41 ವರ್ಷದ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಗೋವಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಿಗ್ ಬಾಸ್ 14 ರ ಸ್ಪರ್ಧಿ ಮತ್ತು ನಟಿ ಸೋನಾಲಿ ಫೋಗಟ್ ಆಗಸ್ಟ್ 23 ರಂದು ಗೋವಾದಲ್ಲಿ ಕೊನೆಯುಸಿರೆಳೆದರು.
ಅವರು ಗೋವಾದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಸೋನಾಲಿ ತನ್ನ ಕೆಲವು ಸಿಬ್ಬಂದಿಯೊಂದಿಗೆ ಆಗಸ್ಟ್ 22 ರಂದು ಗೋವಾಗೆ ಪ್ರಯಾಣ ಬೆಳೆಸಿದ್ದರು. ನಟಿ ಆಗಸ್ಟ್ 24 ರವರೆಗೆ ಅಲ್ಲಿಯೇ ಇರಬೇಕಿತ್ತು.
ಸೋನಾಲಿ ಆಗಸ್ಟ್ 22 ರಂದು ರಾತ್ರಿ ಪಾರ್ಟಿಗೆ ಹೋಗಿದ್ದರು ಮತ್ತು ಮರುದಿನ ಮನೆಗೆ ಮರಳಿದರು. ಗಂಟೆಗಳ ನಂತರ, ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಕೆಯ ಅಂತಿಮ ಸಂಸ್ಕಾರದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಮನರಂಜನಾ ಕ್ಷೇತ್ರದ ಹಲವು ಗಣ್ಯರು ಆಕೆಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಡಿಸೆಂಬರ್ 2016 ರಲ್ಲಿ, ಅವರು ತಮ್ಮ ಪತಿ ಸಂಜಯ್ ಫೋಗಟ್ ಅವರನ್ನು ಕಳೆದುಕೊಂಡರು. ಆಕೆಯ ಪತಿ 42 ನೇ ವಯಸ್ಸಿನಲ್ಲಿ ತನ್ನ ತೋಟದ ಮನೆಯಲ್ಲಿ ನಿಗೂಢ ಪರಿಸ್ಥಿತಿಯಲ್ಲಿ ನಿಧನರಾದರು. ಇವರಿಗೆ ಯಶೋಧರ ಫೋಗಟ್ ಎಂಬ ಮಗಳಿದ್ದಾಳೆ.
Haryana BJP leader and content creator Sonali Phogat passes away in Goa, confirms Goa DGP Jaspal Singh
ಯುವತಿಯೊಬ್ಬಳು ವಿದ್ಯುತ್ ಕಂಬದ ಮೇಲೇರಿ ಏರೋಬಿಕ್ಸ್ (ದೈಹಿಕ ವ್ಯಾಯಾಮ) ಯುವತಿಯ ವೀಡಿಯೊ ವೈರಲ್ ಆಗಿದೆ.
ವಿದ್ಯುತ್ ಲ್ಯಾಂಪ್ ಪೋಸ್ಟ್ ಮೇಲೆ ಏರೋಬಿಕ್ಸ್ ಮಾಡಿದ ಮಹಿಳೆಯನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಅಂತರ್ಜಾಲವು ವೈವಿಧ್ಯಮಯ ಪ್ರತಿಭೆಗಳನ್ನು ಪ್ರದರ್ಶಿಸುವ ಜನರ ಅದ್ಭುತ ವೀಡಿಯೊಗಳಿಂದ ತುಂಬಿದೆ. ಒಬ್ಬ ಮಹಿಳೆ ದೀಪದ ಕಂಬದ ಮೇಲೆ ಏರೋಬಿಕ್ಸ್ ಪ್ರದರ್ಶನ ನೀಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಒಳಗಾದರು.
ವೈರಲ್ ಕ್ಲಿಪ್ನಲ್ಲಿ, ಮಹಿಳೆ ಸಲೀಸಾಗಿ ಪೋಸ್ಟ್ ಅನ್ನು ಹತ್ತುವುದು ಮತ್ತು ತನ್ನ ಮೋಡಿಮಾಡುವ ಪ್ರತಿಭೆಯನ್ನು ತೋರಿಸುವುದು ಕಂಡುಬರುತ್ತದೆ.
ಯಕ್ಷಗಾನ ಎಂಬ ಗಂಡು ಕಲೆಯ ಸೌಂದರ್ಯವು ಅನುಪಮವಾದುದು. ಹಿರಿಯ ಕಲಾವಿದರಾದ ಕುಂಬಳೆ ಸುಂದರ ರಾಯರು ಹೇಳಿದಂತೆ ಸರ್ವಾಂಗ ಸುಂದರವಾದ ಕಲೆಯಿದು. ಇದರ ಸೊಬಗನ್ನು, ಸೊಗಸನ್ನು ವರ್ಣಿಸುವುದಕ್ಕೆ ಸಹಸ್ರ ನಾಲಿಗೆಗಳುಳ್ಳ ಫಣಿಪನಿಗೂ ಅಸಾಧ್ಯ. ಹಾಗಿರುವಾಗ ನಮಗೆಲ್ಲಿ ಸಾಧ್ಯ? ಈ ಕಲೆಗೆ ಸಂಬಂಧಿಸಿದ ಪ್ರದರ್ಶನಗಳನ್ನು ನೋಡಿ, ಕೇಳಿ ಸಂತೋಷವನ್ನು ಅನುಭವಿಸುವ ನಾವೇ ಧನ್ಯರು. ಈ ಶ್ರೇಷ್ಠ ಕಲೆಯ ಸೌಂದರ್ಯವು ಕೆಡದಂತೆ ಕಾಪಿಡುವುದು ನಮ್ಮೆಲ್ಲರ ಕರ್ತವ್ಯ. ಕಲಾವಿದರೂ ಸಂಘಟಕರೂ ಕಲಾಭಿಮಾನಿಗಳೂ ಹೊಣೆಯರಿತು ತೊಡಗಿಸಿಕೊಂಡಾಗ ಇದು ಸಾಧ್ಯ. ಪರಂಪರೆ, ಹೊಸತನಗಳ ವಿಚಾರ ಬಂದಾಗ ಯಕ್ಷಗಾನ ಭೀಷ್ಮ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಮಾತುಗಳು ನೆನಪಾಗುತ್ತದೆ.
“ಸುಧಾರಣೆಯೆಂದರೆ ಬುಡವನ್ನು ಕತ್ತರಿಸದೆ, ಅಗತ್ಯವಿಲ್ಲದ ಶಾಖೆಗಳನ್ನು ಮಾತ್ರ ಕತ್ತರಿಸುವುದೆಂಬ ಕರ್ಷಕ ಬುದ್ಧಿಯಿದ್ದರೆ ಮಾತ್ರ ಕಲೆಯನ್ನು ಆಕರ್ಷಕವಾಗಿ ಉಳಿಸಿ ಬೆಳೆಸಬಹುದೆಂದು ಕಲಾವಿದರೂ ಕಲಾಭಿಮಾನಿಗಳೂ ನಂಬಿಕೆಯುಳ್ಳವರಾಗಬೇಕು” (ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ ಸ್ಮರಣ ಸಂಚಿಕೆ ‘ಸುಧಾ ಕಲಶ’ ಪುಸ್ತಕದಲ್ಲಿ) ಕಲೆಯನ್ನು ರಕ್ಷಿಸುವುದು ಕಲಾವಿದರ ಜೊತೆಗೆ ಕಲಾಭಿಮಾನಿಗಳಿಗೂ ಕರ್ತವ್ಯ ಎಂಬುದನ್ನು ಶ್ರೀ ಶೇಣಿಯವರ ಈ ಮಾತುಗಳಿಂದ ತಿಳಿಯಬಹುದು. ಯಕ್ಷಗಾನ ಪರಂಪರೆಯ ಬಗೆಗೆ ಇದಮಿತ್ಥ೦ ಎಂದು ಹೇಳಬಲ್ಲ ಡಾ. ಎಂ. ಪ್ರಭಾಕರ ಜೋಷಿ, ಡಾ. ಕೆ.ಎಂ ರಾಘವ ನಂಬಿಯಾರ್ ಮೊದಲಾದ ವಿದ್ವಾಂಸರೂ, ವಿಮರ್ಶಕರು ಮತ್ತು ಅನೇಕ ಹಿರಿಯ ಕಲಾವಿದರು ನಮ್ಮ ಜತೆಗಿರುವುದು ಸಂತೋಷದ ವಿಚಾರ.
