ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ 17 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತರು ಸೇರಿದಂತೆ ಆರು ಮಂದಿ ಅತ್ಯಾಚಾರವೆಸಗಿದ್ದಾರೆ.
ಈ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳನ್ನು ಆಗಸ್ಟ್ 17 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು, ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯ ಮೇಲೆ ಅಪ್ರಾಪ್ತ ವಯಸ್ಕ ಸೇರಿದಂತೆ ಆರು ಮಂದಿ ಅತ್ಯಾಚಾರವೆಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ಮಾಹಿತಿ ನೀಡಿದ್ದಾರೆ. ಬಲಿಪಶು ಔರಂಗಾಬಾದ್ ಜಿಲ್ಲೆಯ ಕನ್ನಡ ತಾಲೂಕಿನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿಗಳು ಶುಕ್ರವಾರ ಗ್ರಾಮದ ಜಮೀನಿನಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಶನಿವಾರ ಬಾಲಕಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿದ ನಂತರ ಅಪರಾಧ ಬೆಳಕಿಗೆ ಬಂದಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
“ಪೊಲೀಸರು 19 ರಿಂದ 33 ವರ್ಷ ವಯಸ್ಸಿನ ಐವರು ಪುರುಷರನ್ನು ಬಂಧಿಸಿದ್ದಾರೆ ಮತ್ತು ಅದೇ ದಿನ ಬಾಲಾಪರಾಧಿಯನ್ನು ಬಂಧಿಸಿದ್ದಾರೆ” ಎಂದು ಅಧಿಕಾರಿ ಹೇಳಿದರು.
ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಐವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ಆಗಸ್ಟ್ 17 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಮತ್ತು ಅಪ್ರಾಪ್ತ ಆರೋಪಿಯನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಾಲ್ಕು ವೇದಗಳಲ್ಲಿ ಸಾಮವೇದವೂ ಒಂದು. ಸಾಮವೇದದ ಉಪವೇದವು ಗಂಧರ್ವವೇದ. ಗಾಯನ, ವಾದನ, ನರ್ತನಗಳು ಗಂಧರ್ವವೇದಕ್ಕೆ ಸಂಬಂಧಿಸಿದ ವಿಚಾರವು. ಯಕ್ಷಗಾನವೆಂಬ ಶ್ರೇಷ್ಠ ಕಲೆಯಲ್ಲಿ ಈ ಮೂರೂ ವಿಚಾರಗಳು ಒಂದಕ್ಕೊಂದು ಪೂರಕವಾಗಿರುವುದು ನಮಗೆಲ್ಲಾ ತಿಳಿದಿರುವ ವಿಚಾರವು. ಯಕ್ಷಗಾನ ಪ್ರದರ್ಶನಗಳಲ್ಲಿ ಗಾಯನ, ವಾದನ, ನರ್ತನ ಎಂಬ ಮೂರೂ ವಿಚಾರಗಳು ಇರುತ್ತವೆ. ತಾಳಮದ್ದಳೆ ಎಂಬ ಪ್ರಾಕಾರದಲ್ಲಿ ನರ್ತನವನ್ನುಳಿದು ಗಾಯನ, ವಾದನ ಎಂಬ ಎರಡು ವಿಚಾರಗಳು ಇರುತ್ತವೆ.
ವಾದನ ವಿಭಾಗದಲ್ಲಿ ಭಾಗವತರ ಕೈಯಲ್ಲಿರುವ ಜಾಗಟೆಯಲ್ಲದೆ ಚೆಂಡೆ ಮತ್ತು ಮದ್ದಳೆ ಎಂಬ ಎರಡು ವಾದ್ಯೋಪಕರಣಗಳು ಇರುತ್ತವೆ ಎಂಬುದನ್ನು ನಾವೆಲ್ಲರೂ ಬಲ್ಲವರು. ಯಕ್ಷಗಾನದಲ್ಲಿ ಭಾಗವತರ ಹಾಡಿಗೆ ಈ ವಾದ್ಯೋಪಕರಣಗಳನ್ನು ನುಡಿಸುವ ಕಲಾವಿದರನ್ನು ಮದ್ದಳೆಗಾರರೆಂದು ಕರೆಯುವುದು ರೂಢಿಯಾಗಿದೆ.
ಯಕ್ಷಗಾನದಲ್ಲಿ ಅನೇಕ ಹಿರಿಯ ಮದ್ದಳೆಗಾರರು ತಮ್ಮ ವಾದನ ಕೌಶಲವನ್ನು ತೋರಿ ಮೆರೆದಿದ್ದಾರೆ. ಉದಯೋನ್ಮುಖ ಕಲಾವಿದರು ಅನೇಕರು ಇಂದು ರಂಗದಲ್ಲಿ ತಮ್ಮ ಕಲಾಕೌಶಲ್ಯವನ್ನು ತೋರುತ್ತಿದ್ದಾರೆ. ತೆಂಕುತಿಟ್ಟಿನ ಉದಯೋನ್ಮುಖರಲ್ಲಿ ಶ್ರೀಧರ ಪಡ್ರೆ ಅವರು ಮದ್ದಳೆಗಾರರಾಗಿ ಕಲಾಭಿಮಾನಿಗಳಿಗೆಲ್ಲಾ ಪರಿಚಿತರು. ಇವರು ಪ್ರಸ್ತುತ ಕಟೀಲು ೧ನೇ ಮೇಳದಲ್ಲಿ ಕಲಾ ವ್ಯವಸಾಯವನ್ನು ಮಾಡುತ್ತಿದ್ದಾರೆ.
ಮದ್ದಳೆಗಾರ ಶ್ರೀಧರ ಅವರ ಹುಟ್ಟೂರು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದ ಬದಿ ಎಂಬಲ್ಲಿ. 1975ನೇ ಇಸವಿ ಅಕ್ಟೋಬರ್ 25ರಂದು ಶ್ರೀ ಕುಂಞಪ್ಪ ನಾಯ್ಕ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಪುತ್ರನಾಗಿ ಜನನ. ಕುಂಞಪ್ಪ ನಾಯ್ಕರಿಗೆ ಏಳು ಮಂದಿ ಮಕ್ಕಳು. ಶ್ರೀಧರ ಅವರು ಐದನೆಯವರು. ಶ್ರೀ ಕುಂಞಪ್ಪ ನಾಯ್ಕ ಅವರು ತೆಂಕುತಿಟ್ಟಿನ ಉತ್ತಮ ಕಿರೀಟ ವೇಷಧಾರಿಯಾಗಿದ್ದರು. ಪಡ್ರೆ ಜಟಾಧಾರೀ, ಕೂಡ್ಲು, ವೇಣೂರು ಬಳ್ಳಂಬೆಟ್ಟು ಮೇಳಗಳಲ್ಲಿ ತಿರುಗಾಟ ಮಾಡಿದ್ದರು. ಬಳಿಕ ಸುರತ್ಕಲ್ ಮೇಳದಲ್ಲಿ ತಿರುಗಾಟ ಮಾಡಿ ನಿವೃತ್ತರಾಗಿದ್ದರು. ಮದ್ದಳೆಗಾರ ಮಿಜಾರು ಶ್ರೀ ಮೋಹನ ಶೆಟ್ಟಿಗಾರರ ತಂದೆ ದಡ್ಡಿ ನಾರಾಯಣ ಶೆಟ್ಟಿಗಾರರೂ ಇವರೂ ಜತೆ ವೇಷಧಾರಿಗಳಾಗಿ ಮಿಂಚಿದವರು.
