Tuesday, March 17, 2026
Home Blog Page 137

ಪುತ್ತೂರು ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ನವೆಂಬರ್ 2 ಮತ್ತು 3 ರಂದು ತಾಲೂಕು ಕ್ರೀಡಾಂಗಣ ಕೊಂಬೆಟ್ಟು ಇಲ್ಲಿ ನಡೆದ ಪುತ್ತೂರು ನಗರ ವಲಯದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ಮತ್ತು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ನವೆಂಬರ್ 9 ಮತ್ತು 10ರಂದು ಸೈಂಟ್ ಆನ್ಸ್ ಕಡಬದಲ್ಲಿ ನಡೆಯಲಿರುವ ತಾಲೂಕು ಮಟ್ಟದ  ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. 

ಪ್ರಾಥಮಿಕ ವಿಭಾಗದ ಬಾಲಕರಲ್ಲಿ ಚೇತಸ್:400ಮೀ-ಪ್ರಥಮ, 600ಮೀ-ಪ್ರಥಮ, 4*100 ಮೀಟರ್ ರಿಲೇ – ತೃತೀಯ, ತನುಷ್.ಕೆ-   4*100 ಮೀಟರ್ ರಿಲೇ – ತೃತೀಯ, ಶಮಿತ್.ಎಸ್: 4*100 ಮೀಟರ್ ರಿಲೇ – ತೃತೀಯ, ಧನುಷ್.ಪಿ.ಡಿ-4*100 ಮೀಟರ್ ರಿಲೇ – ತೃತೀಯ ಸ್ಥಾನ ಪಡೆದಿರುತ್ತಾರೆ. 

ಪ್ರಾಥಮಿಕ ವಿಭಾಗದ ಬಾಲಕಿಯರಲ್ಲಿ ದಿವಿಜ್ಞಾ.ಯು.ಎಸ್- 100ಮೀ-ಪ್ರಥಮ, 200ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಮನ್ವಿತಾ ನೆಕ್ಕರೆ-600ಮೀ -ಪ್ರಥಮ,  400ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಸುಹಾನಿ: 600ಮೀ -ದ್ವಿತೀಯ, ನಿಧಿಶ್ರೀ:   4*100 ಮೀಟರ್ ರಿಲೇ – ಪ್ರಥಮ, ಸಾನ್ವಿ: 200 ಮೀ– ತೃತೀಯ, ರಿಮ್ಸ್ ಆಯಿಷಾ: ಗುಂಡು ಎಸೆತ: ತೃತೀಯ, ಮಾನ್ಯ ಲಕ್ಷ್ಮೀ: ಚಕ್ರ ಎಸೆತ-ತೃತೀಯ ಸ್ಥಾನ ಪಡೆದಿರುತ್ತಾರೆ.

8ನೇ ತರಗತಿಯ ಪ್ರಾಥಮಿಕ ವಿಭಾದ ಬಾಲಕರಲ್ಲಿ ಮನ್ವಿತ್ ನೆಕ್ಕರೆ: 100ಮೀ-ಪ್ರಥಮ, ಉದ್ದಜಿಗಿತ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಮನೋಹರ್: 200ಮೀ-ಪ್ರಥಮ, ಉದ್ದಜಿಗಿತ- ದ್ವಿತೀಯ, 100ಮೀ-ತೃತೀಯ, 4*100 ಮೀಟರ್ ರಿಲೇ – ಪ್ರಥಮ, ಕೃಪಾಲ್.ಕೆ: 600ಮೀ-ಪ್ರಥಮ, 400ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಅಭಿಶ್ಯಾಮ.ಬಿ: ಎತ್ತರಜಿಗಿತ-ಪ್ರಥಮ, ಮನ್ವಿತ್.ಎಮ್.ರೈ: 4*100 ಮೀಟರ್ ರಿಲೇ – ಪ್ರಥಮ, 400ಮೀ-ದ್ವಿತೀಯ, ಚಕ್ರಎಸೆತ-ತೃತೀಯ ಸ್ಥಾನ ಪಡೆದಿರುತ್ತಾರೆ.

8ನೇ ತರಗತಿಯ ಪ್ರಾಥಮಿಕ ವಿಭಾದ ಬಾಲಕಿಯರಲ್ಲಿ ಡಿಂಪಲ್ ಶೆಟ್ಟಿ: 100ಮೀ-ಪ್ರಥಮ, ಉದ್ದಜಿಗಿತ-ಪ್ರಥಮ, 200ಮೀ-ದ್ವಿತೀಯ, 4*100 ಮೀಟರ್ ರಿಲೇ – ಪ್ರಥಮ, ಕೃತಿ.ಕೆ: 200ಮೀ-ಪ್ರಥಮ, 400ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಶ್ರೀವರ್ಣ.ಪಿ.ಡಿ: ಉದ್ದಜಿಗಿತ- ದ್ವಿತೀಯ,ಎತ್ತರ ಜಿಗಿತ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಅಮೃತಾ.ಬಿ.ಎ: 600ಮೀ-ದ್ವಿತೀಯ, 400ಮೀ-ತೃತೀಯ, 4*100 ಮೀಟರ್ ರಿಲೇ – ಪ್ರಥಮ, ಜೀವಿತಾ: ಎತ್ತರಜಿಗಿತ- ತೃತೀಯ ಸ್ಥಾನ ಪಡೆದಿರುತ್ತಾರೆ.

ಪ್ರೌಢಶಾಲಾ ವಿಭಾಗದ ಬಾಲಕರಲ್ಲಿ ಯಶಸ್.ಎನ್: 200ಮೀ-ತೃತೀಯ, 4*100 ಮೀಟರ್ ರಿಲೇ -ತೃತೀಯ, ಸಚಿತ್.ಪಿ.ಕೆ:  400ಮೀ-ದ್ವಿತೀಯ, 800ಮೀ- ಪ್ರಥಮ, 4*100 ಮೀಟರ್ ರಿಲೇ -ತೃತೀಯ, ಆಶ್ರಯ್.ಎನ್:800ಮೀ-ದ್ವಿತೀಯ, ಚರಣ್ ಕುಮಾರ್- 1500ಮೀ –ಪ್ರಥಮ, 3000ಮೀ- ಪ್ರಥಮ, ಪ್ರಥಮ್.ಎಂ.ಪಿ: ಚಕ್ರ ಎಸೆತ-ದ್ವಿತೀಯ, ಧನ್ರಾಜ್: ಈಟಿ ಎಸೆತ-ದ್ವಿತೀಯ, ಅಮಿತ್  ಬೋರ್ಕರ್: 4*100 ಮೀಟರ್ ರಿಲೇ -ತೃತೀಯ, ಸಾತ್ವಿಕ್: 4*100 ಮೀಟರ್ ರಿಲೇ -ತೃತೀಯ, ಚವನ್ ಕುಮಾರ್ : ತ್ರಿವಿಧ ಜಿಗಿತ-ದ್ವಿತೀಯ, ಪ್ರಖ್ಯಾತ್.ಎಚ್.ವಿ: ಎತ್ತರ ಜಿಗಿತ-ತೃತೀಯ ಸ್ಥಾನ ಪಡೆದಿರುತ್ತಾರೆ. 

