Tuesday, September 1, 2026
Home Blog Page 267

ಇಂದು ಆಟ ಎಲ್ಲೆಲ್ಲಿ? (13-05-2022)

ಮೇಳಗಳ ಇಂದಿನ (13.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==ಆಲೂರು ವೆಂಕಮ್ಮ ನಿಲಯದ ವಠಾರ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಮೂಕಾಂಬಿಕಾ’ ತೆಂಕ ಎಕ್ಕಾರು ಪೆರ್ಮುದೆ ವಯಾ ಬಜಪೆ 

ಕಟೀಲು ಎರಡನೇ ಮೇಳ == ಬಡಾಜೆ ಹೌಸ್ ಅಮ್ಟಾಡಿ ಬಂಟ್ವಾಳ 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿಸದನ 

ಕಟೀಲು ನಾಲ್ಕನೇ ಮೇಳ  == ಶಶಿಕಲ ನಿವಾಸ ಹಳೆಯಂಗಡಿ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಆರನೇ ಮೇಳ ==  ಅಡ್ಲಿಮಜಲು ಕೆಮ್ಮಾಯಿ ಪುತ್ತೂರು 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಚಿರಾಗ್ ದೀಪ್’ ಕೋಡಿ ರಸ್ತೆ ಐರೋಡಿ ಸಾಸ್ತಾನ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀನಿಲಯ ಚಿತ್ರಪಾಡಿ ಸಾಲಿಗ್ರಾಮ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಮಂಗಳೂರು ಶಕ್ತಿನಗರ ನಾಲ್ಯಪದವು ಶಾಲಾ ಮೈದಾನ – ಬ್ರಹ್ಮ ಕಪಾಲ ಇಂದ್ರಜಿತು ಕಾಳಗ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ದೇವರ ಸೇವೆ ಆಟ – ಬ್ರಹ್ಮ ಕಪಾಲ, ಮೀನಾಕ್ಷಿ ಕಲ್ಯಾಣ 

ಶ್ರೀ ಮಾರಣಕಟ್ಟೆ ಮೇಳ ‘ಎ’ == ಕಟ್ಟಿನಮಕ್ಕಿ ಗುಡ್ಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶಿವಾರಾಧ್ಯ ನಿಲಯ ಹೆರಂಜಾಲು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಹೆಮ್ಮಣ್ಣು ಗುಂಡೂರು ಆಲೂರು 

ಶ್ರೀ ಪಾವಂಜೆ ಮೇಳ == ಪಡುಬಿದ್ರಿ ಬಂಟರ ಭವನದ ಬಂಟರ ಚಾವಡಿ – ಧರ್ಮ ಸಿಂಹಾಸನ 

ಶ್ರೀ ಕಮಲಶಿಲೆ ಮೇಳ ==  ಹೊನ್ಕಲ್ಲು ಬೆಳ್ವೆ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಕದ್ರಿಕಟ್ಟು 

ಶ್ರೀ ಸೌಕೂರು ಮೇಳ == ಅಲ್ತಾರುಬೀಡು ಶ್ರೀ ವಿರೂಪಾಕ್ಷ ದೇವಸ್ಥಾನ ಯಡ್ತಾಡಿ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಓಜಾಲ ಶ್ರೀ ವನದುರ್ಗಾ ರಕ್ತೇಶ್ವರಿ ಪಂಜುರ್ಲಿ ಸಪರಿವಾರ ದೈವಸ್ಥಾನ – ಶ್ವೇತಕುಮಾರ ಚರಿತ್ರೆ 

ಶ್ರೀ ಮಡಾಮಕ್ಕಿ ಮೇಳ == ಮೇಗರವಳ್ಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಮಲ್ಪೆ ಕಲ್ಮಾಡಿ – ನೂತನ ಪ್ರಸಂಗ 

ಶ್ರೀ ಶನೀಶ್ವರ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸಿಗಂದೂರು ಮೇಳ == ಅಮಾಸೆಬೈಲು ರಿಕ್ಷಾ ನಿಲ್ದಾಣ ಬಳಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ವನಚೇತನ – ಸಪ್ತಾಹ – ಸಂಪೂರ್ಣ ರಾಮಾಯಣ 

