Monday, May 11, 2026
Home Blog Page 160

ಕೇರಳದಲ್ಲಿ ನರಮಾಂಸ ಭಕ್ಷಕ – ಪತ್ತನಾಂತಿಟ್ಟ ನರಬಲಿ ಪ್ರಕರಣದಲ್ಲಿ ಇಬ್ಬರ ಮಾಂಸವನ್ನು ‘ಕರಿ’ ಮಾಡಿ ಸೇವಿಸಿದ ಶಫಿ – ರಾಕ್ಷಸರನ್ನು ನೆನಪಿಸಿದ ನೈಜ ಘಟನೆ 

ಪತ್ತನಂತಿಟ್ಟ ಎಳಂತೂರಿನಲ್ಲಿ ನಡೆದ ನರಬಲಿ ಪ್ರಕರಣದಲ್ಲಿ ಹೆಚ್ಚಿನ ಮಾಹಿತಿ ಹೊರಬಿದ್ದಿದೆ. ನರಬಲಿ ಮಾಡಿದ ನಂತರ ಮಹಿಳೆಯರ ಮಾಂಸವನ್ನು ಕರಿ ಮಾಡಿ ತಿನ್ನಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಎಲ್ಲವನ್ನೂ ಶಫಿಯ ನಿರ್ದೇಶನಗಳ ಪ್ರಕಾರ ಮಾಡಲಾಯಿತು; ಎಂದು ವಿಚಾರಣೆ ವೇಳೆ ಇನ್ನೊಬ್ಬ ಆರೋಪಿ ಲೈಲಾ ಆಘಾತಕಾರಿ ಸಂಗತಿ ಬಹಿರಂಗಪಡಿಸಿದ್ದಾಳೆ. ಆರೋಪಿ ಶಫಿ ನರಬಲಿ ಸಂತ್ರಸ್ತರ ಮಾಂಸವನ್ನು ತಿಂದಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಬಂದ ವರದಿಗಳು ತಿಳಿಸಿವೆ.

ಸ್ವಯಂಘೋಷಿತ ಮಾಂತ್ರಿಕ ಶಾಫಿಯ ಸೂಚನೆಯಂತೆ ಕರಿ ತಯಾರಿಸಲಾಗಿದೆ ಎಂದು ಲೈಲಾ ಪೊಲೀಸರಿಗೆ ತಿಳಿಸಿದ್ದಾರೆ. ಶಫಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ವರದಿಯಾಗಿದೆ.

ಪತ್ತನಂತಿಟ್ಟ ಜಿಲ್ಲೆಯ ಎಳಂತೂರ್ ಗ್ರಾಮದಲ್ಲಿ ಕೇರಳದ ಇಬ್ಬರು ಮಹಿಳೆಯರನ್ನು ಅಪಹರಿಸಿ, ಕೊಂದು, ಶಂಕಿತ ‘ವಾಮಾಚಾರದ ಆಚರಣೆ’ಯ ಭಾಗವಾಗಿ ಸಮಾಧಿ ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ಹೇಳಿದ್ದರು. ಪೊಲೀಸರ ಪ್ರಕಾರ, ಎರ್ನಾಕುಲಂ ಜಿಲ್ಲೆಯ ರೋಸ್ಲಿನ್ ಮತ್ತು ಪದ್ಮಾ ಎಂಬ ಇಬ್ಬರು ಮಹಿಳೆಯರು ಕ್ರಮವಾಗಿ ಜೂನ್ ಮತ್ತು ಸೆಪ್ಟೆಂಬರ್‌ನಲ್ಲಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. 

ಪೊಲೀಸರು ಇನ್ನಷ್ಟು ನರಬಲಿಗಳನ್ನು ಶಂಕಿಸಿದ್ದಾರೆ; ಶಫಿ ಹಿಂದೆ ನೆರಳಿನ ಗ್ಯಾಂಗ್ ಇರುವ ಬಗ್ಗೆ ಅನುಮಾನ ಮೂಡಿದೆ. ಮಹಮ್ಮದ್ ಶಾಫಿ ನರಬಲಿ ಸಂತ್ರಸ್ತರ ಅಪಹರಣವನ್ನು ಬಹಳ ಎಚ್ಚರಿಕೆಯಿಂದ ಯೋಜಿಸಿದ್ದ. ಆದಾಗ್ಯೂ, ಶಫಿ ಒಬ್ಬನೇ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ನಂಬುವುದಿಲ್ಲ ಮತ್ತು ಅಪರಾಧದಲ್ಲಿ ಹೆಚ್ಚಿನ ವ್ಯಕ್ತಿಗಳ ಪಾತ್ರವನ್ನು ಶಂಕಿಸಿದ್ದಾರೆ.

ರಾಜ್ಯದಲ್ಲಿ ಇನ್ನಷ್ಟು ನರಬಲಿಗಳು ನಡೆದಿವೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತರನ್ನು ಅಪಹರಿಸಲು ಬಳಸುತ್ತಿದ್ದ ಶಫಿಯ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.

