Monday, August 31, 2026
Home Blog Page 213

ಯಕ್ಷಗಾನ ಕಲಾವಿದ ಕೊಡೆತ್ತೂರು ಶಂಭುಕುಮಾರ್ ನಿಧನಕ್ಕೆ  ಯಕ್ಷಗಾನ ಕಲಾರಂಗ ತೀವ್ರ ಸಂತಾಪ

ಉಡುಪಿ :ಕಟೀಲು ಯಕ್ಷಗಾನ ಮೇಳದ ಕಲಾವಿದ ಕೊಡೆತ್ತೂರು ಶಂಭುಕುಮಾರ್ (46 ವರ್ಷ) ಇಂದು (18-08-2022) ಉಲ್ಲಂಜೆಯ ಸ್ವಗೃಹದಲ್ಲಿ ನಿಧನರಾದರು.

ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಮುಂಡ್ಕೂರು, ತಲಕಳ, ಮಂಗಳಾದೇವಿ, ಎಡನೀರು, ಪುತ್ತೂರು ಹಾಗೂ ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದು, ಕಳೆದ ಏಳು ವರುಷಗಳಿಂದ ಕಟೀಲು ಮೇಳದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಧುಕೈಟಭ, ರಕ್ತಬೀಜ, ಅರುಣಾಸುರ, ದೇವೇಂದ್ರ, ಅರ್ಜುನ, ಭೀಮ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದ ಅವರು, ಕಿನ್ನಿಗೋಳಿಯ ಯಕ್ಷಕೌಸ್ತುಭ ಸಂಸ್ಥೆಯಲ್ಲಿ ಯಕ್ಷಗಾನ ನಾಟ್ಯ ಕಲಿಸುತ್ತಿದ್ದರು.

ಹೊಯಿಗೆಗುಡ್ಡೆ ದೇವಸ್ಥಾನದ ಹೆಸರಿನಲ್ಲಿ ಮೂರು ಚಿಕ್ಕಮೇಳಗಳನ್ನೂ ಮಾಡಿದ್ದರು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್‌ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಪತಿ, ಪತ್ನಿ,ಮಗುವಿನ ಶವ ಪತ್ತೆ  – ಮಾರಕ ರೋಗ ಇದೆ ಎಂಬ ಸಂಶಯದಿಂದ ಇಡೀ ಕುಟುಂಬವೇ ಆತ್ಮಹತ್ಯೆ

ಮಾರಕ ರೋಗ ಇದೆ ಎಂಬ ಸಂಶಯದಿಂದ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಬಂಧಿಕರ ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಿಕರು ಬೇರೆ ಕೀ ಬಳಸಿ ಬಾಗಿಲು ತೆರೆದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 

ಬೆಂಗಳೂರಿನ ಕೋಣನಕುಂಟೆಯ ನಿವಾಸದಲ್ಲಿ ಮೂವರ ಕುಟುಂಬ ಶವವಾಗಿ ಪತ್ತೆಯಾಗಿದೆ. ಮೃತರನ್ನು 44 ವರ್ಷದ ಮಹೇಶ್ ಗೌಡ, ಅವರ ಪತ್ನಿ ಜ್ಯೋತಿ ಮತ್ತು ಅವರ ಮಗ 9 ವರ್ಷದ ನಂದೀಶ್ ಎಂದು ಗುರುತಿಸಲಾಗಿದೆ.

ಮಹೇಶನ ಶವ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಾಸಿಗೆಯ ಮೇಲೆ ಪತ್ನಿ ಮತ್ತು ಮಗನ ಶವ ಪತ್ತೆಯಾಗಿದೆ. ಅಧಿಕಾರಿಗಳ ಪ್ರಕಾರ, ಮಹೇಶ್ ಅವರು ಕ್ಯಾನ್ಸರ್ ಎಂದು ತಿಳಿದ ನಂತರ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ಅವರ ಸಾವಿನ ನಂತರ ಕುಟುಂಬಕ್ಕೆ ಏನಾಗಬಹುದು ಎಂಬ ಭಯದಲ್ಲಿ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಕೋಣನಕುಂಟೆ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಕೊಲೆಯ ಕಾರಣದ ಬಗ್ಗೆ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದಾರೆ. ಮಹೇಶ್ ಅವರ ಸಂಬಂಧಿಕರು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು ಮತ್ತು ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದಾಗ ಅವರು ಅಕ್ಕಪಕ್ಕದ ಕಾಲೋನಿಯಲ್ಲಿ ನೆಲೆಸಿರುವ ಅವರ ಸಹೋದರನಿಗೆ ತಿಳಿಸಿದ್ದಾರೆ.

