Tuesday, March 17, 2026
Home Blog Page 136

ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧಾಕೂಟದಲ್ಲಿ ಪ್ರಮಥ ಎಂ ಭಟ್ – ಪ್ರಥಮ ಸ್ಥಾನ

ದಿನಾಂಕ 06/11/ 2022 ರಂದು ಉಡುಪಿಯ ಥಂಡರ್ ಗ್ರ್ಯಾಂಡ್ ಹಾಲ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಸ್ಪರ್ಧಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಿವೇಕ ನಗರ ತೆಂಕಿಲ ಇಲ್ಲಿನ 9ನೇ ತರಗತಿಯ ವಿದ್ಯಾರ್ಥಿ

ಪ್ರಮಥ ಎಂ ಭಟ್ (ಮೈತ್ರಿ ಎಲೆಕ್ಟ್ರಿಕಲ್ಸ್ ನ ಮಾಲಕ ರವಿನಾರಾಯಣ  ಎಂ ಹಾಗೂ ಶರಾವತೀ ದಂಪತಿ ಪುತ್ರ), ಇವರು ಕುಮಿಟೆ ವಿಭಾಗದಲ್ಲಿ ಪ್ರಥಮ, ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

Institute of Karate And Martial Arts (JSKA) ಪುತ್ತೂರು ಶಾಖೆಯ ವಿಧ್ಯಾರ್ಥಿಯಾಗಿರುವ ಇವರು ಮುಖ್ಯ ಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರ ಮಾರ್ಗದರ್ಶನದಲ್ಲಿ ಶಿಕ್ಷಕರಾದ ಶಿವಪ್ರಸಾದ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ತಾಲೂಕು ಕ್ರೀಡಾಂಗಣದಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ವಾರ್ಷಿಕ ಕ್ರೀಡಾಕೂಟ – ‘ಮಾನಸಿಕ ಒತ್ತಡದಿಂದ ದೂರವಾಗಲು ಕ್ರೀಡೆ ಹಾಗೂ ಯೋಗ ಅಗತ್ಯ’ : ರವಿ ಬಿ.ಎಸ್

ಪುತ್ತೂರು: ಕ್ರೀಡೆ ಎನ್ನುವುದು ಸಂಘಟಿತ, ಸ್ಪರ್ಧಾತ್ಮಕ, ಕೌಶಲ್ಯದಿಂದ ಕೂಡಿದ ದೈಹಿಕ ಚಟುವಟಿಕೆ. ಇಂತಹ ಚಟುವಟಿಕೆ ಇಲ್ಲದಿದ್ದರೆ ಸ್ಥೂಲಕಾಯ, ಹೃದಯ ಸಂಬ0ಧಿ ಕಾಯಿಲೆಗಳು ಚಿಕ್ಕ ವಯಸ್ಸಿನಲ್ಲೇ ಕಾಡಲು ಆರಂಭಿಸುತ್ತವೆ. ದೈಹಿಕ, ಮಾನಸಿಕ ಒತ್ತಡದಿಂದ ದೂರವಾಗಲು ಕ್ರೀಡೆ, ಯೋಗ ಉಪಯೋಗಕಾರಿ. ಎಲ್ಲರೂ ಪ್ರತಿನಿತ್ಯ ಕ್ರೀಡೆಯಲ್ಲಿ ಭಾಗವಹಿಸಿ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಂದು ಪುತ್ತೂರು ಗ್ರಾಮೀಣ ವಿಭಾಗದ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ.ಎಸ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯಗಳ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಸೋಮವಾರ ಮಾತನಾಡಿದರು.