ಪಡ್ರೆ ಶ್ರೀಧರ ಅವರು ಪದವೀಧರರು. (ಬಿ.ಎ) ಓದಿದು 7ನೇ ತರಗತಿ ವರೆಗೆ ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ. ಎಸ್,ಎಸ್. ಎಲ್.ಸಿ ಪೆರ್ಲ ಸತ್ಯನಾರಾಯಣ ಪ್ರೌಢ ಶಾಲೆಯಲ್ಲಿ. ಪಿಯುಸಿ ವಿದ್ಯಾರ್ಜನೆ ಅಳಿಕೆ ಶ್ರೀ ಸತ್ಯಸಾಯಿ ಕಾಲೇಜಿನಲ್ಲಿ. ಪದವಿ ಶಿಕ್ಷಣ ಪುತ್ತೂರು ಫಿಲೋಮಿನಾ ಕಾಲೇಜಿನಲ್ಲಿ. ತೆಂಕುತಿಟ್ಟಿನ ಇನ್ನೋರ್ವ ಮದ್ದಳೆಗಾರ ಪಡ್ರೆ ಆನಂದ ಸಂಬಂಧದಲ್ಲಿ ಪಡ್ರೆ ಶ್ರೀಧರರಿಗೆ ಅಳಿಯ. ಶಾಲೆಯಲ್ಲಿ, ಯಕ್ಷಗಾನ ಕಲಿಕೆಯಲ್ಲಿ ಸಹಪಾಠಿಗಳು. ಮೇಳದ ತಿರುಗಾಟದಲ್ಲಿ ಒಡನಾಡಿಗಳು. ಇವರಿಬ್ಬರೂ ಪಡ್ರೆದ್ವಯರೆಂದೇ ಕರೆಸಿಕೊಂಡಿದ್ದರು. ಮಾವ, ಅಳಿಯ ಎಂಬ ಬಂಧುಗಳಾದರೂ ಕಲಾಭಿಮಾನಿಗಳು ಅಣ್ಣತಮ್ಮಂದಿರೆಂದೇ ತಿಳಿದಿದ್ದರು. “ನಿಮ್ಮ ಅಣ್ಣ ಏನು ಮಾಡುತ್ತಾರೆ?” ‘ನಿಮ್ಮ ತಮ್ಮ ಎಲ್ಲಿದ್ದಾರೆ?’ ಎಂಬ ಪ್ರಶ್ನೆಗಳನ್ನು ಕಲಾಭಿಮಾನಿಗಳು ಇವರಿಬ್ಬರಲ್ಲೂ ಕೇಳಿದ್ದಿದೆ.
ಇವರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಪಡ್ರೆದ್ವಯರು ಬಾಲಾ ಬಾಲಕರಾಗಿದ್ದಾಗಲೇ ಪ್ರದರ್ಶನಗಳನ್ನು ನೋಡುತ್ತಿದ್ದರು. ಹಗಲು ನಿದ್ದೆ ಮಾಡದೆ ಅಣಕು ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದರು. ಅಡಿಕೆ ಹಾಳೆ, ತೆಂಗಿನ ಗರಿಗಳಿಂದ ವೇಷಭೂಷಣಗಳನ್ನು ಮಾಡುತ್ತಿದ್ದರು. ಹೊದಿಕೆ ಸೀರೆಗಳೇ ವೇಷಕ್ಕೆ ಉಡುಪುಗಳು. ಮನೆಯವರು ಬಂದು ನೋಡಿದಾಗ ಹೊದಿಕೆ, ಸೀರೆಗಳೆಲ್ಲಾ ತೂತಾಗಿರುತ್ತಿತ್ತು! ವೇಷಕ್ಕೆ ಮತ್ತು ಕರ್ಟನ್ ಗಾಗಿ ಇವರು ತೂತು ಮಾಡುತ್ತಿದ್ದರು! ನೆರೆಕರೆಯ ಮಕ್ಕಳನ್ನು ಬೆದರಿಸಿ ಒತ್ತಾಯದಿಂದ ಪ್ರೇಕ್ಷಕರ ಸಾಲಿನಲ್ಲಿ ಕೂರಿಸುತ್ತಿದ್ದರು.
ಪಡ್ರೆ ಶ್ರೀಧರರು ಎಳವೆಯಲ್ಲೇ ಹಿಮ್ಮೇಳದತ್ತ ಆಕರ್ಷಿತರಾಗಿದ್ದರು. ಕಲಿತು ಕಲಾವಿದನಾಗಬೇಕೆಂಬ ಆಸೆಯೂ ಆಗಿತ್ತು. ಇವರ ಹತ್ತಿರದಲ್ಲಿ ಬದಿ ಕೇಶವ ಭಟ್ಟರ ಮನೆ. ಅಲ್ಲಿ ತೆಂಕುತಿಟ್ಟಿನ ಖ್ಯಾತ ಮದ್ದಳೆಗಾರ ಪುಂಡಿಕಾಯಿ ಕೃಷ್ಣ ಭಟ್ಟರು ಹಿಮ್ಮೇಳ ತರಬೇತಿಯನ್ನು ನೀಡುತ್ತಿದ್ದರು. ಅವರಿಂದ ಚೆಂಡೆ ಮದ್ದಳೆ ನುಡಿಸುವುದನ್ನು ಕಲಿತರು. ಶಾಲಾ ಪ್ರದರ್ಶನದಲ್ಲಿ ಮದ್ದಳೆ ನುಡಿಸಿದ್ದರು. ಗುರುಗಳಾದ ಪುಂಡಿಕಾಯಿ ಕೃಷ್ಣ ಭಟ್ಟರು ಪ್ರೋತ್ಸಾಹ ನೀಡುತ್ತಿದ್ದರು. ಪ್ರದರ್ಶನಗಳಿಗೆ ಕರೆದೊಯ್ದು ಮದ್ದಳೆ ಬಾರಿಸಲು ಅವಕಾಶ ನೀಡುತ್ತಿದ್ದರು.
ಶ್ರೀಧರ್ ಅವರು ನಾಟ್ಯವನ್ನೂ ಬಲ್ಲವರು. ಶಾಸ್ತ್ರೀಯವಾಗಿ ಕಲಿತಿರಲಿಲ್ಲ. ಅಣ್ಣತಮ್ಮಂದಿರು ಸಬ್ಬಣಕೋಡಿ ರಾಮ ಭಟ್ಟರಿಂದ ಕಲಿತಿದ್ದರು. ಅವರು ತರಬೇತಿ ನೀಡುವಾಗ ನೋಡಿ ಮತ್ತು ಅಣ್ಣ ತಮ್ಮಂದಿರು ಮನೆಯಲ್ಲಿ ಕುಣಿಯುವಾಗ ನೋಡುತ್ತಾ ಯಕ್ಷಗಾನ ನಾಟ್ಯವನ್ನು ಕರಗತ ಮಾಡಿಕೊಂಡಿದ್ದರು. ತಂದೆ ಕುಂಞಪ್ಪ ನಾಯ್ಕರೂ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟಿದ್ದರು. ಭಾಗವತಿಕೆಯನ್ನು ಮಾಡುವ ಹವ್ಯಾಸವೂ ಪಡ್ರೆ ಶ್ರೀಧರ ಅವರಿಗಿದೆ. ಇವರ ಅಣ್ಣ ನಾರಾಯಣ ಅವರ ಪ್ರೋತ್ಸಾಹವೇ ಇದಕ್ಕೆ ಕಾರಣ. ಅವರು ಶಾಲೆಗೆ ಹೋದವರಲ್ಲ. ಕಣ್ಣುಗಳು ಕಾಣಿಸುತ್ತಿರಲಿಲ್ಲ. ಆದರೂ ಮನೆಯವರೊಂದಿಗೆ ಆಟ – ಕೂಟಗಳಿಗೆ ತೆರಳಿ ಕೇಳಿಯೇ ಹಾಡುಗಳು ಕಂಠಪಾಠವಾಗಿತ್ತು. ಶ್ರುತಿಬದ್ಧವಾಗಿ ತಾಳಹಾಕಿ ಹಾಡುವ ಕಲೆ ಅವರಿಗೆ ಕರಗತವಾಗಿತ್ತು. ಶಾಲಾ ಕಲೋತ್ಸವದಲ್ಲಿ ಪ್ರದರ್ಶನಕ್ಕೆ ಹಾಡಿದರು. ಆಗ ಆನಂದ ಪಡ್ರೆ ಚೆಂಡೆ ಬಾರಿಸಿದ್ದರು.
