Monday, March 16, 2026
Home Blog Page 123

ಇಂದು ಆಟ ಎಲ್ಲೆಲ್ಲಿ? (25-11-2022, ಶುಕ್ರವಾರ)

ಮೇಳಗಳ ಇಂದಿನ (25.11.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ 

ಕಟೀಲು ಒಂದನೇ ಮೇಳ == ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಎದುರು – ಸೇವೆ 

ಕಟೀಲು ಎರಡನೇ ಮೇಳ == ಶ್ರೀ ಅರಸು ಕುಂಜಿರಾಯ ದೈವಸ್ಥಾನ, ಅತ್ತೂರು ಕೆಮ್ರಾಲ್ ಕಿಲೆಂಜೂರು 

ಕಟೀಲು ಮೂರನೇ ಮೇಳ== ಎಕ್ಕಾರು ಗುಡ್ಡೆಸಾನದ ಬಳಿ 

ಕಟೀಲು ನಾಲ್ಕನೇ ಮೇಳ  == ಶಿಬರೂರು ಸೇವೆ 

ಕಟೀಲು ಐದನೇ ಮೇಳ == ಶಾಂತಿಭವನ ಬಜಪೆ ಬಸ್ ಸ್ಟಾಂಡ್ ಬಳಿ 

ಕಟೀಲು ಆರನೇ ಮೇಳ == ಕದ್ರಿ ಕ್ಷೇತ್ರದ ರಾಜಾಂಗಣ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶ್ರೀ ಕ್ಷೇತ್ರ ಶರವು ಮಂಗಳೂರು – ಭಾರತ ಜನನಿ 

ಶ್ರೀ ಸಾಲಿಗ್ರಾಮ ಮೇಳ == ಶ್ರೀ ಕ್ಷೇತ್ರ ಸಾಲಿಗ್ರಾಮ, ದೇವರ ಸೇವೆ ಆಟ – ಕುಶಲವ, ಶಶಿಪ್ರಭೆ 

ಶ್ರೀ ಪೆರ್ಡೂರು ಮೇಳ == ಶಿರೂರು ಮೂರುಕೈ – ಪಾವನ ತುಳಸಿ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ದೇವರಜೆಡ್ಡು ಕೆರಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಾಸನಾಡಿ ದೈವದಮನೆ ವಠಾರ ಉಪ್ಪುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಮುತ್ತಿನಕಟ್ಟೆ ಹೊಸಂಗಡಿ 

ಶ್ರೀ ಪಾವಂಜೆ ಮೇಳ == ಕಟೀಲು ಸ್ಪೋರ್ಟ್ಸ್ & ಗೇಮ್ಸ್ ಕ್ಲಬ್ ನ ಸಭಾಂಗಣ – ನಾಗ ಸಂಜೀವನ 

ಶ್ರೀ ಕಮಲಶಿಲೆ ಮೇಳ == ತೊಟ್ಟಂ ಮಲ್ಪೆ – ಕಮಲಶಿಲೆ ಕ್ಷೇತ್ರ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಸುಳ್ಸೆ ಕಟ್ ಬೆಲ್ತೂರು ಶ್ರೀ ಯಕ್ಷ ಬ್ರಹ್ಮ ನಂದಿಕೇಶ್ವರ ದೈವಸ್ಥಾನದ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ  

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಹಾಲಾಡಿ ಹಂಚಿನ ಕಾರ್ಖಾನೆ ವಠಾರ 

ಶ್ರೀ ನೀಲಾವರ ಮೇಳ  == ಮಾಬುಕಳಾ ರಿಕ್ಷಾ ಸ್ಟಾಂಡ್ ಬಳಿ – ರಕ್ತ ನೈವೇದ್ಯ 

ಶ್ರೀ ಹಟ್ಟಿಯಂಗಡಿ ಮೇಳ == ಗಿಳಿಯಾರು ಶಾಲೆಯ ಬಳಿ – ನಾಗಾಂಬಿಕೆ 

ಶ್ರೀ ಬೋಳಂಬಳ್ಳಿ ಮೇಳ== ಪೇತ್ರಿ ಸುರಭಿ ಬಾರ್ ವಠಾರ – ಶಿವದುರ್ಗಾ ಮಹಾತ್ಮೆ 

ಶ್ರೀ ಬಪ್ಪನಾಡು ಮೇಳ == ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಮಂದಿರ ಉಕ್ಕಿನಡ್ಕ – ಅಜ್ಜ, ಅಜ್ಜ, ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಸಸಿಹಿತ್ಲು ದೇವಸ್ಥಾನದ ವಠಾರ – ಭಾಗ್ಯವಂತೆರ್ 

ಶ್ರೀ ದೇಂತಡ್ಕ ಮೇಳ == ಶ್ರೀಕ್ಷೇತ್ರದಲ್ಲಿ ಸೇವೆ ಆಟ – ಅಶ್ವಮೇಧ 

ವಿ.ಸೂ: ದಿನನಿತ್ಯದ ಆಟದ ವಿವರಗಳನ್ನು ಮಾಹಿತಿಗಳು ಲಭ್ಯವಿದ್ದಲ್ಲಿ ಮಾತ್ರ ಪ್ರಕಟಿಸಲಾಗುವುದು. 

ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ವಿವಿಧ ಸ್ಪರ್ಧೆಗಳು – ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ  

0

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ) ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಜ್ಞಾನ ವಿಕಾಸ / ಜ್ಞಾನ ಪ್ರಕಾಶ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 18-11-2022ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಉಡುಪಿ ಶ್ರೀ ಸತ್ಯಸಾಯಿ ಅನನ್ಯ ನಿಕೇತನಂ ಇದರ ಶೈಕ್ಷಣಿಕ ಸಂಯೋಜಕರಾದ ಪ್ರೊಫೆಸರ್ ಗೋವಿಂದ ಭಟ್ಟ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಎಂ ಶಿವಪ್ರಕಾಶ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ರೋಟರಿ ಸುವರ್ಣ ಇದರ ಅಧ್ಯಕ್ಷರಾದ ಶ್ರೀ ವೆಂಕಟರಮಣ ಕಳುವಾಜೆ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ, ಖ್ಯಾತ ನೋಟರಿ ನ್ಯಾಯವಾದಿಗಳಾದ ಶ್ರೀ ಭಾಸ್ಕರ ಕೋಡಿಂಬಾಳ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಉಮೇಶ್ ನಾಯಕ್, ನೃತ್ಯ ಶಿಕ್ಷಕಿ ಶ್ರೀಮತಿ ಶಾರದಾ ದಾಮೋದರ್, ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ಲೋಕೇಶ್ ಅಲುಂಬುಡ ಇವರನ್ನು ಸನ್ಮಾನಿಸಲಾಯಿತು.

ಸಂಜೆಯನಗರ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಉಳಯ ಇವರು ಸನ್ಮಾನಿತರನ್ನು ಪರಿಚಯಿಸಿ ಅಭಿನಂದಿಸಿದರು. ಧರ್ಮಸ್ಥಳ ಶಾಂತಿವನ ಟ್ರಸ್ಟ್ ಇಲ್ಲಿನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕರಾದ ಡಾ. ಐ ಶಶಿಕಾಂತ್ ಜೈನ್ ಪ್ರಸ್ತಾವಿಕವಾಗಿ ಮಾತನಾಡಿದರು.