ತಂತ್ರಜ್ಞಾನವನ್ನು ಅಗತ್ಯಕ್ಕೆ ಮಾತ್ರ ಬಳಸಬೇಕು. ವಿದ್ಯಾರ್ಥಿಗಳು ಮೊಬೈಲ್ ಅನ್ನು ಅನಗತ್ಯವಾಗಿ ಬಳಸಬಾರದು. ದೇಶ ಉಳಿಯಬೇಕಾದರೆ, ನಮ್ಮನ್ನು ನಾವು ರಕ್ಷಿಸಬೇಕಾದರೆ ಶಕ್ತಿ ಬೇಕು. ದೇಹದಲ್ಲಿ ಪ್ರತಿರೋಧಕ ಶಕ್ತಿ ಬೆಳೆಯಬೇಕಾದರೆ, ರೋಗದಿಂದ ದೂರವಿರಬೇಕಾದರೆ ದೈಹಿಕ ಚಟುವಟಿಕೆಗಳ ಅಗತ್ಯವಿದೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಮಾತನಾಡಿ ಶೈಕ್ಷಣಿಕ ಇತಿಹಾಸದಲ್ಲಿ ಮೈಲುಗಲ್ಲನ್ನು ಸಾಧಿಸಿರುವ ವಿದ್ಯಾಸಂಸ್ಥೆ ಅಂಬಿಕಾ. ಪುತ್ತೂರಿನಲ್ಲಿ ವೀರಯೋಧರ ಸ್ಮರಣಾರ್ಥವಾಗಿ ನಿರಂತರ ಜ್ಯೋತಿ ಬೆಳಗುತ್ತಿರುವ ಅಮರ್ ಜವಾನ್ ಜ್ಯೋತಿಯನ್ನು ಸ್ಥಾಪಿಸಿದ ಕೀರ್ತಿ ಈ ಸಂಸ್ಥೆಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಆವಶ್ಯಕವಾದ ಎಲ್ಲಾ ರೀತಿಯ ಶಿಕ್ಷಣವನ್ನು ಕೊಡುವ ನಿಟ್ಟಿನಲ್ಲಿ ಕ್ರೀಡೋತ್ಸವವನ್ನು ಏರ್ಪಡಿಸಲಾಗಿದೆ. ಸೋಲು ಗೆಲುವು ಮುಖ್ಯವಲ್ಲ. ಆತ್ಮವಿಶ್ವಾಸದಿಂದ ಸ್ಪರ್ಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕ್ರೀಡಾಪಟುಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ಉದ್ಯಮಿ ಶಿವರಾಮ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಮಟ್ಟ, ರಾಜ್ಯಮಟ್ಟ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಾದ ತನ್ಮಯಿ, ರಿಶಿಕ್, ಶ್ರೀನಿಧಿ ಶಂಕರ್, ಚರಣ್, ಹನಿ, ಜೀವನ್ ಕೆ.ಎಸ್. ಕ್ರೀಡಾಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.


ದೈಹಿಕ ಶಿಕ್ಷಣ ನಿರ್ದೇಶಕರಾದ ವಿಶ್ವೇಶ್ವರ ಭಟ್, ನವೀನ್, ಸುಖಾಂತ್, ಸುಧಾಕರ್ ರೈ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಆರ್ಯಭಟ, ಕಪಿಲ, ಕೌಟಿಲ್ಯ, ಕಣಾದ, ಪಾಣಿನಿ, ಮೈತ್ರೇಯಿ, ನಲಂದಾ, ತಕ್ಷಶಿಲಾ, ಚಾಣಕ್ಯ, ಸುಶ್ರುತ, ಭಾಸ್ಕರ, ಚರಕ, ಪತಂಜಲಿ ತಂಡದ ವಿದ್ಯಾರ್ಥಿಗಳು ಪಥ ಸಂಚಲನದ ಮೂಲಕ ಅತಿಥಿಗಳಿಗೆ ಗೌರವ ಸಲ್ಲಿಸಿದರು.


ವಿದ್ಯಾರ್ಥಿನಿಯರಾದ ಶರಧಿ, ವೈಷ್ಣವಿ ಪ್ರಾರ್ಥಿಸಿದರು. ಅಂಬಿಕಾ ವಸತಿಯುತ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ಸ್ವಾಗತಿಸಿ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಅಕ್ಷತಾ ಎಂ ಕಾರ್ಯಕ್ರಮ ನಿರೂಪಿಸಿದರು.

