Thursday, July 30, 2026
Home Blog Page 163

ನಾರಾವಿಯ ಯುವತಿ ಕೆರೆಗೆ ಬಿದ್ದು ಸಾವು – ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ಬಿದ್ದ 23ರ ಹರೆಯದ ಯುವತಿ

ಅವಿವಾಹಿತ ಯುವತಿಯೊಬ್ಬಳು ತನ್ನ ಮನೆಯ ಸಮೀಪವಿರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನಿಧನಹೊಂದಿದ್ದಾಳೆ.

ಕಾರ್ಕಳ ಸಮೀಪದ ನಾರಾವಿ ಗ್ರಾಮ ಪಂಚಾಯಿತ್ ಸದಸ್ಯ ಹಾಗೂ ಅರಸೀಕಟ್ಟೆ ನಿವಾಸಿ ರಾಜವರ್ಮ ಜೈನ್ ಅವರ ಪುತ್ರಿ ಸುರಕ್ಷಾ ಜೈನ್ (23) ಮೃತ ಯುವತಿ.ಕಳೆದ ವರ್ಷವಷ್ಟೇ ರಕ್ಷಾ ಜೈನ್ ಡಿಗ್ರಿ ಮುಗಿಸಿ ಮನೆಯಲ್ಲಿದ್ದರು.

  ಸುರಕ್ಷಾ ಜೈನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದಳು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದಾಳೆ.ರಕ್ಷಣೆಗೆಂದು ಆಕೆಯ ಸಹೋದರ ತಕ್ಷಣ ಕೆರೆಗೆ ಹಾರಿದರೂ ಆಕೆಯನ್ನು ರಕ್ಷಿಸಲಾಗಲಿಲ್ಲ.

ಮೃತ ಸುರಕ್ಷಾ ಜೈನ್ ಅವರ ತಂದೆ ರಾಜವರ್ಮ ಜೈನ್ ಕೂಡ ಆಘಾತದಿಂದ ಕುಸಿದು ಬಿದ್ದಿದ್ದು, ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಮಾನಸಿಕ ಸಶಕ್ಷತೆ ಬಹಳ ಮುಖ್ಯ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ. ವಿ. ನಾರಾಯಣ

ಮಾನಸಿಕವಾಗಿ ಸಶಕ್ತರಾಗುವ ಮೂಲಕ ಹಿರಿಯರು ತಮ್ಮ ಜ್ಞಾನವನ್ನು ಸ್ವಯಂ ವೃದ್ದಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕೆಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊಫೆಸರ್ ಎ.ವಿ ನಾರಾಯಣ ತಿಳಿಸಿದರು.
ಬಿ.ಸಿ.ರೋಡ್ ಕೈ ಕಂಬದ ಶ್ರಮ್ಯಾ ಪ್ರಾಸ ಇಲ್ಲಿ ಜರಗಿದ ಪ್ರತಿಷ್ಠಾನದ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಐವತ್ತು ವಯೋಮಾನದ ಬಳಿಕ ವ್ಯಕ್ತಿಯೋರ್ವನು ಪಕ್ವತೆಯ ಮಟ್ಟ ತಲುಪಿರುತ್ತಾನೆ. ಜೀವನದ ಅನುಭವಗಳು ಪರಸ್ಪರ ಭಿನ್ನವಾಗಿದ್ದರೂ ಅವುಗಳ ಹಂಚಿಕೆಗೆ ವೇದಿಕೆ ಕಲ್ಪಿಸಿದ ಹಿರಿಯರ ಸೇವಾ ಪ್ರತಿಷ್ಠಾನವು ಸೂತ್ರ ರೂಪದಲ್ಲಿ ಕೆಲವು ಚಟುವಟಿಕೆಗಳನ್ನು ಈಗಾಗಲೇ ನಡೆಸಿದ್ದು ಮಾದರಿಯಾಗಿದೆಯೆಂದು ಮುಖ್ಯ ಅತಿಥಿ ಪ್ರೊ. ರಾಜಮಣಿ ರಾಮ ಕುಂಜ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕೈಯಾರು ನಾರಾಯಣ ಭಟ್ ಎಲ್ಲಾ ತಾಲೂಕು ಘಟಕಗಳು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿ ಮುಂದಿನ ಯೋಜನೆಗಳ ಮಾಹಿತಿ ನೀಡಿದರು.

