Tuesday, March 17, 2026
Home Blog Page 134

ಬಡಗಿನ ಅನುಭವೀ ಕಲಾವಿದ, ಸಂಘಟಕ – ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ 

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಬಡಗು ತಿಟ್ಟಿನ ಅನುಭವೀ ಹಿರಿಯ  ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಿ ಇವರು ಸುಮಾರು ನಲುವತ್ತೈದು ವರ್ಷಗಳ ಅನುಭವವನ್ನು ಹೊಂದಿರುತ್ತಾರೆ. ಗುಂಡಬಾಳಾ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಬಚ್ಚಗಾರು, ಮಂದಾರ್ತಿ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿದ ಇವರು ಶ್ರೇಷ್ಠ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದಾರೆ.

1998ನೇ ಇಸವಿಯಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಬಂಗಾರಮಕ್ಕಿ ಎಂಬ ಕಲಾ ಸಂಘಟನೆಯನ್ನು ಸ್ಥಾಪಿಸಿರುತ್ತಾರೆ. ಈ ಸಂಘಟನೆಯಡಿ ದಕ್ಷಿಣೋತ್ತರ ಜಿಲ್ಲೆಗಳಲ್ಲಿ, ಮುಂಬಯಿ, ಬೆಂಗಳೂರು, ಹೈದರಾಬಾದ್ ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಏರ್ಪಡಿಸುತ್ತಾ ಬಂದಿರುತ್ತಾರೆ. ಈ ಸಂಸ್ಥೆಯ ನಾಯಕನಾಗಿ ವಿದೇಶ ಯಾತ್ರೆಯನ್ನು ಕೈಗೊಂಡು ಬಹರೇನ್ ನಲ್ಲಿ  ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಶ್ರೀಯುತರು ಬಡಗುತಿಟ್ಟಿನ ಖ್ಯಾತ ಕಲಾವಿದರಾಗಿ ಮೆರೆದ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸುಪುತ್ರರು. 

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಹುಟ್ಟೂರು ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ ಕೇರಿ. ಪ್ರಸ್ತುತ ಇವರು ನಗರ ಬಸ್ತಿಕೇರಿ ಗ್ರಾಮದ ಮೊಗೆಹಳ್ಳ ಎಂಬಲ್ಲಿ ವಾಸವಾಗಿದ್ದಾರೆ. 1962ನೇ ಇಸವಿ ಮಾರ್ಚ್ 25ರಂದು ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಮತ್ತು ಶ್ರೀಮತಿ ಸುಶೀಲಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಚಿಟ್ಟಾಣಿ ಅವರ ಮೂವರು ಪುತ್ರರಲ್ಲಿ ಇವರೇ ಹಿರಿಯರು.

ಕೃಷ್ಣನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ , ಫೋಟೋ: Yaksha Chandana (Facebook)

ಶ್ರೀ ನರಸಿಂಹ ಚಿಟ್ಟಾಣಿ ಮತ್ತು ಶ್ರೀ ನಾರಾಯಣ ಚಿಟ್ಟಾಣಿ ಅವರು ಸುಬ್ರಹ್ಮಣ್ಯ ಚಿಟ್ಟಾಣಿ ಅವರ ತಮ್ಮಂದಿರು. ಇವರಲ್ಲಿ ಶ್ರೀ ನರಸಿಂಹ ಚಿಟ್ಟಾಣಿ ಅವರು ಅನುಭವೀ ಕಲಾವಿದರಾಗಿ ಎಲ್ಲರಿಗೂ ಪರಿಚಿತರು. ಶ್ರೀ ನಾರಾಯಣ ಚಿಟ್ಟಾಣಿ ಅವರು ಕೃಷಿಕರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿಯವರು ಓದಿದ್ದು ಹತ್ತನೇ ತರಗತಿ ವರೆಗೆ. ಏಳನೇ ತರಗತಿ ವರೆಗೆ ಭಾಸ್ಕೇರಿ ಶಾಲೆಯಲ್ಲಿ. ಬಳಿಕ ಅರೆಯಂಗಡಿ, ಕವಲಕ್ಕಿ ಮತ್ತು ಸಂಶಿ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ತನಕ ಓದಿದ್ದರು.

ಎಳವೆಯಲ್ಲೇ ಯಕ್ಷಗಾನ ಕಲಾಸಕ್ತಿಯ ಜತೆಗೆ ತಾನೂ ಕಲಾವಿದನಾಗಬೇಕೆಂಬ ಆಸೆಯೂ ಇತ್ತು. ಗುಡ್ಡೆಬಾಳು ಶ್ರೀ ಗೋವಿಂದ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿ ಏಳನೇ ತರಗತಿಯಲ್ಲಿ ಓದುತ್ತಿರುವಾಗ ಮೊತ್ತ ಮೊದಲು ವೇಷ ಮಾಡಲು ಅವಕಾಶವಾಗಿತ್ತು. ಹೊಸಾಕುಳಿ ಜಾತ್ರೆಯ ಪ್ರದರ್ಶನ, ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಷಣ್ಮುಖನಾಗಿ ರಂಗವೇರಿದ್ದರು. ಅಂದು ಕಡತೋಕ ಮಂಜುನಾಥ ಭಾಗವತರು ಪ್ರಸಂಗವನ್ನು ಮುನ್ನಡೆಸಿದ್ದರು. ಬಳಿಕ್ಕ ಎಸ್ಸೆಸ್ಸೆಲ್ಸಿ ತನಕ ಅಲ್ಲಲ್ಲಿ ನಡೆಯುತ್ತಿದ್ದ ಪ್ರದರ್ಶನಗಳಲ್ಲಿ ವೇಷ ಮಾಡಲು ಅವಕಾಶ ಸಿಕ್ಕಿತ್ತು.

