Friday, May 15, 2026
Home Blog Page 216

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್  ಎಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತೆ

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್  ಎಂಡ್ ಟೆಕ್ನಾಲಜಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಸಿವಿಲ್  ಎಂಜಿನಿಯರಿಂಗ್   ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು  (National Board of Accreditation) ಮೂರು ಶೈಕ್ಷಣಿಕ ವರ್ಷಗಳಿಗೆ ಮಾನ್ಯತೆಯನ್ನು ನವೀಕರಿಸಿದೆ.

ಈ ಹಿಂದೆ 2009 ರಿಂದ 2022ರ ವರೆಗೆ ರಾಷ್ಟ್ರೀಯ ಮಾನ್ಯತೆ ದೊರಕಿತ್ತು, ಈಗ ಅದನ್ನು ಮೂರು ವರ್ಷಗಳ ಕಾಲಕ್ಕೆ ನವೀಕರಿಸಲಾಗಿದೆ.


ರಾಷ್ಟ್ರೀಯ ಮಾನ್ಯತಾ ಮಂಡಳಿಯು ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತಿನ  (AICTE) ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರೀಕ್ಷಿಸುವ ಜತೆಗೆ ಭಾರತದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಉತ್ತೇಜಿಸುವ ಸ್ವಾಯತ್ತ ಸಂಸ್ಥೆಯಾಗಿದೆ.


ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು  (AICTE) ನಿಗದಿಪಡಿಸಿದ ರೀತಿಯಲ್ಲಿ ಕಾಲೇಜಿನ ಶೈಕ್ಷಣಿಕ ಸೌಲಭ್ಯಗಳು, ಪಾಠ ಪ್ರವಚನಗಳು, ಮೂಲಭೂತ ಸೌಕರ್ಯಗಳು, ಪ್ರಯೋಗಾಲಯಗಳು, ಕ್ರೀಡಾ ಸವಲತ್ತುಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕ್ಯಾಂಪಸ್ ನೇಮಕಾತಿ, ಕ್ಯಾಂಟೀನ್ ಸೌಲಭ್ಯ, ಹಾಸ್ಟೆಲ್ ಇವೇ ಮುಂತಾದ ಹತ್ತು ಹಲವು ಸೌಲಭ್ಯಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಈ ಮಾನ್ಯತೆಯನ್ನು ನೀಡಲಾಗಿದೆ. 


ಮೂರು ಮಂದಿ ತಜ್ಞರನ್ನೊಳಗೊಂಡ ರಾಷ್ಟ್ರೀಯ ಮಾನ್ಯತಾ ಮಂಡಳಿಯ ತಂಡವು ಜೂನ್ 4 ರಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮೂರು ವರ್ಷಗಳ ಅವಧಿಗೆ ಅಂದರೆ 30.6.2025 ರವರೆಗೆ ಮಾನ್ಯತೆಯನ್ನು ನವೀಕರಿಸಿ ಆದೇಶವನ್ನು ನೀಡಿದೆ.

ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗಗಳ ಮಾನ್ಯತೆಗಾಗಿ ಈಗಾಗಲೇ ಅರ್ಜಿ ಸಲ್ಲಿಸಲಾಗಿದ್ದು, ಶೀಘ್ರದಲ್ಲಿಯೇ ತಜ್ಞರ ತಂಡವು ಪರಿಶೀಲನೆಗಾಗಿ ಕಾಲೇಜಿಗೆ ಭೇಟಿ ನೀಡಲಿದೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

ಸೀರೆಯಲ್ಲಿ ಉಯ್ಯಾಲೆಯಾಡುತ್ತಿರುವಾಗ ಕೊರಳಿಗೆ ಸೀರೆ ಸುತ್ತಿ  ಬಾಲಕಿಯ  ಸಾವು – ಅನಂತಾಡಿ ಗ್ರಾಮದಲ್ಲೊಂದು ಹೃದಯವಿದ್ರಾವಕ ಘಟನೆ 

ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಂಟ್ರಂಜದಲ್ಲಿ 11 ವರ್ಷದ ಬಾಲಕಿಯೊಬ್ಬಳು ತಾನು ಆಡುತ್ತಿದ್ದ ಉಯ್ಯಾಲೆಗೆ ಸೀರೆಯು ಆಕಸ್ಮಾತಾಗಿ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟಿದ್ದಾಳೆ.

ಮೃತ ಬಾಲಕಿ ಬಂಟ್ರಂಜ ನಿವಾಸಿ ಶೇಖರ್ ಎಂಬವರ ಪುತ್ರಿ ಲಿಖಿತಾ ಎಂದು ತಿಳಿದುಬಂದಿದೆ. ಆಕೆಯು ಬಾಬನಕಟ್ಟೆ ಶಾಲೆಯಲ್ಲಿ ಆರನೇ ತರಗತಿ ಕಲಿಯುತ್ತಿದ್ದ ಹುಡುಗಿ.

ಆಕೆಯ ಹಾಗೂ ಮನೆಯವರ ಪಾಲಿಗೆ ಕೆಟ್ಟ ದಿನವಾಗಿದ್ದ ನಿನ್ನೆ ಲಿಖಿತಾ ಮನೆಯಲ್ಲಿಯೇ ಇದ್ದಳು. ಆಕೆಯ ತಂದೆ ಶೇಖರ್ ತನ್ನ ಪತ್ನಿ ಚಂದ್ರಾವತಿಯೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಗ ಅವಳು ಉಯ್ಯಾಲೆಯಲ್ಲಿ ಆಡುತ್ತಿದ್ದಳು.