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಶ್ರೀಕೃಷ್ಣ ನಟ್ಟೋಜ

ಶ್ರೀಕೃಷ್ಣ ನಟ್ಟೋಜ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪುತ್ತೂರು : ಪುತ್ತೂರಿನ ದರ್ಭೆಯಲ್ಲಿರುವ ಬೆಥನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಭಾಗವಹಿಸಿ ದ್ವಿತೀಯ ಬಹುಮಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ದಂಪತಿ ಪುತ್ರ.

ಪುಣೆಯಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮ – ಸಾಧಕರಿಗೆ ಗುರುಗಳಿಂದ ಆಶೀರ್ವಾದ, ಸನ್ಮಾನ 

ಪುಣೆಯಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮ – ಸಾಧಕರಿಗೆ ಗುರುಗಳಿಂದ ಆಶೀರ್ವಾದ, ಸನ್ಮಾನ 

ನಿನ್ನೆ ತಾರೀಖು 06/11/2022 ಆದಿತ್ಯ ವಾರ ಪುಣೆಯ ಬಂಟರ ಸಂಘ ಸಭಾಭವನದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಷಷ್ಟ್ಯಬ್ದ ಸಂಭ್ರಮ, ಗುರುದೇವ ಸೇವಾಬಳಗ ಮತ್ತು ವಜ್ರಮಾತಾ ಬಳಗದವರ ಹತ್ತೊಂಬತ್ತನೇ ವಾರ್ಷಿಕೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

ಆ ಸಂದರ್ಭದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ ಅರುವತ್ತರ ಹುಟ್ಟು ಹಬ್ಬದ ನಿಮಿತ್ತ,

ಪುಣೆಯಲ್ಲಿ ಇರುವ ಗುರುಸೇವೆ ಮತ್ತು ಇತರ ಸಾಮಾಜಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಜನರನ್ನು ಹುಡುಕಿ ಶ್ರೀ ಗುರುಗಳ ಕೈಯಿಂದ ಹತ್ತು ಸಮಸ್ತರ ಮುಂದೆ ಸತ್ಕರಿಸಲಾಯಿತು.

20 ಸವರನ್ ಚಿನ್ನವನ್ನು ಬಾಯಿಯಲ್ಲಿ ಬಚ್ಚಿಟ್ಟು ಸಾಗಿಸಲು ಯತ್ನಿಸಿದ ಕಾಸರಗೋಡಿನ ಯುವಕ ಬಂಧನ – ಈ ಬಾರಿ ಗುದನಾಳದ ಬದಲು ಅನ್ನನಾಳದ ಉಪಯೋಗ!

ಗುದನಾಳದಲ್ಲಿ ಬಚ್ಚಿಟ್ಟು ಚಿನ್ನ ಕಳ್ಳಸಾಗಣೆ ಮಾಡುತ್ತಿರುವುದು ಹಳೆಯ ವಿಧಾನವಾಯಿತು. ಬಾಯಿಯಲ್ಲಿ ಬಚ್ಚಿಟ್ಟುಕೊಂಡು ಚಿನ್ನವನ್ನು ಕಳ್ಳಸಾಗಣೆ ಮಾಡುವುದು ಹೊಸ ವಿಧಾನವಾಗಿದೆ.

ಕಾಸರಗೋಡಿನ ಅಬ್ದುಲ್ ಅಫ್ಜಲ್ ಎಂಬ 24 ವರ್ಷದ ಯುವಕನನ್ನು ಈ ರೀತಿ ಅಕ್ರಮವಾಗಿ 20 ಪವನ್ ಚಿನ್ನಾಭರಣ ಸಾಗಿಸಲು ಯತ್ನಿಸಿದ ಯುವಕನನ್ನು ಕಾರಿಪುರ ಪೊಲೀಸರು ಬಂಧಿಸಿದ್ದಾರೆ.

