Monday, August 3, 2026
Home Blog Page 55

ಕಾಣೆಯಾದ ಹದಿಹರೆಯದ ಯುವತಿಯ ದೇಹ ಪತ್ತೆ – ತಾಯಿಯ ಗೆಳೆಯನಿಂದ ಕೃತ್ಯ?

ಕಾಣೆಯಾದ ಫ್ಲೋರಿಡಾ ಹದಿಹರೆಯದ ಮೆಡೆಲಿನ್ ಸೊಟೊ ಅವರ ದೇಹವು ಪತ್ತೆಯಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್ ಕಚೇರಿ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

ಓಸ್ಸಿಯೋಲಾ ಕೌಂಟಿ ಶೆರಿಫ್ ಕಚೇರಿಯ ಶೋಧ ತಂಡಗಳು 13 ವರ್ಷದ ಹುಡುಗಿಯ ಶವವನ್ನು ಸ್ಥಳೀಯ ಸಮಯ ಸಂಜೆ 4:30 ಕ್ಕೆ ಹಿಕೋರಿ ಟ್ರೀ ರಸ್ತೆಯಿಂದ ಕಾಡಿನ ಪ್ರದೇಶದಲ್ಲಿ ಪತ್ತೆ ಮಾಡಿತು.

ಹದಿಹರೆಯದ ಹುಡುಗಿಯ ಕುಟುಂಬಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಶೆರಿಫ್ ಜಾನ್ ಮಿನಾ ಅವರು ಸೋಟೊ ಸತ್ತಿದ್ದಾರೆ ಎಂದು ತನಿಖಾಧಿಕಾರಿಗಳು ಘೋಷಿಸಿದರು

ಫೆ.26 ರಂದು ಸ್ಥಳೀಯ ಕಾಲಮಾನ ಬೆಳಗ್ಗೆ 8:30 ಗಂಟೆಗೆ ಆಕೆ ಕೊನೆಯದಾಗಿ ಕಾಣಿಸಿಕೊಂಡಿದ್ದು, ಹಸಿರು ಸ್ವೆಟ್‌ಶರ್ಟ್, ಕಪ್ಪು ಶಾರ್ಟ್ಸ್ ಮತ್ತು ಬಿಳಿ ಕ್ರೋಕ್ಸ್ ಬೂಟುಗಳನ್ನು ಧರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ತಡವಾಗಿ, ಅಧಿಕಾರಿಗಳು ಅವಳ ತಾಯಿಯ ಗೆಳೆಯ ಸ್ಟೀಫನ್ ಸ್ಟರ್ನ್ಸ್‌ನನ್ನು ಲೈಂಗಿಕ ಬ್ಯಾಟರಿ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತುಗಳನ್ನು ಹೊಂದಿದ್ದಕ್ಕಾಗಿ ಬಂಧಿಸಿದರು. 37 ವರ್ಷದ ಸ್ಟರ್ನ್ಸ್ ಆಕೆಯನ್ನು ನೋಡಿದ ಕೊನೆಯ ವ್ಯಕ್ತಿ.

ನಿಗೂಢವಾಗಿ ಕಣ್ಮರೆಯಾಗಿದ್ದ ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ವಿದೇಶಕ್ಕೆ?

ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾನಿಲಯದ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ವಿದೇಶಕ್ಕೆ ಹೋಗಿದ್ದಾರೆ ಎಂದು ಪೋಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಇಂಥದ್ದೊಂದು ವಿಷಯ ಬೆಳಕಿಗೆ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚೈತ್ರಾ ನಾಪತ್ತೆಯಾಗಿ 14 ದಿನಗಳಾಗಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.

ದೇರಳಕಟ್ಟೆಯ ಖಾಸಗಿ ಯುನಿರ್ವಸಿಟಿಯಲ್ಲಿ ಪಿಹೆಚ್‌ಡಿ ಮಾಡುತ್ತಿದ್ದ ಪುತ್ತೂರಿನ ಸಮೀಪದ ಮುಕ್ವೆಯ ಚೈತ್ರಾ ಹೆಬ್ಬಾರ್ ಕಾಣೆಯಾಗಿದ್ದಾಳೆ ಎಂದು ಬಗ್ಗೆ ಫೆ. 17 ರಂದು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಪುತ್ತೂರಿನ ಅನ್ಯ ಕೋಮಿನ ಯುವಕನೊಬ್ಬ ಚೈತ್ರಾ ತಂಗಿದ್ದ ಪಿಜಿಗೆ ಭೇಟಿ ನೀಡುತ್ತಿದ್ದ ಎಂಬ ಬಗ್ಗೆ ಮಾಡೂರಿನ ಬಜರಂಗದಳದ ಮುಖಂಡರು ಮಾಹಿತಿ ಕಲೆಹಾಕಿದ್ದರು. ಇದರ ಹಿಂದೆ ಡ್ರಗ್‌ ಮಾಫೀಯಾ ಜಾಲ ಇರುವುದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಬಜರಂಗದಳದ ಮುಖಂಡರು ಈ ಬಗ್ಗೆ ಎಚ್ಚರ ವಹಿಸುವಂತೆ ಚೈತ್ರಾ ದೊಡ್ಡಪ್ಪನಿಗೆ ಸೂಚನೆ ನೀಡಿದರು.

ಚೈತ್ರಾ ಬೆಂಗಳೂರಿನಿಂದ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿ ಅಲ್ಲಿಂದ ದೆಹಲಿಗೆ ಹೋಗಿ ದೆಹಲಿಯಿಂದ ವಿದೇಶಕ್ಕೆ ಹೋಗಿದ್ದಾಳೆ ಎಂಬ ಮಾಹಿತಿ ವಿಚಾರಣೆ ನಡೆಸಿದ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ಬಂಟ್ವಾಳ ನೇರಳೆಕಟ್ಟ ನಿವಾಸಿ ಚೈತ್ರಾ ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ಯುವಕನೊಂದಿಗೆ ತೆರಳಿರುವ ಶಂಕೆ ವ್ಯಕ್ತವಾಗಿತ್ತು. ಚೈತ್ರಾ ನಾಪತ್ತೆಯಾಗಿರುವ ಬಗ್ಗೆ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಸುರತ್ಕಲ್ ನಲ್ಲಿ ಚೈತ್ರಾ ಅವರ ಸ್ಕೂಟರ್ ಪತ್ತೆಯಾಗಿದ್ದು, ಅಲ್ಲಿನ ಎಟಿಎಂನಿಂದ ಹಣ ಡ್ರಾ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ.