ಆಕೆಯ ತಾಯಿ ಚಂದ್ರಾವತಿ ಹಿಂತಿರುಗಿ ಬಂದಾಗ ಮಗಳು ಸೀರೆಯಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡು ಜೋರಾಗಿ ಕಿರುಚಿದಳು. ಆಕೆಯ ಕೂಗಿನಿಂದ ಗಾಬರಿಗೊಂಡ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯ ಕುತ್ತಿಗೆಗೆ ಸಿಕ್ಕಿಕೊಂಡಿದ್ದ ಸೀರೆಯನ್ನು ಬಿಡಿಸಿದರು.

ಆದರೆ, ಲಿಖಿತಾ ಅದಾಗಲೇ ಮೃತಪಟ್ಟಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂದಿನಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಸಪ್ತಾಹ 

ಚಿಗುರುಪಾದೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಸಪ್ತಾಹ   ಇಂದಿನಿಂದ   ಆರಂಭವಾಗಲಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ‘ಯಕ್ಷಚಿಗುರು-2022 – ತಾಳಮದ್ದಳೆ ಸಪ್ತಾಹ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಇಂದು ದಿನಾಂಕ 09.08.2022ನೇ ಮಂಗಳವಾರ ಸಂಜೆ ಘಂಟೆ 4.30ರಿಂದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಈ ಸಪ್ತಾಹ 09.08.2022ರಿಂದ ಮೊದಲುಗೊಂಡು 15.08.2022ರ ತನಕ ನಡೆಯಲಿದೆ. ಪ್ರತಿದಿನವೂ ವಿವಿಧ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕೊನೆಯ ದಿನ ಅಂದರೆ 15.08.2022ರಂದು ಸಮಾರೋಪ ಸಮಾರಂಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಸಂಸ್ಥೆಗೆ ‘ಯಕ್ಷಚಿಗುರು’ ಗೌರವಾರ್ಪಣೆ ನಡೆಯಲಿದೆ.  ವಿವರಗಳಿಗೆ ಚಿತ್ರ ನೋಡಿ. 

ಕಾಮನ್ವೆಲ್ತ್ ಗೇಮ್ಸ್ – ಪದಕ ಪಟ್ಟಿ, ಭಾರತಕ್ಕೆ ನಾಲ್ಕನೇ ಸ್ಥಾನ – Commonwealth Games 2022 Medal Tally Latest

ನಿನ್ನೆ ಭಾರತಕ್ಕೆ ಮತ್ತೆ 4 ಚಿನ್ನ ಸಹಿತ 6 ಪದಕಗಳು ಸಿಕ್ಕಿವೆ. 

ಪದಕಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.  

ಕಾಮನ್ವೆಲ್ತ್ ಗೇಮ್ಸ್ 2022 ರ  ಪದಕ ಪಟ್ಟಿವಿವರ ಇಲ್ಲಿದೆ.  

RankCountryGoldSilverBronzeTotal
1Australia675754178
2England576653176
3Canada26323492
4India22162361
5New Zealand20121749
6Scotland13112751
7Nigeria1291435
8Wales861428
9South Africa791127
10Malaysia78823
11Northern Ireland77418
12Jamaica66315
13Kenya651021
14Singapore44412
15Trinidad & Tobago3216
16Uganda3025
17Cyprus23611
18Pakistan2338
19Samoa1405
20Barbados1113
20Cameroon1113
20Zambia1113
23Grenada1102
23The Bahamas1102
25Bermuda1012

26British Virgin Is.1001
27Mauritius0325
28Ghana0235
29Fiji0224
30Mozambique0213
31Sri Lanka0134
32Tanzania0123

33Botswana0112
33Guernsey0112
35Dominica0101
35Papua New Guinea0101
35St Lucia0101
35The Gambia0101
39Namibia0044
40Malta0011
40Nauru0011
40Niue0011
40Vanuatu0011

‘ಲಿಗರ್’ ಪ್ರಚಾರದ ನಂತರ ಜಗತ್ಪ್ರಸಿದ್ಧ ಗುಜರಾತಿ ಥಾಲಿಯನ್ನುಆಸ್ವಾದಿಸಿದ ವಿಜಯ್ ದೇವರಕೊಂಡ, ಅನನ್ಯ ಪಾಂಡೆ

ಅಹಮದಾಬಾದಿನಲ್ಲಿ ಲಿಗರ್ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಗುಜರಾತಿ ಥಾಲಿಯನ್ನು ಸವಿಯುತ್ತಾರೆ

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ತಮ್ಮ ಚಿತ್ರದ ಲಿಗರ್‌ನ ಪ್ರಚಾರಕ್ಕಾಗಿ ಅಹಮದಾಬಾದ್‌ನಲ್ಲಿದ್ದರು ಮತ್ತು ಜೋಡಿಯು ಅದ್ದೂರಿ ಗುಜರಾತಿ ಥಾಲಿಯನ್ನು ಆನಂದಿಸುತ್ತಿರುವುದನ್ನು ನೋಡಲಾಯಿತು.

ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ತಮ್ಮ ಮುಂಬರುವ ಚಿತ್ರ ಲಿಗರ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಗುಜರಾತಿ ಭಕ್ಷ್ಯಗಳನ್ನು ಆನಂದಿಸಲು ಖಚಿತವಾದ ಪ್ರಚಾರಕ್ಕಾಗಿ ತಾರೆಯರು ಅಹ್ಮದಾಬಾದ್ ಗೆ ಆಗಮಿಸಿದರು.