ಮಂಗಳೂರು ದಕ್ಷಿಣ ಘಟಕದ ಪದಗ್ರಹಣ,ಹಿರಿಯ ಸಮಾವೇಶ ಸಮಾರಂಭದ ಆಮಂತ್ರಣವ ಪತ್ರಿಕೆಯನ್ನು ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.


ಮಂಗಳೂರು ಘಟಕದ ಪದಾಧಿಕಾರಿಗಳಾದ ಭರತ್. ಕೆ, ಬಾಲಕೃಷ್ಣ ಶೆಟ್ಟಿ, ಗಣೇಶ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ, ಭಾಸ್ಕರ ಬಾರ್ಯ, ಬಾಲಕೃಷ್ಣ .ಜಿ, ರಮಾಶಂಕರ .ಸಿ, ಸೋಮಪ್ಪ ಬಂಗೇರ, ಸುಬ್ರಾಯ ಮಡಿವಾಳ, ಸೀತಾರಾಮ ಭಟ್, ಸಿ.ವಿ ಶಂಕರ್ ,ಅನಂತರಾಮ್ ಹೇರ್ಳೆ , ಚಂದ್ರಶೇಖರ ಆಳ್ವ ಪಡುಮಲೆ ಮೊದಲಾದವರು ಪ್ರತಿಷ್ಠಾನದ ಬಲವರ್ಧನೆಗೆ ಸೂಚನೆಗಳನ್ನು ನೀಡಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಗೈದರು.


ಪ್ರತಿಷ್ಠಾನದ ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಪುತ್ತೂರು ಸ್ವಾಗತಿಸಿ ದುಗ್ಗಪ್ಪ. ಎನ್ ವಂದಿಸಿದರು. ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಶ್ರಮ್ಯಾ ಪ್ರಾಸದ ಶ್ರೀಮತಿ ಭಾರತಿ ರಾಮಕುಂಜ, ಮೇಧಾ ಮತ್ತು ಧಾತ್ರಿ ಕಾರ್ಯಕ್ರಮದ ಸಂಯೋಜನೆಗೆ ಸಹಕಾರ ನೀಡಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ - 9164828688 ಅಥವಾ ಈ-ಮೈಲ್ ಮಾಡಿ - [email protected]

ನೀರು ತುಂಬಿದ ಹೊಂಡದಲ್ಲಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗಳು ಮುಳುಗಿ ಸಾವು

ತೃಶ್ಯೂರ್ : ಶನಿವಾರ ಇಲ್ಲಿನ ಮಾಳದ ಪೂಪ್ಪತ್ತಿ ಎಂಬಲ್ಲಿ ಭತ್ತದ ಗದ್ದೆಯಲ್ಲಿ ನೀರಾವರಿಗಾಗಿ ಮಾಡಿದ ನೀರು ತುಂಬಿದ ಹೊಂಡದಲ್ಲಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗಳು ಮುಳುಗಿ ಸಾವನ್ನಪ್ಪಿದ್ದಾರೆ. 

ಮೃತರನ್ನು ತೃಶ್ಯೂರ್ ಸಮೀಪದ  ಮಾಲಾ ಪಲ್ಲಿಪುರಂ ಸ್ಥಳೀಯರಾದ ಜಿಯೋ ಅವರ ಪತ್ನಿ ಮೇರಿ ಅನು ಮತ್ತು ಅವರ ಮಗಳು ಆಗ್ನಾ ಎಂದು ಗುರುತಿಸಲಾಗಿದೆ. 

