Thursday, March 12, 2026
Home Blog Page 341

ಇಂದು ಸಂಪಾಜೆ ಯಕ್ಷೋತ್ಸವ – ಬ್ರಹ್ಮೈಕ್ಯ ಎಡನೀರು ಶ್ರೀಗಳ ಪುಣ್ಯಸ್ಮೃತಿ, ಪ್ರಶಸ್ತಿ ಪ್ರದಾನ, ಯಕ್ಷಗಾನೋತ್ಸವ 

ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಆಯೋಜಿಸುತ್ತಿರುವ ಅಭೂತಪೂರ್ವ ಕಾರ್ಯಕ್ರಮವಾದ ಸಂಪಾಜೆ ಯಕ್ಷೋತ್ಸವವು ಈ ಬಾರಿ ಇದೇ ಬರುವ ಮಾರ್ಚ್ 6, 2021, ಶನಿವಾರದಂದು ಸಂಜೆ 4 ಘಂಟೆಗೆ ಕಲ್ಲುಗುಂಡಿ ಶಾಲಾ ವಠಾರದಲ್ಲಿ ಆರಂಭವಾಗಲಿದೆ.

ಉದ್ಘಾಟನಾ ಕಾರ್ಯಕ್ರಮ ಸಂಜೆ 4 ಘಂಟೆಯಿಂದ 5 ಘಂಟೆಯ ವರೆಗೆ ನಡೆಯಲಿದೆ. ಕರ್ನಾಟಕ ಸರಕಾರದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ಅವರು ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮವನ್ನು ಶ್ರೀ ಎಡನೀರು ಮಠದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರು ಉದ್ಘಾಟಿಸಲಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀ ಯು.ಶಿವಶಂಕರ ಭಟ್ಟರಿಗೆ ವೈದಿಕ ಪ್ರಶಸ್ತಿ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟರಿಗೆ ಸನ್ಮಾನ, ಶ್ರೀ ರಾಜೇಶ್ ರೈ ಕಲ್ಲಂಗಳ ಇವರಿಗೆ ಕಲಾಪೋಷಕ ಪ್ರಶಸ್ತಿ, ಭಾಗವತತ್ರಯರಾದ ಶ್ರೀ ಪದ್ಯಾಣ ಗಣಪತಿ ಭಟ್, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ದಿನೇಶ ಅಮ್ಮಣ್ಣಾಯ ಇವರಿಗೆ ಕೇಶವಾನಂದ ಭಾರತೀ ಶಿಷ್ಯ ಭಾಗವತ ಪ್ರಶಸ್ತಿ ನೀಡಲಾಗುವುದು.

ಮೊದಲ ಯಕ್ಷಗಾನ ಪ್ರಸಂಗದ ಪ್ರದರ್ಶನ ಮುಗಿದ ನಂತರ ರಾತ್ರಿ 7 ಘಂಟೆಯಿಂದ ರಾತ್ರಿ 8 ಘಂಟೆಯ ವರೆಗೆ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಕಾರ್ಯಕ್ರಮ ನಡೆಯಲಿದೆ.  ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾನಂದ ಗೌಡ ವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಶ್ರೀ  ಕೇಶವಾನಂದ ಭಾರತೀ ನ್ಯಾಯ ಪ್ರಶಸ್ತಿಯನ್ನು ಶ್ರೀ ತುಷಾರ್ ಮೆಹ್ತಾ ಅವರಿಗೂ,  ಶ್ರೀ  ಕೇಶವಾನಂದ ಭಾರತೀ ಯಕ್ಷಗಾನಾಧ್ವರ್ಯು ಪ್ರಶಸ್ತಿಯನ್ನು ಶ್ರೀ ಡಿ. ಹರ್ಷೇಂದ್ರ ಕುಮಾರ್ ಅವರಿಗೂ,  ಶ್ರೀ  ಕೇಶವಾನಂದ ಭಾರತೀ ಸಂಗೀತ ಪ್ರಶಸ್ತಿಯನ್ನು ಶ್ರೀ ವಿದ್ಯಾಭೂಷಣ ಅವರಿಗೆ ಮತ್ತು  ಶ್ರೀ  ಕೇಶವಾನಂದ ಭಾರತೀ ಶೈಕ್ಷಣಿಕ ಪ್ರಶಸ್ತಿಯನ್ನು ಡಾ. ರೇಣುಕಾ ಪ್ರಸಾದ್ ಕೆ.ವಿ ಅವರಿಗೆ  ನೀಡಲಾಗುವುದು. 

ಕಾರ್ಯಕ್ರಮದ ಅನಂತರ ಯಕ್ಷಗಾನ ಪ್ರದರ್ಶನ ಮುಂದುವರಿಯಲಿದೆ ಎಂದು  ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ. 

ಯಕ್ಷಗಾನಕ್ಕೊಂದು ಪಿ ಎಚ್ ಡಿ ಮಹಾಪ್ರಬಂಧ ಬರೆದ ಸಿಬಂತಿ ಪದ್ಮನಾಭ 

ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕಲಾವಿದ, ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಕೆ.ವಿ. ಅವರು ಬರೆದ ಮಹಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯವು ಪಿ ಎಚ್ ಡಿ ಪದವಿ ನೀಡಿದೆ.

