Sunday, March 15, 2026
Home Blog Page 111

ಇಂಗ್ಲೆಂಡಿನಲ್ಲಿ ವ್ಲಾಡಿಮಿರ್ ಪುಟಿನ್ ಅವರ ವಿಚಿತ್ರ ಆಕಾರದ ಪ್ರತಿಮೆ ನಿರ್ಮಿಸಿದ ಜನರು – ಪುರುಷ ಜನನಾಂಗದ ಆಕಾರದಲ್ಲಿ ರಷ್ಯಾ ಅಧ್ಯಕ್ಷರ ತಲೆಯನ್ನು ನಿರ್ಮಿಸಿದ ಹಳ್ಳಿಗರು

0

ಇಂಗ್ಲೆಂಡಿನಲ್ಲಿ ವ್ಲಾಡಿಮಿರ್ ಪುಟಿನ್ ಅವರ ವಿಚಿತ್ರ ಆಕಾರದ ಪ್ರತಿಮೆ ನಿರ್ಮಿಸಿದ ಜನರು – ಪುರುಷ ಜನನಾಂಗದ ಆಕಾರದಲ್ಲಿ ರಷ್ಯಾ ಅಧ್ಯಕ್ಷರ ತಲೆಯನ್ನು ನಿರ್ಮಿಸಿದ ಹಳ್ಳಿಗರು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಿಚಿತ್ರ ಪ್ರತಿಮೆಯನ್ನು ಇಂಗ್ಲೆಂಡ್‌ನ ಹಳ್ಳಿಯೊಂದರಲ್ಲಿ ನಿರ್ಮಿಸಿ ಅದರ ಕೆಳಗೆ ‘ಬೆಲೆಂಡ್ ಆಫ್ ದಿ ಇಯರ್’ ಎಂದು ಬರೆಯಲಾಗಿದೆ. ಉಕ್ರೇನ್ ಮೇಲೆ ರಷ್ಯಾದ ಕ್ಷಿಪಣಿಗಳ ಮಳೆಯಾಗುತ್ತಿದ್ದಂತೆ, ಇಂಗ್ಲೆಂಡ್‌ನ ಹಳ್ಳಿಯೊಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರತಿಮೆಯ ತಲೆಯ ಮೇಲೆ ಪುರುಷ ಜನನಾಂಗದ ಆಕಾರವನ್ನು ಸ್ಥಾಪಿಸಿತು.

ಪ್ರತಿಮೆಯನ್ನು ಇಂಗ್ಲೆಂಡ್‌ನ ಬೆಲ್ ಎಂಡ್ ಗ್ರಾಮದಲ್ಲಿ ಸ್ಥಾಪಿಸಲಾಯಿತು ಮತ್ತು ಪುಟಿನ್ ಅವರ ಪ್ರತಿಮೆಯನ್ನು “ವರ್ಷದ ಬೆಲ್ಲೆಂಡ್” ಶಾಸನದಿಂದ ಗುರುತಿಸಲಾಗಿದೆ. ‘ಬೆಲ್ಲೆಂಡ್’ ಎಂಬುದು ಕಿರಿಕಿರಿ ಅಥವಾ ಮೂರ್ಖ ವ್ಯಕ್ತಿಗೆ ಇಂಗ್ಲಿಷ್ ಗ್ರಾಮ್ಯ ಪದವಾಗಿದೆ.

ಉಕ್ರೇನ್‌ನ ಮೇಲೆ ರಷ್ಯಾದ ಪಡೆಗಳ ಹತ್ತು ತಿಂಗಳ ಕಾಲ ಆಕ್ರಮಣವನ್ನು ವಿರೋಧಿಸಿ ಪ್ರತಿಮೆಯನ್ನು ಸ್ಥಾಪಿಸಲಾಯಿತು ಎಂದು ತಿಳಿದುಬಂದಿದೆ. ಪ್ರತಿಮೆಯು ಪ್ರಥಮ ಬಾರಿಗೆ ಡಿಸೆಂಬರ್ 15 ರಂದು ಕಾಣಿಸಿಕೊಂಡಿತು. ದಾರಿಹೋಕರು ಪ್ರತಿಮೆಯ ಮೇಲೆ ಎಸೆಯಲು ಮೊಟ್ಟೆಗಳ ಪೆಟ್ಟಿಗೆಗಳನ್ನು ಅದರ ಪಕ್ಕದಲ್ಲಿ ಇರಿಸಲಾಗಿತ್ತು.

ಸುದ್ದಿ ಸಂಸ್ಥೆಗೆ ಅವರು ಯಾರಿಗಾದರೂ ಬೆಲ್ಲೆಂಡ್ ಆಫ್ ದಿ ಇಯರ್ ಪ್ರಶಸ್ತಿಯನ್ನು ನೀಡಬೇಕಾಗಿದೆ ಎಂದು ಹೇಳಿದರು ಮತ್ತು “ಈ ವರ್ಷ ಸಾರ್ವತ್ರಿಕವಾಗಿ ಬೆಲೆಂಡ್ ಆಗಿರುವ ಒಬ್ಬ ವ್ಯಕ್ತಿ ಇದ್ದಾರೆ – ಮತ್ತು ಅದು ವ್ಲಾಡಿಮಿರ್ ಪುಟಿನ್” ಎಂದು ಭಾವಿಸಲಾಗಿದೆ.

ಪ್ರತಿಮೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಜನರು ಸ್ವಇಚ್ಛೆಯಿಂದ ಪ್ರತಿಮೆಯ ಮೇಲೆ ಮೊಟ್ಟೆಗಳನ್ನು ಎಸೆದರು ಮತ್ತು ಅದನ್ನು “ಸಾಕಷ್ಟು ಸಂತೋಷದಿಂದ” ಮಾಡಿದರು ಎಂದು ಪ್ರತಿಮೆ ನಿರ್ಮಾಣದ ಸಂಘಟಕರು ಹೇಳಿದರು.