ಪ್ರಚಾರದ ಸಮಯದಲ್ಲಿ ಇಬ್ಬರೂ ನಟರು ಅದ್ದೂರಿ ಗುಜರಾತಿ ಥಾಲಿಯನ್ನು ಆನಂದಿಸಿದರು. ಸಿನಿಮಾ ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ತಮ್ಮ ಊಟವನ್ನು ಆನಂದಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಪೊಲೀಸ್ ಸ್ಟೇಷನ್ ನಲ್ಲೇ ಹೆಡ್ ಕಾನ್ಸ್ಟೇಬಲ್ ಗೆ ಥಳಿಸಿದ ಜನರು – ವೀಡಿಯೊ ವೈರಲ್, ತೀವ್ರಗೊಂಡ ತನಿಖೆ, ಹಲವರನ್ನು ಕಸ್ಟಡಿಗೆ ಪಡೆದ ಪೊಲೀಸರು, ಆರೋಪಿ ವಕೀಲ ಸತೀಶ್ ಕುಮಾರ  ಕಸ್ಟಡಿಗೆ 

ದೆಹಲಿ ಶಹದಾರದ ಆನಂದ್ ವಿಹಾರ್ ಪೊಲೀಸ್ ಠಾಣೆಯೊಳಗೆ ಕೆಲವರು ಹೆಡ್ ಪೊಲೀಸ್ ಪೇದೆಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ.

ದೆಹಲಿಯ ಆನಂದ ವಿಹಾರ್ ಪೊಲೀಸ್ ಸ್ಟೇಷನ್ ನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಗುಂಪು/ಕೂಟದ ಭಾಗವಾಗಿದ್ದ ಇನ್ನೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಇತರ ಆರೋಪಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ಆರೋಪಿ ವಕೀಲ ಸತೀಶ್ ಕುಮಾರ್ ಅವರನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವೀಡಿಯೋ ಜುಲೈ 31ರದ್ದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಇದೀಗ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ತನ್ನ ಮಗಳೊಂದಿಗೆ ನೇಣು ಹಾಕಿ ಆತ್ಮಹತ್ಯೆಗೆ ಶರಣಾದ ದಂತವೈದ್ಯೆ 


ಬೆಂಗಳೂರಿನ ದಂತವೈದ್ಯೆಯೊಬ್ಬರು  ಮಗುವಿಗೆ ನೇಣು ಹಾಕಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಆತ್ಮಹತ್ಯೆ ಮಾಡಿಕೊಂಡ ದಂತ ವೈದ್ಯೆಯ ಹೆಸರು  ಸೈಮಾ ನಾರಾಯಣ್.  

ಆರಾಧನಾ ಹೆಸರಿನ  ತನ್ನ 10 ವರ್ಷದ ಮಗಳಿಗೆ ಇನ್ನೊಂದು ಕೋಣೆಯಲ್ಲಿ  ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಸೈಮಾ ತಾನು ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣವಿರಬಹುದೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಸೈಮಾ ಅವರ ಪತಿ ನಾರಾಯಣ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.  ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ವಿರಾಜಪೇಟೆ ಮೂಲದ ದಂತವೈದ್ಯೆ ಪತ್ನಿ ಸೈಮಾ ಮುತ್ತಪ್ಪ, ಕೋಲಾರ ಮೂಲದ ದಂತವೈದ್ಯ ನಾರಾಯಣ್ ಕಳೆದ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ದಂತವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ನಾರಾಯಣ್ ಮತ್ತು ಸೈಮಾ ಗಂಡ ಹೆಂಡತಿ ಇಬ್ಬರು ಸೇರಿ ಆಸ್ಪತ್ರೆಯನ್ನು ನಡೆಸುತ್ತಿದ್ದರು.

ಪತಿ ನಾರಾಯಣ್ ಮನೆಯಲ್ಲಿಲ್ಲದ ವೇಳೆಯಲ್ಲಿ  ವೇಳೆ ಸೈಮಾ ಮತ್ತು ಮಗಳು ಮನೆಯಲ್ಲಿನ ಪ್ರತ್ಯೇಕ ಕೋಣೆಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಇಬ್ಬರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಆಟಕೂಟಗಳಲ್ಲಿ ರಂಜಿಸುವ ಕಲಾಪ್ರತಿಭೆ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ

ಯಕ್ಷಗಾನವೆಂಬ ಗಂಡುಕಲೆಗೆ ಪ್ರೇಕ್ಷಕರನ್ನು ಪುರಾಣಕಾಲಕ್ಕೆ, ಪುರಾಣಲೋಕಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಮಾತುಗಾರಿಕೆ ಮತ್ತು ವೇಷಭೂಷಣಗಳಿಂದ ಯಕ್ಷಗಾನದ ಪಾತ್ರಧಾರಿ ಕಲಾಭಿಮಾನಿಗಳನ್ನು ಬೇರೆಯೇ ಲೋಕಕ್ಕೆ, ಬೇರೆಯೇ ಕಾಲಕ್ಕೆ ಕೊಂಡೊಯ್ಯಬಲ್ಲ. ಹೀಗಾಗಬೇಕಾದರೆ ಪಾತ್ರಧಾರಿಯು ಬಹಳಷ್ಟು ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಪ್ರಸಂಗ ನಡೆ, ಕಥೆಯ ಮಾಹಿತಿ, ಪಾತ್ರದ ಸ್ವಭಾವ, ಕವಿಯ ಆಶಯ ಇತ್ಯಾದಿಗಳನ್ನು ಆಳವಾಗಿ ಅಭ್ಯಾಸ ಮಾಡಿದರೆ ಮಾತ್ರ ಪಾತ್ರವನ್ನು ಧರಿಸಿದ ವ್ಯಕ್ತಿಯು ಸಭಿಕರನ್ನು ಪುರಾಣಲೋಕಕ್ಕೆ ಕೊಂಡೊಯ್ಯಬಲ್ಲ.