ನೀರಿನಲ್ಲಿ ಬಿದ್ದಿದ್ದ ತಮ್ಮ ಪಾದರಕ್ಷೆಗಳನ್ನು ಹೆಕ್ಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಇಂದು ‘ಕರ್ಣಾವಸಾನ’ ತಾಳಮದ್ದಳೆ – ಸುಣ್ಣಂಬಳ, ಉಜಿರೆ, ಕಲ್ಚಾರ್, ರಂಗ ಭಟ್ಟರಿಂದ ಖಾಡಾಖಾಡಿ ಮಾತಿನ ಸಮರದ ನಿರೀಕ್ಷೆಯಲ್ಲಿ ತಾಳಮದ್ದಳೆ ರಸಿಕರು

ಇಂದು ಆದಿತ್ಯವಾರ ಮಧ್ಯಾಹ್ನ 1.30 ರಿಂದ ಕಾಸರಗೋಡು, ಬದಿಬಾಗಿಲು ಎಂಬಲ್ಲಿರುವ ಹವ್ಯಕ ಸಭಾಭವನದಲ್ಲಿ ‘ಕರ್ಣಾವಸಾನ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ತಾಳಮದ್ದಳೆ ರಂಗದ ಸ್ಟಾರ್ ಕಲಾವಿದರು ಇದರಲ್ಲಿ ಭಾಗವಹಿಸುತ್ತಿರುವುದರಿಂದ ಅರ್ಥಧಾರಿಗಳಿಂದ ಖಡಕ್ ಮಾತಿನ ಸಮರವನ್ನು ನಿರೀಕ್ಷಿಸಲಾಗಿದೆ ಎಂದು ಕಲಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ವಿವರಗಳಿಗೆ ಕರಪತ್ರ ನೋಡಿ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

5 ವರ್ಷಗಳಿಂದ ಮಹಿಳೆಯ ಹೊಟ್ಟೆಯಲ್ಲಿ ಉಳಿದಿದ್ದ ಶಸ್ತ್ರಚಿಕಿತ್ಸೆಯ ಕತ್ತರಿ – ವೈದ್ಯರು ಮಾಡಿದ ಮಹಾ ಎಡವಟ್ಟು ಈಗ ತಿಳಿದದ್ದು ಹೇಗೆ? ಇಲ್ಲಿದೆ ರಿಯಲ್ ಸ್ಟೋರಿ

5 ವರ್ಷಗಳ ಹಿಂದೆ ಕೇರಳದ ಮಹಿಳೆಯ ಹೊಟ್ಟೆಯಿಂದ ಶಸ್ತ್ರಚಿಕಿತ್ಸೆಯ ಉಪಕರಣ ‘ಫೋರ್ಸ್ಪ್ಸ್’ ತೆಗೆಯಲು ವೈದ್ಯರು ‘ಮರೆತಿದ್ದರು, ಆದರೆ ಆ ಬಗ್ಗೆ ಇದೀಗ ತನಿಖೆ ಎದುರಿಸುತ್ತಿದ್ದಾರೆ.

ಕಳೆದ ಐದು ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ‘ಸೊಳ್ಳೆ ಅಪಧಮನಿ ಫೋರ್ಸ್ಪ್ಸ್’ ಅನ್ನು ತೆಗೆದುಹಾಕಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರು, ಸೆಪ್ಟೆಂಬರ್ 17 ರಂದು ಆಕೆಗೆ ಪುನಃ ಶಸ್ತ್ರಚಿಕಿತ್ಸೆ ನಡೆಸಿದರು.

ಐದು ವರ್ಷಗಳಿಂದ, ಹರ್ಷಿನಾ – (ಈಗ 30 ವರ್ಷ) ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಕಳೆದ ಆರು ತಿಂಗಳಿನಿಂದ ಅಸಹನೀಯವಾಗಿದ್ದ ಅವಳ ನೋವನ್ನು ನಿಗ್ರಹಿಸಲು ವೈದ್ಯರು ಬಲವಾದ ಪ್ರತಿಜೀವಕಗಳನ್ನು ಹಾಕಿದರು.

ಆಕೆ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಗೆ ಹೋದಾಗ, ಸ್ಕ್ಯಾನ್‌ನಲ್ಲಿ ಆಕೆಯ ಹೊಟ್ಟೆಯಲ್ಲಿ ಲೋಹದ ವಸ್ತು ಪತ್ತೆಯಾಗಿದೆ – 2017 ರಲ್ಲಿ ಕೊನೆಯ ಸಿಸೇರಿಯನ್ ನಂತರ ವೈದ್ಯರು ತೆಗೆದುಹಾಕಲು ಮರೆತಿದ್ದ ಜೋಡಿ ಫೋರ್ಸ್ಪ್ಸ್ ಆಕೆಯ ಹೊಟ್ಟೆಯಲ್ಲಿ ಕಂಡುಬಂತು.

