇ ಮೇಳದಲ್ಲಿ ಹದಿನೆಂಟು ವರ್ಷಗಳ ವ್ಯವಸಾಯ.
ಈ ಸಮಯದಲ್ಲಿ ಕೊಳ್ಯೂರು ರಾಮಚಂದ್ರ ರಾವ್, ಸುಣ್ಣಂಬಳ ವಿಶ್ವೇಶ್ವರ ಭಟ್, ಸುಬ್ರಾಯ ಹೊಳ್ಳ, ಶಂಭಯ್ಯ ಕಂಜರ್ಪಣೆ, ಮೊದಲಾದವರ ಒಡನಾಟವು ದೊರೆತಿತ್ತು. ಬಳಿಕ 3ನೇ ಮೇಳ, 1ನೇ ಮೇಳ, ಪುನಃ 3ನೇ ಮೇಳದಲ್ಲಿ ವ್ಯವಸಾಯ. ಕಳೆದ ವರ್ಷ ಶ್ರೀ ಅಂಡಾಲ ದೇವಿಪ್ರಸಾದ ಶೆಟ್ಟರ ಭಾಗವತಿಕೆಯ 1ನೇ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುರಾಣ ಪ್ರಸಂಗಗಳಲ್ಲಿ ವೇಷಗಾರಿಕೆ ಮತ್ತು ಸಂಭಾಷಣೆಗೆ ಶ್ರೀ ವಾಟೆಪಡ್ಪು ವಿಷ್ಣು ಶರ್ಮರು ಒಡನಾಡಿಯಾಗಿ ಸಿಕ್ಕಿದ್ದರು.
ಜೀವನೋಪಾಯಕ್ಕೆ ಬೇಕಾಗುವಷ್ಟು ಕೃಷಿ ಭೂಮಿಯೂ ಇದೆ. ಕಲಾವಿನಾಗಿಯೂ ಸಾಂಸಾರಿಕವಾಗಿಯೂ ಸಂತೃಪ್ತ ಜೀವನ. ಇವರ ಪತ್ನಿ ಶ್ರೀಮತಿ ಪ್ರಶಾಂತಿ ಗೃಹಣಿ. ಗೋಖಲೆ ದಂಪತಿಗಳಿಗೆ ನಾಲ್ಕು ಮಂದಿ ಪುತ್ರಿಯರು. ಎಲ್ಲರೂ ವಿವಾಹಿತೆಯರು. ಪ್ರಥಮ ಪುತ್ರಿ ಪ್ರಕೃತಿ ಪತಿಯೊಂದಿಗೆ ಅಮೆರಿಕಾದಲ್ಲಿದ್ದಾರೆ. ದ್ವಿತೀಯ ಪುತ್ರಿ ಪೃಥ್ವಿ. ಇವರು ಯಕ್ಷಗಾನ ನಾಟ್ಯ ಕಲಿತು ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಕಲಾವಿದೆಯಾಗಿದ್ದರು. ಇವರು ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ತೃತೀಯ ಪುತ್ರಿ ಪರ್ಣಾಶ ಶಾಲಾ ವಿದ್ಯಾರ್ಥಿನಿಯಾಗಿದ್ದಾಗ ಕಲಾವಿದೆಯಾಗಿ ವೇಷಗಳನ್ನು ಮಾಡುತ್ತಿದ್ದರು. ಇವರ ಪತಿ ಶ್ರೀ ತಿರುಮಲೇಶ್ವರ ಭಟ್ ಯಕ್ಷಗಾನ ಭಾಗವತರಾಗಿ ಎಲ್ಲರಿಗೂ ಪರಿಚಿತರು. ಇವರು ಕೃಷಿಕರೂ ಹೌದು. ಕೊನೆಯ ಪುತ್ರಿ ಪರ್ಜನ್ಯ ವಿದ್ಯಾರ್ಥಿನಿಯಾಗಿದ್ದಾಗ ಯಕ್ಷಗಾನ ಕಲಾವಿದೆಯಾಗಿದ್ದರು. ಇವರು ಬೆಂಗಳೂರಲ್ಲಿ ಉದ್ಯೋಗಸ್ಥೆ. ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹಿರಿಯ ಅನುಭವೀ ಕಲಾವಿದ ಶ್ರೀ ದಿನಕರ ರಂಗನಾಥ ಗೋಖಲೆ ಅವರು ಇನ್ನಷ್ಟು ಕಲಾಸೇವೆಯನ್ನು ಮಾಡುವಂತಾಗಲಿ. ಭಗವಂತನು ಅವರಿಗೆ ಸಕಲ ಭಾಗ್ಯಗಳನ್ನೂ ಕರುಣಿಸಲಿ ಹಾರೈಕೆಗಳು.
ಕಡಬ ಸಂಸ್ಮರಣಾ ಸಮಿತಿ ಮಂಗಳೂರು ಇವರು ಆಯೋಜಿಸಿದ 3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರಶಸ್ತಿ-2022 ಕಿನ್ನಿಕಂಬಳದಲ್ಲಿ ನಡೆಯಲಿದೆ.