ಇಲ್ಲವಾದರೆ ಪಾತ್ರವೂ ಪ್ರಸಂಗವೂ ಪೇಲವವಾಗಿ ಪ್ರೇಕ್ಷಕರು ಲೌಕಿಕ ಲೋಕದಲ್ಲೇ ಉಳಿಯುವಂತಾಗುತ್ತದೆ. ಜತೆ ಪಾತ್ರದ ಸ್ವಭಾವವೂ ಕೆಡದಂತೆ ಅಭಿನಯಿಸುವುದೂ ಒಂದು ಕಲೆ. ಕಲಾವಿದರಿಗೆ ಅದು ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಹಿರಿಯ ತಲೆಮಾರಿನ ಅನೇಕ ಖ್ಯಾತ ಕಲಾವಿದರ ಕೊಡುಗೆಗಳು, ಸಂದೇಶಗಳು ನಮಗಿದೆ. ಆ ಸಂದೇಶಗಳನ್ನು ಅನುಸರಿಸುತ್ತಾ ಕಿರಿಯ ಕಲಾವಿದರು ಬೆಳೆಯುತ್ತಾ ಸಾಗಿದರೆ ಯಕ್ಷಗಾನ ಕಲೆಯು ಬಡವಾಗದು. ಹೀಗೆ ಆಳವಾಗಿ ಅಧ್ಯಯನವನ್ನು ಮಾಡುತ್ತಾ ತಾಳಮದ್ದಳೆ ಅರ್ಥಧಾರಿಯಾಗಿ ಬೆಳೆದವರು ಅನೇಕರು. ಇನ್ನು ಹಲವಾರು ಮಂದಿಗಳು ವೇಷಧಾರಿಯಾಗಿ ಹೆಸರನ್ನು ಗಳಿಸಿದರು.

ಆಟ ಕೂಟಗಳೆಂಬ ಎರಡು ವಿಭಾಗಗಳಲ್ಲೂ ಈ ಕಾಲದಲ್ಲಿ ಅನೇಕರು ಬೆಳೆಯುತ್ತಾ ಕಾಣಿಸಿಕೊಳ್ಳುತ್ತಿದ್ದಾರೆ. ಅಂತವರ ಸ್ಥಾನದಲ್ಲಿ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಅವರನ್ನು ನಾವು ಗುರುತಿಸಬಹುದು. ಇವರು ಕಟೀಲು ಮೇಳದ ಕಲಾವಿದ. ಕಳೆದ ಹದಿನಾರು ವರ್ಷಗಳಿಂದ ವೃತ್ತಿಕಲಾವಿದನಾಗಿ ವ್ಯವಸಾಯವನ್ನು ಮಾಡುತ್ತಿದ್ದಾರೆ. 2011ರಿಂದ ತೊಡಗಿ ಕಳೆದ 12 ವರ್ಷಗಳಿಂದ ತಾಳಮದ್ದಳೆ ಅರ್ಥಧಾರಿಯಾಗಿಯೂ ಗುರುತಿಸಿಕೊಂಡಿದ್ದಾರೆ. 

ಶ್ರೀ ಗಣೇಶ್ ಶೆಟ್ಟಿ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಕನ್ನಡಿಕಟ್ಟೆ. ಶ್ರೀ ಓಬಯ್ಯ ಶೆಟ್ಟಿ ಮತ್ತು ಶ್ರೀಮತಿ ಲಲಿತಾ ದಂಪತಿಗಳ ಪುತ್ರನಾಗಿ ಈ ಲೋಕದ ಬೆಳಕನ್ನು ಕಂಡವರು. ಶ್ರೀ ಓಬಯ್ಯ ಶೆಟ್ಟಿ, ಶ್ರೀಮತಿ ಲಲಿತಾ ದಂಪತಿಗಳಿಗೆ ಮೂರು ಮಂದಿ ಮಕ್ಕಳು. (ಇಬ್ಬರು ಪುತ್ರರು, ಓರ್ವಳು ಪುತ್ರಿ) ಗಣೇಶ್ ಶೆಟ್ಟಿ ಅವರ ತಮ್ಮ ಶ್ರೀ ಮಹೇಶ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿ. ತಂಗಿ ವೈಶಾಲಿ ವಿವಾಹಿತೆ. ಇವರ ಪತಿ ಶ್ರೀ ಪ್ರಮೋದ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿ.

ಶ್ರೀ ಗಣೇಶ್ ಶೆಟ್ಟಿ ಅವರು ಓದಿದ್ದು ಪಿಯುಸಿ ವರೆಗೆ. 7ನೇ ತರಗತಿ ವರೆಗೆ ಪಡಂಗಡಿ ಶಾಲೆಯಲ್ಲಿ. ಮಂಗಳೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಇದ್ದುಕೊಂಡು ಪ್ರೌಢ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಪಿಯುಸಿ ಶಿಕ್ಷಣ ವಗ್ಗ ಸರಕಾರೀ ಕಾಲೇಜಿನಲ್ಲಿ. ಗಣೇಶ ಶೆಟ್ಟಿ ಅವರ ತಂದೆ ಶ್ರೀ ಓಬಯ್ಯ ಶೆಟ್ಟಿ ಕೃಷಿಕರು. ಗಣೇಶ್ ಅವರಿಗೆ ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲಾಸಕ್ತಿ ಇತ್ತು. ಆಟಕೂಟಗಳಿಗೆ ತೆರಳಿ ಆಸ್ವಾದಿಸುತ್ತಿದ್ದರು. ಖ್ಯಾತ ಕಲಾವಿದರಾದ ಪೆರುವಾಯಿ ಶ್ರೀ ನಾರಾಯಣ ಶೆಟ್ಟಿ ಅವರು ಇವರ ದೂರದ ಸಂಬಂಧಿ. ಪೆರ್ಮುದೆ ಶ್ರೀ ಜಯಪ್ರಕಾಶ ಶೆಟ್ಟಿ ಅವರು ಅಣ್ಣ. (ದೊಡ್ಡಮ್ಮನ ಮಗ)