ಬಿಡಿ ಕೀ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಮಹೇಶ್ ಮತ್ತು ಕುಟುಂಬದವರು ಮೃತಪಟ್ಟಿರುವುದು ಕಂಡು ಬಂದಿದೆ. ಮಹೇಶ್ ಅವರು ಬಿಬಿಎಂಪಿ ಗುತ್ತಿಗೆದಾರರೊಬ್ಬರ ದಿನಗೂಲಿ ಕೆಲಸ ಮಾಡುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಹೇಳಿಕೆ ನೀಡಬೇಕಿದೆ.

ಹರಾರೆ ಏಕದಿನ ಕ್ರಿಕೆಟ್ ಪಂದ್ಯ: ಜಿಂಬಾಬ್ವೆಯನ್ನು 10 ವಿಕೆಟ್ ಗಳಿಂದ ಸೋಲಿಸಿದ ಭಾರತ – ಸ್ಕೋರ್ ಪಟ್ಟಿ

ಗುರುವಾರ ಹರಾರೆಯಲ್ಲಿ ನಡೆದ ಆರಂಭಿಕ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತವು ಜಿಂಬಾಬ್ವೆಯನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

ವೇಗದ ಬೌಲರ್ ದೀಪಕ್ ಚಹಾರ್ ಕಠೋರವಾದ ಸ್ಪೆಲ್‌ನೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರಭಾವಶಾಲಿ ಪುನರಾಗಮನವನ್ನು ಮಾಡಿದರು.

ಭಾರತೀಯ ಆರಂಭಿಕ ಆಟಗಾರರು ಅಜೇಯ ಆಟದೊಂದಿಗೆ ವಿಕೆಟ್ ನಷ್ಟವಿಲ್ಲದೆ ಜಯವನ್ನು ಸಂಪಾದಿಸಿದರು.

ಜಿಂಬಾಬ್ವೆ 189-10 (40.3)

ಮುಗ್ಧ ಕೈಯಾ ಸಿ ಸ್ಯಾಮ್ಸನ್ ಬಿ ಚಾಹರ್ 4

ತಡಿವಾನಾಶೆ ಮರುಮಣಿ ಸಿ ಸ್ಯಾಮ್ಸನ್ ಬಿ ಚಾಹರ್ 8

ವೆಸ್ಲಿ ಮಾಧೆವೆರೆ ಎಲ್ಬಿಡಬ್ಲ್ಯೂ ಬಿ ಚಹರ್ 5

ಸೀನ್ ವಿಲಿಯಮ್ಸ್ ಸಿ ಧವನ್ ಬಿ ಸಿರಾಜ್ 1

ಸಿಕಂದರ್ ರಜಾ ಸಿ ಧವನ್ ಬಿ ಕೃಷ್ಣ 12

*ರೆಗಿಸ್ ಚಕಬ್ವಾ ಬಿ ಪಟೇಲ್ 35

ರಿಯಾನ್ ಬರ್ಲ್ ಸಿ ಗಿಲ್ ಬಿ ಕೃಷ್ಣ

11 ಲ್ಯೂಕ್ ಜೊಂಗ್ವೆ lbw b ಪಟೇಲ್ 13

ಬ್ರಾಡ್ಲಿ ಇವಾನ್ಸ್ ಔಟಾಗದೆ 33

ರಿಚರ್ಡ್ ನಾಗರವ ಬಿ ಕೃಷ್ಣ 34

ವಿಕ್ಟರ್ ನ್ಯುಚಿ ಸಿ ಗಿಲ್ ಬಿ ಪಟೇಲ್ 8

ಭಾರತ 192-0 (30.5)

ಶಿಖರ್ ಧವನ್ ಔಟಾಗದೆ 81

ಶುಭಮನ್ ಗಿಲ್ ಔಟಾಗದೆ 82

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಎಂಬಿಎ ವಿಭಾಗದ ವಿದ್ಯಾರ್ಥಿಗಳ ಪ್ರಬಂಧಕ್ಕೆ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ

ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ “ಕೋವಿಡ್-19ರ ಕಾರಣದಿಂದ ಕಾರ್ಯ ಚಟುವಟಿಕೆಗಳ ಮಾದರಿಯಲ್ಲಿ ಬದಲಾವಣೆ-ದಕ್ಷಿಣ ಕನ್ನಡದಲ್ಲಿ ಒಂದು ಪ್ರಾಯೋಗಿಕ ಅಧ್ಯಯನ” ಎನ್ನುವ ಯೋಜನಾ ಪ್ರಬಂಧಕ್ಕೆ ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿ ದೊರೆತಿದೆ.


