ಹೈದರಾಬಾದ್/ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ ಬಿಆರ್ಎಸ್ ನಾಯಕಿ ಕೆ.ಕವಿತಾ ಅವರನ್ನು ಹೈದರಾಬಾದ್ನಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿದ್ದು, ದೆಹಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕವಿತಾ ಅವರು ತೆಲಂಗಾಣದಲ್ಲಿ ವಿಧಾನ ಪರಿಷತ್ತಿನ (MLC) ಸದಸ್ಯೆ ಮತ್ತು ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ.
ಕಳೆದ ವರ್ಷ ಈ ಪ್ರಕರಣದಲ್ಲಿ ಆಕೆಯನ್ನು ಪ್ರಶ್ನಿಸಲಾಗಿತ್ತು, ಆದರೆ ಈ ವರ್ಷ ಎರಡು ಸಮನ್ಸ್ಗಳನ್ನು ತಪ್ಪಿಸಿದ್ದರು.
ಬಿಆರ್ಎಸ್ ನಾಯಕಿಗೆ ಬುಧವಾರದವರೆಗೆ ವಿಚಾರಣೆಯಿಂದ ವಿನಾಯಿತಿ ನೀಡಿದ್ದ ಸುಪ್ರೀಂ ಕೋರ್ಟ್, ಪ್ರಕರಣದಲ್ಲಿ ಏಜೆನ್ಸಿಯ ಸಮನ್ಸ್ ವಿರುದ್ಧ ಆಕೆಯ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.
37 ವರ್ಷದ ಉಜ್ಬೆಕಿಸ್ತಾನದ ಯುವತಿ ಬೆಂಗಳೂರಿನ ತಮ್ಮ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕೆಯನ್ನು ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ ಪೊಲೀಸರು ನಿಗೂಢ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಜ್ಬೇಕಿಸ್ತಾನ್ ಮೂಲದ 37 ವರ್ಷದ ಮಹಿಳೆಯೊಬ್ಬರು ಬೆಂಗಳೂರಿನ ತಮ್ಮ ಹೋಟೆಲ್ ಕೋಣೆಯಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜರೀನ್ ಎಂಬ ಮಹಿಳೆ ಮಾರ್ಚ್ 5 ರಂದು ಬೆಂಗಳೂರಿಗೆ ಬಂದಿದ್ದರು, ಅವರು ನಗರದ ಶೇಷಾದ್ರಿಪುರಂನಲ್ಲಿರುವ ಹೋಟೆಲ್ನಲ್ಲಿ ತಂಗಿದ್ದರು.
ಸಂಜೆ 4:30ಕ್ಕೆ ಹೋಟೆಲ್ ಸಿಬ್ಬಂದಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಸಿಬ್ಬಂದಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ ಜರೀನ್ ಮೃತಪಟ್ಟಿರುವುದು ಕಂಡುಬಂದಿದೆ.
ಆಕೆಯನ್ನು ಥಳಿಸಿರುವ ಶಂಕೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ತಿಳಿಸಿದ ಬೆಂಗಳೂರು ಕೇಂದ್ರದ ಡಿಸಿಪಿ ಶೇಖರ್ ಎಚ್.ಟಿ. ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
“ಹೋಟೆಲ್ನ ಕೊಠಡಿಯಲ್ಲಿ ಜರೀನ್ ಶವವಾಗಿ ಪತ್ತೆಯಾಗಿದ್ದಾಳೆ. ಆಕೆ ಬಹುಶಃ ಉಸಿರುಗಟ್ಟಿಸಲ್ಪಟ್ಟಿದ್ದಾಳೆ.” ಎಂದು ಡಿಸಿಪಿ ಹೇಳಿದರು.
ಫೋರೆನ್ಸಿಕ್ ತಂಡ, ಪೊಲೀಸರು ಮತ್ತು ಶ್ವಾನ ದಳ ತನಿಖೆಗಾಗಿ ಜರೀನ್ ಅವರ ಕೋಣೆಗೆ ಆಗಮಿಸಿದೆ.
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನಟ್ಟೋಜ ಶಿವಾನಂದ ರಾವ್ (93) ಅಲ್ಪ ಕಾಲದ ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನ ಹೊಂದಿದರು. ಪುತ್ತೂರು ಭಾಗದಲ್ಲಿ ಹಿಂದೂ ಸಮಾಜಕ್ಕಾಗಿ ಅಹರ್ನಿಶಿಯಾಗಿ ದುಡಿದವರಲ್ಲಿ ಶಿವಾನಂದ ನಟ್ಟೋಜ ಅವರು ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ.
ನಟ್ಟೋಜ ಶಿವಾನಂದ ರಾವ್ ಅವರು ವೆಂಕಟ ರಾವ್ ಹಾಗೂ ಕಲ್ಯಾಣ ಯಮ್ಮ ಅವರ ಪುತ್ರನಾಗಿ ಪುತ್ತೂರಿನಲ್ಲಿ 1932ರ ಜನವರಿ 3ರಂದು ಜನಿಸಿದ್ದರು. ಸಾಮಾಜಿಕ ಹಾಗೂ ರಾಜಕೀಯವಾಗಿ ಸಕ್ರೀಯರಾಗಿದ್ದು, ಪ್ರಗತಿಪರ ಕೃಷಿಕರೂ ಅಗಿದ್ದರು.
ವಿಶ್ವ ಹಿಂದೂ ಪರಿಷತ್ನ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮಾಜಿ ಶಾಸಕ ರಾಮ ಭಟ್ ಅವರ ಆಪ್ತವರ್ಗದಲ್ಲಿ ಗುರುತಿಸಿಕೊಂಡಿದ್ದು, ರಾಜಕೀಯವಾಗಿಯೂ ಸಾಕಷ್ಟು ಜವಾಬ್ದಾರಿ ನಿರ್ವಹಿಸಿದ್ದರು. ಪುತ್ತೂರು ಭಾಗದ ಹಿಂದೂ ನಾಯಕರಾಗಿ ಗುರುತಿಸಿಕೊಂಡಿದ್ದರು.