ಶ್ರೀ ಹಟ್ಟಿಯಂಗಡಿ ಮೇಳ == ಕಳ್ತೂರು ಸಂತೆಕಟ್ಟೆ – ದೀಪ ದರ್ಪಣ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಚೇಳ್ವಾರು  ಖಂಡಿಗೆ ಶ್ರೀ ಉಳ್ಳಾಯ ದೈವಸ್ಥಾನ ವಠಾರ – ಮುಗುರು ಮಲ್ಲಿಗೆ 

ಇಂದು ಆಟ ಎಲ್ಲೆಲ್ಲಿ? (12-05-2022)

ಮೇಳಗಳ ಇಂದಿನ (12.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==ಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ತೋಕೂರು ಮಾಗಂದಡಿ ವಯಾ ಹಳೆಯಂಗಡಿ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಮೂರನೇ ಮೇಳ== ಲಕ್ಷ್ಮಿ ನಿವಾಸ ತೇವು ಸೂರಿಂಜೆ ಕಾಟಿಪಳ್ಳ 

ಕಟೀಲು ನಾಲ್ಕನೇ ಮೇಳ  == ವಜ್ರೇಶ್ವರಿ ನಿಲಯ ಪಾರಂಪಳ್ಳಿ ಸಾಲಿಗ್ರಾಮ 

ಕಟೀಲು ಐದನೇ ಮೇಳ == ಚೆನ್ನೊಟ್ಟು ತೋಡಾರ್ 

ಕಟೀಲು ಆರನೇ ಮೇಳ == ಕೊಪ್ಪಲ ಮನೆ ಶ್ರೀ ಕಾವೇಶ್ವರ ದೇವಸ್ಥಾನದ ಬಳಿ ಬಡಗಬೆಳ್ಳೂರು 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ವಾಸುದೇವ ಶೇರುಗಾರರ ಮನೆ ಉಪ್ಪಿನಕುದ್ರು

ಹನುಮಗಿರಿ ಮೇಳ == ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು – ಶ್ರೀ ದೇವಿ ಮಹಾತ್ಮೆ 

ಶ್ರೀ ಪೆರ್ಡೂರು ಮೇಳ == ಶ್ರೀ ಕ್ಷೇತ್ರ ಪೆರ್ಡೂರು – ರಾಜಾ ಉಗ್ರಸೇನ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕೊನೆಕೋಡು ರಾಗಿಹಕ್ಲು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹೂವಯ್ಯನಮನೆ ನಾವುಂದ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ಪುಟ್ಟಮ್ಮ ನಿಲಯ ಬಟ್ಟೆಕುದ್ರು ಸಾಲ್ ಬಾಗಿಲು ಹಕ್ಲಾಡಿ 

ಶ್ರೀ ಪಾವಂಜೆ ಮೇಳ == ತಮ್ಮು ಶೆಟ್ಟಿ ಕಂಪೌಂಡ್ ಅಗರ್ ಮೇಲ್ ಸುರತ್ಕಲ್ – ಧರ್ಮ ಸಿಂಹಾಸನ 

ಶ್ರೀ ಕಮಲಶಿಲೆ ಮೇಳ ==  ಆಲೂರು ಫ್ರೆಂಡ್ಸ್ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ನವನಗರ ವಕ್ವಾಡಿ 

ಶ್ರೀ ಸೌಕೂರು ಮೇಳ == ಸಿದ್ಧಾಪುರ ರಂಗನಾಥ ಸಭಾಭವನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ವಾಮಂಜೂರು ಶ್ರೀರಾಮ ಭಜನಾ ಮಂದಿರ 

ಶ್ರೀ ಮಡಾಮಕ್ಕಿ ಮೇಳ == ಮೇಕೇರಿ ಶ್ರೀ ದುರ್ಗಾಪರಮೇಶ್ವರಿ ಮಲ್ಲಿಕಾರ್ಜುನ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ, ಬೇಡರ ಕಣ್ಣಪ್ಪ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶಿವಕೃಪಾ ಬಳಿ – ಸರ್ಪ ಶಪಥ 