ಯಕ್ಷಗಾನ ಕಲೆಗೆ ಕೊರತೆಯಾಗದಂತೆ ಕಲಾವಿದರು ಹೇಗೆ ಎಚ್ಚರದಿಂದ ವ್ಯವಹರಿಸಬಹುದು? ತಾವು ಹೇಗೆ ತೊಡಗಿಸಿಕೊಂಡು ಸಾಗಬೇಕು?….. ಯಕ್ಷಗಾನದ ಹಾಡುಗಾರನಿಗೆ ಇರುವಷ್ಟು ಸ್ವಾತಂತ್ರ್ಯ ಬೇರಾವ ಹಾಡುಗಾರನಿಗೂ ಇಲ್ಲ ಎಂಬುದು ಹಿರಿಯ ಶ್ರೇಷ್ಠ ಭಾಗವತರಾದ ಕಡತೋಕಾ ಶ್ರೀ ಮಂಜುನಾಥ ಭಾಗವತರು ಹೇಳಿದ ಮಾತುಗಳು. ಯಕ್ಷಗಾನ ವೇಷಧಾರಿ, ಅರ್ಥಧಾರಿಗೆ ಇರುವಷ್ಟು ಸ್ವಾತಂತ್ರ್ಯ ಬೇರೆ ಯಾವುದೇ ಕಲಾ ಪ್ರಕಾರದ ಕಲಾವಿದನಿಗೆ ಇರಲಾರದು. ಚಲನಚಿತ್ರ ನಾಟಕಗಳಲ್ಲಿ ನಿರ್ದೇಶಕನು ಬರೆದಿರಿಸಿದ ಸಂಭಾಷಣೆಗಳನ್ನು ಹೇಳಬೇಕು. ಆದರೆ ಯಕ್ಷಗಾನ ಪಾತ್ರಧಾರಿಯು ಸಿದ್ಧಪಡಿಸಿದ ಸಂಭಾಷಣೆಗಳನ್ನು ಹೇಳುವುದಿಲ್ಲ.
ಆದರೆ ಕಲಾವಿದರು ಸ್ವಾತಂತ್ರ್ಯ ಎಂದರೇನು? ಎಂಬುದನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ. ನಿಯಮದೊಳಗೆ ಬದುಕುವುದು ಎಂದರ್ಥವಲ್ಲವೇ? ಮನಬಂದಂತೆ ವ್ಯವಹರಿಸುವ ಹಾಗಿಲ್ಲ. ನಿಯಮದ ಆವರಣದೊಳಗೆ ಬದುಕುವುದೇ ಸ್ವಾತಂತ್ರ್ಯ. ಶ್ರೀ ಶೇಣಿಯವರು ಅದೇ ಪುಸ್ತಕದಲ್ಲಿ ಹಿಮ್ಮೇಳ ಮತ್ತು ಮುಮ್ಮೇಳದವರ ಹೊಣೆಗಾರಿಕೆಯನ್ನೂ ಸುಂದರವಾಗಿ ಹೇಳಿರುತ್ತಾರೆ. “ಶಾಸ್ತ್ರೀಯವಾದ ರಾಗ, ತಾಳ ಬದ್ಧತೆಯುಳ್ಳ ಹಾಡುಗಳನ್ನೇ ಆದರೂ ದೇಶ ಕಾಲಗಳ ಮರ್ಯಾದೆಯನ್ನು ಗಮನಿಸಿ ಹಾಡುವುದೇ ಪಾಂಡಿತ್ಯಕ್ಕೆ ಭೂಷಣ. ಔಚಿತ್ಯ ಬೋಧವಿಲ್ಲದಿದ್ದರೆ ವೃಥಾ ಶ್ರಮವೂ ಅಭಾಸವೂ ಆಗದಿರದು. ಯಕ್ಷಗಾನದಲ್ಲಿ ಚೆಂಡೆ ಮದ್ದಳೆಗಳಿರುವುದು ಕುಣಿತದ ನಿರ್ದೇಶನಕ್ಕಾಗಿ. ನಾಟ್ಯದ ಸ್ವಂತಿಕೆಗೆ ಈ ವಾದನವು ಪೂರಕವಾಗಿದೆಯೆಂಬ ಸತ್ಯವನ್ನು ಕಡೆಗಣಿಸಬಾರದು. ತಾಳ ವಾದ್ಯಗಳ ನಿರ್ದಿಷ್ಟ ಸೊಲ್ಲುಗಳು ಬದಲಾವಣೆಯಾದರೆ ಶೈಲಿಯೂ ವಿರೂಪಗೊಳ್ಳುವುದೆಂಬ ನೆನಪು ವಾದ್ಯದವರಿಗೆ ಇರುವಷ್ಟು ಕಾಲ ಬೆರಕೆಯ ಭಯ ದೂರವಾಗಿಯೇ ಉಳಿಯುವುದು.
ಈ ಮರ್ಮವನ್ನರಿಯದ ಭಾಗವತನು ಸಂಗೀತ ಸಾಮ್ರಾಟ ಪದವೀಧರನಾದರೂ ಯಕ್ಷಗಾನಕ್ಕೆ ಹಾಡುಗಾರನಾಗಲಾರ. ರಾಗಪ್ರಧಾನವಲ್ಲದ ತಾಳಪ್ರಧಾನಗೇಯ ಪ್ರಬಂಧಗಳನ್ನು ಹಾಡುವ ಚಾಕಚಕ್ಯತೆಯೇ ಇಲ್ಲಿ ಎದ್ದು ಕಾಣಬೇಕಾದ ಪ್ರಧಾನ ಗುಣವಾಗಿರಬೇಕು. ಈ ಪದ್ಧತಿಯೂ ಶಾಸ್ತ್ರೀಯ ಸಂಗೀತವೆಂದೇ ಅಂಗೀಕೃತವಾಗಿದೆ. ಒಂದೇ ಹಾಡಿನಲ್ಲಿ ಶೋಕ, ಕ್ರೋಧ, ಹಾಸ್ಯಾದಿಗಳನ್ನು ಬಿಂಬಿಸುವ ನುಡಿಗಟ್ಟುಗಳಿರಬಹುದಾದ ಸಂದರ್ಭಗಳಲ್ಲಿ ಹಾಡುಗಾರನು ಈ ಸಂಚಾರೀ ಭಾವಗಳಿಗೆ ತಾನೇ ಸ್ಪಂದಿಸಿ ರಾಗಮಾಲಿಕೆಯನ್ನೋ, ತಾಳಮಾಲಿಕೆಯನ್ನೋ ಮಾಡಿದರೆ ತನ್ನ ಅಜ್ಞಾನವನ್ನು ತಾನೇ ಉದ್ಘಾಟಿಸಿಕೊಂಡಂತಾಯಿತು.
ಭಾಗವತಿಕೆಯು ಸೂತ್ರಧಾರಿಕೆಯಲ್ಲದೆ ಪಾತ್ರನಿರ್ವಹಣೆಯಲ್ಲವಲ್ಲ? ರಸಭಾವ ಪ್ರಕಟಣೆ ಸೂತ್ರಧಾರಿಯ ಹೊಣೆಯಾದ್ದರಿಂದ ಸ್ಪೂರ್ತಿ ನೀಡುವ ಹಿನ್ನಲೆಯನ್ನೊದಗಿಸುವ ಕರ್ತವ್ಯ ಹಿಮ್ಮೇಳಕ್ಕಿದ್ದರೆ ಸಾಕು. ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇರುವ ಈ ಸಾಂಪ್ರದಾಯಿಕ ಅಚ್ಚುಕಟ್ಟುತನವೇ ಯಕ್ಷಗಾನದ ತನ್ನತನ. ಸಂಗೀತ ಶಾಸ್ತ್ರದಲ್ಲಿ ಗುರುತಿಸಲ್ಪಟ್ಟ ಜನ್ಯಜನಕ ರಾಗಗಳ ಪಾಠವಿದ್ದು, ಯಕ್ಷಗಾನ ರಚನೆಗಳಲ್ಲಿ ನಮೂದಿಸಿರುವ ರಾಗಗಳನ್ನು ಶುದ್ಧವಾಗಿ ಬಳಸುವ ಅಗತ್ಯದೊಂದಿಗೆ ಇತಿಮಿತಿಯನ್ನರಿತು ಸಾಹಿತ್ಯವನ್ನು ಸ್ಪಷ್ಟ ಉಚ್ಛಾರದೊಂದಿಗೆ ನಾದತರಂಗವನ್ನು ಸೃಷ್ಟಿಸಿ ಬಯಲು ರಂಗಮಂಟಪವನ್ನು ಇಂದ್ರಲೋಕವೋ ಚಂದ್ರಲೋಕವೋ ಆಗಿಸುವ ಭಾಗವತಿಕೆಯೇ ಯಕ್ಷಗಾನದ ಉಳಿವಿಗೆ ಅಗತ್ಯವೆನ್ನಿಸುತ್ತದೆ. ಈ ರೀತಿಯ ಲಕ್ಷ್ಯ ಲಕ್ಷಣಗಳು ಜಾನಪದವೆಂಬ ಹಿಮ್ಮೇಳ ಮುಮ್ಮೇಳಗಳಲ್ಲಿ ಹುಡುಕಿದರೂ ದೊರಕಲಾರವು” ಹಿಮ್ಮೇಳದ ಸ್ವಾತಂತ್ರ್ಯದ ಮೇರೆಯನ್ನು ಶೇಣಿಯವರು ಹೀಗೆ ಸೂಚಿಸಿರುತ್ತಾರೆ.
