Saturday, August 1, 2026
Home Blog Page 104

ಯಕ್ಷಗಾನ ಸಮ್ಮೇಳನ – 2023ರ ಆಮಂತ್ರಣ ಪತ್ರ

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ಜರುಗಲಿರುವ  ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023ರ ಆಮಂತ್ರಣ ಪತ್ರವನ್ನು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆಯವರು 02-02-2023ರಂದು ಸಮ್ಮೇಳನಾಧ್ಯಕ್ಷ ಡಾ. ಎಂ ಪ್ರಭಾಕರ ಜೋಶಿಯವರಿಗೆ ಅಧಿಕೃತವಾಗಿ‌ ನೀಡಿ ಆಮಂತ್ರಿಸಿದರು.

ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಕದ್ರಿ ನವನೀತ ಶೆಟ್ಟಿ, ನಾರಾಯಣ‌‌ ಎಂ. ಹೆಗಡೆ,  ಮುರಲಿ ಕಡೆಕಾರ್ ಹಾಗೂ ನಾಗೇಶ್ ಕಲ್ಲೂರು ಉಪಸ್ಥಿತರಿದ್ದರು.

ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥ ಬ್ಯಾನರ್ ಅನಾವರಣ

ಫೆಬ್ರವರಿ 11 ಮತ್ತು 12ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನದ ಪ್ರಚಾರಾರ್ಥವಾಗಿ ಸುಮಾರು 40 ವೃತ್ತಿ ಮೇಳಗಳಲ್ಲಿ ಬ್ಯಾನರನ್ನು ಅಳವಡಿಸಲಾಗುತ್ತಿದ್ದು, ನಿನ್ನೆ (26-01-2023) ಶಿರಿಯಾರದಲ್ಲಿ ಮಂದಾರ್ತಿ ಮೇಳದ ಚೌಕಿಯಲ್ಲಿ ಗಣಪತಿ ದೇವರ ಮುಂಭಾಗದಲ್ಲಿ ಹಾಗೂ ಕಲಾವಿದರ ಸಮ್ಮುಖದಲ್ಲಿ ಬ್ಯಾನರನ್ನು ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆ, ಪ್ರಧಾನ ಸಂಚಾಲಕರಾದ ಪಿ. ಕಿಶನ್ ಹೆಗ್ಡೆ, ಮುರಲಿ ಕಡೆಕಾರ್ ಮತ್ತು ಮೇಳದ ಮೆನೇಜರ್, ನರಾಡಿ ಭೋಜರಾಜ್ ಶೆಟ್ಟಿ ಸಹಿತ ಉಳಿದ ಕಲಾವಿದರು ಉಪಸ್ಥಿತರಿದ್ದರು.

ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಹೆಗಡೆಯವರು ಫೆಬ್ರವರಿ 11 ಮತ್ತು 12ರಂದು ಎಲ್ಲಾ ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.

ಇಂದು ಆಟ ಎಲ್ಲೆಲ್ಲಿ? (20.01.2023, ಶುಕ್ರವಾರ)

ಮೇಳಗಳ ಇಂದಿನ (20.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮರವಂತೆ ಕಂಚಿಕೇರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾವೂರು 

ಕಟೀಲು ಎರಡನೇ ಮೇಳ == ಕೂವೆ ಶಾಸ್ತಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಡುಮಲೆ ಬಡಗನ್ನೂರು ಪುತ್ತೂರು 

