Tuesday, August 4, 2026
Home Blog Page 22

THE RASHTRAKUTAS OF MANYAKHETA AND THE CHALUKYAS OF KALYANA

0

8th Standard (Karnataka State) Social Science

Chapter – 20

THE RASHTRAKUTAS OF MANYAKHETA AND THE CHALUKYAS OF KALYANA

I. Fill in the blanks with suitable words :

1. The founder of the Rashtrakuta dynasty was Dantidurga

2. The Chalukya king of Kalyana who was responsible for the defeat of the Rashtrakutas was Tailapa II

3. The author of ‘Kavirahasya’ is Halayudha.

4. The famous poem written by Ponna is Shantipurana.

5. The most famous king among the Kalyana Chalukyas was Vikramaditya VI.

6. The person who can be called as ‘the pioneer of the social revolution’ is Basaveshwara.

II. Answer the following questions in brief :

7. How was the administrative system of the Rashtrakutas?

     The kingship among the Rashtrakutas was hereditary. There used to be a Council of Ministers to assist the King. There would be a prominent person in the Council of Ministers appointed as the Mahasandhivigrahi to look after the foreign affairs. For the purpose of administrative convenience, the kingdom was divided into Rashtra (Mandala), Vishaya, Nadu and Grama.

The leader of the grama was called gramapati or prabhugavunda. He was the leader of the village army too. He was assisted by the village accountant. There were grama sabhas also. There used to be an official called nadagavunda in the nadus. Similar officials would be there in the vishayas and rashtras. The vishayapati and the rashtrapati were the officers for the vishaya or the district and the rashtra respectively

8. Write about the educational system under the Rashtrakutas.

            Mathas and Agraharas were the prominent educational centres in those days. Knowledge was imparted about Sanskrit, the Vedas, astrology, logic and the Puranas. Salotgi in Indi taluk of Vijayapura district was one of the leading centres of learning.

9. Write a short note on the Kailasanatha temple of Ellora?

            The Rashtrakuta kings were patrons of art. Their great contribution to Indian art can be seen in the Ellora and Elephanta cave temples. The Kailashnath temple at Ellora built by Krishna I is a monolithic wonder. This temple has been carved from a rock 100 feet high, 276 feet long and 154 feet wide.

10. How did the Kalyan Chalukyas encourage literature?

Literature received encouragement during the period of the Chalukyas. Kannada literature prospered with the support of Jain scholars. The notable works of this period are ‘Gadayuddha’ (Sahasa Bheema Vijaya) written by Ranna, ‘Panchatantra’ written by Durgasimha, ‘Vikramankadeva Charita’ composed by Bilhana, ‘Dharmamruta’ composed by Nayasena and the legal work, ‘Mitakshara’, authored by Vignaneshwara. ‘Manasollasa’ written by King Someshwara III is considered as the sanskrit encyclopaedia. The unique contribution of the Chalukyan period has been the Vachana literature. Basavanna Akkamahadevi, Allamaprabhu, Machayya and others were leading vachanakaras.

IV. Projects :

1. Divide students into four groups and ask them to discuss and prepare a report about the kailash nath temple of ellora. – To Student

2. Collect pictures of Manyakheta. – To Student

         3. Write an essay on the life of Basavanna.

          The kingdom began to decline during the period of kings who came after Vikramaditya VI and Someshwara III. It became very weak during the period of Someshwara IV and Kalachuri Bijjala occupied Kalyana. and began to rule it. It was at this time that the social revolutionary Sri Jagajyoti Basaveshwara came to the limelight. Because of this the values of Basaveshwara and his contemporary Sharanas who are called Basavadi Shivasharanas in local terms reached the common people. Basaveshwara preached in three forms like soft advice, harsh criticism, strict warning.

He taught that surrendering oneself to Shiva with total devotion the only path to salvation. He declared that “Body is the abode of Lord Shiva” (Kayakave Kailasa). He established Anubhava Mantapa in 1162 C.E. He wrote his vachanas in coloquial Kannada. Respecting his invaluable contributions to socio-cultural inclusiveness, the Government of Karnataka, while unveiling the portrait of Vishwaguru Basavanna on 13-02-2024, declared him as the ‘Cultural Leader of Karnataka’.

Some more questions

  1. Who are famous Rashtrakuta rulers?

Dantidurga, Krishna, Govinda II, Dhruva, Govinda III, Amoghavarsha, Krishna II, Indra III and Krishna III are famous Rashtrakuta rulers.

2. Write about Amoghavarsha, the great king of Rashtrakutas.

The early reign of Amoghavarsha had to face many obstacles. But he was not interested in feuds and desired peace. Hence he got rid of the enmity by developing matrimonial relations with the Gangas and the Pallavas. Since he was a peace-loving king, he had to give up some territories in the north. The ports of the west coast were busy trading centres and enjoyed great prosperity by developing trade relations with Persia and Arabian. Many travellers and merchants visited the kingdom during this period. Prominent among them was the Arab travaller Sulaiman. He has praised Amoghavarsha as ‘One of the four powerful emperors of the World.’

3. Vikramaditya-VI, is the greatest king of this Chalukyas dynasty. How?

Vikramaditya-VI, the son of Someshwara-I, is the greatest king of this dynasty. He was an extremely courageous warrior and excellent administrator. He began the ‘Chalukya Vikrama era’ in 1076 C.E. He suppressed the revolt of the Hoysala King Vishnuvardhana. He had established contact with the Srilankan King Vijayabahu

ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ಸಂಪನ್ನ – ಯಕ್ಷಗಾನ ಕಲೆಗೆ ಮಕ್ಕಳನ್ನು ಆಕರ್ಷಶಿಸಿ ಬೆಳೆಸಬೇಕು – ಎಡನೀರು ಶ್ರೀಗಳು

0

ಕಳೆದ ವರುಷ ಶ್ರೀ ಧರ್ಮಸ್ಥಳ ಧರ್ಮಾಧಿಕಾರಿಗಳಾದ ರಾಜರ್ಷಿ ಪದ್ಮವಿಭೂಷಣ ಡಾ| ವೀರೇಂದ್ರ ಹೆಗ್ಗಡೆಯವರಿಂದ ಲೋಕಾರ್ಪಣೆಗೊಂಡ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾಮದ ಸಾಂಸ್ಕೃತಿಕ ಭವನದ ಪ್ರಥಮ ವಾರ್ಷಿಕೋತ್ಸವ ವಿಭಿನ್ನ ರೀತಿಯಲ್ಲಿ ಸಂಪನ್ನಗೊಂಡಿದೆ. ಕಲೆ ಸಾಹಿತ್ಯ ಬೆಳೆಸುವ ಉಳಿಸುವ ಮುಂದಿನ ಪೀಳಿಗೆ ಹಸ್ತಾಂತರಿಸುವ ದೃಢಸಂಕಲ್ಪದ ಯೋಜನೆಯು  ಪ್ರತಿಷ್ಠಾನ ವಾರ್ಷಿಕೋತ್ಸವದಲ್ಲಿ ಮಕ್ಕಳಿಗೆ ಅವಕಾಶ ಕಲ್ಪಿಸುವ ಮೂಲಕ ಯಶಸ್ವಿಯಾಗುತ್ತಿದೆ.