ಪುತ್ತೂರು ತಾಲೂಕು ಯೋಗ ಸಂಘಟಕರು ಹಾಗೂ ಕೈಕಾರ ಶಾಲೆಯ ಮುಖ್ಯ ಶಿಕ್ಷಕರು ಆದ ರಾಮಣ್ಣ ರೈ ಸ್ವಾಗತಿಸಿ, ಪುತ್ತೂರು ಬಾಲವನದ ಸಂಯೋಜನಾಧಿಕಾರಿ ಶ್ರೀ ಜಗನ್ನಾಥ ವಂದಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಯಶೋಧ ಕೆ ಇವರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳ ವ್ಯವಸ್ಥೆಯನ್ನು ಶ್ರೀಮತಿ ಲತ ಕುಮಾರಿ ಅಚ್ಚುಕಟ್ಟಾಗಿ ಸಂಯೋಜಿಸಿದ್ದರು.

ತಾಲೂಕಿನ ಸುಮಾರು 40 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಸುಮಾರು 250 ವಿದ್ಯಾರ್ಥಿಗಳು ಭಾಗವಹಿಸಿದ್ದರು ಧರ್ಮಸ್ಥಳದ ವತಿಯಿಂದ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಸ್ಪರ್ಧಾ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಿ ಅಭಿನಂದಿಸಲಾಯಿತು.

ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ: “ಗುರಿ ಸಾಧನೆಗೆ ಶ್ರಮಿಸಿದಾಗ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು” – ಆದರ್ಶ ಚೊಕ್ಕಾಡಿ

0

ಪುತ್ತೂರು: ಇತಿಹಾಸಕಾರ ಆಗುವುದಕ್ಕಿಂತ ಇತಿಹಾಸವನ್ನು ಸೃಷ್ಟಿ ಮಾಡುವುದು ಮುಖ್ಯ. ಅಂತಹ ಸಾಧನೆಯನ್ನು ಸಾಧ್ಯ ಮಾಡಿಕೊಳ್ಳಬೇಕಿದ್ದರೆ ನಮ್ಮಲ್ಲಿ ನಮಗೆ ನಂಬಿಕೆ, ಮಾಡುವ ಕಾರ್ಯದಲ್ಲಿ ಶ್ರದ್ಧೆ ಅಗತ್ಯ. ಭದ್ರವಾದ ಆತ್ಮವಿಶ್ವಾಸವನ್ನು ಹೊಂದಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಕೇವಲ ಗುರಿ ತಲುಪುವ ಉದ್ದೇಶ ಹೊಂದದೆ ಉನ್ನತ ಸಾಧನೆ ಮಾಡುವ ಗುರಿ ಇರಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಹೇಳಿದರು.


ಅವರು ನಗರದ ಬಪ್ಪಳಿಗೆಯಲ್ಲಿ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಮಹಾವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.


ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳ ಕನಸನ್ನು ಮೊಬೈಲ್ ಕಸಿದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಮ್ಮ ಆಲೋಚನಾ ಸಾಮರ್ಥ್ಯವೂ ಈಗ ಕಡಿಮೆಯಾಗುತ್ತಿದೆ. ಯಾವುದೇ ಕೆಲಸಗಳನ್ನು ಸರಿಯಾದ ಯೋಚನೆ – ಯೋಜನೆಯೊಂದಿಗೆ ಮಾಡುವುದು ಅಗತ್ಯ. ಕೆಲಸದಲ್ಲಿ ನಂಬಿಕೆಯೊ0ದಿಗೆ ಸಮಯಪ್ರಜ್ಞೆ ಅಳವಡಿಸಿಕೊಂಡಾಗ ಅಸಾಧ್ಯವಾದುದನ್ನೂ ಸಾಧಿಸಲು ಸಾಧ್ಯ ಎಂದರು.


ಸಾಧನೆಗಳು ಒಂದೇ ಬಾರಿಗೆ ಅನಾವರಣಗೊಳ್ಳಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಪಡೆಯುವ ನಾಯಕತ್ವ ಗುಣಗಳು ಮುಂದೊ0ದು ದಿನ ಸಮಾಜದಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಹೊರಹೊಮ್ಮಲು ಸಹಕಾರಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿ ಲಭಿಸುವ ವಿದ್ಯಾರ್ಥಿ ಸಂಘದ0ತಹಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ದೇಶಕ್ಕೆ ಭ್ರಷ್ಟಾಚಾರ ರಹಿತ, ಪ್ರಾಮಾಣಿಕ ಹಾಗೂ ಜನಪರ ಕಾರ್ಯ ನಿರ್ವಹಿಸುವ ಪ್ರಬುದ್ಧ ಯುವ ನಾಯಕರ ಅವಶ್ಯಕತೆಯಿದೆ. ವಿದ್ಯಾವಂತರು ರಾಜಕೀಯ ಪ್ರವೇಶಿಸಿ ಸಮಾಜ ಸರಿಪಡಿಸುವ ಜವಾಬ್ದಾರಿ ವಹಿಸಿಕೊಂಡಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಸಂಘ ಎನ್ನುವುದು ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಇರುವ ಭದ್ರ ತಳಹದಿಯಾಗಿದೆ ಎಂದರು.


ಸಂಸ್ಕೃತದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ್ದು ವಿಶೇಷವಾಗಿತ್ತು. ನೂತನ ನಾಯಕರಿಗೆ ಅತಿಥಿಗಳು ಹಾಗೂ ಕಾರ್ಯಕ್ರಮದ ಅಧ್ಯಕ್ಷರು ಸಂಸ್ಥೆಯ ಧ್ವಜ ಹಸ್ತಾಂತರ ಮಾಡಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಯನಾ, ಕಾರ್ಯದರ್ಶಿ ಭರತ್, ಅಂತಿಮ ವಿಜ್ಞಾನ ವಿಭಾಗದ ವರೇಣ್ಯಾ, ಅಂತಿಮ ಕಲಾ ವಿಭಾಗದ ಮೇಘಾ ಡಿ., ದ್ವಿತೀಯ ಕಲಾ ವಿಭಾಗದ ನವನೀತ್, ದ್ವಿತೀಯ ವಾಣಿಜ್ಯ ವಿಭಾಗದ ಲೇಖಾ, ಪ್ರಥಮ ಕಲಾ ವಿಭಾಗದ ವಿಕ್ರಂ ವಿ., ಪ್ರಥಮ ವಾಣಿಜ್ಯ ವಿಭಾಗದ ಶರಣ್ಯಾ ರೈ ಪ್ರಮಾಣ ವಚನ ಸ್ವೀಕರಿಸಿ, ಗುರುತು ಚೀಟಿಯನ್ನು ಪಡೆದುಕೊಂಡರು.