ತೆಂಕಣ ತವರಿನ ಬಾಲ ಯಕ್ಷಪ್ರತಿಭೆಗಳಿಗೆ ಪ್ರಶಸ್ತಿ, ಪ್ರತಿಭಾ ಪುರಸ್ಕಾರದೊಂದಿಗೆ ಡಿ. 18ರಂದು ಕುಂಬ್ಳೆ ಪಾರ್ತಿಸುಬ್ಬನ ನೆಲದಲ್ಲಿ ಕಣಿಪುರ ಯಕ್ಷೋತ್ಸವ

ಕುಂಬಳೆ: ಕಣಿಪುರ ಯಕ್ಷಗಾನ ಮಾಸಪತ್ರಿಕೆ 11ನೇ ವರ್ಷಕ್ಕೆ ಕಾಲೂರುವ ಹಿನ್ನೆಲೆಯಲ್ಲಿ ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ತವರು ನೆಲ ಕುಂಬ್ಳೆಯ ಶೇಡಿಕಾವಿನಲ್ಲಿ ಡಿ.18ರಂದು ಭಾನುವಾರ ಸಂಜೆ 6ರಿಂದ ಪ್ರಥಮ ಕಣಿಪುರ ಯಕ್ಷೋತ್ಸವ ಜರಗಲಿದ್ದು ಈ ವೇಳೆ ಮೂವರು ಬಾಲಪ್ರತಿಭೆಗಳಿಗೆ ಯಕ್ಷಪ್ರತಿಭಾ ಪ್ರಶಸ್ತಿ ಮತ್ತು ಏಳು ಮಂದಿ ಉದಯೋನ್ಮುಖ ಬಾಲಪ್ರತಿಭೆಗಳಿಗೆ ಯಕ್ಷಪ್ರತಿಭಾ ಪುರಸ್ಕಾರ ಪ್ರದಾನವಾಗಲಿದೆ.

ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ, ಕಲಾಪೋಷಕ ಟಿ.ಶ್ಯಾಮ ಭಟ್ ಕರ‍್ಯಕ್ರಮ ಉದ್ಘಾಟಿಸುವರು. ಕಣಿಪುರ ಗೋಪಾಲಕೃಷ್ಣ ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘುನಾಥ ಪೈ ಕುಂಬಳೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವೇದವಿದ್ವಾಂಸ, ಧಾರ್ಮಿಕ ಚಿಂತಕ ಹಿರಣ್ಯ ವೆಂಕಟೇಶ್ವರ ಭಟ್, ಯಕ್ಷಕ್ಷೇತ್ರ ಪ್ರತಿಷ್ಠಾನ ಮಂಗಳೂರು ಇದರ ಸಂಚಾಲಕ ರಾಘವೇಂದ್ರ ಕುಂಬ್ಳೆ ಭಾಗವಹಿಸುವರು.


ಸಮಾರಂಭದಲ್ಲಿ ಮಂಗಳೂರಿನ ಯಕ್ಷಕ್ಷೇತ್ರ ಪ್ರತಿಷ್ಠಾನ ಪ್ರಾಯೋಜಿಸುವ ಪ್ರಥಮ ಕುಂಬ್ಳೆ ಸುಂದರರಾವ್ ಪ್ರಶಸ್ತಿ ಮತ್ತು ದಿ, ಕುಂಬ್ಳೆ ಚಂದ್ರಶೇಖರ(ಕುAಬ್ಳೆ ಚಂದು) ಸ್ಮರಣಾರ್ಥ ಪ್ರಶಸ್ತಿ ಪ್ರದಾನವಾಗಲಿದೆ. ಯಕ್ಷಗಾನ ಮತ್ತು ಶಿಕ್ಷಣದ ಜತೆ ಬಹುಮುಖೀ ಸಾಧನೆಗೈದ ಉದಯೋನ್ಮುಖ ಕಲಾವಿದರಿಗೆ ಈ ಪ್ರಶಸ್ತಿಯು ಸೀಮಿತವಾಗಿದೆ. ಮೊದಲ ದಿ. ಕುಂಬಳೆ ಸುಂದರರಾವ್ ಸ್ಮರಣಾರ್ಥ ಯಕ್ಷಪ್ರತಿಭೆ ಪ್ರಶಸ್ತಿಗೆ ಮಾ. ಕಿಶನ್ ಅಗ್ಗಿತ್ತಾಯ ನೆಲ್ಲಿಕಟ್ಟೆ ಮತ್ತು ದಿ. ಕುಂಬ್ಳೆ ಚಂದ್ರಶೇಖರ ಸ್ಮರಣಾರ್ಥ ಪ್ರಶಸ್ತಿಗೆ ಉದಯೋನ್ಮುಖ ಮದ್ಲೆಗಾರ ಮಾ. ಕೃಷ್ಣಚೈತನ್ಯ ಚೇರಾಲು ಆಯ್ಕೆಗೊಂಡಿದ್ದಾರೆ.

ಇದೇ ಸಂದರ್ಭ ಕುಂಬ್ಳೆ ಸೀಮೆಯ ಬಳ್ಳಂಬೆಟ್ಟು ಮೂಲದ ಖ್ಯಾತ ಪುಂಡುವೇಷಧಾರಿ ದಿ. ಶ್ರೀಧರ ಭಂಡಾರಿ ಸ್ಮರಣಾರ್ಥ ಪ್ರಶಸ್ತಿ ನೀಡಲಿದ್ದು, ಪ್ರಶಸ್ತಿಗೆ ಪ್ರತಿಭಾವಂತ ಕಲಾವಿದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ತಲಾ 5 ಸಾವಿರ ರೂ ನಗದು ಮತ್ತು ಸ್ಮರಣಿಕೆ, ಸನ್ಮಾನಪತ್ರ, ಪಾರಿತೋಷಕವನ್ನೊಳಗೊಂಡಿದೆ.


