Friday, July 31, 2026
Home Blog Page 126

ಮಂಗಳೂರು ಸ್ಪೋಟದ ಆರೋಪಿ ಶಾರೀಕ್  ಕುಟುಂಬದವರ ಅಕೌಂಟ್‍ಗೆ ಲಕ್ಷ ಗಟ್ಟಲೆ ಹಣ! ಅಷ್ಟೊಂದು ಹಣ ಟ್ರಾನ್ಸ್‌ಫರ್ ಆಗುತ್ತಿದ್ದುದು ಎಲ್ಲಿಂದ?  ಭಾರತವನ್ನು ಇಸ್ಲಾಮ್ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡಿದ್ದ ಶಾರೀಕ್ 

0

ಶಾರೀಕ್ ತನ್ನ ಗುರು ಯಾಸೀನ್, ಸ್ನೇಹಿತ ಮಾಝ್ ಬಂಧನದ ಸೇಡಿಗೆ ಪ್ರತೀಕಾರ ತೀರಿಸಿಕೊಳ್ಳಲು ಮಂಗಳೂರು ಸ್ಪೋಟದ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಅದೂ ಅಲ್ಲದೆ ಈ ಮೂವರೂ ಸೇರಿ ಭಾರತವನ್ನು ಇಸ್ಲಾಮ್ ರಾಷ್ಟ್ರವನ್ನಾಗಿ ರೂಪಿಸುವ ಕನಸು ಕಂಡಿದ್ದರು ಎಂದು ಆ ಗುರಿಯನ್ನು ಹೊಂದಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.

ತನಿಖೆಯ ವೇಳೆಯಲ್ಲಿ ಮತ್ತಷ್ಟು ಮಾಹಿತಿಗಳು ಬಹಿರಂಗವಾಗುತ್ತಾ ಇದೆ. ಪೊಲೀಸ್ ತನಿಖೆಯಲ್ಲಿ ಮಹತ್ವದ ವಿಚಾರವೊಂದು ತಿಳಿದುಬಂದಿದೆ. ಶಾರೀಕ್  ತನ್ನ ಸಹೋದರಿಯರ ಅಕೌಂಟ್ ಗೆ ಲಕ್ಷಗಟ್ಟಲೆ ಹಣವನ್ನು ವರ್ಗಾಯಿಸಿರುವುದು ಗೋಚರಿಸಿದೆ.

ಇಷ್ಟೆಲ್ಲಾ ಅಗಾಧ ಪ್ರಮಾಣದ ಮೊತ್ತ ಶಾರೀಕ್ ಗೆ ಎಲ್ಲಿಂದ ಬರುತ್ತಿತ್ತು? ವಿದೇಶಿ ಮೂಲಗಳಿಂದ ಭಾರತದ ವಿರುದ್ಧ ಕಾರಸ್ಥಾನ ನಡೆಸಲು ಈ ಮೊತ್ತ ಬರುತ್ತಿದೆಯಾ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಪೊಲೀಸರು ಈ ಬಗ್ಗೆ ಇನ್ನಷ್ಟು ಚುರುಕಿನ ತನಿಖೆಯನ್ನು ಕೈಗೊಂಡಿದ್ದಾರೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರಕಲಿದೆ. 

“ಸತ್ಯೇಂದ್ರ ಜೈನ್‍ಗೆ ಜೈಲಿನಲ್ಲಿ ಮಸಾಜ್ ಮಾಡಿದ್ದು ಅಲ್ಲ, ಅದು ಫಿಸಿಯೋಥೆರಪಿ”: ಕೇಜ್ರಿವಾಲ್ ಮತ್ತೊಮ್ಮೆ ಸುಳ್ಳು? –  “ಮಸಾಜ್ ಮಾಡಿದ್ದು ಅತ್ಯಾಚಾರ ಪ್ರಕರಣದಲ್ಲಿ ಖೈದಿಯಾಗಿದ್ದ ರಿಂಕು, ಆತ ಫಿಸಿಯೋಥೆರಪಿಸ್ಟ್ ಅಲ್ಲ”: ತಿಹಾರ್ ಜೈಲಿನ ಅಧಿಕೃತ ಮೂಲಗಳ ಹೇಳಿಕೆ, ಕೇಜ್ರಿವಾಲ್ ಗೆ ತೀವ್ರ  ಮುಖಭಂಗ  