ಸಿಬಂತಿ ಪದ್ಮನಾಭ ಅವರು ಬರೆದ ಫೋಕ್ ಥೀಯೇಟರ್ ಫಾರ್ ಡೆವಲಪ್ಮೆಂಟ್ ಕಮ್ಮ್ಯೂನಿಕೇಷನ್ : ಎ ಸ್ಟಡಿ ಆಫ್ ಯಕ್ಷಗಾನ   (‘Folk theatre for development communication: A study of Yakshgana) ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಈ ಪದವಿ ನೀಡಿದೆ.

ಸ್ವತಃ ಯಕ್ಷಗಾನ ಕಲಾವಿದರೂ ಆದ ಸಿಬಂತಿ ಪದ್ಮನಾಭ ಪಿ ಎಚ್ ಡಿ ಅಧ್ಯಯನಕ್ಕಾಗಿ ಯಕ್ಷಗಾನವನ್ನೇ ಆರಿಸಿಕೊಂಡಿದ್ದರು. ಅವರು ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ| ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದರು.

ಸಿಬಂತಿ ಪದ್ಮನಾಭ ಅವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಿಬಂತಿ ವೆಂಕಟ್ರಮಣ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರ. ಸಿಬಂತಿ ಪದ್ಮನಾಭ ಅವರ ಪತ್ನಿ ಶ್ರೀಮತಿ ಆರತಿ ಪಟ್ರಮೆ ಕೂಡಾ ಕಾಲೇಜು ಉಪನ್ಯಾಸಕಿ ಮಾತ್ರವಲ್ಲದೆ ಪ್ರತಿಭಾನ್ವಿತ ಯಕ್ಷಗಾನ ಕಲಾವಿದೆ.

ತುಮಕೂರಿನಲ್ಲಿದ್ದುಕೊಂಡು ಪತಿ-ಪತ್ನಿಯರು ಯಕ್ಷಗಾನ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಇಬ್ಬರೂ ಯಕ್ಷಗಾನ ಕಲಾವಿದರಾಗಿದ್ದುದು ಮಾತ್ರವಲ್ಲದೆ ತುಮಕೂರಿನಲ್ಲಿ ಹಲವಾರು ಯಕ್ಷಗಾನ ಆಟ ಕೂಟಗಳನ್ನು ಸಂಘಟಿಸಿದ್ದರು. 

ಯಕ್ಷಗಾನ ಕಲಾವಿದರನ್ನು ಪರಿಚಯಿಸುವ ಸರಣಿ ಕಾರ್ಯಕ್ರಮ ‘ಮಾತಿನ ಮಂಟಪ’ದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ಆರತಿ ಪಟ್ರಮೆಯವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆ.

ಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (24.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ದೇವಂಗಿ ಅಂದಗೆರೆ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ = ಕೋಡಿಯಾಲ್ಕರ್ ಮುಚ್ಚೂರು ಕಾನ 

ಕಟೀಲು ಎರಡನೇ ಮೇಳ ==   ಕಟೀಲು ಕ್ಷೇತ್ರ (1)

ಕಟೀಲು ಮೂರನೇ ಮೇಳ= ಬಾಳಿಗ ಕಂಪೌಂಡ್ ಕುಕ್ಕುಂದೂರು, ಕಾರ್ಕಳ 

ಕಟೀಲು ನಾಲ್ಕನೇ ಮೇಳ  == ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿ ಉಡುಪಿ 

ಕಟೀಲು ಐದನೇ ಮೇಳ == ನೆಲ್ಲಿತೀರ್ಥ ಹೌಸ್, ನೀರುಡೆ, ಬಡಗ ಎಕ್ಕಾರು 

ಕಟೀಲು ಆರನೇ ಮೇಳ == ಕಟೀಲು ಕ್ಷೇತ್ರ (2) 

ಮಂದಾರ್ತಿ ಒಂದನೇ ಮೇಳ  ==  ದಾಸನಕೊಡಿಗೆ ನಾಲೂರು 

ಮಂದಾರ್ತಿ ಎರಡನೇ ಮೇಳ   ==   ಶಾಂತಾದುರ್ಗಾ ನಿಲಯ ಗೊಲ್ಲರಬೆಟ್ಟು ಕೋಟೇಶ್ವರ  

ಮಂದಾರ್ತಿ ಮೂರನೇ ಮೇಳ  ==   ಹೊರ್ಲಾಳಿ ಕೊಕ್ಕರ್ಣೆ 

ಮಂದಾರ್ತಿ ನಾಲ್ಕನೇ ಮೇಳ   ==  ಹೆಗ್ಡೆರಮನೆ ಆಜ್ರಿ 

ಮಂದಾರ್ತಿ    ಐದನೇ ಮೇಳ  ==  ಮಣಿಕಂಠ ನಿಲಯ ಕೋಟೆ ರೋಡು ಕಲ್ಯಾಣಪುರ 

ಶ್ರೀ ಹನುಮಗಿರಿ ಮೇಳ  ==  ಲಕ್ಷ್ಮಿ ಕ್ಯಾಶ್ಯೂಸ್ ಐರ್ ಬೈಲು ಸಿದ್ಧಾಪುರ – ಶ್ರೀ ದೇವಿ ಮಹಾತ್ಮೆ (ಸಂಜೆ 6ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬಸ್ತಿ ಕಾಯ್ಕಿಣಿ ಮುರ್ಡೇಶ್ವರ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಸುಂಕದಕಟ್ಟೆ ಮೇಳ  ==  ಪಂಜಿಕಲ್ಲು – ವಜ್ರ ಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೊವಾಡಿಮನೆ, ವಂಡ್ಸೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಸಳ್ಳೆಬಚ್ಚಲುಮನೆ ಸೆಳ್ಕೋಡು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಆಲೂರು ಕೊಪ್ಪಾಟೆ  