ಇಂತಹ ಕಾರ್ಯಕ್ರಮಗಳು ನಡೆದಲ್ಲಿ ಮಾತ್ರವೇ ಕಲೆಯ ಬೆಳವಣಿಗೆ ಕಾಣಬಹುದು. ಒಂದು ಅಕಾಡೆಮಿ- ಸರಕಾರ ಮಾಡಬೇಕಾದ ಕೆಲಸವನ್ನು ಪ್ರತಿಷ್ಠಾನ ಮಾಡುತ್ತಿದೆ. ಪ್ರತಿಷ್ಠಾನದ ಯೋಜನೆಗಳು ಮುಂದಿನ ದಿನಗಳಲ್ಲಿ ಯಶಸ್ವಿಯಾಗಲಿ ಇಂತಹ ಹತ್ತು ಹಲವು ಚಟುವಟಿಕೆಗಳ ನಡೆಯಲಿ ಎಂದು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಇವರು ಆಶೀರ್ವವಚನ ಮೂಲಕ ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶೇಖರ ಗೌಡ ಪಾಟೀಲ ಗೌರವಾಧ್ಯಕ್ಷರು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ,ಚಿಕ್ಕಕಬ್ಬಾರ ಕರ್ನಾಟಕ ಇವರು ವಹಿಸಿದರು. ಎತ್ತಣ ಉತ್ತರ ಕರ್ನಾಟಕ ಎತ್ತಣ ಕಾಸರಗೋಡು? ಕಲೆ ಸಾಹಿತ್ಯ ಸಂಸ್ಕೃತಿಗೆ ದೊಡ್ಡ ಕೊಡುಗೆ ನೀಡಿದ ಕಾಸರಗೋಡು ಪ್ರದೇಶ. ಈ ಪ್ರದೇಶದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿರುವ ಸಿರಿಬಾಗಿಲು ಪ್ರತಿಷ್ಠಾನ. ಇಂತಹ ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲೆಯಿಂದ ಆಗಮಿಸಿ ಈ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸುವುದು ನಮ್ಮ ಯೋಗ ಭಾಗ್ಯವೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಪ್ರತಿಷ್ಠಾನದ ಚಟುವಟಿಕೆಗಳಿಗೆ ಮುಂದೆಯೂ ಉತ್ತರ ಕರ್ನಾಟಕದವರಾದ  ನಮ್ಮ ,ಹಾಗು ನಿಮ್ಮ ಈ ಬಾಂಧವ್ಯ ಮುಂದುವರಿಯಲಿ. ಕಲೆ ಸಂಸ್ಕೃತಿ, ಸಾಹಿತ್ಯ ಉಳಿಯಲಿ ,ಬೆಳೆಯಲಿ ಎಂದು ತಿಳಿಸಿದರು .ಮುಖ್ಯ ಅತಿಥಿಗಳಾಗಿ ಶ್ರೀ ಕೊಕ್ಕಡ ವೆಂಕಟರಮಣ ಭಟ್ ಬಹುಭಾಷಾ ವಿದ್ವಾಂಸರು ವಿಶ್ರಾಂತ ಶಿಕ್ಷಕರು ಮಂಡ್ಯ, ಡಾ. ಪ್ರಭುಸ್ವಾಮಿ ಹಾಲೆವಾಡಿಮಠ ,ಡಾ.ಎಸ್.ಹನುಮಂತಪ್ಪ ಹಾವೇರಿ ,ಶ್ರೀಧರ ಶೆಟ್ಟಿ ಮುಟ್ಟಂ ,ಶ್ರೀ ಗೋಪಾಲ ಶೆಟ್ಟಿ ಅರಿಬೈಲು ,ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ ,ಶ್ರೀಮತಿ ಗೋಪಿಕಾ ಸತೀಶ ಮಯ್ಯ, ಶ್ರೀ ನರಸಿಂಹಮೂರ್ತಿ ಟಿ., ಡಾ. ಗಂಗಯ್ಯ ಕುಲಕರಣಿ ,ಶ್ರೀ ಮುಕೇಶ್ ಯೋಜನಾಧಿಕಾರಿ ಧರ್ಮಸ್ಥಳ ಶುಭ ಹಾರೈಸಿದರು.

ಶ್ರೀ ಕೃಷ್ಣ ಕಾರಂತ ಬನ್ನೂರು, ಎಸ್. ಎನ್. ರಾಮ ಶೆಟ್ಟಿ, ಸೀನ ಶೆಟ್ಟಿ ಕಜೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಬಹುಭಾಷಾ ವಿದ್ವಾಂಸರಾದ, ಪ್ರತಿಷ್ಠಾನ ಪ್ರಕಾಶಿಸಿದ ಸರಿ ಕನ್ನಡ ಸರಿಗನ್ನಡ ಪುಸ್ತಕದ ಸಂಪಾದಕರಾದ ಶ್ರೀ ಕೊಕ್ಕಡ ವೆಂಕಟರಮಣ ಭಟ್ ಇವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಮಧುರ ಉಪಾಧ್ಯ ಬೆಂಗಳೂರು ಇವರಿಗೆ ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕರು ಗೌರವ ನೀಡಲಾಯಿತು.

ಹೊರ ರಾಜ್ಯದ ಕನ್ನಡಿಗರಾಗಿ, ಗುಜರಾತ್ ವಾಪಿಯಲ್ಲಿರುವ ಶಂಕರನಾರಾಯಣ ಕಾರಂತ  ಪಣಂಬೂರು ಇವರನ್ನು ಗೌರವಿಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ಯಕ್ಷಗಾನ ನಾಟ್ಯ ತರಗತಿಯ ಶಿಕ್ಷಕರಾದ ಶ್ರೀ ಲಕ್ಷ್ಮಣ ಕುಮಾರ್ ಮರಕಡ ಅವರನ್ನು ಪ್ರತಿಷ್ಠಾನ ವತಿಯಿಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಸೇರಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಮಯ್ಯ ದಂಪತಿಗಳನ್ನು ನಾಟ್ಯ ತರಗತಿಗಳ ವಿದ್ಯಾರ್ಥಿಗಳ ಪೋಷಕರು, ವಿದ್ಯಾರ್ಥಿಗಳು ಸೇರಿ ಗೌರವಿಸಿದರು.

ಇದಕ್ಕೂ ಮೊದಲು ವಾರ್ಷಿಕೋತ್ಸವ ಪ್ರಯುಕ್ತ ಊರಿನ ತಂಡಗಳ ಭಜನಾ ಕಾರ್ಯಕ್ರಮ, ಪ್ರತಿಷ್ಠಾನದ ಮುಂದಿನ ಪೀಳಿಗೆಗೆ ಹಸ್ತಾಂತರ ಯೋಜನೆಯಡಿ ಮಕ್ಕಳ ತಂಡದ ತಾಳಮದ್ದಲೆ ಕಾರ್ಯಕ್ರಮ, ಪ್ರತಿಷ್ಠಾನದಲ್ಲಿ ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳ ರಂಗ ಪ್ರವೇಶ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ತಂಡದಿಂದ ಗರುಡ ಗರ್ವಭಂಗ ಯಕ್ಷಗಾನ ಪ್ರದರ್ಶನ ನಡೆಯಿತು.

ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಪ್ರತಿಷ್ಠಾನದ ಕಾರ್ಯ ಯೋಜನೆಯನ್ನು ತಿಳಿಸಿ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಚಂದ್ರಕಲಾ ನೀರಾಳ ಇವರು ನಿರೂಪಿಸಿದರೆ, ಕುಮಾರಿ ವಿದ್ಯಾಶ್ರೀ ನೀರಾಳ ಇವರು ಧನ್ಯವಾದಗಳು.  ಸಿರಿಬಾಗಿಲು ಗ್ರಾಮಸ್ಥರು ಪ್ರತಿಷ್ಠಾನದ ವಿದ್ಯಾರ್ಥಿಗಳ ಪೋಷಕರು ಊರ ಪರ ಊರ ಗಣ್ಯಾತಿ ಗಣ್ಯರು ಆಗಮಿಸಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು.

CBSE Class 7th English Chapter 1 – “Three Questions” – Questions and Answers

0

CBSE Class 7th English Chapter 1 – Three Questions – Questions and Answers

Comprehension Check

  1. Why did the king want to know answers to three questions?

The King thought that If he know answers for that three questions, He would never fail in ruling and life.

  • Messengers were sent throughout the kingdom ______________

Ans : (ii) to find answers to the questions.

Complete the following sentences by adding the appropriate parts of the sentences given in the box.

  1. Many wise men answered the king’s questions, but their answers were so varied that the king was not satisfied.
  2. Someone suggested that there should be a council of wise men to help the king act at the right time.
  3. Someone else suggested that the king should have a timetable and follow it strictly.
  4. The king requested the hermit to answer three questions.
  5. The king washed and dressed the bearded man’s wound but the bleeding would not stop.

Working with the text

Answer the following questions.

  1. Why was the King advised to go to magicians?

There were some things which could be urgent. These things could not wait for the decision of the council. In order to decide the right time for doing something, it is necessary to look into the future. And only magicians could do that. The king, therefore advised to go to magicians.

2. In answer to the second question, whose advice did the people say would be important to the king?

                In their answers to the second question, advice of councilors, priests or doctors and soldiers would be important to the king.

3. What suggestions were made in answer to the third question?

To the third question, some said science. Others chose fighting, and yet others religious worship.

4. Did the wise men win the reward? If not, why not?

As the answers to his questions were so different, the king was not satisfied and gave no reward.

5. How did the king and the hermit help the wounded man?

The king washed and covered wounded man’s wound with his handkerchief, but the blood would not stop flowing. The king re-dressed the wound until at last the bleeding stopped. The man felt better and asked for something to drink. The king brought fresh water and gave it to him. The king with the hermit’s help carried the wounded man into the hut and laid him on the bed.

6. (i) Who was the bearded man?

Bearded man was the enemy of king. He came to take revenge of his brother’s death by killing the king.

(ii) Why did he ask for the king’s forgiveness?

He asked for the king’s forgiveness because he wanted to kill the king. But King saved his life. So he changed his mind and become grateful to king.

7. The king forgave the bearded man. What did he do to show his forgiveness?

The King was not only forgave him but said he would send his servants and his own doctor to look after the bearded man, and he promised to give back the man his property.

8. What were the hermit’s answers to the three questions?

Write each answer separately. Which answer do you like most, and why?

Hermit’s answer to first question is “There is only one time that is important and that time is ‘Now’. It is the most important time because it is the only time we have any power to act.

For second question ““The most necessary person is the person you are with at a particular moment, for no one knows what will happen in the future and whether we will meet anyone else.

His answer for third question is “The most important business is to do that person good, because we were sent into this world for that purpose alone.”

 The First answer I like most because time is very important in every person’s life. There is ‘Do it now’ policy is behind in every successful man’s story.

Match the fallowing

i)          wounded      severely injured

(ii)       awoke           got up from sleep

(iii)      forgive           pardon

(iv)      faithful          loyal

(v)       pity                 feel sorry for

(vi)      beds               small patches of ground for plants

(vii)     return            give back

Use any three of the above words in sentences of your

own. You may change the form of the word.

  1. Students are returning to home from School
  2. We should faithful to our teachers.
  3. I took pity on physically challenged person.

2. Each of the following sentences has two blanks. Fill in

the blanks with appropriate forms of the word given in

brackets.

  • The judge said that only fresh evidence would make him change his judgement .(judge)
  •  I didn’t notice any serious difference of opinion among the debaters, although they differed from one another over small points. (differ)
  • It’s a fairly simple question to answer ,but will you accept my answer as final? (answer)
  • It isn’t necessary that necessity should always be the mother of invention. (necessary)
  • Hermits are wise men. How they acquire their wisdom, no one can tell. (wise)

(vi)     The committee has decided to make Jagdish captain of the team. The decision is likely to please everyone. (Decide)

  • Asking for forgiveness is as noble as willingness to forgive. (forgive)

ಸಿರಿಬಾಗಿಲು ಸಾಂಸ್ಕೃತಿಕ ಭವನ- ಪ್ರಥಮ ವಾರ್ಷಿಕೋತ್ಸವ ಡಿಸೆಂಬರ್ 26 ಕ್ಕೆ

0

ಕಳೆದ ವರುಷ ಡಿಸೆಂಬರ್ 26ರಂದು ಪರಮಪೂಜ್ಯ ರಾಜರ್ಷಿ ಡಾ|ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಲ್ಲಿ ಲೋಕಾರ್ಪಣೆಗೊಂಡ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನವು ಪ್ರಥಮ ವಾರ್ಷಿಕೋತ್ಸವವನ್ನು ಇದೇ ತಿಂಗಳ 26 ರಂದು ಗುರುವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ಆಚರಿಸಲಿದೆ.

26 ರಂದು ಬೆಳಗ್ಗೆ 7ರಿಂದ ಭಜನೆ ಕಾರ್ಯಕ್ರಮ,,10 ಗಂಟೆಯಿಂದ ಪ್ರತಿಷ್ಠಾನದ ಯಕ್ಷಗಾನ”” ಯಕ್ಷಗಾನ ಮುಂದಿನ ಪೀಳಿಗೆಗೆ ಹಸ್ತಾಂತರ”” ಯೋಜನೆಯಂತೆ ಮಕ್ಕಳ ತಂಡದ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಮಧ್ಯಾಹ್ನ 2 ಗಂಟೆಯಿಂದ ಪ್ರತಿಷ್ಠಾನದ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳ ರಂಗ ಪ್ರವೇಶ- ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪ್ರತಿಷ್ಠಾನದ ಯಕ್ಷಗಾನ ಗುರುಗಳಾದ ಪ್ರಸಿದ್ಧ ಯಕ್ಷಗಾನ ಕಲಾವಿದ ಶ್ರೀ ಲಕ್ಷ್ಮಣ ಕುಮಾರ್ ಮರಕಡ ಇವರು ನಿರ್ದೇಶಿಸಲಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ನಡೆಯುವ ವಾರ್ಷಿಕೋತ್ಸವ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಶಂಕರಾಚಾರ್ಯ ಸಂಸ್ಥಾನಂ, ಶ್ರೀಮದ್ ಎಡನೀರು ಮಠ ಇವರು ಆಶೀರ್ವಚನ ನೀಡಲಿದ್ದಾರೆ.