ಹತ್ತನೇ ತರಗತಿ ವರೆಗೆ ಓದಿದ ಬಳಿಕ ಮೇಳಕ್ಕೆ ಸೇರಲು ನಿರ್ಧಾರ ಮಾಡಿದ್ದರು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ಹಡಿನಬಾಳ ಶ್ರೀ ಸತ್ಯ ಹೆಗಡೆ ಅವರ ಸಂಚಾಲಕತ್ವದ ಗುಂಡಬಾಳಾ ಮೇಳದಲ್ಲಿ ಮೂರು ವರ್ಷಗಳ ವ್ಯವಸಾಯ. ಬಾಲಗೋಪಾಲ ವೇಷದಿಂದ ತೊಡಗಿ ಒಡ್ಡೋಲಗದ ವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಈ ಅವಧಿಯಲ್ಲಿ ಮಣಿಪಾಲ ಶ್ರೀ ವಿಜಯನಾಥ ಶೆಣೈ ಅವರು ಕೆರೆಮನೆ ಶ್ರೀ ಮಹಾಬಲ ಹೆಗಡೆ ಅವರ ನಿರ್ದೇಶನದಲ್ಲಿ ನಡೆಸಿದ 48 ದಿನಗಳ ಶಿಬಿರದಲ್ಲೂ ಭಾಗವಹಿಸಿ ತರಬೇತಿಯನ್ನು ಪಡೆದಿದ್ದರು.

ಗುಂಡಬಾಳಾ ಮೇಳದ ಬಳಿಕ ಶ್ರೀ ವೈ. ಕರುಣಾಕರ ಶೆಟ್ರ ಸಂಚಾಲಕತ್ವದ ಪೆರ್ಡೂರು ಮೇಳದಲ್ಲಿ ವ್ಯವಸಾಯ. ಈ ಸಮಯದಲ್ಲಿ ಪುಂಡುವೇಷಗಳನ್ನು ನಿರ್ವಹಿಸಲು ಅವಕಾಶವಾಗಿತ್ತು. ಬಳಿಕ ಎರಡು ವರ್ಷ ಪಳ್ಳಿ ಶ್ರೀ ಸೋಮನಾಥ ಹೆಗ್ಡೆ ಅವರ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಬಳಿಕ ಪುರ್ಲೆ ಶ್ರೀ ರಾಮಚಂದ್ರ ಹೆಗಡೆ ಅವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ವ್ಯವಸಾಯ. ಇಲ್ಲಿ ಪುಂಡುವೇಷ ಮತ್ತು ಒಡ್ಡೋಲಗ ವೇಷಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಬಳಿಕ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರ ಜತೆ ಸೇರಿ ಬಚ್ಚಗಾರು ಟೆಂಟ್ ಮೇಳವನ್ನು ನಡೆಸಿ ಮೊತ್ತಮೊದಲು ಸಂಘಟಕನಾಗಿ ಗುರುತಿಸಿಕೊಂಡರು.

ಬಳಿಕ ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರು ಬಚ್ಚಗಾರು ಮೇಳವನ್ನು ನಡೆಸಿದಾಗ ಎರಡು ವರ್ಷ ವ್ಯವಸಾಯ. ಬಚ್ಚಗಾರು ಮೇಳದಲ್ಲಿ ಒಟ್ಟು ಐದು ವರ್ಷ ವ್ಯವಸಾಯ. ಬಳಿಕ ಶ್ರೀ ಕೃಷ್ಣ ನಾಯ್ಕ್ ಅವರ ಶಿರಸಿ ಮಾರಿಕಾಂಬಾ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಬಳಿಕ ಸಾಲಿಗ್ರಾಮ ಮೇಳದಲ್ಲಿ ಮೂರು ವರ್ಷ ಮತ್ತು ಮಂದಾರ್ತಿ ಮೇಳದಲ್ಲಿ ಮೂರು ವರ್ಷ. ಹೀಗೆ ಸಾಗಿತ್ತು ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಮೇಳದ ವ್ಯವಸಾಯ . ಪುಂಡುವೇಷ, ಒಡ್ಡೋಲಗ ವೇಷಗಳಲ್ಲದೆ ಎಲ್ಲಾ ಪಾತ್ರಗಳನ್ನೂ ಇವರು ನಿರ್ವಹಿಸಬಲ್ಲರು.

ಚಕ್ರಚಂಡಿಕಾ ಪ್ರಸಂಗದ ಬರ್ಬರೀಕ ಎಂಬ ಪಾತ್ರವು ಇವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಕವಿರತ್ನ ಕಾಳಿದಾಸ ಪ್ರಸಂಗದ ಕಲಾಧರ, ಕೃಷ್ಣಾರ್ಜುನ ಕಾಳಗ ಮತ್ತು ಚಂದ್ರಾವಳೀ ವಿಲಾಸದ ಶ್ರೀಕೃಷ್ಣ, ಗದಾಯುದ್ಧ ಪ್ರಸಂಗದ ಭೀಮ, ಸುಧನ್ವ ಮೋಕ್ಷ ಪ್ರಸಂಗದ ಸುಧನ್ವ, ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡಿದ್ದರು. ಗದಾಯುದ್ಧ ಪ್ರಸಂಗದಲ್ಲಿ ಭೀಮನಾಗಿ ಇವರ ನಿರ್ವಹಣೆಯನ್ನು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಮೆಚ್ಚಿಕೊಂಡು ‘ನೀನು ಕಲಾವಿದ ಹೌದು’ ಎಂಬ ಹೊಗಳಿಕೆಯ ಪ್ರಮಾಣಪತ್ರವನ್ನು ನೀಡಿದ್ದರು. 