ಕಳೆದ ಐದು ವರ್ಷಗಳಿಂದ ಆಕೆಯ ಹೊಟ್ಟೆಯಲ್ಲಿದ್ದ ‘ಸೊಳ್ಳೆ ಅಪಧಮನಿ ಫೋರ್ಸ್ಪ್ಸ್’ ಅನ್ನು ತೆಗೆದುಹಾಕಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ವೈದ್ಯರು, ಸೆಪ್ಟೆಂಬರ್ 17 ರಂದು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿದರು. ಫೋರ್ಸ್ಪ್ಸ್ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವದ ನಾಳಗಳನ್ನು ಕ್ಲ್ಯಾಂಪ್ ಮಾಡಲು ಶಸ್ತ್ರಚಿಕಿತ್ಸಕರು ಬಳಸುವ ಕತ್ತರಿ ತರಹದ ಸಾಧನವಾಗಿದೆ.

ಮಹಿಳೆಯು 2017 ರಲ್ಲಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ತನ್ನ ಮೂರನೇ ಸಿಸೇರಿಯನ್ ಗೆ ಒಳಗಾಗಿದ್ದಳು. ಆಗ ಆ ಕತ್ತರಿ ಹೊಟ್ಟಯಲ್ಲಿ ಉಳಿದಿರಬಹುದು ಎಂದು ಭಾವಿಸಲಾಗಿದೆ. ಮೊದಲ ಇಬ್ಬರು ಮಕ್ಕಳ ಹೆರಿಗೆಗೆ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರು ಎಂದು ಅವರು ಹೇಳಿದರು.

ಈ ಬಗ್ಗೆ ವೈದ್ಯರ ವಿರುದ್ಧ ಕೇಸ್ ದಾಖಲಾಗಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಇಂದು ಯಕ್ಷಗಾನ ತಾಳಮದ್ದಳೆ – ಧರ್ಮೋ ರಕ್ಷತಿ ರಕ್ಷಿತಃ

ಇಂದು ಕಿನ್ನಿಕಂಬಳದಲ್ಲಿ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.

ಕಡಬ ಸಂಸ್ಮರಣಾ ಸಮಿತಿ ಮಂಗಳೂರು ಇವರು ಆಯೋಜಿಸಿದ  3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರಶಸ್ತಿ-2022 ಕಿನ್ನಿಕಂಬಳದಲ್ಲಿ ನಡೆಯಲಿದೆ. 

ಕಾರ್ಯಕ್ರಮವು ದಿನಾಂಕ 9-10-2022 ಆದಿತ್ಯವಾರ ಅಪರಾಹ್ನ 2-00 ಗಂಟೆಯಿಂದ ಶ್ರೀ ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳ ಕೈಕಂಬ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಈ ಬಾರಿಯ ಕಡಬದ್ವಯ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಮದ್ದಳೆಗಾರ ಶ್ರೀ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನೀಡಲಾಗುತ್ತದೆ.

ಎಲ್ಲಾ ಯಕ್ಷಗಾನ ಅಭಿಮಾನಿಗಳನ್ನು ಕಡಬ ಸಂಸ್ಕರಣಾ ಸಮಿತಿಯ ಕಾರ್ಯದರ್ಶಿ ಶ್ರೀ ಗಿರೀಶ್ ಕಾವೂರು ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.

ಕಾರ್ಯಕ್ರಮಗಳ ವಿವರಗಳನ್ನು ಕರಪತ್ರದಲ್ಲಿ ನೋಡಿ.

ಪೆರ್ಲ ಸಮೀಪ ನಲ್ಕದಲ್ಲಿ ಕಾರು ಅಪಘಾತ – ಗಾಯಾಳು ಆಸ್ಪತ್ರೆಗೆ

ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ನಲ್ಕ ಎಂಬಲ್ಲಿ ಕಾರು ಅಪಘಾತ ಸಂಭವಿಸಿದೆ.