ಶ್ರೀ ಪಾವಂಜೆ ಮೇಳ  ==  ನಾಡಾಜೆ ಮಳಲಿ – ಶ್ವೇತ ವರಾಹ, ಜಟಾಯು ಮೋಕ್ಷ, ಶ್ರೀನಿವಾಸ ಕಲ್ಯಾಣ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಪಡುವರಿ ಪಂಚಲಿಂಗೇಶ್ವರ ದೇವಾಲಯ 

ಕಮಲಶಿಲೆ ಮೇಳ ‘ಎ‘ = ಹನ್ಕಿ, ಹಳ್ಳಿಹಪಳೆ  

ಕಮಲಶಿಲೆ ಮೇಳ ‘ಬಿ‘ == ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರೋಡಿ, ಬೆಳ್ಳಂಜೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮತ ವಠಾರ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಮೂಡಬಿದ್ರೆ ಸ್ವರಾಜ್ ಮೈದಾನ – ನಾಗ ತಂಬಿಲ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ಹೊಸಕೋಟೆ ಮನೆ ಬೈಂದೂರು, ಶಿರೂರು 

ಶ್ರೀ ಬೋಳಂಬಳ್ಳಿ ಮೇಳ== ಚಿತ್ತೂರು   

ಶ್ರೀ ಸೌಕೂರು ಮೇಳ == ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ – ಪುಷ್ಪ ಚಂದನ  

ಶ್ರೀ ಹಾಲಾಡಿ ಮೇಳ == ಉಮಾಮಹೇಶ್ವರ ದೇವಸ್ಥಾನ ಕೆಳಸುಂಕ  – ನೂತನ ಪ್ರಸಂಗ (ಕಾಲಮಿತಿ) (8.30ರಿಂದ)

ಶ್ರೀ ಬೆಂಕಿನಾಥೇಶ್ವರ ಮೇಳ  == ಹರೆಗೋಡು ಕೊತ್ತಾಡಿ ಶ್ರೀ ಮಾರಿಕಾಂಬಾ ದೇವಸ್ಥಾನ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ (ಕಾಲಮಿತಿ)

ಶ್ರೀ ಮಡಾಮಕ್ಕಿ ಮೇಳ == ಶಿರ್ಲಾಲ್ ಹಾಡಿ ಅಂಗಡಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬೆಣ್ಣೆಕುದ್ರು ಶ್ರೀ ಕುಲಮಹಾಸ್ತ್ರೀಯಮ್ಮ ದೇವಸ್ಥಾನದ ವಠಾರ – ಶ್ರೀ ಆದಿಶಕ್ತಿ ಕ್ಷೇತ್ರ ಮಹಾತ್ಮೆ 

ಶ್ರೀ ಹಿರಿಯಡಕ ಮೇಳ == ಪೆರ್ಣಂಕಿಲ ಜನತಾನಗರ  – ಪವಿತ್ರ ಫಲ್ಗುಣಿ 

ಶ್ರೀ ಸಿಗಂದೂರು ಮೇಳ == ಗುಜ್ಜಾಡಿ ಮಕ್ಕಿಮನೆ ‘ಮಾನಸ ನಿಲಯ’ 

ಶ್ರೀ ನೀಲಾವರ ಮೇಳ  == ನಂದಿಕೇಶ್ವರ ಸಪರಿವಾರ ದೇವಸ್ಥಾನ ಹೆಗಡೆಕೆರೆ, ಹಳ್ಳಾಡಿ – ದೈವ ಮಂಟಪ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ಹೊಲ್ಕೋಡ್ 

ಶ್ರೀ ಮೇಗರವಳ್ಳಿ ಮೇಳ == ಸಾಲಿಗ್ರಾಮ ಗೆಂಡೆಕೆರೆ ಫ್ರೆಂಡ್ಸ್ – ರಕ್ತೇಶ್ವರಿ ಕ್ಷೇತ್ರ ಮಹಾತ್ಮೆ 

ಗುಜರಾತ್ ಚುನಾವಣಾ ಫಲಿತಾಂಶಗಳು 2021 – ಬಿಜೆಪಿಗೆ ಎದುರಿಲ್ಲದ ಮುನ್ನಡೆ, 23 ಸ್ಥಾನ ಗಿಟ್ಟಿಸಿದ  AAP 

ಗುಜರಾತ್ ಚುನಾವಣಾ ಫಲಿತಾಂಶ – ಇತ್ತೀಚೆಗಿನ ಫಲಿತಾಂಶ ಈ ರೀತಿ ಇದೆ

ಇಲ್ಲಿಯವರೆಗೆ ಪಕ್ಷದ ಸ್ಥಾನ: 455 ಸ್ಥಾನಗಳೊಂದಿಗೆ ಬಿಜೆಪಿ ಮುಂದಿದೆ

ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಗೆದ್ದ ಸ್ಥಾನಗಳು:

ಬಿಜೆಪಿ- 455

ಕಾಂಗ್ರೆಸ್- 44

ಎಎಪಿ- 23

ಬಿಎಸ್ಪಿ- 3

ಸ್ವತಂತ್ರ- 1

ದಿ| ಕಲ್ಲಾಡಿ ಕೊರಗ ಶೆಟ್ಟರ ಬಗ್ಗೆ ಮಹನೀಯರ ಮಾತುಗಳು (‘ಯಕ್ಷಕಲಾಕುಸುಮ’ ಎಂಬ ಕೃತಿಯಲ್ಲಿ)

“ಕಲ್ಲಾಡಿ ಕೊರಗ ಶೆಟ್ಟರು ಕಲಾವಿದರ ಕಷ್ಟವನ್ನು ಕಂಡವರು ಮತ್ತು ನೋವನ್ನು ಉಂಡವರೂ ಆಗಿದ್ದರು. ಶೆಟ್ಟರು ಮೇಳದ ದಾರ್ಶನಿಕ ಯಜಮಾನರು ಮಾತ್ರವಲ್ಲ ಯಜಮಾನ ಶಬ್ದದ ಜೀವಂತ ಪ್ರತಿರೂಪರು. ಅವರು ನಿಷ್ಠಾವಂತ ಧನಿಯಾಗಿ ಯಕ್ಷಗಾನದ ಧ್ವನಿಯಾಗಿದ್ದರು” – ದಿ| ಶೇಣಿ ಗೋಪಾಲಕೃಷ್ಣ ಭಟ್ 

“ಕಲ್ಲಾಡಿ ಕೊರಗ ಶೆಟ್ಟರ ಸ್ಮರಣೆಯಲ್ಲಿ ಯಾವನಿಗೆ ಮೈಯಲ್ಲಿ ನವಿರೇಳುವುದಿಲ್ಲವೋ ಅವನು, ಅವರು ದಿವಂಗತರಾದ ಮೇಲೆಯೇ ಹುಟ್ಟಿರಬೇಕು. ಯಕ್ಷಗಾನದ ಕಲ್ಪನೆ, ವ್ಯವಸ್ಥಾ ಚಾತುರ್ಯ, ವ್ಯವಸ್ಥಾಪಕನಲ್ಲಿರಬೇಕಾದ ಗಾಂಭೀರ್ಯಗಳು ಅವರಲ್ಲಿದ್ದುವು. ತೆಂಗಿನಕಾಯಿಯ ಹೊರಗೆ ಒರಟು, ಒಳಗೆ ಮಧುರೋದಕ ಹೇಗೋ, ಹಾಗೆಯೇ ಅವರ ವ್ಯಕ್ತಿತ್ವ ಎಂದು ನನ್ನ ಅನಿಸಿಕೆ” – ದಿ| ಮಲ್ಪೆ ರಾಮದಾಸ ಸಾಮಗ 

“ತೆಂಕುತಿಟ್ಟಿನಲ್ಲಿ ಡೇರೆ ಮೇಳಗಳ ಉಗಮ ಉಚ್ಛ್ರಾಯ ಕಾಲವೆನಿಸಿದ ೧೯೫೦-೧೯೯೦ರ ಅವಧಿಯ ಮೂಲ ಪ್ರವರ್ತಕರು ಕೊರಗ ಶೆಟ್ಟರು. ಅವರ ವ್ಯಕ್ತಿತ್ವವು ಯಕ್ಷಗಾನ ಕಲೆಯ ಚರಿತ್ರೆಯಲ್ಲಿ ಒಂದು ವರ್ಣಮಯ ಅಧ್ಯಾಯದ ವಸ್ತುವಾಗಿದೆ” – ಡಾ. ಎಂ. ಪ್ರಭಾಕರ ಜೋಶಿ

“ಎಲ್ಲಿಯ ವರೆಗೆ ಯಕ್ಷಗಾನ ಪ್ರದರ್ಶನವಿರುತ್ತದೋ ಅಲ್ಲಿಯ ತನಕ ಕೊರಗ ಶೆಟ್ಟರು ಮರೆಯಲಾಗದ ಮಹಾನುಭಾವರಾಗಿ ಉಳಿಯುತ್ತಾರೆ. ಯಕ್ಷಗಾನದಿಂದ ಕೊರಗ ಶೆಟ್ಟರಿಗೆ ಗೌರವ ಬಂತೋ ಅಥವಾ ಕೊರಗ ಶೆಟ್ಟರಿಂದಾಗಿ ಯಕ್ಷಗಾನಕ್ಕೆ ಗೌರವ ಬಂತೋ ಎಂದು ಪ್ರಶ್ನಿಸಿದರೆ ಎರಡೂ ಹೌದು ಎನ್ನುವುದೇ ಸರಿಯಾದ ಉತ್ತರವಾಗುತ್ತದೆ” – ಶ್ರೀ ಕುಂಬಳೆ ಸುಂದರ ರಾವ್ 

“ತೆಂಕಿನ ಯಕ್ಷಗಾನ ಕಲೆಯನ್ನೂ ಕಲಾವಿದರನ್ನೂ ಎತ್ತರಕ್ಕೇರಿಸಿದ ಯಜಮಾನ” – ಶ್ರೀ ಕೋಳ್ಯೂರು ರಾಮಚಂದ್ರ ರಾವ್