ಶಫಿ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಲೈಂಗಿಕ ವಿಕೃತ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಹುಶಃ ಇನ್ನೂ ಹಲವಾರು ಶಫಿಯೊಂದಿಗೆ ನರಭಕ್ಷಣೆ ಮಾಡಿದ್ದಾರೆಯೇ ಎಂಬ ಅನುಮಾನಗಳು ದಟ್ಟವಾಗುತ್ತಿವೆ. ಇದು ನಿಜವಾದರೆ ಇನ್ನು ಕೇರಳ ರಾಜ್ಯವು ಅನಾದಿ ಕಾಲದ ಸಂಸ್ಕೃತಿಯನ್ನು ನೆನಪಿಸಲಿದೆ. ಹಿಂದಿನ ಕಾಲದ ಕತೆಗಳಲ್ಲಿ ರಾಕ್ಷಸರು ನರಮಾಂಸಭಕ್ಷಣೆಯನ್ನು ಮಾಡುತ್ತಿದ್ದುದನ್ನು ಇಲ್ಲಿ ನೆನಪಿಸಬಹುದು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

‘ಅಗರಿ ಮಾರ್ಗ’ ಗಾನ ಸುಧೆಯಲ್ಲಿ ಮಿಂದೆದ್ದು – ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ 

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಯಕ್ಷಗಾನ ಕಲೆಯ ಯುವ ಪ್ರತಿಭಾವಂತ ಮದ್ದಳೆಗಾರರಾಗಿ, ಬ್ಯಾಂಕ್ ಉದ್ಯೋಗಿಯಾಗಿ, ಲೇಖಕರಾಗಿ ನಮಗೆಲ್ಲಾ ಪರಿಚಿತರು. ಯಕ್ಷಗಾನ ಕಲೆ ಮತ್ತು ಕಲಾವಿದರ ಬಗೆಗೆ ಆಳವಾದ ಅಧ್ಯಯನವನ್ನು ಮಾಡಿಯೇ ತಾವು ಸಂಗ್ರಹಿಸಿದ ವಿಚಾರಗಳನ್ನು ಅಕ್ಷರ ರೂಪಕ್ಕೆ ಇಳಿಸುವ ಲೇಖಕರಿವರು. ಅವರು ಬರೆದ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದುವಾಗ ನಾವು ಈ ವಿಚಾರವನ್ನು ತಿಳಿಯಬಹುದು.

“ಅಗರಿ ಮಾರ್ಗ, ಗಾನ ಸುಧೆಯಲ್ಲಿ ಮಿಂದೆದ್ದು”  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರಿಂದ ರಚಿಸಲ್ಪಟ್ಟ ಕೃತಿಯಿದು. ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ರಾಯರ ಬಗೆಗೆ ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದಿದೆ. ಭಾಗವತರಾಗಿ ಯಶಸ್ವೀ ಪ್ರದರ್ಶನಗಳಿಗೆ ಕಾರಣರಾಗಿ ಕಲಾಭಿಮಾನಿಗಳನ್ನು ರಂಜಿಸಿದ ಅಗರಿ ಶ್ರೀನಿವಾಸ ರಾಯರು ಶ್ರೇಷ್ಠ ನಿರ್ದೇಶಕರಾಗಿ ಕಲಾವಿದರನ್ನು ಸಿದ್ಧಗೊಳಿಸಿದ ಸಾಧಕರು. ಪ್ರಸಂಗಕರ್ತರಾಗಿಯೂ ಯಕ್ಷಗಾನಕ್ಕೆ ಶ್ರೀಯುತರ ಕೊಡುಗೆಯು ಅಪಾರವಾದುದು.

ಇವರ ಬಗೆಗೆ  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಬರೆದ ಲೇಖನಗಳು ‘ಅಗರಿ ಮಾರ್ಗ’ ಎಂಬ ಈ ಕೃತಿಯ ರೂಪದಲ್ಲಿ ಓದುಗರ ಕೈ ಸೇರಿದುದು ತುಂಬಾ ಸಂತಸದ ವಿಚಾರ. ಈ ಹೊತ್ತಗೆಯೊಳಗೆ ಒಟ್ಟು ಇಪ್ಪತ್ತೊಂಭತ್ತು ಲೇಖನಗಳಿವೆ. ಇದು ಎರಡನೆಯ ಮುದ್ರಣವು. (2020 ನವೆಂಬರ್) 2019 ನವೆಂಬರಿನಲ್ಲಿ ಮೊದಲ ಮುದ್ರಣವು ನಡೆದಿತ್ತು. ಒಂದೇ ವರುಷದೊಳಗೆ ಮರು ಮುದ್ರಿತವಾದುದು ಈ ಪುಸ್ತಕದ ಮೌಲ್ಯವನ್ನು ತಿಳಿಸುತ್ತದೆ.

ಈ ಕೃತಿಯ ಪ್ರಕಾಶಕರು ‘ಈಶಾವಾಸ್ಯಮ್ ಕಲಾ ಪ್ರಕಾಶನ’, ಪೆರ್ಮಂಕಿ ಮಂಗಳೂರು. ಇದು ಒಟ್ಟು ನೂರಾ ಹದಿನಾರು ಪುಟಗಳುಳ್ಳ ಹೊತ್ತಗೆ. ಬೆಲೆ ರೂಪಾಯಿ ನೂರಾ ಇಪ್ಪತ್ತು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಚಿಂತಕರೂ ವಿದ್ವಾಂಸರೂ ಆದ ಶ್ರೀ ಲಕ್ಷ್ಮೀಶ ತೋಳ್ಪಾಡಿ. ಲೇಖಕ  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರಿಗೆಲ್ಲಾ ಕೃತಜ್ಞತೆಗಳನ್ನು ಅರ್ಪಿಸಿರುತ್ತಾರೆ,

ಕಲಾವಿದ ಶ್ರೀ ವಾಸುದೇವ ರಂಗಾ ಭಟ್ ಅವರು ಈ ಕೃತಿಗೆ ಬೆನ್ನುಡಿಯನ್ನು ಬರೆದಿರುತ್ತಾರೆ.  ಶ್ರೀ ಕೃಷ್ಣಪ್ರಕಾಶ ಉಳಿತ್ತಾಯರು ಅಗರಿ ಶ್ರೀನಿವಾಸ ರಾಯರ ಬಗೆಗೆ ಬರೆದ ಇಪ್ಪತ್ತೊಂಭತ್ತು ಲೇಖನಗಳನ್ನು ತನ್ನ ಬಸಿರೊಳಗೆ ಈ ಕೃತಿಯು ತುಂಬಿಕೊಂಡಿದೆ.