ಐಕ್ಯೂಎಸಿ ಘಟಕದ ಸಂಯೋಜಕ ಚಂದ್ರಕಾ0ತ ಗೋರೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಯನ ವಂದಿಸಿದರು. ಕನ್ನಡ ಉಪನ್ಯಾಸಕ ಗಿರೀಶ್ ಭಟ್ ವಂದಿಸಿದರು.

ಮುಳಿಯಾರು ಷಷ್ಠಿ ಮಹೋತ್ಸವ

0

ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಮಹೋತ್ಸವವು  ಇದೇ ಬರುವ ನವಂಬರ್  29 ಮತ್ತು 30  ಮಂಗಳವಾರ ಮತ್ತು ಬುಧವಾರಗಳಂದು ( ವೃಶ್ಚಿಕ ಮಾಸ 13 ಮತ್ತು 14 ) ಕ್ಷೇತ್ರ ತಂತ್ರಿಗಳಾದ ಅರವತ್ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.  

ಆ ಪ್ರಯುಕ್ತ ಭಕ್ತಾಭಿಮಾನಿಗಳು ಆ ದಿನಗಳಲ್ಲಿ ಕ್ಷೇತ್ರ ಸಂದರ್ಶಿಸಿ ಶ್ರೀ ದೇವರ ಶ್ರೀ ಮುಡಿ ಗಂಧಪ್ರಸಾದಗಳನ್ನು ಸ್ವೀಕರಿಸಿ ಕೃತಾರ್ಥರಾಗಬೇಕಾಗಿ ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ. 

ಕಾರ್ಯಕ್ರಮ ವಿವರ

——————– 

28.11.2022 –  ಸಂಜೆ 7 ರಿಂದ

ವಾಸ್ತು ಬಲಿ, ರಕ್ಷೋಘ್ನ, ಅತ್ತಾಳ ಪೂಜೆ

29.11.2022 – ಬೆಳಗ್ಗೆ 6 ರಿಂದ

ಅಭಿಷೇಕ ಪೂಜೆ, ಉಷಪೂಜೆ, ಗಣಹೋಮ, ತುಲಾಭಾರ ಸೇವೆ, ಮಧ್ಯಾಹ್ನ ಪೂಜೆ,  ಪ್ರಸಾದ ಭೋಜನ. 

29.11.2022 – ಸಂಜೆ 06.45 –  ಮೂಡುಮನೆ ಬಳ್ಳುಳ್ಳಾಯ ತರವಾಡು ಮನೆಯಿಂದ ಭಂಡಾರ ಆಗಮನ. 

ಸಂಜೆ  06.30 ದೀಪಾರಾಧನೆ.

ರಾತ್ರೆ 07.00 ತೊಡಂಗಲ್

ರಾತ್ರೆ 07.30 ರಾತ್ರೆ ಪೂಜೆ 

ರಾತ್ರೆ  07.45 – ದೇವರ ಬಲಿ ಹೊರಡುವುದು, ಶ್ರೀ ಭೂತಬಲಿ.

ರಾತ್ರೆ 08.45 – ಕೋಟೂರು ಕಟ್ಟೆ ಸವಾರಿ. 

ರಾತ್ರೆ  08.50 ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಲ್ಲ, ಮುಳಿಯಾರು –  ಇವರಿಂದ ಯಕ್ಷಗಾನ ಬಯಲಾಟ.

ರಾತ್ರೆ 10.30 ಕ್ಕೆ –  ಶ್ರೀ ದೇವರ ಕೋಟೂರು ಕಟ್ಟೆ ಸವಾರಿ ಹಿಂತಿರುಗುವುದು.

ಕಟ್ಟೆ ಪೂಜೆ, ರಾಜಾಂಗಣದಲ್ಲಿ ನೃತ್ಯ ಸೇವೆ,

30.11.2022  ಬುಧವಾರ –  ಬೆಳಗ್ಗೆ ಅಭಿಷೇಕ ಪೂಜೆ, ಉಷಪೂಜೆ,

ಬೆಳಗ್ಗೆ 10.00 ಕ್ಕೆ –  ಶಿವೇಲಿ, ರಾಜಾಂಗಣದಲ್ಲಿ ದರ್ಶನಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪೂಜೆ, ಮಂತ್ರಾಕ್ಷತೆ,

ಮಧ್ಯಾಹ್ನ 01.00 ರಿಂದ – ಶ್ರೀ ವಿಷ್ಣುಮುರ್ತಿ ದೈವದ ಕೋಲ

ಸಂಜೆ – 06.30 – ದೀಪಾರಾಧನೆ.

ರಾತ್ರೆ – 07.30 – ಶ್ರೀರಂಗಪೂಜೆ 

ಬೆಂಗಳೂರಿನಲ್ಲಿ 67 ವರ್ಷದ ವ್ಯಕ್ತಿ ಗೆಳತಿಯ ಜೊತೆ ಸಂಪರ್ಕದಲ್ಲಿರುವಾಗ ಹಾಸಿಗೆಯಲ್ಲಿ ಸಾವು, ಮೃತದೇಹವನ್ನು ಮರೆಮಾಡಿ ಎಸೆದ ಗೆಳತಿ, ಆಕೆಯ ಪತಿ ಮತ್ತು ಸಹೋದರ – ಕೇಸು ದಾಖಲು

0

ಬೆಂಗಳೂರಿನಲ್ಲಿ 67 ವರ್ಷದ ವ್ಯಕ್ತಿಯೊಬ್ಬರು ತಮ್ಮ ಗೆಳತಿಯೊಂದಿಗೆ ಹಾಸಿಗೆಯಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿಕ್ಕಿಬೀಳುವ ಭಯದಿಂದ ಮಹಿಳೆ ತನ್ನ ಪತಿ ಮತ್ತು ಸಹೋದರನೊಂದಿಗೆ ಪುರುಷನ ಶವವನ್ನು ಎಸೆದಿದ್ದಾಳೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು ಪೊಲೀಸರು ಪ್ಲಾಸ್ಟಿಕ್ ಚೀಲದಲ್ಲಿ 67 ವರ್ಷದ ವ್ಯಕ್ತಿಯ ಶವವನ್ನು ಪತ್ತೆ ಮಾಡಿದ ಒಂದು ವಾರದ ನಂತರ, ಸಾವಿನ ತನಿಖೆಯಲ್ಲಿ ವ್ಯಕ್ತಿ ತನ್ನ ಗೆಳತಿಯೊಂದಿಗೆ ಲೈಂಗಿಕ ಸಂಪರ್ಕದಲ್ಲಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ವ್ಯಕ್ತಿಯ ದೇಹವನ್ನು ವಿಲೇವಾರಿ ಮಾಡಿದ್ದು ಬೇರೆ ಯಾರೂ ಅಲ್ಲ, ಅವನ ಗೆಳತಿಯ ಪತಿ ಮತ್ತು ಅವಳ ಸಹೋದರ.

67 ವರ್ಷದ ಉದ್ಯಮಿ ತನ್ನ 35 ವರ್ಷದ ಮನೆಕೆಲಸಗಾರನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆ ನವೆಂಬರ್ 16 ರಂದು ತನ್ನ ಗೆಳತಿಯ ಮನೆಗೆ ಭೇಟಿ ನೀಡಿದ್ದರು ಮತ್ತು ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಆಯಾಸದಿಂದ ಹಾಸಿಗೆಯ ಮೇಲೆ ಸಾವನ್ನಪ್ಪಿದ್ದರು. ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಸೂಚಿಸಿವೆ.

ಜೆ.ಪಿ.ನಗರದ ಪುಟ್ಟೇನಹಳ್ಳಿ ನಿವಾಸಿ ಬಾಲ ಸುಬ್ರಮಣಿಯನ್ ಎಂದು ಗುರುತಿಸಲಾದ ವ್ಯಕ್ತಿ ನವೆಂಬರ್ 16 ರಂದು ಮೊಮ್ಮಗನನ್ನು ಬ್ಯಾಡ್ಮಿಂಟನ್ ತರಗತಿಗೆ ಬಿಡಲು ಮನೆಯಿಂದ ಹೊರಟಿದ್ದರು. ಸಂಜೆ 4.55 ರ ಸುಮಾರಿಗೆ ಬಾಲಾ ತನ್ನ ಸೊಸೆಗೆ ಕರೆ ಮಾಡಿ ತನಗೆ ಕೆಲವು ವೈಯಕ್ತಿಕ ಕೆಲಸಗಳಿರುವುದರಿಂದ ತಡವಾಗಿ ಬರುವುದಾಗಿ ತಿಳಿಸಿದರು.

ಬಾಲಾ ಅವರ ಕುಟುಂಬ ಸದಸ್ಯರಿಗೆ ದೀರ್ಘಕಾಲ ಅವರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಅವರ ಮಗ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದಾರೆ. ನಾಪತ್ತೆ ದೂರು ದಾಖಲಾದ ಒಂದು ದಿನದ ನಂತರ ಪೊಲೀಸರಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಪ್ಲಾಸ್ಟಿಕ್ ಕವರ್ ಮತ್ತು ಬೆಡ್‌ಶೀಟ್‌ನಲ್ಲಿ ಪ್ಯಾಕ್ ಮಾಡಲಾಗಿದ್ದ ಶವ ಪತ್ತೆಯಾಗಿದೆ.

ಈ ಘಟನೆ ಬಯಲಿಗೆ ಬಂದರೆ ಸಮಾಜದಲ್ಲಿ ತನ್ನ ವರ್ಚಸ್ಸು ಹಾಳಾಗುತ್ತದೆ ಎಂದು ಹೆದರಿದ ಮಹಿಳೆ ಕೂಡಲೇ ಪತಿ ಹಾಗೂ ಸಹೋದರನಿಗೆ ಕರೆ ಮಾಡಿದ್ದಾರೆ. ಮಹಿಳೆ ಮತ್ತು ಆಕೆಯ ಸಂಬಂಧಿಕರು ಉದ್ಯಮಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಜೆಪಿ ನಗರದ ಪ್ರತ್ಯೇಕ ಸ್ಥಳದಲ್ಲಿ ಎಸೆದಿದ್ದಾರೆ. ವಿಚಾರಣೆ ನಡೆಸಿದಾಗ, ಮಹಿಳೆ ತನ್ನ 67 ವರ್ಷದ ಗೆಳೆಯನ ಶವವನ್ನು ವಿಲೇವಾರಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಪೊಲೀಸರು ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬಹುದು ಎಂದು ಮನೆಯವರು ಆತಂಕಗೊಂಡಿದ್ದರಿಂದ ಪತಿ ಮತ್ತು ಸಹೋದರನ ಸಹಾಯದಿಂದ ಶವವನ್ನು ರಸ್ತೆಯಲ್ಲಿ ಎಸೆದಿದ್ದಾಳೆ. ಬಾಲ ಸುಬ್ರಮಣಿಯನ್ ತನ್ನ ಸೇವಕಿಯೊಂದಿಗೆ ಬಹಳ ದಿನಗಳಿಂದ ಸಂಬಂಧ ಹೊಂದಿದ್ದನು ಮತ್ತು ಅವನು ಆಗಾಗ್ಗೆ ಅವಳ ಮನೆಗೆ ಭೇಟಿ ನೀಡುತ್ತಿದ್ದನು ಎಂದು ತಿಳಿದುಬಂದಿದೆ.

ಅವರು ಕಳೆದ ವರ್ಷ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಏತನ್ಮಧ್ಯೆ, ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ಮಹಿಳೆಯ ಹೇಳಿಕೆಗಳು ನಿಜವೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಲು ಪುರುಷನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಸಮಸ್ಯೆ ಪರಿಹಾರಕ್ಕಾಗಿ ಜೋಡಿಯನ್ನು ಕಾಡಿನಲ್ಲಿ ಒಂದಾಗಲು ಹೇಳಿ ಅವರು ಒಟ್ಟಿಗಿರುವಾಗ ಅವರನ್ನು ಕೊಂದ ತಂತ್ರಿ – ವಾಮಾಚಾರದ ಭೀಕರ ಕೃತ್ಯ

0

ಕಳೆದ ವಾರ ಗೋಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಬಾವಡಿ ಅರಣ್ಯ ಪ್ರದೇಶದಲ್ಲಿ 32 ವರ್ಷದ ಸರ್ಕಾರಿ ಶಿಕ್ಷಕ ರಾಹುಲ್ ಮೀನಾ ಮತ್ತು 31 ವರ್ಷದ ಸೋನು ಕನ್ವರ್ ಶವವಾಗಿ ಪತ್ತೆಯಾಗಿದ್ದರು.

ಜೈಪುರ: ರಾಜಸ್ಥಾನದ ಉದಯ್‌ಪುರ ಸಮೀಪದ ಕಾಡಿನ ಮಧ್ಯದಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಅವರ ಬೆತ್ತಲೆ ದೇಹವನ್ನು ಸೂಪರ್‌ಗ್ಲೂನಿಂದ (ಅತಿಯಾದ ಅಂಟು ವಸ್ತು) ಹೊದಿಸಿ ಕತ್ತು ಸೀಳಿ, ಮಹಿಳೆಯೊಬ್ಬರನ್ನು ಕತ್ತು ಕೊಯ್ದು ಕೊಂದ ಘಟನೆ ಕಳೆದ ವಾರ ದಿಗ್ಭ್ರಮೆ ಮೂಡಿಸಿದೆ.

ಸೋಮವಾರ 52 ವರ್ಷದ ತಂತ್ರಿ ಅಥವಾ ನಿಗೂಢವಾದಿಯನ್ನು ಬಂಧಿಸುವುದರೊಂದಿಗೆ, ವಿಲಕ್ಷಣವಾದ ಜೋಡಿ ಕೊಲೆಯ ಪ್ರಕರಣವನ್ನು ಭೇದಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗೋಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಬಾವಡಿ ಅರಣ್ಯ ಪ್ರದೇಶದಲ್ಲಿ ಕಳೆದ ವಾರ 32 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕ ರಾಹುಲ್ ಮೀನಾ ಮತ್ತು 31 ವರ್ಷದ ಸೋನು ಕನ್ವರ್ ಶವವಾಗಿ ಪತ್ತೆಯಾಗಿದ್ದರು.