ಕಾರ್ಯಕ್ರಮವು ದಿನಾಂಕ 9-10-2022 ಆದಿತ್ಯವಾರ ಅಪರಾಹ್ನ 2-00 ಗಂಟೆಯಿಂದ ಶ್ರೀ ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳ ಕೈಕಂಬ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಗಳಿಗೂ ಆಯೋಜಕರು ಮತ್ತು ಕಾರ್ಯದರ್ಶಿಗಳಾದ ಗಿರೀಶ್ ಕಾವೂರು ಅವರು ಸರ್ವರಿಗೂ ಆದರದ ಸುಸ್ವಾಗತವನ್ನು ಕೋರಿದ್ದಾರೆ
ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸಂತ ವಿಕ್ಟರ್ಬಾ ಲಿಕಾ ಪ್ರೌಢಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 22ರಂದು ನಡೆದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು 9 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
14 ವಯೋಮಾನದ ಬಾಲಕರ ವಿಭಾಗದಲ್ಲಿ ಪ್ರಾಪ್ತ್ ಆರ್. ಎನ್ [30-35kg] (8ನೇ ತರಗತಿ) ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ವಂಶಿ ರೈ(6ನೇ ತರಗತಿ) ತೃತೀಯ ಸ್ಥಾನ,
17ರ ವಯೋಮಾನದ ಬಾಲಕರ ವಿಭಾಗದಲ್ಲಿ ಶಿವಕುಮಾರ್ [40-45kg] (10ನೇ ತರಗತಿ) ಪ್ರಥಮ, ಪೃಥ್ವಿರಾಜ್ ಪ್ರಭು [55-60kg] (10 ನೇ ತರಗತಿ) ಪ್ರಥಮ ಸ್ಥಾನ, ಲಿಖಿತ್ ಪಿ [50-55kg] (10ನೇ ತರಗತಿ) ಪ್ರಥಮ ಸ್ಥಾನ, ಪ್ರಮಥ.ಎಂ ಭಟ್ [30-35kg] (9 ನೇ ತರಗತಿ) ಪ್ರಥಮ ಸ್ಥಾನ, ಮಹಮ್ಮದ್ ರಿಹಾನ್ [65-70kg] (9 ನೇ ತರಗತಿ)
ಅದ್ದೈತ್ ಶರ್ಮ [45-50kg] (ಹತ್ತನೇ ತರಗತಿ) ಪ್ರಥಮ ಸ್ಥಾನ, ವಿಶಾಲ್ ಬಿ [30-35kg] (9ನೇ ತರಗತಿ) ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ತೃಪ್ತಿ ಎ ಕೆ [44-48kg] (10 ನೇ ತರಗತಿ) ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಇವರು ಆಗಸ್ಟ್ 06 ರಂದು ಬೆಳ್ತಂಗಡಿ ತಾಲೂಕಿನ ವಾಣಿ ಆಂಗ್ಲ ಮಾಧ್ಯಮ ಶಾಲೆ ಹಳೆಕೋಟೆ ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ದೆಹಲಿಯಲ್ಲಿ ಬೆಲೆ ಏರಿಕೆ ಮತ್ತು ನಿರುದ್ಯೋಗದ ವಿರುದ್ಧ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಎಐಸಿಸಿ ಕಛೇರಿ ಬಳಿ ಹಾಕಲಾಗಿದ್ದ ಪೊಲೀಸ್ ಬ್ಯಾರಿಕೇಡ್ನಿಂದ ಜಿಗಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರನ್ನು ಅನಂತರದ ಪ್ರತಿಭಟನೆಯಲ್ಲಿ ಬಂಧಿಸಲಾಯಿತು.
ನಂತರ ಕಾಂಗ್ರೆಸ್ ಪ್ರತಿಭಟನೆ ವೇಳೆ ಆಕೆಯನ್ನು ಪೊಲೀಸರು ಬಂಧಿಸಿದ್ದರು.
ಎರಡೂ ಘಟನೆಯ ಪ್ರತ್ಯೇಕ ವೀಡಿಯೊವನ್ನು ANI ಹಂಚಿಕೊಂಡಿದೆ.
#WATCH Congress leader Priyanka Gandhi Vadra jumps over a police barricade placed near AICC during party protest against price rise & unemployment in Delhi
#WATCH | Police detain Congress leader Priyanka Gandhi Vadra from outside AICC HQ in Delhi where she had joined other leaders and workers of the party in the protest against unemployment and inflation.
