Monday, September 21, 2026
Home Blog Page 74

ಕಟೀಲು ಆರು ಮೇಳಗಳ ಇಂದಿನ ಪ್ರಸಂಗಗಳು – 27.12.2023 ಬುಧವಾರ 

0

ಕಟೀಲು ಒಂದನೇ ಮೇಳ == ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರ – ಉದ್ದಿಷ್ಟಸಿದ್ಧಿ  

ಕಟೀಲು ಎರಡನೇ ಮೇಳ == ಪಾರೆಂಕಿ, ಮಡಂತ್ಯಾರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ == ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ ವಠಾರ, ಬೊಂಡಾಲ ಬಂಟ್ವಾಳ – ಸಗರಾಶ್ವಮೇಧ

ಕಟೀಲು ನಾಲ್ಕನೇ ಮೇಳ == ಬೀಚ್ ಹೌಸ್, ಕೊಪ್ಪಲಂಗಡಿ, ಕಾಪು –  ಶ್ರೀ ದೇವಿ ಮಹಾತ್ಮೆ   

ಕಟೀಲು ಐದನೇ ಮೇಳ == ಕೆಂಜಾರು, ಕಾನ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಬನತ್ತಡಿ ಅಡ್ಯಾರ್ – ಶ್ರೀ ದೇವಿ ಮಹಾತ್ಮೆ

ಹಠಾತ್ ಪ್ರವಾಹದಿಂದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಸೇತುವೆ – ವೀಡಿಯೋ

0


ಬ್ಯೂನಸ್ ಐರಿಸ್: ಅರ್ಜೆಂಟೀನಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ದಕ್ಷಿಣ ಅಮೆರಿಕಾದ ದೇಶವು ಪ್ರಸ್ತುತ ತೀವ್ರ ಪ್ರವಾಹದಿಂದ ಹೋರಾಡುತ್ತಿದೆ.

ಇತ್ತೀಚೆಗೆ, ವೀಡಿಯೊವೊಂದು ವೈರಲ್ ಆಗುತ್ತಿದ್ದು, ಸೋಮವಾರ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ ಪಾದಚಾರಿ ಸೇತುವೆಯೊಂದು ಕುಸಿದಿದೆ.

ಈ ಘಟನೆಯು ಪಂಪಾಸ್‌ನ ವಾಯುವ್ಯ ಮೂಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ರಿಂಕನ್ ನದಿಯ ನೀರಿನ ಮಟ್ಟದಲ್ಲಿ ಹಠಾತ್ ಉಲ್ಬಣದಿಂದಾಗಿ ಸೇತುವೆಯು ಕೊಚ್ಚಿಹೋಗಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಸೇತುವೆಗಳ ಬಳಿ ನಿಂತಿದ್ದ ಜನರು ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು.

ಕಟೀಲು ಆರು ಮೇಳಗಳ ಇಂದಿನ ಪ್ರಸಂಗಗಳು – 25.12.2023 ಸೋಮವಾರ 

0

ಕಟೀಲು ಒಂದನೇ ಮೇಳ == ಕಟೀಲು ಕ್ಷೇತ್ರ ಸರಸ್ವತಿ ಸದನ – ಕಲ್ಯಾಣತ್ರಯ (ಬ್ರಹ್ಮ, ವಿಷ್ಣು, ಮಹೇಶ್ವರ)

ಕಟೀಲು ಎರಡನೇ ಮೇಳ == ಅಡ್ಮ ಮನೆ, ಕೆಂಜಾರು – ಕಟೀಲು ಕ್ಷೇತ್ರ ಮಹಾತ್ಮೆ

ಕಟೀಲು ಮೂರನೇ ಮೇಳ == ಪಂಜ ಕೊಯಿಕುಡೆ ವಯಾ ಹಳೆಯಂಗಡಿ – ಸಮಗ್ರ ಭೀಷ್ಮ 

ಕಟೀಲು ನಾಲ್ಕನೇ ಮೇಳ == ಓಲ್ಡ್ ಕಾನ್ವೆಂಟ್ ರಸ್ತೆ, ಬಜ್ಪೆ –  ಶ್ರೀ ದೇವಿ ಮಹಾತ್ಮೆ   

ಕಟೀಲು ಐದನೇ ಮೇಳ == ಚಿಕ್ಕಿನಿವಾಸ ಪಡುಪಣಂಬೂರು – ಅಧ್ವರತ್ರಯ

ಕಟೀಲು ಆರನೇ ಮೇಳ == ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ, ಕುಕ್ಕುಂದೂರು ಕಾರ್ಕಳ – ಶ್ರೀ ದೇವಿ ಮಹಾತ್ಮೆ