ಆ ಲೇಖನಗಳೆಂದರೆ, ಅಗರಿ ಮಾರ್ಗ, ಪ್ರತಿಭೆಯುಮಭ್ಯಾಸಮುಂ ಕವಿಗೆ ಕಾರಣಂ, ಹೊರಗಣ ತೋರಣಕ್ಕಿಂತಲೂ ಒಳಗಣ ಹೂರಣಕ್ಕೆ ಪ್ರಾಧಾನ್ಯತೆ, ಅಗರಿ ಬ್ರಾಂಡ್, ಅಗರಿ ಧ್ವನಿ, ಅಗರಿ ಮಾರ್ಗ ಮತ್ತು ಭಜನಾ ಹಾಡುಗಳು, ಅಗರಿಯವರ ನಿಧಾನ ಜಂಪೆ ತಾಳದ ಬಗೆ, ಅಗರಿ-ಶೇಣಿ, ಅಗರಿ ಭಾಗವತರ ನೆವನದಲ್ಲಿ ನಾದನಾಮ ಕ್ರಿಯೆ, ಅಗರಿ ಪರಂಪರೆ ‘ವಿಶಿಷ್ಟ ವಿಭಿನ್ನ’, ಅಗರಿ ಶೈಲಿಯ ಉಳಿವಿನ ಬಗೆಗೆ, ಯಕ್ಷಗಾನ ಹಾಡುಗಳ ಧಾತು ಮತ್ತು ಮಾತುಗಳ ನಡುವಿನ ಭಾಂಧವ್ಯ, ಅಗರಿ ಶ್ರೀನಿವಾಸ ಭಾಗವತರ ಭರತೇಶ ದಿಗ್ವಿಜಯ ಪ್ರಸಂಗ,

ಅಗರಿ ಶ್ರೀನಿವಾಸ ಭಾಗವತರ ‘ಧನಗುಪ್ತ ಮಹಾಬಲ’ ಯಕ್ಷಗಾನ ಪ್ರಸಂಗ, ಅಗರಿ ಶ್ರೀನಿವಾಸ ಭಾಗವತರ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ಯ ಓದು, ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಶಿವಲೀಲಾರ್ಣವ’, ಅಗರಿ ಶ್ರೀನಿವಾಸ ಭಾಗವತ ವಿರಚಿತ ‘ಪ್ರಭಾವತಿ ಪರಿಣಯ’, ಅಗರಿ ಶ್ರೀನಿವಾಸ ಭಾಗವತ ವಿರಚಿತ ಶ್ರೀ ದೇವಿ ಭ್ರಮರಾಂಬಿಕಾ ವಿಲಾಸ,

ದಿವಂಗತ ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು ನೆನೆಯುತ್ತಾ, ರಘುರಾಮ ಭಾಗವತರನ್ನು ನೆನೆಯುತ್ತಾ, ಅಗರಿಯವರ ಒಡನಾಡಿ ಶ್ರೀ ಬರ್ಗುಳ ಗೋಪಾಲಕೃಷ್ಣ ಕುರುಪ್, ದಿನೇಶ ಅಮ್ಮಣ್ಣಾಯರು ಹೇಳಿದ ನೆನಪು, ಪದ್ಯಾಣ ಶಂಕರನಾರಾಯಣ ಭಟ್ ಕಂಡಂತೆ, ಅಗರಿ ಶಿಷ್ಯನ ಕಣ್ಣಲ್ಲಿ, ಅಗರಿ ಮಾರ್ಗದ ಉಸಿರಾಟ, ಅಗರಿ ಶ್ರೀನಿವಾಸ ಭಾಗವತರ ಕವಿ ಮನಸ್ಸಿನ ಪಲ್ಲವ ಅಗರಿ ಭಾಸ್ಕರ ರಾವ್, ಅಗರಿ ಶ್ರೀನಿವಾಸ ಭಾಗವತರ ಭಜನಾ ಪರಂಪರೆಯ ಪಲ್ಲವ, ಮೊಮ್ಮಗನ ನೆನಪು, ಅಗರಿ ಶ್ರೀನಿವಾಸ ಭಾಗವತರ ಪರಮ ಅಭಿಮಾನಿ.

ಹೀಗೆ ಒಟ್ಟು ಇಪ್ಪತ್ತೊಂಭತ್ತು ಲೇಖನಗಳಿವೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ ಪುರಸ್ಕೃತ ಕೃತಿ ಇದು. (2019ರಲ್ಲಿ) ಅಭಿನಂದನೆಗಳು, ಶುಭಾಶಯಗಳು. 

ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ, ಈಶಾವಾಸ್ಯಮ್ ಕಲಾ ಪ್ರಕಾಶನ, ಪೆರ್ಮಂಕಿ, ಉಲಾಯಿಬೆಟ್ಟು ಅಂಚೆ,  ಮಂಗಳೂರು 574145

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ 

ಕೃತಿ ಪರಿಚಯ: ಶ್ರೀ ರವಿಶಂಕರ್ ವಳಕ್ಕುಂಜ 9164487083

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಮಂಗಳೂರಿನಲ್ಲಿ ಸಿಐಎಸ್‌ಎಫ್‌ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜ್ಯೋತಿ (33) ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ – ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಘಟಕದಲ್ಲಿ ದಾಖಲು  

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜ್ಯೋತಿ (33) ಅವರು ಆತ್ಮಹತ್ಯೆ ಯತ್ನವೊಂದರಲ್ಲಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದಾರೆ.

ಮಂಗಳೂರು, ಅಕ್ಟೋಬರ್ 12 (ಪಿಟಿಐ) ಹೊಸ ಮಂಗಳೂರು ಬಂದರು ಟ್ರಸ್ಟ್‌ನಲ್ಲಿ (ಎನ್‌ಎಂಪಿಟಿ) ಸಿಐಎಸ್‌ಎಫ್‌ಗೆ ಲಗತ್ತಿಸಲಾದ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬುಧವಾರ ಬಂದರು ಟ್ರಸ್ಟ್‌ನ ಮುಖ್ಯ ಗೇಟ್‌ನಲ್ಲಿ ಬೆಳಗ್ಗೆ 6 ರಿಂದ 6.15 ರ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ವಿವಾದದ ನಂತರದ ತೀವ್ರ ಹತಾಶೆಯಲ್ಲಿ ಅವರು ಈ ಕೃತ್ಯ ಎಸಗಿದ್ದಾರೆಂದು ಹೇಳಲಾಗುತ್ತದೆ. ಇವರು ಇಲ್ಲಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (ಎಂಆರ್‌ಪಿಎಲ್) ಸಹಾಯಕ ಕಮಾಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಒಂಬೀರ್ ಸಿಂಗ್ ಪರ್ಮಾರ್ ಅವರ ಪತ್ನಿ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಪತ್ನಿ ಇಬ್ಬರೂ ರಾಜಸ್ಥಾನದ ಭರತ್ ಪುರ ಜಿಲ್ಲೆಯವರು. “ಗಾಯಾಳುವನ್ನು ನಗರದ ಎ.ಜೆ ಆಸ್ಪತ್ರೆಗೆ ಸೇರಿಲಾಗಿದೆ. ಶಾಸ್ತ್ರವಿಹಿಕಿತ್ಸೆ ನಡೆಯುತ್ತಿದೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.

ಆತ್ಮಹತ್ಯೆಗೆ ಯತ್ನಿಸುವ ಮುನ್ನ ಜ್ಯೋತಿ ಅಮ್ಮನಿಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ “ನನ್ನನ್ನು ಕ್ಷಮಿಸು ಅಮ್ಮಾ, ನಾನು ಸ್ವ ಇಚ್ಛೆಯಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಯಾರೂ ಒತ್ತಡ ಹಾಕಿಲ್ಲ” ಎಂದು ಹಿಂದಿಯಲ್ಲಿ ಬರೆಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಈ ಜಾಗದಲ್ಲಿ ಮೊದಲು ಪ್ರತಿದಿನವೂ ಕಸದ ರಾಶಿಯೇ ಬಂದು ಬೀಳುತ್ತಿತ್ತು . ಈ ಬೋರ್ಡ್ ಹಾಕಿದ ಮೇಲೆ ಏನಾಯಿತು? ನೀವೇ ನೋಡಿ 

ಮೇಲಿನ ಚಿತ್ರದಲ್ಲಿ ಕಾಣುವ ಪ್ರದೇಶ ಪುತ್ತೂರಿನ ಸಂಪ್ಯ ಮತ್ತು ಕಲ್ಲರ್ಪೆ ನಡುವಿನ ತಿರುವಿನ ರಸ್ತೆ ಇರುವ ಜಾಗ. ಇದು ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. ಈ ರಸ್ತೆ ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಕೆಲವು ತಿಂಗಳುಗಳ ಹಿಂದೆ ಈ ಪ್ರದೇಶವನ್ನು ಕೆಲವರಾದರೂ ಗಮನಿಸಿರಬಹುದು. ಪ್ರತಿದಿನವೂ ಕಸದ ರಾಶಿಯೇ ಬಂದು ಇಲ್ಲಿಗೆ ಬೀಳುತ್ತಿತ್ತು. ಮನೆ,ಹೋಟೆಲ್, ಅಂಗಡಿ ಎಂಬ ಬೇಧವಿಲ್ಲದೆ ಎಲ್ಲರೂ ತ್ಯಾಜ್ಯ ವಸ್ತುಗಳನ್ನು ಇಲ್ಲಿ ತಂದು ಸುರಿಯುತ್ತಿದ್ದರು. ಮಾಂಸದಂಗಡಿಗಳ ದಿನನಿತ್ಯದ ತ್ಯಾಜ್ಯ ಗೋಣಿಗಳಲ್ಲಿ ಬಂದು ಬೀಳುತ್ತಿತ್ತು.

ಇಲ್ಲಿ ನಡೆದುಕೊಂಡು ಹೋಗುವವರಿಗಂತೂ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿಯಿತ್ತು. ಏನೇ ಮಾಡಿದರೂ ಕಸ ಹಾಕುವವರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಆರ್ಯಾಪು ಗ್ರಾಮ ಪಂಚಾಯತ್ ಒಂದು ನಿರ್ಧಾರಕ್ಕೆ ಬಂದು ಇಲ್ಲಿ ಒಂದು ದೊಡ್ಡದಾದ ಫಲಕವನ್ನು ಹಾಕಲಾಯಿತು.