ಚೈತ್ರಾ ಪುತ್ತೂರಿನ ಶಾರೂಕ್ ಶೇಖ್‌ ಎಂಬಾತನ ಜೊತೆ ಹೋಗಿರುವ ಸಂಶಯ ವ್ಯಕ್ತವಾಗಿತ್ತು. ಶಾರೂಕ್‌ ಶೇಖ್ ಈ ಹಿಂದೆ ವಿದೇಶದಲ್ಲಿ ಕೆಲಸ ಮಾಡಿದ್ದು ಕತಾರ್ ಜೈಲಿನಲ್ಲಿ ಒಂದು ವರ್ಷ ಶಿಕ್ಷೆಗೆ ಒಳಗಾಗಿದ್ದ ಎಂದು ತಿಳಿದುಬಂದಿದೆ.. ಚೈತ್ರಾ ಹೆಬ್ಬಾರ್‌ಗೆ ಗಾಂಜಾದ ಅಮಲು ತಲೆಗೆ ಹತ್ತಿಸಿದ್ದ ಶಾರೂಕ್‌ ಶೇಖ್‌ ಆಕೆಯನ್ನು ಬುಟ್ಟಿಗೆ ಹಾಕಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಚೈತ್ರಾ ನಾಪತ್ತೆ ಹಿಂದೆ ಇದ್ದ ಎನ್ನಲಾದ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಚೈತ್ರಾ ಜೊತೆಗಿದ್ದಕ್ಕೆ ಯಾವುದೇ ಸಾಕ್ಷ್ಯಾಧಾರ ಸಿಗದ ಕಾರಣ ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅಂತೂ ನಿಗೂಢವಾಗಿ ನಾಪತ್ತೆಯಾದ ಅಥವಾ ಡ್ರಗ್ ಮಾಫಿಯಾ ಜಾಲಕ್ಕೆ ಸಿಲುಕಿ ಬ್ಲಾಕ್ ಮೇಲ್ ಮತ್ತು ಅಪಹೃತಳಾಗಿರುವ ಸಾಧ್ಯತೆ ಇರುವ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ ಮತ್ತಷ್ಟು ನಿಗೂಢತೆಗಳನ್ನೇ ಸೃಷ್ಟಿಸುತ್ತಿದೆ.

16ರ ಹರೆಯದ ವಿದ್ಯಾರ್ಥಿನಿ ಬೆನೆಡಿಕ್ಟ್ ಶಾಲೆಯ ಸ್ನಾನಗೃಹದಲ್ಲಿ ಸಾವನ್ನಪ್ಪಿದ ಘಟನೆ – ಲೈಂಗಿಕ ಆಧಾರಿತ ಕಿರುಕುಳವನ್ನು ಸೂಕ್ತವಾಗಿ ಪರಿಹರಿಸಲು ಜಿಲ್ಲಾಡಳಿತ ವಿಫಲವಾಗಿದೆಯೇ ಎಂದು ತನಿಖೆ


16ರ ಹರೆಯದ ತೃತೀಯಲಿಂಗಿ ವಿದ್ಯಾರ್ಥಿ ಬೆನೆಡಿಕ್ಟ್ ಕಳೆದ ತಿಂಗಳು ಶಾಲೆಯ ಸ್ನಾನಗೃಹದಲ್ಲಿ ಮೂವರು ವಿದ್ಯಾರ್ಥಿಗಳೊಂದಿಗೆ ಜಗಳವಾಡಿ ಸಾವನ್ನಪ್ಪಿದ್ದು ಜಾಗತಿಕ ಮಾಧ್ಯಮಗಳ ಗಮನ ಸೆಳೆದಿತ್ತು.

16 ವರ್ಷ ವಯಸ್ಸಿನ ತೃತೀಯಲಿಂಗಿ ವಿದ್ಯಾರ್ಥಿ ನೆಕ್ಸ್ ಬೆನೆಡಿಕ್ಟ್ ಪ್ರೌಢಶಾಲೆಗೆ ಹಾಜರಾಗಿದ್ದ ಓಕ್ಲಹೋಮ ಶಾಲೆಯು ಲೈಂಗಿಕ ಆಧಾರಿತ ಕಿರುಕುಳಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಲು ವಿಫಲವಾಗಿದೆಯೇ ಎಂಬುದರ ಕುರಿತು ಶಿಕ್ಷಣ ಇಲಾಖೆಯು ತನಿಖೆಯನ್ನು ನಡೆಸುತ್ತಿದ್ದಾರೆ.

ತನ್ನ ದೂರಿನಲ್ಲಿ, HRC ಶಿಕ್ಷಣ ಇಲಾಖೆಯು “ಬೆನೆಡಿಕ್ಟ್ ಗೆ ಒಳಪಟ್ಟಿರುವ ತಾರತಮ್ಯ ಮತ್ತು ಕಿರುಕುಳವನ್ನು ಪರಿಹರಿಸಲು” ಈ ಶಾಲೆಯು ವಿಫಲವಾಗಿದೆ ಎಂದು ತಿಳಿಸಿದೆ.

“2023-2024ರ ಶೈಕ್ಷಣಿಕ ವರ್ಷದಲ್ಲಿ ಓವಾಸ್ಸೊ ಹೈಸ್ಕೂಲ್‌ನಲ್ಲಿ ಲೈಂಗಿಕ-ಆಧಾರಿತ ಕಿರುಕುಳಕ್ಕೆ ಸೂಕ್ತವಾಗಿ ಪ್ರತಿಕ್ರಿಯಿಸಲು ವಿಫಲವಾದ ಮೂಲಕ ಜಿಲ್ಲಾಡಳಿತವು ವಿದ್ಯಾರ್ಥಿಗಳ ವಿರುದ್ಧ ತಾರತಮ್ಯ ಮಾಡಿದೆ ಎಂದು ಈ ದೂರಿನಲ್ಲಿ ಆರೋಪಿಸಿಲಾಗಿದೆ.


“ಶೀರ್ಷಿಕೆ IX ನ ಅಗತ್ಯತೆಗಳಿಗೆ ಅನುಗುಣವಾಗಿರುವ ರೀತಿಯಲ್ಲಿ” ವಿದ್ಯಾರ್ಥಿಗಳ ಆಪಾದಿತ ಕಿರುಕುಳಕ್ಕೆ ಜಿಲ್ಲಾಡಳಿತವು ಸೂಕ್ತವಾಗಿ ಪ್ರತಿಕ್ರಿಯಿಸಲು ವಿಫಲವಾಗಿದೆಯೇ ಎಂದು ಇಲಾಖೆ ತನಿಖೆ ನಡೆಸಲಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಬೆನೆಡಿಕ್ಟ್ ಅವರ ಸಾವಿಗೆ ಕಾರಣವೇನು ಮತ್ತು ಇತರ ಮೂರು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಬೆನೆಡಿಕ್ಟ್ ಅವರ ಹೋರಾಟವು ಅವರ ಸಾವಿನಲ್ಲಿ ಪಾತ್ರವನ್ನು ವಹಿಸಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತದಲ್ಲಿ ಪತಿಯೊಂದಿಗೆ ಬೈಕ್ ಪ್ರವಾಸಕ್ಕೆ ತೆರಳಿದ್ದ ಸ್ಪೇನ್ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ


ಸ್ಪೇನ್ ನ ಯುವತಿ ಬೈಕ್ ಮೂಲಕ ಭಾರತ ಪ್ರವಾಸದಲ್ಲಿದ್ದು, ಪತಿಯೊಂದಿಗೆ ಜಾರ್ಖಂಡ್‌ನ ದುಮ್ಕಾ ಮೂಲಕ ಹಾದು ಹೋಗುತ್ತಿದ್ದರು. ಆಕೆಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಈ ಪೈಕಿ ಮೂವರನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಗುರುತಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಜಾರ್ಖಂಡ್‌ನ ದುಮ್ಕಾದಲ್ಲಿ ಸ್ಪೇನ್ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ತಿಳಿದುಬಂದಿದೆ.