ಸಭಾಧ್ಯಕ್ಷತೆಯನ್ನು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಚಿಕ್ಕ ಕಬ್ಬಾರ ಹಾವೇರಿ ಜಿಲ್ಲೆ ಇದರ ಗೌರವಾಧ್ಯಕ್ಷರಾದ ಶ್ರೀ ಶೇಖರ ಗೌಡ ಪಾಟೀಲ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಎನ್ .ಎ .ನಲ್ಲಿಕುನ್ನು, ಬಹುಭಾಷಾ ವಿದ್ವಾಂಸರಾದ ಮಂಡ್ಯದ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್, ಡಾ. ಪ್ರಭು ಸ್ವಾಮಿ ಹಾಳೇವಾಡಿ ಮಠ, ಡಾ. ಎಸ್ ಹನುಮಂತಪ್ಪ ಹಾವೇರಿ, ಶ್ರೀ ಶ್ರೀಧರ ಶೆಟ್ಟಿ ಮುಟ್ಟಂ, ಶ್ರೀ ಗೋಪಾಲ ಶೆಟ್ಟಿ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ,ಶ್ರೀಮತಿ ಗೋಪಿಕಾ ಸತೀಶ ಮಯ್ಯ,,ಶ್ರೀ ನರಸಿಂಹಮೂರ್ತಿ, ಡಾ. ಗಂಗಯ್ಯ ಕುಲಕರ್ಣಿ ,ಶ್ರೀ ಮುಖೇಶ್ ಯೋಜನಾಧಿಕಾರಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂತಾದವರು ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀ ಮಧುರ ಉಪಾಧ್ಯ ಬೆಂಗಳೂರು, ಶ್ರೀ ಪಣಂಬೂರು ಶಂಕರನಾರಾಯಣ ಕಾರಂತ, ಶ್ರೀ ಲಕ್ಷ್ಮಣ ಕುಮಾರ್ ಮರಕಡ ಇವರನ್ನು ಪ್ರತಿಷ್ಠಾನವತಿಯಿಂದ ಗೌರವಿಸಲಾಗುವುದು.

ಸಭಾ ಕಾರ್ಯಕ್ರಮದ ನಂತರ ಪ್ರತಿಷ್ಠಾನದ ಯಕ್ಷಗಾನ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಅಲ್ಲು ಅರ್ಜುನ್ ಬಂಧನ, ಹೈಕೋರ್ಟ್ ಜಾಮೀನು ಆದೇಶ ಪ್ರತಿ ತಲುಪದ ಕಾರಣ ಜೈಲಿನಲ್ಲಿ ರಾತ್ರಿ ಕಳೆದ ನಟ; ಇಂದು ಜಾಮೀನಿನ ಮೇಲೆ ಬಿಡುಗಡೆ

0

ತೆಲುಗು ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ತೆಲಂಗಾಣ ಪೊಲೀಸರು ಯಾವುದೇ ನೋಟಿಸ್ ನೀಡದೆ ಶುಕ್ರವಾರ ಬಂಧಿಸಿದ್ದಾರೆ.

ಹೈದರಾಬಾದ್‌ನ ಥಿಯೇಟರ್‌ನಲ್ಲಿ ‘ಪುಷ್ಪ 2: ದಿ ರೂಲ್’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ದುರಂತ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನನ್ನು ಬಂಧಿಸಲಾಗಿದೆ.

ನಾಂಪಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ನಟನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೂ, ತೆಲಂಗಾಣ ಹೈಕೋರ್ಟ್ ತಕ್ಷಣ ಮಧ್ಯಪ್ರವೇಶಿಸಿ ಮಧ್ಯಂತರ ಜಾಮೀನು ನೀಡಿತು. ಆದರೆ, ನ್ಯಾಯಾಧೀಶರು ಸಹಿ ಮಾಡಿರುವ ಜಾಮೀನು ಆದೇಶದ ಪ್ರತಿ ಇನ್ನೂ ಜೈಲಿಗೆ ತಲುಪದ ಕಾರಣ ಅಲ್ಲು ಅರ್ಜುನ್ ಸದ್ಯ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿಯೇ ಉಳಿದುಕೊಂಡಿದ್ದಾರೆ.

ನ್ಯಾಯಾಲಯದ ಆದೇಶವನ್ನು ಸ್ವೀಕರಿಸಿದ ನಂತರ ಶೀಘ್ರದಲ್ಲೇ ನಟನನ್ನು ಬಿಡುಗಡೆ ಮಾಡಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಚಂಚಲಗೂಡ ಕೇಂದ್ರ ಕಾರಾಗೃಹದ ಮುಂದೆ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ತಡರಾತ್ರಿಯೂ ಜೈಲಿನ ಹೊರಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದಾರೆ

ಶುಕ್ರವಾರ ಬೆಳಗ್ಗೆ ಹೈದರಾಬಾದ್ ಪೊಲೀಸ್ ಟಾಸ್ಕ್ ಫೋರ್ಸ್ ಅಲ್ಲು ಅರ್ಜುನ್ ನಿವಾಸಕ್ಕೆ ಆಗಮಿಸಿದೆ. ನಟನ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಮತ್ತು ಪತ್ನಿ ಸ್ನೇಹಾ ರೆಡ್ಡಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರೂ ಬಂಧನವನ್ನು ತಡೆಯಲು ಸಾಧ್ಯವಾಗಲಿಲ್ಲ. ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವಾಗಲೇ ಈ ಬಂಧನ ನಡೆದಿದೆ.

ಮ್ಯಾಜಿಸ್ಟ್ರೇಟ್ ಕೋರ್ಟ್ ರಿಮಾಂಡ್ ಆದೇಶದ ನಂತರ, ಅಲ್ಲು ಅರ್ಜುನ್ ಅವರ ವಕೀಲರು ಮಧ್ಯಾಹ್ನ 4 ಗಂಟೆ ಸುಮಾರಿಗೆ ವಿಷಯವನ್ನು ಹೈಕೋರ್ಟ್ ಗಮನಕ್ಕೆ ತಂದರು. ನ್ಯಾಯಮೂರ್ತಿ ಜುವ್ವಾಡಿ ಶ್ರೀದೇವಿ ಅವರು ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಬಂಧನ ಆತಂಕಕಾರಿಯಾಗಿದೆ ಎಂದು ಹೇಳಿದ್ದಾರೆ.

ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆಯ ಆರೋಪವು ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದು ಅವರು ಸೂಚಿಸಿದರು. ಇತರ ಆರೋಪಿಗಳನ್ನು ಬಂಧಿಸಿರುವುದರಿಂದ ಅಲ್ಲು ಅರ್ಜುನ್ ಬಂಧನವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತು.

ಥಿಯೇಟರ್ ಮಾಲೀಕರು ಮತ್ತು ಖಾಸಗಿ ಭದ್ರತಾ ಸಿಬ್ಬಂದಿ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಥಿಯೇಟರ್ ಮಾಲೀಕ ಮತ್ತು ನೌಕರನನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 4 ರಂದು ರಾತ್ರಿ 11 ಗಂಟೆಗೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ರೇವತಿ (35) ಸಾವನ್ನಪ್ಪಿದ್ದರು. ಅವರ ಪುತ್ರ ಶ್ರೀತೇಜ (9) ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರೀಮಿಯರ್ ಶೋಗೆ ಅಲ್ಲು ಅರ್ಜುನ್, ಅವರ ಕುಟುಂಬ, ಮತ್ತು ಚಿತ್ರತಂಡದ ಆಗಮನದ ನಂತರ ಗೊಂದಲವು ಉಂಟಾಯಿತು.

  1. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 105 ಮತ್ತು 118(1) ಅಡಿಯಲ್ಲಿ ಬಂಧನವನ್ನು ಮಾಡಲಾಗಿದೆ, ಇದು 5 ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. ನರಹತ್ಯೆಯ ಆರೋಪ ನಿಲ್ಲುವುದಿಲ್ಲ ಎಂದು ಹೈಕೋರ್ಟ್ ನಿನ್ನೆ ಸ್ಪಷ್ಟಪಡಿಸಿದೆ.
  2. ಪ್ರಾಸಿಕ್ಯೂಷನ್ ಪ್ರಕಾರ, ಅಲ್ಲು ಅರ್ಜುನ್ ಅವರ ಖಾಸಗಿ ಭದ್ರತಾ ಸಿಬ್ಬಂದಿ ಸಾರ್ವಜನಿಕರನ್ನು ನಿಭಾಯಿಸಿದ ರೀತಿಯಿಂದ ಸಮಸ್ಯೆ ಉಂಟಾಗಿದೆ. ಥಿಯೇಟರ್‌ಗೆ ಬರುವ ಬಗ್ಗೆ ಥಿಯೇಟರ್ ಮಾಲೀಕರು ಮತ್ತು ಪೊಲೀಸರಿಗೆ ಮೊದಲೇ ಸೂಚನೆ ನೀಡಿದ್ದೇನೆ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡುವಂತೆ ಕೇಳಿದ್ದೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.

    ಯಕ್ಷಗಾನ ಕಲಾವಿದರಿಗೆ ಬಸ್‌ಪಾಸ್ ವಿತರಣೆ

    0


    ಯಕ್ಷಗಾನ ಕಲಾರಂಗದ, ಯಕ್ಷನಿಧಿಯ ವೃತ್ತಿ ಕಲಾವಿದರಿಗೆ ಕಳೆದ ಎರಡು ದಶಕಗಳಿಂದ ಕೆನರಾ ಬಸ್ ಮಾಲಕರ ಸಂಘವು ನೀಡುತ್ತಾ ಬಂದ 50% ರಿಯಾಯತಿಯ ಬಸ್‌ಪಾಸ್ ಸೌಲಭ್ಯದ ವಿತರಣೆ ಇಂದು (13.12.2024) ಐವೈಸಿ ಸಭಾಭವನದಲ್ಲಿ ನಡೆಯಿತು.

    ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಸಂಸ್ಥೆಯ ಉಪಾಧ್ಯಕ್ಷರೂ, ಬಹುಮೇಳಗಳ ಯಜಮಾನರೂ ಆದ ಪಿ. ಕಿಶನ್ ಹೆಗ್ಡೆ, ಉಪಾಧ್ಯಕ್ಷರಾದ ವಿ. ಜಿ. ಶೆಟ್ಟಿಯವರು

    ಧರ್ಮಸ್ಥಳ, ಮಂದಾರ್ತಿ ಮೇಳಗಳ ಕಲಾವಿದರುಗಳಾದ ಧರ್ಮಸ್ಥಳ ಚಂದ್ರಶೇಖರ, ಬಿ. ಮಹಾಬಲ ನಾಯ್ಕ್ ಹಾಗೂ ಆನಂದ ಕನ್ನಾರು ಇವರಿಗೆ ಸಾಂಕೇತಿಕವಾಗಿ ವಿತರಿಸಿದರು.

    ಕಾರ್ಯದರ್ಶಿ ಮುರಲಿ ಕಡೆಕಾರ್ ಬಸ್‌ಮಾಲಕರ ಸಂಘದ ಸಹಕಾರವನ್ನು ಸ್ಮರಿಸಿಕೊಂಡು, ಕಾರ್ಯಕ್ರಮ ನಿರೂಪಿಸಿದರು.

    ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ನಾರಾಯಣ ಎಂ. ಹೆಗಡೆ, ವಿಜಯಕುಮಾರ್ ಮುದ್ರಾಡಿ, ಗಣೇಶ್ ಬ್ರಹ್ಮಾವರ ಹಾಗೂ ಕಿಶೋರ್ ಸಿ. ಉದ್ಯಾವರ ಉಪಸ್ಥಿತರಿದ್ದರು.

    30 ಮೇಳಗಳ ಸುಮಾರು 600 ಕಲಾವಿದರು ಇದರ ಫಲಾನುಭವಿಗಳಾಗಿದ್ದಾರೆ.

    ಶೌಚಾಲಯಕ್ಕೆ ಹೋದರೆ ಶಿಕ್ಷೆ; ನಾಲ್ಕು ವರ್ಷದ ಬಾಲಕಿಯ ಖಾಸಗಿ ಅಂಗಕ್ಕೆ ಶಿಕ್ಷಕಿ ಚಿವುಟಿ ಗಾಯಗೊಳಿಸಿದ್ದಾರೆ ಎಂದು ದೂರು ನೀಡಿದ ಪೋಷಕರು

    0

    ನಾಲ್ಕು ವರ್ಷದ ಬಾಲಕಿಯ ಖಾಸಗಿ ಅಂಗಗಳನ್ನು ಶಿಕ್ಷಕಿಯೊಬ್ಬರು ಗಾಯಗೊಳಿಸಿರುವ ಘಟನೆ ತಿರುವನಂತಪುರಂನಲ್ಲಿ ನಡೆದಿದೆ.

    ಘಟನೆಯಲ್ಲಿ ಕಲ್ಲಟ್ಟುಮುಕ್ಕು ಆಕ್ಸ್‌ಫರ್ಡ್ ಶಾಲೆಯ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.