ಏಳು ಮಂದಿಗೆ ಪ್ರತಿಭಾ ಪುರಸ್ಕಾರ
ಇದೇ ಸಂದರ್ಭ ಕುಂಬ್ಳೆ ಸೀಮೆಯ ಉದಯೋನ್ಮುಖರಾದ ಏಳುಮಂದಿ ಬಾಲಪ್ರತಿಭೆಗಳಿಗೆ ಕಣಿಪುರ ಯಕ್ಷಗಾನ ಮಾಸಪತ್ರಿಕೆ ವತಿಯಿಂದ “ಯಕ್ಷಪ್ರತಿಭಾ ಪುರಸ್ಕಾರ” ಪ್ರದಾನವಾಗಲಿದೆ. ಈ ಪರಸ್ಕಾರವು ಯಕ್ಷಗಾನ ಸಹಿತ ಲಲಿತಕಲೆಗಳಲ್ಲಿ ಈಗಾಗಲೇ ಭರವಸೆ ಮೂಡಿಸಿದ ಎಳೆಯ ಸಾಧಕ ಕಲಾವಿದ್ಯಾರ್ಥಿಗಳಾದ ಅನರ್ಘ್ಯರತ್ನ ಪೆರುವಡಿ ಬಾಯಾರು, ಶ್ರಾವಣಿ ಕಾಟುಕುಕ್ಕೆ, ಸ್ಮೃತಿ ಎಂ. ಮಾಯ್ಲೆಂಗಿ ಕಾಟುಕುಕ್ಕೆ, ಸ್ಪೂರ್ತಿ ಕಲ್ಲೂರಾಯ ಮಧೂರು, ಪ್ರೀತಿ ಕಲ್ಲೂರಾಯ ಮಧೂರು, ಅದ್ವೈತ್ ಕನ್ಯಾನ, ಶ್ರುತಿಕಲಾ ಚೇರಾಲು ಇವರಿಗೆ ಸಲ್ಲಲಿದೆ.

ತೆಂಕಣ ತವರಿನ ಪ್ರತಿಭಾವಂತ ಬಾಲಕಲಾವಿದರನ್ನು ಪ್ರೋತ್ಸಾಹಿಸಿ, ಈ ನೆಲದಲ್ಲಿ ಯಕ್ಷಗಾನದ ದಟ್ಟ ವಾತಾವಾರಣ ರೂಪಿಸಲು ಎಳೆಯರನ್ನು ಪೋಷಿಸುವ ದೃಷ್ಟಿಯಲ್ಲಿ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಯಕ್ಷಗಾನಾಚಾರ್ಯ ಪಾರ್ತಿಸುಬ್ಬನ ನೆಲದಿಂದ ಪ್ರಶಸ್ತಿ ಮತ್ತು ಪುರಸ್ಕಾರ ಪಡೆಯುವುದು ಈ ಸಮಾರಂಭದ ವಿಶೇಷತೆಯಾಗಿದೆ.


ಬಳಿಕ ಪ್ರಸಿದ್ಧ ಕಲಾವಿದರ ಗಡಣ ಹೊಂದಿದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ “ಶ್ರೀರಾಮ ಕಾರುಣ್ಯ” ಪ್ರಸಂಗದ ಬಯಲಾಟ ಜರಗಲಿದ್ದು, ಕಾರ್ಯಕ್ರಮ ಕುಂಬ್ಳೆ ಶೇಡಿಕಾವಿನ ಪಾರ್ತಿಸುಬ್ಬ ಸ್ಮಾರಕ ಮೈದಾನದಲ್ಲಿ ಮಹಾಕವಿ ಪಾರ್ತಿಸುಬ್ಬನ ಸಂಕಲ್ಪಿತ ಛಾಯಾಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನಡೆಸುವುದರೊಂದಿಗೆ ಆರಂಭವಾಗಲಿದೆ. ಯಕ್ಷಗಾನದ ತವರುನೆಲದಲ್ಲಿ ಮತ್ತೆ ಯಕ್ಷಗಾನದ ವಾತಾವರಣ ನಿರ್ಮಿಸುವ ಸದುದ್ದೇಶದಿಂದ ಕಣಿಪುರ ಯಕ್ಷಮಿತ್ರ ಬಳಗದ ಸಹಕಾರದಲ್ಲಿ ಕರ‍್ಯಕ್ರಮ ಆಯೋಜಿಸಲಾಗಿದೆ.

ವರದಿ: ಎಂ.ನಾ. ಚಂಬಲ್ತಿಮಾರ್ –
ಸಂಪರ್ಕ: 9895508277

ಇಂದು ಆಟ ಎಲ್ಲೆಲ್ಲಿ? (17-12-2022, ಶನಿವಾರ)

ಮೇಳಗಳ ಇಂದಿನ (17.12.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ತ್ರಾಸಿ ಚರ್ಚ್ ರೋಡ್ ಶ್ರೀ ರಾಮ ಗಣಪತಿ ಮಂದಿರದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರದಲ್ಲಿ ಸರಸ್ವತಿ ಸದನ 

ಕಟೀಲು ಎರಡನೇ ಮೇಳ == ಪ್ರೇಮಾಲಯ, ಶಿವನಗರ, ಟೋಲ್ ಗೇಟ್ ಬಳಿ, ಹೆಜಮಾಡಿ 

ಕಟೀಲು ಮೂರನೇ ಮೇಳ== ಗಣೇಶ್ ಟೈಲ್ ವರ್ಕ್ಸ್ ಗುರುಪುರ ಕೈಕಂಬ 

ಕಟೀಲು ನಾಲ್ಕನೇ ಮೇಳ  == ಗುಂಡಳಿಕೆ ನಾಗರಿಕ ಸೇವಾ ಸಮಿತಿ ಯೆಯ್ಯಾಡಿ 

ಕಟೀಲು ಐದನೇ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕೊಕ್ಕಡ 

ಮಂದಾರ್ತಿ ಒಂದನೇ ಮೇಳ  == ರಂಗನಕೆರೆ ಹೇರಾಡಿ ಬಾರ್ಕೂರು 

ಮಂದಾರ್ತಿ ಎರಡನೇ ಮೇಳ   == ಮಿಯ್ಯಾರು ನಾಲ್ಕೂರು 

ಮಂದಾರ್ತಿ ಮೂರನೇ ಮೇಳ  ==  ಶ್ರೀನಿವಾಸ ನಿಲಯ ಮೂಡುಬಗೆ ಅಂಪಾರು – ಕೂಡಾಟ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀನಿವಾಸ ನಿಲಯ ಮೂಡುಬಗೆ ಅಂಪಾರು – ಕೂಡಾಟ 