ಪ್ರೌಢಶಾಲಾ ವಿಭಾಗದ ಬಾಲಕಿಯರಲ್ಲಿ ವಂಶಿ.ಬಿ.ಕೆ: 100ಮೀ-ಪ್ರಥಮ, 200ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಸಾನ್ವಿ.ಎಸ್.ಪಿ: ತ್ರಿವಿಧ ಜಿಗಿತ- ಪ್ರಥಮ, 100ಮೀ-ತೃತೀಯ, 4*100 ಮೀಟರ್ ರಿಲೇ – ಪ್ರಥಮ, ಬಿ.ಲಿಖಿತಾ.ರೈ- 4*100 ಮೀಟರ್ ರಿಲೇ – ಪ್ರಥಮ, 200ಮೀ-ದ್ವಿತೀಯ, ರಿದ್ಧಿ.ಸಿ. ಶೆಟ್ಟಿ: 400ಮೀ-ಪ್ರಥಮ, 800ಮೀ-ಪ್ರಥಮ, 4*100 ಮೀಟರ್ ರಿಲೇ – ಪ್ರಥಮ, ಅನ್ನಿಕಾ.ಎಂ: 1500ಮೀ –ದ್ವಿತೀಯ, 3000ಮೀ-ದ್ವಿತೀಯ, ಸಮೃದ್ಧಿ.ಜೆ.ಶೆಟ್ಟಿ: ಎತ್ತರಜಿಗಿತ-ಪ್ರಥಮ, ತ್ರಿವಿಧ ಜಿಗಿತ- ಪ್ರಥಮ, ಶ್ರದ್ಧಾಲಕ್ಷ್ಮೀ: ತ್ರಿವಿಧ ಜಿಗಿತ-ದ್ವಿತೀಯ, ಉದ್ಧ ಜಿಗಿತ-ದ್ವಿತೀಯ, ಪವಿತ್ರ: ಈಟಿ ಎಸೆತ: ತೃತೀಯ ಸ್ಥಾನ ಪಡೆದಿರುತ್ತಾರೆ. ಕ್ರೀಡಾಕೂಟದಲ್ಲಿ ಪ್ರಾಥಮಿಕ ವಿಭಾಗ ಮತ್ತು 8ನೇ ತರಗತಿ ಮತ್ತು ಪ್ರೌಢ ವಿಭಾಗದಲ್ಲಿ 9 ವಿದ್ಯಾರ್ಥಿಗಳು ವೈಯಕ್ತಿಕ ಚಾಂಪಿಯನ್ಶಿಪ್ ನೊಂದಿಗೆ ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ.  

ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ಶ್ರೀ ದೀಪಕ್, ಶ್ರೀಮತಿ ರಶ್ಮಿ, ಶ್ರೀ ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವೀಡಿಯೋ – ತಮಿಳುನಾಡಿನ ತೆಂಕಾಶಿಯಲ್ಲಿ ಮೂವರ ಮೇಲೆ ಕರಡಿ ದಾಳಿ – ಇಬ್ಬರು ಗಂಭೀರ

ತಮಿಳುನಾಡಿನ ತೆಂಕಾಶಿಯಲ್ಲಿ ಮೂವರ ಮೇಲೆ ಕರಡಿ ದಾಳಿ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಂತರ, ಅವರು ಕರಡಿಯನ್ನು ಹತ್ತಿರದ ಪ್ರದೇಶಕ್ಕೆ ಟ್ರ್ಯಾಕ್ ಮಾಡಿ, ಶಾಂತಗೊಳಿಸಿ ಸೆರೆಹಿಡಿದರು. ತಮಿಳುನಾಡಿನ ತೆಂಕಾಶಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶನಿವಾರ ಕಾಡು ಕರಡಿಯೊಂದು ದಾಳಿ ನಡೆಸಿದ್ದು, ಮೂವರು ಗಾಯಗೊಂಡಿದ್ದಾರೆ.

ಕರುತಿಲಿಂಗಪುರದ ವೈಗುಂಡಮಣಿ ಎಂಬವರು ದ್ವಿಚಕ್ರ ವಾಹನದಲ್ಲಿ ಮಸಾಲಾ ಪೊಟ್ಟಣಗಳನ್ನು ಹೊತ್ತು ಶಿವಶೈಲಂನಿಂದ ಪೇಠನ್‌ಪಿಳ್ಳೈಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.

ಅವನು ಕಾಡಿನ ಒಂದು ಭಾಗವನ್ನು ದಾಟುತ್ತಿದ್ದಾಗ, ಕರಡಿಯೊಂದು ಪೊದೆಯಿಂದ ಜಿಗಿದು ಅವನ ಮೇಲೆ ದಾಳಿ ಮಾಡಿತು. ಕಾಡು ಪ್ರಾಣಿಯು ವೈಗುಂಡಮಣಿಯನ್ನು ನೆಲಕ್ಕೆ ತಳ್ಳಿತು ಮತ್ತು ಅವನನ್ನು ತೀವ್ರವಾಗಿ ಕಚ್ಚಲು ಪ್ರಾರಂಭಿಸಿತು.

ಗ್ರಾಮಸ್ಥರು ಕರಡಿಯನ್ನು ಓಡಿಸಲು ಕಲ್ಲು ಎಸೆದ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರೂ ಪ್ರಾಣಿ ಕದಲಲಿಲ್ಲ. ದೊಡ್ಡ ಗುಂಪು ಜಮಾಯಿಸುತ್ತಿದ್ದಂತೆ, ಕರಡಿ ಗುಂಪಿನತ್ತ ಓಡಿ, ನಾಗೇಂದ್ರನ್ ಮತ್ತು ಸೈಲೇಂದ್ರ ಎಂಬ ಇಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿತು.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ನಂತರ, ಅವರು ಕರಡಿಯನ್ನು ಹತ್ತಿರದ ಪ್ರದೇಶಕ್ಕೆ ಟ್ರ್ಯಾಕ್ ಮಾಡಿ, ಶಾಂತಗೊಳಿಸಿ ಸೆರೆಹಿಡಿದರು.

ವೀಡಿಯೋ – ಮೈಸೂರಿನಲ್ಲಿ ನಿವೃತ್ತ ಐಬಿ ಅಧಿಕಾರಿ ಮೇಲೆ ಕಾರು ಹರಿದು ಅಪಘಾತ : ಹತ್ಯೆಯನ್ನು ಖಚಿತಪಡಿಸಿದ ಸಿಸಿಟಿವಿ ದೃಶ್ಯಾವಳಿಗಳು

ಮೈಸೂರಿನಲ್ಲಿ ನಿವೃತ್ತ ಐಬಿ (ಇಂಟೆಲಿಜೆನ್ಸ್ ಬ್ಯೂರೊ) ಅಧಿಕಾರಿ ಮೇಲೆ ಕಾರು ಹರಿದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಮಾಜಿ ಐಬಿ ಅಧಿಕಾರಿಯ ಹತ್ಯೆಯನ್ನು ಖಚಿತಪಡಿಸುತ್ತದೆ,

ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ದೃಶ್ಯಾವಳಿಯಲ್ಲಿ ಕಾರೊಂದು ಬಲಬದಿಗೆ ಚಲಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಆರ್.ಎಸ್. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆರ್.ಎಸ್.ಕುಲಕರ್ಣಿ ಅವರಿಗೆ ಡಿಕ್ಕಿ ಹೊಡೆದಿದೆ.

83 ವರ್ಷದ ಮಾಜಿ ಇಂಟೆಲಿಜೆನ್ಸ್ ಬ್ಯೂರೋ (ಐಬಿ) ಅಧಿಕಾರಿಯೊಬ್ಬರು ಶುಕ್ರವಾರ ಸಾವನ್ನಪ್ಪಿದ ರಸ್ತೆ ಅಪಘಾತ ಎಂದು ಆರಂಭದಲ್ಲಿ ಭಾವಿಸಲಾದ ಸಿಸಿಟಿವಿ ದೃಶ್ಯಾವಳಿಗಳು, ಮೈಸೂರು ಪೊಲೀಸರನ್ನು ಕೊಲೆ ಪ್ರಕರಣ ದಾಖಲಿಸಲು ಪ್ರೇರೇಪಿಸಿದೆ. ಅಧಿಕಾರಿಗಳ ಪ್ರಕಾರ, ಬಲಿಪಶು ಶುಕ್ರವಾರ ಸಂಜೆ 5.30 ರ ಸುಮಾರಿಗೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಾನೋತ್ರಿ ಕ್ಯಾಂಪಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಅವರಿಗೆ ಡಿಕ್ಕಿ ಹೊಡೆದಿದೆ.