ಶ್ರೀ ಸಿಗಂದೂರು ಮೇಳ == ಶ್ರೀಕೃಪಾ  ಹೆಮ್ಮಾಡಿ ಹರೇಗೋಡು 

ಶ್ರೀ ನೀಲಾವರ ಮೇಳ  == ತಡೆಕಲ್ಲು ಕೋಂಬೆ ಎಳ್ಳಂಪಳ್ಳಿ – ನೂತನ ಪ್ರಸಂಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ವನಚೇತನ – ಸಪ್ತಾಹ – ಸಂಪೂರ್ಣ ರಾಮಾಯಣ 

ಶ್ರೀ ಹಟ್ಟಿಯಂಗಡಿ ಮೇಳ == ಬೆಳ್ವೆ – ನೂತನ ಪ್ರಸಂಗ 

ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ ಪ್ರದಾನ

ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೇಯ ಸುಸಂದರ್ಭದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಕಟೀಲು ಮೇಳದಲ್ಲಿ 3 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳಿಗೆ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ’ ನೀಡಿ ಅನುಗ್ರಹಿಸಿದರು.

ಮೇ 11, 2022, ಬುಧವಾರ ಪಲಿಮಾರು ಮೂಲ ಮಠದಲ್ಲಿ ಜರಗಿದ ಜ್ಞಾನಸತ್ರದಲ್ಲಿ ಪೇಜಾವರ, ಅದಮಾರು, ಚಿತ್ರಾಪುರ ಹಾಗೂ ಪಲಿಮಾರು ಮಠದ ಕಿರಿಯ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹಿಸಿದರು. ಪ್ರಶಸ್ತಿಯು 50,000 ರೂಪಾಯಿ ನಗದು ಪುರಸ್ಕಾರವನ್ನೊಳಗೊಂಡಿದೆ.

ಕುರಿಯ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಭಾಗವತರಾಗಿ, ನಿರ್ದೇಶಕರಾಗಿ ನೀಡಿದ ವಿಶೇಷ ಕೊಡುಗೆಯನ್ನು ಪಲಿಮಾರು ಶ್ರೀಗಳು ಈ ಸಂದರ್ಭದಲ್ಲಿ ಸ್ಮರಿಸಿಕೊಂಡು, ಅವರಿಗೆ ಉತ್ತರೋತ್ತರ ಶ್ರೇಯಸ್ಸನ್ನು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಗಳು ಈ ಗೌರವ ಕುರಿಯ ಮನೆತನಕ್ಕೆ ಮುಖ್ಯವಾಗಿ ಕುರಿಯ ವಿಠಲ ಶಾಸ್ತ್ರಿಗಳಿಗೆ ಸಂದಿದೆ ಎಂದು ಧನ್ಯತೆಯಿಂದ ನುಡಿದರು.

ಇದೇ ಸಂದರ್ಭದಲ್ಲಿ ಮೈಸೂರಿನ ವಿದ್ವಾಂಸರಾದ ಡಾ. ಸಿ. ಎಚ್. ಶ್ರೀನಿವಾಸ ಮೂರ್ತಿ ಇವರಿಗೆ ಒಂದು ಲಕ್ಷ ರೂಪಾಯಿ ಮೊತ್ತಗಳನ್ನೊಳಗೊಂಡ ‘ಪರವಿದ್ಯಾಮಾನ್ಯ ಪ್ರಶಸ್ತಿ’ ನೀಡಿ ಶ್ರೀಪಾದರು ಗೌರವಿಸಿದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನಾ ಪತ್ರವನ್ನು ವಾಚಿಸಿದರು. ವಿದ್ವಾನ್ ಮೋಹನ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಇಂದು ಆಟ ಎಲ್ಲೆಲ್ಲಿ? (11-05-2022)

ಮೇಳಗಳ ಇಂದಿನ (11.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಮೇಲ್ ಕರ್ಜೆ ಶ್ರೇಯಸ್ ನಿಲಯದ ವಠಾರ, ಕರ್ಜೆ ಹೊಸೂರು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ == ಅವರಾಲು ಕಂಕಣಗುತ್ತು, ಅವರಾಲು ವಯಾ ಮೂಡಬಿದ್ರಿ 