1998ರಲ್ಲಿ ವೀರಾಂಜನೇಯ ಯಕ್ಷಗಾನ ಮಿತ್ರ ಮಂಡಳಿ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಸಂಘಟಕನಾಗಿಯೂ ಕಾಣಿಸಿಕೊಂಡರು. ಶುಂಠಿ ಶ್ರೀ ಸತ್ಯನಾರಾಯಣ ಭಟ್ಟರ ಜತೆ ಸೇರಿ ಬಚ್ಚಗಾರು ಮೇಳವನ್ನು ಮೂರು ವರ್ಷ ನಡೆಸಿದ ಅನುಭವವು ಸಂಘಟಕನಾಗಿ ಮುನ್ನಡೆಯಲು ಅನುಕೂಲವಾಗಿತ್ತು. ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಈ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿದ್ದರು. ಪ್ರಸ್ತುತ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರು ಸಂಚಾಲಕರಾಗಿ ಮುನ್ನಡೆಸುತ್ತಿದ್ದಾರೆ.

2016-17ನೇ ಸಾಲಿನಲ್ಲಿ ಇವರು ಜಲವಳ್ಳಿ ಶ್ರೀ ವಿದ್ಯಾಧರ ರಾವ್ ಅವರ ಕಲಾಧರ ಯಕ್ಷರಂಗ ಬಳಗ ತಂಡದ ಕಲಾವಿದನಾಗಿಯೂ ವ್ಯವಸಾಯ ಮಾಡಿತುತ್ತಾರೆ. ಬಡಗು ತಿಟ್ಟಿನ ಖ್ಯಾತ ಹಿಮ್ಮೇಳ ಮುಮ್ಮೇಳ ಕಲಾವಿದರ ಒಡನಾಟವು ಇವರಿಗೆ ದೊರಕಿದೆ. ಅನೇಕ ಹಿರಿಯ, ಕಿರಿಯ ಕಲಾವಿದರೊಂದಿಗೆ ರಂಗವೇರಿ ಅಭಿನಯಿಸಿದ ಅನುಭವೀ ಕಲಾವಿದರಿವರು.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಪತ್ನಿ ಶ್ರೀಮತಿ ಪಾರ್ವತಿ. ಇವರು ಗೃಹಣಿ. ಯಕ್ಷಗಾನ ಕಲಾಸಕ್ತೆಯೂ ಹೌದು. ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಪಾರ್ವತೀ ದಂಪತಿಗಳಿಗೆ ಇಬ್ಬರು ಮಕ್ಕಳು. (1985ರಲ್ಲಿ ವಿವಾಹ) ಪುತ್ರಿ ಶ್ರೀಮತಿ ಪ್ರೀತಿ. ಇವರ ಪತಿ ಶ್ರೀ ಗುರುಪ್ರಸಾದ ಭಟ್. ಇವರು ಸಹಕಾರೀ ಸಂಸ್ಥೆಯಲ್ಲಿ ಉದ್ಯೋಗಿ ಮತ್ತು ಕೃಷಿಕರು.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಪುತ್ರ ಶ್ರೀ ಕಾರ್ತಿಕ್ ಚಿಟ್ಟಾಣಿ. ಇವರನ್ನು ಕಲಾಭಿಮಾನಿಗಳು ಚೆನ್ನಾಗಿ ಬಲ್ಲರು. ಬಡಗುತಿಟ್ಟಿನ ಉದಯೋನ್ಮುಖ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ಇವರು ಯಕ್ಷಋಷಿ ಶ್ರೀ ಹೊಸ್ತೋಟ ಮಂಜುನಾಥ ಭಾಗವತರಿಂದ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಅಭ್ಯಸಿಸಿದ್ದಾರೆ. ಅಗತ್ಯ ಬಿದ್ದರೆ ಭಾಗವತಿಕೆಯನ್ನೂ ಮಾಡಬಲ್ಲರು. ಚೆಂಡೆ ಮದ್ದಳೆಗಳನ್ನೂ ನುಡಿಸಬಲ್ಲರು.

ಇವರು ಮೊದಲು ಗುಂಡಬಾಳಾ ಮೇಳದಲ್ಲಿ ಮೂರು ವರ್ಷ ವ್ಯವಸಾಯ ಮಾಡಿದ್ದರು. ಕಳೆದ ಮೂರು ವರ್ಷಗಳಿಂದ ಪೆರ್ಡೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಮಳೆಗಾಲದ ಪ್ರದರ್ಶನಗಳಲ್ಲೂ ಇವರು ಬೇಡಿಕೆಯ ಕಲಾವಿದರು. ಶ್ರೀ ಕಾರ್ತಿಕ್ ಚಿಟ್ಟಾಣಿಯವರ ಪತ್ನಿ ಶ್ರೀಮತಿ ಅರ್ಪಿತಾ. ಇವರು ಗೃಹಣಿ. ಯಕ್ಷ ಕಲಾಸಕ್ತೆಯಾಗಿ ಪತಿಯನ್ನು ಪ್ರೋತ್ಸಾಹಿಸುತ್ತಾರೆ. ಶ್ರೀ ಕಾರ್ತಿಕ್ ಚಿಟ್ಟಾಣಿ ಅವರಿಗೆ ಕಲಾಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಅವರಿಗೆ ಸಕಲ ಭಾಗ್ಯಗಳನ್ನೂ ಭಗವಂತನು ಅನುಗ್ರಹಿಸಲಿ.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರಿಂದ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಮೊಬೈಲ್: 9113622582