0

ಜೈಲು ಸೇರಿರುವ ಅಕ್ರಮ ಹಣ ವರ್ಗಾವಣೆ ಆರೋಪಿ ಮತ್ತು ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ವಿಐಪಿ ಟ್ರೀಟ್‍ಮೆಂಟ್ ನೀಡಲಾಗುತ್ತಿದೆ ಎಂದು ಬಿಜೆಪಿ ವೀಡಿಯೊ ಬಿಡುಗಡೆ ಸಹಿತ ಆರೋಪಿಸಿತ್ತು.

ಇದಕ್ಕೆ ದೆಹಲಿಯ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ಅವರು, ಸತ್ಯೇಂದ್ರ ಜೈನ್‍ಗೆ ತಿಹಾರ್ ಜೈಲಿನಲ್ಲಿ ಫಿಸಿಯೋಥೆರಪಿ ಮಾಡಲಾಗಿದೆ.  ಅದು ಮಸಾಜ್ ಅಲ್ಲ ಎಂದು ಬಿಜೆಪಿ ಆರೋಪವನ್ನು ಲೇವಡಿ ಮಾಡಿದ್ದಾರೆ.

ಆದರೆ ಇದೀಗ ಕೇಜ್ರಿವಾಲ್ ಮತ್ತೊಮ್ಮೆ ತೀವ್ರ ಮುಖಭಂಗ ಅನುಭವಿಸಿದ್ದಾರೆ. ತಿಹಾರ್ ಜೈಲಿನ ಅಧಿಕೃತ ಮೂಲಗಳ ಪ್ರಕಾರ ಜೈಲಿನಲ್ಲಿರುವ ದೆಹಲಿಯ ಮಂತ್ರಿ ಸತ್ಯೇಂದ್ರ ಜೈನ್‌ಗೆ ಮಸಾಜ್ ಸೇವೆ ಮಾಡಿದ್ದು ಕೈದಿಯಾಗಿರುವ ರಿಂಕು.

ಅವನು ಅತ್ಯಾಚಾರ ಪ್ರಕರಣದಲ್ಲಿ ಖೈದಿಯಾಗಿದ್ದಾನೆ. ಆತನ ಮೇಲೆ (ಮಸಾಜ್ ಮಾಡಿದ ರಿಂಕು ಮೇಲೆ) ಪೋಕ್ಸೋ ಕಾಯಿದೆಯ 6 ಮತ್ತು IPC ಯ 376, 506 ಮತ್ತು 509 ರ ಆರೋಪಗಳನ್ನು ಹೊರಿಸಲಾಗಿದೆ. ಆತ ಫಿಸಿಯೋಥೆರಪಿಸ್ಟ್ ಅಲ್ಲ ಎಂದು ತಿಹಾರ್ ಜೈಲಿನ ಅಧಿಕೃತ ಮೂಲಗಳು ಹೇಳಿವೆ.

ಇದರಿಂದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಸುಳ್ಳು ಹೇಳಿಕೆಗಳಿಂದ ತೀವ್ರ ಮುಜುಗರ ಅನುಭವಿಸಿದ್ದಾರೆ.

ಶಿಕ್ಷಕ ಹುದ್ದೆಗೆ ಆಯ್ಕೆಯಾದ ಮಂಗಳಮುಖಿ ಪೂಜಾ 

0

ಕರ್ನಾಟಕ ಸರ್ಕಾರಿ ಶಾಲೆಗಳಿಗೆ 3 ತೃತೀಯಲಿಂಗಿ ಶಿಕ್ಷಕರು ಆಯ್ಕೆಯಾಗಿದ್ದಾರೆ.