ಮಂದಾರ್ತಿ ಐದನೇ ಮೇಳ  == ತಂತ್ರಾಡಿ ಕಾಡೂರು ಮಂದಾರ್ತಿ 

ಹನುಮಗಿರಿ ಮೇಳ == ಯಕ್ಷಕೃಪಾ ಕ್ಯಾಶ್ಯೂ ಫ್ಯಾಕ್ಟರಿ ವಠಾರ ಬನ್ನೇರಳಕಟ್ಟೆ ಬೂದಾಡಿ – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಆದಿಉಡುಪಿ ಬೈಪಾಸ್ ಬಳಿ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಬೆಳ್ವೆ ಸೂರ್ಗೋಳಿ ಶಾಲಾ ವಠಾರ – ಕರ್ಣಾರ್ಜುನ, ಕೀಚಕ ವಧೆ, ವೀರ ಬರ್ಬರೀಕ (ಕಾಲಮಿತಿ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೆಳಾಕೋಟಿಕೇರಿ ಏಳಜಿತ್ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಹೇರೂರು ಅಮ್ಮನವರ ಮನೆ ವಠಾರ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ ==  ತೌಡುಗೋಳಿ ಯುವಕ ಮಂಡಲ ವಠಾರ – ಶ್ರೀ ದೇವಿ ಲಲಿತೋಪಾಖ್ಯಾನ 

ಶ್ರೀ ಕಮಲಶಿಲೆ ಮೇಳ == ತೆಂಕಬೈಲು ಯಡಮೊಗ್ಗೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಮೂಡುಜಡ್ದು ತಂತ್ರಾಡಿ 

ಶ್ರೀ ಸೌಕೂರು ಮೇಳ == ಹೆಬ್ರಿ ಕನ್ಯಾನ ಹೋಟೆಲ್ ಸರಸ್ವತಿ ಭವನ ಮುಂಭಾಗ – ವಜ್ರಮಾನಸಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಕಾಸನಮಕ್ಕಿ ‘ಹರಿಕೃಪಾ’ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಾವಿನಕೊಡ್ಲು – ಮಂತ್ರಮಾಂಗಲ್ಯ 

ಶ್ರೀ ಹಿರಿಯಡಕ ಮೇಳ == ಮುಂಡಾಜೆ ಶಾರದಾ ನಗರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಹಿಮೆದ ಮಾಣಿಕ್ಯ 

ಶ್ರೀ ಶನೀಶ್ವರ ಮೇಳ == ಮೆಜೆಸ್ಟಿಕ್ ಹಾಲ್ ಎದುರು, ಅಂಕದಕಟ್ಟೆ ಕೋಟೇಶ್ವರ 

ಶ್ರೀ ಸಿಗಂದೂರು ಮೇಳ == ಕಾರ್ಕಡ 

ಶ್ರೀ ನೀಲಾವರ ಮೇಳ  == ನೀಲಾವರ ಕಳುವಿನಬೆಟ್ಟು – ರಾಮಾಂಜನೇಯ, ಚಂದ್ರಾವಳಿ ವಿಲಾಸ 

ಶ್ರೀ ಮೇಗರವಳ್ಳಿ ಮೇಳ ==  ಪಾದೆಮಠ ಬಲ್ಪೆಬೈಲು – ಭರತ ವರ್ಷಿಣಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿ, ಬೇಳಂಜೆ – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಮಾಚನಾಡಿ ಕಕ್ಕುಂಜೆ ‘ಶ್ರೀದೇವಿ ಅನುಗ್ರಹ’ – ಮೇಘ ರಂಜಿನಿ 

ಶ್ರೀ ಬಪ್ಪನಾಡು ಮೇಳ == ಅಡ್ಡೂರು ಕಳಸಗುರಿ – ಭಂಡಾರ ಚಾವಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುಲಶೇಖರ ಸರಿಪಲ್ಲ ಯಸ್ ಟಿ ಯಂಗ್ ಸ್ಟಾರ್ ಕ್ಲಬ್ ಎದುರು – ಶ್ರೀ ದೇವಿ ಮಹಾತ್ಮೆ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಪಂಜಿಕಲ್ಲು ಪಾಂಗಳಬೆಟ್ಟು ವಸ್ರಗೋಳಿ – ಅಮರಶಿಲ್ಪಿ ವೀರ ಶಂಭು ಕಲ್ಕುಡ 

ಶ್ರೀ ತಲಕಳ ಮೇಳ == ಮುರನಗರ – ಸೀತಾ ಪರಿತ್ಯಾಗ, ಕಾರ್ತವೀರ್ಯಾರ್ಜುನ 

ಶ್ರೀ ಗೆಜ್ಜೆಗಿರಿ ಮೇಳ ==  ಮಾಂಟ್ರಾಡಿ ಪಂಚಾರು ಶಾಲಾ ವಠಾರ – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ಪ್ರೋ-ಕಬಡ್ಡಿ ಪಂದ್ಯಾಟ

0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಯ್ದ ವಿದ್ಯಾರ್ಥಿ ತಂಡಗಳ ನಡುವೆ ಪ್ರೋ-ಕಬಡ್ಡಿ ಪಂದ್ಯಾಟವು ದಿನಾಂಕ 17 ಡಿಸೆಂಬರ್ ಶನಿವಾರದಂದು ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಡೆಯಲಿದೆ.


ಅಂದು ಬೆಳಿಗ್ಗೆ 10 ಗಂಟೆಗೆ ಪುತ್ತೂರಿನ ಶಾಸಕ ಶ್ರೀ ಸಂಜೀವ ಮಠಂದೂರು ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಪುತ್ತೂರಿನ ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಭಾರತೀಯ ಸೀಮಾ ಸುರಕ್ಷಾ ಬಲದ ವಿಶ್ರಾಂತ ಡೆಪ್ಯುಟಿ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ.

ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ.ಕೆ ಗೌರವ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ.


ಹುಡುಗರ 5 ತಂಡಗಳು ಮತ್ತು ಹುಡುಗಿಯರ 3 ತಂಡಗಳು ಇದರಲ್ಲಿ ಭಾಗವಹಿಸುತ್ತಿದ್ದು, ಮ್ಯಾಟ್ ಅಂಕಣದಲ್ಲಿ ಲೀಗ್ ಮಾದರಿಯಲ್ಲಿ ಈ ಸ್ಪರ್ಧೆಗಳು ನಡೆಯುತ್ತವೆ ಎಂದು ಪ್ರಾಂಶುಪಾಲ ಡಾ.ಮಹೇಶ್‌ಪ್ರಸನ್ನ ಕೆ. ತಿಳಿಸಿದ್ದಾರೆ.