ಅಜ್ಜ ಶ್ರೀ ಬಾಯಾರು ಜತ್ತಪ್ಪ ಶೆಟ್ಟರು ಹವ್ಯಾಸಿ ಭಾಗವತ (ತಾಯಿಯ ತಂದೆ) ಇದು ಗಣೇಶ್ ಅವರಿಗೆ ಇದ್ದ ಯಕ್ಷಗಾನದ ಹಿನ್ನೆಲೆ. ಇದರಿಂದ ಅನುಕೂಲವೂ ಆಗಿತ್ತು. ಪಿಯುಸಿ ಶಿಕ್ಷಣದ ನಂತರ ಎರಡು ವರ್ಷಗಳ ಕಾಲ ಮಂಗಳೂರಿನಲ್ಲಿ ಖಾಸಗಿ ಉದ್ಯೋಗ. ಈ ಸಮಯದಲ್ಲೂ ಆಟ ತಾಳಮದ್ದಲೆಗಳ ಪ್ರೇಕ್ಷಕರಾಗಿದ್ದರು. ಕಲಾವಿದನಾಗಬೇಕೆಂಬ ಆಸೆಯಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಯುವ ಮನ ಮಾಡಿದರು. 2006ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ತರಬೇತಿ ಕೇಂದ್ರಕ್ಕೆ ತೆರಳಿದ ಶ್ರೀ ಗಣೇಶ್ ಶೆಟ್ಟಿ ಅವರು ಕೇಂದ್ರದ ಗುರು ದಿವಾಣ ಶ್ರೀ ಶಿವಶಂಕರ ಭಟ್ಟರಿಂದ ನಾಟ್ಯವನ್ನು ಕಲಿತರು.

ಲಲಿತಕಲಾ ಕೇಂದ್ರದಲ್ಲಿ ಸತೀಶ್ ಭಟ್, ಪಳ್ಳಿ ವಿಶ್ವನ್ನಾಥ ಶೆಣೈ, ಮಹೇಶ್ ಎಡನೀರು. ರಾಜೇಶ್ ಪುತ್ತಿಗೆ, ಯಶೋಧರ ಪಂಜ, ನಾಗಚಂದ್ರ ತೀರ್ಥಹಳ್ಳಿ ಇವರ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ಮೊದಲ ಪ್ರದರ್ಶನ ಮೀನಾಕ್ಷಿ ಕಲ್ಯಾಣ ಪ್ರಸಂಗದಲ್ಲಿ ವೀರಭದ್ರನಾಗಿ ರಂಗಪ್ರವೇಶ. ಬಳಿಕ ಕರ್ಣಾರ್ಜುನ ಪ್ರಸಂಗದಲ್ಲಿ ಶಲ್ಯನಾಗಿ ರಂಗವೇರಿದ್ದರು. 2006 – 2007ರಲ್ಲಿ ಇವರು ವೃತ್ತಿ ಕಲಾವಿದನಾಗಿ ತಿರುಗಾಟ ಆರಂಭಿಸಿದ್ದರು. ಮೊದಲ ತಿರುಗಾಟ ಕಟೀಲು ಮೇಳದಲ್ಲಿ. ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜರು ಪ್ರಧಾನ ಭಾಗವತರಾಗಿದ್ದ ಒಂದನೇ ಮೇಳದಲ್ಲಿ. ಮುಂದಿನ ವರ್ಷ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ. ಬಳಿಕ ಕಟೀಲು 3ನೇ ಮೇಳದಲ್ಲಿ ಹದಿಮೂರು ವರ್ಷಗಳ ಕಲಾ ಸೇವೆ.

ಪ್ರಥಮ ವರ್ಷದಲ್ಲಿ ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ದೊರೆತ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿದ್ದರು. 1ನೇ ಮೇಳದಲ್ಲಿರುವಾಗ ಪೂಂಜರು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು, ಸಂಪಾಜೆ ಜಯಾನಂದ ಮೊದಲಾದವರ ಮಾರ್ಗದರ್ಶನ ಸಿಕ್ಕಿತ್ತು. ಮೂರನೇ ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳು, ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಬೆಳ್ಳಾರೆ ಮಂಜುನಾಥ ಭಟ್, ಪುಂಡರೀಕಾಕ್ಷ ಉಪಾಧ್ಯಾಯ, ಮೊದಲಾದವರ ಮಾರ್ಗದರ್ಶನವೂ ದೊರೆತಿತ್ತು. ಅಲ್ಲದೆ ಭಾಗವತರುಗಳಾದ ಗೋಪಾಲಕೃಷ್ಣ ಮಯ್ಯ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಪ್ರಫುಲ್ಲಚಂದ್ರ, ಬೋಂದೆಲ್ ಸತೀಶ್ ಶೆಟ್ಟಿ, ಕಲಾವಿದರುಗಳಾದ ಕೈರಂಗಳ ಕೃಷ್ಣ ಮೂಲ್ಯ, ರೆಂಜಾಳ ರಾಮಕೃಷ್ಣ ರಾವ್,  ದಾಸನಡ್ಕ ರಾಮ ಕುಲಾಲ್, ದಿನಖರ ಗೋಖಲೆ, ತೊಡಿಕಾನ ವಿಶ್ವನಾಥ ಗೌಡ,ಅಮ್ಮುಂಜೆ ಮೋಹನ, ಚಂದ್ರಮಂಡಲ ಗಣೇಶ, ಸುನಿಲ್ ಪದ್ಮುಂಜ ಮೊದಲಾದವರ ಒಡನಾಟವು ದೊರೆತಿತ್ತು. 