ಹಿಂದಿನ ಕಾಲದಲ್ಲಿ ಯಕ್ಷಗಾನ ಪ್ರದರ್ಶನಗಳ ಪ್ರಚಾರಕ್ಕೆ ಈಗಿನಂತೆ ಮಾಧ್ಯಮಗಳಿರಲಿಲ್ಲ. ದಿನಪತ್ರಿಕೆ ಮತ್ತು ಕರಪತ್ರಗಳ ಮೂಲಕ ಪ್ರಚಾರವು ನಡೆಯುತ್ತಿತ್ತು. ಪ್ರದರ್ಶನದ ದಿನವೋ ಮುನ್ನಾದಿನವೋ ವಾಹನಕ್ಕೆ ಧ್ವನಿವರ್ಧಕವನ್ನು ಕಟ್ಟಿ ಪ್ರಚಾರ ಮಾಡುವ ಕ್ರಮವೂ ಇತ್ತು. ಇದು ವೇಗದ ಯುಗ. ಸಾಮಾಜಿಕ ಜಾಲತಾಣದ ಮೂಲಕ ವಿಚಾರಗಳನ್ನು ವಿದೇಶದಲ್ಲಿರುವವರಿಗೂ ಬಹು ಸುಲಭವಾಗಿ ವೇಗವಾಗಿ ತಿಳಿಸಲು ಅವಕಾಶವಾಗಿದೆ. ಯಕ್ಷಗಾನ ಪ್ರದರ್ಶನಗಳನ್ನು ಚಿತ್ರೀಕರಿಸಿ ಜಾಲತಾಣಗಳ ಮೂಲಕ ಪ್ರಪಂಚದ ಯಾವ ಮೂಲೆಯಲ್ಲಿರುವವರಿಗೂ ತಲುಪಿಸುವ ಕ್ರಿಯೆಯು ಸಾಗಿತ್ತು.
ಪ್ರದರ್ಶನದ ತುಣುಕುಗಳನ್ನು ಫೇಸ್ ಬುಕ್, ಯೂಟ್ಯೂಬ್ ಗಳಿಗೆ ಅಪ್ಲೋಡ್ ಮಾಡಿ ಪ್ರೇಕ್ಷಕರಿಗೆ ರವಾನಿಸುವ ಕ್ರಿಯೆಯು ಆರಂಭವಾಗಿತ್ತು. ಹಲವಾರು ಮಹನೀಯರುಗಳು ಪ್ರದರ್ಶನಗಳನ್ನು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟು ಯಕ್ಷಗಾನದ ಕಲಾಮಾತೆಯ ಸೇವೆಯನ್ನು ಮಾಡಿ ಧನ್ಯರಾಗಿದ್ದಾರೆ. ಕೋಂಗೋಟು ರಾಧಾಕೃಷ್ಣ ಭಟ್ಟರಿಂದ (RK Kongot) ತೊಡಗಿ ಅನೇಕ ಕಲಾಭಿಮಾನಿಗಳು ಈ ಸತ್ಕಾರ್ಯವನ್ನು ಕೈಗೊಂಡಿರುತ್ತಾರೆ. ಕಟೀಲು ಸಿತ್ಲ ರಂಗನಾಥ ರಾಯರು ಹಲವಾರು ಹಿರಿಯ ಅನುಭವೀ ಕಲಾವಿದರ, ವಿದ್ವಾಂಸರ ಸಂದರ್ಶನವನ್ನು ನಡೆಸಿ ಅದನ್ನು ದಾಖಲೀಕರಿಸಿದ್ದಾರೆ. ಇದು ಕಲಾಭಿಮಾನಿಗಳಿಗೆಲ್ಲಾ ಸಂತೋಷವನ್ನು ಕೊಡುವ ವಿಚಾರ.
ಪ್ರಸ್ತುತ ಹಲವಾರು ಮಂದಿಗಳು ಪ್ರದರ್ಶನಗಳನ್ನು ಚಿತ್ರೀಕರಿಸುತ್ತಾ ಫೇಸ್ ಬುಕ್ ನಲ್ಲಿ ನೇರಪ್ರಸಾರವನ್ನು ಮಾಡುತ್ತಿದ್ದಾರೆ. ದೂರದ ಊರಿನಲ್ಲಿ ನೆಲೆಸಿರುವ ಕಲಾಭಿಮಾನಿಗಳು ನೇರಪ್ರಸಾರದ ಮೂಲಕ ಪ್ರದರ್ಶನಗಳನ್ನು ನೋಡಿ ಆಸ್ವಾದಿಸುವಂತಾಗಿದೆ. ಈ ಸತ್ಕಾರ್ಯವನ್ನು ಕೈಗೊಂಡ, ಪ್ರಸ್ತುತ ಈ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಮಹನೀಯರುಗಳು ನಿಜಕ್ಕೂ ಅಭಿನಂದನೀಯರು. ಅವರಿಗೆಲ್ಲಾ ಕಲಾಮಾತೆಯ ಅನುಗ್ರಹವು ಸದಾ ಇರಲಿ. ಜಾಲತಾಣದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೇರ ಪ್ರಸಾರ ಮಾಡುತ್ತಿರುವ ಅನೇಕರಲ್ಲಿ ಶ್ರೀ ಸುಕುಮಾರ್ ಜೈನ್ ಅವರೂ ಒಬ್ಬರು.