ಕರ್ನಾಟಕ ಸರ್ಕಾರವು 13,363 ಹೊಸದಾಗಿ ನೇಮಕಗೊಂಡ ಶಿಕ್ಷಕರ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಿದಂತೆ ಸರ್ಕಾರಿ ಶಾಲೆಗಳಲ್ಲಿ ತೃತೀಯಲಿಂಗಿ ಸಮುದಾಯದಿಂದ ಮೂವರು ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಶನಿವಾರ ಪ್ರಕಟಿಸಿದೆ. ರಾಜ್ಯದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

15,000 ಹುದ್ದೆಗಳಲ್ಲಿ ತೃತೀಯಲಿಂಗಿ ಸಮುದಾಯಕ್ಕೆ ಶೇ 1ರಷ್ಟು ಮೀಸಲಾತಿ ನೀಡಲಾಗಿದೆ. ಅವರ ಪೋಸ್ಟ್, “ಲಿಂಗ ಅಲ್ಪಸಂಖ್ಯಾತರಿಗೆ ಶಿಕ್ಷಕರ ನೇಮಕಾತಿಯಲ್ಲಿ 1% ಮೀಸಲಾತಿ ನೀಡಲಾಗಿದೆ. ಮೊದಲ ಬಾರಿಗೆ ಮೂರು ಲಿಂಗ ಅಲ್ಪಸಂಖ್ಯಾತರನ್ನು ಪಟ್ಟಿಯಲ್ಲಿ ಆಯ್ಕೆ ಮಾಡಲಾಗಿದೆ.

ವರದಿಯ ಪ್ರಕಾರ, ಒಟ್ಟು 10 ಟ್ರಾನ್ಸ್‌ಜೆಂಡರ್‌ಗಳು ಪರೀಕ್ಷೆಗೆ ಹಾಜರಾಗಿದ್ದರು, ಅವರಲ್ಲಿ ಮೂವರನ್ನು ಅಂತಿಮ ನೇಮಕಾತಿಯಲ್ಲಿ ಆಯ್ಕೆ ಮಾಡಲಾಗಿದೆ. ಸುರೇಶ್ ಬಾಬು, ರವಿ ಕುಮಾರ್ ವೈ ಆರ್ ಮತ್ತು ಅಶ್ವತ್ಥಾಮ(ಪೂಜಾ) ಮೂವರು ತೃತೀಯಲಿಂಗಿಗಳಾಗಿದ್ದರೆ, ಬಾಬು ಇಂಗ್ಲಿಷ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಸಮಾಜ ವಿಜ್ಞಾನ ವಿಷಯಗಳನ್ನು ಬೋಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.  

ಮಾನ್ವಿ ತಾಲೂಕಿನ ನೀರಮಾನ್ವಿಯ ಅಶ್ವಥಾಮ ಬೆಳೆಯುತ್ತಾ ಪೂಜಾ ಆಗಿ ಬದಲಾಗಿದ್ದಾರೆ.  ಪೂಜಾ ತೃತೀಯ ಲಿಂಗ ಮೀಸಲಾತಿಯಲ್ಲಿ ಪರೀಕ್ಷೆ ಬರೆದು 6 ರಿಂದ 8 ನೇ ತರಗತಿ ಸಮಾಜ ವಿಜ್ಞಾನ ವಿಷಯದ ಶಿಕ್ಷಕಿ ಆಗಿ ಆಯ್ಕೆಯಾಗಿದ್ದಾರೆ.  

ರಾಯಚೂರಿನಲ್ಲಿ ಬಿಎಡ್ ಪೂರ್ಣಗೊಳಿಸಿದ ಅಶ್ವಥಾಮ ಓದು ಪೂರ್ಣಗೊಳ್ಳುತ್ತಲೇ ದೈಹಿಕ ಬದಲಾವಣೆಯಿಂದಾಗಿ  ಪೂಜಾ ಆಗಿ ಬದಲಾಗಿದ್ದಾರೆ. 14 ನೇ ವಯಸ್ಸಿನ ಬಳಿಕ ತನ್ನ ದೈಹಿಕ ಏರುಪೇರುಗಳ  ಕಾರಣಕ್ಕೆ 4 ವರ್ಷಗಳ ಕಾಲ ಮನೆ ಬಿಟ್ಟು ಹೋಗಿದ್ದರು, ಬಳಿಕ ಮನೆಯವರು ಕರೆದುಕೊಂಡು ಬಂದಿದ್ದರು. ಮರಳಿ ಬಂದು ಓದು ಮುಂದುವರೆಸಿ ಹುದ್ದೆಗೆ ಆಯ್ಕೆಯಾಗಿ ಯಶಸ್ಸನ್ನು ಸಾಧಿಸಿದ್ದಾರೆ. 

