Monday, August 31, 2026
Home Blog Page 208

ಉದ್ಯಾವರ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ – ಉದ್ಯಾವರ ಸಂಪಿಗೆನಗರದಲ್ಲಿ ವಾಸವಿದ್ದ ಹುಡುಗಿ, ಬೆಳಗ್ಗೆ ನೋಡುವಾಗ ನಾಪತ್ತೆ 

ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿಯೊಬ್ಬಳು ಆಗಸ್ಟ್ 23ರಂದು ಬೆಳಗ್ಗೆಯಿಂದ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ಕಾಪು ಮಸೀದಿ ಬಳಿಯ ಉದ್ಯಾವರ ಸಂಪಿಗೆನಾಳ ನಿವಾಸಿ ನೇತ್ರಾವತಿ (20) ನಾಪತ್ತೆಯಾಗಿರುವ ಯುವತಿ. ನೇತ್ರಾವತಿ ಮೂರು ತಿಂಗಳಿನಿಂದ ಉದ್ಯಾವರದ ‘ಸ್ಮಾರ್ಟ್ ಮೊಬೈಲ್’ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು.

ಆಗಸ್ಟ್ 22 ರಂದು ರಾತ್ರಿ ಊಟ ಮುಗಿಸಿ ಮಲಗಿದ್ದ ಆಕೆ ಆಗಸ್ಟ್ 23 ರಂದು ಬೆಳಗ್ಗೆ ಹಾಲ್ ನಿಂದ ಎದ್ದು ಬಾತ್ ರೂಂಗೆ ಹೋಗಿ ನಾಪತ್ತೆಯಾಗಿದ್ದಾಳೆ ಎಂದು ಅಕ್ಕ ವಿಜಯಲಕ್ಷ್ಮಿ ಪೊಲೀಸರಿಗೆ ನೀಡಿದ ದೂರಿನಂತೆ ತಿಳಿಸಿದ್ದಾರೆ.

ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

200 ಕೋಟಿ ಮನಿ ಲಾಂಡರಿಂಗ್ ಪ್ರಕರಣ: ತನ್ನ ನಿಶ್ಚಿತ ನಿರಖು ಠೇವಣಿ ( ಫಿಕ್ಸೆಡ್ ಡೆಪಾಸಿಟ್) “ಸ್ವಂತ ಕಾನೂನುಬದ್ಧ ಆದಾಯ” ಎಂದು ಹೇಳಿದ ಜಾಕ್ವೆಲಿನ್ ಫರ್ನಾಂಡೀಸ್

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ತಮ್ಮ ಸ್ಥಿರ ಠೇವಣಿಗಳನ್ನು ‘ಸ್ವಂತ ಕಾನೂನುಬದ್ಧ ಆದಾಯ’ದಿಂದ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಅವರು ತಮ್ಮ ಹಲವಾರು ಫಿಕ್ಸೆಡ್ ಡೆಪಾಸಿಟ್‌ಗಳನ್ನು ಲಗತ್ತಿಸಿರುವ ಮನಿ ಲಾಂಡರಿಂಗ್ ತಡೆ ಕಾಯ್ದೆಯ ಅಧಿಕಾರಿಗಳಿಗೆ ಉತ್ತರಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ 200 ಕೋಟಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ಹೊರಹೊಮ್ಮಿದ ನಂತರ ಅವರ ಹೂಡಿಕೆಗಳನ್ನು ಪ್ರಾಧಿಕಾರವು ಪ್ರಶ್ನಿಸುತ್ತಿದೆ. ನಟಿ ತನ್ನ ಎಫ್‌ಡಿಗಳಿಗೆ ಸುಖೇಶ್ ನೊಂದಿಗೆ ಯಾವುದೇ ಸಂಪರ್ಕವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾಳೆ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಅವರು ಠೇವಣಿಗಳನ್ನು ತಮ್ಮ ಸ್ವಂತ ಕಾನೂನುಬದ್ಧ ಆದಾಯದ ಮೂಲಗಳಿಂದ ಎಂದು ಸಮರ್ಥಿಸಿಕೊಂಡಿದ್ದಾರೆ.

ಕಳೆದ ವಾರ, ಇಡಿ ಪೂರಕ ಆರೋಪಪಟ್ಟಿ ಸಲ್ಲಿಸಿತ್ತು, ಅದರಲ್ಲಿ ಅವರು ಜಾಕ್ವೆಲಿನ್ ಅವರನ್ನು ಆರೋಪಿ ಎಂದು ಹೆಸರಿಸಿದ್ದರು. ಈ ಪ್ರಕರಣದಲ್ಲಿ ನಟಿಯನ್ನು ಬಲಿಪಶು ಮಾಡಲಾಗಿದೆ ಎಂದು ಅವರ ವಕೀಲ ಪ್ರಶಾಂತ್ ಪಾಟೀಲ್ ಈಟಿಮ್ಸ್‌ಗೆ ತಿಳಿಸಿದ್ದಾರೆ.

“ಅವರು ಯಾವಾಗಲೂ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಿದ್ದಾರೆ ಮತ್ತು ಇಲ್ಲಿಯವರೆಗೆ ನೀಡಲಾದ ಎಲ್ಲಾ ಸಮನ್ಸ್‌ಗಳಿಗೆ ಹಾಜರಾಗಿದ್ದಾರೆ. ಆಕೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲಾ ಮಾಹಿತಿಯನ್ನು ಇಡಿಗೆ ಹಸ್ತಾಂತರಿಸಿದ್ದಾಳೆ ಎಂದು ವಕೀಲರು ಹೇಳಿದರು.