ಶ್ರೀ ಸುಕುಮಾರ್ ಜೈನ್ ಅವರ ಹುಟ್ಟೂರು ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬೀರಾಯಿಪೇಟೆ. ಶ್ರೀ ನೇಮಿರಾಜ ಪೂಂಜ ಮತ್ತು ಶ್ರೀಮತಿ ರತ್ನಾವತಿ ದಂಪತಿಗಳ ಪುತ್ರನಾಗಿ 1980 ರಲ್ಲಿ ಜನನ. ಶ್ರೀ ನೇಮಿರಾಜ ಪೂಂಜರು ಕೃಷಿಕರು. ಸುಕುಮಾರ್ ಜೈನ್ ಅವರು ಓದಿದ್ದು 5ನೇ ತರಗತಿ ವರೆಗೆ. 7ನೇ ತರಗತಿ ವರೆಗೆ ನಲ್ಲೂರು ಶಾಲೆಯಲ್ಲಿ. 8ನೇ ತರಗತಿ ಬಜಗೋಳಿ ಶಾಲೆಯಲ್ಲಿ. ಮನೆಯಲ್ಲಿ ಬಡತನವಿತ್ತು. ಅನಿವಾರ್ಯವಾಗಿ ವಿದ್ಯಾರ್ಜನೆಯನ್ನು ನಿಲ್ಲಿಸಬೇಕಾಗಿ ಬಂದಿತ್ತು. ಜೀವನೋಪಾಯಕ್ಕಾಗಿ ಶ್ರೀ ಶಾಂತರಾಜ್ ಜೈನ್ ಅವರ ಬೀಡಿ ಬ್ರಾಂಚಿನಲ್ಲಿ ಎರಡು ವರ್ಷ ಕೆಲಸ ಮಾಡಿದ್ದರು.
ಶ್ರೀ ಸುಕುಮಾರ್ ಜೈನ್ ಅವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡಿ ಸಂತೋಷಪಡುತ್ತಿದ್ದರು. ಬಳಿಕ ಕಾರ್ಕಳದ ಫರ್ನಿಚರ್ ಅಂಗಡಿಯಲ್ಲಿ 7 ವರ್ಷಗಳ ಕಾಲ ಕೆಲಸ ಮಾಡಿದ್ದರು. (ಕಾಲಭೈರವ ಫರ್ನಿಚರ್ಸ್) ಆ ಸಮಯದಲ್ಲಿ ಕೆಲಸ ಮುಗಿಸಿ ಕಾರ್ಕಳ, ಮೂಡಬಿದಿರೆ ಪರಿಸರದಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡುತ್ತಿದ್ದರು. ಕದ್ರಿ, ಕರ್ನಾಟಕ, ಮಂಗಳಾದೇವಿ, ಸುಂಕದಕಟ್ಟೆ, ಪೆರ್ಡೂರು, ಸಾಲಿಗ್ರಾಮ ಮೊದಲಾದ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಬೆಳಗಿನ ವರೆಗೂ ಆಟ ನೋಡಿ ನಿದ್ದೆ ಮಾಡದೆ ಹಗಲು ಫರ್ನಿಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.
ಬಳಿಕ ಬಜಗೋಳಿಯ ಶ್ರೀ ಭುವನೇಶ್ವರಿ ಹೋಟೆಲಿನಲ್ಲಿ ಕೆಲಸಕ್ಕೆ ಸೇರಿದ್ದರು (2001ರಲ್ಲಿ). ಇದು ಶ್ರೀ ನಿತ್ಯಾನಂದ ಪ್ರಭುಗಳ ಮಾಲಕತ್ವದ ಹೋಟೆಲ್. ಹೋಟೆಲ್ ಕೆಲಸಕ್ಕೆ ತೊಂದರೆಯಾಗದಂತೆ ಹೊಂದಿಸಿಕೊಂಡು ಆಟ ನೋಡುತ್ತಿದ್ದರು. ಈ ಸಂದರ್ಭದಲ್ಲಿ ಸುಕುಮಾರ್ ಜೈನ್ ಅವರಿಗೆ ಸಮಸ್ಯೆಯೊಂದು ಎದುರಾಗಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಇವರು ಬದುಕೇ ಬೇಡ ಎಂಬ ಸ್ಥಿತಿಗೆ ಒಳಗಾಗಿದ್ದರು. ಮನಸು ನೆಮ್ಮದಿ ಸಿಗುವ ತಾಣವನ್ನು ಅರಸುತ್ತಿತ್ತು.
