Saturday, August 1, 2026
Home Blog Page 110

ಅಂಬಿಕಾ ಪದವಿಪೂರ್ವ ವಿದ್ಯಾಲಯದಿಂದ ಶಿಕ್ಷಣ ಮಾಹಿತಿ ಕಾರ್ಯಾಗಾರ – “ಭವಿಷ್ಯದ ಉತ್ತಮ ಆಯ್ಕೆಗಾಗಿ ಸಮರ್ಪಕ ಮಾರ್ಗದರ್ಶನ ಅಗತ್ಯ” : ರಾಜಶ್ರೀ ನಟ್ಟೋಜ

0

ಪುತ್ತೂರು: ಪಿ.ಯು.ಸಿ ನಂತರ ವಿದ್ಯಾರ್ಥಿಯೊಬ್ಬನಿಗೆ ದೊರಕಬಹುದಾದ ವಿದ್ಯಾಭ್ಯಾಸ ಹಾಗೂ ಉದ್ಯೋಗದ ಬಗ್ಗೆ ಸರಿಯಾದ ಹಾಗೂ ಸಮರ್ಪಕ ಮಾಹಿತಿಯನ್ನು ಹೆತ್ತವರು ಮತ್ತು ವಿದ್ಯಾರ್ಥಿಗಳು ಪಡೆದುಕೊಂಡಾಗ ಭವಿಷ್ಯದಲ್ಲಿ ಅತ್ಯುತ್ತಮ ಆಯ್ಕೆಯನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯ. ಆ ನೆಲೆಯಲ್ಲಿ ಮಾಹಿತಿ ಕಾರ್ಯಾಗಾರಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉದ್ಯೋಗ ಹಾಗೂ ಶಿಕ್ಷಣ ಮಾಹಿತಿ – ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ ಹಾಗೂ ಅಧ್ಯಕ್ಷತೆ ನಿರ್ವಹಿಸಿ ಶನಿವಾರ ಮಾತನಾಡಿದರು.


ಪ್ರತಿಭೆ, ಬುದ್ಧಿವಂತಿಕೆ, ಅಭಿರುಚಿಯನ್ನರಸಿ ಶಿಕ್ಷಣ ಹಾಗೂ ವೃತ್ತಿಯನ್ನು ಆಯ್ದುಕೊಂಡಾಗ ಗುರಿಮುಟ್ಟಿ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ವ್ಯಕ್ತಿಯಿಂದ ವ್ಯಕ್ತಿಗೆ ಸಾಧ್ಯತೆಗಳು ಭಿನ್ನವಾಗಿರುತ್ತದೆ. ಪಿ.ಯು.ಸಿ ಆದ ಮೇಲೆ ಮುಂದೇನು? ಎನ್ನುವ ಪ್ರಶ್ನೆ ವಿದ್ಯಾರ್ಥಿಗಳನ್ನು, ಹೆತ್ತವರನ್ನು ಕಾಡುವಂತಹದ್ದು. ಭಾರತದಲ್ಲಿ ಧಾರಾಳ ಉದ್ಯೋಗಾವಕಾಶಗಳಿವೆ. ಹಾಗಾಗಿ ಉದ್ಯೋಗದ ಬಗ್ಗೆ ಹೆದರುವ ಅವಶ್ಯಕತೆಯಿಲ್ಲ. ಆದರೆ ನಮ್ಮ ಪ್ರತಿಭೆ ಹಾಗೂ ಗುಣಮಟ್ಟಕ್ಕನುಗುಣವಾದ ಉದ್ಯೋಗ ಅಥವ ಶಿಕ್ಷಣ ಯಾವುದೆಂಬುದನ್ನು ಗುರುತು ಮಾಡಿಕೊಳ್ಳಬೇಕಿದೆ ಎಂದರು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕೌನ್ಸಿಲರ್ ಕುಶಲತಾ ಮಾತನಾಡಿ ಮುಂದುವರಿಯುತ್ತಿರುವ ಭಾರತದಲ್ಲಿ ಪ್ರತಿಭಾವಂತ ಜನಸಂಪನ್ಮೂಲವಿದೆ. ಹಾಗಾಗಿ ಇಲ್ಲಿನ ಪ್ರತಿಭಾನ್ವಿತರಿಗೆ ದೇಶ, ವಿದೇಶಗಳಲ್ಲಿ ಅಪಾರ ಅವಕಾಶಗಳು ಪ್ರಾಪ್ತವಾಗುತ್ತಿವೆ. ಪಿಯು ಹಂತದಲ್ಲಿ ವಾಣಿಜ್ಯ ಶಾಸ್ತç ಅಭ್ಯಸಿಸಿದವರಿಗೆ ಸಿ.ಎ, ಸಿ.ಎಸ್, ಬಿ.ಕಾಂ, ಬಿ.ಬಿ.ಎಮ್, ಎಂ.ಬಿ.ಎ, ಎಂ.ಕಾಂ, ಬಿ.ಎಚ್.ಎಂ ಮುಂತಾದ ಅಧ್ಯಯನವನ್ನು ಕೈಗೊಳ್ಳಬಹುದು ಎಂದು ಹೇಳಿದರು.


ಮತ್ತೋರ್ವ ಸಂಪನ್ಮೂಲ ವ್ಯಕ್ತಿ ನಿಟ್ಟೆ ವಿಶ್ವವಿದ್ಯಾಲಯದ ಕೌನ್ಸಿಲರ್ ಮನೋರಂಜನಿ ಮಾತನಾಡಿ ವಿಜ್ಞಾನ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಗಮನ ಹರಿಸಬೇಕು. ಎಮ್.ಬಿ.ಬಿ.ಎಸ್, ಬಿ.ಎ.ಎಂ.ಎಸ್, ಬಿ.ಡಿ.ಎಸ್, ಬಿ.ಎಚ್.ಎಂ.ಎಸ್, ಬಿ.ಇ, ಬಿ.ಟೆಕ್, ಬಿ.ಫಾರ್ಮ್, ನರ್ಸಿಂಗ್, ಔಷಧೀಯ ವಿಜ್ಞಾನ ಹೀಗೆ ನಾನಾ ವಿಧದ ವಿಜ್ಞಾನ ಸಂಬ0ಧಿ ಅಧ್ಯಯನ ಆಯ್ಕೆಗಳು ವಿದ್ಯಾರ್ಥಿಗಳ ಮುಂದಿವೆ ಎಂದು ನುಡಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ, ನೆಲ್ಲಿಕಟ್ಟೆಯ ಅಂಬಿಕಾ ಪ.ಪೂ. ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾದ್ಯಾಯ, ಬಪ್ಪಳಿಗೆಯ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು, ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.


ವಿದ್ಯಾರ್ಥಿನಿ ಸುಧಾ ಕೋಟೆ ಪ್ರಾರ್ಥಿಸಿ, ಉಪನ್ಯಾಸಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.

ಅರ್ಜೆಂಟೀನಾ ಗೆದ್ದ ನಂತರ ಟಾಪ್‌ಲೆಸ್ ಆದ ಅಭಿಮಾನೀ ಮಹಿಳೆ – ಕತಾರ್ ಕಾನೂನಿನ ಪ್ರಕಾರ ಜೈಲುಶಿಕ್ಷೆ ಅನುಭವಿಸಬಹುದೆ ?

0

ದೋಹಾ: ಕತಾರ್‌ನ ಲುಸೈಲ್ ಸ್ಟೇಡಿಯಂನಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಅದ್ಭುತ ಜಯ ಸಾಧಿಸಿದ ನಂತರ ಟಾಪ್‌ಲೆಸ್ ಅರ್ಜೆಂಟೀನಾ ಅಭಿಮಾನಿಯೊಬ್ಬರು ಶೀಘ್ರದಲ್ಲೇ ತನ್ನ ಟಾಪ್ ಅನ್ನು ತೊರೆದ ನಂತರ ಆಕೆಗೆ ಕತಾರ್ ಪೊಲೀಸರು ದೇಶವನ್ನು ತೊರೆಯಲು ಅನುಮತಿ ನೀಡುತ್ತಾರೆಯೇ ಎಂಬ ಆತಂಕವಿದೆ.