ಎಂ.ಜಿ.ಎಂ. ಕಾಲೇಜಿನಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆ – “ಯಕ್ಷಗಾನ ವಿಶ್ವಮಾನ್ಯ ಕಲೆ”: ಪ್ರೊ. ಲಕ್ಷ್ಮೀನಾರಾಯಣ ಕಾರಂತ

ನಮ್ಮ ದೇಶದ ಹೆಮ್ಮೆಯ ಕಲೆಯಾದ ಯಕ್ಷಗಾನ ತನ್ನ ಅಂತ:ಸತ್ವದಿಂದಾಗಿ ವಿಶ್ವಮಾನ್ಯತೆಯನ್ನು ಗಳಿಸಿದೆ. ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಜಗತ್ತಿನ ಹೊಸ ಹೊಸ ಪ್ರೇಕ್ಷಕರನ್ನು ತಲುಪುತ್ತಿರುವ ಈ ಕಲೆಯ ಮೂಲ ಸ್ವರೂಪದ ಕುರಿತು ವಿದ್ಯಾರ್ಥಿಗಳು ಅರಿತುಕೊಳ್ಳುವುದು ಅತೀ ಅಗತ್ಯ. ಕಳೆದ ಹತ್ತು ವರ್ಷಗಳಿಂದ ವಿವಿಧ ಶಾಲಾ-ಕಾಲೇಜುಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸುವುದರ ಮೂಲಕ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಉತ್ತಮ ಕೆಲಸವನ್ನು ನಿರ್ವಹಿಸುತ್ತಿದೆ ಎಂದು ಎಂ.ಜಿ.ಎಂ. ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಹೇಳಿದರು.


ಗುರುವಾರ (15-12-2022) ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಯಕ್ಷಾಂಗಣ ಟ್ರಸ್ಟ್ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಎಂ.ಜಿ.ಎಂ. ಕಾಲೇಜಿನ ಯಕ್ಷಗಾನ ಮತ್ತು ನಾಟಕ ರಂಗದ ಸಹಯೋಗದೊಂದಿಗೆ ಆಯೋಜಿಸಿದ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಂಜನೀಯವಾದ ಲಕ್ಷಣಗಳಿಂದ ಮೇಳೈಸಿರುವ ಯಕ್ಷಗಾನ ಪ್ರದರ್ಶನಗಳಲ್ಲಿ ಪರಂಪರೆಯ ಸತ್ವಗಳು ದೂರವಾಗುತ್ತಿರುವುದು ವಿಷಾದನೀಯ ಸಂಗತಿ. ಇಂತಹ ಕಾರ್ಯಕ್ರಮಗಳ ಮೂಲಕ ಯುವ ಜನಾಂಗ ಕಲೆಯ ಮೂಲ ಚೆಲುವನ್ನು ಅರಿಯುವಂತಾಗಬೇಕು. ವಿದ್ಯಾರ್ಥಿಗಳು ಪಠ್ಯ ವಿಷಯಗಳೊಂದಿಗೆ ಕಲೆ-ಸಾಹಿತ್ಯ-ಸಂಗೀತಗಳಲ್ಲಿ ಅಭಿರುಚಿಗಳನ್ನು ಬಳಸಿಕೊಳ್ಳಬೇಕು ಎಂದು ಕನ್ನಡ ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಹೇಳಿದರು.


ಮುಖ್ಯ ಅತಿಥಿಗಳಾಗಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ, ಎಂ.ಜಿ.ಎಂ. ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಡಾ. ದೇವಿದಾಸ್ ನಾಯ್ಕ ಭಾಗವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪುತ್ತಿ ವಸಂತ ಕುಮಾರ್, ಯಕ್ಷಾಂಗಣ ಟ್ರಸ್ಟ್ನ ಕಾರ್ಯಕ್ರಮದ ಸಂಯೋಜಕರಾದ ಕೋಟ ಸುದರ್ಶನ ಉರಾಳ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಘವೇಂದ್ರ ತುಂಗ ಕೆ. ಕಾರ್ಯಕ್ರಮ ನಿರೂಪಿಸಿದರು.


ಸಭಾ ಕಾರ್ಯಕ್ರಮದ ನಂತರ ವಿದ್ವಾಂಸರಾದ ಸುಜಯೀಂದ್ರ ಹಂದೆ ಎಚ್. ಇವರ ನಿರೂಪಣೆಯೊಂದಿಗೆ ಹೆಜ್ಜೆಗಾರಿಕೆ, ಪದಾಭಿನಯ, ಮುದ್ರೆಗಳು, ಬಣ್ಣದ ವೇಷ ಮುಖವರ್ಣಿಕೆ, ಅಟ್ಟೆಕ್ಯಾದಿಗೆ ಮುಂದಲೆ ಕಟ್ಟುವುದು, ಬಾಲಗೋಪಾಲ, ಸ್ತ್ರೀ ವೇಷ, ಯಕ್ಷಗಾನದ ವಸ್ತ್ರಾಲಂಕಾರದ ವಿನ್ಯಾಸ, ಯುದ್ಧ ಕುಣಿತ, ಪ್ರಯಾಣ ಕುಣಿತ, ಪೌರಾಣಿಕ ಪ್ರಸಂಗಗಳ ಸನ್ನಿವೇಶಗಳು ಪ್ರಾತ್ಯಕ್ಷಿಕೆಯಲ್ಲಿ ಪ್ರದರ್ಶನಗೊಂಡವು.


ಕಲಾವಿದರಾಗಿ ಸುಜಯೀಂದ್ರ ಹಂದೆ ಎಚ್, ದೇವರಾಜ ದಾಸ, ರಾಘವೇಂದ್ರ ಹೆಗಡೆ, ಅಜಿತ್ ಅಂಬಲಪಾಡಿ, ತಮ್ಮಣ್ಣ ಗಾಂವ್ಕರ್, ನವೀನ್ ಕೋಟ, ಸುದೀಪ ಉರಾಳ, ಸುಹಾಸ್ ಕರಬ, ರಾಜು ಪೂಜಾರಿ ಇನ್ನಿತರರು ಭಾಗವಹಿಸಿದರು.

ವರದಿ: ರಾಘವೇಂದ್ರ ತುಂಗ ಕೆ.
ಮೊ. 9980181150

ಮಾಲ್ಡೀವ್ಸ್ ಬೀಚಿನಲ್ಲಿ ಶ್ರೀದೇವಿಯ ಮಗಳು!