ರಾಮಜನ್ಮ ಭೂಮಿಗಾಗಿ ಹೋರಾಟ; ರಾಮ ಮಂದಿರ ಹೋರಾಟದಲ್ಲೂ ಗುರುತಿಸಿಕೊಂಡಿದ್ದ ಇವರು, ಶ್ರೀ ರಾಮನಿಗೆ ಅಯೋಧ್ಯೆಯಲ್ಲಿಯೇ ಮಂದಿರ ನಿರ್ಮಾಣವಾಗಲೇಬೇಕೆಂಬ ದೃಢಸಂಕಲ್ಪವನ್ನು ಹೊತ್ತವರು. 1989ರ ಹೊತ್ತಿನಲ್ಲಿ ಶ್ರೀ ರಾಮ ಪೂಜನ ಸಮಿತಿ ಪುತ್ತೂರು ಪ್ರಖಂಡದ ಅಧ್ಯಕ್ಷರಾಗಿ ಪುತ್ತೂರಿನ ಬೀದಿ ಬೀದಿಗಳಲ್ಲಿ ಕೇರಿ ಕೇರಿಗಳಲ್ಲಿ ಜನಜಾಗೃತಿ ಮೂಡಿಸಿದ್ದರು.
ಹಳ್ಳಿಹಳ್ಳಿಗಳನ್ನು ಸುತ್ತಾಡಿ ರಾಮಮಂದಿರ ಹೋರಾಟಕ್ಕೆ ಜನರನ್ನು ಅಣ ಗೊಳಿಸಿ, ಶ್ರೀರಾಮಚಂದ್ರನ ಆದರ್ಶವನ್ನು ಪುತ್ತೂರಿನ ಮಣ್ಣಿನಲ್ಲಿ ಬಿತ್ತುವ ಪ್ರಯತ್ನ ದಶಕಗಳ ಕಾಲ ನಡೆಸಿದ್ದರು. ರಾಮಜನ್ಮಭೂಮಿ ಹೋರಾಟದಲ್ಲಿ 1989 ಹಾಗೂ 1992ರಲ್ಲಿ ಎರಡು ಬಾರಿಯೂ ಕರಸೇವಕರಾಗಿ ಮುಂಚೂಣಿಯಲ್ಲಿ ನಿಂತು ಜನರಿಗೆ ಪ್ರೇರಣೆ ನೀಡಿದ್ದರು.
ಅಯೋಧ್ಯೆ ಹೋರಾಟದಲ್ಲಿ ಸೆರೆವಾಸ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಹೋರಾಟದ ಸಂದರ್ಭ 400 ಮಂದಿಯ ತಂಡದಲ್ಲಿ ಪುತ್ತೂರಿನಿಂದ ಅಯೋಧ್ಯೆಗೆ ತೆರಳಿದ್ದರು. ಮಧ್ಯಪ್ರದೇಶದಲ್ಲಿ ತಂಡವನ್ನು ತಡೆದಿದ್ದು, 14 ದಿನಗಳ ಕಾಲ ಸೆರೆವಾಸವನ್ನು ಅನುಭವಿಸಿದ್ದರು. ಜೈಲಿನಲ್ಲಿರುವಾಗಲೇ ಶಿಲಾನ್ಯಾಸ ಕಾರ್ಯ ನಡೆದಿದ್ದು, ಅದನ್ನು ಟಿವಿಯಲ್ಲಿ ಅವರು ವೀಕ್ಷಿಸಿದ್ದರು.
ಈ ಶಿಲಾನ್ಯಾಸದ ವೇಳೆ ಆಡ್ವಾಣಿಯವರು ಪುತ್ತೂರಿನ ಕುರಿತು ಹೆಮ್ಮೆಯ ಮಾತುಗಳನ್ನಾಡಿದ್ದನ್ನು ಇತ್ತೀಚೆಗೆ ರಾಮಮಂದಿರ ಉದ್ಘಾಟನೆಯ ಸಂದರ್ಭ ಶಿವಾನಂದ ನಟ್ಟೋಜ ಅವರು ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡಿದ್ದರು.
ಪುತ್ತೂರಿನಲ್ಲಿ ಅಂಬಿಕಾ ಎನ್ನುವ ‘ಮಾದರಿ’ ಶಿಕ್ಷಣ ಸಂಸ್ಥೆಯ ನಿರ್ಮಾಣದ ಹಿಂದಿರುವ ಶಕ್ತಿಯಾಗಿರುವ ಇವರು, ಧರ್ಮ, ದೇಶ, ದೇವರಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದು, ದೇಶದ ಭಾವಿ ಪ್ರಜೆಗಳೂ ಹೀಗೆಯೇ ಬೆಳೆಯಬೇಕೆಂಬ ಆಶಯವನ್ನು ಹೊಂದಿದ್ದರು. ಮೃತರು ಪುತ್ರ ಅಂಬಿಕಾ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹಾಗೂ ನಾಲ್ವರು ಪುತ್ರಿರನ್ನು ಅಗಲಿದ್ದಾರೆ. ನಿಧನದ ಹಿನ್ನೆಲೆಯಲ್ಲಿ ಗೌರವಾರ್ಥ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿತ್ತು.
ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಸ್ಟೇಡಿಯಂನಲ್ಲಿ ಮಾರ್ಚ್ 9 ಮತ್ತು 10 ರಂದು ನಡೆದ 2ನೇ ದಕ್ಷಿಣ ಭಾರತ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ
ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ದರ್ಬೆತ್ತಡ್ಕ ಶ್ರೀ ವೆಂಕಟೇಶ್ ಪ್ರಸಾದ್ (ದಿ.ರಾಮಚಂದ್ರ ಭಟ್ ಮತ್ತು ಶ್ರೀಮತಿ ಸರಸ್ವತಿ ಭಟ್ ದಂಪತಿಗಳ ಪುತ್ರ) ಇವರು 45ರ ವಯೋಮಾನದ 110 ಮೀ ಹರ್ಡಲ್ಸ್ ನಲ್ಲಿ ಪ್ರಥಮ , ಹೈಜಂಪ್, 4×100 ಮೀ ರಿಲೇ ಹಾಗೂ 4×100 ಮೀ ರಿಲೇಗಳಲ್ಲಿ ಚತುರ್ಥ ಸ್ಥಾನ ಗಳಿಸಿದ್ದಾರೆ.