ಸಂಪ್ರದಾಯವಾದಿ ರಾಷ್ಟ್ರವಾದ ಕತಾರ್‌ನಲ್ಲಿ, ನಗ್ನತೆಯನ್ನು ಪ್ರದರ್ಶಿಸುವುದು ಶಿಕ್ಷಾರ್ಹವಾಗಿದೆ. ಗೊಂಜಾಲೊ ಮೊಂಟಿಯೆಲ್ ಅವರ ಪೆನಾಲ್ಟಿ ಕಿಕ್ ನಂತರ, ಕ್ಯಾಮೆರಾಗಳು ಅರ್ಜೆಂಟೀನಾ ಅಭಿಮಾನಿಗಳನ್ನು ಹುರಿದುಂಬಿಸುವ ಕಡೆಗೆ ತಿರುಗಿದವು ಮತ್ತು ಅವರಲ್ಲಿ ಹೊಂಬಣ್ಣದ ಅಭಿಮಾನಿಯೊಬ್ಬರು ಕ್ಯಾಮರಾಗಳನ್ನು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಹೆಚ್ಚು ನೀಡಿದರು ಮತ್ತು ಕೂಡಲೇ ತನ್ನ ಎದೆಯ ವಸ್ತ್ರವನ್ನು ಕಳಚಿದರು.

ಈ ಬಾರಿಯ ವಿಶ್ವಕಪ್ ಆರಂಭಕ್ಕೂ ಮುನ್ನ ಪಾಶ್ಚಿಮಾತ್ಯ ಮಾಧ್ಯಮಗಳು ಕತಾರ್‌ನ ನಿಯಮಗಳು ಫುಟ್‌ಬಾಲ್ ಅಭಿಮಾನಿಗಳ ಆನಂದದ ಮೇಲೆ ಪರಿಣಾಮ ಬೀರಲಿದೆ ಎಂದು ವರದಿ ಮಾಡಿತ್ತು. ಆದಾಗ್ಯೂ, ಕತಾರ್ ಸರ್ಕಾರವು ಅನೇಕ ವಿಷಯಗಳಲ್ಲಿ ರಿಯಾಯಿತಿಗಳನ್ನು ನೀಡಿತು ಮತ್ತು ಯಾವುದೇ ತಪ್ಪುಗಳನ್ನು ಮಾಡದೆ ಸುಂದರವಾದ ರೀತಿಯಲ್ಲಿ ಸ್ಪರ್ಧೆಗಳನ್ನು ಆಯೋಜಿಸಿತು.

ಆದಾಗ್ಯೂ, ಅಭಿಮಾನಿಗಳ ಉಲ್ಲಂಘನೆಗೆ ಕತಾರ್ ಕಾನೂನುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಈಗ ಪ್ರಶ್ನೆಯಾಗಿದೆ. ಕತಾರ್ ಸಾರ್ವಜನಿಕವಾಗಿ ಹೆಚ್ಚು ಚರ್ಮವನ್ನು ಬಹಿರಂಗಪಡಿಸುವ ಬಟ್ಟೆಗಳನ್ನು ನಿಷೇಧಿಸುವ ದೇಶವಾಗಿದೆ. ಕಾಲುಗಳನ್ನು ಮತ್ತು ಎದೆಯ ಸೀಳನ್ನು ಪ್ರದರ್ಶಿಸುವುದು ಅಲ್ಲಿ ಅಪರಾಧವಾಗಿದೆ.

ಅರ್ಜೆಂಟೀನಾ 1986 ರ ನಂತರ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು ಮತ್ತು ಪಂದ್ಯವು ತುಂಬಾ ಭಾವನಾತ್ಮಕವಾಗಿತ್ತು. ಭಾನುವಾರದ ಪಂದ್ಯ ಬಿಗುವಿನ ಪರ್ವದಲ್ಲಿತ್ತು

ದೇವಸ್ಥಾನದ ಆವರಣದಲ್ಲಿರುವ ಶಿವಲಿಂಗದ ಮುಂದೆ ಅಶ್ಲೀಲ ಕೃತ್ಯ – ದೇವರ ಮುಂದೆ ಖಾಸಗಿ ಅಂಗವನ್ನು ಪ್ರದರ್ಶಿಸಿದ ಹಾಗೂ ಮಹಿಳೆಗೆ ಕಿರುಕುಳ ನೀಡಿದ ವಾಸಿಂ ಎಂಬ ವ್ಯಕ್ತಿಯ ಬಂಧನ

0

ಇಂದೋರ್ ದೇವಸ್ಥಾನದಲ್ಲಿ ಶಿವಲಿಂಗದ ಮುಂದೆ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಇಂದೋರ್‌ನ ವಿಶ್ವೇಶ್ವರ ಮಹಾದೇವ ದೇವಸ್ಥಾನದ ಆವರಣದಲ್ಲಿರುವ ಶಿವಲಿಂಗದ ಮುಂದೆ ವ್ಯಕ್ತಿಯೊಬ್ಬ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದು, ನಂತರ ಆತನನ್ನು ಬಂಧಿಸಲಾಗಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಧ್ಯಪ್ರದೇಶದ ಇಂದೋರ್‌ನ ದೇವಾಲಯದ ಆವರಣದಲ್ಲಿರುವ ಶಿವಲಿಂಗದ ಮುಂದೆ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವಾಸಿಂ ಎಂದು ಗುರುತಿಸಲಾದ ವ್ಯಕ್ತಿ ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ದೇವಸ್ಥಾನದ ಆವರಣದಲ್ಲಿರುವ ಶಿವಲಿಂಗದ ಮುಂದೆ ವಾಸಿಂ ತನ್ನ ಖಾಸಗಿ ಅಂಗವನ್ನು ಹೊರತೆಗೆದು ಪ್ರದರ್ಶಿಸಿದ್ದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿತ್ತು. ಅದೂ ಅಲ್ಲದೇ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ವಾಸಿಂ ಅಲಿಯಾಸ್ ಘಂಟಿ (30) ಶುಕ್ರವಾರ ವಿಶ್ವೇಶ್ವರ ಮಹಾದೇವ ದೇವಸ್ಥಾನದ ಗರ್ಭಗುಡಿಯಲ್ಲಿ ಶಿವಲಿಂಗದ ಮುಂದೆ ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದು, ಆವರಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ತಹಜೀಬ್ ಖಾಜಿ ತಿಳಿಸಿದ್ದಾರೆ. ನಗರದಲ್ಲಿ ಟೈರ್ ರಿಪೇರಿ ಅಂಗಡಿ ನಡೆಸುತ್ತಿರುವ ಆರೋಪಿಯನ್ನು ಎನ್ ಎಸ್ ಎ ಅಡಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದರು.

ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಈ ವ್ಯಕ್ತಿಯ ನಡವಳಿಕೆಯನ್ನು ಅತ್ಯಂತ ಖಂಡನೀಯ ಎಂದು ಬಣ್ಣಿಸಿದ್ದಾರೆ. ಹೇಳಿಕೆಯಲ್ಲಿ ಗೃಹ ಸಚಿವ ಮಿಶ್ರಾ, ಆರೋಪಿಗಳ ಕೃತ್ಯಗಳು “ಹೇಯ” ಮತ್ತು ಅತ್ಯಂತ ಖಂಡನೀಯ ಎಂದು ಬಣ್ಣಿಸಿದ್ದಾರೆ. ಏತನ್ಮಧ್ಯೆ, ಹಿಂದೂ ಸಂಘಟನೆಗಳು ಮತ್ತು ಮೇಯರ್-ಇನ್ ಕೌನ್ಸಿಲ್ ಸದಸ್ಯರು ದೇವಾಲಯದ ಹೊರಗೆ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಮತ್ತು ದೇವಾಲಯವನ್ನು ಶುದ್ಧೀಕರಿಸಿದರು.

ಸಿಸಿಟಿವಿ ದೃಶ್ಯಾವಳಿಯಿಂದ ವ್ಯಕ್ತಿ ಆ ಪ್ರದೇಶ ಹಾಗೂ ದೇವಸ್ಥಾನದ ಸುತ್ತಮುತ್ತ ಬಹಳ ಹೊತ್ತು ತಿರುಗಾಡುತ್ತಿರುವುದು ಬೆಳಕಿಗೆ ಬಂದಿದೆ. ಆಕ್ರೋಶಗೊಂಡ ಪ್ರಾದೇಶಿಕ ಕೌನ್ಸಿಲರ್ ಮತ್ತು ಎಂಐಸಿ ಸದಸ್ಯ ಮನೀಶ್ ಮಾಮಾ ಘಟನೆಯ ವಿರುದ್ಧ ಪ್ರತಿಭಟಿಸಿದರು ಮತ್ತು ರೆಸಿಡೆಂಟ್ ಅಸೋಸಿಯೇಷನ್ ​​ದೇವಾಲಯವನ್ನು ಶುದ್ಧೀಕರಿಸಿತು.

ಪುರುಷ ಮಹಿಳೆ ಮತ್ತು ಮಕ್ಕಳಿಗೆ ಕಿರುಕುಳ ನೀಡಿದ್ದಾನೆ ಎಂಬ ಮಾಹಿತಿ ಪಡೆದ ಕೂಡಲೇ ಆತನನ್ನು ಬಂಧಿಸಲಾಯಿತು.