ಇಬ್ಬರೂ ಪ್ರತ್ಯೇಕ ವ್ಯಕ್ತಿಗಳನ್ನು ಮದುವೆಯಾಗಿದ್ದರು. ಅವರು ವಿವಾಹೇತರ ಸಂಬಂಧ ಹೊಂದಿದ್ದರು. ಆಶ್ಚರ್ಯಕರ ಆವಿಷ್ಕಾರದ ನಂತರ, ಸುಮಾರು 200 ಜನರನ್ನು ಪ್ರಶ್ನಿಸಲಾಯಿತು ಮತ್ತು ಸುಮಾರು 50 ಸ್ಥಳಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಕೊನೆಗೂ ಭಾಲೇಶ್ ಜೋಶಿ ಎಂಬ ತಂತ್ರಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ. ತನ್ನ ಅನುಯಾಯಿಗಳಲ್ಲಿ ಉದ್ಯಮಿಗಳು ಮತ್ತು ಸ್ಥಳೀಯ ರಾಜಕಾರಣಿಗಳನ್ನು ಎಣಿಸಿದ ಪ್ರದೇಶದ ಪ್ರಭಾವಿ ವ್ಯಕ್ತಿ, ಭಾಲೇಶ್ ಜೋಶಿ ಅವರನ್ನು ತೊಂದರೆಯಲ್ಲಿರುವ ಜನರು ಹುಡುಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಭದ್ವಿ ಗುಡಾದ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದರು.

ದೇವಸ್ಥಾನದಲ್ಲಿ ಭೇಟಿಯಾದ ನಂತರ ಸೋನು ಮತ್ತು ರಾಹುಲ್ ಅವರ ಸಂಬಂಧ ಪ್ರಾರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಸೋನು ಕೂಡ ತಂತ್ರಿಯೊಂದಿಗೆ ಆಗಾಗ್ಗೆ ಸಂಪರ್ಕದಲ್ಲಿರುತ್ತಾನೆ ಎಂದು ಅವರು ಹೇಳಿದರು. ಈ ಸಂಬಂಧವು ರಾಹುಲ್ ಅವರ ಮದುವೆಯಲ್ಲಿ ಕಲಹಕ್ಕೆ ಕಾರಣವಾಯಿತು ಮತ್ತು ಅವರ ಪತ್ನಿ ಸಲಹೆಗಾಗಿ ತಂತ್ರಿಗಳನ್ನು ಸಂಪರ್ಕಿಸಿದಾಗ, ಅವರು ಸೋನು ಅವರೊಂದಿಗಿನ ಸಂಬಂಧದ ಬಗ್ಗೆ ತಿಳಿಸಿದರು ಎಂದು ಪೊಲೀಸ್ ಅಧಿಕಾರಿ ವಿಕಾಸ್ ಕುಮಾರ್ ಹೇಳಿದ್ದಾರೆ.

ಈ ವಿಷಯ ತಿಳಿದ ರಾಹುಲ್ ಮತ್ತು ಸೋನು ಅವರು ತಂತ್ರಿಗಳ ಮಾನಹಾನಿ ಮಾಡಲು ತಂತ್ರಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕ ಅವಮಾನಕ್ಕೆ ಹೆದರಿದ ಭಲೇಶ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ.

ತ್ವರಿತವಾಗಿ ಒಣಗುವ ಅಂಟು ಸೂಪರ್ ಗ್ಲೂನ 50 ಟ್ಯೂಬ್‌ಗಳನ್ನು ತಲಾ ರೂ. 15ಕ್ಕೆ ಖರೀದಿಸಿ, ಎಲ್ಲವನ್ನೂ ಬಾಟಲಿಯಲ್ಲಿ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 18 ರ ಸಂಜೆ, ಕೆಲವು ರೀತಿಯ ಭರವಸೆ ನೀಡಿ, ಅವರು ರಾಹುಲ್ ಮತ್ತು ಸೋನು ಅವರನ್ನು ಕರೆದು ಕಾಡಿನಲ್ಲಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದರು.

ಪೋಲೀಸರ ಪ್ರಕಾರ, ನಂತರ ಅವರು ತಮ್ಮ ತೊಂದರೆಗಳನ್ನು ಹೋಗಲಾಡಿಸಲು ಅಲ್ಲಿ ಕಾಡಿನಲ್ಲಿ ಲೈಂಗಿಕತೆಯನ್ನು ಹೊಂದಲು ಕೇಳಿದರು. ಆಗ ತಂತ್ರಿಯು ಹೊರಟುಹೋದಂತೆ ನಟಿಸಿದನು ಆದರೆ ಒಮ್ಮೆ ಅವರು ಒಂದಾಗಲು ಪ್ರಾರಂಭಿಸಿದಾಗ ಹಿಂತಿರುಗಿದರು ಮತ್ತು ಸೂಪರ್ಗ್ಲೂ ಅನ್ನು ಅವರ ಮೇಲೆ ಸುರಿದರು. ಬಳಿಕ ಆ ವ್ಯಕ್ತಿಯ ಕತ್ತು ಸೀಳಿ ಮಹಿಳೆಗೆ ಚಾಕುವಿನಿಂದ ಇರಿದಿದ್ದಾನೆ. ವ್ಯಕ್ತಿಯ ಜನನಾಂಗಗಳು ಸಹ ಕತ್ತರಿಸಲ್ಪಟ್ಟಿದ್ದು, ದೇಹಗಳನ್ನು ಸುಡುವ ಪ್ರಯತ್ನಗಳು ನಡೆದಿವೆ.

ತಂತ್ರಿಗಳ ಬೆರಳುಗಳ ಮೇಲೆ ಸೂಪರ್ ಗ್ಲೂ ಅವಶೇಷಗಳು ಕಂಡುಬಂದಾಗ ತಂತ್ರಿಗಳ ಒಳಗೊಳ್ಳುವಿಕೆ ಅವರಿಗೆ ಮನವರಿಕೆಯಾಯಿತು ಎಂದು ಪೊಲೀಸರು ಹೇಳಿದರು. ತಂತ್ರಿಯನ್ನು ಬಂಧಿಸಿದಾಗ ಬಿಡುಗಡೆ ಮಾಡಲು ಹಲವಾರು ಪ್ರಮುಖ ಪ್ರಬಾವಿ ವ್ಯಕ್ತಿಗಳು ಬಂದರು ಆದರೆ ಪ್ರಕರಣದ ಭೀಕರ ವಿವರಗಳನ್ನು ತಿಳಿಸಿದಾಗ ಅವರು ಮಾತಿಲ್ಲದೆ ಮೌನವಾಗಿ ಹಿಂದಿರುಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ಐದು ತಿಂಗಳ ಹಿಂದೆ ಮದುವೆಯಾಗಿದ್ದ, ತನ್ನ ಪತ್ನಿಯನ್ನೇ ಚುಚ್ಚುಮದ್ದು ನೀಡಿ ಕೊಂದ ಆಸ್ಪತ್ರೆಯ ನೌಕರ – ನರ್ಸ್ ಜೊತೆಗೆ ಪ್ರೀತಿ ಅಂಕುರಿಸಿದ್ದೇ ಕಾರಣ