ಕುಲಕರ್ಣಿ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ಮೃತಪಟ್ಟರು ಎಂದು ಜಯಲಕ್ಷ್ಮೀಪುರಂ ಠಾಣೆ ಇನ್ಸ್ ಪೆಕ್ಟರ್ ಎಲ್.ಹರೀಶ್ ತಿಳಿಸಿದ್ದಾರೆ.

“ದೇಶದ ಉತ್ತರ ಭಾಗದಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಹೆಚ್ಚಿನ ಸೇವೆ ಸಲ್ಲಿಸಿದ ನಿವೃತ್ತ ಅಧಿಕಾರಿ ಮೈಸೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಉಳಿದುಕೊಂಡಿದ್ದರು. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಹೋಗುತ್ತಿದ್ದರು’ ಎಂದು ಹರೀಶ್ ಹೇಳಿದರು. “ಆರಂಭದಲ್ಲಿ, ಅವರು ಆಕಸ್ಮಿಕವಾಗಿ ವಾಹನದಿಂದ ಡಿಕ್ಕಿ ಹೊಡೆದಿದ್ದಾರೆ ಎಂದು ನಾವು ಭಾವಿಸಿದ್ದೇವೆ” ಎಂದು ತನಿಖಾಧಿಕಾರಿ ಹೇಳಿದರು.

“ನಾವು ನಮ್ಮ ಮಾವನ ಶವವನ್ನು ಅಪಘಾತ ಎಂದು ಭಾವಿಸಿ ಅಂತ್ಯಸಂಸ್ಕಾರ ಮಾಡಿದೆವು. ಆದರೆ ಕಾರೊಂದು ಉದ್ದೇಶಪೂರ್ವಕವಾಗಿ ಅವರಿಗೆ ಡಿಕ್ಕಿ ಹೊಡೆದಿರುವುದು ಪತ್ತೆಯಾಗಿದೆ. ಅದೊಂದು ಕೊಲೆ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ ನಂತರ ನಮಗೆ ಆಘಾತವಾಗಿದೆ. ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಕುಲಕರ್ಣಿ ಅವರ ಅಳಿಯ ವೆಂಕಟೇಶ್ ತಿಳಿಸಿದರು.

ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹರೀಶ್ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ನಾವು ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಪ್ರಕರಣದ ತನಿಖೆಗೆ ಮೂವರು ಸದಸ್ಯರ ತಂಡವನ್ನು ರಚಿಸಲಾಗಿದೆ ಎಂದು ಮೈಸೂರು ನಗರ ಆಯುಕ್ತ ಚಂದ್ರಗುಪ್ತ ಸುದ್ದಿಗಾರರಿಗೆ ತಿಳಿಸಿದರು.

ಅಧಿಕಾರಿಗಳ ಪ್ರಕಾರ, ಕುಲಕರ್ಣಿ ಅವರು 35 ವರ್ಷಗಳ ಕಾಲ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಸೇವೆ ಸಲ್ಲಿಸಿ 23 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅವರು ರಿಸರ್ಚ್ ಅಂಡ್ ಅನಾಲಿಟಿಕ್ಸ್ ವಿಂಗ್ (RAW) ನೊಂದಿಗೆ ಕೆಲಸ ಮಾಡಿದರು ಮತ್ತು ಮೈಸೂರಿನಲ್ಲಿ ವಾಸಿಸುತ್ತಿದ್ದರು ಅಲ್ಲಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

ನಿವೃತ್ತ IB ಅಧಿಕಾರಿ ತಮ್ಮ ಆರಂಭಿಕ ದಿನಗಳಲ್ಲಿ ಶಿಕ್ಷಕರಾಗಿದ್ದರು ಮತ್ತು ಭಾರತ ಸರ್ಕಾರದ ರಹಸ್ಯ ಸೇವಾ ಏಜೆಂಟ್ ಆಗಿದ್ದರು. ಅವರು ಭಾರತೀಯ ರಾಜತಾಂತ್ರಿಕ ಕಾರ್ಯಗಳಲ್ಲಿ, ಕಾರ್ಪೊರೇಟ್ ಜಗತ್ತಿನಲ್ಲಿ ಮತ್ತು ಪೈಲಟ್ ಆಗಿಯೂ ಕೆಲಸ ಮಾಡಿದರು.

ರಣಬೀರ್ ಕಪೂರ್, ಆಲಿಯಾ ಭಟ್ ದಂಪತಿಗೆ ಹೆಣ್ಣು ಮಗು

ರಣಬೀರ್ ಕಪೂರ್, ಆಲಿಯಾ ಭಟ್ ದಂಪತಿ ತಮಗೆ ಹೆಣ್ಣು ಮಗುವಾದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮೊದಲ ಮಗು ಹೆಣ್ಣು ಮಗುವನ್ನು ಇಂದು ನವೆಂಬರ್ 6 ರಂದು ಪಡೆದಿದ್ದಾರೆ. ಆಲಿಯಾ ಈಗ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ದಂಪತಿಗಳು ಈಗ ಹೆಣ್ಣು ಮಗುವಿಗೆ ಪೋಷಕರಾಗಿದ್ದಾರೆ. ಶುಭ ಸುದ್ದಿಯನ್ನು ಹಂಚಿಕೊಳ್ಳಲು ಆಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಿಹಿ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮೊದಲ ಮಗು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಇಂದು, ನವೆಂಬರ್ 6 ರಂದು, ಆಲಿಯಾ ತನ್ನ ಹೆರಿಗೆಗಾಗಿ ಮುಂಬೈನ ಸರ್ HN ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾಗಿದ್ದಳು.

ಅದೇ ಸ್ಥಳದಲ್ಲಿ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಚಿಕಿತ್ಸೆ ಪಡೆದು ಕೊನೆಯುಸಿರೆಳೆದಿದ್ದರು.

ರಣಬೀರ್ ಕಪೂರ್ ಏಪ್ರಿಲ್ 14, 2022 ರಂದು ಆಲಿಯಾ ಭಟ್ ಅವರೊಂದಿಗೆ ವಿವಾಹದ ಪ್ರತಿಜ್ಞೆಯನ್ನು ವಿನಿಮಯ ಮಾಡಿಕೊಂಡರು. ದಂಪತಿಗಳು ಬಾಂದ್ರಾದಲ್ಲಿರುವ ತಮ್ಮ ಮನೆ ವಾಸ್ತುದಲ್ಲಿ ವಿವಾಹವಾದರು. ಇದು ಅವರ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಹಾಜರಿದ್ದ ನಿಕಟ ವಿವಾಹವಾಗಿತ್ತು.

ನಗುಮೊಗದ ಹಿರಿಯ ಕಲಾಸಾಧಕರು ಶ್ರೀ ವಿಶ್ವವಿನೋದ ಬನಾರಿ 

ಖ್ಯಾತ ಕೀರಿಕ್ಕಾಡು ಮನೆತನದ  ಶ್ರೀ ವಿಶ್ವವಿನೋದ ಬನಾರಿ  ಅವರು ತೆಂಕುತಿಟ್ಟು ಯಕ್ಷಗಾನದ ಅನುಭವೀ ಹಿರಿಯ ಕಲಾಸಾಧಕರು. ಕಲಾಕ್ಷೇತ್ರದಲ್ಲಿ ಇವರು ಸುಮಾರು ಐದೂವರೆ ದಶಕಗಳ ಅನುಭವಿ. ಭಾಗವತರಾಗಿ, ಗುರುವಾಗಿ, ಸಂಘಟಕರಾಗಿ, ಪ್ರಸಂಗಕರ್ತರಾಗಿ ಇವರು ಯಕ್ಷಗಾನ ವಲಯದಲ್ಲಿ  ಪರಿಚಿತರು. ನಗುಮೊಗದ, ಸರಳ, ಸಜ್ಜನ, ನಿಗರ್ವಿ ವ್ಯಕ್ತಿತ್ವದ ಇವರಿಗೀಗ ಎಪ್ಪತ್ತಾರನೆಯ ವಯಸ್ಸು.