 “ಕಲಾವಿದರು ಸ್ವಾಭಿಮಾನದಿಂದ ಬದುಕುವ ಹಾಗೆ ಮಾಡಿದ ಕಲ್ಲಾಡಿ ಕೊರಗ ಶೆಟ್ಟರ ಸಾಧನೆಯು ಯಕ್ಷಗಾನದ ಇತಿಹಾಸದಲ್ಲಿ ಸ್ವರ್ಣಾಕ್ಷರಗಳಿಂದ ಬರೆದಿಡಬೇಕಾದ ಸಂಗತಿಯು” – ಶ್ರೀ ಏರ್ಯ ಲಕ್ಷ್ಮೀನಾರಾಯಣ ಆಳ್ವರು 

ಸಂಗ್ರಹ: ರವಿಶಂಕರ್ ವಳಕ್ಕುಂಜ 

ಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ 

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ  ಮೂಡಲಪಾಯ ವಿಚಾರಸಂಕಿರಣ, ಯಕ್ಷಗಾನ ಪ್ರದರ್ಶನಗಳು ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ನಡೆಯಲಿದೆ.

ಈ ಸಂದರ್ಭದಲ್ಲಿ ಹಿರಿಯ ಮೂಡಲಪಾಯ ಯಕ್ಷಗಾನ ಕಲಾವಿದರಾದ ಶ್ರೀ ಕಲ್ಮನೆ ಎ. ಎಸ್. ನಂಜಪ್ಪ ಇವರ ಸಾಕ್ಷ್ಯಚಿತ್ರ ಬಿಡುಗಡೆಯೂ ನಡೆಯಲಿದೆ.

ದಿನಾಂಕ 24ನೇ ಫೆಬ್ರವರಿ 2021, ಬುಧವಾರ ಬೆಳಗ್ಗೆ 10.30 ಘಂಟೆಯಿಂದ ತುಮಕೂರು ಜಿಲ್ಲೆಯ ಅರಳಗುಪ್ಪೆಯ ಶ್ರೀ ಕಲ್ಲೇಶ್ವರಸ್ವಾಮಿ ಸಾರ್ವಜನಿಕ ಸಮುದಾಯ ಭವನದಲ್ಲಿ  ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿರುವುದು.

ಕಾರ್ಯಕ್ರಮದ ಉದ್ಘಾಟನೆ, ಸಾಕ್ಷ್ಯಚಿತ್ರ ಬಿಡುಗಡೆ, ವಿಚಾರಗೋಷ್ಠಿ ಕಾರ್ಯಕ್ರಮಗಳ ನಂತರ ಮೂಡಲಪಾಯ ಯಕ್ಷಗಾನ ಪ್ರದರ್ಶನ ನಡೆಯಲಿರುವುದು.

ಕಾರ್ಯಕ್ರಮವು ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವಿಕೆಯ ಮೂಲಕ ಸರಕಾರದ ಕೋವಿಡ್-19 ನಿಯಮಗಳಂತೆ ನಡೆಯಲಿರುವುದು. ಕಾರ್ಯಕ್ರಮದ ವಿವರ ಈ ಕೆಳಗೆ ಲಗತ್ತಿಸಲಾಗಿದೆ. 

ಭೂಗತ ಪಾತಕಿ ರವಿ ಪೂಜಾರಿ ಮಾರ್ಚ್ 9 ರವರೆಗೆ ಮುಂಬೈ ಪೊಲೀಸರ ಕಸ್ಟಡಿಗೆ

ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್ 9 ರವರೆಗೆ ಮುಂಬೈ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಮುಂಬೈ ಪೊಲೀಸರ ಅಪರಾಧ ವಿಭಾಗ ಭೂಗತ ಪಾತಕಿ ರವಿ ಪೂಜಾರಿ ಅವರನ್ನು ಕರ್ನಾಟಕದಿಂದ ವಶಕ್ಕೆ ಪಡೆದ ನಂತರ ಮಂಗಳವಾರ ವಿಶೇಷ ಎಂಸಿಒಸಿಎ ನ್ಯಾಯಾಲಯಕ್ಕೆ ಹಾಜರುಪಡಿಸಿತು.

ಪರಾರಿಯಾದ ಪಾತಕಿ ರವಿ ಪೂಜಾರಿ ಅವರನ್ನು ಮಂಗಳವಾರ ಬೆಳಿಗ್ಗೆ ಮುಂಬೈಗೆ ಕರೆತಂದಿದ್ದು, ಅವರನ್ನು ವಿಶೇಷ ಎಂಸಿಒಸಿಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ಅಲ್ಲಿ ಅವರಿಗೆ ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಒಂದು ವರ್ಷದ ಸುದೀರ್ಘ ಹೋರಾಟದ ನಂತರ, ಬೆಂಗಳೂರು ನ್ಯಾಯಾಲಯವು ಶನಿವಾರ ಹಸ್ತಾಂತರಿಸಿದ ಭೂಗತ ಪಾತಕಿ ಪೂಜಾರಿಯನ್ನು ಮುಂಬೈ ಪೊಲೀಸರ ಕಸ್ಟಡಿಗೆ ನೀಡಿತು. 1994 ರಿಂದ ಪರಾರಿಯಾಗಿದ್ದ 59 ವರ್ಷದ ಭೂಗತ ಪಾತಕಿ ಪೂಜಾರಿಯನ್ನು ಕಳೆದ ವರ್ಷ ಸೆನೆಗಲ್‌ನಿಂದ ಬಂಧಿಸಲಾಗಿತ್ತು.