ರಾವಣ ವಧೆ ಮತ್ತು ಜಾಂಬವತಿ ಕಲ್ಯಾಣ – ಇಂದು ಮತ್ತು ನಾಳೆ ಯಕ್ಷಗಾನ ಪ್ರದರ್ಶನ

ಇಂದು ದಿನಾಂಕ 20-12-2022 ಮಂಗಳವಾರ, ಸಮಯ ರಾತ್ರಿ 8.30ಕ್ಕೆ ಯಕ್ಷ ಕಲಾ ಅಕಾಡೆಮಿ(ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ರಾವಣ ವಧೆ ನಡೆಯಲಿದೆ. ಸ್ಥಳ -ವಿದ್ಯಾಪೀಠ, ಬೆಂಗಳೂರು.

 

ದಿನಾಂಕ 21-12-2022 ನಾಳೆ ಬುಧವಾರ ಸಮಯ ಸಂಜೆ 6ಕ್ಕೆ ಜಯರಾಮ ಸೇವಾ ಮಂಡಳಿ, ಜಯನಗರ, ಬೆಂಗಳೂರು ಇಲ್ಲಿ ಯಕ್ಷ ಕಲಾ ಅಕಾಡೆಮಿ(ರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಯಕ್ಷಗಾನ ಪ್ರಸಂಗ ಜಾಂಬವತಿ ಕಲ್ಯಾಣ ನಡೆಯಲಿದೆ.

ಕಾನೂನು ವಿದ್ಯಾರ್ಥಿನಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ – ಶೀಲ ಶಂಕಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಭಾವೀ ಪತಿಗಾಗಿ ಹುಡುಕಾಟ

0

ಬೆಂಗಳೂರಿನ ಕಾನೂನು ವಿದ್ಯಾರ್ಥಿನಿ 7 ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಆಕೆಯ ಬ್ಯಾಗ್‌ನಲ್ಲಿ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ.

ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿನಿ ವಾಣಿ (25) ಸೋಮವಾರ ದಕ್ಷಿಣ ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ಬೆಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಏಳು ಅಂತಸ್ತಿನ ಕಟ್ಟಡದ ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ವಾಣಿ ಸಿ, ಬನಶಂಕರಿ ನಿವಾಸಿಯಾಗಿದ್ದು, ವಿವಿ ಪುರಂ ಕಾನೂನು ಕಾಲೇಜಿನಲ್ಲಿ 1ನೇ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಳು.

ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಹೆಜ್ಜೆ ಇಡುವ ಮುನ್ನ ಆಕೆ ಡೆತ್ ನೋಟ್ ಬರೆದಿದ್ದಾಳೆ. ಆಕೆಯ ಪೋಷಕರು ನೀಡಿದ ದೂರಿನ ಮೇರೆಗೆ ವಿಶ್ವೇಶ್ವರಪುರಂ ಪೊಲೀಸರು ಆಕೆಯ ಭಾವಿ ಪತಿ ಚಂದ್ರಶೇಖರ್ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಆಕೆಯ ಬ್ಯಾಗ್‌ನಲ್ಲಿ ಎರಡು ಪುಟಗಳ ಡೆತ್ ನೋಟ್ ಪತ್ತೆಯಾಗಿದೆ. ಡೆತ್ ನೋಟ್‌ನಲ್ಲಿ ಚಂದ್ರಶೇಖರ್ ಜೊತೆಗಿನ ನಿಶ್ಚಿತಾರ್ಥದ ನಂತರ ತಾನು ಅನುಭವಿಸಿದ ನೋವನ್ನು ಉಲ್ಲೇಖಿಸಿದ್ದಾರೆ. ಮುಂದಿನ ಕ್ರಮಕ್ಕಾಗಿ ಪೊಲೀಸರು ಚಂದ್ರಶೇಖರನನ್ನು ಹುಡುಕುತ್ತಿದ್ದಾರೆ.

ವಿದ್ಯಾರ್ಥಿನಿ ವಾಣಿ ಡೆಟ್ ನೋಟಿನಲ್ಲಿ ಏನು ಬರೆದಿದ್ದಾಳೆ?

ವಿದ್ಯಾರ್ಥಿನಿ ವಾಣಿ ಡೆತ್ ನೋಟಿನಲ್ಲಿ “ಚಂದ್ರಶೇಖರ್ ಎಂಬವನ ಜೊತೆಗೆ ನನಗೆ ನಿಶ್ಚಿತಾರ್ಥವಾಗಿತ್ತು. ಆತ ಪ್ರತಿನಿತ್ಯ ಹೊರಗೆ ಸುತ್ತಾಡಲು ಕರೆಯುತ್ತಿದ್ದ. ಆದರೆ ಮದುವೆಯ ಮೊದಲು ಅಂತದ್ದೆಲ್ಲಾ ನನಗೆ ಇಷ್ಟವಿರಲಿಲ್ಲ. ಬರುವುದಿಲ್ಲ ಎಂದು ಹೇಳಿದ ಕಾರಣ ಒಂದು ದಿನ ಆತ ಮನೆ ಬಳಿಗೆ ಬಂದಿದ್ದ. ನನ್ನ ಜೊತೆಗೆ ಹೊರಗೆ ತಿರುಗಾಡಲು ಬಾರದ ಕಾರಣ  ನಿನಗೆ ಬೇರೆಯವರ ಜೊತೆ ಅಕ್ರಮ ಸಂಬಂಧ ಇರಬಹುದು.   ನೀನು  ನನ್ನ ಜೊತೆಗೆ ಸುತ್ತಾಡಲು ಬರ್ತಿಲ್ಲ ಎಂದು ಬೈಯಲು ತೊಡಗಿದ್ದ. ಇದರಿಂದ ನೆರೆಹೊರೆಯವರ ಎದುರು ಅವಮಾನಕ್ಕೆ ಒಳಗಾಗಬೇಕಾಯಿತು.  ಈ ಪ್ರದೇಶದಲ್ಲಿ ತಲೆ ಒತ್ತಿ ನಡೆಯಲು ಮುಜುಗುರವಾಗುತ್ತಿದೆ. ಎಲ್ಲರೂ ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಬರೆದು ವಾಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡು ಚಂದ್ರಶೇಖರ್ ಗಾಗಿ ಹುಡುಕುತ್ತಿದ್ದಾರೆ.

ಬಡಗುತಿಟ್ಟಿನ ಮದ್ದಳೆವಾದನದಲ್ಲಿ ಕರ್ಕಿ ಮನೆತನ – ಶ್ರೀ ಪ್ರಭಾಕರ ಭಂಡಾರಿ, ಶ್ರೀ ಮಂಜುನಾಥ ಭಂಡಾರಿ, ಶ್ರೀ ಪರಮೇಶ್ವರ ಭಂಡಾರಿ ಕರ್ಕಿ 

ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಎಂಬ ಊರು ಯಕ್ಷಗಾನ ಕಳೆಯ ಆಡೊಂಬಲ ಎಂದರೂ ತಪ್ಪಾಗಲಾರದು. . ಬಡಗುತಿಟ್ಟಿನ ಹಿಮ್ಮೇಳ, ಮುಮ್ಮೇಳದ ಅನೇಕ ಕಲಾವಿದರನ್ನು ಯಕ್ಷಗಾನ ಕಲಾ ಮಾತೆಯ ಮಡಿಲಿಗಿಕ್ಕಿದ ಮಣ್ಣು ಇದು. ಇಲ್ಲಿ ಹುಟ್ಟಿ ಬೆಳೆದ ಕಲಾವಿದರೆಲ್ಲಾ ತಾವು ತೊಡಗಿಸಿಕೊಂಡ ವಿಭಾಗದಲ್ಲಿ ಖ್ಯಾತರಾಗಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಕರ್ಕಿ ಹಾಸ್ಯಗಾರ ಮನೆತನದಲ್ಲಿ ಜನಿಸಿದ ಅನೇಕರು ಬಡಗುತಿಟ್ಟಿನ ಮುಮ್ಮೇಳದ ಕಲಾವಿದರಾಗಿ ಖ್ಯಾತರಾದುದು ನಮಗೆಲ್ಲಾ ತಿಳಿದ ವಿಚಾರ. ಬಡಗುತಿಟ್ಟಿನ ಯಕ್ಷಗಾನ ಹಿಮ್ಮೇಳಕ್ಕೂ ಕರ್ಕಿ ಮಣ್ಣಿನ ಕೊಡುಗೆಯು ಅಪಾರ. ಕರ್ಕಿ ಭಂಡಾರಿ ಮನೆತನದಲ್ಲಿ ಜನಿಸಿದ ಅನೇಕರು ಅತ್ಯುತ್ತಮ ಮದ್ದಳೆವಾದಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಾ ಖ್ಯಾತರಾಗಿದ್ದಾರೆ.