ಮಹಿಳೆ ಮತ್ತು ಆಕೆಯ ಪತಿ ಬೈಕರ್‌ಗಳಾಗಿದ್ದು, ಪಶ್ಚಿಮ ಬಂಗಾಳದಿಂದ ಬಂದು ನೇಪಾಳದ ಕಡೆಗೆ ಜಾರ್ಖಂಡ್‌ನ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದರು ಎಂದು ದುಮ್ಕಾ ಪೊಲೀಸ್ ವರಿಷ್ಠಾಧಿಕಾರಿ ಪಿತಾಂಬರ್ ಸಿಂಗ್ ಖೈರ್ವಾರ್ ತಿಳಿಸಿದ್ದಾರೆ. ಖೈರ್ವಾರ್ ಶುಕ್ರವಾರ ರಾತ್ರಿ ಅಪರಾಧ ಸ್ಥಳಕ್ಕೆ ತೆರಳಿದ್ದು, ಅಲ್ಲಿಂದ ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ.

ಸಂಜೆಯ ವೇಳೆಯಲ್ಲಿ, ದಂಪತಿಗಳು ವಿಶ್ರಾಂತಿ ಪಡೆಯಲು ನಿಲ್ಲಿಸಿದರು ಮತ್ತು ದುಮ್ಕಾದ ಕುಂಜಿ ಗ್ರಾಮದಲ್ಲಿ ತಾತ್ಕಾಲಿಕ ಟೆಂಟ್ ಹಾಕಿದರು. ಆಗ ಏಳು ಮಂದಿ ಅವರ ಟೆಂಟ್ ಗೆ‌ ನುಗ್ಗಿ ಯುವತಿಯ ಮೇಲೆ ಸರದಿ ಅತ್ಯಾಚಾರ ನಡೆಸಿದರು.

ಸ್ಪ್ಯಾನಿಷ್ ಮಹಿಳೆ ಪ್ರಸ್ತುತ ಸರೈಯಾಹತ್ ಸಮುದಾಯ ಆರೋಗ್ಯ ಕೇಂದ್ರದ (CHC) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂತರ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಮಹಿಳೆ ಹಾಗೂ ಆಕೆಯ ಪತಿ ಇಬ್ಬರೂ ಮುಖ್ಯರಸ್ತೆಯಲ್ಲಿ ಅಸ್ವಸ್ಥತೆಯಿಂದ ಬಿದ್ದಿರುವುದು ಕಂಡುಬಂದಿದೆ.

ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ ಎಂದು ಖೈರ್ವಾರ್ ಹೇಳಿದ್ದಾರೆ. ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದ್ದು, ವಿಧಿವಿಜ್ಞಾನ ತಜ್ಞರನ್ನೂ ನಿಯೋಜಿಸಲಾಗಿದೆ.

ಮೆಣಸಿನ ಪುಡಿ ಎರಚಿ ಚಿನ್ನ ಮತ್ತು ಹಣವನ್ನು ದೋಚಿದ ಬುರ್ಖಾ ಧರಿಸಿದ ಮಹಿಳೆಯ ಬಂಧನ

0

ಚಿಟ್ ಫಂಡ್ ಕಂಪನಿಯೊಂದರ ಮಾಲೀಕನ ಮುಖಕ್ಕೆ ಮೆಣಸಿನ ಪುಡಿ ಎರಚಿ ಚಿನ್ನಾಭರಣ ಹಾಗೂ ಹಣ ದೋಚಿದ್ದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಇಲ್ಲಿ ಬಂಧಿಸಲಾಗಿದೆ.

ಬಂಧಿತ ಪಾಲಕ್ಕಾಡ್‌ನ ಕರಿಂಪುಳದ ಪಡಿಂಜರೆತಿಲ್‌ನ ಫಸೀಲಾ (36) ತ್ರಿಪುಣಿತುರಾದಲ್ಲಿ ಬಾಡಿಗೆಗೆ ವಾಸಿಸುತ್ತಿದ್ದಾರೆ.

ಫೆಬ್ರವರಿ 21 ರಂದು ಬೆಳಿಗ್ಗೆ 9:30 ಕ್ಕೆ ಈ ಘಟನೆ ನಡೆದಿದೆ. ಬುರ್ಖಾ ಧರಿಸಿದ್ದ ಫಸೀಲಾ ಹಳೆ ಬಸ್ ನಿಲ್ದಾಣದ ಬಳಿ ಸ್ಯಾನ್ ಪ್ರೀಮಿಯರ್ ಚಿಟ್ಸ್ ಮಾಲೀಕ ಕೆ.ಎನ್.ಸುಕುಮಾರಮೆನನ್ (75) ಎಂಬುವರ ಮೇಲೆ ಹಲ್ಲೆ ನಡೆಸಿ ಮೂರು ಪವನ್ ಸರ ಹಾಗೂ 10 ಸಾವಿರ ರೂ. ದೋಚಿದ್ದಾಳೆ

ಆ ಸಮಯದಲ್ಲಿ ಸಂಸ್ಥೆಯಲ್ಲಿ ಬೇರೆ ಯಾರೂ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾಗಳನ್ನು ಕೇಂದ್ರೀಕರಿಸಿದ ತನಿಖೆಯ ಸಮಯದಲ್ಲಿ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ ಮತ್ತು ಮಂಗಳವಾರ ಬೆಳಿಗ್ಗೆ ಪಾಲಕ್ಕಾಡ್‌ನಿಂದ ಬಂಧಿಸಿದ್ದಾರೆ. ‘

ತನ್ನ ಮಾವನಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದಲ್ಲಿ ಫಸೀಲಾಗೆ ಈ ಮೊದಲು ಶಿಕ್ಷೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಹಣ ಹುಡುಕುವುದೇ ಆಕೆಯ ದರೋಡೆ ಅಭ್ಯಾಸವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪಟ್ಲ ಫೌಂಡೇಶನ್ ನಡೆಸಿದ ಯಕ್ಷಗಾನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ

0

ಯಕ್ಷಧ್ರುವ ಪಟ್ಲ ಫೌಂಡೇಶನ್,ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ, ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ, ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ 2023-24,ಫೆ.6, ರಂದು ಮೂಡುಬಿದಿರೆಯಲ್ಲಿ ಆಯೋಜಿಸಿತ್ತು.