2016 ರ ಗಜಾಲಿ ಹೋಟೆಲ್ ಗುಂಡಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಕರ್ನಾಟಕ ಜೈಲಿನಲ್ಲಿದ್ದ ದರೋಡೆಕೋರ ಪೂಜಾರಿ ಅವರ ವಶಕ್ಕೆ ಕೋರಿದ್ದರು. ಈಗ ಅವರನ್ನು ಮುಂಬೈ CP ಆವರಣದಲ್ಲಿ ಕಸ್ಟಡಿಯಲ್ಲಿ ಇಡಲಾಗುವುದು.

“ನವೀ ಮುಂಬೈ ಮತ್ತು ಥಾಣೆ ಹೊರತುಪಡಿಸಿ ಮುಂಬೈನಲ್ಲಿ ಸುಮಾರು 49 ಗಂಭೀರ ಅಪರಾಧಗಳು ದಾಖಲಾಗಿವೆ. ನಾವು ಒಂದು ವರ್ಷದಿಂದ ಆತನನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಮತ್ತು ಅಂತಿಮವಾಗಿ 2016 ರ ಗಜಾಲಿ ಹೋಟೆಲ್ ಗುಂಡಿನ ಪ್ರಕರಣದಲ್ಲಿ ಯಶಸ್ಸನ್ನು ಕಂಡಿದ್ದೇವೆ” ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪೂಜಾರಿಯನ್ನು ಸೆನೆಗಲ್‌ನಿಂದ 2020 ರ ಫೆಬ್ರವರಿಯಲ್ಲಿ ಬೆಂಗಳೂರಿಗೆ ಹಸ್ತಾಂತರಿಸಲಾಯಿತು. ಕೊಲೆ ಮತ್ತು ಸುಲಿಗೆ ಮುಂತಾದ ಭೀಕರ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ಮುಂಬೈನಲ್ಲಿ ಕೇವಲ 49 ಪ್ರಕರಣಗಳಲ್ಲಿ ಆತನನ್ನು ಬಯಸಲಾಗಿದೆ.

ದರೋಡೆಕೋರನ ವಶಕ್ಕೆ ಪಡೆಯಲು ಮುಂಬೈ ಪೊಲೀಸರ ಎರಡನೇ ಪ್ರಯತ್ನ ಇದಾಗಿದೆ. ಭಾರತೀಯ ಗುಪ್ತಚರ ಮೂಲಗಳ ಪ್ರಕಾರ, ರವಿ ಪೂಜಾರಿ ದಕ್ಷಿಣ ಆಫ್ರಿಕಾದ ದೂರದ ಹಳ್ಳಿಯೊಂದರಲ್ಲಿ ಬುರ್ಕಿನಾ ಫಾಸೊ ಪಾಸ್‌ಪೋರ್ಟ್ ಹೊಂದಿರುವ ಆಂಥೋನಿ ಫರ್ನಾಂಡಿಸ್ ಅವರ ಸುಳ್ಳು ಗುರುತಿನಡಿಯಲ್ಲಿ ತಲೆಮರೆಸಿಕೊಂಡಿದ್ದ.

2000 ರ ದಶಕದ ಆರಂಭದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಬಿಲ್ಡರ್‌ಗಳನ್ನು ಸುಲಿಗೆ ಮಾಡಲು ಪ್ರಾರಂಭಿಸಿದಾಗ ರವಿ ಪೂಜಾರಿಯ ಭೂಗತ ಜಗತ್ತಿನ ನಂಟು ಬಯಲಾಯಿತು.   

ಗುಜರಾತ್ ಸ್ಥಳೀಯ ಚುನಾವಣಾ ಫಲಿತಾಂಶಗಳು 2021 : ಬಿಜೆಪಿ ಅಮೋಘ ಮುನ್ನಡೆಯತ್ತ

ಪ್ರಮುಖ ನಗರಗಳಾದ ಅಹಮದಾಬಾದ್ ಮತ್ತು ವಡೋದರಾ ಸೇರಿದಂತೆ ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಎಣಿಕೆ ಮಂಗಳವಾರ ಆರಂಭವಾಯಿತು.

ಪ್ರಮುಖ ನಗರಗಳಾದ ಅಹಮದಾಬಾದ್ ಮತ್ತು ವಡೋದರಾ ಸೇರಿದಂತೆ ಗುಜರಾತ್‌ನ ಆರು ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ಮತದಾನ ಎಣಿಕೆ ಮಂಗಳವಾರ ಆರಂಭವಾಯಿತು.