ಆಗ ಮಳೆಗಾಲದ ಸಮಯ. ಸಿಂಹ ಮಾಸ. ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿತ್ತು. ಇದು ಪಟ್ಲಗುತ್ತು ಮನೆಯವರ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮ. ಶ್ರೀ ಸುಕುಮಾರ್ ಅವರು ಪಟ್ಲ ಸತೀಶ್ ಶೆಟ್ಟರ ಅಭಿಮಾನಿಯೂ ಆಗಿದ್ದರು. ಹಿಂದು ಮುಂದು ಯೋಚಿಸದೆ ಪಟ್ಲ ಸತೀಶ ಶೆಟ್ಟರ ಮನೆಗೆ ತೆರಳಿದರು. ಅವರ ಮನೆಯಲ್ಲಿದ್ದುಕೊಂಡೇ ವಗೆನಾಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಯಂಸೇವಕರಲ್ಲಿ ತಾನೂ ಒಬ್ಬನಾಗಿ ದುಡಿದಿದ್ದರು. ತೋರಣ ಅಲಂಕಾರ, ಆಸನ ವ್ಯವಸ್ಥೆ, ಬಾಯಾರಿಕೆ ನೀಡುವುದು, ಉಪಾಹಾರ, ಭೋಜನ ಬಡಿಸುವುದು, ಪಾತ್ರೆ ತೊಳೆಯುವುದು ಮೊದಲಾದ ಕೆಲಸಗಳನ್ನು ಅರ್ಪಣಾ ಭಾವದಿಂದ ಮಾಡಿ ಧನ್ಯರಾದರು.
ಇವರ ಸೇವೆಯಿಂದ ಶ್ರೀ ಸುಬ್ರಹ್ಮಣ್ಯನು ಪ್ರಸನ್ನನಾಗಿದ್ದ. ಮಾನಸಿಕ ನೋವು ನಿವಾರಣೆಯಾಗಿ ಉತ್ಸಾಹವು ಮೂಡಿತ್ತು. ಸಿಂಹ ಮಾಸದ ಕಾರ್ಯಕ್ರಮಗಳು ಮುಗಿದು ಊರಿಗೆ ಮರಳಲು ಬೇಕಾದಷ್ಟು ಹಣ ಇವರ ಬಳಿ ಇರಲಿಲ್ಲ. ಪಟ್ಲ ಮನೆಯವರು ಎಲ್ಲಾ ಸ್ವಯಂಸೇವಕರನ್ನೂ ಕರೆದು ಸಂಭಾವನೆ ನೀಡುತ್ತಿದ್ದರು. ಇವರನ್ನೂ ಕರೆದು ಕೈಗೆ ಕವರ್ ಒಂದನ್ನು ಕೊಟ್ಟಿದ್ದರು. “ಅದರೊಳಗೆ ಎರಡು ಸಾವಿರ ರೊಪಾಯಿಗಳಿತ್ತು. ಇದು ನನ್ನ ಬದುಕಿನ ಬವಣೆಯನ್ನು ದೂರ ಮಾಡಿತ್ತು. ಶ್ರೀ ಸುಬ್ರಹ್ಮಣ್ಯನ ದಯೆಯೂ ನನಗೆ ದೊರಕಿತ್ತು.
ಬೇಡವೆಂದು ಹೇಳಿದರೂ ಒತ್ತಾಯದಿಂದ ಕವರ್ ನೀಡಿದರು. ಇದು ದೇವರ ಪ್ರಸಾದ. ಬೇಡ ಎನ್ನಬಾರದು ಎಂದು ಹೇಳಿ ನೀಡಿದ್ದರು. ನಾನು ಬದುಕನ್ನೂ ಯಕ್ಷಗಾನವನ್ನೂ ಪ್ರೀತಿಸುವಂತಾಗಿತ್ತು. ಒಂದು ರೀತಿಯಲ್ಲಿ ನನಗೆ ಪುನರ್ಜನ್ಮ. ಬದುಕಿನಲ್ಲಿ ಈ ಬದಲಾವಣೆ ಆದುದು ಪಟ್ಲ ಸತೀಶ್ ಶೆಟ್ಟರಿಂದ” ಇದು ಸುಕುಮಾರ್ ಜೈನ್ ಅವರ ಮನದಾಳದ ಮಾತುಗಳು. ಬಹುಷಃ ಈ ಕಾರಣಕ್ಕಾಗಿಯೇ ತಮ್ಮ ದ್ವಿಚಕ್ರ ವಾಹನಕ್ಕೆ ಯಕ್ಷಧ್ರುವ ಎಂಬ ಹೆಸರಿರಿಸಿದ್ದರು.