ಶ್ರೀ ರವಿಶಂಕರ್ ವಳಕ್ಕುಂಜ

 ಲೇಖಕ:ಶ್ರೀ ರವಿಶಂಕರ್ ವಳಕ್ಕುಂಜ, ಮೊಬೈಲ್: 9164487083

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಕೃತಿ.ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಕೃತಿ,ಕೆ ರಾಷ್ಟ್ರಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ಹಾಗೂ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಇವರ ಜಂಟಿ ಆಶ್ರಯದಲ್ಲಿ ಬಾಲ ಭಾರತಿ ವಿದ್ಯಾಲಯ, ಬಳ್ಳಾರಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 13, 14ರಂದು ಕರ್ನಾಟಕ ಆಂಧ್ರ ಪ್ರದೇಶ್ ತೆಲಂಗಣ ರಾಜ್ಯ ವನ್ನು ಒಳಗೊಂಡ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿನಿ ಕೃತಿ,ಕೆ (ಬನ್ನೂರು ಕೊರಗಪ್ಪ ಗೌಡ, ವನಿತಾ.ಎ ದಂಪತಿ ಪುತ್ರಿ)- 600 ಮೀಟರ್-ಪ್ರಥಮ, 400 ಮೀಟರ್- ದ್ವಿತೀಯ, 4*100 ಮೀಟರ್ ರಿಲೇ -ಪ್ರಥಮ ಸ್ಥಾನ ಪಡೆದುಕೊಂಡಿದ್ದು,

ನವೆಂಬರ್ 19ರಿಂದ 23ರವರೆಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾಳೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ- ಸಂಸ್ಮರಣೆ ಮತ್ತು ಗೇರುಕಟ್ಟೆ ಉಮೇಶ ಆಚಾರ್ಯರಿಗೆ ಸನ್ಮಾನ 

ಯಕ್ಷಗಾನ ರಸಋಷಿ ಅರ್ಕುಳ ಸುಬ್ರಾಯ ಆಚಾರ್ಯರಿಂದ ಉದ್ಘಾಟಿಸಲ್ಪಟ್ಟ ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಆಚರಣೆಯ ಪ್ರಯುಕ್ತ 34ನೇ  ಸರಣಿ ಕಾರ್ಯಕ್ರಮ ಮಂಗಳೂರು ಕುಡ್ತೆರಿ ಶ್ರೀ ಮಹಾಮಾಯ ದೇವಸ್ಥಾನದಲ್ಲಿ ಜರಗಿತು.

ಸನ್ಮಾನ: ಈ ಸಂದರ್ಭದಲ್ಲಿ ಸಂಘದಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದ ಉಮೇಶ ಆಚಾರ್ಯ ಗೇರುಕಟ್ಟೆ ಇವರನ್ನು ವೆಂಕಟರಮಣ ದೇವಸ್ಥಾನದ ಆಡಳಿತ ಮುಕ್ತೇಸರ ಎ. ಬಾಲಕೃಷ್ಣ ಶೆಣೈ ಸನ್ಮಾನಿಸಿದರು.

ಉಮೇಶ ಆಚಾರ್ಯರು ದಕ್ಷ ಸರಕಾರಿ ನೌಕರರಾಗಿ, ಹವ್ಯಾಸಿ ಯಕ್ಷಗಾನ ಅರ್ಥಧಾರಿಯಾಗಿ ವಿವಿಧ ಆಯಾಮಗಳಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಗ್ಗೆ  ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ರಾವ್ ಅಭಿನಂದನಾ ಮಾತುಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಉಮೇಶ ಆಚಾರ್ಯರು ಈ ಸಂಘದಲ್ಲಿ ಹಲವು ಹಿರಿಯ ಕಲಾವಿದರೊಂದಿಗೆ ಭಾಗವಹಿಸಿದ ನೆನಪುಗಳನ್ನು ಸ್ಮರಿಸಿ ನೂರು ವರ್ಷಗಳ ಇತಿಹಾಸ ಇರುವ ಯಕ್ಷಗಾನ ಸಂಘದ ಗೌರವ ಸ್ಮರಣೀಯವೆಂದು ತಿಳಿಸಿದರು.

ಸಂಘಟನಾ ಕಾರ್ಯದರ್ಶಿ ಅಶೋಕ ಬೋಳೂರು ಅಭಿನಂದನಾ ಪತ್ರ ವಾಚಿಸಿದರು.

ಸಂಸ್ಮರಣೆ: ವಾಗೀಶ್ವರಿ ಸಂಘದ ತಾಳಮದ್ದಲೆಯಲ್ಲಿ ಹಿಮ್ಮೇಳವಾದಕರಾಗಿ ಭಾಗವಹಿಸುತ್ತಿದ್ದ ಕೀರ್ತಿ ಶೇಷ ಸದಾನಂದ ಪ್ರಭು ಅವರ ಸಂಸ್ಮರಣೆ ಮಾಡಲಾಯಿತು.

ಸ್ವರ್ಣೋದ್ಯಮಿ ಗುರುಪ್ರಸಾದ್ ಶೇಟ್, ಲೆಕ್ಕಪರಿಶೋಧಕ ಚೇತನ ಕಾಮತ್ ಕದ್ರಿ ಮುಖ್ಯ ಅತಿಥಿಗಳಾಗಿದ್ದರು.

ಸಂಘದ ಅಧ್ಯಕ್ಷ ಶ್ರೀನಾಥ ಪ್ರಭು, ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್ ಭಂಡಾರಿ, ಉಪಾಧ್ಯಕ್ಷ ಪ್ರಫುಲ್ಲನಾಯಕ್, ವಿಶ್ವ ಬ್ರಾಹ್ಮಣ ಮಹಿಳಾ ಯಕ್ಷಗಾನ ಮಂಡಳಿಯ ವನಿತಾ ಉಪೇಂದ್ರ ಆಚಾರ್ಯ, ಗುಣರತ್ನ ಉಮೇಶ ಆಚಾರ್ಯ, ಸುಮಂತ್ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಖಜಾಂಜಿ ಶಿವಪ್ರಸಾದ್ ಪ್ರಭು ಸ್ವಾಗತಿಸಿದರು.