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಶಾಲಾ ಶಿಕ್ಷಕಿ ಮೃತ್ಯು

0

ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ ಹೊಡೆದು ಶಿಕ್ಷಕಿಯೊಬ್ಬರು ಮೃತಪಟ್ಟಿದ್ದಾರೆ.

ಹತ್ಯೆಗೀಡಾದವರನ್ನು ಕೇರಳದ ಅಲಪ್ಪುಳದ ಕಾಯಂಕುಲಂ ಎಸ್ ಎನ್ ಶಾಲೆಯ ಶಿಕ್ಷಕಿ ಸುಮಂ (51) ಎಂದು ಗುರುತಿಸಲಾಗಿದೆ. ಈಕೆ ಭರಣಿಕಾವು ತೆಕ್ಕೆಕರ ಪಾಲಮುಟ್ಟೋಮ್‌ನ ಸ್ಥಳೀಯ ನಿವಾಸಿಯಾಗಿದ್ದರು ಎಂದು ತಿಳಿದುಬಂದಿದೆ.

ಕಾಯಂಕುಲಂ ಥಟ್ಟರಂಬಲಂ ರಸ್ತೆಯ ತಟ್ಟವಾಝಿ ಜಂಕ್ಷನ್‌ನಲ್ಲಿ ಸೋಮವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಅವರು ಮನೆಯಿಂದ ತನ್ನ ಸ್ಕೂಟರಿನಲ್ಲಿ ಎಂದಿನಂತೆ ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

ಪುತ್ತೂರು ಮೂಲದ ಹಿಂದೂ ಯುವತಿಯೊಂದಿಗೆ ಬೆಂಗಳೂರಿನಲ್ಲಿ ಮುಸ್ಲಿಂ ಯುವಕನ ಮದುವೆ – ಮತ್ತೊಂದು ಲವ್ ಜಿಹಾದ್ ಆರೋಪ

0

ನಮ್ಮ ದೇಶದಲ್ಲಿ ಪ್ರತಿದಿನವೂ ಲವ್ ಜಿಹಾದ್ ಗೆ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಎಷ್ಟೋ ಯುವತಿಯರ ಹೆಣಗಳು ಬೀಳುತ್ತಿದ್ದರೂ ಹುಡುಗಿಯರಿಗೆ ಬುದ್ದಿ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹಿಂದೂಗಳಲ್ಲಿ ಸ್ತ್ರೀಯರಿಗೆ ಇರುವ ಅತಿಯಾದ ಸ್ವಾತಂತ್ರ್ಯ ಮತ್ತು ಸ್ವೇಚ್ಛಾಚಾರವೇ ಇದಕ್ಕೆ ಕಾರಣ.

ಅವರಿಗೆ ಯೋಗ್ಯ ಸಂಸ್ಕಾರವನ್ನು ನೀಡದಿರುವುದು ಇದಕ್ಕೆ ಪ್ರಬಲವಾದ ಕಾರಣವಾಗಿ ಗೋಚರಿಸುತ್ತಿದೆ. ಚಿತ್ರವಿಚಿತ್ರ ಚಿಕಿತ್ಸೆಗಳನ್ನು ಮಾಡಿಕೊಂಡು ತಾತ್ಕಾಲಿಕ ಕಾರಣದಿಂದ ಉಂಟಾಗುವ ದೀರ್ಘ ದೈಹಿಕ ಸಾಮರ್ಥ್ಯಕ್ಕೆ ಮರುಳಾಗಿ ಸ್ತ್ರೀಯರು ಪುರುಷರ ಹಿಂದೆ ಬೀಳುತ್ತಿರುವುದು ಹಲವಾರು ಪ್ರಕರಣಗಳಲ್ಲಿ ಸ್ಪಷ್ಟವಾಗುತ್ತಾ ಬರುತ್ತಿದೆ. 