ಇತ್ತೀಚೆಗಿನ ಫಲಿತಾಂಶ ಈ ರೀತಿ ಇದೆ

ಅಹಮದಾಬಾದ್: ಬಿಜೆಪಿ- 81, ಕಾಂಗ್ರೆಸ್ -15, ಇತರರು -2
ಸೂರತ್: ಬಿಜೆಪಿ -50, ಕಾಂಗ್ರೆಸ್ -10, ಇತರರು -19
ವಡೋದರಾ: ಬಿಜೆಪಿ -36, ಕಾಂಗ್ರೆಸ್ -9, ಇತರರು -0
ರಾಜ್‌ಕೋಟ್ಲ್: ಬಿಜೆಪಿ -48, ಕಾಂಗ್ರೆಸ್ -9, ಇತರರು -0
ಜಾಮ್‌ನಗರ: ಬಿಜೆಪಿ -23, ಕಾಂಗ್ರೆಸ್ -4, ಇತರರು -4
ಭಾವನಗರ: ಬಿಜೆಪಿ -30, ಕಾಂಗ್ರೆಸ್ -8, ಇತರರು -0

ಹೆರಿಗೆಯ ನಂತರದ ಖಿನ್ನತೆ ಅಥವಾ ಪ್ರಸವಾನಂತರದ ಖಿನ್ನತೆಯ ಬಗ್ಗೆ ಮಾನಸಿಕ ರೋಗಗಳ ತಜ್ಞೆ ಡಾ. ಸ್ನೇಹಾ ಏನು ಹೇಳುತ್ತಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ

ಮನುಷ್ಯನ ಮಾನಸಿಕ ಖಿನ್ನತೆಗಳಲ್ಲಿ ಹಲವಾರು ವಿಧ.   ಅದರಲ್ಲಿ ಪ್ರಸವಾನಂತರದ ಖಿನ್ನತೆಯೂ ಒಳಗೊಂಡಿದೆ.

ಈ ಖಿನ್ನತೆಯ ಪರಿಣಾಮ ಏನು? ತಾಯಿ, ಮಗುವಿನ ಅರೋಗ್ಯ ಮತ್ತು ಭವಿಷ್ಯದ ಮೇಲೆ ಇದು ಹೇಗೆ ಪರಿಣಾಮ ಬೀರುತ್ತದೆ?

ಈ ಖಿನ್ನತೆಯ ಲಕ್ಷಣಗೆಳೇನು? ಎಷ್ಟು ಶೇಕಡಾ ಮಹಿಳೆಯರಲ್ಲಿ ಈ ಖಿನ್ನತೆ ಕಾಣಿಸಿಕೊಳ್ಳಬಹುದು?

ಇದರಿಂದ ಹೊರಬರುವುದು ಹೇಗೆ? ಪೂರ್ವಭಾವಿಯಾಗಿ ಇದನ್ನು ಅರಿತಿದ್ದರೆ ಸಂಭವನೀಯ ಅಪಾಯವನ್ನು ತಪ್ಪಿಸಬಹುದೇ? ಇದಕ್ಕೆ ಚಿಕಿತ್ಸೆ ಇದೆಯೇ?

ಈ ಎಲ್ಲ ವಿಚಾರಗಳ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ  ಮಾಹಿತಿ ನೀಡಿದ್ದಾರೆ. ತಪ್ಪದೆ ಈ ವೀಡಿಯೋ ನೋಡಿ. 

ಮೇಳಗಳ ಇಂದಿನ ( 23.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 23.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕೊಪ್ಪ ಗಬ್ಬಾನೆ ದೇವಸ್ಥಾನದ ಆವರಣ – ಕಾಯಕಲ್ಪ

ಕಟೀಲು ಒಂದನೇ ಮೇಳ = ಕಾರಿಂಜ ಕ್ರಾಸ್, ವಗ್ಗ ಬಂಟ್ವಾಳ 

ಕಟೀಲು ಎರಡನೇ ಮೇಳ ==   ಶ್ರೀ ದುರ್ಗಾಪರಮೇಶ್ವರಿ ದೇವಿ ಮಂದಿರ ಬಾಚಕೆರೆ ಸರಪಾಡಿ ಬಂಟ್ವಾಳ 

ಕಟೀಲು ಮೂರನೇ ಮೇಳ= ಕಟೀಲು ಕ್ಷೇತ್ರ (೧)