ವೇಷಧಾರಿಗಳೂ ಗಮನಿಸಬೇಕಾದ ಅಂಶಗಳು ಅನೇಕ. ಅಗ್ಗದ ಪ್ರಚಾರಕ್ಕೆ ಹಾತೊರೆಯಬಾರದು. ಸತತ ಅಭ್ಯಾಸಿಯಾಗಿ ಸಿದ್ಧಿಯಾಗಿ ಪ್ರಸಿದ್ಧನಾಗಬೇಕು. ವೃಷ್ಟಿಯಾಗಿ ಚಿಂತಿಸದೆ ಸಮಷ್ಟಿಯಾಗಿ ಯೋಚಿಸಬೇಕು. ಸಮಗ್ರ ಪ್ರದರ್ಶನವು ರಂಜಿಸಬೇಕು ಎಂದಾದರೆ ತಾನು ಹೇಗೆ ತೊಡಗಿಸಿಕೊಳ್ಳಬೇಕೆಂಬ ಸೂಕ್ಷ್ಮ ವಿಚಾರಗಳ ಅರಿವು ಆತನಿಗಿರಬೇಕು. ತುಂಬಾ ಹೊತ್ತು ಮಾತನಾಡಿದವರೆಲ್ಲಾ ಒಳ್ಳೆಯ ಮಾತುಗಾರರಾಗುವುದಿಲ್ಲ. ಪಾತ್ರೋಚಿತವಾಗಿ ಮಾತು ಮತ್ತು ಕುಣಿತಗಳು ಬೇಕಾದುದು. ಆತನು ಮಾತಿನ ರಚನಾ ಬಲವನ್ನು ಹೊಂದಿರಬೇಕು. ಯಾರಿಗೆ ವಿಚಾರಗಳನ್ನು ಸರಿಯಾಗಿ ಹೇಳಲಾಗುವುದಿಲ್ಲವೋ ಅವರಿಗೆ ಮಾತಿನ ಜಾಣ್ಮೆಯು ಇಲ್ಲವೆಂದು ಅರ್ಥ. ಅದುವೇ ಕಲಾವಿದನಿಗೆ ಬೇಕಾದುದು. ಕಲಾವಿದರಲ್ಲಿ ಇರಬೇಕಾದ ಮತ್ತೊಂದು ವಿಚಾರ ಸ್ವಸ್ವರೂಪ ಜ್ಞಾನ. ತಾನೆಷ್ಟು? ತನ್ನ ಸಾಮರ್ಥ್ಯವೇನು? ತನ್ನಲ್ಲಿರುವ ಕೊರತೆಯೇನು? ತಾನು ಯಾವ ಭಾಗದಲ್ಲಿ ಬಲಿಷ್ಠ? ಜತೆಗೆ ತಾನು ಯಾವ ವಿಭಾಗದಲ್ಲಿ ಹಿಂದುಳಿದಿದ್ದೇನೆ ಎಂಬುದನ್ನು ಆತ ತಿಳಿದಿರಬೇಕು. ಕೊರತೆಗಳನ್ನು ನಿವಾರಿಸುವಲ್ಲಿ ತಾನು ತೊಡಗಿಸಿಕೊಳ್ಳಬೇಕು. ಬೆಳವಣಿಗೆಯನ್ನು ಹೊಂದದೆ ಇಷ್ಟು ವರ್ಷಗಳ ತಿರುಗಾಟ ನಡೆಸಿದ್ದೇನೆ ಎಂಬ ಒಂದೇ ಆಧಾರದಲ್ಲಿ ಸ್ಥಾನವನ್ನೂ ಪ್ರತಿಫಲವನ್ನೂ ಕೇಳಬಾರದು.
ಶುದ್ಧವಾದ ಕನ್ನಡ ಭಾಷೆಯಿಂದ ಪಾತ್ರೋಚಿತವಾಗಿ ಕುಣಿತ, ಅಭಿನಯ ಮಾತುಗಳಿಂದ ಕಲಾಸೇವೆಯನ್ನು ಮಾಡುವುದು ಕಲಾವಿದರ ಕರ್ತವ್ಯ. ಪ್ರೇಕ್ಷಕರು ತಪ್ಪುಗಳನ್ನು ಸೂಚಿಸಿದರೆ ವಿನಮ್ರವಾಗಿ ಸ್ವೀಕರಿಸಬೇಕು. ಹೌದು ಎಂದಾದರೆ ತಿದ್ದಿಕೊಳ್ಳಲೂ ಬೇಕು. ಕಲಾಭಿಮಾನಿಗಳು ತಪ್ಪನ್ನು ಎತ್ತಿ ಆಡಿದರು ಎಂದು ಕೋಪಿಸಬಾರದು. ತಪ್ಪನ್ನು ಸೂಚಿಸದೆ ಇದ್ದರೆ ತಿದ್ದಿಕೊಳ್ಳಲು ಎಲ್ಲಿದೆ ಅವಕಾಶ? ಕಲಾಭಿಮಾನೀ ವಿದ್ಯಾವಂತ ಪ್ರೇಕ್ಷಕರು ಕಲಾವಿದರಿಗೆ ಒಂದು ರೀತಿಯಲ್ಲಿ ಗುರುಗಳೇ ಆಗಿರುತ್ತಾರೆ. ವಿಮರ್ಶಕರ ಮಾತಿನ ಹೊಡೆತ ಸಿಕ್ಕಾಗ ಕಲಾವಿದರು ನೋಯದೆ ಸಂತೋಷಪಡಬೇಕು. ಹೊಡೆತವು ಬಿದ್ದಾಗ ಬಂಗಾರವು ಬೇಸರಿಸುವುದಿಲ್ಲ. ಹೊಡೆತ ಬಿದ್ದಷ್ಟು ಹೊಳೆಹೊಳೆದು ಕನಕವು ಕಾಣಿಸಿಕೊಳ್ಳುವುದಿಲ್ಲವೇ? ವ್ಯಾಕರಣ ದೋಷ, ಉಚ್ಚಾರ ದೋಷ, ಪಾತ್ರದ ಸ್ವಭಾವವನ್ನು ತಿಳಿಯದೆ ರಂಗವೇರುವುದು, ಒಟ್ಟಿನಲ್ಲಿ ಪಾತ್ರಕ್ಕೆ ಸಾಕಷ್ಟು ಸಿದ್ಧವಾಗದೆ ರಂಗವೇರುವ ಸಾಹಸವನ್ನು ತೋರಬಾರದು.
ಈ ಕೊರತೆಗಳನ್ನು ನಿವಾರಿಸಿದಾಗ ಎಲ್ಲರೂ ಗುರುತಿಸುತ್ತಾರೆ. ಗೌರವಿಸುತ್ತಾರೆ. ಕಲಾವಿದರಿಗೆ ಒಂದು ವಿಚಾರದಲ್ಲಿ ಬೇಸರವಾಗಬೇಕು. ಯಾವಾಗ? ಬಂಗಾರಕ್ಕೆ ಹೊಡೆತ ಬಿದ್ದಾಗ ನೋವಾಗದು. ಆದರೆ ಗುಲಗಂಜಿಯ ಜತೆ ತೂಕಮಾಡಿದಾಗ ನೋವಾಗುವುದು. ಟೀಕೆ, ವಿಮರ್ಶೆಗಳಿಗೆ ಕಲಾವಿದರು ನೋಯಬಾರದು. ಆದರೆ ಅವಿದ್ಯಾವಂತರೊಡನೆ ಅಪ್ರಬುದ್ಧರೊಡನೆ ತೂಗಿದಾಗ ನಿಜವಾದ ಕಲಾವಿದನು ನೋವನ್ನು ಅನುಭವಿಸುತ್ತಾನೆ. ಅನುಭವಿಸಲೇ ಬೇಕು.