ಆತನು ಎಂಟು ಚಿನ್ನಾಭರಣಗಳನ್ನು ಬಾಯಿಯಲ್ಲಿ ಬಚ್ಚಿಟ್ಟುಕೊಂಡು ವಿಮಾನ ನಿಲ್ದಾಣದಲ್ಲಿ ಬಂದಿಳಿದ. ಶಾರ್ಜಾದಿಂದ ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದ ಅವರು ಮಾಸ್ಕ್ ಧರಿಸಿ ಕಸ್ಟಮ್ಸ್ ತಪಾಸಣೆ ಮುಗಿಸಿ ನಿರ್ಗಮಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೊರೆತ ರಹಸ್ಯ ಮಾಹಿತಿ ಮೇರೆಗೆ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಆತನೊಂದಿಗೆ ಚಿನ್ನಾಭರಣದೊಂದಿಗೆ ಬಂದಿದ್ದ ಇನ್ನಿಬ್ಬರು ಪ್ರಯಾಣಿಕರನ್ನೂ ಬಂಧಿಸಲಾಗಿದೆ.

ಅವರಲ್ಲಿ ಒಬ್ಬನನ್ನು ಕಸ್ಟಮ್ಸ್ ಮತ್ತು ಇನ್ನೊಬ್ಬನನ್ನು ಪೊಲೀಸರು ಹಿಡಿದಿದ್ದಾರೆ. ಶಾರ್ಜಾದಿಂದ ಬಂದಿದ್ದ ಕೋಝಿಕ್ಕೋಡ್‌ನ ಮಂಕಾವೆ ಮೂಲದ ಇಬ್ರಾಹಿಂ ಬಾದುಷಾ 214 ಗ್ರಾಂ ಚಿನ್ನದ ಮಿಶ್ರಣವನ್ನು ಶೂ ಒಳಗೆ ಬಚ್ಚಿಟ್ಟಿದ್ದರು.

ವಿಮಾನ ನಿಲ್ದಾಣದ ಹೊರಗಿನಿಂದ ಪೊಲೀಸರು ಆತನನ್ನು ಹಿಡಿದಿದ್ದಾರೆ. ಮೊದಲ ಹಂತದ ವಿಚಾರಣೆಯಲ್ಲಿ ಅಪರಾಧ ಒಪ್ಪಿಕೊಳ್ಳಲು ಸಿದ್ಧರಿಲ್ಲದಿದ್ದರೂ, ಆತನ ದೇಹವನ್ನು ಶೋಧಿಸಿದಾಗ ಚಿನ್ನ ಪತ್ತೆಯಾಗಿದೆ.

ಶ್ರೀ ದೇವಿ ಮಹಾತ್ಮೆ – ಪ್ರಚಂಡ ಜೋಡಾಟ – ಮೂಡಬಿದಿರೆಯಲ್ಲಿ

ಮೇಳಗಳ ತಿರುಗಾಟ ಮುಗಿದುದರಿಂದ  ಯಕ್ಷಗಾನ ರಸಿಕರಿಗೆ ಈಗ ಯಕ್ಷಗಾನಾಸ್ವಾದನೆ ಮಾಡಲು ಅವಕಾಶಗಳು ಕಡಿಮೆ. ಎಡೆಬಿಡದೆ ಸುರಿಯುವ ಮಳೆಯೂ ಇದಕ್ಕೆ ಒಂದು ಕಾರಣವಿರಬಹುದು.

ಆದರೆ ಈಗೀಗ ಮಳೆಗಾಲದಲ್ಲೂ ಬೇಕಾದಷ್ಟು ಪ್ರದರ್ಶನಗಳು ನಡೆಯುತ್ತವೆ. ಇದೀಗ ಮೂಡಬಿದಿರೆಯಲ್ಲಿ ಒಂದು ಅಮೋಘ ಯಕ್ಷಗಾನ ಪ್ರದರ್ಶನ ನಿಗದಿಯಾಗಿದೆ.