”ಈ ಪ್ರದೇಶ ಸಿಸಿಟಿವಿ ಕಣ್ಗಾವಲಿನಲ್ಲಿದೆ. ಕಸ ಸುರಿಯುವವರಿಗೆ 5000 ರೂಪಾಯಿಗಳ ದಂಡ ವಿಧಿಸಲಾಗುವುದು” ಎಂದು ಆ ಬೋರ್ಡಿನಲ್ಲಿದೆ. ಈ ಬೋರ್ಡ್ ಇಲ್ಲಿ ಹಾಕಿದ ನಂತರ ಇಲ್ಲಿ ಯಾರೂ ಕಸ ಹಾಕುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಆದರೂ ಬೋರ್ಡಿನ ಸುತ್ತಲೂ ಕಣ್ಣು ಹಾಯಿಸಿದಾಗ ಆ ಬೋರ್ಡಿನ ಪಕ್ಕದಲ್ಲಿಯೇ ಒಂದೆರಡು ಕಸದ ಕಟ್ಟುಗಳು ಕಂಡುಬಂದುವು. ಆ ಕಸ ಹಾಕಿದವರಿಗೆ ದಂಡ ಹಾಕಲಾಗುವುದೇ ಎಂದು ಕಾದು ನೋಡಬೇಕಾಗಿದೆ. 

ಆದರೂ ಎಲ್ಲ ಕಡೆಯಲ್ಲೂ ಈ ಮ್ಯಾಜಿಕ್ ಕೆಲಸ ಮಾಡುವುದಿಲ್ಲ. ಸಿಸಿಟಿವಿ ಕ್ಯಾಮರಾವನ್ನೇ ಹಾಳುಮಾಡಿ ಅಥವಾ ತಿರುಗಿಸಿ ಕಸ ಹಾಕುವವರಿಗೆ ನಮ್ಮಲ್ಲೇನೂ ಕೊರತೆಯಿಲ್ಲ. ಅಂತಹಾ ಕೆಲವು ಪ್ರಕರಣಗಳನ್ನು ಮುಂದಿನ ಸುದ್ದಿಗಳಲ್ಲಿ ನಿಮಗೆ ತೋರಿಸುತ್ತೇವೆ. 

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟರಿಗೆ ಬಂಟ ಪ್ರತಿಷ್ಠಾನ ಪ್ರಶಸ್ತಿ ಪ್ರದಾನ 

ಮಂಗಳೂರು: ಜಾಗತಿಕ ಬಂಟ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ 26 ನೇ ವಾರ್ಷಿಕ ಮಹಾಸಭೆಯಲ್ಲಿ ಹಿರಿಯ ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ ಹಾಗೂ ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯ್ತು.

ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಿಗೆ ರೂ.25 ಸಾವಿರ ನಗದಿನೊಂದಿಗೆ ನೀಡಲಾಗುವ ಡಾ.ಡಿ.ಕೆ.ಚೌಟ ದತ್ತಿನಿಧಿ ಪ್ರಶಸ್ತಿಯನ್ನು ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅವರು ರಘುರಾಮ ಶೆಟ್ಟರಿಗೆ ಪ್ರದಾನ ಮಾಡಿದರು. 

           ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ – ಯಕ್ಷಗಾನ,ನಾಟಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡುವುದರ ಜತೆಗೆ ತೆಂಕು – ಬಡಗು ಮೇಳಗಳು ಆಡಿ ಜಯಭೇರಿ ಗಳಿಸಿದ 36 ಜನಪ್ರಿಯ ಪ್ರಸಂಗಗಳನ್ನು ಬರೆದಿರುವ  87ರ ಹರೆಯದ ಕಂದಾವರ ರಘುರಾಮ ಶೆಟ್ಟರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸಿದರು.

          ಜಾಗತಿಕ ಬಂಟ ಪ್ರತಿಷ್ಠಾನದ ಪೋಷಕರಾದ ಡಾ.ಬಿ.ಆರ್.ಶೆಟ್ಟಿ, ಮಾಜಿ ಅಧ್ಯಕ್ಷ ಡಾ.ಎಂ. ಶಾಂತಾರಾಮ ಶೆಟ್ಟಿ , ಉಪಾಧ್ಯಕ್ಷ ಕುಶಲ್ ಎಸ್.ಹೆಗ್ಡೆ, ಗಣ್ಯರಾದ ಕೆ. ಸಚ್ಚಿದಾನಂದ ಹೆಗ್ಡೆ, ಡಾ.ಬಿ.ಸಂಜೀವ ರೈ, ಸಿಎ.ರಘುಚಂದ್ರ ಶೆಟ್ಟಿ, ಆಯ್ಕೆ ಸಮಿತಿಯ ಪ್ರೊ.ಜಿ.ಆರ್.ರೈ ಮತ್ತು ಪಳ್ಳಿ ಕಿಶನ್ ಹೆಗ್ಡೆ, ಸನ್ಮಾನಿತರ ಬಂಧುಗಳಾದ ಶೈಲಜಾ ಮತ್ತು ಅಭಿರಾಮ ಶೆಟ್ಟಿ ಉಪಸ್ಥಿತರಿದ್ದರು.