ಕಲಾಭಿಮಾನಿಗಳು, ಶಿಷ್ಯಂದಿರು, ಬಂಧುಮಿತ್ರರೆಲ್ಲಾ ಶ್ರೀಯುತರ ಎಪ್ಪತ್ತೈದರ ಸಂಭ್ರಮಾಚರಣೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಚಾರ. ನವೆಂಬರ್ 13ರಂದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ಈ ಸತ್ಕಾರ್ಯವು ನಡೆಯಲಿದೆ. ಅಂದು ಬೆಳಗಿನಿಂದ ಸಂಜೆಯ ತನಕ ಯಕ್ಷಗಾನ ಕಲಾ ಕಾರ್ಯಕ್ರಮಗಳೊಂದಿಗೆ ಈ ಕಾರ್ಯಕ್ರಮವು ನಡೆಯುತ್ತದೆ. 

ಅನುಭವೀ ಕಲಾಸಾಧಕರಾದ  ಶ್ರೀ ವಿಶ್ವವಿನೋದ ಅವರ ಹುಟ್ಟೂರು ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಬನಾರಿ. 1947 ಮೇ 11ರಂದು ಕೀರಿಕ್ಕಾಡು ಮಾಸ್ತರ್ ಶ್ರೀ ವಿಷ್ಣು ಭಟ್ ಮತ್ತು ಶ್ರೀಮತಿ ಪರಮೇಶ್ವರಿ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಓದಿದ್ದು ದೇಲಂಪಾಡಿ ಸರಕಾರಿ ಶಾಲೆಯಲ್ಲಿ. (ಒಂದರಿಂದ ಐದನೇ ತರಗತಿ) ಅಡ್ಯನಡ್ಕ ಶಾಲೆಯಲ್ಲಿ (ಆರರಿಂದ ESLC ವರೆಗೆ) ಬಳಿಕ ವಿಟ್ಲ ಪ್ರೌಢಶಾಲೆಯಲ್ಲಿ.

ಯಕ್ಷಗಾನವು ಕೀರಿಕ್ಕಾಡು ಮಾಸ್ತರರ ಪುತ್ರನಾಗಿ ರಕ್ತಗತವಾಗಿಯೇ ಬಂದಿತ್ತು. ತಂದೆಯವರು ಕಲಾವಿದನಾಗಿ, ಸಂಘಟಕನಾಗಿ, ಗುರುವಾಗಿ ನಡೆಸುತ್ತಿದ್ದ ಯಕ್ಷಗಾನ ಚಟುವಟಿಕೆಗಳನ್ನು ನೋಡುತ್ತಾ ಬೆಳೆದವರು. ಇದರಿಂದಾಗಿ ಕಲಾಸಕ್ತಿಯುಂಟಾಗಿ ತೊಡಗಿಸಿಕೊಳ್ಳಬೇಕೆಂಬ ಆಸೆಯಾಗಿತ್ತು. ಮಗನ ಯಕ್ಷಗಾನಾಸಕ್ತಿಯನ್ನು ಕೀರಿಕ್ಕಾಡು ಮಾಸ್ತರರು ಗಮನಿಸಿ ಪ್ರೋತ್ಸಾಹವನ್ನೂ, ಅವಕಾಶವನ್ನೂ ನೀಡಿದ್ದರು.

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಯಕ್ಷಗಾನ ನಾಟಕ ಪ್ರದರ್ಶನದಲ್ಲಿ ಬಾಲಕೃಷ್ಣನಾಗಿ ರಂಗಪ್ರವೇಶ. (ಪೂತನೀ ಸಂಹಾರದ ವರೆಗೆ) ಬಳಿಕ ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಸಿತಕೇತ, ಸಂಪೂರ್ಣ ರಾಮಾಯಣದಲ್ಲಿ ಅಂಗದ, ಮೇಧಿನೀ ನಿರ್ಮಾಣದಲ್ಲಿ ವಿಷ್ಣು ಮೊದಲಾದ ಪಾತ್ರಗಳನ್ನು ನಿರ್ವಹಿಸಿದ್ದರು. ತರಬೇತಿ ಪಡೆಯುವ ವಿದ್ಯಾರ್ಥಿಗಳಿಗಾಗಿ ನಡೆಸುವ ತಾಳಮದ್ದಳೆಗಳಲ್ಲೂ ಅರ್ಥ ಹೇಳಿದ್ದರು. ಇದರಿಂದ ಅರ್ಥಜ್ಞಾನ ಬೆಳೆಯಲು ಅವಕಾಶವಾಗಿತ್ತು.

ಬಳಿಕ ಅಡ್ಯನಡ್ಕ ಶಾಲೆಯಲ್ಲಿ ಓದುತ್ತಿರುವಾಗಲೂ ತಾಳಮದ್ದಳೆಗಳಲ್ಲಿ ಅರ್ಥಹೇಳಲು ಅವಕಾಶಗಳು ಸಿಕ್ಕಿತ್ತು. ವಿಟ್ಲ ಶಾಲೆಯ ವಿದ್ಯಾರ್ಥಿಯಾಗಿರುವಾಗ ಭಾಷಣ ಕಲೆಯನ್ನು ಅಭ್ಯಸಿಸಿ ತೊಡಗಿಸಿಕೊಂಡಿದ್ದರು. ವಿಟ್ಲ ಪ್ರೌಢಶಾಲಾ ವಿದ್ಯಾರ್ಜನೆಯ ಬಳಿಕ ಬನಾರಿಯಲ್ಲಿ ಕೃಷಿ ಮತ್ತು ಯಕ್ಷಗಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಣ್ಣ ಶ್ರೀ ವನಮಾಲಾ ಕೇಶವ ಭಟ್ಟರು ಅಧ್ಯಾಪಕರಾಗಿ, ಜತೆಗೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವನ್ನು ಮುನ್ನಡೆಸುತ್ತಿದ್ದರು. ಅವರ ಜತೆ ವಿಶ್ವವಿನೋದರೂ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ಅದೇ ಸಮಯಕ್ಕೆ ಪತ್ರಿಕೆಯೊಂದರಲ್ಲಿ “ಮನೆಯಲ್ಲೇ ಕುಳಿತು ವೈದ್ಯರಾಗಿ” ಎಂಬ ಜಾಹೀರಾತನ್ನು ಓದಿದ್ದರು. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಅಂಚೆ ಶಿಕ್ಷಣದ ಮೂಲಕ ಬೆಂಗಳೂರಿನ ಎ.ಎಂ. ರತ್ನಂ ಅವರ ಹೋಮಿಯೋ ಕರೆಸ್ಪಾಂಡೆನ್ಸ್ ಕಾಲೇಜಿನಿಂದ ಹೋಮಿಯೋಪಥಿಯಲ್ಲಿ ಎಂ.ಬಿ.ಎಚ್.ಎಸ್ ಪದವಿಯನ್ನು ಪಡೆದರು. ಆ ಸಂಸ್ಥೆಯು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ನಡೆಸಿದ ಪ್ರಾಯೋಗಿಕ ತರಬೇತಿಯಲ್ಲೂ ಭಾಗವಹಿಸಿ ರೋಗಿಗಳನ್ನು ಶುಶ್ರೂಷಿಸುವ, ಔಷಧಿ ನೀಡುವ ಕ್ರಮವನ್ನು ಅರಿತುಕೊಂಡರು.