ಇವರಲ್ಲಿ ಶ್ರೀ ಪ್ರಭಾಕರ ಭಂಡಾರಿ ಕರ್ಕಿ, ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಪ್ರಮುಖರು. ಬಡಗುತಿಟ್ಟಿನ  ಹಿರಿಯ,ಅನುಭವೀ, ಖ್ಯಾತ ಮದ್ದಳೆಗಾರ ಶ್ರೀ ಪ್ರಭಾಕರ ಭಂಡಾರಿ ಕರ್ಕಿ ಅವರಿಗೀಗ 82 ವರ್ಷ ವಯಸ್ಸು. ಕಳೆದ 20 ವರ್ಷಗಳಿಂದ ಯಕ್ಷಗಾನ ಕಲಾ ವ್ಯವಸಾಯಕ್ಕೆ ವಿದಾಯ ಹೇಳಿ ಮಕ್ಕಳಾದ ಶ್ರೀ ಮಂಜುನಾಥ ಭಂಡಾರಿ ಕರ್ಕಿ ಮತ್ತು ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಇವರೊಂದಿಗೆ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ ಪ್ರಭಾಕರ ಭಂಡಾರಿ ಕರ್ಕಿ

ಬಡಗುತಿಟ್ಟಿನ ಹಿರಿಯ ಅನುಭವೀ ಮದ್ದಳೆಗಾರರಾದ ಶ್ರೀ ಪ್ರಭಾಕರ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಕರ್ಕಿ ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಇವರ ಮನೆ. 1940ರಲ್ಲಿ ಕರ್ಕಿ ಶ್ರೀ ಪಾಂಡುರಂಗ ಭಂಡಾರಿ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ಮಗನಾಗಿ ಈ ಲೋಕದ ಬೆಳಕನ್ನು ಕಂಡವರು. ಶ್ರೀ ಪಾಂಡುರಂಗ ಭಂಡಾರಿಗಳು ಆ ಕಾಲದ ಅತ್ಯುತ್ತಮ ಮದ್ದಳೆಗಾರರಾಗಿದ್ದರು. ಶ್ರೀಯುತರು ಕರ್ಕಿ ಪರಮಯ್ಯ ಹಾಸ್ಯಗಾರರ ಕರ್ಕಿ ಮೇಳದಲ್ಲಿ ವ್ಯವಸಾಯ ಮಾಡಿದವರು.

ಪ್ರಭಾಕರ ಭಂಡಾರಿಗಳ ಅಣ್ಣಂದಿರಾದ ಶ್ರೀ ಕೇಶವ ಭಂಡಾರಿ ಮತ್ತು  ಶ್ರೀ ಸತ್ಯನಾರಾಯಣ ಭಂಡಾರಿಗಳು ಮದ್ದಳೆಗಾರರಾಗಿ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಹೀಗೆ ಕಲಾಸಕ್ತಿಯು ಪ್ರಭಾಕರ ಭಂಡಾರಿಗಳಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಈ ಮನೆಯ ಸದಸ್ಯರೆಲ್ಲರೂ  ನುಡಿಸುವಿಕೆಯಲ್ಲಿ ಪ್ರವೀಣರಾಗಿದ್ದರು. (ಪಂಚವಾದ್ಯ) ದೇವಸ್ಥಾನದ ಕಾರ್ಯಕ್ರನಗಳಲ್ಲಿ, ಮದುವೆ ಇನ್ನಿತರ ಶುಭಸಮಾರಂಭಗಳಲ್ಲಿ ಇವರು ವಾದ್ಯಗಳನ್ನು ನುಡಿಸುತ್ತಿದ್ದರು. ಈ ಕಲೆಯು ಇವರಿಗೆ ಪರಂಪರೆಯಿಂದ ಬಂದುದು.

ಇವರು ಕರಕುಶಲಗಾರಿಕೆಯನ್ನೂ ಬಲ್ಲವರು. ಮಣ್ಣಿನಿಂದ ಗಣಪತಿಯ ಮೂರ್ತಿಯನ್ನು ರಚಿಸುತ್ತಿದ್ದರು. ಅಲ್ಲದೆ ವಿವಿಧ ದೇವರುಗಳ, ಪುರಾಣ ಪುರುಷರ, ಸಮಾಜ ಸೇವಕರ ಮೂರ್ತಿಗಳನ್ನೂ ಮಣ್ಣಿನಿಂದ ರಚಿಸುವ ಕಲೆಯು ಈ ಮನೆಯವರಿಗೆ ಕರಗತವಾಗಿತ್ತು. ಶ್ರೀ ಪ್ರಭಾಕರ ಭಂಡಾರಿಯವರಿಗೆ ಮದ್ದಳೆಗಾರಿಕೆಯಲ್ಲಿ ತಂದೆ ಮತ್ತು ಅಣ್ಣಂದಿರೇ ಗುರುಗಳು. ಅವರು ಮದ್ದಳೆ ನುಡಿಸುವುದನ್ನು ನೋಡಿ ಕೇಳಿಯೇ ಕಲಿತಿದ್ದರು. ತಂದೆ ಮತ್ತು ಅಣ್ಣಂದಿರಿಂದ ತರಬೇತಿಯನ್ನೂ ಪಡೆದಿದ್ದರು.  ಶ್ರೀ ಪ್ರಭಾಕರ ಭಂಡಾರಿ ಅವರು ಓದಿದ್ದು ಐದನೆಯ ತರಗತಿಯ ವರೆಗೆ. ಇವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ಸದ್ರಿ ಮೇಳದಲ್ಲಿ  ಏಳು ವರ್ಷ ತಿರುಗಾಟ.

ಬಳಿಕ ಕೊಳಗಿ ಬೀಸ್ ಟೆಂಟ್ ಮೇಳದಲ್ಲಿ ಎರಡು ವರ್ಷಗಳ ತಿರುಗಾಟ. ಬಳಿಕ ಅಮೃತೇಶ್ವರೀ ಮೇಳದಲ್ಲಿ  ಶ್ರೀ ನಾರಣಪ್ಪ ಉಪ್ಪೂರರ ಜತೆ ವ್ಯವಸಾಯ. ಬಳಿಕ ಸಾಲಿಗ್ರಾಮ ಮೇಳದಲ್ಲಿ ಒಂಭತ್ತು ವರ್ಷ ವ್ಯವಸಾಯ. ಬಳಿಕ ಕೆರೆಮನೆ ಶಂಭು  ಹೆಗಡೆ ಅವರ ಇಡಗುಂಜಿ ಮೇಳದಲ್ಲಿ ವ್ಯವಸಾಯ. ಮರಳಿ ಅಮೃತೇಶ್ವರೀ ಮೇಳದಲ್ಲಿ ವ್ಯವಸಾಯ. ಅಲ್ಲದೆ ಕೆರೆಮನೆ ಶಂಭು ಹೆಗಡೆ ಅವರ ನೇತೃತ್ವದ ಕಾಲಮಿತಿಯ ತಂಡದಲ್ಲಿ ಒಂಭತ್ತು ವರ್ಷ ವ್ಯವಸಾಯ ಮಾಡಿದ್ದರು. (ಮೂರು ಘಂಟೆಗಳ ಕಾಲದ ಪ್ರದರ್ಶನ) ಇಡಗುಂಜಿ ಮೇಳದಲ್ಲಿರುವಾಗ ಕಿನ್ನೀರು ನಾರಾಯಣ ಹೆಗಡೆ ಮತ್ತು ಅಮೃತೇಶ್ವರೀ ಮೇಳದಲ್ಲಿರುವಾಗ ಬೇಳಿಂಜೆ ತಿಮ್ಮಪ್ಪ ನಾಯ್ಕ ಇವರಿಂದ ಕಲಿತು ಅನುಭವಗಳನ್ನು ಗಳಿಸಲು ಅವಕಾಶವಾಗಿತ್ತು.