            ಬಂಟ ಪ್ರತಿಷ್ಠಾನದ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]

ಭೂಮಿ ಅಗೆಯುವಾಗ ದೇವರ ವಿಗ್ರಹಗಳು ಪತ್ತೆ – ತಂಡೋಪತಂಡವಾಗಿ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ ಗ್ರಾಮಸ್ಥರು – ಸ್ಥಳದಲ್ಲಿ ಭಕ್ತಿಯ ವಿದ್ಯುತ್ಸಂಚಾರ

ಆಗ ತಾನೇ ಕಟ್ಟಿದ ಹೊಸ ಮನೆಗೆ ವಿದ್ಯುತ್ ಅರ್ಥಿಂಗ್ ಮಾಡಲು ಗುಂಡಿ ತೋಡುತ್ತಿದ್ದಾಗ ಅಚ್ಚರಿಯೊಂದು ಕಂಡಿದೆ.

ಮೊದಲು ದೊಡ್ಡದಾದ ಬಂಡೆ ಕಲ್ಲು ಸಿಕ್ಕಿತು. ಅದನ್ನು ತೆಗೆದ ಕೂಡಲೇ ಅದರಡಿಯಲ್ಲಿ ದೇವರ ವಿಗ್ರಹಗಳ ಕೆತ್ತನೆ (Stone God Statue) ಕಂಡುಬಂದಿವೆ. 

ಈ ಘಟನೆ ನಡೆದದ್ದು  ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು (Gauribidanur) ತಾಲೂಕಿನ ಹೊನ್ನಪ್ಪನಹಳ್ಳಿ ಗ್ರಾಮದಲ್ಲಿ. ಶಿವಕುಮಾರ್ ಮತ್ತು ಬಾಬು ಎಂಬ ಅಣ್ಣ ತಮ್ಮಂದಿರು, ತೋಟದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು ಮನೆಗೆ ವಿದ್ಯುತ್ ಸಂಪರ್ಕ ನೀಡಲು ಅರ್ಥ್ ಕೇಬಲ್ ಆಳವಡಿಸಲು ಮನೆಯ ಪಕ್ಕದಲ್ಲೇ ಗುಂಡಿ ಅಗೆಯುವಾಗ ಈ ಕಲ್ಲಿನ ಕೆತ್ತನೆಗಳು ಪತ್ತೆಯಾಗಿವೆ.  

ಸುದ್ದಿ ತಿಳಿದ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದ್ದಾರೆ. ಪೂಜಾಸಾಮಗ್ರಿಗಳೊಂದಿಗೆ ಆಗಮಿಸಿ ಭಕ್ತಿಯಿಂದ ಪೂಜೆ ಮಾಡುತ್ತಿದ್ದಾರೆ. ಈ ವಿಗ್ರಹಗಳು ಏಕಶಿಲೆಯಲ್ಲಿ ಕೆತ್ತಲಾಗಿದ್ದು ವಿಷ್ಣು ಮತ್ತು ಲಕ್ಷ್ಮಿ ದೇವರ ವಿಗ್ರಹಗಳು ಜೊತೆಯಲ್ಲಿವೆ.

ಈ ವಿಗ್ರಹಗಳು ಯಾವ ಕಾಲದ್ದು ಎಂದು ಇನ್ನು ಪತ್ತೆ ಮಾಡಬೇಕಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅವರು ಬಂದು ಇದರ ಬಗ್ಗೆ ಪರಿಶೀಲನೆ ನಡೆಸಿದ ನಂತರವೇ ಮುಂದಿನ ಮಾಹಿತಿಗಳು ಲಭ್ಯವಾಗಲಿವೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected] 

ಪತ್ತನಂತಿಟ್ಟ ನರಬಲಿ ಪ್ರಕರಣ : 75 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಶಫಿ 

ಕೇರಳವನ್ನು ಬೆಚ್ಚಿಬೀಳಿಸಿದ ಎಳಂತೂರಿನಲ್ಲಿ ನಡೆದ ನರಬಲಿ ಪ್ರಕರಣದ ಆರೋಪಿ ಶಫಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುತನಕುರಿಶ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 75 ವರ್ಷದ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆ ಪ್ರಕ್ರಿಯೆಗಳು ನಡೆಯುತ್ತಿವೆ.

2020ರ ಆಗಸ್ಟ್‌ನಲ್ಲಿ ಇಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಶಫಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಈತ ಸ್ಥಳೀಯ 60 ವರ್ಷದ ಮಹಿಳೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದನು ಮತ್ತು ಆಗಾಗ್ಗೆ ಆಕೆಯ ಮನೆಗೆ ಭೇಟಿ ನೀಡುತ್ತಿದ್ದನು.