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ತುಂಡಾಗಿ ಹಾರಿಹೋದ ಪಾಲಕ್ಕಾಡ್ ವ್ಯಕ್ತಿಯೊಬ್ಬನ ತಲೆ ;  ಮೂರೂವರೆ ಗಂಟೆಗಳ ಸುದೀರ್ಘ ಹುಡುಕಾಟದ ನಂತರ ಕೊನೆಗೂ ತಲೆ ಪತ್ತೆ

0

ಪಾಲಕ್ಕಾಡ್: ಇಲ್ಲಿನ ಅಂಬಟ್ಟುಪಾಳ್ಯಂ ಬಾಲಕರ ಎಚ್‌ಎಸ್‌ಎಸ್ ಬಳಿ ಸೋಮವಾರ ನಸುಕಿನ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ದಾರುಣ ಅಂತ್ಯ ಕಂಡಿದ್ದಾರೆ.  ಮೃತ – ಮಣಿಕಂಠನ್ (43) – ಅಪಘಾತದಲ್ಲಿ ಶಿರಚ್ಛೇದಿತವಾಗಿದ್ದು, ಮೂರೂವರೆ ಗಂಟೆಗಳ ಸುದೀರ್ಘ ಹುಡುಕಾಟದ ನಂತರ ಅವರ ತಲೆ ಪತ್ತೆಯಾಗಿದೆ.

 ಮಣಿಕಂಠನ್ ಜೀವನೋಪಾಯಕ್ಕಾಗಿ ಮೀನು ಮಾರಾಟ ಮಾಡುತ್ತಿದ್ದರು.  ಅವರು ದಿನದ ವ್ಯಾಪಾರಕ್ಕಾಗಿ ಪುತ್ತುನಗರದಿಂದ ಚಿತ್ತೂರಿಗೆ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 35 ಮೀಟರ್ ದೂರಕ್ಕೆ ಎಸೆಯಲ್ಪಟ್ಟು ಬೆಂಕಿ ಹೊತ್ತಿಕೊಂಡು ಸಂಪೂರ್ಣ ಜಖಂಗೊಂಡಿದೆ. 

ಮುಂಜಾನೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಅಪಘಾತದಲ್ಲಿ ಮಣಿಕಂಠನ್ ಅವರ ದೇಹವು ತುಂಡಾಗಿದೆ.  ಕಾರನ್ನು ವಿಳಯೋಡಿ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಚಲಾಯಿಸುತ್ತಿದ್ದರು. 

ಮಣಿಕಂಠನ್ ಅವರು ಪತ್ನಿ ಓಮನ ಮತ್ತು ಮಕ್ಕಳಾದ ಮನು ಮತ್ತು ಬಿನು ಅವರನ್ನು ಅಗಲಿದ್ದಾರೆ.

ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಹುಲಿಯನ್ನು ಹೆದರಿಸುವ ವೀಡಿಯೋ ವೈರಲ್

0


ಫಾರ್ಮುಲಾ ಒನ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಹುಲಿಯನ್ನು ಹೆದರಿಸುವ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮರುಕಳಿಸಿದೆ.

ಕ್ಲಿಪ್‌ನಲ್ಲಿ, ಬ್ರಿಟಿಷ್ ಚಾಲಕನು ಹುಲಿಯನ್ನು ಹಿಂದಿನಿಂದ ಸಮೀಪಿಸುತ್ತಿರುವುದನ್ನು ಕಾಣಬಹುದು.

ಏತನ್ಮಧ್ಯೆ, ಹುಲಿ, ಹಿಂದೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಗಮನ ಹರಿಸಿಲ್ಲ, ಈ ಸಮಯದಲ್ಲಿ ಹ್ಯಾಮಿಲ್ಟನ್ ಹುಲಿಯನ್ನು ಸ್ಪರ್ಶಿಸಿದಾಗ ಪ್ರಾಣಿಯು ತಬ್ಬಿಬ್ಬಾಯಿತು.

ಹುಲಿಯು ಭಯಭೀತಿಯಿಂದ ನೆಲದ ಮೇಲೆ ಪಲ್ಟಿ ಹೊಡೆಯಿತು. ಈ ಕೃತ್ಯವು ಎಲ್ಲರನ್ನೂ ನಗುವಂತೆ ಮಾಡಿತು.