ಆಗಸ್ಟ್ 12 ಮತ್ತು 13 ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಹಾಗೂ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ನಡೆದ 45ನೇ ಸರಣಿಯ ಕೆಎಸ್‌ಸಿಎಸ್‌ಟಿ ಸ್ಟೂಡೆಂಟ್ ಪ್ರಾಜೆಕ್ಟ್ ಪ್ರೊಗ್ರಾಂನ ಸ್ನಾತಕೋತ್ತರ ಎಂಬಿಎ ವಿಭಾಗದಲ್ಲಿ ವಿದ್ಯಾರ್ಥಿಗಳು ವರ್ಷದ ಅತ್ಯುತ್ತಮ ಪ್ರಾಜೆಕ್ಟ್ ಪ್ರಶಸ್ತಿಯೊಂದಿಗೆ ನಗದು ಪುರಸ್ಕಾರವನ್ನು ಪಡೆದುಕೊಂಡಿದ್ದಾರೆೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕರಿಸಿದ್ದಪ್ಪ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.


ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಜೀವಿತಾ.ಬಿ.ವಿ ಹಾಗೂ ಪ್ರೊ.ರೇಶ್ಮಾ ಪೈ.ಎ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅಂಕಿತ, ಶ್ವೇತಾ.ಕೆ, ಮಂಜುನಾಥ್.ಎಚ್.ಎಮ್ ಮತ್ತು ಕೃತನ್.ಬಿ.ಕೆ ಈ ಅಧ್ಯಯನವನ್ನು ಮಾಡಿ ಯೋಜನಾ ವರದಿಯನ್ನು ಮಂಡಿಸಿದ್ದರು ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ

ಕಟೀಲು ಮೇಳದ ಖ್ಯಾತ ಎದುರು ವೇಷಧಾರಿ ಶಂಭು ಕುಮಾರ್ ಕಿನ್ನಿಗೋಳಿ ಆತ್ಮಹತ್ಯೆ 

0

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಎದುರು ವೇಷಧಾರಿ ಶಂಭು ಕುಮಾರ್ ಕಿನ್ನಿಗೋಳಿ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕಟೀಲು ಮೇಳದಲ್ಲಿ ಖಳ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಕೊಡೆತ್ತೂರು ಶಂಭುಕುಮಾರ್ (46) ಅವರು ತಮ್ಮ ಉಲ್ಲಂಜೆಯ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಇವರು ತೆಂಕುತಿಟ್ಟು ಯಕ್ಷಗಾನದಲ್ಲಿ ಎದುರುವೇಷಗಳಿಗೆ ಹೆಸರುವಾಸಿಯಾಗಿದ್ದರು. ಭಸ್ಮಾಸುರ, ಇಂದ್ರಜಿತು, ಅರುಣಾಸುರ, ಮಧು, ಕೈಟಭ ಭೀಮ, ಅರ್ಜುನ,ದೇವೇಂದ್ರ ಮೊದಲಾದ ವೇಷಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದ ಅವರು ಖಳ ಪಾತ್ರಗಳ ಜೊತೆಗೆ ಪೀಠಿಕೆ ವೇಷದಲ್ಲಿಯೂ ಪ್ರಸಿದ್ಧಿಯನ್ನು ಪಡೆದವರು.

ತನ್ನ ಹದಿನಾರನೆಯ ವಯಸ್ಸಿನಲ್ಲಿಯೇ ಯಕ್ಷಗಾನ ರಂಗದಲ್ಲಿ ಗುರುತಿಸಿಕೊಂಡಿದ್ದ ಅವರು ಮುಂಡ್ಕೂರು, ತಲಕಳ, ಮಂಗಳಾದೇವಿ, ಎಡನೀರು, ಪುತ್ತೂರು, ಬಪ್ಪನಾಡು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 7 ವರ್ಷಗಳಿಂದ ಕಟೀಲು ಮೇಳದಲ್ಲಿ ಎದುರುವೇಷಧಾರಿಯಾಗಿ ಹೆಸರುವಾಸಿಯಾಗಿದ್ದರು.

ನಾಟ್ಯ ಗುರುವಾಗಿಯೂ ಗುರುತಿಸಿಕೊಂಡಿದ್ದ ಅವರು ಕಿನ್ನಿಗೋಳಿಯ ಯಕ್ಷ ಕೌಸ್ತುಭ ಸಂಸ್ಥೆಯಲ್ಲಿ ನಾಟ್ಯ ತರಬೇತಿಯನ್ನು ನೀಡಿ ಹಲವಾರು ಶಿಷ್ಯರನ್ನು ಸಿದ್ಧಗೊಳಿಸಿದ್ದರು. 

ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಳದ ಸಹಕಾರದೊಂದಿಗೆ ಚಿಕ್ಕಮೇಳವನ್ನೂ ಕಳೆದ ಹಲವಾರು ವರ್ಷಗಳಿಂದ ನಡೆಸುತ್ತಿದ್ದರು. ಆರ್ಥಿಕ ಮುಗ್ಗಟ್ಟು ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆಯಾದರೂ ಮುಂದಿನ ತನಿಖೆಯಿಂದ ಆತ್ಮಹತ್ಯೆಗೆ ಕಾರಣವೇನೆಂದು ತಿಳಿಯಬೇಕಿದೆ.

ಮೃತರ ಸಹೋದರ ಗಣೇಶ ಚಂದ್ರಮಂಡಲ ಅವರು ತೆಂಕುತಿಟ್ಟಿನ ಖ್ಯಾತ ವೇಷಧಾರಿಯಾಗಿದ್ದಾರೆ. ಮೃತ ಶಂಭುಕುಮಾರ್ ಕೊಡೆತ್ತೂರು ಅವರು ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. 

ಕ್ಲಬ್ ಹೌಸ್ ಆಪ್ ನಲ್ಲಿ ಪಾಕಿಸ್ತಾನದ ಧ್ವಜ ಮತ್ತು ರಾಷ್ಟ್ರಗೀತೆ – ತನಿಖೆ ಚುರುಕುಗೊಳಿಸಿದ ಪೊಲೀಸರು 

ಸಾಮಾಜಿಕ ಜಾಲತಾಣದ ಆ್ಯಪ್‌ ಆಗಿರುವ ಕ್ಲಬ್‌ಹೌಸ್‌ನಲ್ಲಿ ಪಾಕಿಸ್ತಾನದ ಧ್ವಜವನ್ನು ಹಾಕಿ, ರಾಷ್ಟ್ರಗೀತೆಯನ್ನು ನುಡಿಸಿದ ಮತ್ತು ಪಾಕಿಸ್ತಾನದ ಪರ ಮತ್ತು ಭಾರತದ ವಿರುದ್ಧ ಘೋಷಣೆಗಳನ್ನು ಹಾಕಿದ ಗುಂಪಿನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸಂಪಿಗೆಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಡ್ಡಹೆಸರು ಬಳಸಿ ಖಾತೆ ನಡೆಸುತ್ತಿದ್ದ ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸುತ್ತಿದ್ದಾರೆ.

ನಾವು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಆರೋಪಿಗಳ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿ.ಎಚ್. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.

ಪೊಲೀಸರು ಐಪಿ ವಿಳಾಸದ ಮೂಲಕ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಸೇವಾ ಪೂರೈಕೆದಾರರ ಸಹಾಯವನ್ನೂ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಆರೋಪಿಗಳು ತಮ್ಮ ಪ್ರದರ್ಶನದ ಚಿತ್ರಗಳ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾಕಿದ್ದಲ್ಲದೆ, ಇತರರನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಿದರು”ಎಂದು ಮೂಲಗಳು ತಿಳಿಸಿವೆ.

ಮೆಟ್ರೋ ರೈಲಿನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಜಗಳವಾಡುತ್ತಿರುವ ದೃಶ್ಯ – ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್ ಗಳನನ್ನು ರಂಜಿಸಿದ ವೀಡಿಯೊ ವೈರಲ್

ಮೆಟ್ರೋ ರೈಲಿನಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಜಗಳವಾಡುತ್ತಿರುವ ದೃಶ್ಯದ ವೀಡಿಯೊ ಕ್ಲಿಪ್ ವೈರಲ್ ಆಗಿದೆ.

ಇತ್ತೀಚೆಗೆ, ದೆಹಲಿ ಮೆಟ್ರೋ ರೈಲಿನಲ್ಲಿ ಇಬ್ಬರು ಮಹಿಳೆಯರು ಆಸನದ ವ್ಯವಸ್ಥೆಗಾಗಿ ಜಗಳವಾಡುತ್ತಿರುವುದು ಕಂಡುಬಂದಿದೆ.