ಶ್ರೀ ಪ್ರಭಾಕರ ಭಂಡಾರಿ ಅವರು ತಮ್ಮ ವೃತ್ತಿ ಬದುಕಿನುದ್ದಕ್ಕೂ ಶ್ರೀ ನಾರ್ಣಪ್ಪ ಉಪ್ಪೂರ, ಗುಂಡ್ಮಿ ರಾಮಚಂದ್ರ ನಾವಡ, ಕಪ್ಪೆಕೆರೆ ಸುಬ್ರಾಯ ಭಾಗವತ, ಜಿ.ಆರ್ ಕಾಳಿಂಗ ನಾವಡ, ಕಡತೋಕಾ ಕೃಷ್ಣ ಭಾಗವತ, ವಿದ್ವಾನ್ ಗಣಪತಿ ಭಟ್, ನಾರಾಯಣ ಶಬರಾಯ ಮೊದಲಾದ ಭಾಗವತರ ಹಾಡುಗಾರಿಕೆಗೆ ಮದ್ದಳೆ ನುಡಿಸಿದ್ದರು. ಮಳೆಗಾಲದ ಪ್ರದರ್ಶನಗಳಲ್ಲಿ ಕಡತೋಕಾ ಮಂಜುನಾಥ ಭಾಗವತರೊಂದಿಗೂ ವ್ಯವಸಾಯ ಮಾಡಿದ್ದರು. ಕೆರೆಮನೆ ತಂಡದ ಸದಸ್ಯನಾಗಿ ಇಂಗ್ಲೆಂಡ್, ಬಹರೈನ್, ಬಾಂಗ್ಲಾ, ಮಲೇಷಿಯಾ ಮೊದಲಾದ ಕಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಅನಾರೋಗ್ಯದ ನಿಮಿತ್ತ ಮೇಳದ ವ್ಯವಸಾಯಕ್ಕೆ ವಿದಾಯ  ಶ್ರೀ  ಪ್ರಭಾಕರ ಭಂಡಾರಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. ತನ್ನ ಪ್ರತಿಭಾ ವ್ಯಾಪಾರದಿಂದ ಮದ್ದಳೆ ನುಡಿಸುತ್ತಾ ಕಲಾವಿದರಲ್ಲಿ ಉತ್ಸಾಹವನ್ನು ತುಂಬಿ. ಪ್ರದರ್ಶನಗಳನ್ನು ರಂಜಿಸುವಂತೆ ಮಾಡಿದ ಹಿರಿಯ ಕಲಾವಿದರಿವರು. ಮದ್ದಳೆವಾದಕನಾಗಿ ಇವರ ಕೆಲವು ನುಡಿತಗಳು ಕರ್ಕಿ ಪೆಟ್ಟುಗಳೆಂದೇ ಪ್ರಸಿದ್ಧವಾಗಿದೆ. ಈ ಪ್ರತಿಭೆಯನ್ನು ಇವರ ಮಕ್ಕಳಾದ  ಶ್ರೀ ಮಂಜುನಾಥ ಭಂಡಾರಿ ಮತ್ತು  ಶ್ರೀ ಪರಮೇಶ್ವರ ಭಂಡಾರಿ ಇವರ ವಾದನ ಕ್ರಮದಲ್ಲೂ ಗಮನಿಸಬಹುದು. 

ಶ್ರೀ ಮಂಜುನಾಥ ಭಂಡಾರಿ ಕರ್ಕಿ :

ಕರ್ಕಿ  ಶ್ರೀ ಮಂಜುನಾಥ ಭಂಡಾರಿ ಅವರು ಬಡಗುತಿಟ್ಟಿನ ಅನುಭವೀ ಮದ್ದಳೆವಾದಕರು. ಇಡಗುಂಜಿ, ಅಮೃತೇಶ್ವರೀ, ಪೆರ್ಡೂರು, ಹಾಲಾಡಿ, ಸಾಲಿಗ್ರಾಮ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿ ಮದ್ದಳೆಗಾರರಾಗಿ ಹೆಸರನ್ನು ಗಳಿಸಿದ್ದಾರೆ. ತಂದೆಯಂತೆ ಶಿಸ್ತಿನ, ಸರಳ, ಸಜ್ಜನ ಕಲಾವಿದರಿವರು. ತಂದೆ ಪ್ರಭಾಕರ ಭಂಡಾರಿ ಅವರಂತೆ ಯಕ್ಷಗಾನ ವಾದ್ಯೋಪಕರಣಗಳಾದ ಚೆಂಡೆ, ಮದ್ದಳೆಗಳನ್ನು ತಯಾರಿಸುವ ಕಲೆಯು ಇವರಿಗೆ ಕರಗತವಾಗಿದೆ. ಹಳೆ ಚೆಂಡೆ ಮದ್ದಳೆಗಳನ್ನು ದುರಸ್ಥಿಗೊಳಿಸಿ ವಾದನಯೋಗ್ಯವನ್ನಾಗಿ ಮಾಡುವ ಕೆಲಸವನ್ನೂ ಇವರು ಬಲ್ಲವರು.

ಶ್ರೀ ಮಂಜುನಾಥ ಭಂಡಾರಿ ಕರ್ಕಿ

ವಿಶೇಷವಾಗಿ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತವಾಗಿದೆ. ಈ ಮನೆಯವರು ನಿರ್ಮಿಸುವ ಗಣಪತಿ ದೇವರ ಮೂರ್ತಿಗಳಿಗೆ ಕರ್ನಾಟಕ ಅಲ್ಲದೆ ದೇಶದಾದ್ಯಂತ ಬಹು ಬೇಡಿಕೆಯಿದೆ. ಇವರು ನಿರ್ಮಿಸುವ ಗಣಪತಿ ದೇವರುಗಳ ಮೂರ್ತಿಗಳು ‘ಕರ್ಕಿ ಗಣಪತಿ’ ಎಂದೇ ಪ್ರಸಿದ್ಧವಾಗಿದೆ. ವಿವಿಧ ದೇವರ ಮೂರ್ತಿಗಳನ್ನೂ, ಪುರಾಣ ಪುರುಷರ, ಸಮಾಜ ಸೇವಕರ ಮೂರ್ತಿಗಳನ್ನೂ ಇವರು ಮಣ್ಣಿನಿಂದ ನಿರ್ಮಿಸಬಲ್ಲರು. ಶ್ರೀದೇವಿ, ಹನುಮಂತ, ಗಣಪತಿ, ವಿವೇಕಾನಂದ, ಅಂಬೇಡ್ಕರ್, ಶಿವಾಜಿ, ಮಹಾತ್ಮಾ ಗಾಂಧಿ ಹೀಗೆ ಗ್ರಾಹಕರ ಅಭಿರುಚಿಗೆ ತಕ್ಕಂತೆ ಇವರು ಮೂರ್ತಿಗಳನ್ನು ಮಣ್ಣಿನಿಂದ ನಿರ್ಮಿಸಿಕೊಡಬಲ್ಲರು. ಈ ಕಲೆಯು ಮಂಜುನಾಥ ಭಂಡಾರಿ ಅವರಿಗೆ ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಮೂರ್ತಿ ರಚನೆಯ ಕಾಯಕದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಶ್ರೀ ಮಂಜುನಾಥ ಭಂಡಾರಿಗಳು ಗ್ರಾಹಕರ ಮೆಚ್ಚುಗೆಗೆ ಕಾರಣರಾಗಿದ್ದಾರೆ. 

ಬಡಗುತಿಟ್ಟಿನ ಅನುಭವಿ ಮದ್ದಳೆಗಾರರಾದ  ಶ್ರೀ ಮಂಜುನಾಥ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಖ್ಯಾತ ಮದ್ದಳೆಗಾರರಾದ  ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳ ಮಗನಾಗಿ 1967 ಜುಲೈ 20ರಂದು ಜನನ. ಇವರು ಓದಿದ್ದು ಆರನೇ ತರಗತಿ ವರೆಗೆ. ಎಳವೆಯಲ್ಲೇ ಯಕ್ಷಗಾನ ಆಸಕ್ತಿ ಇತ್ತು. ಅದು ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ತಂದೆಯ ಜತೆ ತೆರಳಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಹೀಗೆ ವಾದನ ಕ್ರಮವನ್ನು ಅಭ್ಯಾಸ ಮಾಡಿದ್ದರು.  ಶ್ರೀ ಪ್ರಭಾಕರ ಭಂಡಾರಿಗಳು ಮಕ್ಕಳಿಗೆ ತರಬೇತಿಯನ್ನೂ ನೀಡಿದ್ದರು. 