ಶ್ರೀ ಗಣೇಶ್ ಶೆಟ್ಟಿ ಅವರು ಪ್ರಥಮ ತಿರುಗಾಟದಲ್ಲೇ ಕಿರೀಟ ವೇಷವನ್ನು ಮಾಡಿ ಅನುಭವವನ್ನು ಗಳಿಸಿದ್ದರು. (1ನೇ ಮೇಳದಲ್ಲಿ). ಕಿರೀಟ ವೇಷಧಾರಿಯಾಗಿಯೇ ಮೂರನೇ ಮೇಳವನ್ನು ಸೇರಿಕೊಂಡಿದ್ದರು.(ಮೂರನೆಯ ತಿರುಗಾಟ) ಗೇರುಕಟ್ಟೆ ಗಂಗಯ್ಯ ಶೆಟ್ಟರ ವೇಷಗಳನ್ನು ನೋಡಿ ಕಲಿಯುವುದಕ್ಕೆ ಅವಕಾಶವಾಗಿತ್ತು. ಇವರ ಪ್ರತಿಭೆಯನ್ನು ಗುರುತಿಸಿದ ಗೇರುಕಟ್ಟೆ ಗಂಗಯ್ಯ ಶೆಟ್ರು ಅವಕಾಶಗಳನ್ನು ಇತ್ತು ಪ್ರೋತ್ಸಾಹಿಸಿದ್ದರು. ಅವರು ನಿರ್ವಹಿಸುವ ಪಾತ್ರಗಳನ್ನು ಗಣೇಶ್ ಅವರಲ್ಲಿ ಮಾಡಿಸಿ ಕಲಿಕೆಗೆ ಅವಕಾಶವನ್ನು ಇತ್ತಿದ್ದರು. ಪ್ರಸಂಗನಡೆಯ ವಿಚಾರದಲ್ಲಿ ಪುಂಡಿಕಾಯಿ ಗೋಪಾಲಕೃಷ್ಣ ಭಟ್ಟರ ನಿರ್ದೇಶನವು ಸಿಕ್ಕಿತ್ತು.

ಮಾತುಗಾರಿಕೆಯ ವಿಚಾರದಲ್ಲಿ ನನಗೆ ಅನೇಕರು ಮಾರ್ಗದರ್ಶನವನ್ನು ನೀಡಿದ್ದಾರೆ. ಸುಣ್ಣಂಬಳ ವಿಶ್ವೇಶ್ವರ ಭಟ್ಟರ ಮತ್ತು ಪೆರ್ಮುದೆ ಜಯಪ್ರಕಾಶ ಶೆಟ್ಟರ ಪ್ರೋತ್ಸಾಹವೂ ಇತ್ತು. ಹಿರಿಯರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಶ್ರೀ ಶಂಭು ಶರ್ಮ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಶ್ರೀ ಜಬ್ಬಾರ್ ಸಮೋ, ಶ್ರೀ ಗಣೇಶ್ ಕೊಲೆಕಾಡಿ, ಶ್ರೀ ವಿ.ಬಿ. ಹಿರಣ್ಯ ಶ್ರೀ ವಾಸುದೇವ ರಂಗಾ ಭಟ್, ಶ್ರೀ ವಿಷ್ಣು ಶರ್ಮ ಅವರುಗಳಿಂದ ಕೇಳಿ ಕಲಿಯುತ್ತಾ ನಾನು ಬೆಳೆದವನು ಎಂಬುದು ಶ್ರೀ ಗಣೇಶ್ ಶೆಟ್ಟರ ಮನದಾಳದ ಮಾತು. ನಾಟ್ಯದ ವಿಚಾರದಲ್ಲಿ ಶ್ರೀ ಬಾಯಾರು ರಮೇಶ ಶೆಟ್ರ ನಿರ್ದೇಶನವಿದೆ.

ಶ್ರೀ ಸುಧಾಕರ ಜೈನ್ ಹೊಸಬೆಟ್ಟುಗುತ್ತು ಅವರ ಸಲಹೆಯಂತೆ ವಿದುಷಿ ಮಂಜುಳಾ ಸುಬ್ರಹ್ಮಣ್ಯಂ ಅವರಿಂದ ನಾಟ್ಯ ಮತ್ತು ನಿಲುವಿನ ಬಗೆಗೆ ತರಬೇತಿಯನ್ನು ಪಡೆದಿರುತ್ತಾರೆ. ಮೇಳದ ತಿರುಗಾಟದಲ್ಲಿರುವಾಗಲೇ ಊರ ಪರವೂರಿನ ವಾರದ ಕೂಟಗಳಲ್ಲಿ ಅರ್ಥ ಹೇಳುವ ಹವ್ಯಾಸವನ್ನೂ ಬೆಳೆಸಿಕೊಂಡಿದ್ದರು. ದೊಡ್ಡ ಕೂಟದಲ್ಲಿ ಮೊದಲು ಭಾಗವಹಿಸಿದ್ದು 2011ನೇ ಇಸವಿ. ಸಚ್ಚರಿಪೇಟೆಯಲ್ಲಿ. ಭಾಗವತ ಕನ್ನಡಿಕಟ್ಟೆ  ರವಿಚಂದ್ರರ ಸಂಯೋಜನೆಯಲ್ಲಿ ನಡೆದ ತಾಳಮದ್ದಳೆ. ಕರ್ಣಾರ್ಜುನ ಪ್ರಸಂಗದಲ್ಲಿ ಶ್ರೀಕೃಷ್ಣನಾಗಿ ಅರ್ಥ ಹೇಳಿದ್ದರು. ವಗೆನಾಡು ದೇವಸ್ಥಾನದಲ್ಲಿ ಪಟ್ಲಗುತ್ತು ಮಹಾಬಲ ಶೆಟ್ರು ಪಟ್ಲಗುತ್ತು ಸತೀಶ ಶೆಟ್ರ ನೇತೃತ್ವದ ಸಿಂಹ ಮಾಸದಲ್ಲಿ ನಡೆಯುವ ತಾಳಮದ್ದಳೆಗಳಲ್ಲಿ ನಿರಂತರ ಭಾಗವಹಿಸುತ್ತಿದ್ದುದು ಅರ್ಥಧಾರಿಯಾಗಿ ಬೆಳೆಯಲು ಕಾರಣವಾಯಿತು. 