ಅದೇ ಸಮಯಕ್ಕೆ ಅಣ್ಣ ಶ್ರೀ ರಮಾನಂದ ಬನಾರಿ ಅವರು ಎಂ.ಬಿ.ಬಿ.ಎಸ್ ಪೂರೈಸಿ ಬಂದಿದ್ದರು. ಅವರು ಆದೂರು,ಬೋವಿಕ್ಕಾನ ಮೊದಲಾದೆಡೆ ಸರಕಾರೀ ವೈದ್ಯರಾಗಿ ಸೇವೆ ಸಲ್ಲಿಸಿದರು. ಬಳಿಕ ಮಂಜೇಶ್ವರದಲ್ಲಿ ಕ್ಲಿನಿಕ್ ತೆರೆದಿದ್ದರು. ಈ ಸಂದರ್ಭಗಳಲ್ಲಿ  ಶ್ರೀ ವಿಶ್ವವಿನೋದ ಅವರು ಅಣ್ಣ ಡಾ. ರಮಾನಂದ ಬನಾರಿ ಅವರ ಸಹಾಯಕರಾಗಿ ಅನುಭವಗಳನ್ನು ಗಳಿಸಿಕೊಂಡರು. 1968ರಿಂದ ಬನಾರಿ ಮನೆಯಲ್ಲಿದ್ದು ವೈದ್ಯರಾಗಿಯೂ ಸೇವೆ ಸಲ್ಲಿಸಲು ಆರಂಭ. ಸುಮಾರು 54 ವರ್ಷಗಳಿಂದ ಈ ಕಾಯಕವನ್ನು ನಡೆಸುತ್ತಿದ್ದಾರೆ.  

 ಶ್ರೀ ವಿಶ್ವವಿನೋದ ಬನಾರಿ ಅವರಿಗೆ ಯಕ್ಷಗಾನ ಹಿಮ್ಮೇಳದಲ್ಲಿ ಆಸಕ್ತಿ. ನಡುಮನೆ ಜತ್ತಪ್ಪ ರೈಗಳು ಅಣ್ಣ ವನಮಾಲಾ ಕೇಶವ ಭಟ್ಟರಿಗೆ ಭಾಗವತಿಕೆ ಪಾಠ ಮಾಡುವಾಗ ಗಮನವಿಟ್ಟು ಕೇಳುತ್ತಿದ್ದರು. ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ 1968ರಲ್ಲಿ ತರಬೇತಿ ಆರಂಭಿಸಿದ್ದರು. ಅವರ ಸೂಚನೆಯಂತೆ ಮಾಂಬಾಡಿಗೆ ತೆರಳಿ ಮಾಂಬಾಡಿ ಶ್ರೀ ನಾರಾಯಣ ಭಾಗವತರಿಂದ ಭಾಗವತಿಕೆ ಅಭ್ಯಾಸ. ಬಳಿಕ ಪ್ರದರ್ಶನಗಳಲ್ಲಿ ಭಾಗವಹಿಸುವಾಗ ಖ್ಯಾತ ಭಾಗವತ ತಲೆಂಗಳ ಶಂಭಟ್ಟರ ನಿರ್ದೇಶನವೂ ದೊರಕಿತ್ತು. ನಂತರದ ದಿನಗಳಲ್ಲಿ ಇವರ ಪುತ್ರ ಮದ್ದಳೆಗಾರರಾದ ತಲೆಂಗಳ ಗೋಪಾಲಕೃಷ್ಣ ಭಟ್ಟರ ಸಹಕಾರವೂ ದೊರೆತಿತ್ತು. 

ಶ್ರೀ ವಿಶ್ವವಿನೋದ ಬನಾರಿ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ಮೇಳದ ತಿರುಗಾಟ ನಡೆಸದಿದ್ದರೂ ಉತ್ತಮ ಭಾಗವತರೆಂಬ ಹೆಸರು ಗಳಿಸಿದ್ದರು. 1981ರಲ್ಲಿ ನಡೆದ ಅಪಘಾತದ ಬಳಿಕ ಪ್ರದರ್ಶನಗಳಲ್ಲಿ ಹಾಡುವುದನ್ನು ಅನಿವಾರ್ಯವಾಗಿ ಕಡಿಮೆ ಮಾಡಬೇಕಾಗಿ ಬಂದಿತ್ತು. ಆದರೂ ಕಲಿಕಾಸಕ್ತರಿಗೆ ಭಾಗವತಿಕೆಯನ್ನು ಕಲಿಸು ಎಂಬ ಸಲಹೆ ತಂದೆಯವರಿಂದ ಬಂದಿತ್ತು. ಕಲಿಕಾಸಕ್ತರಿಗೆ ತರಬೇತಿ ಜತೆಗೆ ಪ್ರಸಂಗ ರಚನಾ ಕಾಯಕದಲ್ಲೂ ತೊಡಗಿಸಿಕೊಂಡರು.

1982ರಲ್ಲಿ “ಸೌಭಾಗ್ಯ ವಿಜಯ” ಎಂಬ ಪ್ರಸಂಗ ರಚಿಸಿದ್ದರು. ಇದು ಆದಿ ಸುಬ್ರಹ್ಮಣ್ಯ ಮೇಳದಲ್ಲಿ ಜಯಭೇರಿ ಬಾರಿಸಿದ ಪ್ರಸಂಗ. ಭಾಗವತರಾಗಿ  ಶ್ರೀ ವಿಶ್ವವಿನೋದ ಬನಾರಿ ಅವರಿಗೆ ಅನೇಕ ಪ್ರಸಂಗಗಳ ನಡೆ, ಪದ್ಯಗಳು ಕಂಠಪಾಠವಾಗಿತ್ತು. ಶ್ರೀಯುತರು ರಚಿಸಿದ ಎರಡನೇ ಪ್ರಸಂಗ ಆದಿಚುಂಚನ ಕ್ಷೇತ್ರ ಮಹಾತ್ಮೆ. ಬಳಿಕ ‘ಶಬರಿಮಲೆ ಅಯ್ಯಪ್ಪ’ ಎಂಬ ಪ್ರಸಂಗ ರಚನೆ. ಬಳಿಕ ಕಲಾಪೋಷಕ, ಸಂಪಾಜೆ ಯಕ್ಷೋತ್ಸವದ ರೂವಾರಿ ಶ್ರೀ ಡಾ.ಟಿ. ಶ್ಯಾಮ ಭಟ್ಟರ ಕೋರಿಕೆಯಂತೆ ತೊಡಿಕಾನ ಕ್ಷೇತ್ರ ಮಹಾತ್ಮೆ ಎಂಬ ಪ್ರಸಂಗವನ್ನೂ ರಚಿಸಿದ್ದರು.