ಯುವತಿಯನ್ನು ಬೆಂಕಿ ಹಚ್ಚಿ ಕೊಂದ ಆಕೆಯ ಗಂಡನ ಅಣ್ಣ – “ನಿಮ್ಮ ಸಹೋದರಿಗೆ ಬೆಂಕಿ ಹಚ್ಚಿದ್ದೇವೆ”: ಮಹಿಳೆಯ ಸಹೋದರನಿಗೆ ಅವಳ ಬಾವನಿಂದ ಕರೆ

0

ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಸೊಸೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ. ನಿರ್ಮಲಾ ಎಂಬ ಮಹಿಳೆ ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾಳೆ.


ಮಧ್ಯಪ್ರದೇಶದ ಭೋಪಾಲ್ ನಲ್ಲಿ ಮಹಿಳೆಯ ಪತಿ ಪ್ರಕಾಶ್ ಆರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕಾಶ್ ಅವರ ಹಿರಿಯ ಸಹೋದರ ಸುರೇಶ್, ಅತ್ತಿಗೆ ತನ್ನ ಕಿರಿಯ ಸಹೋದರನನ್ನು ಆತ್ಮಹತ್ಯೆಗೆ ಚಾಲನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಪತಿಯ ಮರಣದಿಂದ ನಿರ್ಮಲಾ ತನ್ನ ಇಬ್ಬರು ಮಕ್ಕಳೊಂದಿಗೆ ಅತ್ತೆಯ ಮನೆಯಲ್ಲಿ ವಾಸವಾಗಿದ್ದರು. ಆದಾಗ್ಯೂ, ಆಕೆಯ ಬಾವ ತನ್ನ ಕಿರಿಯ ಸಹೋದರನ ಸಾವಿಗೆ ಅವಳೇ ಕಾರಣ ಎಂದು ಆಕೆಯ ವಿರುದ್ಧ ದ್ವೇಷ ಸಾಧಿಸಿದನು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.


ಶನಿವಾರ ಮಹಿಳೆ ಮೇಲೆ ಸುರೇಶ್ ಹಲ್ಲೆ ನಡೆಸಿ ಮನೆಯಿಂದ ಹೊರಗೆಳೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಿಮ್ಮ ತಂಗಿಗೆ ಬೆಂಕಿ ಹಚ್ಚಿದ್ದೇವೆ’ ಎಂದು ಸುರೇಶ್‌ನಿಂದ ನಮಗೆ ಕರೆ ಬಂದಿತ್ತು. ಗಂಡನ ಸಾವಿಗೆ ನನ್ನ ತಂಗಿಯೇ ಕಾರಣ ಎಂದು ಆರೋಪಿಸುತ್ತಿದ್ದರು, ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನಿರ್ಮಲಾ ಅವರ ಸಹೋದರ ಸುದ್ದಿಗಾರರಿಗೆ ತಿಳಿಸಿದರು.


“ನಾನು ಇಂದು ಅವಳನ್ನು ಮನೆಗೆ ಕರೆತರಲು ಹೋಗಿದ್ದೆ, ಅವರು ಅವಳನ್ನು ಕೊಂದಿದ್ದಾರೆ ಎಂದು ಅವರು ನಮಗೆ ಕರೆ ಮಾಡಿದಾಗ” ಎಂದು ಅವರು ಹೇಳಿದರು.

ಸುರೇಶನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುರೇಶ್ ರಾವ್ ಬಾರ್ಕೂರು ಅವರಿಗೆ ಕಾಳಿಂಗ ನಾವಡ ಪ್ರಶಸ್ತಿ -2023