ಎಂಟನೆಯ ತಿರುಗಾಟದಲ್ಲಿ ಶ್ರೀ ಗಣೇಶ್ ಶೆಟ್ಟಿ ಅವರಿಗೆ ಪೀಠಿಕೆವೇಷಧಾರಿಯಾಗಿ ಭಡ್ತಿ ಸಿಕ್ಕಿತ್ತು. ಹನ್ನೆರಡನೇ ತಿರುಗಾಟದಲ್ಲಿ ಎದುರು ವೇಷಧಾರಿಯಾಗಿ ಕಾಣಿಸಿಕೊಂಡು ಕಲಾಕ್ಷೇತ್ರದಲ್ಲಿ ಅಧ್ಯಯನಶೀಲರಾಗಿ ಕ್ಷಿಪ್ರ ಬೆಳವಣಿಗೆಯನ್ನು ಕಂಡವರು. ಗೇರುಕಟ್ಟೆ ಗಂಗಯ್ಯ ಶೆಟ್ಟಿ, ಶಿವರಾಮ ಜೋಗಿ, ಅರುವ ಕೊರಗಪ್ಪ ಶೆಟ್ಟಿ ಮತ್ತು ಪೆರುವಾಯಿ ನಾರಾಯಣ ಶೆಟ್ಟರ ಅಭಿಮಾನಿಯಾಗಿ ಅವರ ವೇಷಗಳನ್ನು ಶ್ರೀ ಗಣೇಶ್ ಅವರು ಮೆಚ್ಚಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ, ಶ್ರೀ ಪದ್ಮನಾಭ ಕಟೀಲು, ಶ್ರೀ ಪ್ರಕಾಶ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಮುಂಬೈಯ ಕಾರ್ಯಕ್ರಮಗಳಲ್ಲೂ ಇವರು ಅನೇಕ ವರ್ಷಗಳಿಂದ ಭಾಗವಹಿಸುತ್ತಿದ್ದಾರೆ.

ಕೂಟಗಳಲ್ಲಿ ಭಾಗವಹಿಸುತ್ತಾ ಡಾ. ಪ್ರಭಾಕರ ಜೋಷಿ, ಮೂಡಂಬೈಲು, ಶಂಭು ಶರ್ಮ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್, ವಾಸುದೇವ ಸಾಮಗ, ಸಿದ್ದಕಟ್ಟೆದ್ವಯರೊಂದಿಗೆ ಅರ್ಥ ಹೇಳಲು ಅವಕಾಶ ಸಿಕ್ಕಿದ್ದು ಭಾಗ್ಯ ಎಂಬುದು ಗಣೇಶ್ ಅವರ ಅನಿಸಿಕೆ. ಎದುರು ವೇಷಗಳ ಜತೆಗೆ ಇವರು ಸಾತ್ವಿಕ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಬಲ್ಲರು. ರುಕ್ಮಾಂಗದ, ಅಂಬರೀಷ, ವಿಶ್ವಾಮಿತ್ರ, ಜಾಬಾಲಿ, ವಾಲ್ಮೀಕಿ (ಮಾನಿಷಾದ ಪ್ರಸಂಗ) ದಕ್ಷಯಜ್ಞ ಪ್ರಸಂಗದ ಈಶ್ವರ ಮೊದಲಾದ ಪಾತ್ರಗಳನ್ನೂ ನಿರ್ವಹಿಸುತ್ತಾರೆ. ಎದುರು ವೇಷಧಾರಿಯಾದರೂ ಸಾತ್ವಿಕ ಪಾತ್ರಗಳ ಬಗೆಗೆ ಒಲವನ್ನು ಹೊಂದಿದ ಕಲಾವಿದರಿವರು. ಋತುಪರ್ಣ, ಅತಿಕಾಯ, ವಾಲಿ, ಜಾಂಬವ, ಅರುಣಾಸುರ, ತಾಮ್ರಧ್ವಜ, ಜನಮೇಜಯ, ರಾವಣ ಮೊದಲಾದುವು ಗಣೇಶ್ ಅವರಿಗೆ ಪ್ರಿಯವಾದ ಪಾತ್ರಗಳು.