ಯಕ್ಷಗಾನ ಸಂಘಟಕರೂ ಕಲಾಭಮಾನೀ ಪ್ರೇಕ್ಷಕರೂ ಕಲೆಯನ್ನು ಉಳಿಸಿ ಬೆಳೆಸಲು ಕಾರಣರಾಗುತ್ತಾರೆ. ಪ್ರೇಕ್ಷಕರನ್ನು ಕಲಾವಿದರು ಸಭಾಸದರೆಂದೇ ಸಂಭೋದಿಸುತ್ತಾರೆ. ರಂಗಪ್ರವೇಶಿಸಿ ಸಭಾವಂದನೆಯನ್ನೂ ಮಾಡುತ್ತಾರೆ. ಕಲೆಗೆ ಕೊರತೆಯಾಗದಂತೆ ಪ್ರದರ್ಶನವನ್ನು ಏರ್ಪಡಿಸುವ ಕಲೆಯು ಸಂಘಟಕರಿಗೆ ಕರಗತವಾಗಿರಬೇಕು. ಅವರೂ ಪ್ರಬುದ್ಧರಿರಬೇಕು. ಸಮಯಕ್ಕೆ ಹೊಂದಿಕೊಳ್ಳುವ ಪ್ರಸಂಗಗಳನ್ನೇ ಆಯ್ಕೆ ಮಾಡಬೇಕು. ನಾವು ಒಂದು ರಾತ್ರಿಯಲ್ಲಿ ತುಂಬಾ ಪ್ರಸಂಗಗಳನ್ನು ಆಯೋಜಿಸಿದೆವು ಎಂಬುದಕ್ಕಿಂತ ಒಂದೋ ಎರಡೋ ಪ್ರಸಂಗಗಳನ್ನು ಉತ್ತಮವಾಗಿ ಆಡಿಸಿದೆವು ಎಂದು ಅಭಿಮಾನದಿಂದ ಹೇಳಿಕೊಳ್ಳಬಹುದು.
ಉದಾಹರಣೆಗಾಗಿ, ಪಾಂಡವಾಶ್ವಮೇಧ ಎಂಬ ಪ್ರಸಂಗವು ಯಕ್ಷಗಾನದಲ್ಲಿ ಇಲ್ಲ. ಬೇರೆ ಬೇರೆ ಕವಿಗಳು ಬರೆದ ನೀಲಧ್ವಜ ಕಾಳಗ, ಪ್ರಮೀಳಾರ್ಜುನ, ಸುಧನ್ವ ಮೋಕ್ಷ, ಭಕ್ತ ಮಯೂರಧ್ವಜ, ವೀರವರ್ಮ ಕಾಳಗ ಎಂಬ ಪ್ರಸಂಗಗಳನ್ನು ಒಟ್ಟು ಸೇರಿ ನಾವು ಪಾಂಡವಾಶ್ವಮೇಧ ಎಂದು ಆಡುತ್ತಿದ್ದೇವೆ. ಬರೆದ ಕವಿಗೆ ಕೊರತೆಯಾಗದಂತೆ ಎರಡೇ ಪ್ರಸಂಗಗಳು ಸಾಲದೇ? ಅಷ್ಟೂ ವೇಷಗಳು ಆ ಪ್ರಸಂಗದೊಳಗೆ ಇವೆ. ರಾಮಾಶ್ವಮೇಧ ಎಂಬ ಪ್ರಸಂಗವು ಯಕ್ಷಗಾನದಲ್ಲಿ ಇಲ್ಲ. ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳು ಬರೆದ ವೀರಮಣಿ ಕಾಳಗ ಮತ್ತು ಪಾರ್ತಿಸುಬ್ಬನ ಕುಶಲವರ ಕಾಳಗವನ್ನು ಒಟ್ಟಾಗಿ ರಾಮಾಶ್ವಮೇಧ ಎಂಬ ಹೆಸರಿನಲ್ಲಿ ಆಡುತ್ತಿದ್ದೇವೆ.
ರಾಮಾಶ್ವಮೇಧ ಕತೆಗೆ ಸಂಬಂಧಪಟ್ಟು ಬೇರೆ ಪ್ರಸಂಗಗಳೂ ಇವೆ. ಸುರಥನ ಕಾಳಗ, ಸುಬಾಹು ಕಾಳಗ ಎಂಬ ಪ್ರಸಂಗಗಳೂ ಇವೆ. ಸುಬಾಹು ಕಾಳಗದಲ್ಲಿ ದಮನನು ಶತ್ರುಘ್ನನ ಸೇನೆಯೊಂದಿಗೆ ಪರಿಪೂರ್ಣವಾಗಿ ಹೋರಾಡುವ ಕತೆಯಿದೆ. ವಿದ್ಯುನ್ಮಾಲಿ ಎಂಬ ದಾನವನು ಕುದುರೆಯನ್ನು ಅಪಹರಿಸಿ ಶತ್ರುಘ್ನನಿಂದ ಹತನಾಗುವ ಕಥೆಯಿದೆ. ಸುಬಾಹು ಎಂಬ ರಾಜನು ಹೋರಾಡಿ ಶರಣಾಗುವ ಕಥೆಯಿದೆ. ಸುದರ್ಶನೋಪಾಖ್ಯಾನ ಎಂಬ ಪ್ರಸಂಗವಿಲ್ಲ. ಸುದರ್ಶನ ವಿಜಯ ಮತ್ತು ಕಾರ್ತವೀರ್ಯಾರ್ಜುನ ಎಂಬ ಎರಡು ಪ್ರಸಂಗಗಳನ್ನು ಒಟ್ಟಾಗಿ ಈ ಹೆಸರಿನಿಂದ ನಾವು ಪ್ರದರ್ಶಿಸುತ್ತೇವೆ.
ದಶಾವತಾರ ಎಂಬ ಪ್ರಸಂಗವಿಲ್ಲ. ಬೇರೆ ಬೇರೆ ಕವಿಗಳು ಬರೆದ ಪ್ರಸಂಗಗಳನ್ನು ಸೇರಿಸಿ ನಾವು ದಶಾವತಾರ ಎಂಬ ಹೆಸರಿನಿಂದ ಆಡುತ್ತೇವೆ. ಕಡಿಮೆ ಸಂಖ್ಯೆಯ ಪ್ರಸಂಗಗಳನ್ನು ಆಯ್ಕೆ ಮಾಡಿ ಅದನ್ನು ಪರಿಪೂರ್ಣವಾಗಿ ಕವಿಗಳ ಹೆಸರನ್ನು ಉಲ್ಲೇಖಿಸಿ ಆಯೋಜಿಸುವ ಬಗ್ಗೆ ಸಂಘಟಕರು ಯೋಚಿಸಬಹುದು. ಪ್ರದರ್ಶನಕ್ಕೆ ಕಲಾವಿದರ ಆಯ್ಕೆ, ಕಲಾವಿದರನ್ನು ಮಧ್ಯವರ್ತಿಗಳಿಲ್ಲದೆ ತಾವೇ ಆಮಂತ್ರಿಸುವುದು ಇತ್ಯಾದಿ ವಿಚಾರಗಳೂ ಕಲೆಯ, ಪ್ರದರ್ಶನದ ರಂಜನೆಗೆ ಕಾರಣವಾಗುತ್ತದೆ. ಕಲ್ಯಾಣ ಪ್ರಸಂಗಗಳ ಆಯ್ಕೆಯಲ್ಲೂ ಹೀಗೆಯೇ ಯೋಚಿಸಬಹುದು.