0

ಯಕ್ಷಗಾನ ಕಲೆಯ ಆಸಕ್ತಿಯ ವೀಕ್ಷಣೆಗೆ, ಹವ್ಯಾಸವಾಗಿರಿಸಿ ಕಲಿತು ಕುಣಿಯುವುದಕ್ಕೆ ಅಥವಾ ಅದನ್ನೇ ಬದುಕಿನ ದಾರಿಯಾಗಿಸಿಕೊಳ್ಳುವವರಿಗೆ ಕಲಾಕದಂಬ ಆರ್ಟ್ ಸೆಂಟರ್ ಒಂದು ಉತ್ತಮ ತಾಣವೆನಿಸಿದೆ. ಡಾ| ರಾಧಾಕೃಷ್ಣ ಉರಾಳ ಕೆ. ಅವರ ಕಲ್ಪನೆ ಪರಿಶ್ರಮದ ಫಲವಾಗಿ 2009ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಈ ಕಲಾಸಂಸ್ಥೆ ಯಕ್ಷಗಾನ, ನಾಟಕ, ನೃತ್ಯ, ವಾದ್ಯ ಸಂಗೀತ, ಜಾನಪದ, ಸಿನೆಮಾ ಹೀಗೆ ಎಲ್ಲಾ ರಂಗದಲ್ಲೂ ತನ್ನ ಛಾಪು ಬೀರಿದೆ. ಭಾರತೀಯ ರಂಗ ಕಲೆಗಳ ಪ್ರದರ್ಶನ, ಪರಿಚಯ, ತರಭೇತಿ, ಪರಿಣತಿ, ಶಾಲಾ ಮಕ್ಕಳಿಗೆ ಕಲಾ ಶಿಕ್ಷಣದ ಆಶಯಗಳನ್ನಿರಿಸಿಕೊಂಡು ಸಾಧನೆಯ ಹಾದಿಯಲಿ ಮುನ್ನಡೆದಿದೆ.


ಯಕ್ಷಗಾನ ಭಾಗವತಿಕೆಯ ಸ್ಥಾನಕ್ಕೆ ತಾರಾ ಮೆರುಗು ತಂದುಕೊಟ್ಟ ‘ಕಾಳಿಂಗ ನಾವಡ’ಯಕ್ಷಗಾನ ಪ್ರಪಂಚ ಮರೆಯದ ಹೆಸರು. ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿ ಮೂವತ್ತೆರಡನೇ ವಯಸ್ಸಿಗೇ ಪ್ರಶಂಸೆಯ ಗಿರಿಯೇರಿ, ಮೆರೆದು ಮರೆಯಾದವರು. ಕುಳಿತು ಕಲಿಸಿ ಶಿಷ್ಯರನ್ನು ಸಿದ್ಧಮಾಡದಿದ್ದರೂ ಇಂದಿಗೂ ತಮ್ಮ ಗಾನ ಮೋಡಿಯಿಂದ ಲಕ್ಷಾಂತರ ಪ್ರೇಕ್ಷಕರನ್ನು, ನೂರಾರು ಮಂದಿ ಗಾನಾಸಕ್ತರನ್ನು ಭಾಗವತಿಕೆಗೆ ಪ್ರೇರೇಪಿಸುತ್ತಿರುವ ಶಕ್ತಿ.

ತಂದೆ ರಾಮಚಂದ್ರ ನಾವಡ, ತಮ್ಮ ವಿಶ್ವನಾಥ ನಾವಡ ಕೂಡಾ ಭಾಗವತಿಕೆಗೆ ಹೆಸರಾಗಿದ್ದು, ಗುಂಡ್ಮಿ ಎಂದರೆ ನಾವಡರ ಮನೆ ಎಂಬ ನೆನಪು ಯಕ್ಷಕಲಾಸಕ್ತರ ಮನ ಮನದಲ್ಲಿ ಈಗಲೂ ಮರೆಯಲಾಗದ ನಾದಲಹರಿಯ ತರಂಗವನ್ನಿರಿಸಿದೆ.
ಈ ಯಕ್ಷಲೋಕದ ಗಾನದೇವತೆಯ ನೆನಪಿನಲ್ಲಿ ನಮ್ಮ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ.

ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಬ್ಬೂರು ನಾರಾಯಣ ಹೆಗಡೆ,ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ,ಶಂಕರ ಭಾಗವತ ಯಲ್ಲಾಪುರ ಹಾಗೂ ಬಿದ್ಕಲ್‌ಕಟ್ಟೆ ಕೃಷ್ಣಯ್ಯ ಆಚಾರ್ಯ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.

ಶ್ರೀ ಗುಂಡ್ಮಿ ಕಾಳಿಂಗ ನಾವಡ


ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು ಸುಮಾರು 25 ವರ್ಷಗಳಿಂದ ಹೂವಿನ ಕೋಲಿನ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ಹಲವಾರು ಯಕ್ಷಗಾನ ಮೇಳಗಳಲ್ಲಿ ತಮ್ಮ ಭಾಗವತಿಕೆಯ ಮೂಲಕಖ್ಯಾತ ಭಾಗವತರು ಎನಿಸಿಕೊಂಡಿರುವ ಹಾಗೂ ಪ್ರಸಂಗಕರ್ತರು ಆದ ಸುರೇಶ್ ರಾವ್ ಬಾರ್ಕೂರು ಅವರಿಗೆ ಉಡುಪಿ ಜಿಲ್ಲೆಯ ಕೋಟ ಹಂದಟ್ಟು ಗ್ರಾಮದ ಉರಾಳ ಕೇರಿಯ ವೇದಿಕೆಯಲ್ಲಿ 25-12-2023 ರ ಸಂಜೆ 6 ಘಂಟೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದು.


ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೇದ ಬ್ರಹ್ಮಶ್ರೀ ಕೆ ಅನಂತ ಪದ್ಮನಾಭ ಐತಾಳ್, ಕಾಳಿಂಗ ನಾವಡರ ಸಹೋದರ ಗಣಪಯ್ಯ ನಾವಡ, ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಉರಾಳ, ಹಾಗೂ ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳರು ಉಪಸ್ಥಿತರಿರಲಿದ್ದಾರೆ.


ಪ್ರಶಸ್ತಿ ಪ್ರದಾನದ ನಂತರ ಅತಿಥಿ ಕಲಾವಿದರಿಂದ “ಶರಸೇತು ಬಂಧನ ತಾಳಮದ್ದಲೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೋಟ ಸುದರ್ಶನ ಉರಾಳ್ ಮೊ: 9448547237

ಸರ್ಪಸಂಸ್ಕಾರ ಪೂಜಾ ಸೇವೆ – ಇಂದು ಜಾತ್ರಾ ಮಹೋತ್ಸವದ ಕೊನೆಯ ದಿನ – ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಳೆಯಿಂದ (ಡಿಸೆಂಬರ್ 25) ಸರ್ಪಸಂಸ್ಕಾರ ಸೇವೆ ಪುನರಾರಂಭ 

0

ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಳೆಯಿಂದ (ಡಿಸೆಂಬರ್ 25) ಸರ್ಪಸಂಸ್ಕಾರ ಸೇವೆ ಪುನರಾರಂಭವಾಗಲಿದೆ. 

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ – ಚಂಪಾಷಷ್ಠಿ ಮಹೋತ್ಸವ 10-12-2023ರಿಂದ ನಡೆಯುತ್ತಿದ್ದು ಅದು ಇಂದು 24-12-2023ರಂದು ಸಮಾಪ್ತಿಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಆ ದಿನಗಳಲ್ಲಿ ಸರ್ಪಸಂಸ್ಕಾರ ಸೇವೆ ನಡೆಯುವುದಿಲ್ಲ. 

ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ದ್ವಾದಶಿಯ ದಿನವಾದ ಆದಿತ್ಯವಾರ 10-12-2023ರಿಂದ 24-12-2023ರ ದ್ವಾದಶಿಯ ವರೆಗೆ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಇಂದು ಜಾತ್ರಾ ಮಹೋತ್ಸವದ ಕೊನೆಯ ದಿನವಾಗಿದೆ.

ಆದುದರಿಂದ ನಾಳೆಯಿಂದ ಎಂದಿನಂತೆ ದೇವಸ್ಥಾನದ ಎಲ್ಲಾ ಸೇವೆಗಳನ್ನು ನಡೆಸುವ ಅವಕಾಶ ಭಕ್ತಾದಿಗಳಿಗೆ ಲಭ್ಯವಾಗಲಿವೆ. 

ಯಕ್ಷಗಾನದಲ್ಲಿ ಡಿಪ್ಲೊಮೊ ಕೋರ್ಸ್ ಆರಂಭ

0

ವಿಶ್ವ ಪ್ರಸಿದ್ಧ ಕರ್ನಾಟಕದ ಪ್ರಾತಿನಿಧಿಕ ಕಲೆ ಯಕ್ಷಗಾನ. ದಿನದಿಂದ ದಿನಕ್ಕೆ ಇದರ ಜನಪ್ರಿಯತೆ ಹೆಚ್ಚುತ್ತಲೇ ಹೋಗುತ್ತಿದೆ. ಶಾಲಾ ಕಾಲೇಜುಗಳಲ್ಲಿಯೂ ಯಕ್ಷ ವೇಷ ಧರಿಸಿ ಪ್ರದರ್ಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ಯಕ್ಷಗಾನ ಆಸಕ್ತರಿಗೆ ಕಲಿಸುವ ಗುರುಗಳು, ಯಕ್ಷ ಶಿಕ್ಷಣ ಕೇಂದ್ರಗಳು ನಗರ ಹಾಗೂ ಕರಾವಳಿ ಭಾಗದಲ್ಲಿಬಹಳ. ಆದರೆ ಇದಕ್ಕೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಪರೀಕ್ಷೆ ನಡೆಸಿ ಡಿಪ್ಲೊಮೊ ಹಾಗೂ ಪ್ರಮಾಣ ಪತ್ರ (ಸರ್ಟಿಫಿûಕೇಟ್ ಕೋರ್ಸ್) ನೀಡುತ್ತಿರುವುದು ವಿರಳ.