ಶ್ರೀ ರಾಮಚರಿತಾಮೃತ ಸರಣಿಯಲ್ಲಿ ಮಂಗಳೂರು ರಥಬೀದಿಯ ವಿಶ್ವಬ್ರಾಹ್ಮಣ ಮಹಿಳಾ ಯಕ್ಷಗಾನ ಮಂಡಳಿಯ ಸದಸ್ಯರಿಂದ “ಇಂದ್ರಜಿತು ಕಾಳಗ” ತಾಳಮದ್ದಳೆ ಜರಗಿತು.

16 ವರ್ಷದ ಬಾಲಕಿ ಐದು ತಿಂಗಳ ಗರ್ಭಿಣಿ ಎಂದು ಪತ್ತೆ, 17 ವರ್ಷದ ಸಹಪಾಠಿ ಬಂಧನ

16 ವರ್ಷದ ಬಾಲಕಿ ಐದು ತಿಂಗಳ ಗರ್ಭಿಣಿ ಎಂದು ಪತ್ತೆಯಾದ ಪ್ರಕರಣವೊಂದರಲ್ಲಿ ಆಕೆಯ 17 ವರ್ಷದ ಸಹಪಾಠಿಯನ್ನು ಬಂಧಿಸಲಾಗಿದೆ. ತಾನು ಹಲವಾರು ಬಾರಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಬಾಲಕಿ ಬಹಿರಂಗಪಡಿಸಿದ್ದಾಳೆ.

ಪತ್ತನಂತಿಟ್ಟ: ದೈಹಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಪ್ಲಸ್ ಒನ್ ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಆಕೆಯ 17 ವರ್ಷದ ಸಹಪಾಠಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಪತ್ತೆಯಾಗಿದೆ. ನಂತರದ ಕೌನ್ಸೆಲಿಂಗ್‌ನಲ್ಲಿ, ತನ್ನ 17 ವರ್ಷದ ಪ್ಲಸ್ ಒನ್ ವಿದ್ಯಾರ್ಥಿಯು ಗರ್ಭಧಾರಣೆಗೆ ಕಾರಣ ಎಂದು ಹುಡುಗಿ ಬಹಿರಂಗಪಡಿಸಿದಳು.

ಬಳಿಕ ಬಾಲಕಿಯ ಮನೆಯವರು ಅರನ್ಮುಲ ಪೊಲೀಸರಿಗೆ ದೂರು ನೀಡಿದ್ದಾರೆ.

ಬಾಲಕಿ ಹಾಗೂ 17 ವರ್ಷದ ಬಾಲಕ ಒಂದೇ ಶಾಲೆಯಲ್ಲಿ ಓದುತ್ತಿದ್ದಾರೆ. ಅವರು ಏಪ್ರಿಲ್ 2018 ರಿಂದ ಸ್ನೇಹಿತರಾಗಿದ್ದರು. ಮೊದಲ ಲೈಂಗಿಕ ದೌರ್ಜನ್ಯವು 2019 ರ ಬೇಸಿಗೆಯಲ್ಲಿ ನಡೆಯಿತು. ಬಳಿಕ ಎರಡು ಬಾರಿ ಬಾಲಕಿಯ ಮನೆಗೆ ಬಂದು ದೌರ್ಜನ್ಯ ಎಸಗಿದ್ದಾನೆ.

ಕಳೆದ ಏಪ್ರಿಲ್ ಮತ್ತು ಜೂನ್ ತಿಂಗಳಿನಲ್ಲಿ ಬಾಲಕಿಯನ್ನು ಆಕೆಯ ಮನೆಯ ಸಮೀಪದ ಕಟ್ಟಡಕ್ಕೆ ಕರೆದೊಯ್ದು ದೌರ್ಜನ್ಯ ಎಸಗಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

17 ವರ್ಷದ ಯುವಕನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 10ರಂದು ವಾರ್ಷಿಕೋತ್ಸವ – ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಿದ್ಧತೆ

ಪುತ್ತೂರು, ನ 8: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ನವೆಂಬರ್ 10ರಂದು ವಾರ್ಷಿಕೋತ್ಸವವು ಜರುಗಲಿದೆ.

ಪೂರ್ವಾಹ್ನ 9.00 ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ. ಕೃಷ್ಣ ಭಟ್ ವಹಿಸಲಿದ್ದು, ಅತಿಥಿಗಳಾಗಿ ಸಕಲೇಶಪುರದ ರೋಟರಿ ಶಾಲೆಯ ಮುಖ್ಯೋಪಾಧ್ಯಾಯ ಸುಮಂತ್ ಮತ್ತು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರಿಕಿರಣ್ ಕೆ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ, ಸಂಚಾಲಕ ಎಂ. ಗೋಪಾಲಕೃಷ್ಣ ಭಟ್ ಉಪಸ್ಥಿತರಿರುತ್ತಾರೆ.

ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಳಲಿ ಮಸೀದಿ ಕೇಸ್ – ಸರ್ವೆ ನಡೆಸುವ ಬೇಡಿಕೆ ಕುರಿತು ಇಂದು ತೀರ್ಪು ನೀಡಲಿರುವ ನ್ಯಾಯಾಲಯ

ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ  ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಬುಧವಾರ ತೀರ್ಪು ನೀಡಲಿದೆ.

ಮಸೀದಿಯ ನವೀಕರಣದ ಸಮಯದಲ್ಲಿ ಹಿಂದೂ ದೇವಾಲಯದ ರಚನೆಯು ಕಂಡುಬಂದಿತ್ತು. ವಿಶ್ವ ಹಿಂದೂ ಪರಿಷತ್ ಸಹಿತ ಕೆಲವು ಹಿಂದೂ ಸಂಘಟನೆಗಳು ಉತ್ತರ ಪ್ರದೇಶದ ಜ್ಞಾನವಾಪಿ ಮಸೀದಿ ಮಾದರಿಯಲ್ಲಿ ಮಸೀದಿಯನ್ನು ಸರ್ವೆ ಮಾಡಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದ್ದವು.