0

ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿ ಜಾಹ್ನವಿ ಕಪೂರ್ (ಜಾನ್ವಿ ಕಪೂರ್) ಇತ್ತೀಚೆಗೆ ಸುಪ್ರಸಿದ್ಧ ಪ್ರವಾಸಿ ತಾಣವಾದ ಮಾಲ್ಡೀವ್ಸ್ ದೇಶದ ಸಮುದ್ರದಂಡೆಯಲ್ಲಿ ವಿಹರಿಸಿದ್ದರು.

ಫೋಟೋ ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾ ಗ್ರಾಮ್ 

ಅಲ್ಲಿ ವಿಹರಿಸುತ್ತಿರುವ ತನ್ನ ಮಾದಕ ಭಂಗಿಯ ಫೋಟೋಗಳನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಜಾಹ್ನವಿ ಕಪೂರ್ (ಜಾನ್ವಿ ಕಪೂರ್) ಎಂದು ಗೊತ್ತಲ್ಲ? ಬಾಲಿವುಡ್ ಚಿತ್ರರಂಗದ ಪ್ರಖ್ಯಾತ ನಟಿಯಾಗಿದ್ದ ದಿವಂಗತ ಶ್ರೀದೇವಿಯ ಮಗಳು. 

ಒಂದಕ್ಕಿಂತ ಒಂದು ಹೆಚ್ಚು ಆಕರ್ಷಕವಾದ ಫೋಟೋಗಳನ್ನು ಅವರು ಅಲ್ಲಿ ಪೋಸ್ಟ್ ಮಾಡಿದ್ದಾರೆ.

ಒಂದು  ಫೋಟೋದಲ್ಲಿ ಸ್ನೇಹಿತರ ಜೊತೆ ಕುಳಿತುಕೊಂಡಿರುವುದು ಗೋಚರಿಸುತ್ತದೆ, ಫೋಟೋದ  ಕೆಳಗೆ ಜಾಹ್ನವಿ ಕಪೂರ್ ಅವರು “ಸುಂದರವಾದ ಸೂರ್ಯಾಸ್ತದೊಂದಿಗೆ ಪಟ್ಟಣಕ್ಕೆ ಮರಳಿದ ಸ್ವಾಗತ ಮತ್ತು ಅತ್ಯುತ್ತಮ ಕಂಪನಿ. ನಾನು ಮೆಚ್ಚುವ ಹಲವಾರು ಜನರೊಂದಿಗೆ ಒಂದೇ ಕೋಣೆಯಲ್ಲಿದ್ದಕ್ಕಾಗಿ ಗೌರವವಾಗಿದೆ!!” ಎಂದು ಬರೆದುಕೊಂಡಿದ್ದಾರೆ.

ಫೋಟೋ ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾ ಗ್ರಾಮ್ 

ಜಾಹ್ನವಿ ಕಪೂರ್ ಅವರು ಇನ್ಸ್ಟಾ ಗ್ರಾಮ್ ನಲ್ಲಿ 21 ಮಿಲಿಯನ್ ಗಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ. (ಫೋಟೋ ಕೃಪೆ: ಜಾಹ್ನವಿ ಕಪೂರ್ ಇನ್ಸ್ಟಾ ಗ್ರಾಮ್ )

2 ವರ್ಷದ ಮಗುವನ್ನು ನುಂಗಿದ ಹಸಿದ ಹಿಪ್ಪೋಪಾಟಮಸ್‌ – ಜನರು ಕಲ್ಲು ತೂರಿದ ನಂತರ ಅವನನ್ನು ಜೀವಂತ ಉಗುಳಿತು! ಮಗು ಬದುಕುಳಿದದ್ದೇ ಒಂದು ಪವಾಡ

0

ಕಟ್ವೆ ಕಬಟೊರೊ ಪಟ್ಟಣದ ಸರೋವರದ ದಡದಲ್ಲಿ ಅಂಬೆಗಾಲಿಡುವ ಮಗು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಹಸಿದ ಹಿಪ್ಪೋ ತನ್ನ ದೊಡ್ಡ ದವಡೆಗಳಿಂದ ಅವನನ್ನು ಹಿಡಿದಿದೆ.

ಉಗಾಂಡಾದಲ್ಲಿ ರಾಕ್ಷಸ ಹಿಪಪಾಟಮಸ್‌ನಿಂದ ಎರಡು ವರ್ಷದ ಬಾಲಕನು ಬದುಕುಳಿದದ್ದೇ ಒಂದು ದೊಡ್ಡ ಪವಾಡ. ನೋಡುಗರು ಪ್ರಾಣಿಯ ಮೇಲೆ ಕಲ್ಲು ತೂರಾಟ ನಡೆಸಿದ ನಂತರ ಹಿಪ್ಪೋ ಅಂಬೆಗಾಲಿಡುವ ಮಗುವನ್ನು ಉಗುಳಿದೆ ಎಂದು ಕ್ಯಾಪಿಟಲ್ ಎಫ್‌ಎಂ ಉಗಾಂಡಾ ಪೊಲೀಸರನ್ನು ಉಲ್ಲೇಖಿಸಿ ವರದಿ ಮಾಡಿದೆ.

ಅಂಬೆಗಾಲಿಡುವ ಡಿಸೆಂಬರ್ 4 ರಂದು ಕಟ್ವೆ ಕಬಟೊರೊ ಪಟ್ಟಣದ ಸರೋವರದ ತೀರದಲ್ಲಿ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಹಸಿದ ಹಿಪ್ಪೋ ತನ್ನ ದೊಡ್ಡ ದವಡೆಗಳಿಂದ ಅವನನ್ನು ಹಿಡಿದಿದೆ. ಪ್ರಾಣಿಯು ಅವನನ್ನು ಸಂಪೂರ್ಣವಾಗಿ ನುಂಗುವ ಮೊದಲು, ಪಕ್ಕದಲ್ಲಿ ನಿಂತಿದ್ದ ಕ್ರಿಸ್ಪಾಸ್ ಬಾಗೊಂಜಾ ಅದರ ಮೇಲೆ ಕಲ್ಲುಗಳನ್ನು ಎಸೆಯಲು ಪ್ರಾರಂಭಿಸಿದರು. ಇದರಿಂದ ಹೆದರಿದ ಹಿಪ್ಪೋ ಹುಡುಗನನ್ನು ವಾಪಸ್ ಉಗುಳಿದೆ.