ಶ್ರೀ ಮಂಜುನಾಥ ಭಂಡಾರಿಗಳು ಮೊದಲ ತಿರುಗಾಟ ನಡೆಸಿದ್ದು ಕೆರೆಮನೆ ಶಂಭು ಹೆಗಡೆ ಅವರ ಸಂಚಾಲಕತ್ವದ ಇಡಗುಂಜಿ ಮೇಳದಲ್ಲಿ. ಸದ್ರಿ ಮೇಳದಲ್ಲಿ ಎರಡು ವರ್ಷ ತಿರುಗಾಟ. ಬಳಿಕ ಪಳ್ಳಿ  ಶ್ರೀ ಸೋಮನಾಥ ಹೆಗ್ಡೆ ಮತ್ತು ಬಿ.ವಿ ಶೆಟ್ರ ಅಮೃತೇಶ್ವರೀ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಬಳಿಕ ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ. (ಬಯಲಾಟ ಮೇಳ) ಬಳಿಕ ಒಂದು ವರ್ಷದಲ್ಲಿ ಹಾಲಾಡಿ ಮೇಳದಲ್ಲಿ. ಬಳಿಕ ಒಂದು ವರ್ಷ ಪೆರ್ಡೂರು ಟೆಂಟ್ ಮೇಳದಲ್ಲಿ. ಇಲ್ಲಿ ಖ್ಯಾತ ಮದ್ದಳೆಗಾರರಾದ ದುರ್ಗಪ್ಪ ಗುಡಿಗಾರರ ಒಡನಾಟವು ಸಿಕ್ಕಿತ್ತು. ಬಳಿಕ ಐದು ವರ್ಷ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ನಾಲ್ಕು ವರ್ಷಗಳ ವ್ಯವಸಾಯ ಮಾಡಿದ ಬಳಿಕ ಮುಖ್ಯ ಮದ್ದಳೆಗಾರನಾಗಿ ಭಡ್ತಿ ಹೊಂದಿದ್ದರು.

ಈ ಸಂದರ್ಭದಲ್ಲಿ ಜಿ.ಆರ್ ಕಾಳಿಂಗ ನಾವಡರ ಹಾಡುಗಾರಿಕೆಗೆ ಮದ್ದಳೆ ನುಡಿಸಲು ಅವಕಾಶವಾಗಿತ್ತು. ಮಳೆಗಾಲದ ಪ್ರದರ್ಶನಗಳಲ್ಲೂ ಅವರ ಹಾಡುಗಾರಿಕೆಗೆ ಮದ್ದಳೆಗಾರನಾಗಿ ವ್ಯವಸಾಯ ಮಾಡಲು ಅನುಕೂಲವಾಗಿತ್ತು. ಕರ್ಕಿ ಮನೆಯ ಮದ್ದಳೆಗಾರರನ್ನು ತಮ್ಮ ಹಾಡುಗಾರಿಕೆಗೆ ಕಾಳಿಂಗ ನಾವಡರು ಬಯಸುತ್ತಿದ್ದರು. ಸಾಲಿಗ್ರಾಮ ಮೇಳದಲ್ಲಿ ಐದು ವರ್ಷ ವ್ಯವಸಾಯ ನಡೆಸಿ  ಶ್ರೀ ಮಂಜುನಾಥ ಭಂಡಾರಿಗಳು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು. ಬಹು ಬೇಡಿಕೆಯ ಕಲಾವಿದನಾಗಿರುವಾಗಲೇ ಇವರು ವ್ಯವಸಾಯದಿಂದ ದೂರ ಉಳಿದುದು ಬಹು ಬೇಸರದ ವಿಚಾರ. ಮೇಳ ಬಿಟ್ಟ ಬಳಿಕವೂ ಅತಿಥಿ ಕಲಾವಿದನಾಗಿ ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ, ಮಣ್ಣಿನ ಮೂರ್ತಿಯ ರಚನೆ, ಚೆಂಡೆ ಮದ್ದಳೆ ತಯಾರಿಕೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಕರ್ಕಿಯ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ. 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ: 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಅವರು ಬಡಗುತಿಟ್ಟಿನ ಅನುಭವಿ ಮದ್ದಳೆಗಾರರು. ಕಳೆದ ಮೂವತ್ತನಾಲ್ಕು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಗುಂಡಬಾಳಾ, ಭುವನಗಿರಿ, ಶಿರಸಿ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಕಳೆದ ಇಪ್ಪತ್ತೈದು ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಚೆಂಡೆ ಮದ್ದಳೆ ತಯಾರಿಕಾ ಕಲೆಯನ್ನೂ ಬಲ್ಲವರು. ಅಲ್ಲದೆ ಕರಕುಶಲಗಾರಿಕೆಯನ್ನೂ ಬಲ್ಲವರು. ಕರ್ಕಿ ಮನೆತನದ ಸರಳ, ಸಜ್ಜನ ಶಿಸ್ತಿನ ಕಲಾವಿದರಿವರು. ಸಹ ಕಲಾವಿದರಿಗೆ ಮತ್ತು ಮಿತ್ರರಿಗೆ ಇವರು ಪ್ರೀತಿಯ ‘ಪರಮಣ್ಣ’. 

ಶ್ರೀ ಪರಮೇಶ್ವರ ಭಂಡಾರಿ ಕರ್ಕಿ

ಬಡಗುತಿಟ್ಟಿನ ಅನುಭವಿ ಮದ್ದಳೆಗಾರ  ಶ್ರೀ ಪರಮೇಶ್ವರ ಭಂಡಾರಿ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕರ್ಕಿ. ಕರ್ಕಿ ಮನೆಯ ಮತ್ತೊಬ್ಬ ಮದ್ದಳೆಗಾರರಾಗಿ ಇವರು ಗುರುತಿಸಿಕೊಂಡಿದ್ದಾರೆ. 1971ನೇ ಇಸವಿ ಮೇ ತಿಂಗಳ 3ರಂದು  ಶ್ರೀ ಪ್ರಭಾಕರ ಭಂಡಾರಿ ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ ಜನನ. ಓದಿದ್ದು ಎಸ್ಸೆಸ್ಸೆಲ್ಸಿ ವರೆಗೆ. ಏಳನೇ ತರಗತಿ ವರೆಗೆ ಕರ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕರ್ಕಿ ಚೆನ್ನಕೇಶವ ಪ್ರೌಢ ಶಾಲೆಯಲ್ಲಿ.

ಇವರಿಗೆ ಯಕ್ಷಗಾನವು ಹಿರಿಯರಿಂದ ಬಳುವಳಿಯಾಗಿ ಬಂದುದು. ತಂದೆ ಮತ್ತು ಅಣ್ಣ ಮದ್ದಳೆ ಬಾರಿಸುವುದನ್ನು ನೋಡಿ, ಕೇಳಿಯೇ ಕಲಿತವರು. ಅವರು ಮೇಳದ ತಿರುಗಾಟಕ್ಕೆ ತೆರಳಿದಾಗ ಇವರು ಮನೆಯಲ್ಲಿ ಮದ್ದಳೆ ಬಾರಿಸುತ್ತಾ ಅಭ್ಯಾಸ ಮಾಡುತ್ತಿದ್ದರು. ತಂದೆಯವರಿಂದ ಮತ್ತು ಅಣ್ಣನಿಂದ ತರಬೇತಿಯನ್ನು ಪಡೆದಿದ್ದರು. ಶಾಲಾ ರಜಾದಿನಗಳಲ್ಲಿ ಭಾಗವತರಾದ ಗುಣವಂತೆ ಕೃಷ್ಣ ಭಂಡಾರಿಗಳ ಜತೆ ತೆರಳಿ ಪ್ರದರ್ಶನಗಳಲ್ಲಿ ಮದ್ದಳೆ ಬಾರಿಸಿ ಅನುಭವಗಳನ್ನು ಗಳಿಸಿಕೊಂಡರು. 