ಕಟೀಲು ಎರಡನೇ ಮೇಳ == ಬೆಳ್ಳೂರು ದೇವಸ್ಯ ಶ್ರೀ ಕಾವೇಶ್ವರ ದೇವಸ್ಥಾನದ ಬಳಿ ಬಡಗಬೆಳ್ಳೂರು 

ಕಟೀಲು ಮೂರನೇ ಮೇಳ== ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ನಾಲ್ಕನೇ ಮೇಳ  == ಅನ್ನಪೂರ್ಣೇಶ್ವರೀ ಕೃಪಾ ಆಲಂಗಾರು ಪೆರ್ಡೂರು ಉಡುಪಿ 

ಕಟೀಲು ಐದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಆರನೇ ಮೇಳ == ಕುರಿಯಾಳ ಗುತ್ತು ಪಯ್ಯಡೆ ಹೌಸ್ ಬಂಟ್ವಾಳ 

ಮಂದಾರ್ತಿ ಒಂದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಎರಡನೇ ಮೇಳ   == ಮಹಾಲಕ್ಷ್ಮಿ ಕೃಪಾ ಬೇಳೂರುಮನೆ ಮಣೂರು ಪಡುಕರೆ – ಮಂದಾರ್ತಿ X ಅಮೃತೇಶ್ವರಿ ಮೇಳಗಳ ಕೂಡಾಟ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು – ಕಾಯಕಲ್ಪ 

ಶ್ರೀ ಪೆರ್ಡೂರು ಮೇಳ == ಮ್ಯಾಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರ – ಕೃಷ್ಣ ಕಾದಂಬಿನಿ

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹೆಗ್ಗದ್ದೆ ಕೆಳಾಮನೆ ಹೊಸೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಮೂಡುಬಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ ==  ಕೊಡ್ಚನಮಕ್ಕಿ ಆಜ್ರಿ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಬೇಳೂರರ ಮನೆ ಮಣೂರು ಪಡುಕರೆ – ಮಂದಾರ್ತಿ X ಅಮೃತೇಶ್ವರಿ ಮೇಳಗಳ ಕೂಡಾಟ

ಶ್ರೀ ಸೌಕೂರು ಮೇಳ == ಹುಂಚದಕಟ್ಟೆ ಲಕ್ಷ್ಮಿ ನಿಲಯ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಕೋಡಿಕೆರೆ 

ಶ್ರೀ ಮಡಾಮಕ್ಕಿ ಮೇಳ == ಮೇಗರವಳ್ಳಿ – ಮಹಾಶಕ್ತಿ ಮಂತ್ರದೇವತೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಶಿವಕೃಪಾ ವಠಾರ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಶ್ರೀ ಕ್ಷೇತ್ರ ಹಿರಿಯಡಕ –  ದೇವರ ಸೇವೆ ಆಟ 

ಶ್ರೀ ಶನೀಶ್ವರ ಮೇಳ == ಶ್ರೀ ಬೊಬ್ಬರ್ಯ ದೇವಸ್ಥಾನ ಹೊನ್ನಾರಿ ಗಿಳಿಯಾರು 

ಶ್ರೀ ಸಿಗಂದೂರು ಮೇಳ == ಐಸೂರು (ಉ.ಕ) ಶ್ರೀ ವೀರಭದ್ರ ಸ್ವಾಮಿ ಶ್ರೀ ಗೌರಿಶಂಕರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಪಾರ್ಥಿಬೆಟ್ಟು ಗೋಪಾಲಕೃಷ್ಣ ದೇವಸ್ಥಾನ ಚೇರ್ಕಾಡಿ – ಮಹಿಷಮರ್ದಿನಿ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ವನಚೇತನ – ಸಪ್ತಾಹ – ಸಂಪೂರ್ಣ ರಾಮಾಯಣ 