6.47 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಮೂಲದ ಚಿನ್ನದ ಗಟ್ಟಿ ವಶಪಡಿಸಿಕೊಂಡ ಕಸ್ಟಮ್ಸ್ – 4 ಜನರ ಬಂಧನ

6.47 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಮೂಲದ ಚಿನ್ನದ ಗಟ್ಟಿಗಳನ್ನು ಕೋಲ್ಕತ್ತಾದ ಬಾಗುಯಾಟಿ ಪ್ರದೇಶದಲ್ಲಿ ಕೋಲ್ಕತ್ತಾ ಕಸ್ಟಮ್ಸ್ ವಶಪಡಿಸಿಕೊಂಡಿದೆ.

ಈ ಸಂಬಂಧ 4 ಜನರನ್ನು ಬಂಧಿಸಲಾಗಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ಈ ಚಿನ್ನದ ಗಟ್ಟಿಗಳು ಬಿಸ್ಕೆಟ್ ರೂಪದಲ್ಲಿದೆ. (ಚಿತ್ರ ನೋಡಿ)

2022 ರ ಆಗಸ್ಟ್ 23 ರಂದು ಒಟ್ಟು 12.215 ಕೆಜಿ (ನಿವ್ವಳ) ತೂಕವಿರುವ ವಿದೇಶಿ ಮೂಲದ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಂಡ ಕೋಲ್ಕತ್ತಾದ ಕಸ್ಟಮ್ಸ್ ಅಧಿಕಾರಿಗಳು ಬಾಗುಯಾಟಿ, ಕೋಲ್ಕತ್ತಾ-59 ರಲ್ಲಿ 4 ವ್ಯಕ್ತಿಗಳನ್ನು ಬಂಧಿಸಿದ್ದಾರೆ.

40 ವರ್ಷದ ಮಹಿಳೆಯನ್ನು ಏಳು ಜನರ ತಂಡವು ಅಪಹರಿಸಿ ಲೈಂಗಿಕ ದೌರ್ಜನ್ಯ – ಬಾಲಾಪರಾಧಿ ಸೇರಿದಂತೆ ಐವರ ಬಂಧನ

ತಮಿಳುನಾಡಿನ ವಿರುದುನಗರ ಜಿಲ್ಲೆಯ ಅರುಪ್ಪುಕೊಟ್ಟೈ ಬಳಿ ಆ.22 ರಂದು ಕಾರಿನಲ್ಲಿ ಹಿಂತಿರುಗುತ್ತಿದ್ದ 40 ವರ್ಷದ ಮಹಿಳೆಯನ್ನು ಏಳು ಜನರ ತಂಡವು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿತ್ತು. ಆ.23 ರಂದು ಬಾಲಾಪರಾಧಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ತನ್ನ ನೆರೆಹೊರೆಯವರೊಂದಿಗೆ ಆಗಸ್ಟ್ 23 ರಂದು ಸಂಜೆ ತನ್ನ ಮನೆಗೆ ಹೋಗುತ್ತಿದ್ದಾಗ, 7 ಜನರ ತಂಡವು ಅವರ ಹಿಂದೆ ಕಾರಿನಲ್ಲಿ ಬಂದಿತು ಮತ್ತು ದ್ವಿಚಕ್ರ ವಾಹನವು ಆಕೆಯ ನೆರೆಹೊರೆಯವರ ಮೇಲೆ ದಾಳಿ ಮಾಡಿದೆ.

ನಂತರ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ಹಲ್ಲೆ ನಡೆಸಿ ಹಣ ಮತ್ತು ಚಿನ್ನಾಭರಣ ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ಬಡಗುತಿಟ್ಟಿನ ಅನುಭವಿ ಕಲಾವಿದ – ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ 

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ ಅವರು ಬಡಗು ತಿಟ್ಟಿನ ಅನುಭವೀ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಸುಮಾರು ಇಪ್ಪತ್ತಾರು ವರ್ಷಗಳ ಅನುಭವಿ. ಪುಂಡುವೇಷ ಮತ್ತು ಕಿರೀಟವೇಷಗಳನ್ನು ನಿರ್ವಹಿಸಬಲ್ಲ, ನಿರ್ವಹಿಸಿದ ಕಲಾವಿದರಿವರು. ಎಲ್ಲಾ ರೀತಿಯ ಪಾತ್ರಗಳನ್ನೂ ಶ್ರೀ ನರಸಿಂಹ ಗಾಂವ್ಕರ್ ಅವರು ಮಾಡಬಲ್ಲರು. ಆಲ್ ರೌಂಡರ್ ಕಲಾವಿದರಾದ ಕಾರಣ ಇವರು ತಂಡದ ಮತ್ತು ಭಾಗವತನ ಹೊಣೆಯನ್ನು ಹಗುರ ಮಾಡಬಲ್ಲರು. ಕಳೆದ ಹದಿನೆಂಟು ವರ್ಷಗಳಿಂದ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡಿದ್ದ ಇವರು ಈ ವರ್ಷದಿಂದ (2022-23) ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸಲಿದ್ದಾರೆ. 

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿಮ್ನಳ್ಳಿ ಗ್ರಾಮದ ಬಿದಿರೆಮನೆ. 1979ನೇ ಇಸವಿ ಜೂನ್ 20ರಂದು ಶ್ರೀ ಮಹಾಬಲೇಶ್ವರ ಗಾಂವ್ಕರ್ ಮತ್ತು ಶ್ರೀಮತಿ ಹೇಮಾವತಿ ದಂಪತಿಗಳ ಪುತ್ರನಾಗಿ ಜನನ. ಮಹಾಬಲೇಶ್ವರ ಗಾಂವ್ಕರ್ ಹೇಮಾವತಿ ದಂಪತಿಗಳ ಆರು ಮಂದಿ ಮಕ್ಕಳಲ್ಲಿ ಇವರು ಕೊನೆಯವರು. (ನಾಲ್ಕು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ).