ಯಕ್ಷಗಾನದ ಮಾಸ್ಟರ್ ಪೀಸ್’ ಶ್ರೀ ದೇವಿ ಮಹಾತ್ಮೆ’ ಪ್ರಸಂಗವನ್ನು ತೆಂಕುತಿಟ್ಟಿನ ನುರಿತ ವೃತ್ತಿಕಲಾವಿದರು ಪ್ರದರ್ಶಿಸಲಿದ್ದಾರೆ.

ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯವರು ಸಂಘಟಿಸಿದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಬಿದಿರೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗವನ್ನು ನುರಿತ ಕಲಾವಿದರು ಜೋಡಾಟದ ಮೂಲಕ ಪ್ರದರ್ಶಿಸಲಿದ್ದಾರೆ.

ದಿನಾಂಕ 12.11.2022ರ ಶನಿವಾರ ಸಮಯ ಸಂಜೆ ಘಂಟೆ 7ರಿಂದ ಈ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರಗಳಿಗೆ ಕರಪತ್ರವನ್ನು ನೋಡಿ. 

ಇಲಿ ವಿಷ ಸೇವಿಸಿ 30 ವರ್ಷದ ಮಹಿಳೆ ಆತ್ಮಹತ್ಯೆ, ಡೆತ್ ನೋಟ್ ಪತ್ತೆ

ಉಡುಪಿ: 30ರ ಹರೆಯದ ವಿವಾಹಿತ ಮಹಿಳೆಯೋರ್ವಳು ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾಳೆ. ಮೃತರನ್ನು ಬ್ರಹ್ಮಾವರದ ಹಂದಾಡಿ ನಿವಾಸಿ ಬೆನ್ಸಿ ಶೈಜು ಥಾಮಸ್ (30) ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ಬೆನ್ಸಿಯ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವಳು ತನ್ನ ಮಗಳೊಂದಿಗೆ ಬ್ರಹ್ಮಾವರದ ಹಂದಾಡಿಯಲ್ಲಿರುವ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದಳು, ಅಲ್ಲಿ ಅವಳ ಅತ್ತೆ, ಮಾವ ಸಹ ನೆಲ ಮಹಡಿಯಲ್ಲಿರುವ ಅದೇ ಮನೆಯಲ್ಲಿ ವಾಸಿಸುತ್ತಿದ್ದಾರೆ.

ಅಕ್ಟೋಬರ್ 26 ರಂದು, ಬೆನ್ಸಿ ಇಲಿ ವಿಷವನ್ನು ಸೇವಿಸಿದರು ಮತ್ತು ವಾಂತಿ ಮಾಡಲು ಪ್ರಾರಂಭಿಸಿದರು. ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥಳಾಗಿದ್ದು, ಚಿಕಿತ್ಸೆಗಾಗಿ ಬ್ರಹ್ಮಾವರ ಜೀವನ್ ಜ್ಯೋತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಆಕೆಯ ಆರೋಗ್ಯ ಹದಗೆಟ್ಟಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ನ.3ರಂದು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಟುಂಬಸ್ಥರು ಬೆನ್ಸಿಯನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದರು.

ನವೆಂಬರ್ 5 ರಂದು ಬೆನ್ಸಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ವಿಷ ಸೇವಿಸುವ ಮುನ್ನ ಬರೆದ ಡೆತ್ ನೋಟ್ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಲೆ ಬೋಳಾಗಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ – ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆ

ತಲೆ ಬೋಳಾಗಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಖಿನ್ನತೆಗೆ ಒಳಗಾಗಿದ್ದ ಯುವಕ ಕೋಝಿಕ್ಕೋಡ್‌ನಲ್ಲಿ ಜೀವನ ಅಂತ್ಯಗೊಳಿಸಿದ್ದು, ಆತ್ಮಹತ್ಯೆ ಪತ್ರ ಪತ್ತೆಯಾಗಿದೆ.