ಇದೀಗ ಇನ್ನೊಂದು ಪ್ರಕರಣದಲ್ಲಿ ಹಿಂದೂ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಮುಸ್ಲಿಂ ಮಧ್ಯವಯಸ್ಕನನ್ನು ಮದುವೆಯಾಗುತ್ತಿದ್ದಾಳೆ. ಬೆಂಗಳೂರಿನಲ್ಲಿ ನೆಲೆಸಿರುವ ದಕ್ಷಿಣ ಕನ್ನಡದ ಪುತ್ತೂರಿನ ಹುಡುಗಿಯೊಬ್ಬಳು 44 ವರ್ಷದ ಶೇಕ್ ಮೊಹಮ್ಮದ್ ಸಲೀಂ ಎಂಬಾತನನ್ನು ಮದುವೆಯಾಗುತ್ತಿದ್ದಾಳೆ.

ಈ ಬಗ್ಗೆ ಬೆಂಗಳೂರಿನ ಬೊಮ್ಮನಹಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ಈಗಾಗಲೇ ಸೂಚನಾ ಫಲಕದಲ್ಲಿ ಇಬ್ಬರ ವಿವರಗಳನ್ನು ಫೋಟೋ ಸಹಿತ ಲಗತ್ತಿಸಲಾಗಿದೆ. ಈ ನೋಟೀಸ್ ಬೋರ್ಡಿನಲ್ಲಿ ಅಂಟಿಸಲಾದ ಸೂಚನಾ ಪತ್ರದ  ಪ್ರಕಾರ ಬೆಂಗಳೂರಿನ  44 ವರ್ಷದ ಶೇಕ್ ಮೊಹಮ್ಮದ್ ಸಲೀಂ ಎಂಬಾತನನ್ನು ಪುತ್ತೂರಿನ ದರ್ಬೆಯ 34 ವರ್ಷದ ಅಕ್ಷತಾ ಎಂಬಾಕೆ ಮದುವೆಯಾಗಲಿದ್ದಾಳೆ.

ಹಿಂದೂ ಸಂಘಟನೆಗಳು ಈ ಬಗ್ಗೆ ಆಕ್ರೋಶ ಹೊರಹಾಕಿವೆ. ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. “ನಾವೇನು ಬರೀ ಆಕ್ರೋಶ, ರೋಷ ವ್ಯಕ್ತಪಡಿಸುವುದರಲ್ಲಿಯೇ ಕಾಲ ಕಳೆಯುತ್ತಿದ್ದೇವೆ. ರಾಜ್ಯದಲ್ಲಿ ಹಿಂದೂ ಪರ ಸರಕಾರವಿದ್ದರೂ ಹಿಂದೂಗಳಿಗೆ ನ್ಯಾಯ ಒದಗಿಸಲಾಗದೆ ಕೈ ಕಟ್ಟಿ ಕುಳಿತಿದೆ” ಎಂದು ಹಿಂದೂಗಳು ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ.

ಕಾರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ – ಬಂಧಿತ ಡಿಂಪಲ್ ಲಾಂಬಾಗೆ ಸೆಕ್ಸ್ ರಾಕೆಟ್‌ಗಳ ಸಂಪರ್ಕ – ಮಾಡೆಲಿಂಗ್ ನೆಪದಲ್ಲಿ ಹುಡುಗಿಯರ ಕಳ್ಳಸಾಗಣೆ