ಇಲ್ಲಿ ಏರ್ಪಡಿಸಿದ್ದ ಯಕ್ಷಗಾನ ಮುಖವರ್ಣಿಕೆ ಸ್ಪರ್ಧೆಯಲ್ಲಿ ಬ್ರಹ್ಮಾವರ ಲಿಟ್ಲ್ ರಾಕ್ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ಮಾನ್ಯಾ ಜಿ.ಭಂಡಾರಿ ಪ್ರಥಮ ಸ್ಥಾನ(₹5000), ವಿದ್ಯೋದಯ ಪಬ್ಲಿಕ್ ಸ್ಕೂಲ್ ನ 7ನೇ ತರಗತಿಯ ಶ್ರಾವ್ಯಾ ಯು. ದ್ವಿತೀಯ ಸ್ಥಾನ(₹3000),

ಯಕ್ಷ ಜ್ಞಾನ ಪರೀಕ್ಷಾ ಸ್ಪರ್ಧೆಯಲ್ಲಿ ವಳಕಾಡು ಸರಕಾರಿ ಪ್ರೌಢಶಾಲೆಯ 8ನೇ ತರಗತಿಯ ಮೇಧಾ ದ್ವಿತೀಯ ಸ್ಥಾನ(₹3000) ಗಳಿಸಿದ್ದು, ಇವರಿಗೆ ಸ್ಮರಣಿಕೆ, ಪ್ರಶಂಸಾಪತ್ರ, ನಗದು ಪುರಸ್ಕಾರಗಳನ್ನು

ಯಕ್ಷಧ್ರುವ ಯಕ್ಷಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ ಹಾಗೂ ಸಂಯೋಜಕರಾದ ದಿವಿತ್ ಎಸ್.ಕೋಟ್ಯಾನ್ 24-2-2024 ರಂದು ಯಕ್ಷಗಾನ ಕಲಾರಂಗದ ಕಚೇರಿಯಲ್ಲಿ ಪ್ರದಾನ ಮಾಡಿದರು.

ಕಟೀಲು 4ನೇ ಮೇಳದವರಿಂದ ಇಂದು ಅಮೋಘ ಯಕ್ಷಗಾನ ಪ್ರದರ್ಶನ – ಪುತ್ರಕಾಮೇಷ್ಠಿ, ಸೀತಾಪಹಾರ, ಜಟಾಯು ಮೋಕ್ಷ, ರಾವಣ ವಧೆ, ಶ್ರೀರಾಮ ನಿಜ ಪಟ್ಟಾಭಿಷೇಕ

0

ಯಕ್ಷಗಾನ ಪ್ರೇಮಿಗಳಿಗೆ ಇಂದು, ಫೆಬ್ರವರಿ 25ಕ್ಕೆ ಅಮೋಘ ಯಕ್ಷಗಾನ ಪ್ರದರ್ಶನ ಸವಿಯುವ ಭಾಗ್ಯ ದೊರೆಯಲಿದೆ.

ಪುತ್ತೂರು ಸಮೀಪದ ಬಿಲ್ವಗಿರಿ ಬೆಟ್ಟಂಪಾಡಿಯಲ್ಲಿ ಈ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಇಂದು ಅಂದರೆ ದಿನಾಂಕ 25.02.2024ನೇ ಆದಿತ್ಯವಾರ ಸಂಜೆ ಘಂಟೆ 5.30ಕ್ಕೆ ಸರಿಯಗಿ ಶ್ರೀ ದುರ್ಗಾಂಬಾ ಕಲಾ ವೇದಿಕೆ, ಬಿಲ್ವಗಿರಿ ಬೆಟ್ಟಂಪಾಡಿ ಇಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ

‘ಪುತ್ರಕಾಮೇಷ್ಠಿ, ಸೀತಾಪಹಾರ, ಜಟಾಯು ಮೋಕ್ಷ, ರಾವಣ ವಧೆ, ಶ್ರೀರಾಮ ನಿಜ ಪಟ್ಟಾಭಿಷೇಕ’ ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ನಿರೋಧ, ತಡೆಗಳು ಇವರಿಗೆ ಮಾತ್ರವೇ? ಸರ್ಪಸಂಸ್ಕಾರ ಪೂಜೆ ಮಾಡುವವರಿಗೆ  ಬೇಕಾಗಿದೆ ಜೀವನಕ್ಕೊಂದು ಆರ್ಥಿಕ ಭದ್ರತೆ 

0

ಈ ಪ್ರಪಂಚದಲ್ಲಿ ಎಂತೆಂತಹ ವೃತ್ತಿಗಳನ್ನು ಕೈಗೊಂಡು ಬದುಕನ್ನು ನಡೆಸುವವರಿದ್ದಾರೆ ಎಂದು ಯೋಚಿಸಿದಾಗ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಕೆಲವೊಂದು ದೇಶಗಳಲ್ಲಿ ಚಿತ್ರವಿಚಿತ್ರವಾದ ವೃತ್ತಿ, ಉದ್ಯೋಗಗಳನ್ನು ಮಾಡಿಕೊಂಡು ಜೀವನ ಸಾಗಿಸುವವರಿದ್ದಾರೆ. ಅದರಲ್ಲಿಯೂ ಆಫ್ರಿಕಾದ  ದೇಶಗಳಲ್ಲಿ, ದಕ್ಷಿಣ ಅಮೆರಿಕಾ ಖಂಡದ ದೇಶಗಳಲ್ಲಿ, ಚೀನಾ, ಅರಬಿಕ್ ರಾಷ್ಟ್ರಗಳಲ್ಲಿ ಕೆಲವೊಂದು ರೀತಿಯ ವಿಚಿತ್ರವಾದ ವೃತ್ತಿಗಳಿವೆ. ಅದೇ ರೀತಿ ನಮ್ಮ ದೇಶದಲ್ಲಿಯೂ ಕೂಡ ಅಂತಹಾ, ನಾವು ಊಹಿಸದೇ ಇರುವಂತಹಾ ವೃತ್ತಿಗಳಿವೆ. 