ಶ್ರೀ ಪರಮೇಶ್ವರ ಭಂಡಾರಿ ಅವರು ಮೊದಲು ತಿರುಗಾಟ ನಡೆಸಿದ್ದು ಗುಂಡಬಾಳಾ ಮೇಳದಲ್ಲಿ. ದೊಡ್ಡಪ್ಪ ಸತ್ಯನಾರಾಯಣ ಭಂಡಾರಿಗಳ ಜತೆ ಸದ್ರಿ ಮೇಳದಲ್ಲಿ ವ್ಯವಸಾಯ. ಅಲ್ಲಿ ಚಂದ್ರಶೇಖರ ಹೆಗಡೇಕಾರ್ ಅವರ ಒಡನಾಟವು ದೊರೆತಿತ್ತು. ಗುಂಡಬಾಳಾ ಮೇಳದಲ್ಲಿ ಏಳು ವರ್ಷ ವ್ಯವಸಾಯ. ಬಳಿಕ ಶಿರಳಗಿ ಭಾಸ್ಕರ ಜೋಶಿ ಅವರ ಸಿದ್ಧಾಪುರ ಭುವನಗಿರಿ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಕಲಾವಿದನಾಗಿ ಇವರದ್ದು ಕ್ಷಿಪ್ರ ಬೆಳವಣಿಗೆ. ಭುವನಗಿರಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ವ್ಯವಸಾಯ. ಬಳಿಕ ಶಿರಸಿ ಮೇಳದಲ್ಲಿ ಮುಖ್ಯ ಮದ್ದಳೆಗಾರನಾಗಿ ಒಂದು ವರ್ಷ ವ್ಯವಸಾಯ. ಕಳೆದ 25 ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಮೊದಲ ಎರಡು ವರ್ಷ ಒತ್ತು ಮದ್ದಳೆಗಾರನಾಗಿ ತಿರುಗಾಟ. ಆಗ ಯಲ್ಲಾಪುರ ಶಂಕರ ಭಾಗವತರು ಪ್ರಧಾನ ಮದ್ದಳೆಗಾರರಾಗಿದ್ದರು. ಕಳೆದ 23 ವರ್ಷಗಳಿಂದ ಕರ್ಕಿ ಪರಮೇಶ್ವರ ಭಂಡಾರಿ ಅವರು ಮುಖ್ಯ ಮದ್ದಳೆಗಾರರಾಗಿ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನದುದ್ದಕ್ಕೂ ಮೇಳದ ಮತ್ತು ಮಳೆಗಾಲದ ಪ್ರದರ್ಶನಗಳಲ್ಲಿ ನೆಬ್ಬೂರು, ಕಪ್ಪೆಕೆರೆ, ಸುಬ್ರಹ್ಮಣ್ಯ ಧಾರೇಶ್ವರ, ಹೆರಂಜಾಲು ಗೋಪಾಲ ಗಾಣಿಗ, ನಾರಾಯಣ ಶಬರಾಯ, ರಾಘವೇಂದ್ರ ಮಯ್ಯ, ಸುರೇಶ್ ಶೆಟ್ಟಿ, ಜನ್ಸಾಲೆ ರಾಘವೇಂದ್ರ ಆಚಾರ್ಯ, ರಾಮಕೃಷ್ಣ ಹೆಗಡೆ ಹಿಲ್ಲೂರು, ಸತ್ಯನಾರಾಯಣ ಪುಣಿಂಚತ್ತಾಯ, ಚಂದ್ರಕಾಂತ ಮೂಡುಬೆಳ್ಳೆ, ಮೊದಲಾದ ಭಾಗವತರ ಹಾಡುಗಾರಿಕೆಗೆ ಶ್ರೀ ಪರಮೇಶ್ವರ ಭಂಡಾರಿ ಅವರು ಮದ್ದಳೆಗಾರರಾಗಿ ವ್ಯವಸಾಯ ಮಾಡಿರುತ್ತಾರೆ.

ಶ್ರೀಯುತರು ಮಳೆಗಾಲದಲ್ಲಿ ದೆಹಲಿ, ಹೈದೆರಾಬಾದ್, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಇವರು ತೆರೆದುಕೊಳ್ಳುವ ಸ್ವಭಾವದವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ. ಬಹು ಬೇಗನೆ ಪ್ರದರ್ಶನ ನಡೆಯುವ ಸ್ಥಳಕ್ಕೆ ಬಂದು ಸಿದ್ಧರಾಗುವ ಕರ್ಕಿ ಮನೆತನದ ಶಿಸ್ತನ್ನು ಇವರೂ ರೂಢಿಸಿಕೊಂಡು ಮುಂದುವರಿಯುತ್ತಿದ್ದಾರೆ. ಇವರಿಗೆ ಕಲಾಮಾತೆಯ ಅನುಗ್ರಹವು ಸದಾ ಇರಲಿ. ಕರ್ಕಿ ಮನೆಯ ಮದ್ದಳೆಗಾರರಿಗೆ ಶ್ರೀ  ದೇವರ ಅನುಗ್ರಹವು ಸದಾ ಇರಲಿ. ಭಗವಂತನು ಸಕಲ ಸೌಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ – 9164487083

“ಪಠಾಣ್ ಸಿನಿಮಾವನ್ನು ನಿಮ್ಮ ಮಗಳೊಂದಿಗೆ ಕುಳಿತು ವೀಕ್ಷಿಸಿ” ಶಾರುಖ್ ಖಾನ್ ಗೆ ಹೇಳಿದ ಮಧ್ಯಪ್ರದೇಶ ಸ್ಪೀಕರ್ ಗಿರೀಶ್ ಗೌತಮ್ 

0

“ಪಠಾಣ್ ಸಿನಿಮಾವನ್ನು ನಿಮ್ಮ ಮಗಳೊಂದಿಗೆ ಕುಳಿತು ವೀಕ್ಷಿಸಿ” ಎಂದು  ಶಾರುಖ್ ಖಾನ್ಗೆ ಮಧ್ಯಪ್ರದೇಶ ಸ್ಪೀಕರ್ ಗಿರೀಶ್ ಗೌತಮ್ ಹೇಳಿದ್ದಾರೆ, ಥಿಯೇಟರ್‌ಗಳಲ್ಲಿ “ಪಠಾಣ್” ಅನ್ನು ನಿಷೇಧಿಸುವ ಬೇಡಿಕೆಗಳ ನಡುವೆ ಇಂದು ಪ್ರಾರಂಭವಾಗುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಶ್ರೀ ಗೌತಮ್ ಇದನ್ನು ಹೇಳಿದರು.

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನಂತರ, ರಾಜ್ಯದ ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್ ಕೂಡ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ. “ಶಾರುಖ್ ಅವರು ತಮ್ಮ ಮಗಳ ಜೊತೆ ಈ ಚಿತ್ರವನ್ನು ನೋಡಬೇಕು, ಚಿತ್ರವನ್ನು ಅಪ್ಲೋಡ್ ಮಾಡಬೇಕು ಮತ್ತು ಅದನ್ನು ತಮ್ಮ ಮಗಳ ಜೊತೆ ನೋಡುತ್ತಿದ್ದಾರೆ ಎಂದು ಜಗತ್ತಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ಥಿಯೇಟರ್‌ಗಳಲ್ಲಿ “ಪಠಾಣ್” ಅನ್ನು ನಿಷೇಧಿಸುವ ಬೇಡಿಕೆಗಳ ನಡುವೆ ಇಂದು ಪ್ರಾರಂಭವಾಗುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಶ್ರೀ ಗೌತಮ್ ಇದನ್ನು ಹೇಳಿದರು. ಈ ವಿಚಾರವನ್ನು ಆಡಳಿತಾರೂಢ ಬಿಜೆಪಿಯು ಸದನದ ನೆಲದ ಮೇಲೆ ವಿಧಾನಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ವಿರೋಧ ಪಕ್ಷದ ನಾಯಕ ಡಾ.ಗೋವಿಂದ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಈ ಚಿತ್ರವನ್ನು ವಿರೋಧಿಸಿದ್ದಾರೆ, ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. “ಇದು ಪಠಾಣ್ ಬಗ್ಗೆ ಅಲ್ಲ, ಆದರೆ ಪರಿಧಾನ್ (ಬಟ್ಟೆ)” ಎಂದು ಸುರೇಶ್ ಪಚೌರಿ ಹೇಳಿದರು,

ಭಾರತೀಯ ಸಂಸ್ಕೃತಿಯಲ್ಲಿ, ಯಾವುದೇ ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಮತ್ತು ಆ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸುವುದಿಲ್ಲ, ಅದು ಹಿಂದೂಗಳು, ಮುಸ್ಲಿಮರು ಅಥವಾ ಯಾವುದೇ ಇತರ ಧರ್ಮದ  ಅನುಯಾಯಿಗಳು ಆಗಿರಲಿ ಎಂದು ಅವರು ಹೇಳಿದರು.

ಕಳೆದ ಬುಧವಾರ ನರೋತ್ತಮ್ ಮಿಶ್ರಾ ಚಿತ್ರದ ಒಂದು ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. “ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ಹಾಡು ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದ್ದಾರೆ. ‘ಪಠಾನ್’ ನಿರ್ಮಾಪಕರು ‘ಬೇಷರಂ ರಂಗ್’ ಹಾಡನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ನರೋತ್ತಮ್ ಮಿಶ್ರಾ ಅವರ ಹೇಳಿಕೆಯು ಬಂದಿತು,

ಇದರಲ್ಲಿ ಶಾರುಖ್ ಖಾನ್ ನಟಿಸಿದ ನಾಯಕನ ಎದುರು ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. “ಹಾಡಿನ ಆಕ್ಷೇಪಾರ್ಹ ಭಾಗಗಳನ್ನು ಸರಿಪಡಿಸಲು ನಾನು ಚಿತ್ರದ ನಿರ್ಮಾಪಕರಿಗೆ ಸಲಹೆ ನೀಡುತ್ತೇನೆ. ಈ ಹಿಂದೆ ದೀಪಿಕಾ ಪಡುಕೋಣೆ ಜೆಎನ್‌ಯುನಲ್ಲಿ ‘ತುಕ್ಡೆ ತುಕ್ಡೆ ಗ್ಯಾಂಗ್’ ಬೆಂಬಲಕ್ಕೆ ನಿಂತಿದ್ದರು. ಅವರ ಮನಸ್ಥಿತಿಯನ್ನು ಅವರು ಅಲ್ಲಿ ಬಹಿರಂಗಪಡಿಸಿದರು.