ಕಟೀಲು ಮೂರನೇ ಮೇಳ==  ಶ್ರೀ ರಾಮಾಶ್ರಮ ಕಾಲೇಜು ಮೈದಾನ ಕೊಂಚಾಡಿ 

ಕಟೀಲು ನಾಲ್ಕನೇ ಮೇಳ  == ಶ್ರೀ ದೇವಿ ಕೃಪಾ 7ನೇ ಬ್ಲಾಕ್ ಕೃಷ್ಣಾಪುರ ಕಾಟಿಪಳ್ಳ ಸುರತ್ಕಲ್ 

ಕಟೀಲು ಐದನೇ ಮೇಳ == ಕಿನ್ನಿಮಜಲು ಮಿಜಾರು 

ಕಟೀಲು ಆರನೇ ಮೇಳ == ಕಿಲೆಂಜೂರು 

ಮಂದಾರ್ತಿ ಒಂದನೇ ಮೇಳ  ==  ಕೋಣ್ಕಿ ಮನೆ ನಾಡಗುಡ್ಡೆಯಂಗಡಿ 

ಮಂದಾರ್ತಿ ಎರಡನೇ ಮೇಳ   == ಬೇಗುವಳ್ಳಿ 

ಮಂದಾರ್ತಿ ಮೂರನೇ ಮೇಳ  ==  ತ್ರಿಮೂರ್ತಿ ನಿಲಯ ಬಸವಾನಿ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಕೊಂಬೆ ಹಣೆಗೋಡು ಬೇಳಂಜೆ ಹೆಬ್ರಿ 

ಮಂದಾರ್ತಿ ಐದನೇ ಮೇಳ  ==  ಗೋಳಿಯಂಗಡಿ ಕಾರಿಕೊಡ್ಲು ಹೈಕಾಡಿ ಹಿಲಿಯಾಣ 

ಹನುಮಗಿರಿ ಮೇಳ == ಮಾಣಿ ಗಾಂಧಿ ಮೈದಾನ – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬಾ ಜಾತ್ರೆ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ತುಂಬ್ರಿ – ಪಾವನ ತುಳಸಿ

ಶ್ರೀ ಮಾರಣಕಟ್ಟೆ ಮೇಳ ‘ಎ’ == ಕೆಳಾ ಅರಿಕಲ್ಲು ಕದಳಿ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಕೆಳಾ ಅರಿಕಲ್ಲು ಕದಳಿ ಹೊಸೂರು 

ಶ್ರೀ ಪಾವಂಜೆ ಮೇಳ == ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಜಯನಗರ ಗುರಿಪಳ್ಳ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ ==  ಶ್ರೀ ವೀರಭದ್ರ ದೇವಸ್ಥಾನ ಕಬೈಲು 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕಾಶಿ ವಿಶ್ವೇಶ್ವರ ದೇವಸ್ಥಾನ ಕಾರ್ಕಡ ಸಾಲಿಗ್ರಾಮ 

ಶ್ರೀ ಸೌಕೂರು ಮೇಳ == ಕೋಡಿ – ಈಶ್ವರಿ ಪರಮೇಶ್ವರಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ವರಂಗ ಸೂರಿಮಣ್ಣು ಶ್ರೀ ಲಕ್ಷ್ಮೀನಾರಾಯಣ ಮಠ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಸ್ರೂರು ದೊಟ್ಟೆಕಾಲು ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ವಠಾರ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ದೊಡ್ಡಬೀಸು ಹಳ್ಳಿಹೊಳೆ 

ಶ್ರೀ ಸಿಗಂದೂರು ಮೇಳ == ಶ್ರೀ ಶಂಕರನಾರಾಯಣ ದೇವಸ್ಥಾನ ಆವರ್ಸೆ

ಶ್ರೀ ನೀಲಾವರ ಮೇಳ  == ಕುಕ್ಕೆಹಳ್ಳಿ ಸಣ್ಣಬೀಡು – ನಾಗಕನ್ನಿಕೆ 

ಶ್ರೀ ಗುತ್ಯಮ್ಮ ಮೇಳ, ಶನಿವಾರಸಂತೆ, ಹೊಸಳ್ಳಿ ==  ಹೆದ್ದೂರು ವನಚೇತನ ನಿಸರ್ಗ ಆಶ್ರಮ ಸಭಾಭವನ – ಶ್ರೀಕೃಷ್ಣ ಲೀಲಾಮೃತ  