ಇವರು ರಚಿಸಿದ ಕೃತಿಗಳು ಈ ರೀತಿ ಇವೆ. ಶ್ರೀ ಶಬರಿಮಲೆ ಅಯ್ಯಪ್ಪ, ತೊಡಿಕಾನ ಕ್ಷೇತ್ರ ಮಹಾತ್ಮೆ, ದಕ್ಷಾಧ್ವರ (ಹವ್ಯಕ ಭಾಷೆ), ಮಾಗಧ ವಧೆ (ಹವ್ಯಕ ಭಾಷೆ), ಇವಿಷ್ಟು ಪ್ರಕಟಿತ ಕೃತಿಗಳು. ಅಪ್ರಕಟಿತ ಕೃತಿಗಳು – ಸೌಭಾಗ್ಯ ವಿಜಯ, ಆಲಿಂಜ ವೈಭವ, ಆದಿಚುಂಚನಗಿರಿ ಮಹಾತ್ಮೆ, ನಿಮಿಷಾಂಬ ದೇವಿ ಮಹಾತ್ಮೆ, ಪಂಚವಟಿ (ಮಲಯಾಳಂ ಮತ್ತು ತುಳು), ಗ್ರಾಮಾಭ್ಯುದಯ, ಯಕ್ಷಗಾನ ತುಂಡು ಪದ್ಯಗಳ ಸಂಕಲನ (ಕಿಸೆಪದ್ಯ), ಅತಿಕಾಯ ಕಾಳಗ (ಅರ್ಥಸಹಿತ), ಅಂಗದ ಸಂಧಾನ (ಅರ್ಥ ಸಹಿತ), ಮದ್ಯಾಸುರ ಕಾಳಗ, ವೀರರಾಣಿ ಅಬ್ಬಕ್ಕ ಮತ್ತು ಕಿತ್ತೂರರಾಣಿ ಚೆನ್ನಮ್ಮ (ಇವೆರಡೂ ದೂರದರ್ಶನದಲ್ಲಿ ಪ್ರಸಾರಿತ), ಪರಿಸರ ಸಂರಕ್ಷಣೆ, ಗೋಕರ್ಣ ಕ್ಷೇತ್ರ ಮಹಾತ್ಮೆ, ಕೊರೋನಾ ಜಾಗೃತಿ ಯಕ್ಷಗಾನ ಇತ್ಯಾದಿ.

ಶ್ರೀ ವಿಶ್ವವಿನೋದ ಅವರು ಸುಳ್ಯ ವನಜ ರಂಗಮನೆ, ಕೋಡ್ಲ ಗಣಪತಿ ಭಟ್ಟರ ಭುವನೇಶ್ವರೀ ಯಕ್ಷಗಾನ ಕಲಾಸಂಘ ಸುಳ್ಯ, ಮಂಗಳೂರು ಚಿಲಿಂಬಿ, ತಲಪಾಡಿ ಶಾರದಾ ವಿದ್ಯಾಲಯ ಮೊದಲಾದ ಕಡೆ ಭಾಗವತಿಕೆ ತರಬೇತಿಯನ್ನು ನೀಡಿರುತ್ತಾರೆ. ಶ್ರೀಯುತರ ಕಲಾಚಟುವಟಿಕೆಗಳಿಗೆ ತಂದೆ ಕೀರಿಕ್ಕಾಡು ಮಾಸ್ತರರ, ಅಣ್ಣಂದಿರಾದ ಶ್ರೀ ವನಮಾಲಾ ಕೇಶವ ಭಟ್ಟರ ಮತ್ತು ಡಾ. ರಮಾನಂದ ಬನಾರಿ ಅವರ ಆಶೀರ್ವಾದ, ಪ್ರೋತ್ಸಾಹವು ಇತ್ತು. ಪ್ರಸ್ತುತ ಅಣ್ಣ ಡಾ. ರಮಾನಂದ ಬನಾರಿ ಅವರ ಜತೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಅಧ್ಯಯನ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ.

ಶ್ರೀ ವಿಶ್ವವಿನೋದ ಬನಾರಿ ಅವರ ಪತ್ನಿ ಶ್ರೀಮತಿ ಉಮಾ ಪರಮೇಶ್ವರಿ. (1974ರಲ್ಲಿ ವಿವಾಹ). ಇವರಿಗೆ ನಾಲ್ಕು ಮಂದಿ ಮಕ್ಕಳು. ಪ್ರಥಮ ಪುತ್ರಿ ಶ್ರೀಮತಿ ಸುಮನಾರ್ಚಿನಿ. ಇವರ ಪತಿ ಶ್ರೀ ಶ್ಯಾಮಪ್ರಸಾದ. ದ್ವಿತೀಯ ಪುತ್ರಿ ಶ್ರೀಮತಿ ಗಾಯತ್ರಿ. ಇವರ ಪತಿ ಶ್ರೀ ಶಂಭಯ್ಯ. ತೃತೀಯ ಪುತ್ರಿ ಶ್ರೀಮತಿ ಸೌಜನ್ಯ. ಇವರ ಪತಿ ಶ್ರೀ ಶ್ಯಾಮಪ್ರಕಾಶ.

ಪುತ್ರ ಶ್ರೀ ವಿಷ್ಣುಶರಣ. ಇವರು ಕೃಷಿಕರು ಮತ್ತು ಯಕ್ಷಗಾನ ಚೆಂಡೆವಾದಕರು. ಇವರ ಪತ್ನಿ ಶ್ರೀಮತಿ ಸರೋಜಿನಿ. ಇವರು ಖಂಡಿಗೆಮೂಲೆ ಯಕ್ಷಸಿರಿ ಕಲಾವೇದಿಕೆಯ ಶ್ರೀ ಶ್ಯಾಮ ಭಟ್ಟರ ಪುತ್ರಿ. ವಿದ್ಯಾರ್ಥಿನಿಯಾಗಿರುವಾಗಲೇ ನಾಟ್ಯ ಕಲಿತು ವೇಷ ಮಾಡುತ್ತಿದ್ದರು. ಭರತನಾಟ್ಯವನ್ನೂ ಕಲಿತಿರುತ್ತಾರೆ. ಪ್ರಸ್ತುತ ಕಲಿಕಾಸಕ್ತರಿಗೆ ನಾಟ್ಯ ತರಬೇತಿಯನ್ನು ನೀಡುತ್ತಿದ್ದಾರೆ.  ಕಲಾಸಾಧಕ, ನಗುಮೊಗದ ಶ್ರೀ ವಿಶ್ವವಿನೋದ ಬನಾರಿ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅಭಿನಂದನೆಗಳು. 

ಶ್ರೀ ವಿಶ್ವವಿನೋದ ಬನಾರಿ, ‘ಬನಸಿರಿ’, ಕೊಳಂಬೆ, ಅಂಚೆ ಪಂಜಿಕಲ್ಲು -671543, ಕಾಸರಗೋಡು, ಮೊಬೈಲ್: 9483922201

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ಪುತ್ತೂರಿನ ನವವಿವಾಹಿತೆಯೋರ್ವರು ಪತಿಯ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ – ಕೇಸು ದಾಖಲು 

ಪುತ್ತೂರಿನ ನವವಿವಾಹಿತೆಯೋರ್ವರು ಪುತ್ತೂರಿನಲ್ಲಿರುವ ತನ್ನ ಪತಿಯ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಯುವತಿ.  

ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿರುವ ಈಕೆ ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. 

ಈಕೆ ತನ್ನ ಪತಿಯ ಮನೆಯಲ್ಲಿರುವಾಗಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡದ್ದಾರೆ ಎಂದು ತಿಳಿದುಬಂದಿದೆ. ಇವರು  ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ.  

ಜಯಪ್ರಕಾಶ್ ಅವರ ಜತೆ 7ತಿಂಗಳ ಹಿಂದೆ ವೈಶಾಲಿ ಅವರ ವಿವಾಹ ನೆರವೇರಿತ್ತು.  ವೈಶಾಲಿ ಅವರು ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಬಗ್ಗೆ ಮೃತಳ ತಾಯಿ ಪೊಲೀಸರಿಗೆ ದೂರುನೀಡಿದ್ದು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದು ಆತ್ಮಹತ್ಯೆಗೆ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. 