ಇವರು ದರ್ಬೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆ, ಪೆರ್ನಾಜೆ ಶ್ರೀ ಸೀತಾರಾಘವ ಪದವಿಪೂರ್ವ ಕಾಲೇಜು ಹಾಗೂ ಪುತ್ತೂರು ಸಂತ ಫಿಲೋಮಿನಾ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿರುತ್ತಾರೆ.
ಈ ಕ್ರೀಡಾಕೂಟದಲ್ಲಿ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪಾಂಡಿಚೇರಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳ ಸುಮಾರು 770ಕ್ಕೂ ಅಧಿಕ ಹಿರಿಯ ಕ್ರೀಡಾಪಟುಗಳು ಭಾಗವಹಿದ್ದರು..
ಯಕ್ಷಗಾನ ಕ್ಷೇತ್ರದ 47 ವರ್ಷಗಳ ತಿರುಗಾಟದಲ್ಲಿ ನೋವು ನಲಿವುಗಳನ್ನು ಕಂಡಿದ್ದೇನೆ. ಕಲಾಸೇವೆ ಮಾಡಿದ ಆತ್ಮ ತೃಪ್ತಿ ಇದ್ದು ನನ್ನ ಬೆಳವಣಿಗೆಗೆ ಕಲಾಭಿಮಾನಿಗಳು ಮತ್ತು ಕಲಾಪೋಷಕರು ಕಾರಣವಾಗಿದ್ದಾರೆಂದು ಭಾಗವತ ಶ್ರೀ ದಿನೇಶ್ ಅಮ್ಮಣ್ಣಾಯ ತಿಳಿಸಿದರು.
ಅವರು ನೇರೆಂಕಿ ಶ್ರೀ ಗಂಗಾಧರ ಆಚಾರ್ಯ ಅವರ ನಿವಾಸದಲ್ಲಿ ಜರಗಿದ ಕಲಾವಿದರ ಸಂಸ್ಮರಣೆ ನಿಮಿತ್ತ ಜರಗಿದ ಕಲಾವಿದರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಒಂದೇ ಮನೆತನದ ಕೀರ್ತಿಶೇಷ ಕಲಾವಿದ ಸಹೋದರರಾದ ಗಣಪತಿ ಆಚಾರ್ಯ ನೇರೆಂಕಿ , ವಿಠಲ ಆಚಾರ್ಯ ನೆಲ್ಯಾಡಿ, ಭಾಸ್ಕರ ಆಚಾರ್ಯ ಇವರ ಬಗ್ಗೆ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಸಂಸ್ಮರಣೆಯ ಮತ್ತು ದಿನೇಶ ಅಮ್ಮಣ್ಣಾಯರ ಬಗ್ಗೆ ಅಭಿನಂದನ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾ ಅಮ್ಮಣ್ಣಾಯ, ಪುರುಷೋತ್ತಮ ಆಚಾರ್ಯ, ಹರೀಶ್ ಆಚಾರ್ಯ , ಮಹೇಶ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.
ಮುರಳೀಧರ ಆಚಾರ್ಯ ಸ್ವಾಗತಿಸಿ ಹರೀಶ್ ಆಚಾರ್ಯ ಉಪ್ಪಿನಂಗಡಿ ಕಾರ್ಯಕ್ರಮ ನಿರೂಪಿಸಿದರು.
ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಹೆಂಡತಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತನ್ನ 29 ವರ್ಷದ ಮಗನನ್ನು ಕೊಂದಿದ್ದಾನೆ.
ದೆಹಲಿಯಲ್ಲಿ ಜಿಮ್ ತರಬೇತುದಾರನಾಗಿದ್ದ ತನ್ನ 29 ವರ್ಷದ ಮಗನನ್ನು ಕೊಂದ ವ್ಯಕ್ತಿ “ತನ್ನ ವಿಚ್ಛೇದಿತ ಹೆಂಡತಿಗೆ ಪಾಠ ಕಲಿಸಲು” ಅಪರಾಧ ಎಸಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮೂರ್ನಾಲ್ಕು ತಿಂಗಳಿನಿಂದ ಈತ ಕೊಲೆಗೆ ಯೋಜನೆ ರೂಪಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಫೆಬ್ರವರಿ 6-7 ರ ರಾತ್ರಿ ಅಪರಾಧ ಎಸಗಿ ದೆಹಲಿಯಿಂದ ಪಲಾಯನ ಮಾಡಿದ 54 ವರ್ಷದ ಆರೋಪಿ ರಂಗ್ ಲಾಲ್ ಅವರನ್ನು ಜೈಪುರದಲ್ಲಿ ಬಂಧಿಸಲಾಯಿತು.
ಜಿಮ್ ಟ್ರೈನರ್ ಗೌರವ್ ಸಿಂಘಾಲ್ ಮದುವೆಗೆ ಕೇವಲ ಒಂದು ದಿನ ಉಳಿದಿರುವಾಗಲೇ ಅವರ ತಂದೆ ಅವರನ್ನು ಕೊಂದರು, ದಕ್ಷಿಣ ದೆಹಲಿಯ ಅವರ ಮನೆಯಲ್ಲಿ ಮುಖ ಮತ್ತು ಎದೆಗೆ 15 ಬಾರಿ ಇರಿದಿದ್ದರು.
ಫೆಬ್ರವರಿ 7 ರಂದು ಮಧ್ಯರಾತ್ರಿ 12.30 ರ ಸುಮಾರಿಗೆ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
“ನಾವು ಸಿಸಿಟಿವಿ ಫೂಟೇಜ್ ಮತ್ತು ಇತರ ವಿವರಗಳನ್ನು ಪರಿಶೀಲಿಸಿದ್ದೇವೆ, ತಂದೆ ಓಡಿಹೋಗಿದ್ದಾರೆ ಮತ್ತು ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಖಚಿತಪಡಿಸಿದೆ” ಎಂದು ದಕ್ಷಿಣ ದೆಹಲಿ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದರು.