ಪ್ರದರ್ಶಿಸದೆ ಉಳಿದ ಅನೇಕ ಉತ್ತಮವಾದ ಕಲ್ಯಾಣ ಪ್ರಸಂಗಗಳಿವೆ. ಉದಾಹರಣೆಗೆ ದುರ್ಯೋಧನನ ಪುತ್ರಿ ಲಕ್ಷಣೆಯನ್ನು ಶ್ರೀಕೃಷ್ಣನ ಪುತ್ರನಾದ ಸಾಂಬನು ವಿವಾಹವಾಗುವ ಲಕ್ಷಣಾ ಸ್ವಯಂವರ, ಶತ್ರುಘ್ನನ ಪುತ್ರ ಯೂಪಕೇತನು ವಿವಾಹವಾಗುವ ಮದನ ಸುಂದರೀ ಕಲ್ಯಾಣ ಮೊದಲಾದ ಪ್ರಸಂಗಗಳಿವೆ. ಪುಂಡುವೇಷ, ಸ್ತ್ರೀವೇಷ, ಬಣ್ಣದ ವೇಷ, ಕಿರೀಟ ವೇಷಗಳಿಗೆ ಈ ಪ್ರಸಂಗಗಳಲ್ಲಿ ಅವಕಾಶಗಳಿವೆ. ಹೀಗೆ ಪ್ರಸಂಗಗಳನ್ನು ಪ್ರದರ್ಶಿಸಿದರೆ ಪ್ರಸಂಗದೊಳಗಿರುವ ಸಂಪೂರ್ಣ ವಿಚಾರವನ್ನು ಪ್ರೇಕ್ಷಕರಿಗೆ ತಲುಪಿಸಿದಂತಾಗುತ್ತದೆ. (ಒಟ್ಟಿನಲ್ಲಿ ಇರುವ ಸಮಯಕ್ಕೆ ಹೊಂದಿಕೊಂಡು ಬೇಕಾದಷ್ಟೇ ಪ್ರಸಂಗಗಳನ್ನು ಪ್ರದರ್ಶಿಸುವುದು) ಪ್ರಸಂಗಗಳ ಆಯ್ಕೆ, ಕಲಾವಿದರ ಆಯ್ಕೆ ಮೊದಲಾದ ವಿಚಾರಗಳಲ್ಲಿ ಪ್ರೌಢ ಸಂಘಟಕರು ನಮ್ಮ ಜತೆ ಇರುವುದು ಸಂತೋಷದ ವಿಚಾರ. ಕಲಾವಿದರು, ಸಂಘಟಕರ ಜತೆ ಕಲಾಭಿಮಾನೀ ಪ್ರೇಕ್ಷಕರೂ ಯಾವುದು ಒಳಿತು, ಯಾವುದು ಕೆಡುಕು ಎಂದು ನಿರ್ಣಯಿಸುವ ಪ್ರೌಢರಾಗಿರುವುದು ನಮ್ಮೆಲ್ಲರ ಭಾಗ್ಯ.
ಕಲಾವಿದರು ಎಡವುದು ಸಹಜ. ಅದಕ್ಕೆ ಕಾರಣಗಳೂ ಇವೆ. ಅವರು ಎಡವಿದಾಗ ಎಚ್ಚರಿಸಿ ಮೇಲೆಬ್ಬಿಸುವ ಹೊಣೆ ಪ್ರೇಕ್ಷಕರಿಗಿದೆ. ಸರಿಯಾಗಿ ವಿಮರ್ಶಿಸುವ ಪ್ರೇಕ್ಷಕರೇ ಯಕ್ಷಗಾನಕ್ಕೆ ಆಸ್ತಿಯಾಗುತ್ತಾರೆ. ಕಲಾವಿದರ ಪರಿಪೂರ್ಣ ಪಾತ್ರಪ್ರಸ್ತುತಿಯನ್ನು ನೋಡಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡುತ್ತಾರೆ. ಅವನು ಎಷ್ಟು ಹಾರಿದ ಎಂಬುದನ್ನು ಲೆಕ್ಕ ಹಾಕುವುದರ ಜತೆಗೆ ಪಾತ್ರೋಚಿತವಾಗಿ ಹಾರಿದನೇ? ಕುಣಿದನೇ? ಆಮೇಲೆ ಸರಿಯಾಗಿ ಮಾತನಾಡಿದನೇ? ಎಂಬುದನ್ನು ವಿಮರ್ಶಿಸಿ ಪ್ರೇಕ್ಷಕರು ಪ್ರತಿಕ್ರಿಯೆ ನೀಡುವುದನ್ನು ಕಂಡಾಗ ಆನಂದವಾಗುತ್ತದೆ.
ಸದಭಿರುಚಿಯುಳ್ಳ ಪ್ರೇಕ್ಷಕ ಟೀಕೆಗಾಗಿ ಟೀಕೆ ಮಾಡಲಾರ. ಟೀಕೆ ಮಾಡಲೆಂದೇ ಪ್ರದರ್ಶನಕ್ಕೆ ಬರಲಾರ. ಕಲಾವಿದರು ನಿರ್ವಹಣೆಯಲ್ಲಿ ಎಡವಿದಾಗ ಮಾತ್ರ ವಿಮರ್ಶಿಸುತ್ತಾನೆ. ಅದೂ ಸಂಸ್ಕಾರ ಉಳ್ಳವನಾಗಿ, ಮನಸ್ಸಿಗೆ ನೋವಾಗದಂತೆ ವಿಮರ್ಶಿಸುತ್ತಾನೆ. ಪ್ರೇಕ್ಷಕರಿಂದ ಟೀಕೆ, ವಿಮರ್ಶೆಗಳು ಬೇಕೇ ಬೇಕು. ಉತ್ತಮ ಕಲಾವಿದನು ಅದನ್ನು ಬಯಸಬೇಕು. ಮತ್ತು ಬಯಸುತ್ತಾನೆ. ಇಲ್ಲವಾದರೆ ತಿದ್ದಿಕೊಂಡು ಉತ್ತಮನಾಗಲು ಅವಕಾಶವಿರದು. ಯಕ್ಷಗಾನಕ್ಕೆ ಬೇಕಾದುದು ಹಿತಮಿತವಾದ ಮಾತುಗಾರಿಕೆ ಮತ್ತು ಕುಣಿತ ಎಂಬುದನ್ನು ಎಲ್ಲರೂ ಬಲ್ಲರು.
ಹಿಮ್ಮೇಳ ಮುಮ್ಮೇಳ ಕಲಾವಿದರು ಪ್ರಸಂಗವನ್ನು ರಂಜಿಸುವಲ್ಲಿ ತಂಡ ಸ್ಪೂರ್ತಿಯಿಂದ ಕೆಲಸ ಮಾಡಿದಾಗ ಪ್ರದರ್ಶನವೂ ರಂಜಿಸುತ್ತದೆ. ಕಲಾವಿದರು ಆಲಸಿಯಾಗದೆ ಅಧ್ಯಯನಶೀಲರಾಗುತ್ತಾರೆ. ಸಂಘಟಕರು ಪ್ರಸಂಗ ಮತ್ತು ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಚತುರರಾಗಿ ವ್ಯವಹರಿಸುತ್ತಾರೆ. ಪ್ರೇಕ್ಷಕರು ಸದಭಿರುಚಿ ಉಳ್ಳವರಾಗಿ ಒಳ್ಳೆಯದನ್ನು ಗುರುತಿಸಿ ಪ್ರೋತ್ಸಾಹಿಸುತ್ತಾರೆ. ಹೀಗೆ ಕಲಾವಿದರು, ಸಂಘಟಕರು, ಪ್ರೇಕ್ಷಕರು ಇವರೊಳಗೆ ಒಂದು ಅತ್ಯುತ್ತಮ ಹೊಂದಾಣಿಕೆಯಿರಲಿ. ನಾವೆಲ್ಲರೂ ಒಂದಾಗಿ ಮುನ್ನಡೆಯೋಣ. ಯಕ್ಷಗಾನದ ಪರಂಪರೆಗೆ, ಸೌಂದರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳೋಣ. ಸಂಘಟಕರೂ ಸದಭಿರುಚಿಯ ಕಲಾಭಿಮಾನಿಗಳೇ ಕಲಾವಿದರ ಬಂಧುಗಳು. ಅವರಿಲ್ಲದೆ ಕಲಾವಿದರು ಬದುಕಲಾರರು. ನಾವೆಲ್ಲರೂ ಕಲಾಮಾತೆಯ ಸುಪುತ್ರರು. ಒಟ್ಟಾಗಿ ಮುಂದುವರಿಯೋಣ.