ಇದರಲ್ಲೇನು ವಿಶೇಷ? ‘ಉದರನಿಮಿತ್ತಂ ಬಹುಕೃತ ವೇಷಂ’ ಎಂದು ಕೆಲವರು ವಾದಿಸಬಹುದು. ಅದು ಕೂಡಾ ಒಪ್ಪುವ ಮಾತೇ ಸರಿ. ಎಲ್ಲಾ ಉದ್ಯೋಗಗಳಲ್ಲಿಯೂ ಅದರದ್ದೇ ಆದ ನಿಯಮಗಳು, ಪ್ರತಿಬಂಧಕಗಳು ಇದ್ದೆ ಇರುತ್ತವೆ. ಆದರೆ ಕೆಲವೊಂದು ಉದ್ಯೋಗದಲ್ಲಿರುವ ನಿರೋಧ, ಅಡೆತಡೆ, ನಿಯಮಗಳು ನಿಮ್ಮನ್ನು ಸಾಮಾಜಿಕ ಜೀವನದಿಂದ ಪರೋಕ್ಷವಾಗಿ ವಿಮುಖರಾಗುವಂತೆ ಮಾಡುತ್ತವೆ.

ಅಂತಹ ಸಂದರ್ಭದಲ್ಲಿ ನೀವು ಸಾರ್ವಜನಿಕವಾಗಿ ದೇವಸ್ಥಾನಗಳಲ್ಲಿ ಪ್ರವೇಶ ಮಾಡಲು ಸಾಧ್ಯವಿಲ್ಲ, ನಿಮಗೆ ಶುಭ ಸಮಾರಂಭಗಳಲ್ಲಿ ಮುಕ್ತವಾಗಿ ಎಲ್ಲರೊಡನೆ ಬೆರೆಯಲು ಅಸಾಧ್ಯ.  

ಇನ್ನು ವಿಷಯಕ್ಕೆ ಬರೋಣ. ಭಾರತದಲ್ಲಿಯೇ ಖ್ಯಾತಿಯನ್ನು ಪಡೆದಿರುವಂತಹ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಗದೇವರ ಸಾನ್ನಿಧ್ಯವಿರುವ ದೇವಸ್ಥಾನ. ಇಲ್ಲಿ ನಾಗದೇವರಿಗೆ ಸಂಬಂಧಿತ ಎಲ್ಲಾ ಸೇವೆಗಳು ನಡೆಯುತ್ತವೆ. ಅಂತಹ ಸೇವೆಗಳನ್ನು ನಡೆಸುವ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವೂ ಒಂದು.

ಆಶ್ಲೇಷ ಬಲಿ, ಸರ್ಪಸಂಸ್ಕಾರ ಪೂಜೆ, ನಾಗಪ್ರತಿಷ್ಠೆ, ನಾಗತಂಬಿಲ ಮೊದಲಾದ ಸೇವೆಗಳಿಗೆ ಇಲ್ಲಿ ಪ್ರತಿದಿನವೂ ಅತಿಯಾದ ಜನಜಂಗುಳಿಯಿರುತ್ತದೆ. ಅದರಲ್ಲಿಯೂ ಸರ್ಪಸಂಸ್ಕಾರ ಪೂಜೆ ಮತ್ತು ಆಶ್ಲೇಷ ಬಲಿ, ನಾಗಪ್ರತಿಷ್ಠೆ ಸೇವೆಗಳಿಗೆ ವಿಪರೀತ ರಷ್. ಸರ್ಪಸಂಸ್ಕಾರ ಪೂಜೆಯಂತೂ ಕೇಳುವುದೇ ಬೇಡ. ಸರ್ಪಸಂಸ್ಕಾರ ಪೂಜೆಗಾಗಿ ನೀವು ಆನ್ಲೈನ್ ನಲ್ಲಿ ಮುಂಗಡ ಕಾಯ್ದಿರಿಸಬೇಕಾದರೆ ಸುಮಾರು ಒಂದೂವರೆ ತಿಂಗಳಿನಿಂದ ಎರಡು ತಿಂಗಳುಗಳ ವರೆಗೆ ಕಾಯಬೇಕು. ಈ ಸೇವಾಕಾಂಕ್ಷಿ ಭಕ್ತರು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮಹಿಮೆ. 

ಇನ್ನು ಸರ್ಪಸಂಸ್ಕಾರ ಪೂಜೆಯ ಬಗ್ಗೆ ಹೇಳುವುದಾದರೆ ಪ್ರತಿಯೊಬ್ಬ ಸೇವಾಕರ್ತರ ಪೂಜೆಗೂ ಇಲ್ಲಿ ಪ್ರತ್ಯೇಕವಾದ ಅರ್ಚಕರು (ಈ ಅರ್ಚಕರನ್ನು ಇಲ್ಲಿ ಸರ್ಪಸಂಸ್ಕಾರ ಕ್ರಿಯಾಕರ್ತರು ಎಂದು ಕರೆಯಲಾಗುತ್ತದೆ) ಇರುತ್ತಾರೆ. ಈ ಸರ್ಪಸಂಸ್ಕಾರ ಕ್ರಿಯಾಕರ್ತರು ಅಥವಾ ಅರ್ಚಕರನ್ನು ತಾತ್ಕಾಲಿಕ ದಿನಗೂಲಿ ಆಧಾರದ ಮೇಲೆ ದೇವಸ್ಥಾನದ ಆಡಳಿತ ಮಂಡಳಿಯೇ ನೇಮಕ ಮಾಡುತ್ತಿದೆ. ಸಾಧಾರಣವಾಗಿ ಸುಮಾರು ಇನ್ನೂರರ ಆಸುಪಾಸಿನ ಸಂಖ್ಯೆಯಲ್ಲಿ ಅಂತಹ ಅರ್ಚಕರಿದ್ದಾರೆ. ಒಂದು ಸರ್ಪಸಂಸ್ಕಾರ ಪೂಜೆಯು ಎರಡು ದಿನಗಳ ಕಾಲ ನಡೆಯುವುದರಿಂದ ಪೂಜಾಕರ್ತರಿಗೆ ಅಥವಾ ಕ್ರಿಯಾಕರ್ತರಿಗೆ ಎರಡು ದಿನಗಳಲ್ಲಿ ಸಂಭಾವನೆಯಾಗಿ ರೂ. 850/- ನೀಡಲಾಗುತ್ತದೆ. 

 ಇವರಿಗೆ ಸರ್ಪಸಂಸ್ಕಾರ ಕ್ರಿಯಾಕರ್ತರು ಎಂಬ ಹೆಸರು ಹೇಗೆ ಬಂತು ಎಂಬುದು ಗೊತ್ತಿಲ್ಲ. ಹಾಗೆ ನೋಡಿದರೆ ಪ್ರತಿಯೊಬ್ಬರೂ ಕ್ರಿಯಾಕರ್ತರೇ ಆಗಿರುತ್ತಾರೆ. ಎಲ್ಲರೂ ಒಂದಲ್ಲ ಒಂದು ಕ್ರಿಯೆಯಲ್ಲಿ ತೊಡಗಿರುವವರಾದ್ದರಿಂದ ಎಲ್ಲರೂ ಕ್ರಿಯಾಕರ್ತರು. ಆದರೆ ಇವರು ಸರ್ಪಸಂಸ್ಕಾರದ ಪೂಜೆಯನ್ನು ಮಾಡುವವರಾದ್ದರಿಂದ ‘ಸಹಾಯಕ ಅರ್ಚಕ’ರೆಂದು ಕರೆಯುವುದು ಉಚಿತ ಮತ್ತು ಅಗತ್ಯವೂ ಕೂಡ. ಆದರೆ ಅದಕ್ಕೆ ಬೇಕಾದ ಮೇಲ್ಮಟ್ಟದ ನೈತಿಕತೆ ಮತ್ತು ಸ್ವಭಾವವನ್ನು ಕ್ರಿಯಾಕರ್ತರು ಮೈಗೂಡಿಸಿಕೊಳ್ಳುವ ಅಗತ್ಯ ಖಂಡಿತವಾಗಿಯೂ ಇದೆ. 