“ವಿಚಾರಣೆಯ ಸಮಯದಲ್ಲಿ, ತನ್ನ ಹೆಂಡತಿ ಮತ್ತು ಮಗನೊಂದಿಗಿನ ತಂದೆಯ ಸಂಬಂಧವು ಸುಗಮವಾಗಿಲ್ಲ ಎಂದು ತಿಳಿದುಬಂದಿದೆ ಮತ್ತು ತಂದೆ ತನ್ನ ಹೆಂಡತಿಗೆ ಪಾಠ ಕಲಿಸಲು ಈ ಕೊಲೆ ಮಾಡಿದ್ದಾನೆ” ಎಂದು ಅವರು ಹೇಳಿದರು.
ಪೊಲೀಸರ ಪ್ರಕಾರ, ಬುಧವಾರ ರಾತ್ರಿ ಮಗ ಮತ್ತು ತಂದೆಯ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಗೌರವ್ ತನ್ನ ತಂದೆಗೆ ಕಪಾಳಮೋಕ್ಷ ಮಾಡಿ, ಕೋಪಗೊಂಡಿದ್ದಾನೆ.
ಆಮೇಲಿನ ವಿಚಾರಣೆಯ ಸಮಯದಲ್ಲಿ, ಸಿಂಘಾಲ್ ಅವರು ಕೃತ್ಯದ ಬಗ್ಗೆ ಯಾವುದೇ ಪಶ್ಚಾತ್ತಾಪವನ್ನು ತೋರಿಸಲಿಲ್ಲ ಮತ್ತು “ಅವರು ಸರಿಯಾದ ಕೆಲಸವನ್ನು ಮಾಡಿದ್ದಾರೆ” ಎಂದು ಹೇಳಿದರು
“ಅವರು ತಮ್ಮ ಮಗನ ಅತಿರಂಜಿತ ಜೀವನಶೈಲಿ ಮತ್ತು ಅಸಹಕಾರದಿಂದ ಅತೃಪ್ತರಾಗಿದ್ದರು ಎಂದು ಅವರು ಬಹಿರಂಗಪಡಿಸಿದರು. ಮೃತನ ತಾಯಿ ಯಾವಾಗಲೂ ತನ್ನ ಮಗನನ್ನು ಬೆಂಬಲಿಸುತ್ತಾಳೆ, ಇದು ಅವನ ಹತಾಶೆಗೆ ಕಾರಣವಾಯಿತು ಎಂದು ಡಿಸಿಪಿ ಚೌಹಾಣ್ ಹೇಳಿದರು.
ನಿನ್ನೆ ದಿನಾಂಕ 08.03.2024 ನೇ ಶುಕ್ರವಾರದಂದು ಪಣಂಬೂರು ಶ್ರೀ ನಂದನೇಶ್ವರ ಕ್ಷೇತ್ರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ (ನಾಲ್ಕನೇ ಮೇಳ) ಯಕ್ಷಗಾನ ಪ್ರದರ್ಶನ ನಡೆಯಿತು.
ಪ್ರದರ್ಶನದಲ್ಲಿ ‘ತ್ರಿಮೂರ್ತಿ ಕಲ್ಯಾಣ’ ಎಂಬ ಪ್ರಸಂಗವನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಕಟೀಲು ಮೇಳದ ಖ್ಯಾತ ಭಾಗವತರಾದ ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮತ್ತು ಖ್ಯಾತ ಹಾಸ್ಯಗಾರರಾದ ಶ್ರೀ ರವಿಶಂಕರ್ ವಳಕ್ಕುಂಜ ಅವರನ್ನು ಸನ್ಮಾನಿಸಿ ಗೌರವಿಸಿದರು.
ಯಕ್ಷರಂಗೋತ್ಸವ’ – ಯಕ್ಷಗಾನದ ದಂತಕಥೆ ಕಡತೋಕಾ ಮಂಜುನಾಥ ಭಾಗವತರ ನೆನಪಿನಲ್ಲಿ ಎರಡು ದಿನಗಳ ಯಕ್ಷೋತ್ಸವ ಕಾರ್ಯಕ್ರಮ ನಡೆಯಲಿದೆ.
ದಿನಾಂಕ 16-03-2023 ಶನಿವಾರ ಮತ್ತು ದಿನಾಂಕ 17-03-2023ರ ಆದಿತ್ಯವಾರ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾ ಹಿರಿಯ ಪ್ರಾಥಮಿಕ ಶಾಲೆಯ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ..
ಈ ಎರಡು ದಿನಗಳ ಎಲ್ಲಾ ಕಾರ್ಯಕ್ರಮದ ವಿವರಗಳಿಗೆ ಕೆಳಗಿನ ಆಮಂತ್ರಣ ಪತ್ರಿಕೆಯ ಚಿತ್ರಗಳನ್ನು ನೋಡಿ.
ಮಾರ್ಚ್ 16, 2024 ರಿಂದ ಮಾರ್ಚ್ 20, 2024ರ ವರೆಗೆ ಒಟ್ಟಾರೆ ಐದು ದಿನಗಳ ಕಾಲ ನಡೆಯುವ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ – 14” ರ ಮೊದಲ ದಿನ, ಶನಿವಾರ ಸಂಜೆ 4.30 ಕ್ಕೆ ಪ್ರಸ್ತುತ ಆವೃತ್ತಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸನ್ಮಾನ್ಯ ಶ್ರೀ ಮಂಕಾಳು. ಎಸ್. ವೈದ್ಯ, ಮಾನ್ಯ ಸಚಿವರು ಮೀನುಗಾರಿಕೆ ಹಾಗೂ ಬಂದರು ಇಲಾಖೆ, ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಬೆಂಗಳೂರು ಇವರು ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ.
ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದರಾದ ನಮ್ಮ ನಿಮ್ಮೆಲ್ಲರ ಸನ್ಮಾನ್ಯ ಶ್ರೀ ಶತಾವಧಾನಿ ಡಾ. ಆರ್. ಗಣೇಶ, ಬೆಂಗಳೂರು. ಅವರಿಗೆ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2022″ ಪ್ರದಾನ ಮಾಡಲಾಗುತ್ತಿದ್ದು ಸನ್ಮಾನ್ಯ ಶ್ರೀ ದಿವಾಕರ ಹೆಗಡೆ ಕೆರೆಹೊಂಡ, ರ್ಥದಾರಿ. ಕಲಾಚಿಂತಕರು. ಇವರು ಅಭಿನಂದನೆ ಸಲ್ಲಿಸಲಿದ್ದಾರೆ. ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ, ಮಾನ್ಯ ಸಭಾಧ್ಯಕ್ಷರು ರ್ನಾಟಕ ವಿಧಾನ ಪರಿಷತ್ತು, ರ್ನಾಟಕ ಸರಕಾರ, ಬೆಂಗಳೂರು ಇವರು ಉತ್ಸವದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ, ಕರ್ಯಾಧ್ಯಕ್ಷರು, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಮ್ಮೋತ್ಸವ ಸಮಿತಿ ಇವರು ಉತ್ಸವಕ್ಕೆ ಸ್ವಾಗತ ಕೋರಲಿದ್ದಾರೆ ಮತ್ತು ಶ್ರೀ ನಾರಾಯಣ ಯಾಜಿ ಸಾಲೇಬೈಲು, ಖ್ಯಾತ ಅಂಕಣಕಾರರು ಹಾಗೂ ಕಲಾಚಿಂತಕರು ಇವರು ಆಶಯ ನುಡಿ ತಿಳಿಸಲಿದ್ದಾರೆ.
ನಾಡೋಜ ಡಾ. ಮಹೇಶ ಜೋಶಿ, ಮಾನ್ಯ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. ಡಾ. ಜಯರಾಜನ್, ಅಧ್ಯಕ್ಷರು ಫೋಕ್ ಲ್ಯಾಂಡ್. ಕೇರಳ. ಶ್ರೀ ಉಪೇಂದ್ರ ಪೈ, ಸಿರಸಿ, ಯಕ್ಷಗಾನ ಕಲಾ ಪೋಷಕರು, ಉದ್ಯಮಿಗಳು. ಡಾ. ಸಂಜಯ. ಎಚ್.ಆರ್. ಬರಹಗಾರರು, ಹಿರಿಯ ಸರ್ಜನ್, ರಾಜಶೇಖರ ಆಸ್ಪತ್ರೆ ಮೈಸೂರು. ಇವರುಗಳು ಮುಖ್ಯ ಅಭ್ಯಾಗತರುಗಳಾಗಿ ನಮ್ಮ ಜೊತೆಯಿರಲಿದ್ದಾರೆ.
ಉದ್ಘಾಟನಾ ದಿನದಂದು ಸಂಜೆ 6.30 ರಿಂದ ಸಾಂಸ್ಕೃತಿಕ ಕರ್ಯಕ್ರಮ ನಡೆಯಲಿದ್ದು ಶ್ರೀಮತಿ ಸುಕನ್ಯಾ ರಾಂ ಗೋಪಾಲ ತಂಡ ಇವರಿಂದ ‘’ಸ್ತ್ರೀ ತಾಳ ಘಟ ತರಂಗ” ನಡೆಯಲಿದೆ. ಫೋಕ್ ಲ್ಯಾಂಡ್ ಕೇರಳ ಇವರು ಪ್ರಸ್ತುತ ಪಡಿಸಲಿರುವ ಕೇರಳ ನಟನಂ ಮತ್ತು ಮೋಹಿನಿ ಆಟ್ಟಂ ನೃತ್ಯಗಳು ನಾಟ್ಯೋತ್ಸವದ ಕಳೆಗಟ್ಟಲಿದೆ. ಶ್ರೀ ಲಿಂಗಯ್ಯ ಮತ್ತು ತಂಡ, ಬೆಂಗಳೂರು ಇವರ ಬೀಸು ಕಂಸಾಳೆ ಪ್ರಸ್ತುತಿ ಮೊದಲ ದಿನದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.
ನಾಟ್ಯೋತ್ಸವದ ಎರಡನೇ ದಿನವಾದ 17.03.2024 ರವಿವಾರದಂದು ಸಂಜೆ 4.30 ರಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಶ್ರೀ ಎಂ. ಎಲ್. ಸಾಮಗ ಮಲ್ಪೆ, ಹಿರಿಯ ಯಕ್ಷಗಾನ ಕಲಾವಿದರು, ಚಿಂತಕರು ಹಾಗೂ ಬರಹಗಾರರು ಇವರಿಗೆ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ – 2022″ ಪ್ರದಾನ ಮಾಡಲಿದ್ದು ಶ್ರೀ ನಾರಾಯಣ ಹೆಗಡೆ, ಹಿಂಡ್ನನೆ. ಉಪನ್ಯಾಸಕರು, ಉಡುಪಿ ಇವರು ಅಭಿನಂದನೆ ಸಲ್ಲಿಸಲಿದ್ದಾರೆ. ಡಾ. ಎಂ. ಪ್ರಭಾಕರ ಜೋಶಿ, ಕಲಾವಿದರು, ವಿಮರ್ಶಕರು, ಮಂಗಳೂರು ಇವರು ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.