ಪೊಲೀಸರು ಅಂಬೆಗಾಲಿಡುತ್ತಿರುವ ಮಗುವನ್ನು ಇಗಾ ಪಾಲ್ ಎಂದು ಗುರುತಿಸಿದ್ದಾರೆ ಮತ್ತು ಪ್ರಾಣಿ ಅವನ ತಲೆಯಿಂದ ಹಿಡಿದು ದೇಹದ ಅರ್ಧ ಭಾಗವನ್ನು ನುಂಗಿದೆ ಎಂದು ಹೇಳಿದರು. ಬಾಲಕನ ಕೈಗೆ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

“ಸಂತ್ರಸ್ತರನ್ನು ತಕ್ಷಣವೇ ಹತ್ತಿರದ ಚಿಕಿತ್ಸಾಲಯಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು, ಅವನು ಸಂಪೂರ್ಣವಾಗಿ ಚೇತರಿಸಿಕೊಂಡ ಮತ್ತು ರೇಬೀಸ್ಗೆ ಲಸಿಕೆಯನ್ನು ಪಡೆದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ನಂತರ ಅವರನ್ನು ಅವನ ಪೋಷಕರಿಗೆ ಹಸ್ತಾಂತರಿಸಲಾಯಿತು.

ಆದಾಗ್ಯೂ, ಪೋಲಿಸ್ ವಕ್ತಾರರು ಸರೋವರಗಳು ಮತ್ತು ವನ್ಯಜೀವಿ ಕೇಂದ್ರಗಳಂತಹ ಪ್ರಾಣಿಗಳ ಅಭಯಾರಣ್ಯಗಳ ಬಳಿ ಇರುವ ಪೋಷಕರಿಗೆ ತಮ್ಮ ಮೇಲೆ ದಾಳಿ ಮಾಡುವ ಮೊಸಳೆಗಳು ಮತ್ತು ಹಿಪ್ಪೋಗಳಂತಹ ದಾರಿತಪ್ಪಿ ಪ್ರಾಣಿಗಳ ಬಗ್ಗೆ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದರು.

ಹಿಪ್ಪೋಗಳು, ಸಸ್ಯಾಹಾರಿಗಳಾಗಿದ್ದರೂ, ಬೆದರಿಕೆಗೆ ಒಳಗಾದಾಗ ಅತ್ಯಂತ ಆಕ್ರಮಣಕಾರಿ. ಅವುಗಳು ದೋಣಿಗಳ ಮೇಲೆ ದಾಳಿ ಮಾಡುವುದನ್ನು ಸಹ ಗಮನಿಸಲಾಗಿದೆ. ಕೆಲವು ತಿಂಗಳ ಹಿಂದೆ, ಬೋಟ್ಸ್ವಾನಾದ ಸೆಲಿಂಡಾ ರಿಸರ್ವ್ ಸ್ಪಿಲ್ವೇನಲ್ಲಿ ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ಮೂರು ಸಿಂಹಗಳನ್ನು ಕೋಪಗೊಂಡ ಹಿಪ್ಪೋ ಅಡ್ಡಗಟ್ಟಿತ್ತು. ದಿ ಗ್ರೇಟ್ ಪ್ಲೇನ್ಸ್ ಕನ್ಸರ್ವೇಶನ್ ಘಟನೆಯ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದೆ ಮತ್ತು ಇದನ್ನು “ಮರೆಯಲಾಗದ ಕ್ಷಣ” ಎಂದು ಕರೆದಿದೆ.

ಹಿಪ್ಪೋ ದಾಳಿಯಿಂದ ಆಫ್ರಿಕಾದಲ್ಲಿ ವರ್ಷಕ್ಕೆ ಸುಮಾರು 500 ಜನರ ಸಾವುಗಳು ಸಂಭವಿಸುತ್ತವೆ. ಈ ಸಂಖ್ಯೆಯು ಆಶ್ಚರ್ಯಕರವಾಗಿ ಹೆಚ್ಚಾಗಿದೆ, ಹಿಪ್ಪೋ ಭೂಮಿಯ ಮೇಲಿನ ಎಲ್ಲಾ ಇತರ ಪ್ರಾಣಿಗಳನ್ನು ಮೀರಿಸುತ್ತದೆ. ಹಿಪ್ಪೋಗಳು ಪ್ರಪಂಚದ ಅತ್ಯಂತ ಮಾರಣಾಂತಿಕ ಭೂ ಪ್ರಾಣಿಗಳಲ್ಲಿ ಒಂದಾಗಿದೆ.

ಯಕ್ಷದೇಗುಲದ ಸೈಂಧವ ವಧೆ ಯಕ್ಷಗಾನ ಪ್ರದರ್ಶನ

0

ದಿನಾಂಕ: 18-12-2022ರಂದು ಮಧ್ಯಾಹ್ನ 3.00ಕ್ಕೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೌಕೂರು ಕುಂದಾಪುರ ಇಲ್ಲಿ ಬಣ್ಣದ ಸಕ್ಕಟ್ಟು ಮತ್ತು ರಾಜಋಷಿ ರವೀಂದ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯಕ್ಷದೇಗುಲ ಬೆಂಗಳೂರು ತಂಡದವರಿದ “ಸೈಂಧವ ವಧೆ” ಯಕ್ಷಗಾನ ಪ್ರದರ್ಶನ ನಡೆಯಲಿದೆ.


ಪ್ರಸಂಗದ ನೆಡೆ, ಹಿಮ್ಮೇಳ, ವೇಷಭೂಷಣ, ಮುಖವರ್ಣಿಕೆ, ಕಟ್ಟುಮೀಸೆ ಹೀಗೆ ಆದಷ್ಟು ಪರಂಪರೆಯ ಹತ್ತಿರ ಕೊಂಡೊಯ್ಯುವ ನಿಟ್ಟಿನಲ್ಲಿ ನಿರ್ದೇಶನ ಕೆ. ಮೋಹನ್, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಕಲಾವಿದರಾಗಿ-ವಿದ್ವಾಂಸರಾದ ಸುಜಯೀಂದ್ರ ಹಂದೆ ಎಚ್, ಚಂದ್ರಕಾಂತ್ ಮೂಡುಬೆಳ್ಳೆ ಸುಧೀರ್ ಭಟ್,