ಹಳದಿ ಸೀರೆಯಲ್ಲಿ ಮಹಿಳೆಯೊಬ್ಬರು ಆರಾಮವಾಗಿ ಕುಳಿತಿರುವುದನ್ನು ತೋರಿಸುತ್ತದೆ, ಇನ್ನೊಬ್ಬರು ತನಗಾಗಿ ಸ್ಥಳವನ್ನು ಹುಡುಕಲು ಹೆಣಗಾಡುತ್ತಿದ್ದಾರೆ.

ಸೀರೆಯುಟ್ಟ ಮಹಿಳೆ ತಾನು ಆಸನವನ್ನು ನೀಡುವುದಿಲ್ಲ ಎಂದು ಹೇಳಿದಾಗ ಮತ್ತು ಇನ್ನೊಬ್ಬ ಮಹಿಳೆ ತನ್ನ ಮತ್ತು ಇನ್ನೊಬ್ಬ ಪ್ರಯಾಣಿಕನ ನಡುವಿನ ಸಣ್ಣ ಅಂತರದಲ್ಲಿ ಕುಳಿತುಕೊಳ್ಳಲು ಹೋದಾಗ ವಾಗ್ವಾದ ನಡೆಯಲು ಪ್ರಾರಂಭವಾಗುತ್ತದೆ.

ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಪುತ್ತೂರು,ಅ 17: ದಕ್ಷಿಣ ಕನ್ನಡ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಪುತ್ತೂರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಇದರ ಸಹಯೋಗದೊಂದಿಗೆ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡ ಪ್ರಥಮ ಸ್ಥಾನ  ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆ ಆಗಿದೆ.

ಅದೇ ರೀತಿ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ. 

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಗಣಪತಿ ಭಟ್ ಪಿ,  ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಅಖಿಲೇಶ್ ವರ್ಮ ,ವಿಘ್ನೇಶ್ ಚಂದ್ರಕಾಂತ್ ಯಾದವ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಲವಿತ್ ಎಂ ಭಾಗವಹಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪುಣ್ಯ ಪಿ. ಎನ್ ,ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಶ್ರಾವ್ಯ ಮತ್ತು  ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ತೃಪ್ತಿ, ನೇಹಾಲ್ ಎಸ್ ಎಂ ಭಾಗವಹಿಸಿದ್ದರು.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಮಕ್ಕಳಿಗೆ ಯಕ್ಷಗಾನದ ವೃತ್ತಿಕಲಾವಿದರೊಂದಿಗೆ ವೇಷ ಮಾಡುವ ಅವಕಾಶಗಳು – ಕಲಾವಿದನಾಗಿ ಬೆಳೆಯಲು ಪೂರಕ ಸನ್ನಿವೇಶ 

2019-20ನೇ ಸಾಲಿನ ಕಟೀಲಿನ ಆರೂ ಮೇಳಗಳ ತಿರುಗಾಟದ ಆರಂಭ. ಶ್ರೀಕ್ಷೇತ್ರದಲ್ಲಿ ನಡೆದ ಸೇವೆಯಾಟಕ್ಕೆ ಹೋಗಿದ್ದೆ. ಆರೂ ಮೇಳಗಳ ‘ಶ್ರೀದೇವಿಯ ಪೂಜೆ’ ನೋಡಿ ಪ್ರಸಾದ ಸ್ವೀಕರಿಸಿ ಭೋಜನ ಮಾಡಿ ಬಂದಿದ್ದೆವು. ಬರುತ್ತಾ ದಾರಿಯುದ್ದಕ್ಕೂ ಕಳೆದ ಕೆಲವು ವರುಷಗಳಿಂದ ನಮ್ಮ ಮನೆಯ ಮಕ್ಕಳು ಕಟೀಲು ಮೇಳಗಳಲ್ಲಿ ಆಗಾಗ ವೇಷ ಮಾಡಲು ಹೋಗುತ್ತಿದ್ದುದು ನೆನಪಾಯಿತು.

ಈ ಅವಕಾಶವೂ ಸಿಕ್ಕಿದುದು ನಮ್ಮ ಭಾಗ್ಯವೆಂದು ಭಾವಿಸುತ್ತೇನೆ. ಮೊದಲಾಗಿ ಈ ಅವಕಾಶವನ್ನಿತ್ತ ಶ್ರೀ ಕಟೀಲು ಮೇಳದ ಸಂಚಾಲಕರು ಹಾಗೂ ಆಡಳಿತ ಮಂಡಳಿಗೆ ಗೌರವವನ್ನು ಸಲ್ಲಿಸುತ್ತೇವೆ. ನಮ್ಮ ಮನೆಯವರೆಲ್ಲರೂ ಯಕ್ಷಗಾನಾಸಕ್ತರು. ಪ್ರದರ್ಶನಗಳನ್ನು ನೋಡಿ ಆನಂದಿಸುತ್ತೇವೆ. ನನ್ನ ದೊಡ್ಡ ಮೊಮ್ಮಗ, ಅವನ ಮೂರು, ನಾಲ್ಕನೇ ವಯಸ್ಸಿನಲ್ಲಿ ಯಕ್ಷಗಾನ ಕ್ಯಾಸೆಟ್ ಹಾಕಿ ಕುಣಿಯುತ್ತಿದ್ದ.