ಎಸ್.ಎಸ್.ಎಲ್.ಸಿ ಮುಗಿದ ನಂತರ ಅಳಿಕೆ ಕಾಲೇಜಿಗೆ ಸಂದರ್ಶನಕ್ಕೆಂದು ಹೋಗಿದ್ದರು. ಸಂದರ್ಶಕರು ಓದು ಅಲ್ಲದೆ ಯಾವ ಹವ್ಯಾಸ ಇದೆ ಎಂದು ಪ್ರಶ್ನಿಸಿದ್ದರು. ಯಕ್ಷಗಾನ ಹಿಮ್ಮೇಳ ಎಂದಾಗ ಅಳಿಕೆ ಕಾಲೇಜಿಗೆ ಪ್ರವೇಶ ದೊರಕಿತ್ತು. ಕಾಲೇಜು ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇವರು ಪದವಿ ಶಿಕ್ಷಣವನ್ನು ಫಿಲೋಮಿನಾ ಕಾಲೇಜಿನಲ್ಲಿ ಪೂರೈಸಿದರು. ಕಾಲೇಜಿನ ಪ್ರದರ್ಶನಕ್ಕೆ ಅಭ್ಯಾಸ ಮಾಡುತ್ತಿರುವಾಗ ಒಬ್ಬನ ಪ್ರವೇಶದ ಕ್ರಮ ಸರಿ ಇರಲಿಲ್ಲ. ಅದನ್ನು ಶ್ರೀಧರ್ ಅವರು ತಿದ್ದಿದ್ದರು. ಇದನ್ನು ಗಮನಿಸಿದ ಉಪಾನ್ಯಾಸಕ, ಕಲಾವಿದ ದಂಬೆ ಈಶ್ವರ ಶಾಸ್ತ್ರಿಗಳು ವೇಷ ಮಾಡಲು ಒತ್ತಾಯಿಸಿದ್ದರು. ಮಂಗಳೂರು ಎಸ್.ಡಿ.ಎಂ ನ ಅಂತರ ಕಾಲೇಜು ಸ್ಪರ್ಧೆಯಲ್ಲಿ ಫಿಲೋಮಿನಾ ಕಾಲೇಜಿನ ತಂಡದಲ್ಲಿ ವೇಷಧಾರಿಯಾಗಿ ಭಾಗವಹಿಸಿದ್ದರು. ತಂಡ ಗೆಲ್ಲದಿದ್ದರೂ ತಂಡದ ಶ್ರೇಷ್ಠ ಕಲಾವಿದ ಎಂಬ ಬಹುಮಾನ ಇವರಿಗೆ ಒಲಿದಿತ್ತು. ಅಲ್ಲದೆ ಕಾಲೇಜಿನಲ್ಲಿ ಲಘುಸಂಗೀತ, ಭಾವಗೀತೆ, ಭಕ್ತಿಗೀತೆ ಸ್ಪರ್ಧೆಗಳಲ್ಲಿ ಇವರಿಗೆ ಮೊದಲ ಬಹುಮಾನ ಸಿಗುತ್ತಿತ್ತು.
ಪದವಿ ಶಿಕ್ಷಣ ಪೂರೈಸಿ ಓದು ಮುಂದುವರಿಸುವ ಆಸೆ ಇದ್ದರೂ ಅನುಕೂಲವಿರಲಿಲ್ಲ. ಬಡತನವೇ ಇದಕ್ಕೆ ಕಾರಣ. ಬದುಕಿಗಾಗಿ, ಸಂಪಾದನೆಗಾಗಿ ಕೂಲಿ ಕೆಲಸವನ್ನೂ ಮಾಡಿದ್ದರು. ಭಾಗವತ ಸತ್ಯನಾರಾಯಣ ಪುಣಿಂಚತ್ತಾಯರ ಮನೆಯಲ್ಲಿ ನಡೆಯುತ್ತಿದ್ದ ನವರಾತ್ರಿಯ ಕಾರ್ಯಕ್ರಮಗಳಲ್ಲಿ ಶ್ರೀಧರ ಪಡ್ರೆ ಮತ್ತು ಆನಂದ ಪಡ್ರೆ ಅವರು ಭಾಗವಹಿಸುತ್ತಿದ್ದರು. 1996-97ರಲ್ಲಿ ಮಂಗಳಾದೇವಿ ಮೇಳ ಆರಂಭವಾದಾಗ ಪುಣಿಂಚತ್ತಾಯರ ಹೇಳಿಕೆಯಂತೆ ಮಂಗಳಾದೇವಿ ಮೇಳಕ್ಕೆ ಸೇರ್ಪಡೆ. ಶಬರಾಯರ ಮತ್ತು ಪುಣಿಂಚತ್ತಾಯರ ಸಂಪೂರ್ಣ ಸಹಕಾರ ಇವರಿಗಿತ್ತು. ಕಿಶನ್ ಹೆಗ್ಡೆಯವರೂ ಸಹಕರಿಸಿ ಪ್ರೋತ್ಸಾಹ ನೀಡಿದ್ದರು.
ಮಂಗಳಾದೇವಿ ಮೇಳದಲ್ಲಿ ಹದಿಮೂರು ತಿರುಗಾಟ. ಈ ಸಂದರ್ಭದಲ್ಲಿ ಕಾಸರಗೋಡು ವೆಂಕಟ್ರಮಣ, ಪದ್ಮನಾಭ ಉಪಾಧ್ಯಾಯ ಮದ್ದಳೆಗಾರರಾಗಿದ್ದರು. ಮುಂದಿನ ವರ್ಷಗಳಲ್ಲಿ ಪ್ರಭಾಕರ ಗೋರೆ, ಲಕ್ಷ್ಮೀಶ ಅಮ್ಮಣ್ಣಾಯ, ಪದ್ಯಾಣ ಜಯರಾಮ ಭಟ್, ಪದ್ಯಾಣ ಗಣಪತಿ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪೆರುವಡಿ ಶ್ಯಾಮ್ ಭಟ್, ರವಿಚಂದ್ರ ಕನ್ನಡಿಕಟ್ಟೆ, ವಿನಯ ಆಚಾರ್ಯ, ಕರುಣಾಕರ ಶೆಟ್ಟಿಗಾರ ಮೊದಲಾದವರ ಒಡನಾಟವೂ ದೊರೆತಿತ್ತು. ತನ್ನ ಕರ್ತವ್ಯ ಮುಗಿದ ಬಳಿಕ ನಿದ್ರಿಸದೆ ಬೆಳಗಿನ ವರೆಗೂ ಆಟ ನೋಡುತ್ತಿದ್ದರು. ಯಾವ ಪದ್ಯಕ್ಕೆ ಹೇಗೆ ಬಾರಿಸಬೇಕು ಎಂಬುದನ್ನು ಬರೆದಿರಿಸಿಕೊಳ್ಳುತ್ತಿದ್ದರು.