0

ಕೊಚ್ಚಿ: ಕೊಚ್ಚಿ ಸೆಕ್ಸ್ ರಾಕೆಟಿಂಗ್‌ನ ಕೇಂದ್ರವಾಗುತ್ತಿದೆ. ಡ್ರಗ್ಸ್, ಡಿಜೆ ಪಾರ್ಟಿಗಳು ಮತ್ತು ಫ್ಯಾಶನ್ ಶೋಗಳ ನೆಪದಲ್ಲಿ ಕೊಚ್ಚಿಯಲ್ಲಿ ಲೈಂಗಿಕ ದಂಧೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಹುಡುಗಿಯರನ್ನು ಮಾಡೆಲ್‌ಗಳಾಗಿ ಸೆಕ್ಸ್‌ ರಾಕೆಟ್‌ಗಳು ಮಾರಾಟ ಮಾಡುತ್ತಿವೆ. ಕೊಚ್ಚಿಯಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆಯ ತನಿಖೆ ವೇಳೆ ಪೊಲೀಸರಿಗೆ ಇಂತಹ ಗ್ಯಾಂಗ್‌ಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಬಂಧಿತರು ಅಂತಹ ಗ್ಯಾಂಗ್‌ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂದು ನಂಬಲಾಗಿದೆ.

ಬಂಧಿತರ ಮೊಬೈಲ್ ಫೋನ್‌ಗಳಿಂದ ಈ ಬಗ್ಗೆ ಮಹತ್ವದ ಮಾಹಿತಿ ಲಭಿಸಿದೆ ಎಂದು ವರದಿಯಾಗಿದೆ. ಆದರೆ, ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ಸಿದ್ಧರಿಲ್ಲ. ಸೆಕ್ಸ್ ರಾಕೆಟ್ ಗ್ಯಾಂಗ್‌ಗಳು ಮುಖ್ಯವಾಗಿ ಇತರ ರಾಜ್ಯಗಳ ಹುಡುಗಿಯರನ್ನು ಸಾಗಿಸುತ್ತವೆ. ಅಲ್ಲದೇ ಹೆಚ್ಚಿನ ಮಹಿಳೆಯರನ್ನು ವಂಚಿಸುತ್ತಿದ್ದಾರೆ.

ಮಾಡೆಲಿಂಗ್‌ನಲ್ಲಿ ಹುಡುಗಿಯರಿಗೆ ದೊಡ್ಡ ಅವಕಾಶಗಳ ಭರವಸೆ ಇದೆ ಎಂದು ನಂಬಿಸುತ್ತಾರೆ. ಅದಕ್ಕೆ ಆಕರ್ಷಿತರಾಗಿ ಬರುವ ಹುಡುಗಿಯರನ್ನು ಡ್ರಗ್ಸ್, ಡಿಜೆ ಪಾರ್ಟಿಗಳಿಗೆ ಕರೆದೊಯ್ದು ನಂತರ ಕಂಠಮಟ್ಟ ಕುಡಿಸಿ ಲೈಂಗಿಕ ದಂಧೆಗೆ ಒಪ್ಪಿಸುತ್ತಾರೆ.

ಮೊನ್ನೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಲ್ಲಿ ಒಬ್ಬ ಮಹಿಳೆ ಡಿಂಪಲ್ ಲಾಂಬಾ ಅಲಿಯಾಸ್ ಡಾಲಿ ಎಂದು ಪೊಲೀಸರಿಗೆ ಈ ಹಿಂದೆ ಮಾಹಿತಿ ಸಿಕ್ಕಿತ್ತು. ಡಿಂಪಲ್ ಕೊಚ್ಚಿಯ ವಿವಿಧೆಡೆ ಡ್ರಗ್ ಪಾರ್ಟಿ ನಡೆಸುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ.