ಈತನನ್ನು ಜಿಲ್ಲೆಯ ಪ್ರಶಾಂತ್ ಎಂದು ಗುರುತಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರ ಹೆಸರನ್ನು ನಮೂದಿಸಿರುವ ಆತ್ಮಹತ್ಯೆ ಪತ್ರವನ್ನು ಪಡೆಯಲಾಗಿದೆ.

2014ರಿಂದ ಕೂದಲು ಉದುರುವಿಕೆಗೆ ಔಷಧಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಟಿಪ್ಪಣಿಯಲ್ಲಿ ಹೇಳಲಾಗಿದೆ. ಕ್ಲಿನಿಕ್ ಅನ್ನು ಸಂಪರ್ಕಿಸುವ ಸಮಯದಲ್ಲಿ ಸಣ್ಣ ಕೂದಲು ಉದುರುವಿಕೆ ಮಾತ್ರ ಇತ್ತು.

ಆದಾಗ್ಯೂ, ಚಿಕಿತ್ಸೆ ಪ್ರಾರಂಭವಾದ ನಂತರ, ಅವರ ಹುಬ್ಬುಗಳು ಕಡಿಮೆಯಾಗಲು ಪ್ರಾರಂಭಿಸಿದವು. ಈ ಬಗ್ಗೆ ಹಲವು ಬಾರಿ ವೈದ್ಯರಿಗೆ ತಿಳಿಸಿದ್ದರೂ ಮತ್ತೆ ಔಷಧ ನೀಡುತ್ತಲೇ ಇದ್ದರು.

ಸಮಾರಂಭ, ಆಟ ಕೂಟಕ್ಕೂ ಹೋಗುವಂತಿಲ್ಲ ಎಂದು ಅವರ ಡೆತ್ ನೋಟಿನಲ್ಲಿ ಹೇಳಲಾಗಿದೆ. ಕೂದಲು ಉದುರುವುದನ್ನು ಸಹಿಸಲಾಗದೆ ಅವರು ತೀವ್ರ ಹೆಜ್ಜೆ ಇಡುತ್ತಿದ್ದಾರೆ ಎಂದು ಅವರ ಪತ್ರದಲ್ಲಿ ಬರೆದಿದ್ದಾರೆ.

ಅವರು ಅಕ್ಟೋಬರ್ 1 ರಂದು ತಮ್ಮ ಜೀವನವನ್ನು ಕೊನೆಗೊಳಿಸಿದರು. ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆಯಿಂದ ತಾವು ತೃಪ್ತರಾಗಿಲ್ಲ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

(ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಮನಶ್ಶಾಸ್ತ್ರಜ್ಞರ ಸಹಾಯವನ್ನು ಪಡೆಯಿರಿ. ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ: 1056)

ಮಗಳನ್ನು ಕಾಲೇಜಿಗೆ ಬಿಡಲು ಬಂದ ವ್ಯಕ್ತಿಯೊಬ್ಬರು ಕಣ್ಣೀರು ಸುರಿಸಿ ಅಳುತ್ತಿರುವ ದೃಶ್ಯದ ವೀಡಿಯೊ ವೈರಲ್

ತನ್ನ ಮಗಳನ್ನು ಕಾಲೇಜಿಗೆ ಬಿಡುವಾಗ ವ್ಯಕ್ತಿಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವೀಡಿಯೋವನ್ನು 7 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ವ್ಯಕ್ತಿಯೊಬ್ಬ ತನ್ನ ಮಗಳನ್ನು ಆಕೆಯ ಕಾಲೇಜಿಗೆ ಡ್ರಾಪ್ ಮಾಡುತ್ತಿರುವ ಮೂವಿಂಗ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಮನುಷ್ಯನು ಅಳುತ್ತಿರುವುದನ್ನು ಕಾಣಬಹುದು ಮತ್ತು ಕ್ಲಿಪ್ ಅನ್ನು ನೋಡಿದ ನಂತರ ನೀವು ಕಣ್ಣೀರು ಹಾಕಬಹುದು.