ಮತ್ಸ್ಯಕನ್ಯೆಯ ಶಿಲ್ಪ “ಸಾಗರಕನ್ಯಕಾ” – ಗಿನ್ನೆಸ್ ದಾಖಲೆ ಪಡೆದ ಶಿಲ್ಪದ ಮನೋಹರ ದೃಶ್ಯಕ್ಕೆ ಹೆಲಿಕಾಪ್ಟರ್ ಅಡ್ಡಿ, ಅಸಾಮಾಧಾನ ವ್ಯಕ್ತಪಡಿಸಿದ ಶಿಲ್ಪಿ ಕನಾಯಿ ಕುಂಞಿರಾಮನ್  

ಗಿನ್ನೆಸ್ ದಾಖಲೆ ಪಡೆದ ಶಿಲ್ಪವಾದ, ಶಿಲ್ಪಿ ಕನಾಯಿ ಕುಂಞಿರಾಮನ್ ಅವರು ಶಂಕುಮುಖಂನಲ್ಲಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಮತ್ಸ್ಯಕನ್ಯೆಯ ಪ್ರತಿಮೆ ‘ಸಾಗರಕನ್ಯಕಾ’ ಗೆ ಹೆಲಿಕಾಪ್ಟರ್ ಒಂದು ಅಡ್ಡಿಯಾಗಿದೆ.

ಆ ಮತ್ಸ್ಯಕನ್ಯೆಯ ಪ್ರತಿಮೆಯ ಸಮೀಪ ಒಂದು ಹೆಲಿಕಾಪ್ಟರ್ ಬಂದು ನಿಂತಿರುವುದರಿಂದ ಮತ್ಸ್ಯಕನ್ಯೆಯ ಸೌಂದರ್ಯಕ್ಕೆ ಅದು ಅಡ್ಡಿಯಾಗಿದೆ. ವಿಶ್ವದ ಅತಿ ದೊಡ್ಡ ಮತ್ಸ್ಯಕನ್ಯೆಯ ಪ್ರತಿಮೆಯನ್ನು ತಯಾರಿಸಿದ್ದಕ್ಕಾಗಿ ಕುನ್ಹಿರಾಮನ್ ಅವರಿಗೆ ಈ ಗಿನ್ನೆಸ್ ದಾಖಲೆಯ ಗೌರವವನ್ನು ನೀಡಲಾಯಿತು.

ಆದಾಗ್ಯೂ, ಹಳೆಯ ನೌಕಾಪಡೆಯ ಹೆಲಿಕಾಪ್ಟರ್ ಸಾಗರಕನ್ಯಕಾದ ಹಿನ್ನೆಲೆಯ ಸೌಂದರ್ಯವನ್ನು ಹಾಳುಮಾಡಿದೆ. ಹೆಲಿಕಾಪ್ಟರ್ ತೆಗೆಯುವಂತೆ ಕುಂಞಿರಾಮನ್ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಕನಾಯಿ ಕುಂಞಿರಾಮನ್ ತನ್ನ ಮನವಿಯನ್ನು ಆಲಿಸದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕೇರಳ ಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು.

1990 ರಲ್ಲಿ, ಅವರು ಶಿಲ್ಪವನ್ನು ನಿರ್ಮಿಸುವಾಗ, ಅಶ್ಲೀಲತೆಯನ್ನು ಉಲ್ಲೇಖಿಸಿ ಅದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಆದೇಶ ನೀಡಿದ್ದರು. 90 ರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ಕೆ ಕರುಣಾಕರನ್ ಅವರು ಕಲೆಕ್ಟರ್ ಆದೇಶವನ್ನು ಸರಿಪಡಿಸಿದ್ದರು ಮತ್ತು ಕುಂಞಿರಾಮನ್ ಅವರ ಶಿಲ್ಪವನ್ನು ಮುಂದುವರಿಸಲು ಅವಕಾಶ ನೀಡಲಾಯಿತು.

ಹೆಲಿಕಾಪ್ಟರ್ ಅನ್ನು ಮೇ, 2020 ರಲ್ಲಿ ಇರಿಸಲಾಗಿತ್ತು. ಇದು ಕೋವಿಡ್‌ನ ಅವಧಿಯಾದ್ದರಿಂದ ಆ ಸಮಯದಲ್ಲಿ ಹೆಚ್ಚಿನವರು ಅದನ್ನು ಗಮನಿಸಲಿಲ್ಲ. ರಾಜ್ಯದ ಸಾಂಸ್ಕೃತಿಕ ವಲಯಗಳಲ್ಲಿ ಪ್ರತಿಭಟನೆಯ ನಂತರ ಅಂದಿನ ಪ್ರವಾಸೋದ್ಯಮ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಮತ್ತು ಕುಂಞಿರಾಮನ್ ಶಂಕುಮುಖಕ್ಕೆ ತೆರಳಿದರು.

ಹೆಲಿಕಾಪ್ಟರ್ ಅನ್ನು ಮಕ್ಕಳ ಉದ್ಯಾನವನಕ್ಕೆ ವರ್ಗಾಯಿಸಲು ನಿರ್ಧರಿಸಲಾಯಿತು ಮತ್ತು ಈಗ ಹೆಲಿಕಾಪ್ಟರ್ ಇರಿಸಲಾಗಿರುವ ಸ್ಥಳದಲ್ಲಿ ಸೂಕ್ತವಾದ ಶಿಲ್ಪವನ್ನು ಮಾಡಲಾಗುವುದು ಎಂದು ಭರವಸೆ ನೀಡಲಾಗಿದ್ದರೂ ಯಾವುದೇ ಮುಂದಿನ ಕ್ರಮ ಕೈಗೊಂಡಿಲ್ಲ.

ಕನಾಯಿ ಕುಂಞಿರಾಮನ್ ಅವರ ದೂರುಗಳನ್ನು ಆಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂಸ್ಕೃತಿಕ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.

ಆರ್ಯ ರಾಜೇಂದ್ರನ್ ಪತ್ರ: ಪತ್ರ ನಕಲಿ ಎಂದ ಮೇಯರ್ ಮತ್ತು ಸಿಪಿಎಂ ಜಿಲ್ಲಾ ಕಾರ್ಯದರ್ಶಿ – ಮೇಯರ್ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಪಕ್ಷಗಳು ಮತ್ತು ಬಿಜೆಪಿ

ತಿರುವನಂತಪುರಂ: ಕಾರ್ಪೊರೇಷನ್‌ನಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅಣವೂರ್ ನಾಗಪ್ಪನ್‌ಗೆ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರ ಪರವಾಗಿ ಬರೆದ ಪತ್ರ ಶನಿವಾರ ಬಹಿರಂಗಗೊಂಡ ನಂತರ ಸಿಪಿಎಂ ತನ್ನನ್ನು ತಾನು ರಕ್ಷಿಸಿಕೊಳ್ಳಲು ತೀವ್ರ ಹೆಣಗಾಡುತ್ತಿದೆ.

ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನು ಪಡೆದ ಯುಡಿಎಫ್ ಮತ್ತು ಬಿಜೆಪಿ ಮೇಯರ್ ರಾಜೀನಾಮೆ ಮತ್ತು ತನಿಖೆಗೆ ಒತ್ತಾಯಿಸಿ ಆಂದೋಲನವನ್ನು ಪ್ರಾರಂಭಿಸಿದವು. ಸ್ವಜನ ಪಕ್ಷಪಾತ ತೋರಿದ ಮೇಯರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಿತ್ತು.

ಮೇಯರ್ ಆರ್ಯ ರಾಜೇಂದ್ರನ್ ಅವರ ಅಧಿಕೃತ ಲೆಟರ್ ಪ್ಯಾಡ್ ನಲ್ಲಿರುವುದರಿಂದ ಪತ್ರ ನಕಲಿ ಎಂಬ ಪಾಲಿಕೆ ವಾದಕ್ಕೆ ಬಲ ಸಿಗಲಿಲ್ಲ. ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳೇ ತಾತ್ಕಾಲಿಕ ನೇಮಕಾತಿಗಳಿಗೆ ಜನರನ್ನು ಶಿಫಾರಸು ಮಾಡುತ್ತಾರೆ ಎಂಬ ರೀತಿಯಲ್ಲಿ ವಿರೋಧ ಪಕ್ಷವು ಪತ್ರವನ್ನು ಅರ್ಥೈಸುತ್ತದೆ.