ದ್ವಿತೀಯ ದಿನದಂದು ಡಾ. ಧರಣಿದೇವಿ, ಮಾನ್ಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು. ಶ್ರೀ ಕೃಷ್ಣಮೂರ್ತಿ ಮಂಜರು, ಮಾರಣಕಟ್ಟೆ, ಉದ್ಯಮಿಗಳು, ಕಲಾಪೋಷಕರು, ಹೈದರಾಬಾದ್. ಶ್ರೀ ವೆಂಕಟರಮಣ ಹೆಗಡೆ, ಕವಲಕ್ಕಿ, ಉದ್ಯಮಿಗಳು ಹಾಗೂ ಕಲಾಪೋಷಕರು. ಡಾ. ನಾರಾಯಣ ಹೆಗಡೆ, ಮೈಸೂರು, ಹಿರಿಯ ಸರ್ಜನ್, ಅಪೋಲೋ ಆಸ್ಪತ್ರೆ ಮೈಸೂರು. ಶ್ರೀ ಗಣಪಯ್ಯ ಗೌಡರು, ಮುಗಳಿ, ಅಧ್ಯಕ್ಷರು ವ್ಯ.ಸೇ.ಸ.ಸಂ. ಕೆಳಗಿನೂರು ಇವರುಗಳು ಮುಖ್ಯ ಅಭ್ಯಾಗತರುಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 06.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಅನುಪಮಾ ಹೊಸಕೆರೆ, ಬೆಂಗಳೂರು ನಿರ್ದೇಶನದ ಗೊಂಬೆಯಾಟ “ಅಷ್ಟಾವಕ್ರ” ಧಾತು ಗೊಂಬೆಯಾಟ ತಂಡ, ಬೆಂಗಳೂರು, ಇವರಿಂದ.
ಡಾ. ಮುಖ್ಯಮಂತ್ರಿ ಚಂದ್ರು ಅವರು ಪ್ರಧಾನ ಪಾತ್ರದಲ್ಲಿ ನಟಿಸುವ, ಶ್ರೀ ಟಿ.ಎಸ್ ಲೋಹಿತಾಶ್ವರಿಂದ ಕನ್ನಡ ರೂಪಾಂತರಗೊಂಡ, ಡಾ. ಬಿ. ವಿ ರಾಜಾರಾಂ, ಬೆಂಗಳೂರು ಇವರ ನಿರ್ದೇಶನದ ನಾಟಕ – ಮುಖ್ಯಮಂತ್ರಿ’ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲಿದೆ.
ಉತ್ಸವದ ಮೂರನೇ ದಿನದ ಅಂಗವಾಗಿ 18.03.2024 ಸೋಮವಾರದಂದು ಬೆಳಗ್ಗೆ 11 ರಿಂದ ಮಂತ್ರಮುಗ್ದಗೊಳಿಸಲಿರುವ – ಎಚ್. ಕೆ. ರಾಮಚಂದ್ರ ಅವರಿಂದ ನಾಟಕ ರೂಪವಾದ, ಸಾಲಿಯಾನ್ ಉಮೇಶ ನಾರಾಯಣ್ ನಿರ್ದೇಶಿಸಿದ ಶಾಲಾ ಮಕ್ಕಳಿಗಾಗಿ ಪ್ರಚುರ ಪಡಿಸಲಿರುವ ನಾಟಕ’ ಅನ್ಯಾಳ ಡೈರಿ’ ಕಿನ್ನರ ಮೇಳ ತುಮರಿ ಇವರಿಂದ.
ಡಾ. ನಿರಂಜನ ವಾನಳ್ಳಿ, ಮಾನ್ಯ ಉಪಕುಲಪತಿಗಳು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಇವರು ಮೂರನೇ ದಿನದ ಉತ್ಸವದ ಅಧ್ಯಕ್ಷತೆ ವಹಿಸಲಿದ್ದು
ಸನ್ಮಾನ್ಯ ಡಾ. ಕೆ.ಎಂ.ರಾಮಚಂದ್ರಪ್ಪ, ಸಹಾಯಕ ನರ್ದೇಶಕರು (ಕನ್ನಡ ಮತ್ತು ಸಂಸ್ಕೃತಿ ಶ್ರೀ ಎಚ್.ಎನ್.ಸುರೇಶ, ಮಾನ್ಯ ಅಧ್ಯಕ್ಷರು, ಭಾರತೀಯ ವಿದ್ಯಾಭವನ ಬೆಂಗಳೂರು. ಶ್ರೀ ರಾಜು ಅಡಕಳ್ಳಿ, ಬೆಂಗಳೂರು, ಅಂಕಣಕಾರರು, ಕಲಾ ಚಿಂತಕರು ಇವರುಗಳು ಉತ್ಸವದ ಮೂರನೇ ದಿನದ ಮುಖ್ಯ ಅಭ್ಯಾಗತರುಗಳಾಗಿರಲಿದ್ದಾರೆ.
ಸಾಂಸ್ಕೃತಿಕ ಕರ್ಯಕ್ರಮಗಳು ಸಂಜೆ 6.30 ರಿಂದ ನಡೆಯಲಿದ್ದು ಕಲಾಶ್ರೀ ಪಂ. ಮುದ್ದು ಮೋಹನ್, ಐ.ಎ.ಎಸ್(ನಿ.) ಇವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ನಡೆಯಲಿದ್ದು ಗಾಯನ ಕಿವಿಗಿಂಪುಗಯ್ಯಲಿದ್ದು: ಪ್ರೋ. ಗೋಪಾಲಕೃಷ್ಣ ಹೆಗಡೆ, ಕೆಲಭಾಗ ಮತ್ತು ಶ್ರೀ ಭರತ ಹೆಗಡೆ ಕ್ರಮವಾಗಿ ತಬಲಾದಲ್ಲಿ ಮತ್ತು ಹರ್ಮೋನಿಯಂನಲ್ಲಿ ಸಹಕಾರ ನೀಡಲಿದ್ದಾರೆ. ಗುರು ಡಾ. ಲಲಿತಾ ಶ್ರೀನಿವಾಸನ್, ಬೆಂಗಳೂರು. ನಿರ್ದೇಶನದ ಮೈನವಿರೇಳಿಸುವ ಭರತನಾಟ್ಯ ಪ್ರದರ್ಶನ ನೂಪುರ ಸಂಸ್ಥೆ ಬೆಂಗಳೂರು ಇವರಿಂದ.