ಶ್ರೀ ಸುಕುಮಾರ್ ಜೈನ್ ಅವರಿಗೆ ಕಟೀಲು ಮೇಳಗಳ ಪ್ರದರ್ಶನಗಳನ್ನು ನೋಡಿದ ನಂತರ ಪ್ರದರ್ಶನಗಳನ್ನು ಚಿತ್ರೀಕರಿಸಬೇಕೆಂಬ ಆಸೆ ಹುಟ್ಟಿಕೊಂಡಿತ್ತು. ಆಗ ಫೇಸ್ ಬುಕ್ ಲೈವ್ ಕಾರ್ಯಕ್ರಮವೂ ಆರಂಭವಾಗಿತ್ತು. ಪ್ರದರ್ಶನದ ಒಂದೊಂದು ತುಣುಕುಗಳನ್ನು ಚಿತ್ರೀಕರಿಸಿ ಫೇಸ್ ಬುಕ್ ಗೆ ಹಾಕುತ್ತಿದ್ದರು. ಈ ವಿಚಾರದಲ್ಲಿ ಶ್ರೀ ಅಶ್ವಿತ್ ಶೆಟ್ಟಿ ತುಳುನಾಡು ಮತ್ತು ಶ್ರೀ ರಾಜೇಂದ್ರ ಪ್ರಸಾದ್ ಎಕ್ಕಾರು ಇವರ ಮಾರ್ಗದರ್ಶನ ದೊರಕಿತ್ತು. ಚಿತ್ರೀಕರಣದ ವಿಚಾರದಲ್ಲಿ ಶ್ರೀ ಕೀರ್ತನ್ ದೇವಾಡಿಗ ಮಂಗಳೂರು ಮತ್ತು ಬಜಗೋಳಿ ಶ್ರೀ ಚಂದ್ರಹಾಸ ಶೆಟ್ಟಿ ಅವರ ಸಲಹೆಯೂ ದೊರಕಿತ್ತು.
ಮೊಬೈಲ್ ನಲ್ಲಿ ಪ್ರದರ್ಶನವನ್ನು ಚಿತ್ರೀಕರಿಸಿ ಫೇಸ್ ಬುಕ್ ಗೆ ಪೋಸ್ಟಿಂಗ್ ಮಾಡುವ ಸತ್ಕಾರ್ಯವನ್ನು ಸುಕುಮಾರ್ ಜೈನ್ ಅವರು ತೊಡಗಿ ಮುಂದುವರಿಯುತ್ತಾ ಸಾಗಿದರು. ಹೋಟೆಲ್ ಸಿಬಂದಿಯೂ ಒಡನಾಡಿಯೂ ಆದ ಶ್ರೀ ಸುಕೇಶ್ ಅವರ ಸಲಹೆಯಂತೆ ಫೇಸ್ ಬುಕ್ ನಲ್ಲಿ ತಮ್ಮ ಹೆಸರಿನ ಜತೆ ಯಕ್ಷಧ್ರುವ ಎಂದು ಸೇರಿಸಿಕೊಂಡರು. ಇವರು ಎಲ್ಲಾ ಮೇಳಗಳ ಪ್ರದರ್ಶನಗಳನ್ನೂ ಮೊಬೈಲಿನಲ್ಲಿ ಚಿತ್ರೀಕರಿಸಿ ಫೇಸ್ ಬುಕ್ ನಲ್ಲಿ ನೇರಪ್ರಸಾರ ಮಾಡುತ್ತಾರೆ. ಕಟೀಲು, ಧರ್ಮಸ್ಥಳ. ಪಾವಂಜೆ, ಹನುಮಗಿರಿ, ಮಡಾಮಕ್ಕಿ, ಕಮಲಶಿಲೆ, ಬಪ್ಪನಾಡು, ಸುಂಕದಕಟ್ಟೆ, ಸಸಿಹಿತ್ಲು ಮೊದಲಾದ ಮೇಳಗಳ ಮತ್ತು ಇತರ ಸಂಘ ಸಂಸ್ಥೆಗಳು ಆಯೋಜಿಸಿದ ಆಟ, ತಾಳಮದ್ದಲೆಗಳನ್ನು ಇವರು ನೇರ ಪ್ರಸಾರ ಮಾಡಿರುತ್ತಾರೆ. ಗಾನವೈಭವ, ನಾಟ್ಯವೈಭವ ಕಾರ್ಯಕ್ರಮಗಳನ್ನೂ ನೇರ ಪ್ರಸಾರ ಮಾಡಿರುತ್ತಾರೆ.
2022 ಜೂನ್ ನಲ್ಲಿ ಹೊಸ ಪರಿಕಲ್ಪನೆಯೊಂದಿಗೆ “ಯಕ್ಷಧ್ರುವ ನ್ಯೂಸ್” ಎಂಬ ಹೊಸ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ನೇರ ಪ್ರಸಾರ ಮಾಡುವಲ್ಲಿ ಎಲ್ಲಾ ಮೇಳಗಳ ಆಡಳಿತ ಮಂಡಳಿ ಮತ್ತು ಕಲಾವಿದರುಗಳು ಸಹಕರಿಸಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿ ವಂದಿಸುತ್ತೇನೆ ಎಂದು ಯಾವಾಗಲೂ ಶ್ರೀ ಸುಕುಮಾರ್ ಜೈನ್ ಅವರು ಹೇಳುತ್ತಿರುತ್ತಾರೆ. ಇವರ ತಮ್ಮ ಶ್ರೀ ಸುಕೇಶ್ ಜೈನ್ ಅವರು ಪಾಕತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಯಕ್ಷಧ್ರುವ ಶ್ರೀ ಸುಕುಮಾರ್ ಜೈನ್ ಅವರ ಈ ಸತ್ಕಾರ್ಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಇವರಿಗೆ ಸದಾ ಇರಲಿ ಎಂಬ ಹಾರೈಕೆಗಳು.