0

ಪುಣೆಯಲ್ಲಿ ಆಸ್ಪತ್ರೆಯ ನೌಕರನೊಬ್ಬ ಮಾರಣಾಂತಿಕ ಡ್ರಗ್ಸ್ ನೀಡಿ ಪತ್ನಿಯನ್ನು ಕೊಂದಿದ್ದಾನೆ. ಆರೋಪಿಯು ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ನರ್ಸ್, ಸಹೋದ್ಯೋಗಿಯೊಂದಿಗೆ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗಲು ಯೋಜಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ 23 ವರ್ಷದ ಪುರುಷ ನರ್ಸ್ ತನ್ನ ಪತ್ನಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಸ್ವಪ್ನಿಲ್ ಸಾವಂತ್ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಸಹೋದ್ಯೋಗಿಯಾಗಿದ್ದ ನರ್ಸ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆಯನ್ನು ಮದುವೆಯಾಗಲು ಯೋಜಿಸುತ್ತಿದ್ದ ಎಂದು ಪೌಡ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಾವಂತ್ ಐದು ತಿಂಗಳ ಹಿಂದೆ ಸಂತ್ರಸ್ತೆ ಪ್ರಿಯಾಂಕಾ ಕ್ಷೇತ್ರೆ ಎಂಬ ಹುಡುಗಿಯನ್ನು ವಿವಾಹವಾದರು ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಅವರು ಹೇಳಿದರು. ನವೆಂಬರ್ 14 ರಂದು, ಆತನು ಗಂಭೀರ ಸ್ಥಿತಿಯಲ್ಲಿ ಅವಳನ್ನು ಆಸ್ಪತ್ರೆಗೆ ಕರೆದೊಯ್ದ, ಅಲ್ಲಿ ಅವಳು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

“ಪ್ರಿಯಾಂಕಾ ಸಹಿ ಹಾಕಿರುವ ಸೂಸೈಡ್ ನೋಟ್ ಪತ್ತೆಯಾಗಿದ್ದು, ಸಾವಂತ್ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ” ಎಂದು ಇನ್ಸ್‌ಪೆಕ್ಟರ್ ಮನೋಜ್ ಯಾದವ್ ಹೇಳಿದ್ದಾರೆ.

ಆದರೆ ತನಿಖೆಯ ವೇಳೆ ಸಾವಂತ್ ಅವರು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಿಂದ ವೆಕುರೋನಿಯಂ ಬ್ರೋಮೈಡ್, ನೈಟ್ರೊಗ್ಲಿಸರಿನ್ ಚುಚ್ಚುಮದ್ದು ಮತ್ತು ಲಾಕ್ಸ್ 2% ಸೇರಿದಂತೆ ಕೆಲವು ಔಷಧಗಳು ಮತ್ತು ಚುಚ್ಚುಮದ್ದುಗಳನ್ನು ಕದ್ದು ಪತ್ನಿಯನ್ನು ಕೊಂದು ಹಾಕಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

“ನಾವು ಅವರ ವಿರುದ್ಧ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ ಮತ್ತು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಶ್ರೀ ಯಾದವ್ ಹೇಳಿದರು.

ಕವಿಭೂಷಣ ವೆಂಕಪ್ಪ ಶೆಟ್ಟಿ ಸ್ಮರಣೆ – ಶೆಟ್ಟರು ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಶಕಪುರುಷ

ಮಂಗಳೂರು: ‘ಕವಿಭೂಷಣ ಕೆ.ಪಿ.ವೆಂಕಟಪ್ಪ ಶೆಟ್ಟರು ಹಿರಿಯ ತಲೆಮಾರಿನ ಅಗ್ರಗಣ್ಯ ಅರ್ಥಧಾರಿ; ತಲ್ಲಂಗಡಿ ಗುತ್ತು ಪಕೀರ ಶೆಟ್ಟಿ ಎಂಬುದು ಅವರ ಮನೆತನದ ಹೆಸರು. ಪ್ರಬುದ್ಧ ಲೇಖಕರಾಗಿ, ಪ್ರಸಂಗ ಕರ್ತರಾಗಿ, ಪ್ರಖರ ವಾಗ್ಮಿಯಾಗಿ, ಪುತ್ತೂರು ತಾಲೂಕು ಪಾಣಾಜೆಯಲ್ಲಿ ಆಯುರ್ವೇದ ಪಂಡಿತರಾಗಿದ್ದ ವೈದ್ಯ ವೆಂಕಪ್ಪ ಶೆಟ್ಟಿಯವರಿಗೆ ಯಕ್ಷಗಾನ ದಿಗ್ಗಜ ಎಂಬುದು ಅನ್ವರ್ಥನಾಮ.

ಅವರು ತಾಳಮದ್ದಳೆ ಕ್ಷೇತ್ರದ ಶಕಪುರುಷ. ಶೇಣಿ, ಕಾಂತ ರೈಯವರಂತಹ ಶ್ರೇಷ್ಠ ಅರ್ಥಧಾರಿಗಳು ಅವರನ್ನು ಗುರುವಾಗಿ ಅಂಗೀಕರಿಸಿದ್ದಾರೆ’ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ, ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.

         ಯಕ್ಷಾಂಗಣ ಮಂಗಳೂರು ಯಕ್ಷಗಾನ – ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ. ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಸೋಮವಾರದಿಂದ ನಡೆಸುತ್ತಿರುವ ಯಕ್ಷಾಂಗಣ ದಶಮಾನೋತ್ಸವ ಸಡಗರದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ -2022’ ಕನ್ನಡ ನುಡಿ ಹಬ್ಬದ ಎರಡನೇ ದಿನ ಕವಿಭೂಷಣ ಕೆ.ಪಿ.ವೆಂಕಪ್ಪ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮದಲ್ಲಿ  ಅವರು ನುಡಿ ನಮನ ಸಲ್ಲಿಸಿ ಮಾತನಾಡಿದರು. ಹಿರಿಯ ಕಲಾಪೋಷಕ ಹಾಗೂ ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಸಂಸ್ಮರಣ ಜ್ಯೋತಿ ಬೆಳಗಿದರು.

 ಭುಜಬಲಿ ಸಮ್ಮಾನ:

         ಸಮಾರಂಭದಲ್ಲಿ ಯಕ್ಷಗಾನ ಸಂಘಟಕ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ವಿಶ್ರಾಂತ ಉಗ್ರಾಣ ಮುತ್ಸದ್ಧಿ ಬಿ.ಭುಜಬಲಿ ಧರ್ಮಸ್ಥಳ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಆಫೀಸರ್ಸ್ ಕ್ಲಬ್ ಖಜಾಂಜಿ, ಯೋಗಗುರು ಜೆ.ವಿ. ಶೆಟ್ಟಿ , ಕೆ.ಪಿ.ವೆಂಕಪ್ಪ ಶೆಟ್ಟಿ ಸ್ಮಾರಕ ಟ್ರಸ್ಟ್ ನ ಮಹಾಬಲ ಶೆಟ್ಟಿ ಕೂಡ್ಲು, ಗಣೇಶ್ ಗೋಪಾಲ್ ಕಾವ ತಲ್ಲಂಗಡಿ, ಉದ್ಯಮಿ ಎಂ.ಪಿ.ದಿನೇಶ್ ಅತಿಥಿಗಳಾಗಿದ್ದರು.

      ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಮಹಿಳಾ ಕಾರ್ಯದರ್ಶಿ ಸುಮಾ ಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಪದಾಧಿಕಾರಿಗಳಾದ ಬೆಟ್ಟಂಪಾಡಿ ಸುಂದರ ಶೆಟ್ಟಿ, ಕರುಣಾಕರ ಶೆಟ್ಟಿ ಪಣಿಯೂರು, ಉಮೇಶ್ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ ಉಪಸ್ಥಿತರಿದ್ದರು.

‘ವಾನರೇಶ್ವರ ವಿಜಯ’ ತಾಳಮದ್ದಳೆ:

              ‘ಸಪ್ತ ವಿಜಯ’ ಸರಣಿ ಅಂಗವಾಗಿ ರವಿಚಂದ್ರ ಕನ್ನಡಿಕಟ್ಟೆ ಅವರ ಭಾಗವತಿಕೆಯಲ್ಲಿ ‘ವಾನರೇಶ್ವರ ವಿಜಯ’ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಿತು.

ವಿಳಾಸ ಕೇಳುವ ನೆಪದಲ್ಲಿ ನಾಲ್ವರು ಯುವತಿಯರು ಯುವಕನನ್ನು ಅಪಹರಿಸಿ ಅತ್ಯಾಚಾರ ಎಸಗಿ ಪರಾರಿ – ಈ ಬಾರಿ ನಾರಿಯರ ಸರದಿ!

0

ವಿಳಾಸ ಕೇಳುವ ನೆಪದಲ್ಲಿ ನಾಲ್ವರು ಯುವತಿಯರು ಯುವಕನನ್ನು ಅಪಹರಿಸಿ ಕಾರಿನಲ್ಲಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾರೆ. ಮಾಹಿತಿ ಪ್ರಕಾರ, ಕಾರ್ಖಾನೆಯಲ್ಲಿ ಕೆಲಸ ಮಾಡುವ ಯುವಕ ತನ್ನ ಕೆಲಸದಿಂದ ಮನೆಗೆ ಹೋಗುವುದಾಗಿ ತಿಳಿಸಿದ್ದಾನೆ. ಈ ವೇಳೆ ರಸ್ತೆಯಲ್ಲಿ ವಾಹನವೊಂದು ನಿಂತಿತ್ತು.

ಕಾರಿನಲ್ಲಿ ಹೋಗುತ್ತಿದ್ದ ನಾಲ್ವರು ಹುಡುಗಿಯರು ಅವಳ ವಿಳಾಸ ಕೇಳತೊಡಗಿದರು. ವಿಳಾಸ ಹೇಳುತ್ತಿದ್ದ ಸ್ವಲ್ಪ ಹೊತ್ತಿನಲ್ಲಿಯೇ ಹುಡುಗಿಯರು ಏನನ್ನೋ ಮೂಗಿಗೆ ಸಿಂಪಡಿಸಿ ಪ್ರಜ್ಞೆ ತಪ್ಪಿ ಅಪಹರಿಸಿದ್ದಾರೆ ಎಂದು ಯುವಕ ಹೇಳಿದ್ದಾನೆ. ಲೈಂಗಿಕ ಉದ್ದೇಶಕ್ಕಾಗಿ ಅಪಹರಣ ಮಾಡಲಾಗಿದೆ ಎಂದು ವ್ಯಕ್ತಿ ಆರೋಪಿಸಿದ್ದಾನೆ.

ಇಡೀ ಘಟನೆಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದ ಅವರು, ತಾನು ಚರ್ಮದ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ. ಸೋಮವಾರ ಮನೆಗೆ ತೆರಳುತ್ತಿದ್ದಾಗ ಕಪುರ್ತಲಾ ರಸ್ತೆಯಲ್ಲಿ ಅವನ ಬಳಿ ನಾಲ್ವರು ಹುಡುಗಿಯರು ಕುಳಿತಿದ್ದ ಬಿಳಿ ಬಣ್ಣದ ಕಾರು ಬಂದು ನಿಂತಿತ್ತು.

ಕಾರು ಚಲಾಯಿಸುತ್ತಿದ್ದ ಬಾಲಕಿ ತಾನು ನೀಡಿದ ಚೀಟಿಯಲ್ಲಿ ಬರೆದಿರುವ ವಿಳಾಸ ಕೇಳಿದಳು. ಅವನು ಸ್ಲಿಪ್ ಅನ್ನು ನೋಡಲು ಪ್ರಾರಂಭಿಸಿದ ತಕ್ಷಣ, ಹುಡುಗಿ ಅವನ ಕಣ್ಣಿಗೆ ಏನನ್ನೋ ಸ್ಪ್ರೇ ಮಾಡಿದಳು, ನಂತರ ಅವನು ಏನನ್ನೂ ನೋಡಲಿಲ್ಲ ಮತ್ತು ಅಂತಿಮವಾಗಿ ಮೂರ್ಛೆ ಹೋದನು. ಮುಂದೆ ಅವನಿಗೆ ಪ್ರಜ್ಞೆ ಬರುತ್ತಿದ್ದಂತೆ ಕೈಗಳನ್ನು ಹಿಂದೆ ಕಟ್ಟಿಕೊಂಡು ಕಣ್ಣುಮುಚ್ಚಿ ಕಾರಿನಲ್ಲಿ ಅವರೊಂದಿಗೆ ಕುಳಿತಿದ್ದ.

ಇದಾದ ನಂತರ ಬಾಲಕಿಯರು ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅಲ್ಲಿ ಮಾದಕ ದ್ರವ್ಯ ಸೇವಿಸಿದ್ದಾರೆ ಎನ್ನಲಾಗಿದೆ. ಮದ್ಯಪಾನ ಮಾಡುತ್ತಿದ್ದು, ತನಗೂ ಬಲವಂತವಾಗಿ ಕುಡಿಸಿದ್ದಾರೆ ಎಂದು ಯುವಕ ಹೇಳಿದ್ದಾನೆ. ಒಬ್ಬೊಬ್ಬರಾಗಿ ನಾಲ್ವರು ಹುಡುಗಿಯರು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ನಾಲ್ವರು ಬಾಲಕಿಯರ ವಯಸ್ಸು 22ರಿಂದ 23 ವರ್ಷ ಎಂದು ಯುವಕ ಹೇಳಿದ್ದಾನೆ.


ನಂತರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಾಲಕಿಯರು ಆತನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೈ ಕಟ್ಟಿ ಅಲ್ಲಿಂದ ಹೊರಟಿದ್ದರು. ನಾಲ್ವರು ಹುಡುಗಿಯರು ಯುವಕನನ್ನು ಅಪಹರಿಸಿ ಅತ್ಯಾಚಾರ ಎಸಗಿ ನಂತರ ಬಿಡುಗಡೆ ಮಾಡಿದ್ದಾರೆ. ನಾಲ್ವರು ಹುಡುಗಿಯರು ಅವರನ್ನು ತಡರಾತ್ರಿ ಏಕಾಂತ ಸ್ಥಳದಲ್ಲಿ ತಂದು ಬಿಟ್ಟಿದ್ದಾರೆ.