ಸವಾಲೊಡ್ಡುವ ಪಾತ್ರಗಳನ್ನು ನಿರ್ವಹಿಸಿ ಸಾಹಸವನ್ನು ಕಲಾವಿದರು ತೋರಬೇಕೆಂಬುದು ಇವರ ಅಭಿಪ್ರಾಯ. ಈ ಬಗೆಗೆ ಗಣೇಶ್ ಅವರು ಪ್ರಯತ್ನಿಸುತ್ತಾರೆ ಮತ್ತು ಪ್ರಯತ್ನಿಸಿದ್ದಾರೆ ಎಂಬುದು ತಿರುಗಾಟದಲ್ಲಿ ನಾನು ಕಂಡ ಸತ್ಯ. ನಾಟಕೀಯ ಪ್ರಜ್ಞೆಯನ್ನು ಹೊಂದಿ ಒಳ್ಳೆಯ ರೀತಿಯಲ್ಲಿ ಸಂಭಾಷಿಸುತ್ತಾರೆ ಎಂಬುದನ್ನು ಅವರ ಸಹಕಲಾವಿದನಾಗಿ ನಾನು ತಿಳಿದುಕೊಂಡಿದ್ದೇನೆ. ಸದಾ ಓದುತ್ತಿರಬೇಕು. ಸಾಕಷ್ಟು ಸಿದ್ಧನಾಗಿಯೇ ಪಾತ್ರಧಾರಿಯು ರಂಗವೇರಬೇಕೆಂಬುದು ಕಿರಿಯ ಅಭ್ಯಾಸಿಗಳಿಗೆ ಶ್ರೀ ಗಣೇಶ್ ಶೆಟ್ಟಿ ಅವರು ನೀಡುವ ಹಿತವಚನ. ಆದರೆ ಈಗ ಮೇಳಗಳಲ್ಲಿ ಅಭ್ಯಾಸಿಗಳು ಸಾಕಷ್ಟು ಅಧ್ಯಯನ ಮಾಡುತ್ತಿಲ್ಲ ಎಂಬ ನೋವು ಇವರಿಗಿದೆ. ಮುಂಬೈ ಅಲ್ಲದೆ 2012ರಲ್ಲಿ ಸಿಂಗಾಪುರದಲ್ಲಿ ನಡೆದ ಕೆಲವು ಪ್ರದರ್ಶನಗಳಲ್ಲೂ ಇವರು ಭಾಗವಹಿಸಿರುತ್ತಾರೆ. 

ಯುವ ಕಲಾವಿದ ಆಟ ಕೂಟಗಳ ಸರದಾರ ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಅವಕಾಶಗಳು ಸದಾ ಸಿಗುತ್ತಿರಲಿ. ಕಲಾಮಾತೆಯ ಅನುಗ್ರಹವು ಇವರಿಗೆ ಸದಾ ದೊರೆಯಲಿ. ಸಕಲ ಸೌಭಾಗ್ಯಗಳನ್ನೂ ಶ್ರೀ ದೇವರು ಕರುಣಿಸಲಿ ಎಂಬ ಹಾರೈಕೆಗಳು. 

 ಶ್ರೀ ಗಣೇಶ್ ಶೆಟ್ಟಿ ಕನ್ನಡಿಕಟ್ಟೆ 

ಮೊಬೈಲ್: 9611633980

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಶಾಲಾ ವಾಹನ ಹೊಳೆಗೆ ಬಿದ್ದು ಅಫಘಾತ – ಇಬ್ಬರು ವಿದ್ಯಾರ್ಥಿಗಳಿಗೆ  ಗಾಯ 

ಶಾಲಾ ವಾಹನ ಹೊಳೆಗೆ ಬಿದ್ದು ಅಫಘಾತವಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. 

ನಾಗ್ಪುರ್, ಮಹಾರಾಷ್ಟ್ರ | ನಾಗ್ಪುರದ ಬೆಸಾ ಘೋಗ್ಲಿ ರಸ್ತೆಯಲ್ಲಿ ಶಾಲಾ ವ್ಯಾನ್ ಅಪಘಾತಕ್ಕೀಡಾಗಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ವ್ಯಾನ್‌ನಲ್ಲಿ 16 ಮಕ್ಕಳಿದ್ದರು. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಚಾಲಕನನ್ನು ಬಂಧಿಸಲಾಗಿದೆ.

ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ನಾಳೆಯಿಂದ ಚಿಗುರುಪಾದೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಸಪ್ತಾಹ 

ಚಿಗುರುಪಾದೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತಾಳಮದ್ದಳೆ ಸಪ್ತಾಹ  ನಾಳೆಯಿಂದ ಆರಂಭವಾಗಲಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ರಾಮಾಯಣ ಮಾಸಾಚರಣೆಯ ಪ್ರಯುಕ್ತ ‘ಯಕ್ಷಚಿಗುರು-2022 – ತಾಳಮದ್ದಳೆ ಸಪ್ತಾಹ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ನಾಳೆ ದಿನಾಂಕ 09.08.2022ನೇ ಮಂಗಳವಾರ ಸಂಜೆ ಘಂಟೆ 4.30ರಿಂದ ಉದ್ಘಾಟನಾ ಸಮಾರಂಭ ನೆರವೇರಲಿದೆ. ಈ ಸಪ್ತಾಹ 09.08.2022ರಿಂದ ಮೊದಲುಗೊಂಡು 15.08.2022ರ ತನಕ ನಡೆಯಲಿದೆ. ಪ್ರತಿದಿನವೂ ವಿವಿಧ ಪ್ರಸಂಗಗಳ ತಾಳಮದ್ದಳೆ ಕೂಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕೊನೆಯ ದಿನ ಅಂದರೆ 15.08.2022ರಂದು ಸಮಾರೋಪ ಸಮಾರಂಭದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ ಸಂಸ್ಥೆಗೆ ‘ಯಕ್ಷಚಿಗುರು’ ಗೌರವಾರ್ಪಣೆ ನಡೆಯಲಿದೆ.  ವಿವರಗಳಿಗೆ ಚಿತ್ರ ನೋಡಿ.