ರಾಘವೇಂದ್ರ ಹೆಗಡೆ, ಮಂಜುನಾಥ ನಾವಡ, ಸುದೀಪ್ ಉರಾಳ, ತಮ್ಮಣ್ಣ ಗಾಂವ್ಕರ್, ಆದಿತ್ಯ ಹೆಗಡೆ, ಸ್ಪೂರ್ತಿ ಭಟ್, ಅಶೋಕ ಆಚಾರ್ಯ ಸಾಬ್ರಕಟ್ಟೆ, ರಮೇಶ್ ಶೃಂಗೇರಿ, ರಾಘವೇಂದ್ರ ತುಂಗ, ಸುಹಾಸ್ ಕರಬ, ನರಸಿಂಹ ತುಂಗ, ಸ್ಕಂದ ಉರಾಳ, ರಾಜು ಪೂಜಾರಿ ಇನ್ನಿತರರು ಭಾಗವಹಿಸಲಿದ್ದಾರೆಂದು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಕೋಟ ಸುದರ್ಶನ ಉರಾಳ
ಮೊ. 9448547237

ವಾಲಿಬಾಲ್ ತಂಡಕ್ಕೆ ಆಯ್ಕೆ – ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿ ಚಿಂತನ್

0

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ತೃತೀಯ ವರ್ಷದ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿ ಚಿಂತನ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಅವರು ಡಿಸೆಂಬರ್ 23 ರಿಂದ 27ರ ವರೆಗೆ ತಮಿಳ್ನಾಡಿನ ಕುಟ್ಟಂಕುಳತ್ತೂರಿನಲ್ಲಿರುವ ಎಸ್.ಆರ್.ಎಂ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ.

ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ತಿಳಿಸಿದ್ದಾರೆ.

ಅಂಬಿಕಾದ ಬಹುಮುಖ ಪ್ರತಿಭೆ ಶ್ರಾವಣಿ ಕಾಟುಕುಕ್ಕೆಗೆ ʼಯಕ್ಷ ಪ್ರತಿಭಾʼ ಯಕ್ಷಗಾನ ಪುರಸ್ಕಾರ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರಾವಣಿ ಕಾಟುಕುಕ್ಕೆ ಅವರು ಕಣಿಪುರ “ಯಕ್ಷ ಪ್ರತಿಭಾ ಪುರಸ್ಕಾರ”ಕ್ಕೆ ಆಯ್ಕೆಯಾಗಿದ್ದಾರೆ. ಡಿಸೆಂಬರ್ 18 ರಂದು ಕುಂಬಳೆಯಲ್ಲಿ ಜರಗಲಿರುವ “ಕಣಿಪುರ ಯಕ್ಷೋತ್ಸವ” ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ.


ಕಾಟುಕುಕ್ಕೆಯ ಶಿವಪ್ರಸಾದ್ ರಾವ್, ವೀಣಾ ದಂಪತಿಗಳ ಪುತ್ರಿಯಾದ ಶ್ರಾವಣಿ ಕಳೆದ ಏಳು ವರ್ಷಗಳಿಂದ ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ (ರಿ.) ಇದರ ನಿರ್ದೇಶಕ ನಾಟ್ಯಾಚಾರ್ಯ ಸಬ್ಬಣಕೋಡಿ ರಾಮ ಭಟ್ ಇವರಲ್ಲಿ ನಾಟ್ಯಾಭ್ಯಾಸ ಮಾಡುತ್ತಿದ್ದು ನೂರಾರು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

ಮೀನಾಕ್ಷಿ, ಕೃಷ್ಣ, ವಿಷ್ಣು, ಸುಧನ್ವ, ದೇವಿ ಮಹಾತ್ಮೆಯ ದೇವಿ, ಚಿತ್ರಾಂಗದೆ ಹೀಗೆ ಹತ್ತು ಹಲವು ವೇಷಗಳು ಇವರ ಪಾಲಿಗೆ ಒದಗಿ ಬಂದಿವೆ. ಇದರೊಂದಿಗೆ ತನ್ನ ಆರನೇ ವಯಸ್ಸಿನಿಂದ ಪೆರ್ಲದ ಶಿವಾಂಜಲಿ ನೃತ್ಯ ಕಲಾ ಕೇಂದ್ರ (ರಿ.) ಇದರ ನಿರ್ದೇಶಕಿ ವಿದುಷಿ ಕಾವ್ಯ ಭಟ್ ಅವರಿಂದ ಭರತನಾಟ್ಯ ತರಬೇತಿಯನ್ನು ಪಡೆದಿದ್ದಾರೆ. ತನ್ನ ಹತ್ತನೇ ವಯಸ್ಸಿನಲ್ಲಿ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಶೇಕಡ 90 ಅಂಕಗಳೊಂದಿಗೆ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಹತ್ತಾರು ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.


ಅಂತೆಯೇ ವಿದುಷಿ ಅನುರಾಧಾ ಭಟ್ ಅಡ್ಕಸ್ಥಳ ಅವರ ಬಳಿ ಕಳೆದ ಆರು ವರ್ಷದಿಂದ ಸಂಗೀತಾಭ್ಯಾಸ ಮಾಡುತ್ತಾ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಕಳೆದೊಂದು ವರ್ಷದಿಂದ ತೆಂಕಬೈಲು ಮುರಳಿ ಕೃಷ್ಣ ಶಾಸ್ತ್ರಿಗಳಿಂದ ಭಾಗವತಿಕೆಯನ್ನು ಕೂಡ ಅಭ್ಯಾಸ ಮಾಡುತ್ತಾ ರಂಗಪ್ರವೇಶ ಮಾಡಿದ್ದಾರೆ.

ಇತ್ತೀಚೆಗೆ ಕಾಕುಕುಕ್ಕೆ ಶ್ರೀ ಸುಬ್ರಾಯ ದೇವಳದ ಷಷ್ಠಿ ಜಾತ್ರೆಯ ಸಂದರ್ಭದಲ್ಲಿ ಭಾಗವತರಾದ ಸತ್ಯನಾರಾಯಣ ಪುಣಿಚಿತ್ತಾಯರ ಸಾಹಿತ್ಯದಲ್ಲಿ ದೇವರ ಒಂದು ಹಾಡನ್ನು ಹಾಡಿದ್ದು ಅದು ಜಾತ್ರೆಯ ಸಂದರ್ಭದಲ್ಲಿ ಬಿಡುಗಡೆಗೊಂಡಿದೆ.