ನಮ್ಮ ಮನೆಗೆ ಬಂದಿದ್ದ ಕಟೀಲು ಮೇಳದ ಹಿರಿಯ ಕಲಾವಿದ ಶ್ರೀ ವಿಷ್ಣು ಶರ್ಮರು ಅದನ್ನು ನೋಡಿ ಖುಷಿಪಟ್ಟು ಆಶೀರ್ವದಿಸಿದ್ದರು. ಅಲ್ಲದೆ ಮುಂದಿನ ಸಲ ಬರುವಾಗ ಸ್ವಲ್ಪ ಗೆಜ್ಜೆಗಳನ್ನೂ ತಂದು ಕೊಟ್ಟಿದ್ದರು. ಅಲ್ಪ ಸ್ವಲ್ಪ ಹೊಲಿಗೆ ಕೆಲಸವನ್ನು ಕಲಿತಿದ್ದ ನಾನು ಬಾಲುಮುಂಡು, ಮೇಲಿನ ಅಂಗಿಯನ್ನು ಹೊಲಿದು ರಟ್ಟಿನಿಂದ ಕಿರೀಟವನ್ನೂ ಮಾಡಿ ಅದನ್ನು ಮೊಮ್ಮಗನಿಗೆ ತೊಡಿಸಿ, ಗೆಜ್ಜೆಕಟ್ಟಿ ಅವನನ್ನು ಕುಣಿಸುತ್ತಿದ್ದೆ. ನನಗೆ ತಿಳಿದ ಪುರಾಣ ಕತೆಗಳನ್ನೂ ಹೇಳುತ್ತಿದ್ದೆ.

ಅವನಿಗೆ ಐದು ವರ್ಷ ಪ್ರಾಯವಾದಾಗ ನನಗೆ ಮತೊಬ್ಬ ಮೊಮ್ಮಗನೂ ಜನಿಸಿದ. ದೊಡ್ಡವನು ನಾಲ್ಕನೇ ತರಗತಿಯಲ್ಲಿ ಓದುತ್ತಿರುವಾಗ ಕಟೀಲು ಮೇಳದ ಕಲಾವಿದ ವೇಣೂರು ಶ್ರೀ ಅಶೋಕ ಆಚಾರ್ಯರು ಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಬೇತಿ ಪ್ರಾರಂಭಿಸಿದ್ದರು. ಮೊಮ್ಮಗನಿಗೆ ನಾಟ್ಯ ಹೇಳಿಕೊಟ್ಟು ಒಂದು ವರ್ಷದಲ್ಲಿ ರಂಗಪ್ರವೇಶವನ್ನೂ ಮಾಡಿಸಿದ್ದರು. ಕಿರಿಯ ಮೊಮ್ಮಗ ಎರಡನೇ ತರಗತಿಯಲ್ಲಿ ಓದುತ್ತಿರುವಾಗ ಶ್ರೀ ಶಿವಕುಮಾರ ಯಕ್ಷನಿಧಿ ಮೂಡುಬಿದಿರೆಯಲ್ಲಿ ತರಬೇತಿಯನ್ನು ಆರಂಭಿಸಿದ್ದರು. ಅಲ್ಲಿ ಮಕ್ಕಳಿಬ್ಬರೂ ತರಬೇತಿಯನ್ನು ಪಡೆಯುವುದಕ್ಕೆ ಅವಕಾಶವಾಯಿತು. ಕಿರಿಯ ಮೊಮ್ಮಗ ರಂಗಪ್ರವೇಶವನ್ನೂ ಮಾಡುವುದಕ್ಕೆ ಅನುಕೂಲವಾಗಿತ್ತು.