ಧರ್ಮಸ್ಥಳ ಕನ್ಯಾಡಿ ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ವೃತಾನುಷ್ಠಾನದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಯಕ್ಷ ಭಾರತಿ (ರಿ) ಬೆಳ್ತಂಗಡಿ ಪದಾಧಿಕಾರಿಗಳು ಭೇಟಿ ಮಾಡಿ ಗುರು ನಮನ ಸಲ್ಲಿಸಿದರು.
ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ಉಜಿರೆ, ಕಾರ್ಯದರ್ಶಿ ದಿವಾಕರ್ ಆಚಾರ್ಯ ಗೇರುಕಟ್ಟೆ, ಸಂಚಾಲಕ ಮಹೇಶ್ ಕನ್ಯಾಡಿ, ಟ್ರಸ್ಟಿ ವಿದ್ಯಾಕುಮಾರ್ ಕಾಂಚೋಡು ಇವರನ್ನು ಸ್ವಾಮೀಜಿಯವರು ಪ್ರಸಾದ ಮಂತ್ರಾಕ್ಷತೆಯೊಂದಿಗೆ ಗೌರವಿಸಿದರು.
ಯಕ್ಷ ಭಾರತಿ ಎಂಟನೇ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿಯವರಿಗೆ ಗೌರವಪೂರ್ವಕವಾಗಿ ನೀಡಲಾಯಿತು.
ರಷ್ಯಾ ಮತ್ತು ಉಕ್ರೇನ್ ಪರಸ್ಪರ ಭೀಕರ ಯುದ್ಧದಲ್ಲಿ ತೊಡಗಿಕೊಂಡಿವೆ. ಇದುವರೆಗೆ ಎಷ್ಟೋ ಜೀವಹಾನಿ ಸಂಭವಿಸಿವೆ. ಅಲ್ಲಿ ಕೇಳಿಸುತ್ತಿರುವುದು ಕ್ಷಿಪಣಿ, ಬಾಂಬ್ ಶೆಲ್ ಗಳ ಭಯಾನಕ ಸದ್ದು ಮಾತ್ರ. ಆದರೆ ಅದನ್ನೆಲ್ಲಾ ಮರೆತು ಇಲ್ಲಿ ಮಾತ್ರ ಮಂಗಳಕರ ವಾದ್ಯ ಮೊಳಗಿತು. ರಷಿಯನ್ – ಉಕ್ರೇನಿಯನ್ ಜೋಡಿ ವೈರತ್ವವನ್ನು ಮರೆತು ಭಾರತದಲ್ಲಿ ಮದುವೆಯಾಯಿತು.
ಮಂಗಳವಾರ, ಆಗಸ್ಟ್ 2 ರಂದು ಧರ್ಮಶಾಲಾದಲ್ಲಿ ನಡೆದ ಸಾಂಪ್ರದಾಯಿಕ ಹಿಂದೂ ಸಮಾರಂಭದಲ್ಲಿ ರಷ್ಯಾದ ಪ್ರಜೆ ಸೆರ್ಗೆಯ್ ನೊವಿಕೋವ್ ಅವರು ತಮ್ಮ ಉಕ್ರೇನಿಯನ್ ಗೆಳತಿ ಎಲೋನಾ ಬ್ರಮೋಕಾ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾದರು. ಮೆಹೆಂದಿ, ಲೆಹೆಂಗಾ ಮತ್ತು ಸಾತ್ ಫೇರೆಯೊಂದಿಗೆ ಯುದ್ಧದ ಬಾಂಬ್ಶೆಲ್ಗಳ ಭಯಾನಕತೆಯ ಮಧ್ಯೆ, ಇದು ಭಾರತದಲ್ಲಿ ಈ ರಷ್ಯನ್-ಉಕ್ರೇನಿಯನ್ ದಂಪತಿಗಳಿಗೆ ಮದುವೆಯ ಗಂಟೆಗಳು ಕೇಳಿಸಿತು.
ಉಕ್ರೇನ್ನಲ್ಲಿ ನೆಲೆಸಿರುವ ರಷ್ಯಾದ ಸೆರ್ಗೆಯ್ ನೊವಿಕೋವ್, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ತನ್ನ ಉಕ್ರೇನಿಯನ್ ಗೆಳತಿ ಎಲೋನಾ ಬ್ರಮೋಕಾ ಅವರನ್ನು ವಿವಾಹವಾದರು. ರಷ್ಯಾ ಮತ್ತು ಉಕ್ರೇನ್ ಐದು ತಿಂಗಳ ಸುದೀರ್ಘ ಮಿಲಿಟರಿ ಸಂಘರ್ಷದಲ್ಲಿ ಸಿಲುಕಿಕೊಂಡಿದ್ದರೂ ಸಹ, ಯುವ ದಂಪತಿಗಳು ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆ ಎಂದು ಸಾಬೀತುಪಡಿಸಿದ್ದಾರೆ.