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ಸಂಪಿಗೆ ಜಟ್ಟಿಗೇಶ್ವರ ದೈವಸ್ಥಾನ ಮ್ಯಾಂಗನೀಸ್ ರೋಡ್ ಗಂಗೊಳ್ಳಿ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಸಂಪೆಕಟ್ಟೆ ಸರ್ಕಲ್ ಬಳಿ – ನೂತನ ಪ್ರಸಂಗ 

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 10.05.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ಶ್ರೀ ತಿರುಪತಿ ಕ್ಷೇತ್ರ ಮಹಾತ್ಮೆ 

ಕಟೀಲು ಎರಡನೇ ಮೇಳ == ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ== ಅವರಾಲು ಕುರಂಬಿಲ್ ಗುತ್ತು ಮನೆ ವಯಾ ಪಡುಬಿದ್ರಿ –  ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಮಾತಾನುಗ್ರಹ, ಎಳಗೋಳಿ ಶಿವಪುರ – ಮಾತಂಗ ಕನ್ಯೆ 

ಕಟೀಲು ಐದನೇ ಮೇಳ == ಶಿಮಂತೂರು ದೇವಸ್ಥಾನದ ವಠಾರ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಲಕ್ಷ್ಮಿ ಸ್ವಯಂವರ, ಭಕ್ತ ಮಾರ್ಕಂಡೇಯ, ಶ್ರೀನಿವಾಸ ಕಲ್ಯಾಣ 

ಉತ್ಖನನದಲ್ಲಿ ಹಳೆಯ ಕಬ್ಬಿಣದ ಉಪಕರಣಗಳು ಪತ್ತೆ: ತಮಿಳುನಾಡಿನ ಕಬ್ಬಿಣದ ಯುಗ 4200 ವರ್ಷಗಳಷ್ಟು ಹಳೆಯದು

ಮೈಲಾಡುಂಪರೈನಲ್ಲಿನ ಪುರಾತತ್ತ್ವ ಶಾಸ್ತ್ರದ ಉತ್ಖನನದಲ್ಲಿ ಕಬ್ಬಿಣದ ಕಲಾಕೃತಿಗಳ ಕಾಲವು ‘2172 BCE ನಿಂದ 1615 BCE ಎಂದು ಕಂಡುಬಂದಿದೆ ಎಂದು ಸಿಎಂ ಸ್ಟಾಲಿನ್ ತಮಿಳುನಾಡು ವಿಧಾನಸಭೆಗೆ ತಿಳಿಸಿದರು.

ತಮಿಳುನಾಡಿನ ಮೈಲಾಡುಂಪರೈ ಎಂಬ ಸಣ್ಣ ಕುಗ್ರಾಮದಲ್ಲಿ ಉತ್ಖನನದಿಂದ ಪತ್ತೆಯಾದ ಕಬ್ಬಿಣದ ಉಪಕರಣಗಳು ತಮಿಳುನಾಡಿನ ಕಬ್ಬಿಣಯುಗವು 4,200 ವರ್ಷಗಳ ಹಿಂದಿನದು ಎಂದು ಬಹಿರಂಗಪಡಿಸಿದೆ, ಇದು ಸದ್ಯಕ್ಕೆ ಭಾರತದಲ್ಲಿ ಅತ್ಯಂತ ಹಳೆಯದು.

ಹಿಂದೆ, ದಕ್ಷಿಣ ತಮಿಳುನಾಡಿನ ಆದಿಚನಲ್ಲೂರಿನ ಕಬ್ಬಿಣಯುಗದ ಸಮಾಧಿ ಸ್ಥಳವು ಕಬ್ಬಿಣದ ಉಪಕರಣಗಳ ಪ್ರಭಾವಶಾಲಿ ಸಂಗ್ರಹವನ್ನು ಬಹಿರಂಗಪಡಿಸಿದೆ, ಪ್ರಸ್ತುತ ಚೆನ್ನೈನ ಎಗ್ಮೋರ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿದೆ, ಇದು 1000 BCE ಮತ್ತು 600 BCE ನಡುವಿನ ದಿನಾಂಕವಾಗಿದೆ.