ಕಟೀಲು ಮೇಳದ ಹಿರಿಯ ಕಲಾವಿದರಾದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಮನೆಗೆ ಬಂದಿದ್ದಾಗ ಈ ಮಕ್ಕಳ ಕುಣಿತ, ಯಕ್ಷಗಾನಾಸಕ್ತಿಯನ್ನು ಗಮನಿಸಿ, ಅದೇ ದಿನ ವೇಣೂರಿನಲ್ಲಿ ನಡೆದ ಕಟೀಲು ಮೇಳದ ಪ್ರದರ್ಶನದಲ್ಲಿ ವೇಷ ಮಾಡಿಸಿದ್ದರು. ಕಟೀಲು ಮೇಳದಲ್ಲಿ ಹೀಗೆ ದೇವೇಂದ್ರನ ಬಲ ಆಗಿ ರಂಗಪ್ರವೇಶ ಮಾಡುವ ಅವಕಾಶ ಸಿಕ್ಕಿತ್ತು. ಎರಡು ದಿನಗಳ ಬಳಿಕ ನಮ್ಮ ಮನೆ ಪಕ್ಕದಲ್ಲೇ ಕಟೀಲು ಮೇಳದ ಆಟವಿತ್ತು. ಅಂದು ಮೇಳದ ಶ್ರೀ ದೇವರು ನಮ್ಮ ಮನೆಗೇ ಚಿತ್ತೈಸಿದ್ದೂ ಒಂದು ಮಹಾ ಭಾಗ್ಯ. ಅಂದೂ ಮೊಮ್ಮಕ್ಕಳಿಬ್ಬರೂ ಕಟೀಲು ಮೇಳದಲ್ಲಿ ವೇಷ ಮಾಡುವ ಅವಕಾಶವಾಗಿತ್ತು.

ಕಟೀಲು ಮೇಳದ ಭಾಗವತರಾದ ಪುಂಡಿಕಾಯಿ ಶ್ರೀ ಗೋಪಾಲಕೃಷ್ಣ ಭಟ್ಟರೂ ಬಾಲಗೋಪಾಲರಾಗಿ ಅಭಿನಯಿಸಲು ಅವಕಾಶ ನೀಡಿದ್ದರು. ಪ್ರಸ್ತುತ ಎಲ್ಲಾ ಮೇಳಗಳಲ್ಲಿ ಅವಕಾಶವಿತ್ತು ಪ್ರೋತ್ಸಾಹಿಸುತ್ತಿದ್ದಾರೆ. ಹಿರಿಯ ಮೊಮ್ಮಗ ಶ್ರೀವತ್ಸ ಈಗ ಒಂಭತ್ತನೆಯ ತರಗತಿ. ಕಿರುಯವ ಶ್ರೇಯಸ್ ನಾಲ್ಕನೇ ತರಗತಿ ವಿದ್ಯಾರ್ಥಿ. ಬಲಿಪ ಭಾಗವತರ ಮನೆ ನಮ್ಮ ಮನೆಯ ಸಮೀಪವೇ ಇದ್ದು ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಿರುವುದು ಕಲಿಕೆಗೆ ಅನುಕೂಲವಾಗುತ್ತಿದೆ.

ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಮಕ್ಕಳನ್ನು ತಿದ್ದಿ ಮಾರ್ಗದರ್ಶನ ಮಾಡಿದ್ದಾರೆ. ಕಟೀಲು ಆರೂ ಮೇಳಗಳ ಹಿಮ್ಮೇಳ, ಮುಮ್ಮೇಳ ಕಲಾವಿದರೂ ಮಕ್ಕಳನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಾರೆ. ವೇಷ ಮಾಡಲು ಅವಕಾಶಗಳನ್ನು ನೀಡಿದ್ದಾರೆ. ಸಹಕಲಾವಿದರು ತಮ್ಮಂದಿರಂತೆ ಪ್ರೀತಿಸಿದ್ದಾರೆ. ಮೇಕಪ್ ಮಾಡಲು, ಡ್ರೆಸ್ ಕಟ್ಟಲೂ ಕಿರಿಯ ಕಲಾವಿದರೊಂದಿಗೆ, ಕೆಲವೊಮ್ಮೆ ಹಿರಿಯ ಕಲಾವಿದರೂ ಸಹಕರಿಸಿದ್ದಾರೆ.

ಕಟೀಲು ಅಮ್ಮನವರ ಕೃಪೆ, ಕಲಾವಿದರ ಆದರ, ಸಿಬ್ಬಂದಿಗಳ ಪ್ರೀತಿ ನಮ್ಮ ಮಕ್ಕಳ ಮೇಲೆ ಸದಾ ಇರಲಿ ಎಂದು ಆಶಿಸುತ್ತೇನೆ. ಕಲಾಮಾತೆಯ ಸೇವೆಯನ್ನು ಬಹುಕಾಲ ಮಾಡುವ ಅವಕಾಶ ಸಿಗಲೆಂದು ಬೇಡಿಕೊಳ್ಳುತ್ತೇನೆ. ಈಗ ಇಬ್ಬರು ಮೊಮ್ಮಕ್ಕಳೂ ಸಬ್ಬಣಕೋಡಿ ಶ್ರೀ ರಾಮ ಭಟ್ಟರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.