ಪೆರ್ಲಕ್ಕೆ ಹೋಗುತ್ತಿದ್ದ ಮಾರುತಿ ಒಮ್ನಿ ನಲ್ಲ ಬಸ್ ನಿಲ್ದಾಣದ ಬೋರ್ಡ್ ಹಾಕಿದ್ದ ಕಂಬಕ ಗುದ್ದಿದೆ. ಕಾರಿನ‌ ಮುಂಭಾಗಕ್ಕೆ ಹಾನಿಯಾಗಿದ್ದು, ಕಾರು ಚಾಲಕ ಗಾಯಗೊಂಡಿದ್ದಾರೆ.

ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ನಾಗೇಶ್ ಎಂಬವರಿಗೆ ಸೇರಿದ ಕಾರು ಇದಾಗಿದ್ದು ಸ್ಥಳಕ್ಕೆ ಬದಿಯಡ್ಕ ಪೋಲೀಸರು ತೆರಳಿ ಪರಿಶೀಲನೆ ನಡೆಸಿದರು.

ಕಡಬ ಸಂಸ್ಮರಣಾ ಸಮಿತಿ ಮಂಗಳೂರು – 3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2022 ಮತ್ತು ಯಕ್ಷಗಾನ ಕಾರ್ಯಕ್ರಮ

ಕಡಬ ಸಂಸ್ಮರಣಾ ಸಮಿತಿ ಮಂಗಳೂರು – 3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಯಕ್ಷಗಾನ ಪ್ರಶಸ್ತಿ – 2022 ಮತ್ತು ಯಕ್ಷಗಾನ ಕಾರ್ಯಕ್ರಮ

ಕಡಬ ಸಂಸ್ಮರಣಾ ಸಮಿತಿ ಮಂಗಳೂರು ಇವರು ಆಯೋಜಿಸಿದ  3 ನೇ ವರ್ಷದ ಕಡಬದ್ವಯ ಸಂಸ್ಮರಣಾ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರಶಸ್ತಿ-2022 ಕಿನ್ನಿಕಂಬಳದಲ್ಲಿ ನಡೆಯಲಿದೆ. 

ಕಾರ್ಯಕ್ರಮವು ದಿನಾಂಕ 9-10-2022 ಆದಿತ್ಯವಾರ ಅಪರಾಹ್ನ 2-00 ಗಂಟೆಯಿಂದ ಶ್ರೀ ರಾಧಾಕೃಷ್ಣ ಭಜನಾ ಮಂದಿರ ಕಿನ್ನಿಕಂಬಳ ಕೈಕಂಬ ಮಂಗಳೂರು ಇಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಈ ಬಾರಿಯ ಕಡಬದ್ವಯ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಮದ್ದಳೆಗಾರ ಶ್ರೀ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ನೀಡಲಾಗುತ್ತದೆ.

ಎಲ್ಲಾ ಯಕ್ಷಗಾನ ಅಭಿಮಾನಿಗಳನ್ನು ಕಡಬ ಸಂಸ್ಕರಣಾ ಸಮಿತಿಯ ಕಾರ್ಯದರ್ಶಿ ಶ್ರೀ ಗಿರೀಶ್ ಕಾವೂರು ಮತ್ತು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಈ ಕಾರ್ಯಕ್ರಮಕ್ಕೆ ಆದರದಿಂದ ಸ್ವಾಗತಿಸಿದ್ದಾರೆ.

ಕಾರ್ಯಕ್ರಮಗಳ ವಿವರಗಳನ್ನು ಕರಪತ್ರದಲ್ಲಿ ನೋಡಿ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – yakshadeepa@yakshadeepa

ವೀಡಿಯೊ – ಹಿರಿಯ ಕಾರ್ಯಕರ್ತರ ಪಾದ ತೊಳೆದು ಗೌರವ ಸಲ್ಲಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ಬಿಜೆಪಿಯ ಹಿರಿಯ ಕಾರ್ಯಕರ್ತರಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ.

ಹಿರಿಯ ವ್ಯಕ್ತಿಗಳನ್ನು ಹಿಂದೂ ಸಂಪ್ರದಾಯದಂತೆ ಗೌರವಿಸಿದ  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದೇಶದ ಜನರಿಗೆ ಮಾದರಿಯ ಹೆಜ್ಜೆಯನ್ನು ಹಾಕಿಕೊಟ್ಟಿದ್ದಾರೆ.  