ಶ್ರೀ ಮೇಗರವಳ್ಳಿ ಮೇಳ ==  ಕೋಟ ಹಂದಟ್ಟು ಶ್ರೀ ದಾನಗುಂದು ದೈವಸ್ಥಾನ ವಠಾರ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಅರಮ ದೇವಸ್ಥಾನ ಪಡುಕರೆ – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಕಾಳಿಕಾಂಬಾ ನಗರ ಆಲೂರು – ಗಗನ ತಾರೆ 

ಶ್ರೀ ಬೋಳಂಬಳ್ಳಿ ಮೇಳ== ಏಳುಜೀತ ಗೋಳಿಬೇರು ಹಾಯಿಗುಳಿ ದೈವದ ಮನೆ ವಠಾರ

ಶ್ರೀ ಬಪ್ಪನಾಡು ಮೇಳ ==  ಶ್ರೀ ನಾಗಕನ್ನಿಕಾ, ಶ್ರೀ ರಕ್ತೇಶ್ವರಿ ವನ ಸೋಯಿಪೆಕಲ್ಲು ಮಜಿಬೈಲ್ – ಭಂಡಾರ ಚಾವಡಿ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಕುರಿಯಾಡಿ ಮಂಜಿಪಿಲ – ಭಾಗ್ಯವಂತೆರ್ 

ಶ್ರೀ ಸುಂಕದಕಟ್ಟೆ ಮೇಳ ಬಜಪೆ  == ಬಿ.ಸಿ.ರೋಡ್ ಅಲೆತ್ತೂರು ಬಾಕಿಮಾರು ಗದ್ದೆ – ಶ್ರೀದೇವಿ ಲಲಿತೋಪಾಖ್ಯಾನ 

ಶ್ರೀ ಬಾಚಕೆರೆ ಮೇಳ == ಚಾರ್ವಕ – ಪುಂಚದ ಪುತ್ಥೊಳಿ 

ಶ್ರೀ ಗೆಜ್ಜೆಗಿರಿ ಮೇಳ == ಏಳಿಂಜೆ ಕುದ್ರಿಪದವು – ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ 

ಅಂಬಲಪಾಡಿ ಯಕ್ಷಗಾನ ಮಂಡಳಿಯ 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ : ಶ್ರೀ ಲಕ್ಷ್ಮೀಜನಾರ್ದನಯಕ್ಷಗಾನ ಕಲಾಮಂಡಳಿ (ರಿ.) ಅಂಬಲಪಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಅಂಬಲಪಾಡಿ ಕ೦ಬ್ಳಕಟ್ಟ ಶ್ರೀ ಜನಾರ್ದನ ಮಂಟಪದಲ್ಲಿ 15-01-2023 ರಂದು 65ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜರಗಿತು.

ಈ ಸಂದರ್ಭದಲ್ಲಿ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು ನಿಟ್ಟೂರು ಶೀನಪ್ಪ ಸುವರ್ಣ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಪ್ರಶಸ್ತಿಯನ್ನು ಕೋಟ ರಾಜಶೇಖರ್ ಹಂದೆ ಹಾಗೂ ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಯನ್ನು ಆರ್ಗೋಡು ಮೋಹನ್‌ದಾಸ್ ಶೆಣೈ ಇವರಿಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ. ಬೀ ವಿಜಯ ಬಲ್ಲಾಳರು ಪ್ರದಾನ ಮಾಡಿ ಗೌರವಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಹೆಯ ಸಹಾಯಕ ನಿರ್ದೇಶಕ ಹಾಗೂ ಖ್ಯಾತ ಕಲಾವಿದ ಡಾ. ಕೋಳ್ಯೂರು ರಾಮಚಂದ್ರ ರಾಯರ ಪುತ್ರ ಶ್ರೀ ಶ್ರೀಧರ ಕೆ.ರಾವ್‌ ಅವರು ಮಾತನಾಡಿ ಅಂಬಲಪಾಡಿ ಮಂಡಳಿಯು ಕಳೆದ 65 ವರ್ಷಗಳಿಂದ ಸಾಂಪ್ರದಾಯಿಕ ಯಕ್ಷಗಾನದ ಉಳಿವು-ಬೆಳವಣಿಗೆಗಾಗಿ ತನ್ನನ್ನು ತೊಡಗಿಸಿಕೊಂಡ ಹೆಮ್ಮೆಯ ಸಂಸ್ಥೆಯಾಗಿದೆ. ಉಳಿದ ಹವ್ಯಾಸಿ ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ಮಾದರಿಯಾಗಿದೆ ಎಂಬುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಭ್ಯಾಗತರಾದ ಡಾ.ರಾಜೇಶ್ ನಾವುಡ ಜಿ. ವಿ.ಮತ್ತು ಶ್ರೀ ಭವ್ಯಕುಮಾರ್ ಶುಭಾಶಂಸನೆಗೈದರು.ಮ೦ಡಳಿಯ ಅಧ್ಯಕ್ಷ ಕೆ.ಅಜಿತ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಸುನಿಲ್ ಕುಮಾರ್ ವರದಿ ವಾಚಿಸಿದರು.