ಸೋಮವಾರ ತಮಿಳುನಾಡು ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಭಾರತದಲ್ಲಿನ ಸೈಟ್‌ಗಳ 28 ಆಕ್ಸಿಲರೇಟರ್ ಮಾಸ್ ಸ್ಪೆಕ್ಟ್ರೋಮೆಟ್ರಿ ಆಧಾರಿತ (AMS) ಡೇಟಿಂಗ್‌ನಲ್ಲಿ ಇದು ಅತ್ಯಂತ ಹಳೆಯದು ಎಂದು ಹೇಳಿದರು. 28 ಸೈಟ್‌ಗಳು ಕರ್ನಾಟಕ ಮತ್ತು ಉತ್ತರ ಪ್ರದೇಶದ ಸೈಟ್‌ಗಳನ್ನು ಒಳಗೊಂಡಿವೆ.

“ಆವಿಷ್ಕಾರಗಳ ಮೂಲಕ, 4200 ವರ್ಷಗಳ ಹಿಂದೆ ವಾಸಿಸುತ್ತಿದ್ದ ತಮಿಳರು ಕಬ್ಬಿಣದ ಬಗ್ಗೆ ತಿಳಿದಿದ್ದರು ಎಂದು ಕಂಡುಕೊಳ್ಳಲಾಗಿದೆ. ಮಾನವಕುಲವು ಕಬ್ಬಿಣದ ಬಳಕೆಯನ್ನು ಅರಿತುಕೊಂಡ ನಂತರವೇ ದಟ್ಟವಾದ ಕಾಡುಗಳನ್ನು ಫಲವತ್ತಾದ ಭೂಮಿಯಾಗಿ ಪರಿವರ್ತಿಸಲಾಯಿತು ಎಂದು ಸ್ಟಾಲಿನ್ ಹೇಳಿದರು.

ಈ ಸಂಶೋಧನೆಯು ತಮಿಳುನಾಡಿನಲ್ಲಿ ಕೃಷಿ ಚಟುವಟಿಕೆಯ ಆರಂಭಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ ಎಂದು ಅವರು ಹೇಳಿದರು.ಇತರ ಪ್ರಮುಖ ಆವಿಷ್ಕಾರಗಳ ಪೈಕಿ ತಮಿಳುನಾಡಿನಲ್ಲಿ ನವಶಿಲಾಯುಗದ ಕೊನೆಯ ಹಂತವು 2200 BCE ಗಿಂತ ಮೊದಲು ಪ್ರಾರಂಭವಾಗಿದೆ ಎಂದು ಗುರುತಿಸಲಾಗಿದೆ, ಇದು ದಿನಾಂಕದ ಮಟ್ಟಕ್ಕಿಂತ 25 ಸೆಂಟಿಮೀಟರ್ಗಳಷ್ಟು ಸಾಂಸ್ಕೃತಿಕ ನಿಕ್ಷೇಪವನ್ನು ಆಧರಿಸಿದೆ.

ಪುರಾತತ್ತ್ವ ಶಾಸ್ತ್ರಜ್ಞರು ಕಪ್ಪು ಮತ್ತು ಕೆಂಪು ಸಾಮಾನು ಕುಂಬಾರಿಕೆಗಳನ್ನು ನವಶಿಲಾಯುಗದ ಕೊನೆಯಲ್ಲಿ ಪರಿಚಯಿಸಲಾಯಿತು ಎಂದು ಕಂಡುಹಿಡಿದರು, ಬದಲಿಗೆ ಇದು ಕಬ್ಬಿಣದ ಯುಗದಲ್ಲಿ ಸಂಭವಿಸಿದೆ ಎಂಬ ವ್ಯಾಪಕ ನಂಬಿಕೆಯಾಗಿದೆ.ತಮಿಳುನಾಡು ರಾಜ್ಯ ಪುರಾತತ್ವ ಇಲಾಖೆ (TNSDA)ಯು ಮೈಲಾಡುಂಪರೈ ಕುಗ್ರಾಮವು ಭಾರತದಲ್ಲಿ “ಇದುವರೆಗೆ ಪತ್ತೆಯಾದ ಆರಂಭಿಕ ಕಬ್ಬಿಣಯುಗದ ತಾಣ” ಎಂದು ಹೇಳಿದೆ.