ದಿ: 20/08/22 ವಿವೇಕಾನಂದ ನಗರದ ವರಸಿದ್ದಿವಿನಾಯಕನ ಸನ್ನಿಧಿಯಲ್ಲಿ ನಡೆದ ತಾಳಮದ್ದಲೆ ‘ಸಂಕಷ್ಟಿ ಮಹಾತ್ಮೆ’ ಪ್ರೇಕ್ಷಕರಿಗೆ ಮುದನೀಡುತ್ತಾ ವೈಜಾರಿಕತೆಯನ್ನು ಬಡಿದೆಬ್ಬಿಸುತ್ತಾ, ಭಕ್ತಿಪಾರಮ್ಯತೆಗೆ ಒತ್ತು ನೀಡಿ ಮನೋಹರವಾಗಿ ಮೂಡಿಬಂತು. ಯಕ್ಷಗಾನ ವಿದ್ವಾಂಸ ಪ್ರೊ| ಡಾ| ಜಿ.ಎ. ಹೆಗಡೆ ಸೋಂದಾ ವಿರಚಿತ ಈ ಕೃತಿ, ತಾಳಮದ್ದಲೆಯ ವಿಚಾರದ ಓಘದಲ್ಲಿ ಹತ್ತು ಹಲವು ಸಂಗತಿಗಳನ್ನು ಅನಾವರಣಗೊಳಿಸಿ ಆರಾಧನೆ ಆಚರಣೆ, ಸಂಪ್ರದಾಯ ಪದ್ದತಿ, ಮೌಲ್ಯ ಸಂಘರ್ಷ, ತಾತ್ವಿಕತೆ ಇತ್ಯಾದಿ ಸ್ಥಾಪಿತ ಮೌಲ್ಯಗಳನ್ನು ಚರ್ಚೆಗೆ ಒಳಪಡಿಸಿ ಭಕ್ತಿ ಪಾರಮ್ಯತೆಯನ್ನು ವೈಚಾರಿಕ ಉತ್ತುಂಗದಲ್ಲಿ ಸಾರಿತು.
ರಾಜಾ ಸುಜಯನಾಗಿ ಡಾ| ಜಿ.ಎ. ಹೆಗಡೆ ಸೋಂದಾ ಯೋಗ, ದೈವೇಶ್ಚೆ, ಗಣಪತಿಯ ಆರಾಧನೆಯ ಮಹತ್ವವನ್ನು ಅದರ ತಾತ್ವಿಕ ನೆಲೆಯಲ್ಲಿ ವ್ಯಾಖ್ಯಾನಿಸಿದರು. ಯಾಜ್ಞವಲ್ಕ್ಯನಾಗಿ ಡಾ|ಎಸ. ಡಿ.ಹೆಗಡೆ ಹೊನ್ನಾವರ ಸಂವಾದಕ್ಕೆ ಮೆರಗು ತಂದರು. ಪ್ರೊ|ಕೃಷ್ಣ ಹೆಗಡೆ ಮುರ್ಡೆಶ್ವರ ಭಾಮಿನಿಯಾಗಿ, ಭಕ್ತಿ ಪ್ರಾಧಾನ್ಯತೆಯನ್ನು ಎತ್ತಿ ಹಿಡಿದು ಆಚರಣೆ, ಆರಾಧನೆಯ ಮಹತ್ವ ಸಾರಿದರು. ಡಾ| ಎಸ್.ಡಿ. ಹೆಗಡೆ ಭಾರ್ಗವಿಯ ಪಾತ್ರದಲ್ಲಿ ರಂಜಿಸಿದರು.
ಬಾಲಚಂದ್ರ ಭಟ್ಟ ಕರಸೊಳ್ಳಿ ಮಂತ್ರಿ ಮೇಧಾವಿಯಾಗಿ ಉತ್ತಮ ಸಂವಾದ ನಡೆಸಿದರು. ಡಾ. ಜಿ.ಎ. ಹೆಗಡೆ ಸೋಂದಾ ಅವರು ಮೌಲ್ಯ ಸಂಘರ್ಷ, ರಾಜನೈತಿಕತೆ, ಅಧಿಕಾರ ಪಾಲನೆ, ಕೃತಘ್ನತೆ, ವಿಶ್ವಾಸದ್ರೋಹ, ನಂಬಿಕೆ ಮತ್ತು ಮಿತ್ರತ್ವದ ಪರಾಕಾಷ್ಟತೆ ಕುರಿತು ಕರಸೊಳ್ಳಿಯವರಲ್ಲಿ ಚರ್ಚಿಸಿ ಸಂವಾದ ಸಂಭ್ರಮವಾಗಿಸಿದರು.
ಜ್ಯೋತಿ ಅಶ್ವಥ ಹೆಗಡೆ ವಿಜಯ ವಿಕ್ರಮಿಯಾಗಿ, ಎಸ್.ಎಸ್. ಭಟ್ ವನಪಾಲನಾಗಿ ಕಾರ್ಯಕ್ರಮಕ್ಕೆ ಕಳೆತಂದರು. ವೈಚಾರಿಕ ಸಂಘರ್ಷದ ನಡುವೆ, ತಾತ್ವಿಕತಳಹದಿಯಲ್ಲಿ ಭಕ್ತಿ ಪಾರಮ್ಯತೆಯನ್ನು ಮೆರೆಸಿದ ಪ್ರಸಂಗ ಇದಾಗಿ ರಸಿಕ ಪ್ರೇಕ್ಷಕರಿಗೆ ರಸದೌತಣ ನೀಡಿತು. ಶ್ರಾವಣ ಸಂಭ್ರಮದ ಅಂಗವಾಗಿ ಶಿರಸಿಯ ಯಕ್ಷಶುಭೋದಯದಿಂದ ಈ ಕಾರ್ಯಕ್ರಮ ವರಸಿದ್ದಿವಿನಾಯಕ ದೇವಾಲಯದ ಸಹಕಾರದಿಂದ ನಡೆಯಿತು.
ವರದಿ : ಡಾ| ಜಿ.ಎ. ಹೆಗಡೆ ಸೋಂದಾ ಅಧ್ಯಕ್ಷರು ಯಕ್ಷಶುಭೊದಯ ಮೊ.ನಂ. : 9448735501
ಮುಂಬಯಿ: ‘ಯಕ್ಷಗಾನ ಹಲವು ಆಯಾಮಗಳನ್ನು ಹೊಂದಿರುವ ಒಂದು ಮಹೋನ್ನತವಾದ ಸಮಷ್ಟಿ ಕಲೆ. ಕರಾವಳಿಯಲ್ಲಿ ಹುಟ್ಟಿ ಜಾಗತಿಕ ಮಟ್ಟಕ್ಕೆ ಬೆಳೆದು ವಿಶ್ವಾದ್ಯಂತ ರಸಿಕರಿಂದ ಮನ್ನಣೆಗೊಳಗಾದ ಶ್ರೀಮಂತ ಕಲಾಪ್ರಕಾರ. ಇದಕ್ಕೆ ಮುಂಬೈಯಲ್ಲಿ ಭದ್ರ ನೆಲೆಯನ್ನು ಕಲ್ಪಿಸಿ ಯಕ್ಷಕಲೆಯ ಪ್ರಸರಣಕ್ಕೆ ಕಾರಣವಾದ ಅಜೆಕಾರು ಕಲಾಭಿಮಾನಿ ಬಳಗದ ಕೊಡುಗೆ ಅಪಾರ’ ಎಂದು ಯಕ್ಷಗಾನ ವಿದ್ವಾಂಸ – ಸಾಹಿತಿ,ಕರ್ನಾಟಕ ಜಾನಪದ,ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಮುಂದಾಳತ್ವದಲ್ಲಿ ಭಾಂಡೂಪ್ ನಿತ್ಯಾನಂದ ಮಂದಿರದಲ್ಲಿ ಶುಭಾರಂಭಗೊಂಡ ನೂತನ ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮುಂಬೈಯ ವಿವಿಧೆಡೆ ಯಕ್ಷಗಾನ ತರಬೇತಿ ಕೇಂದ್ರಗಳನ್ನು ತೆರೆದು ಸಾವಿರಾರು ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ರೂಪಿಸಿದ ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರು ಕಳೆದ 21 ವರ್ಷಗಳಿಂದ ಊರಿನ ಸುಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಿ ಶ್ರೇಷ್ಠ ಮಟ್ಟದ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆಗಳನ್ನು ಏರ್ಪಡಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ’ ಎಂದವರು ಶ್ಲಾಘಿಸಿದರು.