ಸಮ್ಮಾನಿತರ ಮತ್ತು ಅತಿಥಿಗಳ ಪರಿಚಯವನ್ನು ಮಂಡಳಿಯ ಹಿರಿಯ ಸದಸ್ಯರಾದ ಮುರಲಿ ಕಡೆಕಾರ್ ಮಾಡಿದರು. ಕೋಶಾಧಿಕಾರಿ ಎ.ನಟರಾಜ ಉಪಾಧ್ಯಾಯ ನಿರ್ವಹಣೆಗೈದ ಕಾರ್ಯಕ್ರಮದ ಕೊನೆಯಲ್ಲಿ ಎ.ಪ್ರವೀಣ್‌ ಉಪಾಧ್ಯ ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದ ಬಳಿಕ ಕೋಟ ನರಸಿಂಹ ತುಂಗರ ನಿರ್ದೇಶನದಲ್ಲಿ ಮಂಡಳಿಯ ಬಾಲ ಕಲಾವಿದರಿಂದ ಮಾಯಾಪುರಿ-ವೀರಮಣಿ ಕಾಳಗ ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು.

“ಶರಸೇತು ಬಂಧನ” ಯಕ್ಷಗಾನ ಪ್ರದರ್ಶನ

ಶ್ರೀ ವಿಶ್ವವಿನಾಯಕ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಯಕ್ಷದೇಗುಲ ಬೆಂಗಳೂರು ಇವರ ಸಹಯೋಗದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ವಾರ್ಷಿಕ ಅವಭೃತ ಸ್ನಾನದ ಪ್ರಯುಕ್ತ ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ

ಸುದರ್ಶನ ಉರಾಳರ ಸಂಯೋಜನೆಯಲ್ಲಿ ದಿನಾಂಕ 17-01-2023 ರಂದು ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ನಾಗಪ್ಪಯ್ಯ ಹಂದೆ ರಂಗಮ0ಟಪದಲ್ಲಿ ಹಟ್ಟಿಯಂಗಡಿ ರಾಮ ಭಟ್ ವಿರಚಿತ “ಶರಸೇತು ಬಂಧನ” ಯಕ್ಷಗಾನ ಪ್ರದರ್ಶನ ನಡೆಯಿತು.


ಕಲಾವಿದರಾಗಿ ಸುಜಯೀಂದ್ರ ಹಂದೆ, ರಾಘವೇಂದ್ರ ಮಯ್ಯ, ಶಶಿಕಾಂತ ಶೆಟ್ಟಿ, ಮಹಾಬಲೇಶ್ವರ ಹೆಗಡೆ, ಲಂಬೋದರ ಹೆಗಡೆ, ರಾಘವೇಂದ್ರ ಹೆಗಡೆ, ಆದಿತ್ಯ ಹೆಗಡೆ, ಸುದೀಪ ಉರಾಳ್, ಉದಯ, ನವೀನ, ರಾಜು ಪೂಜಾರಿ, ಸುಹಾಸ್ ಇನ್ನೀತರು ಭಾಗವಹಿಸಿದರು.