ಇದೀಗ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಇದೇ ಪ್ರಥಮ ಬಾರಿಗೆ ಯಕ್ಷಗಾನದಲ್ಲಿ ಡಿಪ್ಲೊಮೊ ಹಾಗೂ ಪ್ರಮಾಣ ಪತ್ರ (ಸರ್ಟಿಫಿûಕೇಟ್ ಕೋರ್ಸ್) ತರಗತಿ ನಡೆಸುವ ಮಹತ್ವದ ಹೆಜ್ಜೆಯಿರಿಸಿದೆ. ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಮೂಲಕ ಯಕ್ಷಗಾನದಲ್ಲಿ ವಿಶ್ವ ವಿದ್ಯಾಲಯ ನಿಯಮಾನುಸಾರ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವುದಕ್ಕೆ ಸಜ್ಜಾಗಿದೆ ಎಂದು ಕಲಾಕದಂಬ ಆರ್ಟ್ ಸೆಂಟರ್ ಡಾ. ರಾಧಾಕೃಷ್ಣ ಉರಾಳ ತಿಳಿಸಿದ್ದಾರೆ.

ವಿಶ್ವವಿದ್ಯಾಲಯದೊಂದಿಗೆ ತತ್ಸಂಬಂಧಿತ ಪರಸ್ಪರ ಒಡಂಬಡಿಕೆಯ ಪತ್ರವನ್ನು ಮಾನ್ಯ ಕುಲಪತಿಗಳಾದ ಡಾ.ವಿ.ನಾಗೇಶ್ ಬೆಟ್ಟಕೋಟೆ ಹಾಗೂ ಕುಲಸಚಿವರಾದ ರಾಜೇಶ್ ಎಂ.ಆರ್ ಅವರಿಂದ ಪಡೆದಿದ್ದು ತರಗತಿಗಳು ಮುಂದಿನ ಜನವರಿಯಿಂದ ಆರಂಭಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಯಕ್ಷಗಾನದಲ್ಲಿ ಕಲಿಯುವ ಆಸಕ್ತರು, ಈಗಾಗಲೇ ಕಲಿಯುತ್ತಿರುವವರು ಕೂಡಾ ನಮ್ಮ ಸಂಸ್ಥೆಯ ಮೂಲಕ ವಿಶ್ವ ವಿದ್ಯಾಲಯದ ಮಾರ್ಗಸೂಚಿಯಂತೆ ತರಗತಿ ಹಾಗೂ ಪರೀಕ್ಷೆಯಲ್ಲಿ ಪಾಲ್ಗೊಂಡು ಪ್ರಮಾಣ ಪತ್ರವನ್ನು ಪಡೆಯುವುದಕ್ಕೆ ಅವಕಾಶವಿದೆ. ಯಕ್ಷಗಾನದ ಕಲಿಕೆಗೂ ವಿಶ್ವ ವಿದ್ಯಾಲಯದ ಮಾನ್ಯತಾ ಪತ್ರ ಸಿಗುವಂತಾಗಬೇಕೆಂಬ ಬಹುವರ್ಷಗಳ ಕನಸಿಗೊಂದು ಈಗ ಸಾಕಾರ ಸಿಕ್ಕಂತಾಗಿದೆ.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಮೂಲಕ ಯಕ್ಷಗಾನದಲ್ಲಿ ಡಿಪ್ಲೊಮೊ ಹಾಗೂ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುತ್ತಿರುವ ಪ್ರಪ್ರಥಮ ಸಂಸ್ಥೆ ಕಲಾಕದಂಬ ಆರ್ಟ್ ಸೆಂಟರ್ ಎಂಬುದು ಹೆಮ್ಮೆಯ ವಿಷಯ ಎಂದು ಡಾ. ರಾಧಾಕೃಷ್ಣ ಉರಾಳ ಸಂತಸ ಹಂಚಿಕೊಂಡರು. ಹೆಚ್ಚಿನ ವಿವರಗಳಿಗೆ ಕಲಾಕದಂಬ ಆರ್ಟ್ ಸೆಂಟರ್ ಸಂಪರ್ಕಿಸಬಹುದು 9448510582, 9886066732