ಸರ್ಪಸಂಸ್ಕಾರ ಪೂಜಾ ಸೇವೆ ಎರಡು ದಿನಗಳಲ್ಲಿ ನಡೆಯುತ್ತದೆ. ಪೂಜೆ ಪ್ರಾರಂಭವಾಗುವುದು ಮೊದಲನೆಯ ದಿನ ಸುಮಾರು ಒಂಭತ್ತು ಘಂಟೆಗೆ. ಆದಿನ ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ ಮುಗಿಯುತ್ತದೆ. ದಯವಿಟ್ಟು ಗಮನಿಸಿ. ಇಲ್ಲಿಗೆ ಪೂಜೆಯ ಅರ್ಧ ಭಾಗ ಮಾತ್ರ ಆಗಿರುತ್ತದೆ. ಉಳಿದರ್ಧ ಮರುದಿನ ಪ್ರಾತಃಕಾಲ ಐದೂವರೆ ಘಂಟೆಯಿಂದೆ ಏಳು ಘಂಟೆಯವರೆಗೆ ನಡೆಯುತ್ತದೆ.

ಒಂದನೇ ದಿನದ ಪೂಜೆ ಮಾಡಿದ ನಂತರ ಸೇವಾಕರ್ತರು ಒಂದು ದಿನದ ಸೂತಕ, ಮೈಲಿಗೆಯನ್ನು ಆಚರಿಸಬೇಕಾಗುತ್ತದೆ. ಎರಡನೇ ದಿನದ ಪೂಜೆ ಮುಗಿಯುವವರೆಗೆ ಅವರು ದೇವಸ್ಥಾನದ ಒಳಗಿನ ಪ್ರಾಂಗಣವನ್ನು ಪ್ರವೇಶ ಮಾಡುವಂತಿಲ್ಲ.

ಸೇವಾಕರ್ತರಿಗೆ ಕೇವಲ ಒಂದು ದಿನ ದೇವಸ್ಥಾನದ ಪ್ರವೇಶ ನಿಷಿದ್ಧ, ಆದರೆ ಸರ್ಪಸಂಸ್ಕಾರ ಅರ್ಚಕರಿಗೆ ಪ್ರತಿದಿನವೂ ದೇವಸ್ಥಾನದ ಪ್ರವೇಶ ನಿಷಿದ್ಧ! ಯಾಕೆಂದರೆ ಪ್ರತಿದಿನವೂ ಸರ್ಪಸಂಸ್ಕಾರ ಪೂಜೆ ಮಾಡುತ್ತಾರಲ್ಲ! ಅಷ್ಟು ಮಾತ್ರವಲ್ಲ, ಶುಭ ಸಮಾರಂಭ ಮತ್ತು ಮಂಗಳ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತಿಲ್ಲ. ಇನ್ನು ತನ್ನ ಮನೆಯ ಪೂಜೆಯನ್ನು ಮಾಡುವ ವಿಧಾನದ ಬಗ್ಗೆ ಸರಿಯಾದ ಮಾಹಿತಿಯನ್ನು ಬಲ್ಲವರೇ ತಿಳಿಸಬೇಕು. 

 ಸ್ವಲ್ಪ ಯೋಚಿಸಿ ನೋಡಿ, ಎರಡನೇ ದಿನ ಪೂಜೆ ಮುಗಿದ ನಂತರ ಅಂದರೆ ಬೆಳಗ್ಗೆ ಸುಮಾರು ಏಳು ಘಂಟೆಯ ಹೊತ್ತಿಗೆ ಮೈಲಿಗೆ ನಿವಾರಣೆಯಾಗುತ್ತದೆ. ಆದರೆ ಒಂಭತ್ತು ಘಂಟೆಯ ಹೊತ್ತಿಗೆ ಮತ್ತೆ ಇನ್ನೊಂದು ಪೂಜೆಗೆ ಕ್ರಿಯಾಕರ್ತರು ತಯಾರಾಗಿ ಇರಬೇಕಾಗಿರುವುದರಿಂದ ಅವರಿಗೆ ಕೇವಲ ಒಂದು ಘಂಟೆಯ ಹೊತ್ತು ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ. ಆದುದರಿಂದ ಸುಬ್ರಹ್ಮಣ್ಯ ದೇವಸ್ಥಾನವನ್ನು ಆ ಹೊತ್ತಿನಲ್ಲಿ ಸಂದರ್ಶಿಸಬಹುದೇ ಹೊರತು ಬೇರೆ ಯಾವುದೇ ದೇವಸ್ಥಾನವನ್ನು ಪ್ರವೇಶ ಮಾಡುವ ಅವಕಾಶವೇ ಇರುವುದಿಲ್ಲ.

ಮುಂಜಾನೆ ಎದ್ದು ದೇವರ ದರ್ಶನಕ್ಕಾಗಿಯೋ ಅಥವಾ ಸಾಯಂಕಾಲದ ಹೊತ್ತಿನ ದೇವಸ್ಥಾನದ ಭೇಟಿಗೆ ಅವಕಾಶ ಇರುವುದಿಲ್ಲ. ಅದೂ ಅಲ್ಲದೇ ಇವರು ಬೇರೆ ಯಾವುದೇ ಪುಣ್ಯಕ್ಷೇತ್ರ ಸಂದರ್ಶನವನ್ನು ಮಾಡುವ ಹಾಗಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಈ ಅರ್ಚಕರು ಅಥವಾ ಕ್ರಿಯಾಕರ್ತರು ಎಲ್ಲವನ್ನೂ ತ್ಯಾಗ ಮನೋಭಾವದಿಂದ ಸ್ವೀಕರಿಸಿ ಈ ಸೇವೆಗೆ ಬರುವ ಮನಮಾಡಿದ್ದಾರೆ. ಅವರಿಗೆ ಸ್ವತಂತ್ರ ಜೀವನ ಇರುವುದಿಲ್ಲ. ಅಂದರೆ ಎಲ್ಲರ ಹಾಗೆ ಎಲ್ಲೆಂದರಲ್ಲಿ ಹೋಗುವ ಹಾಗಿಲ್ಲ. ಎಲ್ಲದಕ್ಕೂ ಕೆಲವೊಂದು ಕಟ್ಟುಪಾಡುಗಳು, ಕೆಲವು ರೀತಿರಿವಾಜುಗಳು ಇರುವ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. 