ಕೋಟ ಸುದರ್ಶನ ಉರಾಳ
ಮೊ. 9448547237

‘ಶನೈಶ್ಚರ ಮಹಾತ್ಮೆ’ ಪೂಜಾ ಸಹಿತ ತುಳು ತಾಳಮದ್ದಳೆ

ಮಂಗಳೂರು: ದೇರಳಕಟ್ಟೆ ಶ್ರೀ ವೈದ್ಯನಾಥೇಶ್ವರ ಭಜನಾಮಂದಿರದ 15ನೇ ವಾರ್ಷಿಕ ಮಹೋತ್ಸವ ಸಲುವಾಗಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಬಗಂಬಿಲ ವೈದ್ಯನಾಥ ನಗರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಕರ್ನಾಟಕ ಯಕ್ಷ ಭಾರತಿ ಪುತ್ತೂರು ವತಿಯಿಂದ ಪೂಜಾ ಸಹಿತ ‘ಶ್ರೀ ಶನೈಶ್ಚರ ಮಹಾತ್ಮೆ  (ವಿಕ್ರಮಾದಿತ್ಯ ವಿಜಯ)’ ತುಳು ಯಕ್ಷಗಾನ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು.

         ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಾದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ವಿಕ್ರಮಾದಿತ್ಯ), ಅಶೋಕ ಶೆಟ್ಟಿ ಸರಪಾಡಿ (ಚಂದ್ರಶಯನ), ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು (ಅಲೋಲಿಕೆ),  ಪುತ್ತೂರು ದೇವರಾಜ ಹೆಗ್ಡೆ (ಶನೈಶ್ಚರ), ರವಿ ಅಲೆವೂರಾಯ ವರ್ಕಾಡಿ (ಸುಶೀಲೆ – ಪದ್ಮಾವತಿ), ಡಾ.ದಿನಕರ ಎಸ್. ಪಚ್ಚನಾಡಿ (ಆಸ್ಥಾನ ಪಂಡಿತ) ಮತ್ತು ಸುರೇಶ್ ಕೊಲೆಕಾಡಿ (ನಂದಿ ಶ್ರೇಷ್ಠಿ – ರಾಮಣ್ಣ ಗಾಣಿಗ) ಅರ್ಥಧಾರಿಗಳಾಗಿ ಭಾಗವಹಿಸಿದ್ದರು.

ಹಿಮ್ಮೇಳದಲ್ಲಿ ಹರೀಶ್ ಶೆಟ್ಟಿ ಸೂಡ (ಭಾಗವತರು), ಕೌಶಲ್ ರಾವ್ ಪುತ್ತಿಗೆ (ಮೃದಂಗ), ಸ್ಕಂದ ಕೊನ್ನಾರ್ (ಚಂಡೆ) ಮತ್ತು ಶರಣ್ ಶೆಟ್ಟಿ (ಚಕ್ರತಾಳ) ಸಹಕರಿಸಿದರು.

         ಶ್ರೀ ವೈದ್ಯನಾಥ ಸೇವಾ ಸಮಿತಿ ಅಧ್ಯಕ್ಷ ಪುರುಷೋತ್ತಮ ಅಂಚನ್ ವೈದ್ಯನಾಥನಗರ ಸ್ವಾಗತಿಸಿದರು. ಅರ್ಚಕರಾದ ವೆಂಕಟರಮಣ ಭಟ್ ಮತ್ತು ತಂಡದವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಪ್ರಮುಖರಾದ ಪುರುಷೋತ್ತಮ ಪೂಜಾರಿ, ಮೋನಪ್ಪ ಗಟ್ಟಿ, ಬಾಲಕೃಷ್ಣ ಶೆಟ್ಟಿ, ಪುಷ್ಪಲತಾ ಬಾಲಕೃಷ್ಣ ಶೆಟ್ಟಿ , ಶ್ವೇತಾ ವಿ., ಸುರೇಶ್ ಆಚಾರ್ಯ, ಶೇಖರ ಸಾಲ್ಯಾನ್, ಶ್ರವಣ್ ಕುಮಾರ್, ಕೃಷ್ಣ ನಾಯ್ಕ್, ಶಾಲಿನಿ ನಾಗರಾಜ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇಂದು ಆಟ ಎಲ್ಲೆಲ್ಲಿ? (18.01.2023, ಬುಧವಾರ)