    ಮಧ್ಯಾಹ್ನ ಶೌಚಾಲಯಕ್ಕೆ ಹೋಗಿದ್ದಕ್ಕೆ ಮಗುವನ್ನು ಬಳಿಕ ಶಿಕ್ಷಕಿ ನಿಂದಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಮಗುವಿನ ಅಜ್ಜಿ ಮಗುವಿನ ಬಟ್ಟೆಗಳನ್ನು ತೆಗೆದು ಪರಿಶೀಲಿಸಿದಾಗ ಮಗುವಿನ ಖಾಸಗಿ ಭಾಗದಲ್ಲಿ ಚಿಟಿಕೆಯಿಂದ ಗಾಯದ ಗುರುತು ಕಾಣಿಸಿಕೊಂಡಿದೆ.

    ಆಗ ಅಜ್ಜಿ ಕೆಲಸಕ್ಕೆ ಹೋಗಿದ್ದ ಮಗುವಿನ ತಾಯಿಗೆ ಕರೆ ಮಾಡಿ ಬೆಳಗ್ಗೆ ಮಗುವಿಗೆ ಸ್ನಾನ ಮಾಡಿಸಿದಾಗ ಏನಾದರೂ ಗಾಯವಾಗಿದೆಯೇ ಎಂದು ಕೇಳಿದ್ದಾರೆ. ಹಾಗೇನೂ ಆಗಿಲ್ಲ ಎಂದು ತಾಯಿ ಹೇಳಿದಾಗ, ಅಜ್ಜಿ ಮಗುವಿನೊಂದಿಗೆ ಶಾಲೆಗೆ ಬಂದು ಏನಾಯಿತು ಎಂದು ವಿಚಾರಿಸಿದ್ದಾರೆ.

    ಕುಟುಂಬಸ್ಥರ ಪ್ರಕಾರ, ಸಿಸಿಟಿವಿ ಪರಿಶೀಲನೆ ವೇಳೆ ಶಿಕ್ಷಕಿ ಮಗುವಿಗೆ ನೋವುಂಟು ಮಾಡುತ್ತಿರುವುದು ಕಂಡುಬಂದಿದೆ. ಬಳಿಕ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇಂದು ಬೆಳಗ್ಗೆ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

    ಶಿಕ್ಷಕಿಉ ವಿರುದ್ಧ ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾಕ್ಷ್ಯಾಧಾರ ಸಂಗ್ರಹಿಸಿದ ನಂತರ ಬಂಧಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ನವ ವಿವಾಹಿತೆಯ ಆತ್ಮಹತ್ಯೆ ಪ್ರಕರಣಕ್ಕೆ ನಾಟಕೀಯ ತಿರುವು – ಪ್ರೇಮಿ ಅಜಾಸ್‌ಗೆ ಕೊನೆಯ ಫೋನ್ ಕರೆ, ಬಳಿಕ ಆತ್ಮಹತ್ಯೆ

    ನವ ವಧು ಇಂದುಜಾ (25) ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅಭಿಜಿತ್ ಮತ್ತು ಸ್ನೇಹಿತ ಅಜಾಸ್ ಸೇರಿದಂತೆ ಇಬ್ಬರನ್ನು ಪಾಲೋಡ್ ಪೊಲೀಸರು ಬಂಧಿಸಿದ್ದಾರೆ.

    ಪಾಲೊಡ್ ಇದಿಂಜರ ಕೊಣ್ಣಮಡು ಕಿಜಕುಮಕರ ಮನೆ ನಿವಾಸಿಗಳಾದ ಶಶಿಧರಂಕಣಿ-ಶೀಜಾ ದಂಪತಿಯ ಪುತ್ರಿ ಇಂದುಜಾ ಶುಕ್ರವಾರ ಮಧ್ಯಾಹ್ನ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅಭಿಜಿತ್ ಪ್ರಕಾರ, ಸಾಯುವ ಒಂದು ದಿನದ ಮೊದಲು ಆಕೆಯ ಗೆಳೆಯ ಅಜಾಸ್ ಇಂದುಜಾಗೆ ಕಪಾಳಮೋಕ್ಷ ಮಾಡಿದ್ದಾನೆ.

    ಅಭಿಜಿತ್‌ನ ಮೇಲೆ ಆತ್ಮಹತ್ಯೆಗೆ ಪ್ರಚೋದನೆ, ದೈಹಿಕ ಹಾನಿ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಲಾಗಿದ್ದು, ಅಜಾಸ್‌ನ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಹಲ್ಲೆ ಆರೋಪ ಹೊರಿಸಲಾಗಿತ್ತು.

    ಅಜಾಸ್, ಇಂದುಜಾ ಮತ್ತು ಅಭಿಜಿತ್ ಶಾಲೆಯಲ್ಲಿ ಒಟ್ಟಿಗೆ ಇದ್ದರು. ಅಜಾಸ್ ಮತ್ತು ಇಂದುಜಾ ಸಂಬಂಧದಲ್ಲಿದ್ದರು ಮತ್ತು ಮದುವೆಯಾಗಲು ಯೋಜಿಸಿದ್ದರು. ಆದರೆ, ಧಾರ್ಮಿಕ ಭಿನ್ನತೆ ಭಿನ್ನಾಭಿಪ್ರಾಯವನ್ನು ಮುಂದಿಟ್ಟುಕೊಂಡು ಸಂಬಂಧಿಕರು, ಮನೆಯವರು ವಿವಾಹವನ್ನು ನಿರಾಕರಿಸಿದರು.

    ಮೂರು ತಿಂಗಳ ಹಿಂದೆ ಅಭಿಜಿತ್ ಇಂದುಜಾಳನ್ನು ಪುಲ್ಲಂಪಾರದ ದೇವಸ್ಥಾನದಲ್ಲಿ ಮದುವೆಯಾಗಿದ್ದ. ಆದರೆ ಮದುವೆ ನೋಂದಣಿ ಆಗಿರಲಿಲ್ಲ.

    ಇಂದುಜಾ ಖಾಸಗಿ ಲ್ಯಾಬ್‌ನಲ್ಲಿ ಉದ್ಯೋಗಿಯಾಗಿದ್ದರು. ಕಟ್ಟಕ್ಕಡ ಡಿವೈಎಸ್ಪಿ ಶಿಬು, ಪಾಲೋಡ್ ಸಿಐ ಅನೀಶ್ ಕುಮಾರ್ ಮತ್ತು ಎಸ್‌ಐ ರಹೀಮ್ ಅವರನ್ನೊಳಗೊಂಡ ತಂಡವು ಪ್ರಕರಣದ ತನಿಖೆ ನಡೆಸುತ್ತಿದೆ.

    ಅಭಿಜಿತ್‌ನೊಂದಿಗೆ ಮದುವೆಯಾದ ನಂತರವೂ ಇಂದುಜಾ ಅಜಾಸ್‌ನೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಇತ್ತೀಚೆಗಷ್ಟೇ ಇಂದುಜಾ ಮತ್ತೋರ್ವ ಯುವಕನೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಅಜಾಸ್‌ಗೆ ಅನುಮಾನ ಬಂದಿತ್ತು.