ಯಕ್ಷಗಾನದಿಂದ ಸಂಸ್ಕಾರ:
ಮುಂಬಯಿಯ ಹಿರಿಯ ಕೈಗಾರಿಕೋದ್ಯಮಿ ಜಿ.ಎಸ್. ಇಂಟರ್ನ್ಯಾಷನಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಶಂಕರ್ ಶೆಟ್ಟಿ ದೀಪ ಬೆಳಗಿಸಿ ನೂತನ ತರಬೇತಿ ಕೇಂದ್ರವನ್ನು ಉದ್ಘಾಟಿಸಿದರು. ‘ಯಕ್ಷಗಾನ ಮಕ್ಕಳಿಗೆ ಎಳವೆಯಿಂದಲೇ ಸಂಸ್ಕೃತಿ, ಸಂಸ್ಕಾರವನ್ನು ನೀಡುವ ಕಲೆ. ಅದರಿಂದ ಬೌದ್ಧಿಕ ಸಾಮರ್ಥ್ಯದ ಜತೆಗೆ ಶರೀರಕ್ಕೆ ಸಾಕಷ್ಟು ವ್ಯಾಯಾಮವೂ ಲಭಿಸುತ್ತದೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಹೊಸ ತರಬೇತಿ ಕೇಂದ್ರ ಯಶಸ್ವಿಯಾಗಲಿ’ ಎಂದವರು ಶುಭ ಹಾರೈಸಿದರು.
ಉದ್ಯಮಿ ಪ್ರಸಾದ್ ಶೆಟ್ಟಿ ಥಾಣೆ, ಬಿಲ್ಲವರ ಅಸೋಸಿಯೇಷನ್ ಭಾಂಡೂಪ್ ಸ್ಥಳೀಯ ಸಮಿತಿ ಕಾರ್ಯಾಧ್ಯಕ್ಷ ಜನಾರ್ದನ ಆರ್. ಪೂಜಾರಿ, ಶ್ರೀ ಶನೀಶ್ವರ ಮಂದಿರ ಬಟ್ಟಿಪಾಡ ಅಧ್ಯಕ್ಷ ದಯಾನಂದ ಶೆಟ್ಟಿ, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಭಾಂಡೂಪ್ ಇದರ ಮೊಕ್ತೇಸರ ರಮೇಶ ಪೂಜಾರಿ, ಉದ್ಯಮಿ ತಾರಾನಾಥ ಶೆಟ್ಟಿ ಬಟ್ಟಿಪಾಡ, ಶ್ರೀ ಶನೀಶ್ವರ ಮಂದಿರದ ಕಾರ್ಯದರ್ಶಿ ಸದಾನಂದ ಅಮೀನ್ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು.
ಗೌರವಾರ್ಪಣೆ :
ಯಕ್ಷ ಗುರು ಅಜೆಕಾರು ಬಾಲಕೃಷ್ಣ ಶೆಟ್ಟರನ್ನು ಶಿಷ್ಯರ ಪರವಾಗಿ ಸಭೆಯಲ್ಲಿ ಸನ್ಮಾನಿಸಲಾಯಿತು. ಸಂಯೋಜನಾ ಸಹಕಾರ ನೀಡಿದ ಮೀರಾ ಶೆಟ್ಟಿ, ಅರ್ಚನಾ ಅಮೀನ್, ನಂದಾ ಶೆಟ್ಟಿ, ಹೇಮ ಪೂಜಾರಿ, ವಿಜಯ ಶೆಟ್ಟಿ, ಸುಧಾ ಪೂಜಾರಿ, ಭಾರತಿ ಕರ್ಕೇರ ಅವರನ್ನು ಗೌರವಿಸಲಾಯಿತು.
ಭಾಗವತ ದೇವಿ ಪ್ರಸಾದ ಆಳ್ವ ಪ್ರಾರ್ಥನಾ ಗೀತೆ ಹಾಡಿದರು. ಕೇಂದ್ರದ ನಿರ್ದೇಶಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಂಘಟಕರಾದ ಸತೀಶ್ ಶೆಟ್ಟಿ ಕೊಟ್ರಪ್ಪಾಡಿ ಗುತ್ತು, ಅವಕಾಶ್ ಜೈನ್ ಮತ್ತು ಶ್ರುತಿ ಪೂಜಾರಿ ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಸುಮಾರು 40 ಮಂದಿ ಕಲಾಸಕ್ತರಿಗೆ ಯಕ್ಷಗಾನದ ಆರಂಭಿಕ ಹೆಜ್ಜೆಗಳನ್ನು ಕಲಿಸಿ ಕೇಂದ್ರಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಪಾಟ್ನಾ ಎಡಿಎಂ ಕೆಕೆ ಸಿಂಗ್ ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಥಳಿಸಿದ್ದಾರೆ. ಬಿಹಾರದಲ್ಲಿ, 20 ಲಕ್ಷ ಉದ್ಯೋಗಗಳ ಭರವಸೆ ನೀಡಿದ ಆರ್ಜೆಡಿ-ಜೆಡಿಯು ಸರ್ಕಾರವು ವಿದ್ಯಾರ್ಥಿಗಳನ್ನು ದಬ್ಬಾಳಿಕೆ ಮಾಡಿದೆ. ಇಲ್ಲಿ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ.
ಬಿಹಾರದ ರಾಜಧಾನಿಯಿಂದ ಹೊರಬಂದ ಆಘಾತಕಾರಿ ವಿಡಿಯೋದಲ್ಲಿ, ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಯೊಬ್ಬನನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಕಾನೂನು ಮತ್ತು ಸುವ್ಯವಸ್ಥೆ) ರಸ್ತೆಯ ಮಧ್ಯದಲ್ಲಿ ನಿರ್ದಯವಾಗಿ ಥಳಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಹಾರದ ರಾಜಧಾನಿಯಿಂದ ಹೊರಬಿದ್ದ ಆಘಾತಕಾರಿ ವಿಡಿಯೋದಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಯೊಬ್ಬರಿಗೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಕಾನೂನು ಮತ್ತು ಸುವ್ಯವಸ್ಥೆ) ನಡುರಸ್ತೆಯಲ್ಲೇ ಮನಬಂದಂತೆ ಥಳಿಸಿದ್ದಾರೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟಿಜನ್ಗಳಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಡಿಎಂ ಕೆ ಕೆ ಸಿಂಗ್ ಅವರು ಅಸಹಾಯಕರಾಗಿ ರಸ್ತೆಯ ಮೇಲೆ ಮಲಗಿದ್ದ ಯುವ ವಿದ್ಯಾರ್ಥಿಗೆ ಅಮಾನುಷವಾಗಿ ಥಳಿಸಿದ್ದಾರೆ ಮತ್ತು ರಾಷ್ಟ್ರಧ್ವಜವನ್ನು ಬಳಸಿ ತನ್ನ ಮುಖವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ.
ನಂತರ ಧ್ವಜವನ್ನು ಮಡಚಿ ಹಿಡಿದಿರುವ ಪೋಲೀಸರು ಅವನಿಂದ ಕಸಿದುಕೊಳ್ಳುತ್ತಾರೆ. ಈ ವಿದ್ಯಾರ್ಥಿಯು ತಮ್ಮ ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಗುಂಪಿನಲ್ಲಿದ್ದನು. ವಿದ್ಯಾರ್ಥಿಯ ತಲೆ ಮತ್ತು ಮುಖದ ಮೇಲೆ ಗಾಯಗಳಾಗಿದೆ. ನಂತರ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಬಿಹಾರ ಬಿಜೆಪಿ ಅಧಿಕೃತ ಹ್ಯಾಂಡಲ್, ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರ ಮತ್ತು ಎಡಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂದೂಕು ಹಾರಿಸುವ ಅಭ್ಯಾಸವಿರುವ ವ್ಯಕ್ತಿಗೆ ರಾಜ್ಯವು ಪೆನ್ನು ನೀಡಿದೆ ಎಂದು ಹೇಳಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಯ ವೀಡಿಯೊವನ್ನು ಹಂಚಿಕೊಂಡ ಬಿಹಾರ ಶಿಕ್ಷಕ ಅಭ್ಯರ್ಥಿಗಳ ಸಂಘವು ಟ್ವೀಟ್ ಮಾಡಿದೆ, “ಉದ್ಯೋಗ ಪಡೆಯುವ ಭರವಸೆಯಲ್ಲಿ ತನ್ನ ಗ್ರಾಮದಿಂದ ಪಾಟ್ನಾ ತಲುಪಿದ ಶಿಕ್ಷಕ ಅಭ್ಯರ್ಥಿ, ಪೊಲೀಸರ ಬರ್ಬರ ಲಾಠಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಮಲಗಿದ್ದಾನೆ.”