ಮೇಳಗಳ ಇಂದಿನ (18.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಪಲಿಮಾರು ಕರ್ನಿರೆ = ಮಹಾಕಲಿ ಮಗಧೇಂದ್ರ 

ಕಟೀಲು ಒಂದನೇ ಮೇಳ == ಪೆರೋಡಿ ಶ್ರೀ ಲಕ್ಷ್ಮಿ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ == ಪಂಜ ವಯಾ ಹಳೆಯಂಗಡಿ –  ಭದ್ರಾಯು ಚರಿತ್ರೆ 

ಕಟೀಲು ಮೂರನೇ ಮೇಳ==  ಅಡವಾಡಿ ಪೆರ್ಡೂರು – ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ನಾಲ್ಕನೇ ಮೇಳ  ==   ಮೇಲ್ಜಡ್ಡು ಹೌಸ್ ಬೇಳಿಂಜೆ ಹೆಬ್ರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ದೇಲಂತಬೆಟ್ಟು ವಯಾ ಶಿಬರೂರು – ಬ್ರಹ್ಮ ಕಪಾಲ

ಕಟೀಲು ಆರನೇ ಮೇಳ == ನಿಶ್ಮಿತಾ ಟವರ್ಸ್ ಮೂಡಬಿದ್ರಿ – ಶ್ರೀ ದೇವಿ ಮಹಾತ್ಮೆ 

ಮಂದಾರ್ತಿ ಒಂದನೇ ಮೇಳ  ==  ಹುಣ್ಸೆ ಅಡಿ ಹೊಸೂರು – ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಅತ್ತಿಸರ ಶೇಡ್ಗಾರು 

ಮಂದಾರ್ತಿ ಮೂರನೇ ಮೇಳ  == ಮೇಳಿಗೆ ತೀರ್ಥಳ್ಳಿ 

ಮಂದಾರ್ತಿ ನಾಲ್ಕನೇ ಮೇಳ   == ಹುಣ್ಸೆ ಅಡಿ ಹೊಸೂರು – ಕೂಡಾಟ

ಮಂದಾರ್ತಿ ಐದನೇ ಮೇಳ  ==  ಯಡಾಡಿ ಮತ್ಯಾಡಿ 

ಹನುಮಗಿರಿ ಮೇಳ == ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಗೊರಟೆ ಮಹಾಸತಿ ಅಮ್ಮನವರ ದೈವಸ್ಥಾನ – ಚಿತ್ರಾ ನಕ್ಷತ್ರ 

ಶ್ರೀ ಪೆರ್ಡೂರು ಮೇಳ == ಬಾಳೆಬೇರು ಸಿದ್ಧಾಪುರ – ಸುದರ್ಶನ ವಿಜಯ, ಚಂದ್ರಹಾಸ ಚರಿತ್ರೆ, ಶ್ರೀನಿವಾಸ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕುರುಡುಮನೆ ವಿನಯ ಬಾರ್ ರೋಡ್, ತೆಕ್ಕಟ್ಟೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ಕಳಿ ಬಾಗಲಬೆಟ್ಟು ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಉಗ್ರಾಣಿಮನೆ ಚಿಕ್ಲಾಡಿ ರಾಗಿಹಕ್ಲು 