    ಅವಳ ಸಾವಿಗೆ ಒಂದು ದಿನ ಮೊದಲು, ಏಜಸ್ ಇಂದುಜಾಳನ್ನು ತನ್ನ ಕಾರಿನಲ್ಲಿ ಶಂಖುಮುಖಂ ಬೀಚ್‌ಗೆ ಕರೆದೊಯ್ದು ಅವಳ ಹೊಸ ದಂಧೆಯ ಬಗ್ಗೆ ವಿಚಾರಿಸಿದ. ಮಾತುಕತೆಗಳು ತೀಕ್ಷ್ಣ ರೂಪಕ್ಕೆ ತಿರುಗಿದಾಗ ಅಜಸ್ ಇಂದುಜಾಗೆ ಕಪಾಳಮೋಕ್ಷ ಮಾಡಿದನು.

    ಅಲ್ಲದೆ ಅಭಿಜಿತ್‌ಗೆ ಮದುವೆಯನ್ನು ರದ್ದುಪಡಿಸಿ ಇಂದುಜಾಳನ್ನು ಬಿಟ್ಟು ಹೋಗುವಂತೆ ಹೇಳಿದ್ದರು. ಅದೇ ದಿನ, ಇಂದುಜಾ ಮನೆಗೆ ಹಿಂದಿರುಗಿದ ನಂತರ, ಅಭಿಜಿತ್ ಮತ್ತು ಇಂದುಜಾ ನಡುವೆ ಕಹಿಯಾದ ಮಾತುಕತೆ ನಡೆಯಿತು ಮತ್ತು ಅದು ಅಭಿಜಿತ್ ಇಂದುಜಾ ಅವರನ್ನು ಹೊಡೆಯುವುದರೊಂದಿಗೆ ಕೊನೆಗೊಂಡಿತು.

    ಮರುದಿನ ಮಧ್ಯಾಹ್ನದ ಹೊತ್ತಿಗೆ, ಇಂದುಜಾ ತನ್ನ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಅಜಾಸ್‌ಗೆ ತಿಳಿಸಿದಳು. ಮತ್ತು ಮಧ್ಯಾಹ್ನದ ವೇಳೆಗೆ ಅಭಿಜಿತ್ ಊಟಕ್ಕೆ ಮನೆಗೆ ತಲುಪಿದಾಗ, ಇಂದುಜಾ ಆತ್ಮಹತ್ಯೆ ಮಾಡಿಕೊಂಡಿದ್ದರು.

    ಇಂದುಜಾ ಸಾವಿನ ನಂತರ ಆರೋಪಿಗಳು ತಮ್ಮ ಫೋನ್‌ಗಳಲ್ಲಿನ ಎಲ್ಲಾ ಮಾಹಿತಿಯನ್ನು ಅಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಜಾಸ್ ತನ್ನ ಫೋನ್‌ನಿಂದ ಇಂದುಜಾಗೆ ಕರೆ ಮಾಡಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ. ಅಜಾಸ್ ಮತ್ತು ಅಭಿಜಿತ್ ಕೂಡ ತಮ್ಮ ವಾಟ್ಸಾಪ್ ದಾಖಲೆಗಳನ್ನು ಅಳಿಸಿದ್ದಾರೆ.

    ಅವರ ಫೋನ್‌ಗಳನ್ನು ಸೈಬರ್ ಸೆಲ್‌ಗೆ ಹಸ್ತಾಂತರಿಸಲಾಗಿದೆ. ಪೊಲೀಸರು ಚಾಟ್‌ಗಳು ಮತ್ತು ಫೋನ್ ಸಂಭಾಷಣೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಟವರ್ ಲೊಕೇಶನ್ ಮತ್ತು ಅಜಾಸ್ ಇಂದುಜಾ ಬೀಚ್‌ಗೆ ಬಂದಿದ್ದಾರೆ ಎಂದು ಹೇಳಲಾದ ದಿನದ ಸಿಸಿಟಿವಿ ದೃಶ್ಯಗಳನ್ನು ಹುಡುಕುತ್ತಿದ್ದಾರೆ, ಅಲ್ಲಿ ಇಂದುಜಾ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ.

    ಮೊದಲ ಹಂತದ ವಿಚಾರಣೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿರಲಿಲ್ಲ. ಪೊಲೀಸರು ಶೀಘ್ರದಲ್ಲೇ ಸಾಕ್ಷ್ಯವನ್ನು ಪ್ರಸ್ತುತಪಡಿಸಿದರು, ಆಗ ಇಬ್ಬರೂ ತಮ್ಮ ನಿಲುವನ್ನು ಬದಲಾಯಿಸಿ ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿರುವುದನ್ನು ಒಪ್ಪಿಕೊಂಡರು.

    ತನ್ನನ್ನು ಮರೆತು ಮತ್ತೆ ಗಂಡನ ಜೊತೆಗೆ ತೆರಳಿದ್ದಕ್ಕಾಗಿ ಪ್ರೇಯಸಿಯನ್ನು ಇರಿದು ಕೊಂದ ಪ್ರಿಯಕರ – ಇನ್ಸ್ಟಾಗ್ರಾಮ್ ಪ್ರೀತಿಗೆ ಬಲಿಯಾದ ಮಹಿಳೆ

    ಮಕ್ಕಳ ಎದುರಲ್ಲೇ ಪ್ರಿಯಕರನಿಂದ ಗೃಹಿಣಿಯೊಬ್ಬಳ ಬರ್ಬರ ಹತ್ಯೆಯಾದ ಘಟನೆ ನಡೆದಿದೆ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಯುವಕ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಎದುರೇ ತನ್ನ ಪ್ರೇಯಸಿ ಗೃಹಿಣಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಕಿಚ್ಚಂಬಿ ಗ್ರಾಮದಲ್ಲಿ ನಡೆದಿದೆ.

     ಒಮ್ಮೆ ತನ್ನನ್ನು ಪ್ರೀತಿಸಿ ತನ್ನ ಜೊತೆಗೆ ಕಾಲ ಕಳೆದು ಆಮೇಲೆ ತನ್ನ ಬಿಟ್ಟು ಗಂಡನ ಜತೆ ತೆರಳಿದ್ದಕ್ಕೆ ಕೋಪಗೊಂಡು ಆಕೆಯ ಮಕ್ಕಳ ಎದುರಲ್ಲೇ ಮಹಿಳೆಯನ್ನು ಹತ್ಯೆಗೈದಿರುವಂತಹ ಘಟನೆ ಜಿಲ್ಲೆಯ ಎನ್​.ಆರ್.ಪುರ ತಾಲೂಕಿನ ಕಿಚ್ಚಬ್ಬಿ ಗ್ರಾಮದಲ್ಲಿ ಘಟನೆ ನಡೆದಿದೆ.