ಮಂಗಳಾದೇವಿ ಮೇಳದ ತಿರುಗಾಟದ ಬಳಿಕ 5 ವರ್ಷ ಎಡನೀರು ಮೇಳದಲ್ಲಿ. ಇವರ ಕಲಾ ಸೇವೆಯ ಬಗ್ಗೆ ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯ ಅವರಿಗೂ ಪದ್ಯಾಣ ಗಣಪತಿ ಭಟ್ಟರಿಗೂ ತೃಪ್ತಿಯಿತ್ತು. ಇವರಲ್ಲಿ ನೆರವಾಗಿ ಹೇಳದಿದ್ದರೂ ಆಪ್ತರಲ್ಲಿ ಹೇಳುತ್ತಿದ್ದರಂತೆ. ಬಳಿಕ ಐದು ವರ್ಷಗಳ ಕಾಲ ಸಸಿಹಿತ್ಲು ಮೇಳದಲ್ಲಿ ವ್ಯವಸಾಯ. ಈ ಸಮಯದಲ್ಲಿ ಕಣಿಯೂರು ಸೂರ್ಯನಾರಾಯಣ ಭಟ್, ಸತ್ಯನಾರಾಯಣ ಪುಣಿಂಚತ್ತಾಯ, ದಯಾನಂದ ಕೋಡಿಕಲ್, ರವೀಂದ್ರ ಶೆಟ್ಟಿ, ಚಂದ್ರಶೇಖರ ಕಕ್ಕೆಪದವು, ಶಿವಪ್ರಸಾದ ಎಡಪದವು, ದೇವಿಪ್ರಸಾದ್ ಕಟೀಲು ಮೊದಲಾದವರ ಒಡನಾಟವು ದೊರೆತಿತ್ತು.
ಶ್ರೀ ಶ್ರೀಧರ ಪಡ್ರೆ ಅವರು ಕಳೆದ ವರ್ಷದಿಂದ ಕಟೀಲು 1ನೇ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಗಾನ ವೈಭವ ಮತ್ತು ನಾಟ್ಯ ವೈಭವ ಕಾರ್ಯಕ್ರಮಗಳಲ್ಲೂ ಇವರು ಕಾಣಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ 4 ವರ್ಷ ನಿಡ್ಲೆ ಶ್ರೀ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆಯ ಸದಸ್ಯನಾಗಿ ಕೇರಳ, ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ರಾಜ್ಯದ ವಿವಿಧೆಡೆ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಎರಡು ಬಾರಿ ವಿದೇಶದ ಪ್ರದರ್ಶನಗಳಲ್ಲೂ ತಮ್ಮ ವಾದನ ಕೌಶಲವನ್ನು ಪ್ರಕಟಿಸಿದ್ದಾರೆ. ಜನಾರ್ದನ ಗುಡಿಗಾರರ ಹೇಳಿಕೆಯಂತೆ ಮಸ್ಕತ್ ನಲ್ಲೂ ಶ್ರೀ ಮೋಹನ ಎಡನೀರು ಅವರ ಹೇಳಿಕೆಯಂತೆ ಬಹರೇನ್ ನಲ್ಲಿಯೂ ಭಾಗವಹಿಸಿದ್ದಾರೆ. ಇದೀಗ ಮೂರನೇ ಬಾರಿ ವಿದೇಶಕ್ಕೆ ತೆರಳುವ ಸಿದ್ಧತೆಯಲ್ಲಿದ್ದಾರೆ. ಸೆಪ್ಟೆಂಬರ್ 9ರಂದು ಮಸ್ಕತ್ ನ ಸ್ಥಳೀಯ ಕಲಾವಿದರ ಪ್ರದರ್ಶನದಲ್ಲಿ ಇವರೂ ಭಾಗವಹಿಸಲಿದ್ದಾರೆ. ಅಮ್ಮೆನಡ್ಕ ರಾಮಪ್ರಸಾದ್ ಮತ್ತು ಶ್ರೀ ನಾಗೇಶ್ ಶೆಟ್ಟಿ ಅವರ ಹೇಳಿಕೆಯಂತೆ ಶ್ರೀ ಸತ್ಯನಾರಾಯಣ ಪುಣಿಂಚತ್ತಾಯ, ಪಡ್ರೆ ಶ್ರೀಧರ, ಸುಂದರ ಬಂಗಾಡಿ ಅವರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ತೆಂಕುತಿಟ್ಟಿನ ನಗುಮೊಗದ ವಿನಯವಂತ ಮದ್ದಳೆಗಾರ ಪಡ್ರೆ ಶ್ರೀಧರರ ಧರ್ಮಪತ್ನಿ ಶ್ರೀಮತಿ ಕುಸುಮ. (2007ರಲ್ಲಿ ವಿವಾಹ) ಇವರು ಸ್ನಾತಕೋತ್ತರ ಪದವೀಧರರು. (ಎಂ.ಎ ಎಕನಾಮಿಕ್ಸ್ ) ಕಾಸರಗೋಡು ತಕ್ಷಶಿಲಾ ಕಾಲೇಜಿನಲ್ಲಿ ಉಪಾನ್ಯಾಸಕಿ. ಪಡ್ರೆ ಶ್ರೀಧರ, ಕುಸುಮ ದಂಪತಿಗಳ ಪುತ್ರ ಮಾ| ಅದ್ವೈತ್ 4ನೇ ತರಗತಿಯ ವಿದ್ಯಾರ್ಥಿ. ಆತನ ಭವಿಷ್ಯವು ಉಜ್ವಲವಾಗಲಿ. ಪಡ್ರೆ ಶ್ರೀಧರ ಅವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ವಿಳಾಸ: ಪಡ್ರೆ ಶ್ರೀಧರ, ಯಕ್ಷಗಾನ ಕಲಾವಿದ, ಬಜಕೂಡ್ಲು, ಅಂಚೆ ಪೆರ್ಲ, ಕಾಸರಗೋಡು,
ಶಿವಮೊಗ್ಗದಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕೆ.ಎಸ್ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಕಳೆದೆರೆಡು ದಿನಗಳಲ್ಲಿ ಶಿವಮೊಗ್ಗದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಅವರು ತಮ್ಮದೇ ಶೈಲಿಯ ಖಡಕ್ ಮಾತುಗಳಲ್ಲಿ ಎಚ್ಚರಿಸಿದ್ದಾರೆ.