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಇಂದು ಗುವಾಹಟಿಯಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತರ ಪಾದ ತೊಳೆದಿದ್ದಾರೆ.  

ಹಿಂದೂ ಸಂಪ್ರದಾಯದಲ್ಲಿ ಕಾಲು ಹಿಡಿದು ಹಿರಿಯರಿಂದ ಆಶೀರ್ವಾದ ಬೇಡುವುದು ಮತ್ತು ಅತಿ ಹಿರಿಯರನ್ನು, ಸಾಧು, ಸಂತರನ್ನು ಕಾಲು ತೊಳೆದು ಪೂಜೆ ಮಾಡುವ ಸತ್ಸಂಪ್ರದಾಯವಿದೆ.

ಈ ಸಂಪ್ರದಾಯವನ್ನು ಪಾಲಿಸುವ ಮೂಲಕ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಉಳಿದವರಿಗೆ ಮಾದರಿಯಾಗಿದ್ದಾರೆ.  

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಲಕ್ಷುರಿ ಬಸ್ ಮತ್ತು ಟ್ರೈಲರ್ ಟ್ರಕ್ ಪರಸ್ಪರ ಡಿಕ್ಕಿ, ಹೊತ್ತಿ ಉರಿದ ಬಸ್ – 11 ಮಂದಿ ಬಲಿ,  21 ಮಂದಿ ಗಾಯ

ಐಷಾರಾಮಿ ಬಸ್ ಮತ್ತು ಟ್ರೈಲರ್ ಟ್ರಕ್ ಪರಸ್ಪರ ಡಿಕ್ಕಿ ಹೊಡೆದವು. ಪರಿಣಾಮ ಬೆಂಕಿ ಹೊತ್ತಿಕೊಂಡಿದೆ. ಇದುವರೆಗೆ 11 ಮಂದಿ ಬಲಿಯಾಗಿದ್ದಾರೆ.

ಯವತ್ಮಾಲ್‌ನಿಂದ 30 ಜನರು ಹೊರಟಿದ್ದರು ಮತ್ತು 19 ಜನರು ಮಧ್ಯದಲ್ಲಿ ಬಸ್ ಹತ್ತಿದರು. ಅವರನ್ನು ಗುರುತಿಸಲಾಗುತ್ತಿದೆ ಎಂದು ನಾಸಿಕ್ ಪೊಲೀಸ್ ಆಯುಕ್ತ ಜಯಂತ್ ನಾಯ್ಕನವರೆ ಹೇಳಿದ್ದಾರೆ.

ಮಹಾರಾಷ್ಟ್ರದ ನಾಸಿಕ್‌ನಿಂದ ಪುಣೆಗೆ ತೆರಳುತ್ತಿದ್ದ ಟ್ರಕ್‌ಗೆ ಯವತ್ಮಾಲ್‌ನಿಂದ ಮುಂಬೈಗೆ ಬರುತ್ತಿದ್ದ ಬಸ್ ಡಿಕ್ಕಿ ಹೊಡೆದ ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ನಾಸಿಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಪ್ರಕಟಿಸಲಾಗಿದೆ.

“ನನ್ನ ಮನೆಯ ಸಮೀಪವೇ ಘಟನೆ ನಡೆದಿದೆ. ಇಲ್ಲಿ ಭಾರಿ ವಾಹನಗಳು ಸಂಚರಿಸುತ್ತವೆ. ಘಟನೆಯ ನಂತರ ಬಸ್‌ಗೆ ಬೆಂಕಿ ತಗುಲಿ ಜನರು ಸುಟ್ಟು ಕರಕಲಾದರು. ನಾವು ನೋಡಿದೆವು ಆದರೆ ಏನೂ ಮಾಡಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ನಂತರ ಬಂದರು” ಎಂದು ನಾಸಿಕ್ ಬಸ್-ಟ್ರಕ್ ಡಿಕ್ಕಿಯ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರಿಕ್ಷಿಸಲಾಗುತ್ತಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]