ಈಗ ವೈರಲ್ ಆಗಿರುವ ವಿಡಿಯೋವನ್ನು ಪ್ರೇಕ್ಷಾ ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ಆಕೆಯ ಪೋಷಕರು ಅವಳನ್ನು ಕಾಲೇಜಿಗೆ ಬಿಡುವುದನ್ನು ಕಾಣಬಹುದು. ಪ್ರೇಕ್ಷಾ ವಾಸ್ತವವಾಗಿ ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್‌ಗೆ ಪ್ರವೇಶ ಪಡೆದರು. ಕ್ಯಾಂಪಸ್‌ಗೆ ಪ್ರವಾಸ ಕೈಗೊಂಡಾಗ ಪ್ರೇಕ್ಷಾ ಅವರ ತಂದೆ ಅಳಲು ಪ್ರಾರಂಭಿಸಿದರು.

“ಅವರು ನನ್ನನ್ನು ‘ನಮ್ಮ’ ಕನಸಿನ ತಾಣವಾದ ಮಿರಾಂಡಾ ಹೌಸ್ ಕಾಲೇಜ್, ದೆಹಲಿ ವಿಶ್ವವಿದ್ಯಾನಿಲಯಕ್ಕೆ ಬಿಡುತ್ತಿದ್ದರು. ಇದು ನನ್ನ ಮೊದಲ ದಿನ, ಆದ್ದರಿಂದ ನಾವು ಕ್ಯಾಂಪಸ್ ಅನ್ನು ಅನ್ವೇಷಿಸುತ್ತಿದ್ದೆವು ಮತ್ತು ಇದ್ದಕ್ಕಿದ್ದಂತೆ ನನ್ನ ತಂದೆಯ ಕಣ್ಣುಗಳಲ್ಲಿ ಕಣ್ಣೀರು ಹರಿಯುವುದನ್ನು ನಾನು ಗಮನಿಸಿದೆ.

ಅವರು ತುಂಬಾ ಸಂತೋಷದಿಂದ ಮುಳುಗಿದ್ದರು. ಮತ್ತು ಭಾವನೆಗಳ ಮತ್ತೊಂದು ಸ್ತರದಲ್ಲಿದ್ದರು. ನಾನು ಅವರಿಂದ ಸ್ವಲ್ಪ ಸಮಯ ದೂರವಾಗಿ ಬದುಕುತ್ತೇನೆ ಎಂಬುದೂ ಕಹಿ ಸತ್ಯವಾಗಿತ್ತು. ಆದರೆ ಆ ಕಣ್ಣೀರು ನನಗೆ ನಾನು ಮಾಡಿದ ಎಲ್ಲಾ ತ್ಯಾಗಗಳು, ನಾನು ಮಾಡಿದ ಎಲ್ಲಾ ಶ್ರಮ ಮತ್ತು ಎಲ್ಲವನ್ನೂ ಹೇಳುತ್ತದೆ.

ಈ ಕನಸನ್ನು ನನಸಾಗಿಸಲು ನಾನು ಮಾಡಿದ್ದು ಕೊನೆಗೆ ಸಾರ್ಥಕವಾಯಿತು. ನಿಮ್ಮ ನಗು ಮುಖ ಮತ್ತು ಹೊಳೆಯುವ ಕಣ್ಣುಗಳನ್ನು ನೋಡಲು ನಾನು ಏನು ಬೇಕಾದರೂ ಮಾಡಬಲ್ಲೆ ಎಂದು ನಾನು ಹೇಳಬಲ್ಲೆ! ಧನ್ಯವಾದಗಳು ಅಮ್ಮ ಅಪ್ಪಾ! ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಪ್ರೇಕ್ಷಾ ಇನ್ಸ್ಟಾ ಗ್ರಾಮ್ ನಲ್ಲಿ ಬರೆದಿದ್ದಾಳೆ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ 7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.