ಶ್ರೀ ಪಾವಂಜೆ ಮೇಳ == ಶ್ರೀ ಜಲದುರ್ಗಾ ದೇವಸ್ಥಾನ ಪೆರುವಾಜೆ ಬೆಳ್ಳಾರೆ – ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಮಣಿಗಾರಡಿ ಜನ್ಸಾಲೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಚೇರ್ಕಾಡಿ ಸಂಜೀವಿ ಭಾಸ್ಕರ ಮನೆ ವಠಾರ – ಸಾಲಿಕೇರಿ ಕ್ಷೇತ್ರ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಬೈಂದೂರು ಶ್ರೀ ಸೆನೇಶ್ವರ ದೇವಸ್ಥಾನ – ಶ್ರೀಮಂತ ಶ್ರೀ ರಾಜ ಗುಳಿಗ 

ಶ್ರೀ ಮಡಾಮಕ್ಕಿ ಮೇಳ == ಬಾಡ ಕೆಂಪಿನಕೆರೆ ಜಟ್ಟಿಗೇಶ್ವರ ದೇವಸ್ಥಾನ – ಪಂಚಗಿರಿ ಪಂಜುರ್ಲಿ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೈಂದೂರು ಶಿರೂರು ಶ್ರೀ ವೀರಗಲ್ಲು ಶ್ರೀ ವೀರ ಮಹಾಸತಿ ಅಮ್ಮನವರ ದೇವಸ್ಥಾನ – ಪೌರಾಣಿಕ ಪ್ರಸಂಗ 

ಶ್ರೀ ಹಿರಿಯಡಕ ಮೇಳ == ಯರುಕೋಣೆ ಹೊಸಗದ್ದೆ – ಶ್ರೀ ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಕುಳ್ಳಬಳ್ಳಿ ಮಹಾಗಣಪತಿ ದೇವಸ್ಥಾನ ವಠಾರ 

ಶ್ರೀ ನೀಲಾವರ ಮೇಳ  == ಅರೆಶಿರೂರು – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ   ==  ಹೆದ್ದೂರು ವನಚೇತನ ನಿಸರ್ಗ ಆಶ್ರಮ -ಸಭಾಭವನ  ಶ್ರೀಕೃಷ್ಣ ಲೀಲಾಮೃತ 

ಶ್ರೀ ಮೇಗರವಳ್ಳಿ ಮೇಳ ==  ಬಿದ್ಕಲ್ ಕಟ್ಟೆ – ಶ್ರೀದೇವಿ ಚೌಡೇಶ್ವರಿ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಮೂಡೂರ ಹಾಯಿಗುಳಿ ದೇವಸ್ಥಾನ ನೆಂಪು ಹಂದಕುಂದ – ದೀಕ್ಷಾ ಸಾಗರಿ 

ಶ್ರೀ ಹಾಲಾಡಿ ಮೇಳ == ಕೋಣಿ ಕೆಳಮನೆ – ನೂತನ ಪ್ರಸಂಗ 

ಶ್ರೀ ಬೋಳಂಬಳ್ಳಿ ಮೇಳ== ಕೋಟೆಬಾಗಿಲು – ಶಿವದುರ್ಗಾ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಸುಧೆಕ್ಕಾರು – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಕೆಪ್ಲಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಕಂಚೀಲ್ದ ಪರಕೆ

ಶ್ರೀ ಗೆಜ್ಜೆಗಿರಿ ಮೇಳ == ಕಕ್ಕೆಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ಕ್ಷೇತ್ರ – ವೃಷಭಾಸುರ ಕಾಳಗ, ಶ್ರೀನಿವಾಸ ಕಲ್ಯಾಣ 

ಪ್ರಥಮ ಯಕ್ಷಗಾನ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ

ಫೆಬ್ರವರಿ 11 ಮತ್ತು 12ರಂದು ಉಡುಪಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಪ್ರಥಮ ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಎಮ್.ಪ್ರಭಾಕರ ಜೋಶಿಯವರ ಮನೆಗೆ ಸಮ್ಮೇಳನದ ಕಾರ್ಯಾಧ್ಯಕ್ಷರಾದ ಡಾ.ಜಿ. ಎಲ್. ಹೆಗಡೆಯವರು ಭೇಟಿ ನೀಡಿ