ಹುಡುಗಿಯರು ಉತ್ತಮ ಕುಟುಂಬದಿಂದ ಬಂದವರು ಎಂದು ತೋರುತ್ತಿದೆ ಎಂದು ವ್ಯಕ್ತಿ ಸುದ್ದಿಗಾರರಿಗೆ ತಿಳಿಸಿದರು. ಎಲ್ಲರೂ ತಮ್ಮ ತಮ್ಮಲ್ಲೇ ಹೆಚ್ಚಾಗಿ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರು. ಆದರೆ, ಅವರು ಪಂಜಾಬಿ ಭಾಷೆಯಲ್ಲಿ ಮಾತನಾಡಿದ್ದಾರೆ. ಆದರೆ, ಈ ಬಗ್ಗೆ ವ್ಯಕ್ತಿ ಪೊಲೀಸರಿಗೆ ದೂರು ನೀಡಿಲ್ಲ. ಜೀವಂತವಾಗಿ ಮರಳಿದ ಕಾರಣ ದೂರು ದಾಖಲಿಸಬೇಡಿ ಎಂದು ಅವರ ಪತ್ನಿ ಕೇಳಿಕೊಂಡರು ಎಂದು ಯುವಕ ಹೇಳಿದ್ದಾನೆ.

ಬದಲಾಗಿ, ಅವರು ಸ್ಥಳೀಯ ಮಾಧ್ಯಮಗಳಿಗೆ ತಮ್ಮ ಕೆಟ್ಟ ಅನುಭವವನ್ನು ವಿವರಿಸಿದರು ಸುದ್ದಿಯ ನಂತರ, ಪಂಜಾಬ್ ಪೊಲೀಸರ ಗುಪ್ತಚರ ಇಲಾಖೆ ಈ ವಿಷಯದಲ್ಲಿ ಸ್ವಯಂಪ್ರೇರಿತ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಗಳು ಹೇಳಿವೆ.

ಮಂಗಳೂರು ಬಾಂಬ್ ಸ್ಫೋಟದ ಗುರಿ ಕದ್ರಿ ದೇವಸ್ಥಾನ?  : ಹೊಣೆ ಹೊತ್ತುಕೊಂಡ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್  (Islamic Resistance Council)   ತನ್ನ ಗುರಿ ಕದ್ರಿ ದೇವಸ್ಥಾನ ಎಂದು ಹೇಳಿಕೊಂಡ ಉಗ್ರರು

0

ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (IRC) ಮಂಗಳೂರು ಸ್ಫೋಟದ ಜವಾಬ್ದಾರಿಯನ್ನು ವಹಿಸಿಕೊಂಡಿದೆ ಮತ್ತು ಗುರಿಯು ಕದ್ರಿ ದೇವಾಲಯವಾಗಿದೆ ಎಂದು ಹೇಳಿಕೊಂಡಿದೆ.

ಇದೀಗ, ಪೊಲೀಸರು ಭಯೋತ್ಪಾದಕ ಸಂಘಟನೆಯ ಹೇಳಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಇದು ಸುಳ್ಳು ಹೇಳಿಕೆಯಾಗಿದೆಯೋ ಅಥವಾ ಇದು ಒಂದು ಸುಳ್ಳು ಹೇಳಿಕೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ ಪ್ರಮುಖ ಆರೋಪಿ ಹಾಗೂ ಚಾಲಕ ಸೇರಿದಂತೆ ಇಬ್ಬರಿಗೆ ಗಾಯಗಳಾಗಿರುವ ಸ್ಫೋಟದ ಹೊಣೆಯನ್ನು ಅಪರಿಚಿತ ಇಸ್ಲಾಮಿಸ್ಟ್ ಗುಂಪು ಹೊತ್ತುಕೊಂಡಿದೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (Islamic Resistance Council) ಎಂಬ ಹೆಸರಿನ ಸಂಘಟನೆಯು ಮಂಗಳೂರು ಬಾಂಬ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ.

ಹೊಸ ಬೆಳವಣಿಗೆಗಳ ಕುರಿತು ಕರ್ನಾಟಕ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಂಗಳೂರು ಆಟೋರಿಕ್ಷಾ ಸ್ಫೋಟದ ಹೊಣೆ ಹೊತ್ತುಕೊಂಡಿರುವ ಅಪರಿಚಿತ ಗುಂಪು – ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ – ಪತ್ರಿಕಾ ಹೇಳಿಕೆ ಹೊರಬಿದ್ದಿದೆ. ಐಆರ್‌ಸಿ ಹಂಚಿಕೊಂಡ ಹೇಳಿಕೆಯಲ್ಲಿ, ಮಂಗಳೂರಿನಲ್ಲಿ ಕದ್ರಿಯಲ್ಲಿನ ದೇವಸ್ಥಾನವು ಅವರ ಗುರಿಯಾಗಿದೆ ಎಂದು ಗುಂಪು ಹೇಳಿದೆ, ಆದರೆ ಗುರಿಯನ್ನು ತಲುಪುವ ಮೊದಲು ಬಾಂಬ್ ಸ್ಫೋಟಗೊಂಡಿದೆ.

ಹೇಳಿಕೆಯು ಬರಹದಲ್ಲಿದೆ ಮತ್ತು ಬಾಂಬ್ ಸ್ಫೋಟದಲ್ಲಿ ಗಾಯಗೊಂಡು ಪೊಲೀಸ್ ಕಸ್ಟಡಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರಿಕ್ ಅವರ ಎರಡು ಚಿತ್ರಗಳನ್ನು ಹೊಂದಿದೆ.

ಐಆರ್‌ಸಿಯು ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಅಲೋಕ್ ಕುಮಾರ್‌ಗೆ ಬೆದರಿಕೆ ಹಾಕಿದೆ, “ನಿಮ್ಮ ಸಂತೋಷವು ಅಲ್ಪಕಾಲಿಕವಾಗಿರುತ್ತದೆ ಮತ್ತು ನಿಮ್ಮ ದಬ್ಬಾಳಿಕೆಯ ಫಲವನ್ನು ನೀವು ಶೀಘ್ರದಲ್ಲೇ ಉಣ್ಣುತ್ತೀರಿ” ಎಂದು ಹೇಳಿದ್ದಾರೆ.

ಕರ್ನಾಟಕ ಪೊಲೀಸ್ ಉನ್ನತ ಅಧಿಕಾರಿಗಳು, ಅಂತಹ ಯಾವುದೇ ಸಂಸ್ಥೆ ಅಸ್ತಿತ್ವದಲ್ಲಿದೆಯೇ ಎಂದು ಕೇಂದ್ರ ಏಜೆನ್ಸಿಗಳೊಂದಿಗೆ ಪರಿಶೀಲಿಸುತ್ತಿದ್ದೇವೆ ಎಂದು ಹೇಳಿದರು.