ಒಮ್ಮೆ ಈ ಮನೆಯ ಮುಂದೆ ಹಾದು ಹೋಗುತ್ತಿದ್ದ 75ರ ಹರೆಯದ ಮಹಿಳೆಯ ಮೇಲೆ ದಾಳಿ ಮಾಡಿ ಮತ್ತೊಬ್ಬ ಮಹಿಳೆಯ ಮನೆಗೆ ಎಳೆದೊಯ್ದ. ಆತ ಸಂಬಂಧ ಹೊಂದಿದ್ದ ಮತ್ತೊಬ್ಬ ಮಹಿಳೆಯ ಸಹಾಯದಿಂದ ವೃದ್ಧೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಚಾಕುವಿನಿಂದ ಗಾಯಗೊಳಿಸಿ ಸ್ಥಳದಿಂದ ತೆರಳಿದ್ದಾನೆ. ಕೂಡಲೇ ಪುತ್ತಂಕುರಿಶ್ ಪೊಲೀಸರು ಶಫಿಯನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವನು ಫೆಬ್ರವರಿ 2021 ರಲ್ಲಿ ಜಾಮೀನು ಪಡೆದ. ಶಫಿ ಕುಡುಕ ಮತ್ತು ಮಾದಕ ವ್ಯಸನಿ ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಕಡವಂತಾರದಲ್ಲಿ ಅಂಗಡಿ ಇಟ್ಟುಕೊಂಡು ಇತರೆ ಅಪರಾಧ ಕೃತ್ಯಗಳಿಗೆ ಸಂಚು ರೂಪಿಸಿದ್ದ. ಆಸುಪಾಸಿನಲ್ಲಿ ಕೆಲಸ ಮಾಡುವ ಮತ್ತು ಕಡಿಮೆ ಕೌಟುಂಬಿಕ ಸಂಪರ್ಕ ಹೊಂದಿರುವ ಮಹಿಳೆಯರನ್ನು ಬಲೆಗೆ ಬೀಳಿಸಿದ್ದಾನೆ.

ಶಫಿ ಇದ್ದ ಪ್ರದೇಶಗಳಿಂದ ಬೇರೆ ಯಾವುದೇ ಮಹಿಳೆಯರು ನಾಪತ್ತೆಯಾಗಿದ್ದಾರೆಯೇ ಎಂಬುದನ್ನು ಕಂಡುಹಿಡಿಯಲು ಪೊಲೀಸರು ತನಿಖೆಯನ್ನು ವಿಸ್ತರಿಸಿದ್ದಾರೆ.

ಸೈಬರ್ ಪೊಲೀಸರ ಬೆಂಬಲದೊಂದಿಗೆ ತನಿಖಾ ತಂಡವು ನಕಲಿ ಫೇಸ್‌ಬುಕ್ ಖಾತೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಶಫಿಯನ್ನು ಅಪರಾಧ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸಲು ಕರೆದೊಯ್ದು ವಿಚಾರಣೆ ನಡೆಸಲಾಗುವುದು.

ಬಿಳಿಯ ಉಡುಗೆಗಳಲ್ಲಿ ಅದ್ಭುತ ಸೌಂದರ್ಯ – ನೋಡುಗರ ಹೃದಯಕ್ಕೆ ಕಚಗುಳಿಯಿಡುವ ನೇಹಾ ಶರ್ಮಾ ಫೋಟೋಶೂಟ್ 

ನಟಿ, ಮಾಡೆಲ್ ನೇಹಾ ಶರ್ಮಾ ಬಿಳಿಯ ಉಡುಪು ಮತ್ತು ಬಾತ್‌ರೋಬ್‌ನಲ್ಲಿ ಮಾದಕ ಫೋಟೋಗಳೊಂದಿಗೆ ಅಭಿಮಾನಿಗಳನ್ನು ಕೀಟಲೆ ಮಾಡಿದ್ದಾರೆ.

ಅವರ ಇತ್ತೀಚಿನ ಫೋಟೋ ಶೂಟ್‌ನಲ್ಲಿ, ನೇಹಾ ಶರ್ಮಾ ಬಿಳಿ ಉಡುಪು ಮತ್ತು ಹೊಂದಿಕೆಯಾಗುವ ಬಾತ್‌ರೋಬ್‌ನಲ್ಲಿ ಧರಿಸಿದ್ದಾರೆ ಮತ್ತು ಅವರ ಅದ್ಭುತ ಸೌಂದರ್ಯವು ಎಂಹವರನ್ನಾದರೂ ಬೆರಗುಗೊಳಿಸಬಲ್ಲದು.

ನೇಹಾ ಶರ್ಮಾ ಸುಂದರ ಅಂಗಗಳ ಆಕೃತಿಯನ್ನು ಹೊಂದಿದ್ದಾಳೆ ಮತ್ತು ಉಡುಪುಗಳಲ್ಲಿ ಅದನ್ನು ಪ್ರದರ್ಶಿಸಲು ಅವಳು ಯಾವುದೇ ಅವಕಾಶವನ್ನು ಬಿಡುವುದಿಲ್ಲ.

ನೇಹಾ ಶರ್ಮಾ ಬಿಳಿ ಹಾಲ್ಟರ್‌ನೆಕ್ ಮತ್ತು ಮ್ಯಾಚಿಂಗ್ ರೋಬ್‌ನಲ್ಲಿ ಅದ್ಭುತವಾಗಿದ್ದಾರೆ.

ಪಿಂಕ್ ಡ್ರೆಸ್ಸಿನ ಚಂದವೂ, ಅವಳ ಚಂದವೂ ಸಮ್ಮಿಳಿತಗೊಂಡಿದೆ.

ಆಲೋಚನೆಯೆಡೆಯಲ್ಲಿಯೂ ನೇಹಾ ಸೌಂದರ್ಯ

ಇದು ನೇಹಾ ಶರ್ಮಾಳ ಫೇವರಿಟ್ ಉಡುಪಂತೆ!