ಡಾ. ಎಮ್.ಪ್ರಭಾಕರ ಜೋಶಿ ಮತ್ತು ಶ್ರೀಮತಿ ಸುಚೇತಾ ಜೋಶಿಯವರನ್ನು ಅಭಿನಂದಿಸಿ, ಸುಮಾರು ಒಂದು ಗಂಟೆಗಳ ಕಾಲ ಅವರೊಂದಿಗಿದ್ದು ಎರಡು ದಿನದ ಸಮ್ಮೇಳನದ ರೂಪುರೇಷೆ ಮತ್ತು ಈವರೆಗೆ ಆದ ಬೆಳವಣಿಗೆಯನ್ನು ತಿಳಿಸಿ, ಸುದೀರ್ಘ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸಹ ಸಂಚಾಲಕರಾದ ಮುರಲಿ ಕಡೆಕಾರ್, ನವನೀತ್ ಶೆಟ್ಟಿ ಕದ್ರಿ ಮತ್ತು ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ವಿ.ಸುನಿಲ್ ಕುಮಾರ್‌ ಅವರು ದೂರವಾಣಿಯ ಮೂಲಕ ಡಾ.ಜೋಶಿಯವರನ್ನು ಆಹ್ವಾನಿಸಿ ಅಭಿನಂದಿಸಿದರು.

ಇಂದು ಮಾಡಾವಿನಲ್ಲಿ ಯಕ್ಷಗಾನ ಪ್ರದರ್ಶನ – ಶ್ರೀ ದೇವಿ ಮಹಾತ್ಮೆ 

ಇಂದು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಮಾಡಾವು ಕಟ್ಟೆ ಎಂಬಲ್ಲಿ ಕಟೀಲು ಮೇಳದ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಟೀಲು ಒಂದನೇ ಮೇಳದವರು ‘ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನವನ್ನು ಆಡಿ ತೋರಿಸಲಿದ್ದಾರೆ.

ವಿವರಗಳಿಗೆ ಕರಪತ್ರ ನೋಡಿ 

ಇಂದು ಆಟ ಎಲ್ಲೆಲ್ಲಿ? (14.01.2023, ಶನಿವಾರ)

ಮೇಳಗಳ ಇಂದಿನ (14.01.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಬದ್ಯಾರು ಹಿಬರೋಡಿ ಅನುಗ್ರಹ ನಿಲಯದ ವಠಾರದಲ್ಲಿ – ಧನುರ್ಧರ ಧನಂಜಯ 

ಕಟೀಲು ಒಂದನೇ ಮೇಳ == ಮಾಡಾವುಕಟ್ಟೆ ಮಾಡಾವು ವಯಾ ಕುಂಬ್ರ ಪುತ್ತೂರು 

ಕಟೀಲು ಎರಡನೇ ಮೇಳ == ‘ ಶ್ರೀ ದೇವಿ ಪ್ರಸಾದ್’ ವಾಮಂಜೂರು ಮಂಗಳೂರು 

ಕಟೀಲು ಮೂರನೇ ಮೇಳ==  ಗರೋಡಿಮನೆ ಕುಂಪಣಮಜಲು ಸೀತಾರಾಮ ಭಜನಾ ಮಂದಿರದ ಬಳಿ ಫರಂಗಿಪೇಟೆ 

ಕಟೀಲು ನಾಲ್ಕನೇ ಮೇಳ  ==  ಬಜಾಲ್ ಗಾಣದಬೆಟ್ಟು ವಯಾ ಪಡೀಲ್ ಮಂಗಳೂರು 

ಕಟೀಲು ಐದನೇ ಮೇಳ == ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ 

ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ರಥಬೀದಿ ಮಂಗಳೂರು