“ಇಂತಹ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ತಮ್ಮ ಸಮುದಾಯದ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರಲ್ಲಿ ನಾನು ವಿನಂತಿಸುತ್ತೇನೆ”,
“ಹಿಂದೂ ಸಮಾಜ ಉದಯಿಸಿದರೆ ಇಂತಹ ಚಟುವಟಿಕೆಗಳಿಗೆ ಉಳಿಗಾಲವಿಲ್ಲ. ಅಶಾಂತಿ ಸೃಷ್ಟಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ” ಎಂದು ಚೂರಿ ಇರಿತ ಘಟನೆ ಕುರಿತು ಶಿವಮೊಗ್ಗ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
#WATCH | I request senior members of Muslim community to take action against youth of their community involved in such anti-national activities. If Hindu society rises, then such activities won't survive: BJP MLA from Shivamogga,KS Eashwarappa on stabbing incident#Karnatakapic.twitter.com/hUSuQx2xld
ನಾಳೆ 17.08.2022ರ ಬುಧವಾರ ಸಂಜೆ 6 ಘಂಟೆಗೆ ಶ್ರೀ ಎಡನೀರು ಮಠದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಇವರಿಂದ ‘ಕನಕಾಂಗಿ ಕಲ್ಯಾಣ, ಭಾರ್ಗವ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ(ನೆಹರೂ ನಗರದ ಆನಂದ ಗೌಡ ಮತ್ತು ಸಾವಿತ್ರಿ ದಂಪತಿ ಪುತ್ರಿ) ಮತ್ತು ಸನ್ಮಯ (ಕನ್ಯಾನದ ಈಶ್ವರ ಪ್ರಸಾದ್ ಮತ್ತು ಮಧುರಾ ದಂಪತಿ ಪುತ್ರಿ) ಚಿನ್ನದ ಪದಕವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪ್ರಾಪ್ತಿ ಕೆ.ಎಸ್(ಬಲ್ನಾಡು ಗ್ರಾಮದ ಸೀತರಾಮ ಗೌಡ ಮತ್ತು ದೇವಿಕಾ ದಂಪತಿ ಪುತ್ರಿ) ಮತ್ತು ಪ್ರಥಮ ಪಿಯುಸಿ ಕಲಾ ವಿಭಾಗದ ಗಾನಶ್ರೀ (ನೆಹರೂನಗರದ ದೇವಪ್ಪ ಮತ್ತು ಮೀನಾಕ್ಷಿ ದಂಪತಿ ಪುತ್ರಿ) ಕಂಚಿನ ಪದಕವನ್ನು ಗಳಿಸಿದ್ದಾರೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ರಿತೇಶ್ (ಕುರಿಯ ಗ್ರಾಮದ ಶೀನಪ್ಪ ಗೌಡ ಮತ್ತು ದೇವಿಕಾ ದಂಪತಿ ಪುತ್ರ) ಮತ್ತು ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಪವನ್ (ಕಡೇಶ್ವಾಲ್ಯದ ಜಯಪ್ರಕಾಶ್ ಮತ್ತು ಗಂಗಾ ಸರಿತಾ ದಂಪತಿ ಪುತ್ರ) ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಂದನ್ ಗೌಡ (ಕುಣಿಗಲ್ ನ ಶಿವಣ್ಣ ಬಿ. ಎಂ ಮತ್ತು ಶೋಭಾ ದಂಪತಿ ಪುತ್ರ), ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿನೀಶ್ಕುಮಾರ್ (ಹೆಗ್ಗದದೇವನಕೋಟೆಯ ಸುರೇಶ್ ಮತ್ತು ಮೀನಾಕ್ಷಿ ದಂಪತಿ ಪುತ್ರ) ಹಾಗೂ ಪ್ರಥಮ ಪಿಯುಸಿ ಕಲಾ ವಿಭಾಗದ ಅರುಣ್ಕುಮಾರ್(ಪುತ್ತೂರಿನ ರಮೇಶ ಎ ಎಂ ಮತ್ತು ಲಲಿತಾ ದಂಪತಿ ಪುತ್ರ) ಕಂಚಿನ ಪದಕವನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ರಕ್ಷಾ ಬಂಧನದಂದು ಸಹೋದರನನ್ನು ಭೇಟಿಯಾಗಿ ರಾಖಿ ಕಟ್ಟಲು ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ವರದಿಯಾಗಿದೆ. ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆಘಾತಕಾರಿ ಘಟನೆ ಬಿಹಾರದ ಸಿವಾನ್ನಲ್ಲಿ ನಡೆದಿದೆ.
ಹಬ್ಬ ಆಚರಿಸಲು ಬಾಲಕಿ ತನ್ನ ಸಹೋದರನ ಮನೆಗೆ ತೆರಳುತ್ತಿದ್ದಾಗ ಈ ಅಮಾನುಷ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗದ ಕಾರಣ ಘಟನೆ ಸ್ಥಳೀಯ ಜನರಲ್ಲಿ ಆಘಾತ ಮತ್ತು ಆಕ್ರೋಶವನ್ನು ಉಂಟುಮಾಡಿದೆ.
ಮಾಹಿತಿಯ ಪ್ರಕಾರ, ಹುಡುಗಿ ತನ್ನ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಳು. ಈ ವೇಳೆ ನಾಲ್ವರು ಆಕೆಯನ್ನು ಅಪಹರಿಸಿ ರಸ್ತೆ ಬದಿಯ ಪೊದೆಗೆ ಕರೆದೊಯ್ದಿದ್ದಾರೆ. ಬಾಲಕಿ ಕಿರುಚಾಡುತ್ತಲೇ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯ ಕಿರುಚಾಟ ಕೇಳಿ ಕಾರನ್ನು ಚಲಾಯಿಸುತ್ತಿದ್ದ ದಾರಿ ಹೋಕನೊಬ್ಬ ಅಪರಾಧ ನಡೆದ ಸ್ಥಳಕ್ಕೆ ಬಂದು ಆರೋಪಿ ಪರಾರಿಯಾಗಿದ್ದಾನೆ.
ಚಾಲಕ ಬಾಲಕಿಗೆ ಸಹಾಯ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಕೆಗೆ ಗಾಯಗಳಾಗಿವೆ.
ಭಗವಾನ್ ಪುರ್ ಪೊಲೀಸ್ ಠಾಣಾಧಿಕಾರಿ ಪಂಕಜ್ ಕುಮಾರ್ ಪ್ರಕಾರ, ಪೊಲೀಸರು ಬಾಲಕಿಗೆ ವೈದ್ಯಕೀಯ ಚಿಕಿತ್ಸೆ ನೀಡಿದರು. ಸಂತ್ರಸ್ತೆಯ ಹೇಳಿಕೆಯ ಮೇರೆಗೆ ಪವನ್ ಕುಮಾರ್, ಅಂಕಿತ್ ಕುಮಾರ್, ಇಮಾಮುದ್ದೀನ್ ಮತ್ತು ದಿನೇಶ್ ಕುಮಾರ್ ವಿರುದ್ಧ ಶನಿವಾರ ಎಫ್ಐಆರ್ ದಾಖಲಿಸಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಸಂತ್ರಸ್ತೆ ತನ್ನ ತಾಯಿಯ ಮಾವನ ಮನೆಯಲ್ಲಿ ವಾಸಿಸುತ್ತಾಳೆ. ಘಟನೆಯ ನಂತರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ. ಗ್ರಾಮಸ್ಥರ ಪ್ರಕಾರ, ಇತ್ತೀಚಿನ ದಿನಗಳಲ್ಲಿ ನಿರ್ಜನ ರಸ್ತೆಗಳಲ್ಲಿ ಮಾದಕ ವ್ಯಸನಿಗಳು ಮತ್ತು ಮದ್ಯಪಾನ ಮಾಡುವವರ ಗುಂಪು ಇರುತ್ತದೆ.