    ಚಾಕುವಿನಿಂದ ಇರಿದು ತೃಪ್ತಿ(25)ಯನ್ನು ಹತ್ಯೆಗೈದ ಪ್ರಿಯಕರ ಚಿರಂಜೀವಿ, ಬಳಿಕ ಕರೆಯ ಹೊಂಡಕ್ಕೆ ಶವವನ್ನು ಎಳೆದುಕೊಂಡು ಹೋಗಿ ಎಸೆದು ಪರಾರಿ ಆಗಿದ್ದಾನೆ.

    ಕಿಚ್ಚಬ್ಬಿ ಗ್ರಾಮದ ಮಹಿಳೆ ತೃಪ್ತಿ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ ಚಿರಂಜೀವಿ ಎಂಬಾತ ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹಲವು ದಿನಗಳಿಂದ ಇಬ್ಬರು ಸ್ನೇಹಿತರಾದ ಮೇಲೆ ಪ್ರೀತಿಸುತ್ತಿದ್ದರು.

    ನಂತರ ಹಿಂದೆ ಚಿರಂಜೀವಿ ಜೊತೆ ತೃಪ್ತಿ ತೆರಳಿದ್ದಳು ಎಂದು ಹೇಳಲಾಗುತ್ತಿದೆ. ಆಗ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ಪೊಲೀಸ್ ಕ್ರಮದ ನಂತರ ವಾಪಸ್ ಬಂದಿದ್ದಳು. ಬಂದ ಬಳಿಕ ಮನೆಯವರ ರಾಜಿ ಮಧ್ಯಸ್ಥಿಕೆಯಲ್ಲಿ, ಆತನ ಜೊತೆ ಮಾತು ಹಾಗೂ ಸ್ನೇಹವನ್ನು ಬಿಟ್ಟಿದ್ದಳು ಎಂದು ತಿಳಿದುಬಂದಿದೆ.

    ತನ್ನ ಸಂಪರ್ಕ ಬಿಟ್ಟು ಬಿಟ್ಟ ಕಾರಣದಿಂದ ಚಿರಂಜೀವಿ ಕೋಪಗೊಂಡಿದ್ದ. ತೃಪ್ತಿಯ ಪತಿ ಕೆಲಸಕ್ಕೆ ಹೋಗಿದ್ದಾಗ ಈ ಕೃತ್ಯ ಎಸಗಿದ್ದು ಶನಿವಾರ ಏಕಾಏಕಿ ಮನೆಗೆ ನುಗ್ಗಿ ತೃಪ್ತಿಯ ಮೇಲೆ ಚಾಕುವಿನಿಂದ ಇರಿದು ದಾರುಣವಾಗಿ ಕೊಲೆ ಮಾಡಿದ ಬಳಿಕ ಮನೆಯಿಂದ ಶವವನ್ನು ಎಳೆದೊಯ್ದು ಗ್ರಾಮದ ಸಮೀಪದ ಕೆರೆಗೆ ಎಸೆದ.

    ತೃಪ್ತಿ ಮತ್ತು ಚಿರಂಜೀವಿ ಇನ್ಸ್ಟಾಗ್ರಾಮ್​ ಮೂಲಕ ಪರಿಚಯವಾಗಿ ಬಳಿಕ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಒಂದು ತಿಂಗಳ ಹಿಂದೆ ಗಂಡ ಹಾಗೂ ಎರಡು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ತೃಪ್ತಿ ನಾಪತ್ತೆಯಾಗಿದ್ದಳು.

    ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಆಗ ಪೊಲೀಸರು ಇಬ್ಬರನ್ನೂ ಪತ್ತೆಹಚ್ಚಿ ಕರೆತಂದ ನಂತರ ಪತಿ ಪತ್ನಿ ಇಬ್ಬರೂ ಮನೆಯವರ ರಾಜಿ ಮಧ್ಯಸ್ಥಿಕೆಯಲ್ಲಿ ಮೊದಲಿನಂತೆ ಜೀವನ ನಡೆಸುತ್ತಿದ್ದರು.

    ಆದರೆ ಈ ಬಗ್ಗೆ ಕೋಪಗೊಂಡ ಆಕೆಯ ಪ್ರಿಯಕರ ಚಿರಂಜೀವಿ ಆಕೆಯ ಗಂಡ ಇಲ್ಲದಿರುವ ಸಮಯ ನೋಡಿ ಮನೆಗೆ ನುಗ್ಗಿ ಮಾರಣಾಂತಿಕವಾಗಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾನೆ.

    ಆ ಬಳಿಕ ಅರ್ಧ ಕಿ.ಮೀ. ದೂರದ ವರೆಗೆ ಕಾಫಿ ತೋಟದ ನಡುವೆ ಆಕೆಯ ಶವವನ್ನು ಎಳೆದು ತಂದು 40 ಅಡಿ ಆಳವಿರುವ ಕೆರೆಯಲ್ಲಿ ಎಸೆದು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.‌

    ಕಾಫಿ ನಾಡನ್ನು ದಿಗ್ಭ್ರಮೆಗೊಳಿಸಿದ ಈ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ ಚಿಕ್ಕಮಗಳೂರು ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿ ಚಿರಂಜೀವಿಯನ್ನು ಬಂಧಿಸಿ ಕೇಸ್ ದಾಖಲಿಸಿದ್ದಾರೆ.

    ಪ್ರಕರಣ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಕುಮಾರಿ ವೈಷ್ಣವಿ ಪೈ ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

    ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಮೂಹ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಹಾಗೂ ಬೆಳ್ತಂಗಡಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ

    ದಶಂಬರ್ 6ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರೌಢ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ಕುಮಾರಿ ವೈಷ್ಣವಿ ಪೈ ( ಶ್ರೀ ನಾಗೇಶ ಪೈ ಹಾಗೂ ಶ್ರೀಮತಿ ಸಹನಾ ಪೈ ದಂಪತಿಗಳ ಪುತ್ರಿ) ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

    ಹಾಗೆಯೇ 9ನೇ ತರಗತಿಯ ಕುಮಾರಿ ನಿಲಿಷ್ಕಾ ( ಶ್ರೀ ದಿನೇಶ್ ನಾಯ್ಕ್ ಮತ್ತು ಶ್ರೀಮತಿ ಸ್ಮಿತಾಶ್ರೀ ದಂಪತಿಗಳ ಪುತ್ರಿ) ಚಿತ್ರಕಲೆಯಲ್ಲಿ ದ್ವಿತೀಯ ಬಹುಮಾನ

    ಮತ್ತು ಹಿರಿಯ ಪ್ರಾಥಮಿಕ ವಿಭಾಗದಲ್ಲಿ 7ನೇ ತರಗತಿಯ ಕುಮಾರಿ ರಚನಾ ಬಾಯಾರ್ ( ಶ್ರೀ ರಂಜನ್ ಕುಮಾರ್ ಬಾಯಾರ್ ಮತ್ತು ಶ್ರೀಮತಿ ಸುಪ್ರಿಯಾ ದಂಪತಿಗಳ ಪುತ್ರಿ) ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ ಬಹುಮಾನ ಗಳಿಸಿರುತ್ತಾರೆ.

    ಈ ವಿಚಾರವನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.