ಈ ಸಂಬಂಧ ನ್ಯಾಯಾಲಯ ಸೋಮವಾರ ತೀರ್ಪು ನೀಡಬೇಕಿತ್ತು. ಆಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ಗದ್ದಲಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ನವೆಂಬರ್ 9 ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು.

ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದ ನಂತರ, ಮಸೀದಿಯ ಆವರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಿತು. ಅರ್ಜಿದಾರರಲ್ಲಿ ಒಬ್ಬರಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ಮಳಲಿ ಮಸೀದಿಯಲ್ಲಿ ಸಮೀಕ್ಷೆ ನಡೆಸಲು ನ್ಯಾಯಾಲಯದ ಆಯುಕ್ತರನ್ನು ನೇಮಿಸಬೇಕೆಂದು ಒತ್ತಾಯಿಸಿದರು.

ವಿಎಚ್‌ಪಿ ಸಲ್ಲಿಸಿರುವ ಅರ್ಜಿಯನ್ನು ರದ್ದುಗೊಳಿಸಬೇಕು ಎಂದು ಮಳಲಿ ಮಸೀದಿ ಆಡಳಿತ ಮಂಡಳಿ ಸಮರ್ಥಿಸಿಕೊಂಡಿದೆ. ನ್ಯಾಯಾಲಯವು ಈ ವಿಷಯವನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದೂ ಅದು ವಾದಿಸಿದೆ.

ನ್ಯಾಯಾಲಯವು ವಾದ ಮತ್ತು ಪ್ರತಿವಾದಗಳನ್ನು ದಾಖಲಿಸಿತ್ತು. ಈ ಹಿಂದೆ ತೀರ್ಪನ್ನು ಅಕ್ಟೋಬರ್ 17 ರಂದು ಕಾಯ್ದಿರಿಸಲಾಗಿತ್ತು, ಅದನ್ನು ನವೆಂಬರ್ 9 ಕ್ಕೆ ಮುಂದೂಡಲಾಗಿತ್ತು.

ಹಿಂದೂ ಸಂಘಟನೆಗಳು ಮತ್ತು ಮುಸ್ಲಿಂ ಸಮುದಾಯಗಳು ತೀರ್ಪಿಗಾಗಿ ಎದುರು ನೋಡುತ್ತಿದ್ದವು. ಮಳಲಿ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದರೆ, ಮಸೀದಿಯ ಸರ್ವೆ ಮಾಡುವಂತೆ ವಿಎಚ್‌ಪಿಯ ಬೇಡಿಕೆಯನ್ನು ರದ್ದುಗೊಳಿಸಲಾಗುತ್ತದೆ. ಮತ್ತು ನ್ಯಾಯಾಲಯವು ವಿಎಚ್‌ಪಿಯ ಅರ್ಜಿಯನ್ನು ಪರಿಗಣಿಸಿದರೆ, ಮಸೀದಿಗಳ ಸಮೀಕ್ಷೆ ಇರುತ್ತದೆ.

‘ವೀರ ವೈಷ್ಣವ, ಮಾರಣಾಧ್ವರ’ – ಇಂದು (09.11.2022) ಧರ್ಮಸ್ಥಳ ಮೇಳದ ಆಟ – ಕ್ಷೇತ್ರದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಧರ್ಮಸ್ಥಳ ಇವರು 09.11.2022 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಸಂಜೆ ಗಂಟೆ 7 ರಿಂದ 12ರ ತನಕ ‘ವೀರ ವೈಷ್ಣವ – ಮಾರಣಾಧ್ವರ’ ಎಂಬ ಕಥಾಭಾಗವನ್ನು ಆಡಿ ತೋರಿಸಲಿದ್ದಾರೆ. 

 ಇಂದಿನ ಸೇವಾಕರ್ತರು ಶ್ರೀ ಶಂಭು ಶೆಟ್ಟಿ ಮತ್ತು ಮಕ್ಕಳು ಗುಲ್ವಾಡಿ ಬಡಾಮನೆ, ಕುಂದಾಪುರ ತಾಲೂಕು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. 

ಈ ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರಗೊಳ್ಳಲಿದೆ. 

ಶಬರಿಮಲೆ ಯಾತ್ರೆ ಆರಂಭವಾಗಲು ಕೆಲವೇ ದಿನಗಳು ಬಾಕಿ – ಶರವೇಗದಲ್ಲಿ ನಡೆಯುತ್ತಿರುವ ಸಿದ್ಧತೆಗಳು

ಶಬರಿಮಲೆ ಯಾತ್ರೆ ಆರಂಭವಾಗಲು ಕೆಲವೇ ದಿನಗಳು ಬಾಕಿಯಿದ್ದು, ಸಿದ್ಧತೆಗಳು ಶರವೇಗದಲ್ಲಿ ನಡೆಯುತ್ತಿವೆ.

ಪಂಪಾ: ಶಬರಿಮಲೆ ಯಾತ್ರೆ ಆರಂಭವಾಗಲು ಕೇವಲ ಒಂದು ವಾರ ಬಾಕಿ ಇದೆ. ನವೆಂಬರ್ 16 ರಂದು ಸಂಜೆ ಮಂಡಲ ತೀರ್ಥಯಾತ್ರೆಗಾಗಿ ದೇವಾಲಯವು ತೆರೆಯುತ್ತದೆ. ಕೋವಿಡ್ ನಂತರ ತೀರ್ಥಯಾತ್ರೆ ಸಂಪೂರ್ಣವಾಗಿ ಪುನರಾರಂಭಗೊಳ್ಳುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಸರ್ಕಾರ ಮತ್ತು ದೇವಸ್ವಂ ಮಂಡಳಿ ನಿರೀಕ್ಷಿಸುತ್ತಿದೆ.