ಶ್ರೀ ನರಸಿಂಹ ಗಾಂವ್ಕರ್ ಅವರ ತಂದೆ ಶ್ರೀ ಮಹಾಬಲೇಶ್ವರ ಗಾಂವ್ಕರ್ ಅವರು  ಉತ್ತಮ ಕಲಾವಿದರು. ಅಣ್ಣ ಶ್ರೀ ಭಾಸ್ಕರ ಗಾಂವ್ಕರ್ ಶಿಕ್ಷಕರು. ಇವರು ವೃತ್ತಿ ಕಲಾವಿದರಾಗಿ ತಿರುಗಾಟ ನಡೆಸಿದ್ದು ಪ್ರಸ್ತುತ ಹವ್ಯಾಸೀ ಕಲಾವಿದರಾಗಿ ವೇಷ ಮಾಡುತ್ತಿದ್ದಾರೆ. ನರಸಿಂಹ ಗಾಂವ್ಕರರ ದೊಡ್ಡಪ್ಪ ಶ್ರೀ ವೆಂಕಟ್ರಮಣ ಗಾಂವ್ಕರ ಹವ್ಯಾಸಿ ಕಲಾವಿದರು. ಹಾಗಾಗಿ ನರಸಿಂಹ ಗಾಂವ್ಕರ್ ಅವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು.

ಇವರು ಓದಿದ್ದು 8ನೇ ತರಗತಿಯ ವರೆಗೆ. 4ನೇ ತರಗತಿ ವರೆಗೆ ಶಿಮ್ನಳ್ಳಿ ಶಾಲೆಯಲ್ಲಿ. ಬಳಿಕ 7ನೇ ತರಗತಿ ವರೆಗೆ ಬಾರೆ ಶಾಲೆಯಲ್ಲಿ. ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ 8ನೇ ತರಗತಿಯನ್ನು ಪೂರೈಸಿದ್ದರು. ಎಳವೆಯಲ್ಲಿಯೇ ಯಕ್ಷಗಾನಾಸಕ್ತಿಯು ಇತ್ತು. ರಾತ್ರಿ ಆಟ ನೋಡಿ ಹಗಲು ಕುಣಿಯುವ ಕ್ರಮವೂ ಇತ್ತು. ತಾನೂ ಕಲಾವಿದನಾಗಿ ರಂಗವೇರಿ ಅಭಿನಯಿಸಬೇಕೆಂಬ ಆಸೆಯೂ ಹುಟ್ಟಿಕೊಂಡಿತ್ತು. ಯಕ್ಷಗಾನದ ಗೀಳಿನಿಂದಾಗಿಯೇ ಶಾಲಾ ಕಲಿಕೆಯನ್ನು ನಿಲ್ಲಿಸಿದ್ದರು.

ಆಗ ತಮ್ಮ ಊರಿನ ಕಲಾವಿದರೇ ಆದ ಶ್ರೀ ತಮ್ಮಣ್ಣ ಗಾಂವ್ಕರ ಅವರು ಸೌಕೂರು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಮನೆಯವರಿಗೆ ತಿಳಿಸದೆಯೇ ನರಸಿಂಹ ಗಾಂವ್ಕರರು ತಮ್ಮಣ್ಣ ಗಾಂವ್ಕರರ ಜತೆ ಸೌಕೂರು ಮೇಳ ಸೇರಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ. ಕಿರೀಟ ವೇಷಭೂಷಣಗಳನ್ನು ಧರಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮೇಳ ಬಿಟ್ಟು ಮನೆ ಸೇರಿದ್ದರು.

ಒಂದು ವಾರದ ಬಳಿಕ ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ಜತೆ ಶಿರಸಿ ಶ್ರೀ ಮಾರಿಕಾಂಬಾ ಮೇಳಕ್ಕೆ ಸೇರಿದರು. ಕಲಾ ಕ್ಷೇತ್ರದಲ್ಲಿ ಶ್ರೀ ನರಸಿಂಹ ಗಾಂವ್ಕರ್ ಅವರದ್ದು ಕ್ಷಿಪ್ರ ಕಲಿಕೆ. ಅಧ್ಯಯನದ ಮೂಲಕ ಹಂತ ಹಂತವಾಗಿ ಬೆಳೆಯುತ್ತಾ ಸಾಗಿದ್ದರು. ಮೇರು ಕಲಾವಿದ ಚಿಟ್ಟಾಣಿ ಶ್ರೀ ರಾಮಚಂದ್ರ ಹೆಗಡೆ ಅವರ ನಿರ್ದೇಶನವೂ ಸಿಕ್ಕಿತ್ತು. ತಪ್ಪಿದಾಗ ಅವರು ತಿದ್ದಿ ಮುನ್ನಡೆಸುತ್ತಿದ್ದರು.

ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ ಸಹಿತ ಅನೇಕ ಕಲಾವಿದರ ಒಡನಾಟವೂ ಕಲಿಕೆ ಅವಕಾಶವಾಗಿತ್ತು. ಶಿರಸಿ ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ಮೂರು ವರ್ಷ ಗುಂಡಬಾಳಾ ಮೇಳದಲ್ಲಿ ವ್ಯವಸಾಯ. ಶ್ರೀ ಪ್ರಭಾಕರ ಚಿಟ್ಟಾಣಿ ಅವರೇ ನರಸಿಂಹ ಗಾಂವ್ಕರರನ್ನು ಗುಂಡಬಾಳಾ ಮೇಳಕ್ಕೆ ಸೇರಿಸಿದ್ದರು. ಪೌರಾಣಿಕ ಪ್ರಸಂಗಗಳೇ ಪ್ರದರ್ಶಿಸಲ್ಪಡುತ್ತಿತ್ತು. “ಯಕ್ಷಗಾನ ಕಲಾವಿನಾಗಬೇಕೆಂಬ ಆಸೆಯುಳ್ಳವರಿಗೆ ಗುಂಡಬಾಳಾ ಮೇಳವು ಒಂದು ಕಲಿಕಾ ಕೇಂದ್ರ. ಅದೊಂದು ಪಾಠಶಾಲೆ” ಎಂಬುದು ನರಸಿಂಹ ಗಾಂವ್ಕರ್ ಅವರ ಅನುಭವದ ಮಾತು.

ಈ ಸಂದರ್ಭದಲ್ಲಿ ಪುಂಡುವೇಷ ಮತ್ತು ಕಿರೀಟ ವೇಷಗಳನ್ನೂ ಮಾಡಿ ಅನುಭವಗಳನ್ನು ಗಳಿಸಲು ಅವಕಾಶವಾಗಿತ್ತು. ಶ್ರೀ ಪ್ರಭಾಕರ ಚಿಟ್ಟಾಣಿ ಅವರ ನಿರ್ದೇಶನ ಸಹಕಾರವೂ ಸಿಕ್ಕಿತ್ತು. ಬಳಿಕ 5 ವರ್ಷಗಳ ಕಾಲ ಗೋಳಿಗರಡಿ ಮೇಳದಲ್ಲಿ ವ್ಯವಸಾಯ. ಪುರಾಣ ಪ್ರಸಂಗಗಳಲ್ಲಿ ಬರುವ ಹೆಚ್ಚಿನ ಎಲ್ಲಾ ವೇಷಗಳನ್ನು ನಿರ್ವಹಿಸಿದ ಅನುಭವ ಶ್ರೀ ನರಸಿಂಹ ಗಾಂವ್ಕರರಿಗಿದೆ. ಹಿತಮಿತವಾದ ಕುಣಿತ ಮತ್ತು ಮಾತುಗಳಿಂದ ಪಾತ್ರಗಳನ್ನು ಚಿತ್ರಿಸುತ್ತಾರೆ. ಎಲ್ಲಾ ತರದ ಪಾತ್ರಗಳನ್ನು ಮಾಡಬಲ್ಲವರಾದುದರಿಂದ ತಂಡಕ್ಕೆ ಇವರು ಅಗತ್ಯವಾಗಿ ಬೇಕಾಗುವ ಕಲಾವಿದ. ಮಳೆಗಾಲದಲ್ಲಿ ಇವರು ಬಡಗಿನ ಹೆಚ್ಚಿನ ಎಲ್ಲಾ ತಂಡದ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದಾರೆ. 

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ ಅವರು ಗೋಳಿಗರಡಿ ಮೇಳದ ಬಳಿಕ ಹದಿನೆಂಟು ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಶ್ರೀ ಕಿಶನ್ ಕುಮಾರ್ ಹೆಗ್ಡೆ ಅವರ ಸಂಚಾಲಕತ್ವದ ಈ ಮೇಳದಲ್ಲಿ ಹಿಮ್ಮೇಳ ಮುಮ್ಮೇಳಗಳ ಸರ್ವ ಕಲಾವಿದರ ಸಹಕಾರವು ದೊರಕಿತ್ತು. ಬಳ್ಕೂರು ಶ್ರೀ ಕೃಷ್ಣ ಯಾಜಿಗಳ ನಿರ್ದೇಶನವೂ ಸಿಕ್ಕಿತ್ತು.

ವೃತ್ತಿ ಬದುಕಿನಲ್ಲಿ ಸಹ ಕಲಾವಿದರ ಸಹಕಾರವನ್ನು ನರಸಿಂಹ ಗಾಂವ್ಕರ್ ಅವರು ಮರೆಯದೆ ನೆನಪಿಸುತ್ತಾರೆ. ಮೇಳದ ತಿರುಗಾಟದಲ್ಲಿ ಅನೇಕ ಖ್ಯಾತ ಕಲಾವಿದರ ಒಡನಾಟವು ಸಿಕ್ಕಿದ್ದು ಭಾಗ್ಯ. ಅದು ಕಲಿಯುತ್ತಾ ಬೆಳೆಯಲು ಅನುಕೂಲವಾಗಿತ್ತು ಎಂಬುದು ಇವರ ಮನದಾಳದ ಮಾತುಗಳು. ಕಳೆದ ಹದಿನೆಂಟು ವರ್ಷಗಳಿಂದ ಸಾಲಿಗ್ರಾಮ ಮೇಳದ ಕಲಾವಿದರಾಗಿದ್ದ ಇವರು ಈ ವರ್ಷದಿಂದ ಅಂದರೆ 2022-23ನೇ ಸಾಲಿನ ತಿರುಗಾಟವನ್ನು ಶ್ರೀ ವೈ. ಕರುಣಾಕರ ಶೆಟ್ರ ಸಂಚಾಲಕತ್ವದ ಪೆರ್ಡೂರು ಮೇಳದಲ್ಲಿ ನಡೆಸಲಿದ್ದಾರೆ.