ಉತ್ಸವದ 4ನೇ ದಿನ 19.03.2024ರಂದು ಶ್ರೀ ಆರ್.ಎಂ. ಹೆಗಡೆ, ಬಾಳೇಸರ. ಮಾನ್ಯ ಅಧ್ಯಕ್ಷರು, ಟಿ.ಎಂ.ಎಸ್.ಸಿದ್ದಾಪುರ. ವಿದ್ವಾನ್ ಗ. ನಾ. ಭಟ್ಟ, ಮೈಸೂರು, ಬರಹಗಾರರು, ವಿಮರ್ಶಕರು. ಶ್ರೀಮತಿ ಚಿತ್ರಾಕ್ಷಿ ಗೌಡ, ನಾಜಗಾರ. ಮಾನ್ಯ ಅಧ್ಯಕ್ಷರು, ಕೆಳಗಿನೂರು ಪಂಚಾಯತ. ಶ್ರೀ ನಾಗರಾಜ ಭಟ್ಟ ಬೇಂದ್ರೆ, ಉದ್ಯಮಿಗಳು. ಕಲಾ ಪೋಷಕರು ಇವರುಗಳು ಮುಖ್ಯ ಅಭ್ಯಾಗತರುಗಳಾಗಿರಲಿದ್ದು ಶ್ರೀ ಬಿ.ಎನ್.ವಾಸರೆ, ಮಾನ್ಯ ಅಧ್ಯಕ್ಷರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು.ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6.30 ರಿಂದ ಜರುಗಲಿದ್ದು ಅಮೃತಾ ಸಿಂಗ್, ಹೈದ್ರಾಬಾದ್ ಇವರಿಂದ ಕುಚಿಪುಡಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾರ್ತಿಕೆರೆ ರಾಘಣ್ಣ ಇವರ ತಂಡದಿಂದ ಸುಗಮ ಸಂಗೀತ ಮತ್ತು ಸೋನಾಲಿಕಾ ನೃತ್ಯ ತಂಡ, ಬೆಂಗಳೂರು ಇವರಿಂದ ಓಡಿಸ್ಸಿ ನೃತ್ಯ ಮನಗೆಲ್ಲಲಿದೆ.
ನಾಟ್ಯೋತ್ಸವದ ಸಮಾರೋಪ ಸಮಾರಂಭವು ದಿನಾಂಕ 20.03.2024 ಬುಧವಾರದಂದು ಸಂಜೆ 4.30 ರಿಂದ ಜರುಗಲಿದ್ದು ವಿದ್ವಾನ್ ಗ. ನಾ. ಭಟ್ಟ. ಮೈಸೂರು, ಬರಹಗಾರರು, ಸಂಸ್ಕೃತಿ ಚಿಂತಕರು. ಇವರು 14 ನೇ ನಾಟ್ಯೋತ್ಸವದ ಸಮಗ್ರ ಅವಲೋಕನ ಪ್ರಸ್ತುತಪಡಿಸಲಿದ್ದಾರೆ. ಶ್ರೀ ಜಿ. ಎಸ್. ಭಟ್ಟ ಮೈಸೂರು. ಖ್ಯಾತ ಸಾಹಿತಿಗಳು, ಕಲಾಪೋಷಕರು ಇವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಶ್ರೀ ಸುನೀಲ್ ನಾಯ್ಕ, ಮಾಜಿ ಶಾಸಕರು ಭಟ್ಕಳ ಕ್ಷೇತ್ರ ಶ್ರೀ ಎನ್. ಎಸ್. ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷರು.ಉತ್ತರ ಕನ್ನಡ ಡಾ. ಶ್ರೀಧರ ಹೆಗಡೆ ಪ್ರಾಧ್ಯಾಪಕರು, ಫೀಲ್ಡ್ ಮರ್ಷಲ್ ಕರ್ಯಪ್ಪ ಕಾಲೇಜು, ಮಡಿಕೇರಿ ಮುಖ್ಯ ಅಭ್ಯಾಗತರುಗಳಾಗಿ ಭಾಗಿಯಾಗಲಿದ್ದಾರೆ.
ಮುಕ್ತಿಶ್ರೀ ಹೈದ್ರಾಬಾದ್ ಇವರಿಂದ ಕಥಕ್ ನೃತ್ಯ ಪ್ರದರ್ಶನ ನಡೆಯಲಿದ್ದು ಗಾಯಕರಾಗಿ ನಾಗೇಶ ಅಡಗಾಂವಕರ್, ಪಡಂತದಲ್ಲಿ ಆಯುಶಿ ದೀಕ್ಷಿತ, ತಬಲಾದಲ್ಲಿ ಆಶಯ ಕುಲಕರ್ಣಿ, ಹರ್ಮೋನಿಯಂನಲ್ಲಿ ಅಭಿಷೇಕ ಕುಲಕರ್ಣಿ ಪಕಾವಾಜ್ ನಲ್ಲಿ ಕೃಷ್ಣ ಸಾಲುಂಬೆ ಸಹಕಾರ ನೀಡಲಿದ್ದಾರೆ ಎಂದು ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿಯ ಯಕ್ಷಗಾನ ಮಂಡಳಿಯ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆ ತಿಳಿಸಿದರು.
14ನೆಯ ರಾಷ್ಟ್ರೀಯ ನಾಟ್ಯೋತ್ಸವನ್ನು ಸಂಭ್ರಮದಿಂದ ಸಂಘಟಿಸುತ್ತಿರುವ ಈ ಸಂದರ್ಭದಲ್ಲಿ ಕಲಾಭಿಮಾನಿಗಳು ಊರಿನ ನಾಗರೀಕರು, ಹಿತೈಷಿಗಳು ಸಹಕಾರದೊಂದಿಗೆ ಉಪಸ್ಥಿತರಿರಲು ವಿನಂತಿಸಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಶ್ರೀಧರ ಹೆಗಡೆ ಕೆರೆಮನೆ, ಶ್ರೀಮತಿ ಸುಹಾಸಿನಿ, ಶ್ರೀ ಕೆ. ಈ. ಹೆಗಡೆ ಹಣ್ಣುಹಿತ್ತಲು, ಶ್ರೀ ಎಮ್ . ಎಲ್ ಹೆಗಡೆ ಕೆರೆಮನೆ, ಶ್ರೀಮತಿ ರಾಜೇಶ್ವರಿ ಹೆಗಡೆ ಉಪಸ್ಥಿತರಿದ್ದರು.
ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ (ರಿ.)
ಭಾರತೀಯ ರಂಗ ಪರಂಪರೆಯಲ್ಲಿ ಒಂದು ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ಸುಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 1934ರಲ್ಲಿ ನಟಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆಯವರಿಂದ ವಿಸ್ತಾರಗೊಂಡಿತು.
ಈಗ ಐದನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಶೈಲಿ, ಪೌರಾಣಿಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿದೆ.ಅಲ್ಲದೆ ಶಿವಾನಂದ ಹೆಗಡೆಯವರ ಪುತ್ರ ಕೆರೆಮನೆ ಶ್ರೀಧರ ಹೆಗಡೆ ಕೂಡಾ ಕಲಾವಿದರಾಗಿ ಸಂಘಟಕರಾಗಿ ಮುಂದುವರಿದಿದ್ದಾರೆ. ಮಂಡಳಿಯ ವಿಸ್ತರಣಾ ಕಾರ್ಯವಾಗಿ ಅಮೃತ ಮಹೋತ್ಸವ ಆಚರಣೆ, ಶಂಭು ಹೆಗಡೆ ಸ್ಮಾರಕ ಬಯಲು ರಂಗಮಂದಿರ, ಕಲಾ ಸಾಧಕರಿಗೆ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮತ್ತು ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನ, ಯಕ್ಷಗಾನ ಶಿಲ್ಪ ನಿರ್ಮಾಣ, ಕೆರೆಮನೆ ಶಂಭು ಹೆಗಡೆ * ರಾಷ್ಟ್ರೀಯ ನಾಟೋತ್ಸವ, ಯಕ್ಷಗಾನ ಭಾಗವತಿಕೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಆಟವೇ ಪಾಠ ಯೋಜನೆ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೇಂದ್ರದ ಮೂಲಕ ‘ಯಕ್ಷಗಾನ ಗುರುಕುಲ ತರಬೇತಿ, ಮುಂತಾದವನ್ನು ನಡೆಸಿಕೊಂಡು ಬರುತ್ತಿದೆ.
ಈ ಸಂಸ್ಥೆ ಹಲವು ಪ್ರಥಮಗಳನ್ನು ಯಕ್ಷಗಾನದಲ್ಲಿ ದಾಖಲಿಸಿದೆ. ಸುಸಂಸ್ಕೃತ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿದೆ. ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ ” ‘ಮಾಸದ ಆಟ’, ಹಿರಿಯ ಕಲಾ ಸಾಧಕರ ನೆನಪಿಸುವ’ ‘ಅಪರ್ವಪರ್ವಸ್ಮರಣೆ’ ಮುಂತಾದ ಯೋಜನೆ ನಿರಂತರ ನಡೆಸಿಕೊಂಡು ಬರುತ್ತಿದೆ. 2024-25 ನೇ ಸಾಲಿನಲ್ಲಿ ಸಂಸ್ಥೆ 90ನೇ ವರ್ಷಾಚರಣೆಗೆ ಸಿದ್ಧವಾಗಿದೆ.
ಕಾಜಲ್ ಅಗರ್ವಾಲ್ ಮಾರ್ಚ್ 6 ರಂದು ಹೈದರಾಬಾದ್ನಲ್ಲಿ ನಡೆದ ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು, ಅಲ್ಲಿ ಹಾಜರಿದ್ದವರಲ್ಲಿ ಒಬ್ಬರಿಂದ ಅಹಿತಕರ ವರ್ತನೆಯ ನಂತರ ಅವರು ಅಸಮಾಧಾನಗೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಅಭಿಮಾನಿಯೊಬ್ಬ ಸೆಲ್ಫಿಗಾಗಿ ನಟಿಯ ಬಳಿ ಬರುತ್ತಿರುವುದನ್ನು ತೋರಿಸುತ್ತದೆ ಮತ್ತು ಫೋಟೋ ಕ್ಲಿಕ್ಕಿಸುವಾಗ ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ. ಅತ ನಟಿಯ ಸೊಂಟ ಸ್ಪರ್ಶಿಸಲು ಯತ್ನಿಸಿದ್ದಾನೆ.
ನೌವಾರಿ ಸ್ಟೈಲ್ನಲ್ಲಿ ಉಟ್ಟ ಮೆರೂನ್ ಸೀರೆಯಲ್ಲಿ ಕಾಜಲ್ ಎಂದಿನಂತೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈವೆಂಟ್ನಲ್ಲಿ ಆಕೆ ತನ್ನ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಒಬ್ಬ ವ್ಯಕ್ತಿ ವೇಗವಾಗಿ ಅವಳನ್ನು ಸಮೀಪಿಸಿ, ಭದ್ರತಾ ರೇಖೆಗಳನ್ನು ದಾಟಿ, ಅವಳೊಂದಿಗೆ ಚಿತ್ರವನ್ನು ಕ್ಲಿಕ್ಕಿಸಲು ಪ್ರಯತ್ನಿಸಿದನು.
ಒಂದು ಸೆಕೆಂಡಿನಲ್ಲಿ, ಅವನು ತನ್ನ ಕೈಗಳನ್ನು ಅವಳ ಸೊಂಟದ ಕಡೆಗೆ ಹಾಕಲು ಯತ್ನಿಸಿದನು. ಕಾಜಲ್ ಅಹಿತಕರವಾದಾಗ ಮತ್ತು ವ್ಯಕ್ತಿಗೆ ಪ್ರತಿಕ್ರಿಯಿಸಿದಾಗ ಭದ್ರತಾ ಸಿಬ್ಬಂದಿ ಅವನನ್ನು ದೂರ ತಳ್ಳಿದರು, ಅವರು ಶೀಘ್ರವಾಗಿ ಮತ್ತೆ ಗುಂಪಿನತ್ತ ತೆರಳಿದರು.