ಅವರು ಶಾಲೆಗೆ ಹೋಗುವ ಹುಡುಗಿಯರು ಸೇರಿದಂತೆ ಯಾವುದೇ ಸಂದರ್ಶಕರಿಗೆ ಕಿರುಕುಳ ನೀಡಬಹುದು. ಆದರೆ ಆಡಳಿತ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮದ್ಯಪಾನ ನಿಷೇಧದ ಬಳಿಕ ಯುವಜನತೆ ಮಾದಕ ವ್ಯಸನಕ್ಕೆ ಸಿಲುಕಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸೌರವ್ ಗಂಗೂಲಿ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾದರು, ರಾಜಕೀಯದಲ್ಲಿ ದಾದಾ ಇನ್ನಿಂಗ್ಸ್ ಬಗ್ಗೆ ದೊಡ್ಡ ಊಹಾಪೋಹ ಎದ್ದಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳನ್ನು ಸ್ವಾಗತಿಸಲು ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಉಪಸ್ಥಿತರಿದ್ದರು. ಆ ಸಮಾರಂಭದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಉಪಸ್ಥಿತರಿದ್ದರು. 2021ರ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ ಸೌರವ್ ಗಂಗೂಲಿ ರಾಜಕೀಯ ಸೇರುವ ಬಗ್ಗೆ ಭಾರೀ ಊಹಾಪೋಹಗಳು ಎದ್ದಿದ್ದವು. ಸೌರವ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರ ಸುತ್ತಲಿನ ರಾಜಕೀಯ ಊಹಾಪೋಹಗಳು ಇದ್ದಕ್ಕಿದ್ದಂತೆ ಕೊನೆಗೊಂಡಿತ್ತು.
2022 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೌರವ್ ಬಗ್ಗೆ ಮತ್ತೊಮ್ಮೆ ಊಹಾಪೋಹಗಳು ಹೆಚ್ಚುತ್ತಿವೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಭೆಯ ಸುತ್ತ ರಾಜಧಾನಿಯ ರಾಜಕೀಯ ವಲಯದಲ್ಲಿ ಈಗ ಊಹಾಪೋಹಗಳು ಹೆಚ್ಚಾಗಿವೆ.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಭಾರತದ ಕ್ರೀಡಾಪಟುಗಳನ್ನು ಸ್ವಾಗತಿಸಲು ಶುಕ್ರವಾರ ಮಧ್ಯಾಹ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಉಪಸ್ಥಿತರಿದ್ದರು. ಆ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಉಪಸ್ಥಿತರಿದ್ದರು. ಅಷ್ಟೇ ಅಲ್ಲ, ಆ ಸಂದರ್ಭದಲ್ಲಿ ಸೌರವ್ ಮೋದಿ-ಶಾ ಜೊತೆ ಮಾತನಾಡಿದ್ದು ಕೂಡ ಗೊತ್ತಾಗಿದೆ.
ಪ್ರಸ್ತುತ ಸೌರವ್ ಐಸಿಸಿ ಅಧ್ಯಕ್ಷರಾಗುವ ರೇಸ್ನಲ್ಲಿದ್ದಾರೆ ಎಂಬುದನ್ನು ಗಮನಿಸಬೇಕು. ಈ ವಾತಾವರಣದಲ್ಲಿ ಸೌರವ್ ಮೋದಿ-ಶಾ ಜೊತೆಗಿನ ಮಾತುಕತೆಯ ವಿಷಯವು ಕ್ರಿಕೆಟ್ ಆಡಳಿತದ ವಿಷಯಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾಗಿದೆ. ಅಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಕೂಡ ಉಪಸ್ಥಿತರಿದ್ದರು. ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಅನುರಾಗ್ ಸಾಕಷ್ಟು ಪ್ರಭಾವ ಹೊಂದಿದ್ದಾರೆ.
ಬಿಸಿಸಿಐನಲ್ಲಿ ಸೌರವ್ ಮತ್ತು ಅಮಿತ್ ಅವರ ಪುತ್ರ ಜೈ ಶಾ ಅವರ ಅವಧಿ ಈಗಾಗಲೇ ಮುಗಿದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ಮಂಡಳಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ವಾತಾವರಣದಲ್ಲಿ ಕ್ರಿಕೆಟ್ ಆಡಳಿತದ ಬಗ್ಗೆ ಬಿಜೆಪಿಯ ಉನ್ನತ ನಾಯಕರು ಸೌರವ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ವರದಿಯೊಂದು ಹೇಳುತ್ತದೆ. ಆದರೆ, ಈ ಬಗ್ಗೆ ಬಿಸಿಸಿಐ ಅಧ್ಯಕ್ಷರಾಗಲಿ, ಬಿಜೆಪಿಯಾಗಲಿ ಏನನ್ನೂ ಹೇಳಿಲ್ಲ. ಆದರೆ, ಸೌರವ್ ಬಿಸಿಸಿಐ ಅಧ್ಯಕ್ಷರಾಗಿ ಉಳಿದರೆ, ಅವರು ಐಸಿಸಿ ಅಧ್ಯಕ್ಷರಾಗಲು ಸಾಧ್ಯವಿಲ್ಲ.
ಅವರು ತಮ್ಮ ಅವಧಿಯ ಕೊನೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗದಿದ್ದರೂ, ಅವರು ಐಸಿಸಿ ಮುಖ್ಯಸ್ಥರಾಗುವ ರೇಸ್ನಿಂದ ಹೊರಗುಳಿಯುತ್ತಾರೆ. ಈ ವಾತಾವರಣದಲ್ಲಿ, ಜಯ್ ಶಾ ಕೈಯಲ್ಲಿ ಅಧಿಕಾರದೊಂದಿಗೆ ಸೌರವ್ ಐಸಿಸಿಯಲ್ಲಿ ಏನು ಮಾಡುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ಇವೆ.
ಇವರ ಭೇಟಿಯ ನಿಜವಾದ ಉದ್ದೇಶ ಭವಿಷ್ಯದಲ್ಲಿ ನಮಗೆ ತಿಳಿದುಬರಲಿದೆ. ಆ ಉದ್ದೇಶ ಏನೇ ಇದ್ದರೂ ಈ ವಿಷಯ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಳಮಳ ಉಂಟುಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ರಾಷ್ಟ್ರದ ಉನ್ನತ ನಾಯಕರ ಜೊತೆ ದಾದಾ ಭೇಟಿಯಿಂದ ದೀದಿ ಎದೆಯಲ್ಲಿ ದಡಬಡ ಶುರುವಾಗಿರಬಹುದು ಎಂಬುದು ಜನರ ಅನಿಸಿಕೆ.
ಪರಿಸರಕ್ಕೆ ಆಗುತ್ತಿರುವ ಹಾನಿಯನ್ನುಅರಿತು ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದಾದು ಅತ್ಯಗತ್ಯ.ಮಾನವ ಪರಿಸರದ ಶಿಶು. ಪರಿಸರವಿಲ್ಲದೆ ಮಾನವನ ಜೀವನಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಕಾಪಾಡಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ವಿವೇಕಾನಂದ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಡಾ. ಶ್ರೀಶ ಕುಮಾರ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ಮತ್ತು ಇಕೋ ಕ್ಲಬ್ ವತಿಯಿಂದ ಆಯೋಜಿಸಲಾದ ಪರಿಸರ ಸಂರಕ್ಷಣೆಯಲ್ಲಿ ನಮ್ಮ ಹೊಣೆ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಜಗತ್ತಿನಲ್ಲಿ ಮಾನವನು ಅಭಿವೃದ್ಧಿ ಎಂಬ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಇದರಿಂದ ಪ್ರಾಣಿಗಳ ಜೀವರಕ್ಷಣೆಗೆ ಹಾನಿಯುಂಟಾಗುತ್ತಿದೆ. ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ, ಅರಣ್ಯನಾಶ ಹೀಗೆ ಹತ್ತು ಹಲವು ಸಮಸ್ಯೆಗಳು ಇಂದು ಪರಿಸರದಲ್ಲಿ ಉಂಟಾಗಿದೆ. ಇದಕ್ಕೆಲ್ಲ ಮೂಲ ಕಾರಣ ಅಧುನೀಕತೆ, ನಗರಗಳ ಬೆಳವಣಿಗೆ, ಹೆಚ್ಚುತ್ತಿರುವ ಕೈಗಾರಿಕೆಗಳು, ವಿಜ್ಞಾನ -ತಂತ್ರಜ್ಞಾನದ ಅಭಿವೃದ್ಧಿ ಎಂಬ ಹಲವು ಹೆಸರಿನಲ್ಲಿ ಮಾನವನು ಮಾಡುವ ಪರಿಸರ ನಾಶ.
ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತರಾಗಬೇಕು.ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ. ಹೀಗಾಗಿ ಸ್ವಚ್ಛ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ.ಕೆ.ಎನ್ ಸುಬ್ರಹ್ಮಣ್ಯ ಮಾತನಾಡಿ ನಾವು ಹುಟ್ಟಿದಾಗ ಕಂಡ ಪರಿಸರಕ್ಕೂ ಈಗ ನಾವು ಕಾಣುತ್ತಿರುವ ಪರಿಸರಕ್ಕೂ ಅಜಗಜಾಂತರ ವ್ಯತ್ಯಾಸ ಇದೆ.ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಇಂದಿನ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಈ ದೃಷ್ಟಿಯಲ್ಲಿ ಇಂದಿನ ಈ ಕಾರ್ಯಕ್ರಮ ಹಾಗೂ ಇದರ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು, ಪಿಯುಸಿಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿ ಇದೀಗ ಭಾರತೀಯ ನೌಕಾಪಡೆಯಲ್ಲಿ ತರಬೇತಿ ಪಡೆದು, ಭಾರತೀಯ ನೌಕ ಸೇನೆಯಲ್ಲಿ ಸೇವೆ ಸಲ್ಲಿಸಲಿರುವ ಹಿರಿಯ ವಿದ್ಯಾರ್ಥಿಗಳಾದ ಹೃತಿಕ್ (ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ಪಟ್ಟೆ ಮತ್ತು ಶ್ರೀಮತಿ ಹರಿಣಾಕ್ಷಿ ದಂಪತಿ ಪುತ್ರ) , ಚರಣ್ (ನಿವೃತ್ತ ಸೇನಾನಿ ಸಂಪ್ಯ ನಿವಾಸಿ ಜಯರಾಮ ಗೌಡ ಮತ್ತು ವಾರಿಜ ದಂಪತಿಗಳ ಪುತ್ರ) ಇವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಮುರಳಿ ಪಿ.ಜಿ ಉಪಸ್ಥಿತರಿದ್ದರು. ಉಪನ್ಯಾಸಕಿ ದೀಕ್ಷಿತ ಕಾರ್ಯಕ್ರಮ ನಿರೂಪಿಸಿ ಅತಿಥಿಗಳನ್ನು ಸ್ವಾಗತಿಸಿ ಸ್ನೇಹ ವಂದಿಸಿದರು.
ಕೆಲವೊಮ್ಮೆ ಬಿಗ್ ಬಾಸ್ ಮನೆ ಪ್ರಜ್ಞಾವಂತರಿಗೆ ಮುಜುಗರ ಹುಟ್ಟಿಸುವ ಘಟನೆಗಳಿಂದ ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಇದೆಲ್ಲಾ ಪೂರ್ವನಿಯೋಜಿತ ಚಿತ್ರೀಕರಣ (ಶೂಟಿಂಗ್ ) ಎಂದು ಅನಿಸುತ್ತದೆ. ಆದರೆ ಇದೆಲ್ಲದರ ನಡುವೆಯೂ ಬಿಗ್ ಬಾಸ್ ಜನಪ್ರಿಯತೆ ಮಾತ್ರ ಹೆಚ್ಚುತ್ತಾ ಹೋಗುತ್ತದೆ.
ಆದರೂ ಇತ್ತೀಚೆಗಿನ ಸೋನು ಗೌಡ ಅವರ ಹೇಳಿಕೆಗಳು ವೀಕ್ಷಕರಿಗೆ ಇರುಸುಮುರುಸನ್ನು ಉಂಟುಮಾಡಿದೆ.ಮೊನ್ನೆಯ ವೀಕ್ ಎಂಡ್ ಕಾರ್ಯಕ್ರಮದಲ್ಲಿ ನಟಿ ಸೋನು ಗೌಡ ಮೂಡ್ ಇಲ್ಲದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗಾಗಿ ಸೋನು ಶ್ರೀನಿವಾಸ್ ಗೌಡ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ.
3 ದಿನಗಳಿಂದ ಸ್ನಾನ ಮಾಡಿಲ್ಲ ಎಂಬ ಸತ್ಯವನ್ನು ಸೋನು ಗೌಡ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ್ ಮೊದಲ ವಾರ ಪಂಚಾಯತಿ ನಡೆಸಿದ್ದಾರೆ. ಈ ವೇಳೆ ಹಲವು ವಿಷಯಗಳ ಚರ್ಚೆ ನಡೆದಿದೆ. ಈ ಸಂಚಿಕೆ ಬಹಳಷ್ಟು ತಮಾಷೆಯ ಪ್ರಸಂಗಗಳಿಗೆ ಸಾಕ್ಷಿಯಾಯಿತು. ಈ ರಿಯಾಲಿಟಿ ಶೋನಲ್ಲಿ ಸೋನು ಶ್ರೀನಿವಾಸ್ ಗೌಡ ಹೆಚ್ಚು ಫೇಮಸ್ ಆಗಿದ್ದಾರೆ.
ತಮ್ಮ ಮುಕ್ತ ಮಾತುಗಳಿಂದ ಗಮನ ಸೆಳೆಯುತ್ತಿದ್ದಾರೆ. ಹಲವು ವಿಷಯಗಳನ್ನು ಮುಕ್ತವಾಗಿ ಹಂಚಿಕೊಂಡರು. ಆ ಮೂಲಕ ಬಿಗ್ ಬಾಸ್ ಕನ್ನಡ ಒಟಿಟಿ ಸೋನು ಗೌಡ ಶೋನಲ್ಲಿ ಚರ್ಚೆಯಾಗುತ್ತಿದೆ. ಆಶ್ಚರ್ಯವೆಂದರೆ, ‘ಮೂಡ್ ಬರದಿದ್ದರೆ ಮೂರು ದಿನ ಸ್ನಾನ ಮಾಡುವುದಿಲ್ಲ’ ಎಂದರು. ಇದನ್ನು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕರು.
‘ಬಿಗ್ ಬಾಸ್ ಕನ್ನಡ ಒಟಿಟಿ’ ಕಾರ್ಯಕ್ರಮದಲ್ಲಿ ಒಂದು ವಾರ ಕಳೆದಿದೆ. ವಾರದ ಪಂಚಾಯತಿಯಲ್ಲಿ ಸುದೀಪ್ ಸ್ಪರ್ಧಿಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ‘ಈ ಮನೆಯಲ್ಲಿ ತಮ್ಮ ವಸ್ತುಗಳನ್ನು ಯಾರು ಗಲೀಜು ಮಾಡುತ್ತಾರೆ?’ ಎಂದು ಕೇಳುತ್ತಿದ್ದಂತೆಯೇ ಹಲವರ ಹೆಸರುಗಳು ಹೊರಬಿದ್ದವು, ಈ ವೇಳೆ ಸ್ನಾನದ ಪ್ರಸ್ತಾಪವೂ ಆಯಿತು. ‘ಸೋನು ಗೌಡ ಸ್ನಾನ ಮಾಡುವುದಿಲ್ಲ’ ಎಂದು ಸನ್ಯಾ ಅಯ್ಯರ್ ಆರೋಪಿಸಿದ್ದಾರೆ.