ಶ್ರೀ ನರಸಿಂಹ ಮಹಾಬಲೇಶ್ವರ ಗಾಂವ್ಕರ್ ಅವರು ವೃತ್ತಿಬದುಕಿನಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಸೌಮ್ಯ. ಇವರು ಗೃಹಣಿ. ಶ್ರೀ ನರಸಿಂಹ ಗಾಂವ್ಕರ್ ಮತ್ತು ಶ್ರೀಮತಿ ಸೌಮ್ಯ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿ ಕುಮಾರಿ ಪ್ರಣಮ್ಯ. ೬ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕಿರಿಯ ಪುತ್ರಿ ಕುಮಾರಿ ಪ್ರತೀಕ್ಷಾ. ಒಂದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ನರಸಿಂಹ ಗಾಂವ್ಕರ ಅವರಿಗೆ ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ. ಕಲಾ ಕ್ಷೇತ್ರದಲ್ಲಿ ವ್ಯವಸಾಯವನ್ನು ನಡೆಸಲು ಕಲಾಮಾತೆಯ ಅನುಗ್ರಹವು ಸದಾ ದೊರೆಯಲಿ ಎಂಬ ಹಾರೈಕಗಳು. 

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ 

ಬಿಹಾರದಲ್ಲಿ ಆರ್ ಜೆ ಡಿ ಸರ್ಕಾರ ಬಂದಾಯ್ತು, ತೇಜಸ್ವಿ ಯಾದವ್ ಡಿಸಿಎಂ ಆಗಾಯ್ತು, ವಿಶ್ವಾಸಮತ ಗೆದ್ದಾಯ್ತು ಮತ್ತು ಲಾಲೂ ಕೇಸ್ ಖುಲಾಸೆ ಆಗೋಯ್ತು

ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ವಿಶ್ವಾಸ ಮತ ಗೆದ್ದಿದೆ. ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ್ ಮತದಾನದ ಆರಂಭಕ್ಕೂ ಮುನ್ನ ಬಿಹಾರ ವಿಧಾನಸಭೆಯಿಂದ ಪ್ರತಿಪಕ್ಷಗಳು ಹೊರನಡೆದಿದ್ದರಿಂದ ವಿಶ್ವಾಸ ಮತ ಗೆದ್ದಿದೆ. ಈಗ ಹೇಗೂ ಲಾಲೂ ಪ್ರಸಾದ್ ಯಾದವ್ ಮಗ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ ಸ್ಥಾನ ಅಭಾದಿತವಾಗಿ ಉಳಿದಿದೆ.

ಇನ್ನೂ ಒಂದು ಸುದ್ದಿ ಉಂಟು. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರನ್ನು ಸಾಕ್ಷಿಗಳು ಮತ್ತು ಸಾಕ್ಷ್ಯಾಧಾರಗಳ ಕೊರತೆಯ ಆಧಾರದ ಮೇಲೆ ಸಿವಿಲ್ ಕೋರ್ಟ್ ಹಾಜಿಪುರ ಖುಲಾಸೆಗೊಳಿಸಿದೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 2015ರ ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಜಾತಿ ಆಧಾರಿತ ಟೀಕೆಗಳನ್ನು ಮಾಡಿದ್ದಾರೆ ಮತ್ತು ನಡವಳಿಕೆಯ ಮಾದರಿಯನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಅಂದ ಹಾಗೆ ಮೇಲಿನ ಎರಡೂ ಸುದ್ದಿಗಳು ಬೇರೆ, ಬೇರೆ. ಒಂದಕ್ಕೊಂದು ಸಂಬಂಧ ಉಂಟು ಅಂತ ನಾವು ಹೇಳ್ತಿಲ್ಲ!

ಭವಿಷ್ಯದ ಇಂಜಿನಿಯರಿಂಗ್ ನ ಚಾಲನಾ ಶಕ್ತಿ – ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ನಲ್ಲಿ ವಿಶೇಷ ಉಪಾನ್ಯಾಸ 

ಪುತ್ತೂರು: ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡಾಟಾ ಸೈನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಮುಂತಾದವು ಭವಿಷ್ಯದ ಇಂಜಿನಿಯರಿಂಗ್ ಕೋರ್ಸುಗಳಾಗಿದ್ದು, ವ್ಯಾಪಕ ಅವಕಾಶವನ್ನು ಹೊಂದಿವೆ ಎಂದು ಬೆಂಗಳೂರಿನ ಅಖಿಲ ಭಾರತೀಯ ವಿಜ್ಞಾನ ಸಂಸ್ಥೆಯ ನೆಟ್ವರ್ಕ್ ಪ್ರಾಜೆಕ್ಟ್ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಅಶೋಕ್ ರಾವ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಟೆಕ್ನಾಲಜಿಯ ಶ್ರೀರಾಮ ಸಭಾಭವನದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ಆಶ್ರಯದಲ್ಲಿ ನಡೆದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಮೆಷಿನ್ ಲರ್ನಿಂಗ್, ಡಾಟಾ ಸೈನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್-ಇದರ ಉಪಯೋಗಗಳು ಮತ್ತು ಭವಿಷ್ಯದ ಇಂಜಿನಿಯರಿಂಗ್ ನ ಚಾಲನಾ ಶಕ್ತಿ ಎನ್ನುವ ವಿಷಯದ ಕುರಿತು ಮಾತನಾಡಿದರು.