ಅಫ್ಘಾನಿಸ್ತಾನದ ಫೈಜಾಬಾದ್‌ನಲ್ಲಿ  ಸಂಭವಿಸಿದ  5.1 ತೀವ್ರತೆಯ ಭೂಕಂಪ

ಮಂಗಳವಾರ ಮುಂಜಾನೆ ಅಫ್ಘಾನಿಸ್ತಾನದ ಫೈಜಾಬಾದ್ ಪ್ರಾಂತ್ಯದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪದ ಕೇಂದ್ರಬಿಂದು ಫೈಜಾಬಾದ್‌ನಿಂದ ಪೂರ್ವಕ್ಕೆ 89 ಕಿಮೀ ದೂರದಲ್ಲಿದೆ. ಭೂಕಂಪನವು ಭೂಮಿಯ ಮೇಲ್ಮೈಯಿಂದ 112 ಕಿಮೀ ಆಳದಲ್ಲಿತ್ತು.

ನಸುಕಿನ 4.53ಕ್ಕೆ ಕಂಪನದ ಅನುಭವವಾಗಿದ್ದು, ರಿಕ್ಟರ್ ಮಾಪಕದಲ್ಲಿ 5.1ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನ ವಿಜ್ಞಾನ ಕೇಂದ್ರ ತಿಳಿಸಿದೆ. ಹಾಗಾಗಿ ಭೂಕಂಪದಿಂದ ಆಗಿರುವ ಹಾನಿಯ ಬಗ್ಗೆ ಸ್ಪಷ್ಟ ಮಾಹಿತಿ ತಿಳಿದುಬಂದಿಲ್ಲ.

ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ UN ಕಚೇರಿಯ ಪ್ರಕಾರ, ಅಫ್ಘಾನಿಸ್ತಾನದಲ್ಲಿ 350,000 ಕ್ಕಿಂತ ಹೆಚ್ಚು ಜನರು ಹೆಚ್ಚು ಭೂಕಂಪ ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಮೊನ್ನೆ ಜೂನ್ 22ರಂದು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಭಾರೀ ಹಾನಿ ಸಂಭವಿಸಿತ್ತು. 6.1 ತೀವ್ರತೆಯ ಭೂಕಂಪದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಜುಲೈ 18 ರಂದು ಅಫ್ಘಾನಿಸ್ತಾನದಲ್ಲಿ ಮತ್ತೊಂದು 5.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಭಯೋತ್ಪಾದಕರ ವಿರುದ್ಧ ಹೋರಾಡುತ್ತಿರುವಾಗ ಭಾರತೀಯ ಸೇನೆಯ ಆಕ್ರಮಣಕಾರಿ ನಾಯಿ ಜೂಮ್ ಗಂಭೀರವಾಗಿ ಗಾಯ – ಆಸ್ಪತ್ರೆಗೆ ದಾಖಲು

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗಿನ ಮುಖಾಮುಖಿಯಲ್ಲಿ ಸೇನೆಯ ಆಕ್ರಮಣಕಾರಿ ಶ್ವಾನ ಜೂಮ್ ಗಂಭೀರ ಗಾಯಗೊಂಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯು ಭಯೋತ್ಪಾದಕರ ವಿರುದ್ಧ ಹೋರಾಡುವ ವೇಳೆ ಭಯೋತ್ಪಾದಕರು ನಾಯಿ ಜೂಮ್ ಮೇಲೆ ದಾಳಿ ಮಾಡಿದ್ದು, ಅದು ಗಂಭೀರ ಗಾಯಗೊಂಡಿದೆ.

ಸದ್ಯ ಶ್ರೀನಗರದ ಸೇನಾ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ದಾಳಿಯ ನಾಯಿಯು ಆಪರೇಷನ್ ಟಾಂಗ್ಪಾವಾಸ್ ಯುದ್ಧ ತಂಡದ ಭಾಗವಾಗಿತ್ತು ಮತ್ತು ಗಾಯಗೊಂಡಾಗ ಕಾಶ್ಮೀರದ ಅನಂತನಾಗ್ ಪ್ರದೇಶದಲ್ಲಿ ಬೀಡುಬಿಟ್ಟಿತ್ತು.

ತನ್ನ ಕಾಲಿಗೆ ಎರಡು ಗುಂಡುಗಳು ತಾಗಿದ್ದರೂ ಇಬ್ಬರು ಭಯೋತ್ಪಾದಕರನ್ನು ಕೊಲ್ಲುವಲ್ಲಿ ನಾಯಿಯು ಸಹಾಯ ಮಾಡಿತ್ತು. ಮತ್ತು ಅವರು ಓಡಿಹೋಗದಂತೆ ನೋಡಿಕೊಂಡಿತ್ತು.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್ನಾಗ್‌ನ ತಂಗ್‌ಪಾವಾ ಗ್ರಾಮದಲ್ಲಿ ಭಾನುವಾರ ರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆದಿದೆ.

ಸೋಮವಾರ ಇಬ್ಬರು ಉಗ್ರರು ಹತರಾಗಿದ್ದಾರೆ. ಏತನ್ಮಧ್ಯೆ, ಈ ಪ್ರದೇಶದಲ್ಲಿ ಮತ್ತೊಬ್ಬ ಭಯೋತ್ಪಾದಕ ಅಡಗಿಕೊಂಡಿದ್ದಾನೆ ಎಂದು ನಂಬಲಾಗಿದೆ.

ನಿಮ್ಮೂರಿನ ಸುದ್ದಿಗಳನ್ನು, ಸಮಸ್ಯೆಗಳನ್ನು ಪ್ರಕಟಿಸಬೇಕಾದಲ್ಲಿ ಫೋಟೋ ಸಮೇತ ಸುದ್ದಿಗಳನ್ನು ವಾಟ್ಸಾಪ್ ಮಾಡಿ – 9164828688 ಅಥವಾ ಈ-ಮೈಲ್ ಮಾಡಿ – [email protected]