ಕೊಚ್ಚಿಯಲ್ಲಿ ನಡೆದ ಫ್ಯಾಷನ್ ಶೋಗಳಲ್ಲೂ ಭಾಗವಹಿಸಿದ್ದರು. ಕೆಲವು ಫ್ಯಾಶನ್ ಶೋಗಳಲ್ಲಿ ಡಿಂಪಲ್ ಚಿತ್ರದೊಂದಿಗೆ ಜಾಹೀರಾತು ನೀಡಲಾಯಿತು. ಜನರನ್ನು ಒಟ್ಟುಗೂಡಿಸಲು ಇದನ್ನು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಕೊಡುಂಗಲ್ಲೂರು ಮೂಲದ ವಿವೇಕ್ (26), ನಿತಿನ್ (25) ಮತ್ತು ಸುಧೀಪ್ (27) ರನ್ನು ಡಿಂಪಲ್‌ಗೆ ಈಗಾಗಲೇ ತಿಳಿದಿತ್ತು. ವಿವೇಕ್ ಮತ್ತು ಡಿಂಪಲ್ ಒಟ್ಟಿಗೆ ಪ್ರಯಾಣಿಸಿದ್ದಕ್ಕೆ ಸಾಕ್ಷಿಯೂ ಸಿಕ್ಕಿದೆ.

ಪಾರ್ಟಿ ವೇಳೆ ಡಿಂಪಲ್ ತನ್ನನ್ನು ಬಲವಂತವಾಗಿ ಪಾರ್ಟಿಗೆ ಕರೆದೊಯ್ದು ಬಿಯರ್ ನಲ್ಲಿ ಪೌಡರ್ ಬೆರೆಸಿದ್ದಳು ಎಂದು ರೂಪದರ್ಶಿ ಹೇಳಿಕೆ ನೀಡಿದ್ದರು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮಾತ್ರ ಸ್ಪಷ್ಟತೆ ಸಿಗಲಿದೆ. ನಾಲ್ವರು ಆರೋಪಿಗಳನ್ನು ಕನಿಷ್ಠ ಐದು ದಿನಗಳ ಕಾಲ ಕಸ್ಟಡಿಗೆ ಪಡೆದು ವಿವರವಾಗಿ ವಿಚಾರಣೆ ನಡೆಸಲಾಗುವುದು ಎಂದು ತನಿಖಾ ತಂಡ ಈಗಾಗಲೇ ನಿರ್ಧರಿಸಿದೆ.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳಿಗೆ  ಜಿಲ್ಲಾ ಮಟ್ಟದಲ್ಲಿ ಬಹುಮಾನ 

0

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಕಾರ್ಮೆಲ್ ಕಾನ್ವೆಂಟ್ ಮಾಡಂಕಾಪು, ಬಂಟ್ವಾಳ ತಾಲೂಕು ಇಲ್ಲಿ  10 ನವೆಂಬರ್ 2022ರಂದು ನಡೆದ  ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಗುಂಪು ಸ್ಪರ್ಧೆಯಲ್ಲಿ,

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ  ಅನ್ವಿತ್ ಯನ್ (ಶ್ರೀ ಶ್ರೀಪತಿ ಎನ್ ಮತ್ತು   ವಿದ್ಯಾಲಕ್ಷ್ಮಿ ದಂಪತಿ ಪುತ್ರ) ಹಾಗೂ ಸಮರ್ಥ ರಾಮ ರೈ (ಶ್ರೀ ಸತೀಶ್ ಕುಮಾರ್ ರೈ ಮತ್ತು ಪ್ರಗತಿ ರೈ ದಂಪತಿ ಪುತ್ರ)

ಇವರ ತಂಡ ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ ಎಂದು ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಅವರು ಶಾಲಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ರನ್ನರ್-ಅಪ್ ಪ್ರಶಸ್ತಿ

0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಮಂಗಳೂರು ವಿಭಾಗದ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಅತಿಥೇಯ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ತಂಡವು ರನ್ನರ್-ಅಪ್ ಪ್ರಶಸ್ತಿಯನ್ನು ಗಳಿಸಿಕೊಂಡಿದೆ.


ಮಂಗಳೂರು ವಿಭಾಗದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ 18 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು, ಫೈನಲ್ ಪಂದ್ಯದಲ್ಲಿ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ತಂಡದ ವಿರುದ್ದ ಹೋರಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವಿಜೇತರಿಗೆ ಬಹುಮಾನ ವಿತರಿಸಿದರು.