ಹೀಗೆಯೇ ಅನೇಕ ಮಕ್ಕಳು ಕಟೀಲು, ಧರ್ಮಸ್ಥಳ, ಹನುಮಗಿರಿ, ಪಾವಂಜೆ ಮೊದಲಾದ ಮೇಳಗಳಲ್ಲಿ, ರಜಾದಿನಗಳಲ್ಲಿ, ಬಿಡುವಿನ ಸಮಯದಲ್ಲಿ ವೇಷ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದು ವಿದ್ಯಾರ್ಥಿಗಳ ಭಾಗ್ಯವೆಂದರೆ ತಪ್ಪಲ್ಲ.

ಇಂತಹಾ ಉತ್ತಮ ಅವಕಾಶಗಳನ್ನಿತ್ತ ಮೇಳಗಳ ಆಡಳಿತಕ್ಕೂ, ಕಲಾವಿದರುಗಳಿಗೂ ಕೃತಜ್ಞರಾಗಿರಬೇಕಾದುದು ನಮಗೆ ಕರ್ತವ್ಯವೂ ಹೌದು. ವೃತ್ತಿಕಲಾವಿದರೊಂದಿಗೆ ವೇಷಗಳನ್ನು ಮಾಡಿದಾಗ ರಂಗಾನುಭವ ಸಿದ್ಧಿಸುತ್ತದೆ. ಮಕ್ಕಳು ಚುರುಕಾಗುತ್ತಾರೆ. ಖಂಡಿತಾ ಕಲಾವಿದರಾಗಿ ಬೆಳೆಯುತ್ತಾರೆ ಎಂಬುದರಲ್ಲಿ ಸಂಶಯವೇ ಇಲ್ಲ. 

ಲೇಖಕಿ: ಶ್ರೀಮತಿ ಜಯಲಕ್ಷ್ಮಿ ಗುದ್ರೋಡಿ ವೇಣೂರು, ಮೂಡಬಿದಿರೆ ತಾಲೂಕು 

ಎರಡು ಕಾಲುಗಳ ಮೇಲೆ ನಿಂತು ಮರ ಏರಿ ಹಲಸಿನ ಕಾಯಿ ಕೊಯ್ಯುತ್ತಿರುವ ಕಾಡಾನೆ – ವೈರಲ್ ವೀಡಿಯೊ ಈಗ ಜನಪ್ರಿಯ 

ಆನೆಯೊಂದು ಮರದ ಕೊಂಬೆಗೆ ನೇತಾಡುತ್ತಿದ್ದ ಹಲಸಿನ ಹಣ್ಣನ್ನು ಕೀಳಲು ಯತ್ನಿಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಇಡೀ ಪ್ರಾಣಿ ಸಾಮ್ರಾಜ್ಯದೊಳಗೆ ಆನೆಗಳನ್ನು ಪ್ರಬಲ ಮತ್ತು ಅತ್ಯಂತ ಪ್ರೀತಿಯ ಜಾತಿ ಎಂದು ಪರಿಗಣಿಸಲಾಗುತ್ತದೆ. ಅವುಗಳನ್ನು ಮೋಹಕವೆಂದು ಪರಿಗಣಿಸಲಾಗುತ್ತದೆ.

ಆನೆಯೊಂದು ಪಕ್ಕದ ಮರದಿಂದ ಹಸಿ ಹಲಸಿನ ಹಣ್ಣನ್ನು ತಿನ್ನಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಸಿದ ಗಜರಾಜ ಒಂದು ಹಳ್ಳಿಯ ಪ್ರದೇಶದಲ್ಲಿ, ತನ್ನ ದೇಹವನ್ನು ಎರಡು ಕಾಲುಗಳನ್ನು ಮರದ ಕಾಂಡದ ಮೇಲೆ ಸಂಪೂರ್ಣವಾಗಿ ಚಾಚಿ ಕೆಲವು ಹಲಸುಗಳನ್ನು ಕೀಳಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

ಆನೆ ಈ ಪ್ರಯತ್ನದಲ್ಲಿ ಯಶಸ್ವಿಯಾದಾಗ ಗ್ರಾಮಸ್ಥರು ಚಪ್ಪಾಳೆ ತಟ್ಟಿದ್ದು ಕೇಳಿಸಿತು.