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಿಪಿಎಂ ನಾಯಕರ ಸಂಬಂಧಿಗಳ ಅಕ್ರಮ ನೇಮಕಾತಿ ಆರೋಪದ ಮೇಲೆ ರಾಜ್ಯಪಾಲರು ಸರ್ಕಾರದೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪತ್ರ ವಿವಾದವೂ ರಾಜ್ಯಪಾಲರ ನಿಲುವನ್ನು ಬಲಪಡಿಸುತ್ತದೆ.

ನಿರುದ್ಯೋಗಿಗಳ ಭಾವನೆಗಳಿಗೆ ಮನವಿ ಮಾಡುವ ಮೂಲಕ ಪ್ರತಿಪಕ್ಷಗಳು ಈ ವಿಷಯವನ್ನು ಕೈಗೆತ್ತಿಕೊಳ್ಳುವುದರೊಂದಿಗೆ, ವಿವಾದವನ್ನು ಕೊನೆಗೊಳಿಸಲು ಸಿಪಿಎಂ ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. ಸಿಪಿಎಂ ಮತ್ತು ಮೇಯರ್ ಆರ್ಯ ರಾಜೇಂದ್ರನ್ ಅವರು ಪತ್ರ ನಕಲಿಯಾಗಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ನಿಗಮದಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಅಣವೂರು ನಾಗಪ್ಪನವರು ಆರ್ಯ ಅವರನ್ನು ವಿಚಾರಿಸಿದಾಗ ಅವರು ಅಂತಹ ಪತ್ರವನ್ನು ಸಿದ್ಧಪಡಿಸಿಲ್ಲ ಎಂದು ಉತ್ತರಿಸಿದರು. ಪಕ್ಷದ ನಾಯಕತ್ವಕ್ಕೆ ಅಧಿಕೃತವಾಗಿ ಪತ್ರ ಬಂದಿಲ್ಲ ಎಂದೂ ಅಣವೂರು ಹೇಳಿದ್ದಾರೆ. ಈಗ ನಾಯಕತ್ವಕ್ಕೆ ಸಿಗದ ಪತ್ರ ವಾಟ್ಸಾಪ್ ಗ್ರೂಪ್ ಮೂಲಕ ಹೇಗೆ ಹರಿದಾಡಿತು ಎಂಬ ಪ್ರಶ್ನೆ ಮೂಡಿದೆ.

ಕುಡಿದ ಅಮಲಿನಲ್ಲಿ ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜಿನೆ ಮಾಡಿದ ಪ್ರಯಾಣಿಕ – ಬಂಧಿಸಿದ ಪೊಲೀಸರು  

ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನು ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜಿನೆ ಮಾಡಿದ್ದಾನೆ.

ಬಾಲಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಲವಾರು ಸಣ್ಣ ಬಾಟಲಿ ವೈನ್‌ಗಳನ್ನು ಸೇವಿಸಿದ ನಂತರ ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಪ್ರಯಾಣಿಕನ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನ 72 ವರ್ಷದ ವ್ಯಕ್ತಿಯ ಮೇಲೆ ಆಕ್ರಮಣಕಾರಿ ವರ್ತನೆಯ ಆರೋಪ ಹೊರಿಸಲಾಗಿದೆ. “ನಿನ್ನೆ ಸಂಜೆ ವಿಮಾನವು ಬ್ರಿಸ್ಬೇನ್‌ಗೆ ಇಳಿಯುತ್ತಿದ್ದಂತೆ ಅವನು ತನ್ನ ಸೀಟಿನಲ್ಲಿ ಕುಳಿತುಕೊಂಡು ನೆಲದ ಮೇಲೆ ಮೂತ್ರ ವಿಸರ್ಜಿಸಿದ್ದಾನೆ” ಎಂದು ಪೊಲೀಸರು ನವೆಂಬರ್ 3 ರಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ಮನುಷ್ಯನ ನಡವಳಿಕೆಯನ್ನು “ಅವಮಾನಕರ” ಎಂದು ವಿವರಿಸಿದರು, ಅದಕ್ಕೆ ಯಾವುದೇ ಕ್ಷಮೆಯಿಲ್ಲ ಎಂದು ಹೇಳಿದರು.

“ಯಾವುದೇ ಸೆಟ್ಟಿಂಗ್‌ಗಳಲ್ಲಿ ಸಮಾಜವಿರೋಧಿ ಅಥವಾ ಕಾನೂನುಬಾಹಿರ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು AFP (ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್) ಇದನ್ನು ಆಸ್ಟ್ರೇಲಿಯಾದ ವಿಮಾನ ನಿಲ್ದಾಣಗಳಲ್ಲಿ ಸಹಿಸುವುದಿಲ್ಲ” ಎಂದು ಬ್ರಿಸ್ಬೇನ್ ವಿಮಾನ ನಿಲ್ದಾಣದ ಕಮಾಂಡರ್ ಸೂಪರಿಂಟೆಂಡೆಂಟ್ ಮಾರ್ಕ್ ಕೋಲ್ಬ್ರಾನ್ ಹೇಳಿದ್ದಾರೆ.

ಬಾಲಿ-ಬ್ರಿಸ್ಬೇನ್ ವಿಮಾನದಲ್ಲಿದ್ದ ವ್ಯಕ್ತಿ ಬ್ರಿಸ್ಬೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಅವರಿಗೆ ನೋಟಿಸ್ ನೀಡಲಾಗಿದೆ. ನಂತರ, ಅವರನ್ನು ಬ್ರಿಸ್ಬೇನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಅಪರಾಧಕ್ಕೆ ತಪ್ಪೊಪ್ಪಿಕೊಂಡ ನಂತರ, ಅವರಿಗೆ 12 ತಿಂಗಳ ಸಾಮಾನ್ಯ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.

ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ – ತುಳಸಿ ಜಲಂಧರ

ಉತ್ಥಾನ ದ್ವಾದಶಿ ತುಳಸಿ ಪೂಜೆಯ ಮಹತ್ವವನ್ನು ತಿಳಿಸುವ ಪೌರಾಣಿಕ ಕಥಾನಕ ‘ತುಳಸಿ ಜಲಂಧರ’ ಪ್ರಸಂಗದ ತಾಳಮದ್ದಳೆ ಉಪ್ಪಿನಂಗಡಿ ನಟ್ಟಿಬೈಲಿನ ಶ್ರೀರಾಮ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿತು.

ಭಾಗವತರಾಗಿ ಡಿ.ಕೆ ಆಚಾರ್ಯ ಅಲಂಕಾರು, ಕು.ಶ್ರೇಯಾ ಆಲಂಕಾರು, ಕುಮಾರಿ ಪ್ರಜ್ಞಾ ಆಚಾರ್ಯ ಉಪ್ಪಿನಂಗಡಿ, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮೋಹನ ಶರವೂರ್,ಶ್ರೀಪತಿ ಭಟ್ ಉಪ್ಪಿನಂಗಡಿ 

ಅರ್ಥಧಾರಿಗಳಾಗಿ ಸತೀಶ ಆಚಾರ್ಯ ಮಾಣಿ, ಕುಮಾರಿ ಹರ್ಷಿತಾ, ದಿವಾಕರ ಆಚಾರ್ಯ ಗೇರುಕಟ್ಟೆ, ನಾರಾಯಣ ಭಟ್ ಅಲಂಕಾರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಕುಮಾರಿ ವರಲಕ್ಷ್ಮಿ, ಬಾಲಕೃಷ್ಣ ಕೇಪುಳು ಮತ್ತು ಹರೀಶ್ ಆಚಾರ್ಯ ಉಪ್ಪಿನಂಗಡಿ ಭಾಗವಹಿಸಿದ್ದರು.