ಉಕ್ರೇನ್ನಲ್ಲಿ ನೆಲೆಸಿರುವ ರಷ್ಯಾದ ಸೆರ್ಗೆಯ್ ನೋವಿಕೋವ್, ಸನಾತನ ಹಿಂದೂ ಧರ್ಮದ ಸಂಪ್ರದಾಯಗಳ ಪ್ರಕಾರ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ದಿವ್ಯ ಆಶ್ರಮ ಖರೋಟಾದಲ್ಲಿ ಉಕ್ರೇನಿಯನ್ ಗೆಳತಿ ಎಲೋನಾ ಬ್ರಮೋಕಾ ಅವರನ್ನು ವಿವಾಹವಾದರು ಎಂದು ವರದಿ ತಿಳಿಸಿದೆ. ಮದುವೆಯಲ್ಲಿ ಪಾಲ್ಗೊಂಡ ಸ್ಥಳೀಯರು ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು ಮತ್ತು ಸಾಂಪ್ರದಾಯಿಕ ಹಿಮಾಚಲಿ ಜಾನಪದ ಸಂಗೀತಕ್ಕೆ ನೃತ್ಯ ಮಾಡಿದರು, ನವವಿವಾಹಿತರು “ಮನೆಯಲ್ಲಿದ್ದಾರೆ” ಎಂಬ ಭಾವನೆ ಮೂಡಿಸಿದರು.
ಅತಿಥಿಗಳಿಗಾಗಿ ಕಾಂಗ್ರಿ ಧಾಮ್ ವ್ಯವಸ್ಥೆಯನ್ನು ಮಾಡಲಾಗಿತ್ತು. ನೋವಿಕೋವ್ ಮತ್ತು ಬ್ರಮೋಕಾ ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದರು ಮತ್ತು ಈ ವರ್ಷ ಮದುವೆಯಾಗಲು ನಿರ್ಧರಿಸಿದರು, ಯುದ್ಧದ ಹೊರತಾಗಿಯೂ ಧರ್ಮಶಾಲಾವನ್ನು ತಮ್ಮ ಮದುವೆಯ ತಾಣವಾಗಿ ಆರಿಸಿಕೊಂಡರು. ಇಬ್ಬರೂ ಕಳೆದ ವರ್ಷದಿಂದ ಧರ್ಮಶಾಲಾ ಸಮೀಪವಿರುವ ಧರ್ಮಕೋಟ್ನಲ್ಲಿ ವಾಸಿಸುತ್ತಿದ್ದರು ಎಂದು ದಿವ್ಯ ಆಶ್ರಮ ಖರೋಟಾದ ಪಂಡಿತ್ ಸಂದೀಪ್ ಶರ್ಮಾ ತಿಳಿಸಿದ್ದಾರೆ.
“ನಮ್ಮ ಪಂಡಿತ್ ರಮಣ್ ಶರ್ಮಾ ಅವರ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು ಮತ್ತು ಸನಾತನ ಧರ್ಮದ ಸಂಪ್ರದಾಯಗಳ ಪ್ರಕಾರ ಮದುವೆಯ ಪ್ರಾಮುಖ್ಯತೆಯ ಬಗ್ಗೆ ಅವರಿಗೆ ತಿಳಿಸಿದರು” ಎಂದು ಅವರು ಹೇಳಿದರು. ಬ್ರಹ್ಮೋಕದ ‘ಕನ್ಯಾದಾನ’ ಸೇರಿದಂತೆ ವಿನೋದ್ ಶರ್ಮಾ ಮತ್ತು ಅವರ ಕುಟುಂಬದವರು ಮದುವೆಯ ವಿಧಿವಿಧಾನಗಳನ್ನು ನೆರವೇರಿಸಿದರು.
ಧರ್ಮಕೋಟ್ನಲ್ಲಿ ವಾಸಿಸುವ ವಿದೇಶಿ ಪ್ರವಾಸಿಗರು ಸಹ ಸೇರಿಕೊಂಡರು, ಆಚರಣೆಗಳನ್ನು ಮಾಡಿದರು ಮತ್ತು ಆನಂದಿಸಿದರು. ದಂಪತಿಗಳು ಸಾಂಪ್ರದಾಯಿಕ ಭಾರತೀಯ ಮದುವೆಯ ಉಡುಪುಗಳನ್ನು ಧರಿಸಿದ್ದರು ಮತ್ತು ಪಠಿಸಲ್ಪಡುವ ಸ್ತೋತ್ರಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರು, ಅದಕ್ಕೆ ಪಂಡಿತ್ ರಮಣ್ ಶರ್ಮಾ ಅವರು ಪ್ರತಿ ಮಂತ್ರದ ಅರ್ಥವನ್ನು ಭಾಷಾಂತರಕಾರರ ಸಹಾಯದಿಂದ ವಿವರಿಸಿದರು.
Himachal Pradesh | Sergei Novikov, a Russian national tied knot with his Ukrainian girlfriend Elona Bramoka in a traditional Hindu ceremony in Dharamshala on Tuesday, August 2 pic.twitter.com/r7f9W8ygx2