ಹಾಡಿನ ಶೀರ್ಷಿಕೆ ‘ಬೇಷರಂ ರಂಗ್’ ಎಂದು ನಾನು ನಂಬುತ್ತೇನೆ. ಅಲ್ಲದೆ, ಕೇಸರಿ ಮತ್ತು ಹಸಿರು ಬಣ್ಣಗಳನ್ನು ವೇಷಭೂಷಣಗಳಲ್ಲಿ ಬಳಸಿರುವುದು ಆಕ್ಷೇಪಾರ್ಹವಾಗಿದೆ. ಬದಲಾವಣೆಗಳನ್ನು ಮಾಡಬೇಕಾಗಿದೆ, ವಿಫಲವಾದರೆ ನಾವು ಮಧ್ಯಪ್ರದೇಶದಲ್ಲಿ ಚಲನಚಿತ್ರವನ್ನು ಪ್ರದರ್ಶಿಸಬೇಕೇ ಅಥವಾ ಬೇಡವೇ ಎಂದು ನಾವು ಯೋಚಿಸಬೇಕಾಗುತ್ತದೆ ಎಂದು ಮಿಶ್ರಾ ಹೇಳಿದ್ದಾರೆ

16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ 8 ಜನರಿಂದ ಸಾಮೂಹಿಕ ಅತ್ಯಾಚಾರ

0

ಮಹಾರಾಷ್ಟ್ರದಲ್ಲಿ 16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ 8 ಜನರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅಪ್ರಾಪ್ತ ವಯಸ್ಕನೆಂದು ಹೇಳಲಾದ ವ್ಯಕ್ತಿಯೊಬ್ಬರು ತನಗೆ ಆಮಿಷ ಒಡ್ಡಿದ್ದರು ಎಂದು ಬಾಲಕಿ ಹೇಳಿದ್ದಾಳೆ.

ಮುಂಬೈ: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಅಪ್ರಾಪ್ತ ವಯಸ್ಕನೆಂದು ಹೇಳಲಾದ ವ್ಯಕ್ತಿಯೊಬ್ಬರು ತನಗೆ ಆಮಿಷ ಒಡ್ಡಿದ್ದರು ಎಂದು ಬಾಲಕಿ ಹೇಳಿದ್ದಾಳೆ.

ಶುಕ್ರವಾರ ಸಂಜೆ ಆರೋಪಿಗಳು ಆಕೆಯನ್ನು ತಮ್ಮ ಕಡಲತೀರದ ಗ್ರಾಮದಲ್ಲಿರುವ ಖಾಲಿ ಬಂಗಲೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಮರುದಿನ ಬೆಳಗಿನ ತನಕ ಆಕೆಯ ಮೇಲೆ ಅತ್ಯಾಚಾರ ಎಸಗಿದರು.

“ಶನಿವಾರ ಸಲ್ಲಿಸಿದ ದೂರಿನಲ್ಲಿ, ಸಂತ್ರಸ್ತೆ ಡಿಸೆಂಬರ್ 16 ರಂದು ರಾತ್ರಿ 8 ಗಂಟೆಗೆ ತನ್ನ ಅಗ್ನಿಪರೀಕ್ಷೆ ಪ್ರಾರಂಭವಾಯಿತು, ಅದು ಮರುದಿನ ಬೆಳಿಗ್ಗೆ 11 ಗಂಟೆಯವರೆಗೆ ಮುಂದುವರೆಯಿತು ಎಂದು ಹೇಳಿದ್ದಾಳೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಆರೋಪಿಗಳು ಅವಳನ್ನು ಖಾಲಿ ಬಂಗಲೆಗೆ ಕರೆದೊಯ್ದರು, ಅಲ್ಲಿ ಅವರು ಅವಳ ಮೇಲೆ ಅತ್ಯಾಚಾರ ಎಸಗಿದರು, ನಂತರ ಅವರು ಅವಳನ್ನು ಸಮುದ್ರ ತೀರಕ್ಕೆ ಕರೆದೊಯ್ದರು, ಅಲ್ಲಿ ಅವರು ಮತ್ತೆ ಪೊದೆಗಳಲ್ಲಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು” ಎಂದು ಅವರು ಹೇಳಿದರು.

ಕರ್ನಾಟಕ ವಿಧಾನಸಭೆ ಸಭಾಂಗಣದಲ್ಲಿ ವಿ.ಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣ – ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರು

0

ಬೆಳಗಾವಿ | ಕರ್ನಾಟಕ ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು.

ವಾಲ್ಮೀಕಿ, ಬಸವಣ್ಣ, ಕನಕದಾಸ, ಬಿ.ಆರ್.ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್ ಸೇರಿದಂತೆ ಹಲವರ ಭಾವಚಿತ್ರಗಳನ್ನು ಅಳವಡಿಸುವಂತೆ ಕಾಂಗ್ರೆಸ್ ಶಾಸಕರು ಸ್ಪೀಕರ್‌ಗೆ ಪತ್ರ ಬರೆದು ಪ್ರತಿಭಟನೆ ನಡೆಸಿದ್ದಾರೆ.

ವಿಧಾನಸಭೆ ಸಭಾಂಗಣದಲ್ಲಿ ವಿಡಿ ಸಾವರ್ಕರ್ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸುವುದನ್ನು ವಿರೋಧಿಸಿ ಸಿದ್ದರಾಮಯ್ಯ ಮತ್ತು ಇತರ ಕಾಂಗ್ರೆಸ್ ಶಾಸಕರು ವಿಧಾನಸಭೆಯ ಹೊರಗೆ ಪ್ರತಿಭಟನೆ ನಡೆಸಿದರು.

“ನಮ್ಮ ವಿಧಾನಸಭೆ ಕಲಾಪ ನಡೆಯಬಾರದು ಎಂಬುದು ಅವರ ಅಪೇಕ್ಷೆ. ಅವರು ಅದನ್ನು ಅಡ್ಡಿಪಡಿಸಲು ಬಯಸುತ್ತಾರೆ. ಅವರ ವಿರುದ್ಧ ಸಾಕಷ್ಟು ಭ್ರಷ್ಟಾಚಾರ ವಿಚಾರಗಳನ್ನು ಎತ್ತಲಿದ್ದೇವೆ ಎಂಬ ಕಾರಣಕ್ಕೆ ಈ ಫೋಟೋ ತಂದಿದ್ದಾರೆ. ಅವರಿಗೆ ಯಾವುದೇ ಅಭಿವೃದ್ಧಿ ಅಜೆಂಡಾ ಇಲ್ಲ” ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಮತ್ತು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ರಾತ್ರಿ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ – ಹೊಡೆದುರುಳಿಸಿದ ಭಾರತೀಯ ಸೇನೆ

0

ನಿನ್ನೆ ರಾತ್ರಿ ಪಂಜಾಬ್ ನ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡವು. ಅದು ಮುಂದೆ ಪ್ರವೇಶಿಸದಂತೆ ತಡೆಯಲು ಯೋಧರು ಗುಂಡಿನ ದಾಳಿ ನಡೆಸಿದರು.

ಸಮೀಪದ ಪ್ರದೇಶಗಳನ್ನು ಶೋಧಿಸಲಾಗುತ್ತಿದೆ ಎಂದು ಪ್ರಭಾಕರ ಜೋಶಿ, ಬಿಎಸ್‌ಎಫ್ ಡಿಐಜಿ, ಗುರುದಾಸ್‌ಪುರ ಅವರು ಹೇಳಿದ್ದಾರೆ.

ಕಳೆದ ರಾತ್ರಿ ಬಿಎಸ್‌ಎಫ್‌ನ ಚಂದು ವಡಾಲಾ ಪೋಸ್ಟ್ ಮತ್ತು ಕಸೋವಾಲ್ ಪೋಸ್ಟ್‌ನಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಕಾಣಿಸಿಕೊಂಡ ನಂತರ ಬಿಎಸ್‌ಎಫ್ ಜವಾನರು ಹತ್ತಿರದ ಪ್ರದೇಶಗಳನ್ನು ಹುಡುಕುತ್ತಿದ್ದಾರೆ.

ಅದು ಮುಂದೆ ಪ್ರವೇಶಿಸದಂತೆ ತಡೆಯಲು ಯೋಧರು ಗುಂಡಿನ ದಾಳಿ ನಡೆಸಿದರು.