ವಿಜೇತ ತಂಡಗಳು ನವೆಂಬರ್ 21 ಮತ್ತು 22 ರಂದು ಎಐಟಿ ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸುವುದಕ್ಕೆ ಅರ್ಹತೆಯನ್ನು ಗಳಿಸಿಕೊಂಡಿವೆ.


ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ತರಬೇತಿಯನ್ನು ನೀಡಿದ್ದಾರೆ ಎಂದು ಪ್ರಂಶುಪಾಲರು ತಿಳಿಸಿದ್ದಾರೆ.

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ರಜತ್‌ ಆರ್‌.ಭಟ್ ಗೆ ಕಂಚಿನ ಪದಕ

0


ಪುತ್ತೂರು, ನ. 21: ಹರಿಯಾಣದ ಕುರುಕ್ಷೇತ್ರದಲ್ಲಿ ನವೆಂಬರ್ 19 ರಿಂದ 23ರವರೆಗೆ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀಟರ್ ಓಟದ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್‌ ಆರ್‌.ಭಟ್‌ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಈತನು ವಿಟ್ಲದ ರಾಜೇಶ್ ಭಟ್ ಮತ್ತು ರಾಧಿಕಾ ಭಟ್‌ ದಂಪತಿ ಪುತ್ರ.

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ.ಜ್ಯೋತಿ ಮತ್ತು ಯತೀಶ್‌ಇವರ ನೇತೃತ್ವದಲ್ಲಿ ಈತನು ತರಬೇತಿಯನ್ನು ಪಡೆದಿರುತ್ತಾನೆ.

ವಿದ್ಯಾರ್ಥಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಮಂಗಳೂರಿನ ಆಟೋರಿಕ್ಷಾ ಸ್ಫೋಟದ ಆರೋಪಿ ಶಾರಿಕ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ – ಗುರುತು ಪತ್ತೆ ಹಚ್ಚಲು ಆಗಮಿಸಿದ ಆತನ ಕುಟುಂಬ

0

ಮಂಗಳೂರಿನ ಆಟೋರಿಕ್ಷಾ ಸ್ಫೋಟದ ಆರೋಪಿ ಶಾರಿಕ್ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಗುರುತು ಪತ್ತೆ ಹಚ್ಚಲು ಮತ್ತು ಭೇಟಿಗಾಗಿ ಆತನ ಕುಟುಂಬದವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳ ಗುರುತು ಪತ್ತೆ ಹಚ್ಚಲು ಭೇಟಿಗೆ ಅವರು ಬಂದಿದ್ದಾರೆ. ಭಯೋತ್ಪಾದನೆಯಂತಹಾ ಕೃತ್ಯಗಳ ಆರೋಪಿಗಳ ಪರಿಚಯ ಮತ್ತು ಮಾಧ್ಯಮದವರಿಗೆ ಮತ್ತು ಜನರಿಗೆ ಆಗಬೇಕಾದದ್ದು ಅತೀ ಅವಶ್ಯ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ.

ಅಂತಹಾ ಕ್ರಿಮನಲ್ ಗಳ ಜೊತೆ ಜೀವಿಸುತ್ತಿರುವ ಅವರಿಗೆ ಆರೋಪಿಯ ಕೃತ್ಯಗಳ ಬಗ್ಗೆ ಸ್ವಲ್ಪವಾದರೂ ಅರಿವಿಲ್ಲದೆ ಇರುತ್ತದೆಯೇ?

ಆದುದರಿಂದ ಭವಿಷ್ಯದಲ್ಲಿ ಆಗಬಹುದಾದ ಸಂಭಾವ್ಯ ಅಪಾಯಗಳನ್ನು ತಪ್ಪಿಸಲು ಅವರನ್ನು ಮತ್ತು ಅವರ ಕೆಲವೊಂದು ಮಾಹಿತಿಗಳು ಜನರಿಗೆ ತಿಳಿಯಬೇಕಾದುದು ಅವಶ್ಯ ಎಂದು ಜನರು ಹೇಳಿಕೊಳ್ಳುವುತ್ತಿರುವುದು ಕೇಳಿಬರುತ್ತದೆ.