ಭವಿಷ್ಯದ ಎಲ್ಲಾ ಕಾರ್ಯಗಳು ಈ ತಂತ್ರಜ್ಞಾನವನ್ನು ಬಳಸಿಕೊಂಡೇ ನಡೆಯಲಿದ್ದು ಇದಕ್ಕೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂದರು. ಅಭಿವೃದ್ಧಿಪಡಿಸಿದ ಮಾಹಿತಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು ಮತ್ತು ಪುನರ್ಬಳಕೆಗೆ ನೀಡುವುದು ಒಂದು ಸವಾಲಿನ ಕೆಲಸ. ಡಾಟಾ ಸೈನ್ಸ್ ವಿಭಾಗವು ಈ ಕೆಲಸವನ್ನು ಸುಲಲಿತವಾಗಿ ಮಾಡುವ ವಿಧಾನವನ್ನು ಕಲಿಸುತ್ತದೆ ಎಂದರು. ಕೃತಕ ಬುದ್ಧಿಮತ್ತೆಯು ಪ್ರಸ್ತುತ ಎಲ್ಲಾ ವಿಭಾಗಗಳಲ್ಲಿಯೂ ತನ್ನ ಛಾಪನ್ನು ಮೂಡಿಸುತ್ತಿದೆ ಎಂದು ಹೇಳಿದರು.


ಪ್ರಾಂಶುಪಾಲ ಡಾ,ಮಹೇಶ್ ಪ್ರಸನ್ನ.ಕೆ, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಎಂಡ್ ಮೆಷಿನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಗೋವಿಂದರಾಜ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಪ್ರೊ.ಶ್ರೀಕಾಂತ್ ರಾವ್, ಕಾರ್ಯಕ್ರಮ ಸಂಯೋಜಕ ಪ್ರೊ.ಅಭಿಷೇಕ್ ಕುಮಾರ್.ಕೆ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿಗಳಾದ ರಚನಾ.ಎಂ.ಎಸ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀನಿಧಿ ಸ್ವಾಗತಿಸಿ, ಚೈತ್ರಾ ವಂದಿಸಿದರು. ಪೃಥ್ವಿ.ಎಸ್.ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. 

ಮಾಲ್ಡೀವ್ಸ್ ಸಚಿವ ಅಲಿ ಸೊಲಿಹ್ ಗೆ ಚಾಕು ಇರಿದ ವ್ಯಕ್ತಿ – ದಾಳಿ ಮಾಡುವ ಮೊದಲು ಖುರಾನ್ ಓದಿದ ಕೊಲೆಗಡುಕ

ರಾಜಧಾನಿ ಮಾಲೆಯ ಉತ್ತರದಲ್ಲಿರುವ ಹುಲ್‌ಹುಮಲೆಯಲ್ಲಿ ಸೋಮವಾರ ಮಧ್ಯಾಹ್ನ ಮಾಲ್ಡೀವ್ಸ್ ಸಚಿವ ಅಲಿ ಸೊಲಿಹ್‌ಗೆ ಚಾಕು ಹಿಡಿದ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಆರೋಪಿಗಳು ದಾಳಿಯ ಮೊದಲು ಕುರಾನ್ ಓದಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಕೋರನಿಂದ ರಕ್ಷಿಸಿಕೊಳ್ಳಲು ಮಾಲ್ಡೀವಿಯನ್ ಸಚಿವ ಅಲಿ ಸೊಲಿಹ್ ಮೋಟಾರ್‌ಸೈಕಲ್‌ನಿಂದ ಇಳಿದು ಓಡಿಹೋದರು. ಅವರು ಈಗ ಹುಲ್ಹುಮಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಸಾತ್ಮಕ ಘಟನೆ ನಡೆದ ಕೂಡಲೇ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಸೊಲಿಹ್ ಅವರು ಪರಿಸರ, ಹವಾಮಾನ ಬದಲಾವಣೆ ಮತ್ತು ತಂತ್ರಜ್ಞಾನದ ರಾಜ್ಯ ಸಚಿವರಾಗಿದ್ದಾರೆ. ಅವರು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರ ಆಡಳಿತಾರೂಢ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಯ ಸಮ್ಮಿಶ್ರ ಪಾಲುದಾರರಾಗಿರುವ ಜುಮ್ಹೂರಿ ಪಕ್ಷದ (ಜೆಪಿ) ವಕ್ತಾರರೂ ಆಗಿದ್ದಾರೆ.

ದಿ ಟೈಮ್ಸ್ ಆಫ್ ಅಡ್ಡು ಪ್ರಕಾರ, ಸೋಲಿಹ್ ಅವರು ಹುಲ್ಹುಮಲೆಯ ರಸ್ತೆಯೊಂದರಲ್ಲಿ ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ದಾಳಿ ನಡೆಸಿದ್ದಾರೆ. ಸೋಲಿಹ್ ಅವರ ಕುತ್ತಿಗೆಯ ಮೇಲೆ ಹಿಂದಿನಿಂದ ದಾಳಿ ಮಾಡುವ ಮೊದಲು ದುಷ್ಕರ್ಮಿ ಕುರಾನ್‌ನ ಕೆಲವು ಪದ್ಯಗಳನ್ನು ಪಠಿಸಿದ್ದಾನೆ ಎಂದು ಮಾಲ್ಡೀವಿಯನ್ ಮಾಧ್ಯಮ ವರದಿ ಮಾಡಿದೆ.