ನಿಲಕ್ಕಲ್, ಪಂಪಾ ಮತ್ತು ಸನ್ನಿಧಾನಂನಲ್ಲಿ ಸಿದ್ಧತೆಗಳು ಶರವೇಗದಲ್ಲಿ ನಡೆಯುತ್ತಿವೆ. ಭಾರೀ ಮಳೆಯಿಂದಾಗಿ ದೇವಸ್ಥಾನ ತೆರೆಯುವ ಮುನ್ನವೇ ಸಿದ್ಧತೆಗಳು ಪೂರ್ಣಗೊಳ್ಳಬಹುದೇ ಎಂಬ ಆತಂಕ ಎದುರಾಗಿದೆ.

ಪಂಪಾ ದಲ್ಲಿ ಮೂಲ ಸೌಕರ್ಯಗಳ ವ್ಯವಸ್ಥೆ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ. ದೇವಾಲಯದ ಪ್ರಾಂಗಣದಲ್ಲಿ ಕಲ್ಲುಗಳನ್ನು ಹಾಕಲಾಗುತ್ತಿದೆ. ಯಾತ್ರಾರ್ಥಿಗಳು ವಿಶ್ರಾಂತಿ ಪಡೆಯುವ ಆಂಜನೇಯ ಆಡಿಟೋರಿಯಂ ನವೀಕರಣಗೊಂಡಿಲ್ಲ.

ಗಣೇಶ ದೇವಸ್ಥಾನಕ್ಕೆ ಹೋಗುವ ಮೆಟ್ಟಿಲುಗಳ ಬದಿಯಲ್ಲಿರುವ ಶಿಲ್ಪವು ಹಾನಿಯ ಅಂಚಿನಲ್ಲಿದೆ. ಪಂದಳಂ ರಾಜನ ಖಡ್ಗ ಮುರಿದಿರುವುದು ಕಂಡುಬಂದಿದೆ. ಪಂಪಾ ನದಿ ಭಾಗದಲ್ಲಿ ಮೂಲ ಸೌಕರ್ಯಗಳಿಲ್ಲ. ಶೌಚಾಲಯದ ಬ್ಲಾಕ್‌ಗಳ ನಿರ್ವಹಣೆ ಮಾಡಿಲ್ಲ. ತ್ರಿವೇಣಿ ಸೇತುವೆ ಬಳಿ ಸ್ನಾನಘಟ್ಟದ ​​ಮೆಟ್ಟಿಲು ಕುಸಿದಿದೆ.

ಶಬರಿಮಲೆ ಸನ್ನಿಧಾನಂ ಮೂಲ ಸೌಕರ್ಯಗಳು ಬಹುತೇಕ ಪೂರ್ಣಗೊಂಡಿವೆ. ಮರಕೂಟಂನಲ್ಲಿ ಶಾಶ್ವತ ಶೌಚಾಲಯ ಬ್ಲಾಕ್ ನಿರ್ಮಿಸಲಾಗಿದೆ. ನೀಲಕ್ಕಲ್ ನಲ್ಲಿ ರಸ್ತೆಗಳಿಗೆ ಟಾರು ಹಾಕಲಾಗುತ್ತಿದೆ. ಶೌಚಾಲಯದ ಬ್ಲಾಕ್‌ಗಳ ದುರಸ್ತಿ ಅರ್ಧಕ್ಕೆ ನಿಂತಿದೆ.

ಕೆಎಸ್ ಆರ್ ಟಿಸಿ ನಿಲ್ದಾಣದಲ್ಲಿ ಬೆಳೆದಿರುವ ಕಾಡು ಹುಲ್ಲನ್ನು ತೆರವುಗೊಳಿಸಿಲ್ಲ. ಕಸವನ್ನು ಸಂಗ್ರಹಿಸಿ ಸುಡಲಾಗುತ್ತದೆ. ನಿಲಕ್ಕಲ್ ಮತ್ತು ಪಳ್ಳಿಯಾರಕ್ಕಾವು ದೇವಾಲಯಗಳು ಜೀರ್ಣೋದ್ಧಾರಗೊಳ್ಳುತ್ತಿವೆ.

ವಾಹನ ನಿಲುಗಡೆ ಪ್ರದೇಶದಲ್ಲಿರುವ ಕಾಡು ಪೊದೆಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಬಾರಿ ಗೋಶಾಲೆ ಬಳಿ ವಾಹನ ನಿಲುಗಡೆಗೂ ವ್ಯವಸ್ಥೆ ಮಾಡಲಾಗಿದೆ


                

ಶಿಕ್ಷಣ ಇಲಾಖೆಯ ಪರೀಕ್ಷಾ ಪ್ರವೇಶ ಪತ್ರದಲ್ಲಿ ತನ್ನ ಫೋಟೋ ಬದಲು ಸನ್ನಿ ಲಿಯೋನ್ ಫೋಟೋ – ಅಭ್ಯರ್ಥಿಯ ಮಾಹಿತಿ ಮತ್ತು ಫೋಟೋ ಅಪ್ಲೋಡ್ ಮಾಡಿದ್ದ ಸ್ನೇಹಿತ 

ಶಿಕ್ಷಣ ಇಲಾಖೆಯು ಪರೀಕ್ಷಾ ಅಭ್ಯರ್ಥಿಯ ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್ ಅವರ ಫೋಟೋವನ್ನು ಮುದ್ರಿಸಿದೆ ಎಂದು ಕರ್ನಾಟಕ ಕಾಂಗ್ರೆಸ್ ಮುಖಂಡರೊಬ್ಬರು ಆರೋಪಿಸಿದ್ದಾರೆ.