ಆದರೂ ದಿನವೊಂದಕ್ಕೆ ಇವರಿಗೆ ನೀಡುವ ಸಂಭಾವನೆ (ರೂ. 850/-) ಕಡಿಮೆ ಎಂದೇ ಹೇಳಬೇಕಾಗುತ್ತದೆ. ದಕ್ಷಿಣೆಯ ಹಣದಿಂದಲಾದರೂ ಆದಾಯವನ್ನು ಸರಿದೂಗಿಸಬಹುದು ಎಂದು ಕ್ರಿಯಾಕರ್ತರು ಭಾವಿಸಿದ್ದರು. ಆದರೆ ಈಗೀಗ ದಕ್ಷಿಣೆ ಕೊಡುವ ಅಗತ್ಯ ಇಲ್ಲ ಎಂದು ಪರೋಕ್ಷವಾಗಿ ದೇವಸ್ಥಾನದ ಆಡಳಿತವು ಸೂಚನಾ ಫಲಕದ ಮೂಲಕ ಸೇವಾಕರ್ತರಿಗೆ ಸೂಚಿಸಿದೆ. ಸೇವಾಕರ್ತರಿಗೆ, ಭಕ್ತರಿಗೆ ಉಂಟಾಗುವ ತೊಂದರೆಗಳನ್ನು ತಪ್ಪಿಸಲು ಆಡಳಿತ ಮಂಡಳಿಯು ಈ ತೀರ್ಮಾನ ತೆಗೆದುಕೊಂಡಿರಬಹುದು. ಆದರೆ ಇದರಿಂದ ಪ್ರಾಮಾಣಿಕ ಕ್ರಿಯಾಕರ್ತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ‌. 

ದಕ್ಷಿಣೆ ಎನ್ನುವುದು ಪೂಜೆಯ ಅಥವಾ ಯಾವುದೇ ವೈದಿಕ ಕಾರ್ಯಕ್ರಮದ ಒಂದು ಭಾಗ. ಒಂದು ವೈದಿಕ ಕ್ರಿಯೆಯು ಪರಿಪೂರ್ಣತೆಯನ್ನು ಹೊಂದಬೇಕಾದರೆ ಕೇವಲ ಸಾಂಕೇತಿಕವಾಗಿ ಆದರೂ ದಕ್ಷಿಣೆ ಕೊಟ್ಟು ಆಶೀರ್ವಾದ ಪಡೆಯುವುದು ಸಂಪ್ರದಾಯ. ಇಲ್ಲಿ ಯಾವುದೇ ಕಾನೂನಾತ್ಮಕ ಅಂಶಗಳು ತಲೆಹಾಕಬಾರದು. ಆದರೆ ದಕ್ಷಣೆಯನ್ನು ತೆಗೆದುಕೊಳ್ಳುವ ವ್ಯಕ್ತಿ ದುರಾಸೆಯ ದಾಸನಾಗಬಾರದು ಎನ್ನುವುದು ಕೂಡ ಅಷ್ಟೇ ಮುಖ್ಯ.

ಕ್ಷೇತ್ರದ ಒಂದು ವಸತಿಗೃಹದ ಸಿಬ್ಬಂದಿಗಳೂ ಕ್ರಿಯಾಕರ್ತರ ದಕ್ಷಿಣೆ ಬಗ್ಗೆ ವ್ಯಾಪಕ ಋಣಾತ್ಮಕ ಪ್ರಚಾರವನ್ನು ನಡೆಸುತ್ತಿದ್ದಾರೆ ಎಂದು ಕ್ರಿಯಾಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ. ರೂಮ್ ಬಾಯ್ ಗಳು ಕೂಡ ದಕ್ಷಿಣೆ ಕೊಡಬೇಡಿ ಎಂದು ಹೇಳುತ್ತಾ ತಾವು ಮಾತ್ರ ವಸೂಲು ಮಾಡುತ್ತಿದ್ದಾರೆ ಎಂಬುದು ಗಾಳಿಸುದ್ದಿಯೋ ಎಂದು ಗೊತ್ತಿಲ್ಲ. 

ಪೂಜಾಕರ್ತರಿಗೆ ಅಥವಾ ಕ್ರಿಯಾಕರ್ತರಿಗೆ ಎರಡು ದಿನಗಳಲ್ಲಿ ಸಂಭಾವನೆಯಾಗಿ ರೂ. 850/- ನೀಡಲಾಗುತ್ತದೆ. ಅಂದರೆ ದಿನವೊಂದಕ್ಕೆ ರೂ. 850/- ಎಂದು ಅಂದುಕೊಂಡರೂ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಪೂಜೆ ಇರುವುದಿಲ್ಲ(ದಶಮಿ, ಏಕಾದಶಿ). ಉಳಿದಂತೆ ಒಂದೆರಡು ದಿನಗಳ ಅಗತ್ಯ ರಜೆಗಳನ್ನು ಸೇರಿಸಿದರೆ ಕೆಲಸದ ದಿನಗಳು ಕಡಿಮೆ ಆಗುತ್ತವೆ. ಸಂಭಾವನೆ ಕೂಡ ಕಡಿಮೆ ಆಗುತ್ತದೆ. ದಿನಸಂಬಳದ ಲೆಕ್ಕಾಚಾರ ಹಾಕುವಾಗ ಇದನ್ಮು ದಿನವೊಂದಕ್ಕೆ ರೂಪಾಯಿ 1500/- ಮಾಡಿ, ದಕ್ಷಣೆಯ ವಿಚಾರದಲ್ಲಿ ಬಿಗಿ ನಿಯಂತ್ರಣ ಕ್ರಮವನ್ನು ಕೈಗೊಂಡರೆ ಅದೊಂದು ಉತ್ತಮ ನಿರ್ಧಾರ ಆಗಬಹುದು.

ಈ ಲೇಖನದಲ್ಲಿ ಮೊದಲೇ ಹೇಳಿದಂತೆ ತ್ಯಾಗಿಗಳಾದ ಕ್ರಿಯಾಕರ್ತರಿಗೆ ಇದರಿಂದ ನ್ಯಾಯ ಸಲ್ಲಿಸಿದ ಹಾಗೆ ಆಗುತ್ತದೆ. ತನ್ನ ಅವಕಾಶ, ನಿದ್ರೆ ಮೊದಲಾದುವನ್ನು ತ್ಯಾಗ ಮಾಡಿದ ಕ್ರಿಯಾಕರ್ತರಿಗೆ ಒಂದು ಉಡುಗೊರೆಯೂ ಆಗಬಹುದು. ನಿವೃತ್ತಿ ವೇತನ, ಪಿಂಚಣಿಯ ಸೌಲಭ್ಯಗಳನ್ನು ಕೊಟ್ಟರೆ ವೃದ್ಧಾಪ್ಯದ ದಿನಗಳಲ್ಲಿ ಅದೊಂದು ಆಸರೆಯಾಗಿ ಪರಿಣಮಿಸುತ್ತದೆ.