ಆರೋಪಿಯ ದಾಳಿಯಲ್ಲಿ ಕುತ್ತಿಗೆಯ ಗುರಿ ತಪ್ಪಿ ಅದು ಸಚಿವರ ಎಡಗೈಯ ಭಾಗವನ್ನು ಸೀಳಿತು. ದಾಳಿಕೋರನಿಂದ ರಕ್ಷಿಸಿಕೊಳ್ಳಲು ಸಚಿವರಾದ ಸೋಲಿಹ್ ಮೋಟಾರ್‌ ಸೈಕಲ್‌ನಿಂದ ಇಳಿದು ಓಡಿಹೋದರು. ಮತ್ತು ಈಗ ಹುಲ್ಹುಮಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚುತ್ತಿರುವ ಇಸ್ಲಾಮಿಕ್ ಮೂಲಭೂತವಾದ ಮತ್ತು ಜಾಗತಿಕ ಉಗ್ರಗಾಮಿ ಸಂಘಟನೆಗಳಿಗೆ ನೇಮಕಾತಿಯಿಂದ ಮಾಲ್ಡೀವ್ಸ್ ಬೆದರಿಕೆಯನ್ನು ಎದುರಿಸುತ್ತಿದೆ.

ಸ್ಪೀಕರ್ ನಶೀದ್ ಜೊತೆಗೆ ಅಧ್ಯಕ್ಷ ಸೋಲಿಹ್ ನೇತೃತ್ವದ ಪ್ರಸ್ತುತ ಸರ್ಕಾರವು ಆಡಳಿತ ಮತ್ತು ಸಾಮಾಜಿಕ ನಿಯಮಗಳ ಕಡೆಗೆ ಅದರ ವಿಧಾನದಲ್ಲಿ ಪ್ರಜಾಪ್ರಭುತ್ವ ಮತ್ತು ಉದಾರವಾದಿಯಾಗಿದೆ. ಅಂತಾರಾಷ್ಟ್ರೀಯ ಬೆಂಬಲದೊಂದಿಗೆ ಹಿಂದೂ ಮಹಾಸಾಗರದ ರಾಷ್ಟ್ರದಲ್ಲಿ ಆಮೂಲಾಗ್ರ ಪ್ರವೃತ್ತಿಗಳ ಬೆಳವಣಿಗೆಯ ವಿರುದ್ಧ ಎಂಡಿಪಿ ಸುದೀರ್ಘವಾದ ಹೋರಾಟವನ್ನು ನಡೆಸುತ್ತಿದೆ.

ಬೈಕ್ ಗೆ ಲಾರಿ ಢಿಕ್ಕಿಯಾಗಿ  ಮಗು ಸಹಿತ ಮೂವರು ಸ್ಥಳದಲ್ಲೇ ಸಾವು – ಲಾರಿ ಚಾಲಕನ ಬಂಧನ 

ವೇಗವಾಗಿ ಬಂದ ಲಾರಿಯೊಂದು ಮಗು ಸಹಿತ ಮೂವರು ಪ್ರಯಾಣಿಸುತ್ತಿದ್ದ ಬೈಕ್ ಗೆ ಢಿಕ್ಕಿ  ಹೊಡೆದಿದೆ.

ಢಿಕ್ಕಿಯಾದ ರಭಸಕ್ಕೆ ಬೈಕ್ ನುಜ್ಜುಗುಜ್ಜಾಗಿದ್ದು ದಂಪತಿಗಳು ಮತ್ತು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬಳ್ಳಾರಿ ಕೌಲ್ ಬಜಾರ್ ಫ್ಲೈ ಓವರ್ ನಲ್ಲಿ ನಡೆದಿದೆ.

ಮೃತರನ್ನು ವೀರೇಶ್, ಅಂಜಲಿ ಮತ್ತು ಮಗು ದಿನೇಶ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಮಗು ಗಂಭೀರ ಗಾಯಗೊಂಡಿದೆ.

ಲಾರಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯೇ ಅಫಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಧಾವಿಸಿದ್ದು ಲಾರಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. 

ಸಿನಿಮಾ ನಟಿ, ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಆಕೆಯ ಕುಟುಂಬ – ಸಿಬಿಐ ತನಿಖೆಗೆ ಒತ್ತಾಯ

ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಕುಟುಂಬ ಗೋವಾದಲ್ಲಿ ಆಕೆಯ ಸಾವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದೆ. 42 ವರ್ಷದ ಸೋನಾಲಿ ಫೋಗಟ್ ಸೋಮವಾರ ರಾತ್ರಿ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಸುದ್ದಿ ಸಂಸ್ಥೆ ಪ್ರಕಾರ ಪೊಲೀಸರು “ಅಸ್ವಾಭಾವಿಕ ಸಾವು” ಎಂದು ಪ್ರಕರಣ ದಾಖಲಿಸಿದ್ದಾರೆ.

ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂಬುದನ್ನು ಆಕೆಯ ಕುಟುಂಬ ಒಪ್ಪಿಕೊಳ್ಳುವುದಿಲ್ಲ ಎಂದು ಆಕೆಯ ಸಹೋದರಿ ಹೇಳಿದ್ದಾರೆ. ತನಗೆ ಮಾಡಿದ ಕೊನೆಯ ಫೋನ್‌ ಕರೆಯಲ್ಲಿ “ಯಾವುದಕ್ಕೋ ಒಳಪಡಿಸಿದ ಭಯವಿದೆ” ಎಂದು ಸೋನಾಲಿ ಫೋಗಟ್ ಹೇಳಿದ್ದಳು ಎಂದು ಸಹೋದರಿ ಹೇಳಿದರು. “ನನ್ನ ಸಹೋದರಿಗೆ ಹೃದಯಾಘಾತವಾಗುವುದಿಲ್ಲ. ಅವರು ತುಂಬಾ ಫಿಟ್ ಆಗಿದ್ದರು. ಸಿಬಿಐನಿಂದ ಸೂಕ್ತ ತನಿಖೆಗೆ ನಾವು ಒತ್ತಾಯಿಸುತ್ತೇವೆ.

ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ನನ್ನ ಕುಟುಂಬ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಅವರಿಗೆ ಅಂತಹ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ” ಎಂದು ಆಕೆಯ ಸಹೋದರಿ ರಾಮನ್ ತಿಳಿಸಿದ್ದಾರೆ. “ಅವಳ ಸಾವಿನ ಹಿಂದಿನ ಸಂಜೆ ನನಗೆ ಅವಳಿಂದ ಕರೆ ಬಂದಿತು. ಅವಳು ವಾಟ್ಸಾಪ್‌ನಲ್ಲಿ ಮಾತನಾಡಲು ಬಯಸುವುದಾಗಿ ಹೇಳಿದಳು ಮತ್ತು ಏನೋ ನಡೆಯುತ್ತಿದೆ ಎಂದು ಹೇಳಿದಳು, ನಂತರ, ಅವಳು ಕರೆಯನ್ನು ಕಟ್ ಮಾಡಿ ನಂತರ ಪಿಕ್ ಮಾಡಲಿಲ್ಲ,” ಅವಳು ಸೇರಿಸಿದಳು.

ಗುಂಪಿನೊಂದಿಗೆ ಗೋವಾಕ್ಕೆ ತೆರಳಿದ್ದ ಸೋನಾಲಿ ಫೋಗಟ್ ಅವರು ಅಸ್ವಸ್ಥ ಎಂದು ದೂರಿದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ಸಾವಿನ ಸಂದರ್ಭಗಳನ್ನು ಆಕೆಯ ಕುಟುಂಬವು ಪ್ರಶ್ನಿಸಿದಾಗ, ಗೋವಾ ಪೊಲೀಸ್ ಮುಖ್ಯಸ್ಥ ಜಸ್ಪಾಲ್ ಸಿಂಗ್ “ಯಾವುದೇ ಫೌಲ್ ಪ್ಲೇ” ಇಲ್ಲ ಆದರೆ ಮರಣೋತ್ತರ ಪರೀಕ್ಷೆಯು ಕಾರಣವನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.

ಸೋನಾಲಿ ಫೋಗಟ್, ಕಂಟೆಂಟ್ ಕ್ರಿಯೇಟರ್, ತನ್ನ ಟಿಕ್‌ಟಾಕ್ ವೀಡಿಯೊಗಳೊಂದಿಗೆ ಖ್ಯಾತಿಗೆ ಏರಿದರು. ಎರಡು ವರ್ಷಗಳ ನಂತರ ಬಿಜೆಪಿಗೆ ಸೇರುವ ಮೊದಲು ಅವರು 2006 ರಲ್ಲಿ ಟಿವಿ ನಿರೂಪಕಿಯಾಗಿ ಪಾದಾರ್ಪಣೆ ಮಾಡಿದರು.ಅವರು 2016 ರಲ್ಲಿ ಟಿವಿ ಶೋ ಮೂಲಕ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು 2019 ರಲ್ಲಿ ವೆಬ್ ಸರಣಿಯಲ್ಲಿ ನಟಿಸಿದರು.

ಅವರು ರಿಯಾಲಿಟಿ ಶೋ ಬಿಗ್ ಬಾಸ್‌ನ 2020 ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು. ಸೋನಾಲಿ ಫೋಗಟ್ 2019 ರ ಹರಿಯಾಣ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ಣೋಯ್ ವಿರುದ್ಧ ಸೋತರು. ಇತ್ತೀಚೆಗೆ ಬಿಜೆಪಿ ಸೇರಿದ ಶ್ರೀ ಬಿಷ್ಣೋಯ್ ಅವರು ಕೆಲವು ದಿನಗಳ ಹಿಂದೆ ನಟ-ರಾಜಕಾರಣಿಯನ್ನು ಭೇಟಿಯಾದರು ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೋನಾಲಿ ಫೋಗಟ್ ತನ್ನ ತಾಯಿಗೆ ಕರೆ ಮಾಡಿ ಆಹಾರ ಸೇವಿಸಿದ ನಂತರ ಹುಷಾರಿಲ್ಲ ಎಂದು ಹೇಳಿದ್ದಾಳೆ ಎಂದು ಆಕೆಯ ಸಹೋದರಿ ರಾಮನ್ ಹಿಸಾರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. “ಅವಳು ಅಶಾಂತಿ ಅನುಭವಿಸುತ್ತಿದ್ದಾಳೆ ಎಂದು ಹೇಳಿದ್ದಳು. ತನ್ನ ವಿರುದ್ಧ ಕೆಲವು ಪಿತೂರಿ ನಡೆಸುತ್ತಿರುವಂತೆ ಅವಳು ಏನೋ ಸರಿಯಿಲ್ಲ ಎಂದು ಭಾವಿಸಿದಳು. ನಂತರ ಬೆಳಿಗ್ಗೆ, ಅವಳು ಇನ್ನಿಲ್ಲ ಎಂಬ ಸುದ್ದಿ ನಮಗೆ ಬಂದಿತು” ಎಂದು ಅವರು ಉಲ್ಲೇಖಿಸಿದ್ದಾರೆ.

ಸೋನಾಲಿ ಫೋಗಟ್ ಅವರ ಪತಿ ಸಂಜಯ್ ಫೋಗಟ್ ಅವರು 2016 ರಲ್ಲಿ 42 ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಹದಿಹರೆಯದ ಮಗಳಿದ್ದಾಳೆ.