ಕಟೀಲು ನಾಲ್ಕನೇ ಮೇಳ  == ಕೊಲ್ಲಂಗೋಳಿಮನೆ ನಿಟ್ಟೆ ಪರಪ್ಪಾಡಿ, ಕಾರ್ಕಳ 

ಕಟೀಲು ಐದನೇ ಮೇಳ == ಅಲೆಕ್ಕಾಡಿ ಶಾಲಾ ವಠಾರ ವಯಾ ನಿಂತಿಕಲ್ಲು 

ಕಟೀಲು ಆರನೇ ಮೇಳ == ಸಾಯಿ ನಿವಾಸ, ಅಡ್ಲಿಮಜಲು ಕೆಮ್ಮಾಯಿ ಪುತ್ತೂರು 

ಮಂದಾರ್ತಿ ಒಂದನೇ ಮೇಳ  ==  ಕಂತುಗದ್ದೆ ಮೇಳಿಗೆ 

ಮಂದಾರ್ತಿ ಎರಡನೇ ಮೇಳ   ==   ತಗ್ಗರ್ಸೆ ಬೈಂದೂರು  

ಮಂದಾರ್ತಿ ಮೂರನೇ ಮೇಳ  ==   ಹಕ್ಕಲುಮನೆ ಕಕ್ಕುಂಜೆ 

ಮಂದಾರ್ತಿ ನಾಲ್ಕನೇ ಮೇಳ   ==  ಕೊಟ್ಟಕ್ಕಿ ರತ್ ಗೋಡು, ರಟ್ಟಾಡಿ  

ಮಂದಾರ್ತಿ    ಐದನೇ ಮೇಳ  ==  ನಾಯರ್ ಜೆಪ್ಪು, ತಾಳಿಪಾಡಿ ಐಕಳ ಕಿನ್ನಿಗೋಳಿ, ದ.ಕ 

ಶ್ರೀ ಹನುಮಗಿರಿ ಮೇಳ  ==  ಚಿತ್ರಪಾಡಿ, ಸಾಲಿಗ್ರಾಮ ಗಿರಿ ಮುತ್ತು ಪೌಲ್ಟ್ರಿ ಫಾರ್ಮ್ ಹತ್ತಿರ – ಗಜೇಂದ್ರ ಮೋಕ್ಷ,ಚಂದ್ರಾವಳಿ, ಮಾಯಾ ಮಾರುತೇಯ 

ಶ್ರೀ ಸಾಲಿಗ್ರಾಮ ಮೇಳ == ಮರವಂತೆ ಶ್ರೀ ಮಹಾ ಬೊಬ್ಬರ್ಯ ದೇವಸ್ಥಾನ – ಈಶ್ವರಿ ಪರಮೇಶ್ವರಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಾರ್ಕಳಿ ಕೆಳಾಮನೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಮೆತ್ಕಲ್ ಹಾರ್ಮಣ್

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಬಗ್ವಾಡಿ ಹೊಸಿಮನೆ 

ಶ್ರೀ ಪಾವಂಜೆ ಮೇಳ  ==  ಅಸೈಗೋಳಿ  – ಶ್ರೀ ದೇವಿ ಮಹಾತ್ಮೆ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ ==  ಶ್ರೀ ನಂದಿಕೇಶ್ವರ ದೇವಸ್ಥಾನ ಕೋಡಿ – ದಿವ್ಯ ಸನ್ನಿಧಿ 

ಕಮಲಶಿಲೆ ಮೇಳ ‘ಎ‘ = ಸಿದ್ದಾಪುರ 

ಕಮಲಶಿಲೆ ಮೇಳ ‘ಬಿ‘ == ಕೊಡ್ಲಾಡಿ 

ಶ್ರೀ ಬಪ್ಪನಾಡು ಮೇಳ == ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ – ಬನಾತ ಬಂಗಾರ್ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ಆದ್ಯಪಾಡಿ ಶಾಲಾ ವಠಾರ – ರಂಗಸ್ಥಳ (ಸಂಜೆ 6ರಿಂದ)

ಶ್ರೀ ಅಮೃತೇಶ್ವರೀ ಮೇಳ == ತಾಳಮಕ್ಕಿ, ಮಂಕಿ 

ಶ್ರೀ ಬೋಳಂಬಳ್ಳಿ ಮೇಳ== ಜಡ್ಕಲ್  

ಶ್ರೀ ಸೌಕೂರು ಮೇಳ == ಮುಳ್ಳುಗುಡ್ಡೆ – ಹಳನಾಡು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ಯಕ್ಷಿಮನೆ ವಠಾರ ಉಪ್ಪಿನಕುದ್ರು – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ  == ಮುಡಿಪು ಮೂಳೂರು ಕೊರಗಜ್ಜ ಸಾನಿಧ್ಯ ವಠಾರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಅಲೆವೂರು ಗುಡ್ಡೆಯಂಗಡಿ ಸಾರ್ವಜನಿಕ ಗಣೇಶೋತ್ಸವ ಸಂಕಲ್ಪ ಮಂದಿರ  – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಐರೋಡಿ ಶ್ರೀ ಮಹಾಸ್ವಾಮಿ ಸನ್ನಿಧಿ 

ಶ್ರೀ ಹಿರಿಯಡಕ ಮೇಳ == ಕೆದೂರು ರೈಲ್ವೆ ಬ್ರಿಜ್ ಬಳಿ  – ಪವಿತ್ರ ಫಲ್ಗುಣಿ (ತೆಂಕುತಿಟ್ಟು ಕಾಲಮಿತಿ)

ಶ್ರೀ ಶನೀಶ್ವರ ಮೇಳ == ಶ್ರೀ ವಿಘ್ನೇಶ್ವರ ದೇವಸ್ಥಾನ ಕಾರ್ಕಡ 

ಶ್ರೀ ಸಿಗಂದೂರು ಮೇಳ == ಆರ್ಗ, ಸರಳ ಗ್ರಾಮ ಕೊಳಗೇರಿ 

ಶ್ರೀ ನೀಲಾವರ ಮೇಳ  == ಯಕ್ಷಿ ಕಲ್ಲುಕುಟ್ಟಿಗ ಮತ್ತು ಸಪರಿವಾರ ದೈವಸ್ಥಾನ ಗಾವಳಿ ಹಳ್ಳಾಡಿ  – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಎಡೇಹಳ್ಳಿ ತೀರ್ಥಹಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಶಿವಪುರ ನಾಗಬನ ಬಳಿ – ಕುಲದೈವ ಪಂಜುರ್ಲಿ