ಬರಹ: ಕ್ಷೇತ್ರದ ಆರಾಧಕ ಮತ್ತು ಹಿತಚಿಂತಕ,  ದಕ್ಷಿಣ ಕನ್ನಡ ಜಿಲ್ಲೆ

ಪೂರಕ ಮಾಹಿತಿ;- ನಮ್ಮ ಸುಬ್ರಹ್ಮಣ್ಯ ಪ್ರತಿನಿಧಿ ಮತ್ತು ಶ್ರೀ ಕುಕ್ಕೆ ಸುಬ್ರಹ್ಮಣ್ಯದಿಂದ ಕೊಡಮಾಡುವ ಸರ್ಪಸಂಸ್ಕಾರ ಮಾಹಿತಿ ಪತ್ರದ ಆಧಾರದಿಂದ

ಯಕ್ಷಗಾನ ನೇಪಥ್ಯ ಕಲಾವಿದ ಶ್ರೀ ತನಿಯಪ್ಪ ಜೋಗಿಯವರಿಗೆ ಸನ್ಮಾನ

0

ದಿನಾಂಕ. 18.02.2024ರಂದು ಅಣ್ಣೇರಪಾಲು ಕೊಣಾಜೆ ಎಂಬಲ್ಲಿ ನಡೆದ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಕಟೀಲು ನಾಲ್ಕನೇ ಮೇಳದ ನೇಪಥ್ಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಅಣ್ಣೇರಪಾಲು, ಕೊಣಾಜೆ ಇವರ ಸೇವೆಯಾಟವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ (ನಾಲ್ಕನೇ ಮೇಳ) ಬಯಲಾಟವನ್ನು ಪ್ರದರ್ಶಿಸಲಾಯಿತು.

ಆ ಸಂದರ್ಭದಲ್ಲಿ ಕಟೀಲು ನಾಲ್ಕನೇ ಮೇಳದ ನೇಪಥ್ಯ ಕಲಾವಿದರಾದ ಶ್ರೀ ತನಿಯಪ್ಪ ಜೋಗಿಯವರಿಗೆ ಸನ್ಮಾನದ ಗೌರವವನ್ನು ಸಲ್ಲಿಸಲಾಯಿತು.

ತನಿಯಪ್ಪ ಜೋಗಿ ಇವರು ಪ್ರಸ್ತುತ ಕಟೀಲು 4ನೇ ಮೇಳದ ನೇಪಥ್ಯ ಕಲಾವಿದ. ಸರಳ ಸಜ್ಜನ ಹಾಗೂ ವಿನಯವಂತ. ಚೌಕಿಯಲ್ಲಿ ಇವರು ಎಲ್ಲರಿಗೂ ಪ್ರಿಯರು. ತನಗೆ ಒಪ್ಪಿಸಿದ ಕೆಲಸವನ್ನು ಚಾಚೂ ತಪ್ಪದೆ ಒಪ್ಪವಾಗಿ ಮಾಡಿ ಪೂರೈಸುತ್ತಾರೆ. ಇವರು 1954ನೇ ಇಸವಿ ಅಣ್ಣಪ್ಪ ಜೋಗಿ ಮತ್ತು ಸುಶೀಲ ದಂಪತಿಗಳಿಗೆ ಮಗನಾಗಿ ಜನಿಸಿದರು. ಹುಟ್ಟೂರು ಕಾಸರಗೋಡು ಜಿಲ್ಲೆಯ ಜೋಡುಕಲ್ಲು.

1970ನೇ ಇಸವಿ ನೇಪಥ್ಯ ಕಲಾವಿದನಾಗಿ ಕಲಾಸೇವೆ ಆರಂಭಿಸಿದರು. ಮೊದಲು ಶ್ರೀ ನಾಗರಾಜ ಶೆಟ್ರ ಕುಂಡಾವು ಮೇಳದಲ್ಲಿ 2 ವರ್ಷ, ನಂತರ ಕರ್ನಾಟಕ ಮೇಳದಲ್ಲಿ 12 ವರ್ಷಗಳ ಕಲಾಸೇವೆ. ತನಿಯಪ್ಪ ಜೋಗಿ ನಂತರ ಕಣಿಪುರ ಮೇಳದಲ್ಲಿ 1 ತಿರುಗಾಟ. ಪ್ರಸ್ತುತ ಕಟೀಲು ಮೇಳದಲ್ಲಿ ಹಲವಾರು ವರ್ಷಗಳಿಂದ ತಿರುಗಾಟ ನಡೆಸುತ್ತಿದ್ದಾರೆ.

ಹೆಂಡತಿಗೆ ಬೆಂಕಿ ಹಚ್ಚಿದ ಗಂಡ – ಸುಟ್ಟಗಾಯಗಳಿಂದ ಸಾವನ್ನಪ್ಪಿದ ಮಹಿಳೆ

0

ಪತಿಯೇ ತನ್ನ ಪತ್ನಿಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆಯಲ್ಲಿ ಮಹಿಳೆಯೊಬ್ಬರು ಕೆಲವೇ ಗಂಟೆಗಳಲ್ಲಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ.

ಪಟ್ಟಣಕ್ಕಾಡ್ ಮೂಲದ ಆರತಿ (32) ಮೃತ ದುರ್ದೈವಿ. ಆರತಿಯ ಪತಿ ಶ್ಯಾಮಜಿತ್(42) ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 9:50ರ ಸುಮಾರಿಗೆ ಚೇರ್ತಲ ಆಸ್ಪತ್ರೆ ಬಳಿ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಶ್ಯಾಮಜಿತ್ ತನ್ನ ಪತ್ನಿ ಆರತಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಶ್ಯಾಮಜಿತ್ ಕೂಡ ಸುಟ್ಟ ಗಾಯಗಳಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರತಿ ಆವರು ಖಾಸಗಿ ಹಣಕಾಸು ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸೋಮವಾರ ಬೆಳಗ್ಗೆ ತನ್ನ ಸ್ಕೂಟರ್‌ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಶ್ಯಾಮಜಿತ್‌ ದಾಳಿ ನಡೆಸಿದ್ದಾನೆ. ದಂಪತಿಗಳು ದೀರ್ಘಕಾಲದವರೆಗೆ ಬೇರೆ ಬೇರೆಯಾಗಿ ವಾಸವಾಗಿದ್ದರು ಮತ್ತು ವಿರಸಗಳನ್ನು ಹೊಂದಿದ್ದರು,

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.