ये सरकार अंधी है क्या, जो तिरंगे पर लाठी हांकती है,
ये सरकार बहरी है क्या, कारतूस दागने वाले को कलम का रहनुमा बना दिया,
इन्हें कुर्सी पर बैठे रहने की बीमारी है, पकड़कर बिठा दो, बैसाखियों के बल चलती है, लंगड़ी है।
Lathi charge was done to control students taking out a protest march in Patna wherein the ADM was thrashing a STET candidate. Enquiry committee made; strict actions will be taken against him, if found guilty:Bihar Dy CM
ಕಾಫಿ ವಿತ್ ಕರಣ್ 7 ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ, ಕಿಯಾರಾ ಅಡ್ವಾಣಿ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಕಾಫಿ ವಿತ್ ಕರಣ್ 7 ನಲ್ಲಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಚಾಟ್ ಶೋನ ಇತ್ತೀಚಿನ ಸಂಚಿಕೆಯಲ್ಲಿ ಸಿದ್ಧಾರ್ಥ್ ಮತ್ತು ವಿಕ್ಕಿ ಕೌಶಲ್ ಕಾಣಿಸಿಕೊಂಡರು.
ಕಾಫಿ ವಿತ್ ಕರಣ್ 7 ರ ಇತ್ತೀಚಿನ ಸಂಚಿಕೆಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿಕ್ಕಿ ಕೌಶಲ್ ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಬೆಳಕು ಚೆಲ್ಲಿದರು. ವಿಕ್ಕಿ ಪತ್ನಿ ಕತ್ರಿನಾ ಕೈಫ್ ಬಗ್ಗೆ ಮಾತನಾಡುವಾಗ, ಕರಣ್ ಅವರು ಸಿದ್ಧಾರ್ಥ್ ಅವರ ವದಂತಿಯ ಗೆಳತಿ ಕಿಯಾರಾ ಬಗ್ಗೆ ಪ್ರಶ್ನಿಸಿದ್ದಾರೆ.
ಅವರ ಸಂಬಂಧದ ಬಗ್ಗೆ ಇಬ್ಬರೂ ಕಾಫಿ ವಿತ್ ಕರಣ್ 7 ನಲ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿರುವುದನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಂಡಿದ್ದಾರೆ. ವೀಡಿಯೊ ಕ್ಲಿಪ್ನಲ್ಲಿ, ಕಿಯಾರಾ ತಾನು ಸಿದ್ಧಾರ್ಥ್ನೊಂದಿಗೆ ‘ಆಪ್ತ ಸ್ನೇಹಿತರಿಗಿಂತ’ ಹೆಚ್ಚು ಎಂದು ಒಪ್ಪಿಕೊಂಡಿದ್ದಾಳೆ.
ಪುತ್ತೂರು,ಅ 22: ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಯೋಗ ಸ್ಫರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಹಾಗೂ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ.
ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಾಗರಿ ಎನ್ ರೈ, ದೀಕ್ಷಾ ಕೆ, ನಿಧಿ ಎಂ. ಎಸ್ , ವಾಣಿಜ್ಯ ವಿಭಾಗದ ಸಿಂಚನಾ ಎ ಮತ್ತು ಅನುಜ್ಞಾ ಕೆ ಭಾಗವಹಿಸಿದ್ದರು.
ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ನಿಶ್ಚಲ್ ಕೆ.ಜೆ, ಮನ್ವಿತ್ ಎನ್ ಗೌಡ ಮತ್ತು ವಾಣಿಜ್ಯ ವಿಭಾಗದ ಶ್ರೀನಿಧಿ ಕೆ ಭಾಗವಹಿಸಿದ್ದರು.
ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.
ಸುಳ್ಳು ವೀಡಿಯೊ ಮತ್ತು ವರದಿ ಹಾಗೂ ತಪ್ಪಾದ ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ಮೂವರು ಪತ್ರಕರ್ತರ ವಿರುದ್ಧ ಕೇಸು ದಾಖಲು ಮಾಡಲಾಗಿದೆ. ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಗ್ರಾಮವೊಂದರ 76 ವರ್ಷದ ಗ್ಯಾ ಪ್ರಸಾದ್ ವಿಶ್ವಕರ್ಮ ಅವರನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸುಳ್ಳು ವೀಡಿಯೊವನ್ನು ಪತ್ರಕರ್ತರು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಭಿಂದ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರ ಸುಳ್ಳು ಮತ್ತು ದಾರಿತಪ್ಪಿಸುವ ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಮೂವರು ಪತ್ರಕರ್ತರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಜೀವ್ ಕೌರವ್ ಅವರ ದೂರಿನ ಮೇರೆಗೆ ಸ್ಥಳೀಯ ಪತ್ರಕರ್ತರಾದ ಕುಂಜ್ಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್.ಕೆ.ಭಟೆಲೆ ವಿರುದ್ಧ ದಾಬೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಗಸ್ಟ್ 15 ರಂದು, ಭಿಂಡ್ ಜಿಲ್ಲೆಯ ಹಳ್ಳಿಯೊಂದರ 76 ವರ್ಷದ ಗ್ಯಾ ಪ್ರಸಾದ್ ವಿಶ್ವಕರ್ಮ ಅವರನ್ನು ಕೈಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸುಳ್ಳು ವೀಡಿಯೊವನ್ನು ಪತ್ರಕರ್ತರು ಹಂಚಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 108ಕ್ಕೆ ಕರೆ ಮಾಡಿದರೂ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಲು ವಿಫಲವಾಗಿದೆ ಎಂದು ಸುದ್ದಿ ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ವೀಡಿಯೊ ವೈರಲ್ ಆದ ನಂತರ, ಭಿಂಡ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಸತೀಶ್ ಕುಮಾರ್ ಅವರು ವಿಚಾರಣೆ ನಡೆಸಿ, ಆಂಬ್ಯುಲೆನ್ಸ್ಗೆ ಕರೆ ಮಾಡದ ಕಾರಣ ಈ ಸುದ್ದಿ ಸುಳ್ಳು ಎಂದು ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಹರಡಿದ ಸುದ್ದಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿದೆ ಮತ್ತು ಇದನ್ನು ಅನುಸರಿಸಿ ದಾಬೋಹ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ, ”ಎಂದು ಡಿಎಂ ಹೇಳಿದರು.
“ಐಪಿಸಿಯ ಸೆಕ್ಷನ್ 420, 505 (2) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಎಫ್) 1 ರ ಅಡಿಯಲ್ಲಿ ಮೂವರು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
FIR against three journalists for running false, misleading report in MP's Bhind
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮಾಡಿ ಸಮೀಪದ ದೇವಲ್ಕುಂದದಲ್ಲಿ ಕುಡುಕ ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದುಹಾಕಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಂಪತಿಗಳೀರ್ವರೂ ಶಿವಮೊಗ್ಗ ಜಿಲ್ಲೆಯ ಸಾಗರದ ಸಮೀಪದವರಾಗಿದ್ದು ಹೆಮ್ಮಾಡಿ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು.
ಇಂದು ಸೋಮವಾರ ನಡೆದ ಘಟನೆಯೊಂದರಲ್ಲಿ ತನ್ನ ಪತ್ನಿ ಪೂರ್ಣಿಮಾ (38) ಳನ್ನು ಕಬ್ಬುನದ ತಟ್ಟೆಯಿಂದ ಬಡಿದಿದ್ದ ಪತಿ ರವಿ ಆಕೆ ಸತ್ತುಹೋದುದನ್ನು ಕಂಡು ಬಳಿಕ ತಾನೂ ವಿಷ ಸೇವಿಸಿದ್ದಾನೆ. ಇಬ್ಬರೂ ಒಂದೇ ಕೋಣೆಯಲ್ಲಿ ಮೃತಪಟ್ಟಿದ್ದಾರೆ.
ಪತಿ ರವಿ ಕಬ್ಬಿಣದ ಪ್ಲೇಟ್ ನಿಂದ ಬಡಿದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳೂ ಸ್ಥಳದಲ್ಲಿದ್ದು ಹಾಜರಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.