‘ಹೌದು, ನಾನು ಇವತ್ತು ಸ್ನಾನ ಮಾಡಿಲ್ಲ’ ಎಂದು ಸುದೀಪ್ ಬಳಿ ಒಪ್ಪಿಕೊಂಡ ಸೋನು ಗೌಡ. ‘ಇಲ್ಲಿನ ಅನೇಕರು ಸ್ನಾನದ ಬಗ್ಗೆ ನಾಟಕ ಮಾಡುತ್ತಾರೆ. ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಕೆಲವೊಮ್ಮೆ ನಮ್ಮ ಮನೆಯಲ್ಲಿ ಮೂಡ್ ಇರುವುದಿಲ್ಲ ಹಾಗಾಗಿ ಮೂರು ದಿನಕ್ಕೊಮ್ಮೆ ಸ್ನಾನ ಮಾಡುತ್ತೇವೆ ಎಂದು ಸೋನು ಹೇಳಿದ್ದಾರೆ. ಅವನ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕರು.
ಸೋನು ಶ್ರೀನಿವಾಸ್ ಗೌಡ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಈ ವೇದಿಕೆಯಲ್ಲಿ ಅವಕಾಶ ಸಿಕ್ಕಿದೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಮೊದಲ ವಾರದಲ್ಲೇ ಅವರು ಎಲಿಮಿನೇಟ್ ಆಗಬಹುದು ಎಂದು ಕೆಲವರು ಭವಿಷ್ಯ ನುಡಿದಿದ್ದರು. ಆದರೆ ವೀಕ್ಷಕರಿಂದ ಉತ್ತಮ ವೋಟ್ ಪಡೆದಿದ್ದರಿಂದ ಮೊದಲ ವಾರ ಸೇಫ್ ಆಗಿದ್ದಾರೆ. ಈಗ ಸ್ನಾನಕ್ಕೆ ಟ್ರೋಲ್ ಆಗುತ್ತಿದ್ದಾರೆ.
ಇದಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಅವರು ತಮ್ಮದು ಎಂದು ಹೇಳಲಾಗುತ್ತಿದ್ದ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಅಶ್ಲೀಲ ವೀಡಿಯೋದ ಕುರಿತಾಗಿಯೂ ಮಾತಾಡಿದ್ದರು. ಸಿಗರೇಟ್ ಎಳೆಯುವ ಹವ್ಯಾಸದ ಕುರಿತಾಗಿಯೂ ಮಾತಾಡಿದ್ದರು.. ಈ ಎಲ್ಲಾ ಕಾರಣಗಳಿಂದ ಅವರು ಹೆಚ್ಚು ಟೀಕೆಗೆ ಗುರಿಯಾಗಿದ್ದರು.
ಮನೆಯ ಹರೆಯದ ಹೆಣ್ಣುಮಕ್ಕಳೊಡನೆ ಮತ್ತು ದೊಡ್ಡ ಮಕ್ಕಳೊಡನೆ ಕುಳಿತು ಬಿಗ್ ಬಾಸ್ ನೋಡುವ ಮೊದಲು ಇದನ್ನೆಲ್ಲಾ ಆಲೋಚಿಸಬೇಕಾಗುತ್ತದೆ ಎಂಬುದು ವೀಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಸ್ವಾತಂತ್ರ್ಯ ದಿನಾಚರಣೆ : ವಿದ್ಯೋದಯ ಸಮೂಹ ಸಂಸ್ಥೆಗಳು, ಉಡುಪಿ ವಿದ್ಯೋದಯ ಟ್ರಸ್ಟ್(ರಿ.)ನ ಅಂಗಸಂಸ್ಥೆಗಳಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯೋದಯ ಪಬ್ಲಿಕ್ ಸ್ಕೂಲ್, ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ,ವಿದ್ಯೋದಯ ವಿದ್ಯಾಲಯ, ಶ್ರೀಕೃಷ್ಣ ಶಿಶುಮಂದಿರಗಳ ಧ್ವಜಾರೋಹಣವನ್ನು ಪ್ರೊ. ಹೇರಂಜೆ ಕೃಷ್ಣ ಭಟ್, ನಿವೃತ್ತ ನಿರ್ದೇಶಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಇವರು ನೆರವೇರಿಸಿ ವಿದಾರ್ಥಿಗಳನ್ನುದ್ದೇಶಿಸಿ ಸ್ವಾತಂತ್ರ್ಯದ ಮಹತ್ವವನ್ನು ತಿಳಿಸಿದರು.
ವಿದ್ಯೋದಯ ಪದವಿ ಪೂರ್ವ ಕಾಲೇಜು ಮತ್ತು ಶ್ರೀ ಅನಂತೇಶ್ವರ ಹಿರಿಯ ಪ್ರಾಥಮಿಕ ಶಾಲೆಗಳ ಧ್ವಜಾರೋಹಣವನ್ನುಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀ ಎ.ಎಲ್. ಛಾತ್ರ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ಶ್ರೀ ಎನ್. ನಾಗರಾಜ್ ಬಲ್ಲಾಳ್, ಕಾರ್ಯದರ್ಶಿ ಶ್ರೀ ಕೆ. ಗಣೇಶ್ ರಾವ್, ಕೋಶಾಧಿಕಾರಿ ಶ್ರೀ ಪದ್ಮರಾಜ್ ಆಚಾರ್ಯ, ಟ್ರಸ್ಟ್ ಜೊತೆ ಕಾರ್ಯದರ್ಶಿ ಶ್ರೀಮತಿ ರೂಪಾ ಬಲ್ಲಾಳ್, ಸದಸ್ಯರುಗಳಾದ ಯು. ದಾಮೋದರ್ ಮತ್ತು ರಘುರಾಮ ಆಚಾರ್ಯ; ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯಿನಿಯರು, ಮತ್ತು ಸಿಬ್ಬಂದಿವರ್ಗ ಭಾಗವಹಿಸಿದರು.
ಸ್ವಾತಂತ್ರ್ಯ ದಿನಾಚರಣೆ : ಓಂ ವಿಹಾರ, ಕುಂಜಿಬೆಟ್ಟು
ಪುರುಷೋತ್ತಮ ನಗರದ ಓಂ ವಿಹಾರ ವಸತಿ ಸಮುಚ್ಚಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ನಿವೃತ್ತ ಸೇನಾನಿ ಶ್ರೀ ಬಾಲಚಂದ್ರ ಇವರ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾಳು ಶ್ರೀಮತಿ ವಾಣಿ ಬಾಲಚಂದ್ರ ಧ್ವಜಾರೋಹಣವನ್ನು ನೆರವೇರಿಸಿದರು.
ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪನಾ ಅಧಿಕಾರಿ ಶ್ರೀ ಸಿ.ಕೆ. ಪೈ ಸ್ವಾತಂತ್ರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮವನ್ನು ಶ್ರೀ ಸುಶೀರ್ ರಾವ್ ಕೊಡವೂರು ಮತ್ತು ಮಂಜುನಾಥ್ ನಿರ್ವಹಿಸಿದರು.