ಕರ್ನಾಟಕ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಯೊಬ್ಬರು ತಮ್ಮ ಪ್ರವೇಶ ಕಾರ್ಡ್‌ನಲ್ಲಿ ತನ್ನ ಚಿತ್ರಕ್ಕೆ ಬದಲಾಗಿ ನಟ ಸನ್ನಿ ಲಿಯೋನ್ ಅವರ ಚಿತ್ರವನ್ನು ಹೊಂದಿದ್ದರಿಂದ ಈ ವಿವಾದ ಉಂಟಾಯಿತು.

ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಅಧ್ಯಕ್ಷ ಬಿಆರ್ ನಾಯ್ಡು ಅವರು ಮಂಗಳವಾರ ರಾಜ್ಯ ಶಿಕ್ಷಣ ಇಲಾಖೆ ಅಭ್ಯರ್ಥಿಯ ಫೋಟೋದ ಬದಲಿಗೆ ಮಾಜಿ ವಯಸ್ಕ ತಾರೆಯ ಫೋಟೋವನ್ನು ಹಾಲ್ ಟಿಕೆಟ್‌ನಲ್ಲಿ ಮುದ್ರಿಸಿದೆ ಎಂದು ಆರೋಪಿಸಿದ್ದಾರೆ.

ನಾಯ್ಡು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್ ಅವರ ಕಚೇರಿ, “ಅಭ್ಯರ್ಥಿಗಳು ಫೋಟೋವನ್ನು ತಾವೇ ಸ್ವತಃ ಅಪ್‌ಲೋಡ್ ಮಾಡಬೇಕು. ಅವರು ಫೈಲ್‌ಗೆ ಅವರು ಯಾವ ಫೋಟೋವನ್ನು ಲಗತ್ತಿಸುತ್ತಾರೋ ಅದನ್ನು ಸಿಸ್ಟಮ್ ತೆಗೆದುಕೊಳ್ಳುತ್ತದೆ.

ನಾವು ಅಭ್ಯರ್ಥಿಯನ್ನು ಸನ್ನಿ ಲಿಯೋನ್ ಅವರ ಫೋಟೋವನ್ನು ಅವರ ಪ್ರವೇಶ ಕಾರ್ಡ್‌ನಲ್ಲಿ ಹಾಕಿದ್ದೀರಾ ಎಂದು ನಾವು ಕೇಳಿದಾಗ, “ಆಕೆಯ ಪತಿಯ ಸ್ನೇಹಿತ ತನ್ನ ಮಾಹಿತಿಯನ್ನು ಅಪ್‌ಲೋಡ್ ಮಾಡಿದ್ದಾನೆ” ಎಂದು ತಿಳಿದುಬಂದಿದೆ, ಇದರಲ್ಲಿ ಶಿಕ್ಷಣ ಇಲಾಖೆಯ ಯಾವುದೇ ಪಾತ್ರವಿಲ್ಲ. ಇದು ಅಭ್ಯರ್ಥಿಯ ತಪ್ಪಿನಿಂದ ಸಂಭವಿಸಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಸಾನಿಯಾ ಮಿರ್ಜಾ ಹೃದಯ ಒಡೆದ ಶೋಯೆಬ್ ಮಲಿಕ್? ಪ್ರತ್ಯೇಕತೆಯ ವದಂತಿ ನಿಜವೇ? – “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಸಾನಿಯಾ

ಶೋಯೆಬ್ ಮಲಿಕ್ ಜೊತೆ ಪ್ರತ್ಯೇಕತೆಯ ವದಂತಿಗಳ ಮಧ್ಯೆ ಸಾನಿಯಾ ಮಿರ್ಜಾ ರಹಸ್ಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರೊಂದಿಗೆ ಪ್ರತ್ಯೇಕತೆಯ ವದಂತಿಗಳ ಮಧ್ಯೆ Instagram ನಲ್ಲಿ ರಹಸ್ಯವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ನಡುವೆ ಎಲ್ಲವೂ ಸರಿಯಾಗಿಲ್ಲ. ಇಜಾನ್ ಮಿರ್ಜಾ ಮಲಿಕ್ ಎಂಬ ಮಗನನ್ನು ಹೊಂದಿರುವ ಸೆಲೆಬ್ರಿಟಿ ದಂಪತಿಗಳು ತಮ್ಮ ದಾಂಪತ್ಯದಲ್ಲಿ ಒರಟಾದ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ.

ಇದರ ಮಧ್ಯೆ, ಇನ್ಸ್ಟಾಗ್ರಾಮ್ನಲ್ಲಿ ಸಾನಿಯಾ ಅವರ ರಹಸ್ಯ ಪೋಸ್ಟ್ ಅವರ ಅಭಿಮಾನಿಗಳನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.

ಟೆನಿಸ್ ಆಟಗಾರ್ತಿ ಮಿರ್ಜಾ “ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ” ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರೇ “ಅಲ್ಲಾನನ್ನು ಹುಡುಕಲು.”ಎಂಬ ಉತ್ತರವನ್ನೂ ಬರೆದಿದ್ದಾರೆ.

ಇದು ಭಾರತೀಯ ಟೆನಿಸ್ ತಾರೆ ಹಂಚಿಕೊಂಡ ಏಕೈಕ ರಹಸ್ಯವಾದ ಪೋಸ್ಟ್ ಅಲ್ಲ. ಅವರು ಕೆಲವು ದಿನಗಳ ಹಿಂದೆ ತನ್ನ ಮಗನೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಕಷ್ಟದ ದಿನಗಳಲ್ಲಿ ನನಗೆ ಸಿಕ್ಕ ಕ್ಷಣಗಳು” ಎಂದು ಬರೆದಿದ್ದಾರೆ.

ಸಾನಿಯಾ ಅಥವಾ ಶೋಯೆಬ್ ಅವರ ಊಹಾಪೋಹದ ಬಿರುಕು ಅಥವಾ ಪ್ರತ್ಯೇಕತೆಯ ವದಂತಿಗಳ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.