ಉತ್ತರ ಪ್ರದೇಶದ ವಾರಣಾಸಿ ಬಳಿಯ ಮಲ್ಹಾರ್ ಮತ್ತು ಉತ್ತರ ಕರ್ನಾಟಕದ ಬ್ರಹ್ಮಗಿರಿಯಂತಹ ಸ್ಥಳಗಳಲ್ಲಿ ಈ ಹಿಂದೆ ನಡೆಸಲಾದ ಉತ್ಖನನಗಳು ದಿನಾಂಕವನ್ನು ಸುಮಾರು ಎರಡನೇ ಸಹಸ್ರಮಾನ BCE ಗೆ ತಳ್ಳಿವೆ ಎಂದು ಮೂಲವು ಗಮನಿಸಿದೆ. “ತಮಿಳುನಾಡಿನ ಸೈಟ್ 4,200 ವರ್ಷಗಳ ಹಿಂದಿನದು ಎಂಬ ಅಂಶವು ಸಿಂಧೂ ಕಣಿವೆಯ ನಾಗರಿಕತೆಯೊಂದಿಗಿನ ಸಂಪರ್ಕವನ್ನು ಉತ್ತಮವಾಗಿ ಅಧ್ಯಯನ ಮಾಡಲು ನಮಗೆ ಅವಕಾಶವನ್ನು ನೀಡುತ್ತದೆ” ಎಂದು ಮೂಲಗಳು ತಿಳಿಸಿವೆ.

‘ಸಿಂಧೂ ಕಣಿವೆಯ ನಾಗರಿಕತೆಯೊಂದಿಗೆ ಅಧ್ಯಯನ ಮಾಡುವ ಸಾಮರ್ಥ್ಯ ಮೈಲಾಡುಂಪರೈ ಉತ್ಖನನವನ್ನು ಪ್ರದೇಶದ ಸಮಾಧಿ ಮತ್ತು ವಸತಿ ಪ್ರದೇಶಗಳಲ್ಲಿ ನಡೆಸಲಾಯಿತು ಮತ್ತು 104 ಮತ್ತು 130 ಸೆಂ.ಮೀ ಆಳದಲ್ಲಿ ಕಲ್ಲಿನ ವರ್ಣಚಿತ್ರಗಳು ಮತ್ತು ನವಶಿಲಾಯುಗದ ಕಲಾಕೃತಿಗಳನ್ನು ಬಹಿರಂಗಪಡಿಸಲಾಯಿತು, ಇದರಿಂದ ಎರಡು ಇದ್ದಿಲು ಮಾದರಿಗಳನ್ನು ಫ್ಲೋರಿಡಾದ ರೇಡಿಯೊಕಾರ್ಬನ್ ಡೇಟಿಂಗ್ ಲ್ಯಾಬ್‌ಗೆ ಕಳುಹಿಸಲಾಗಿದೆ.

ತಂಜಾವೂರು ಮೂಲದ ತಮಿಳು ವಿಶ್ವವಿದ್ಯಾನಿಲಯದೊಂದಿಗೆ ಸಂಬಂಧ ಹೊಂದಿದ್ದ ಪ್ರೊ. ಕೆ. ರಾಜನ್ ಅವರು 2003 ರಲ್ಲಿ ಈ ಸ್ಥಳವನ್ನು ಮೊದಲು ಉತ್ಖನನ ಮಾಡಿದರು TNSDA ತನ್ನ “ಭರವಸೆಯ ಫಲಿತಾಂಶಗಳ” ಆಧಾರದ ಮೇಲೆ 2021 ರಲ್ಲಿ ಉತ್ಖನನವನ್ನು ಪುನರಾರಂಭಿಸಲು ನಿರ್ಧರಿಸಿತು.

“ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮೈಲಾಡುಂಪರೈನಲ್ಲಿ 2021 ರಲ್ಲಿ ನಡೆಸಿದ ಉತ್ಖನನವು ಎರಡು ಪ್ರಮುಖ AMS ದಿನಾಂಕಗಳನ್ನು ನೀಡಿತು, ಇದು ಕಬ್ಬಿಣದ ಪರಿಚಯವನ್ನು ಅರ್ಥಮಾಡಿಕೊಳ್ಳಲು ಮತ್ತು ನವಶಿಲಾಯುಗದ ಕೊನೆಯ ಹಂತದಿಂದ ಆರಂಭಿಕ ಕಬ್ಬಿಣದ ಯುಗಕ್ಕೆ ಪರಿವರ್ತನೆಯನ್ನು ಅರ್ಥಮಾಡಿಕೊಳ್ಳಲು ಸುಳಿವು ನೀಡುತ್ತದೆ” ಎಂದು ಸೋಮವಾರ TNSDAಸಲ್ಲಿಸಿದ ವರದಿ ಬಹಿರಂಗಪಡಿಸಿದೆ.

ವಿದ್ಯುತ್ ವೈಫಲ್ಯ: ಉಜ್ಜಯಿನಿಯ ಸಹೋದರಿಯರ ಮದುವೆಯಲ್ಲಿ ವಧೂವರರು ಅದಲು ಬದಲು!

ಮಧ್ಯಪ್ರದೇಶದ ಅಸ್ಲಾನಾ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಡೆದ ಇಬ್ಬರು ಸಹೋದರಿಯರ ಮದುವೆಯಲ್ಲಿ ವಿದ್ಯುತ್ ಕಡಿತ ದೊಡ್ಡ ಗೊಂದಲ ಸೃಷ್ಟಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.

ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಲೋಡ್ ಶೆಡ್ಡಿಂಗ್ ಅಥವಾ ಅನಿಯಮಿತ ವಿದ್ಯುತ್ ಕಡಿತದ ಹಲವಾರು ಘಟನೆಗಳು ಸಾಮಾನ್ಯ ಜನರನ್ನು ತೊಂದರೆಗೀಡುಮಾಡಿವೆ. ಇತ್ತೀಚೆಗಷ್ಟೇ ಉಜ್ಜಯಿನಿಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ವರದಿಯಾಗಿದ್ದು, ವಿದ್ಯುತ್ ಕಡಿತದ ನಂತರ ಹಾರ ವಿನಿಮಯ ಮಾಡಿಕೊಂಡ ಹಾಗೂ ತಾಳಿ ಕಟ್ಟುವ ವೇಳೆಯಲ್ಲಿ ಅನಿರೀಕ್ಷಿತವಾಗಿ ವಧು-ವರರು ತಮ್ಮ ಮದುವೆ ಸಮಾರಂಭದಲ್ಲಿ ಕತ್ತಲೆಯಲ್ಲಿ ಪರಸ್ಪರ ಆಡಲು ಬದಲಾದರು. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಯಿತು.

ವಿದ್ಯುತ್ ವೈಫಲ್ಯದಿಂದ ಅಸ್ಲಾನಾ ಗ್ರಾಮದಲ್ಲಿ ವಧುಗಳ ವಿನಿಮಯ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಉಜ್ಜಯಿನಿಯ ಅಸ್ಲಾನಾ ಗ್ರಾಮದಲ್ಲಿ ಇಬ್ಬರು ಸಹೋದರಿಯರ ಮದುವೆಯಲ್ಲಿ ವಿದ್ಯುತ್ ಕಡಿತವು ಗೊಂದಲಕ್ಕೆ ಕಾರಣವಾಯಿತು.

ಇಬ್ಬರು ವಧುಗಳು ತಮ್ಮ ಮದುವೆಯ ಆಚರಣೆಯ ಸಮಯದಲ್ಲಿ ವಿದ್ಯುತ್ ವೈಫಲ್ಯದ ನಂತರ ಕತ್ತಲೆಯಲ್ಲಿ ಅದಲು ಬದಲಾದರು. ವಧುವಿನ ತಂದೆ ರಮೇಶ್ ಎಂಬುವರಿಂದ ಘಟನೆ ಬೆಳಕಿಗೆ ಬಂದಿದೆ.

ಎಎನ್‌ಐ ಜೊತೆ ಮಾತನಾಡಿದ ರಮೇಶ್, ತಮ್ಮ ಇಬ್ಬರು ಹೆಣ್ಣುಮಕ್ಕಳ ಮದುವೆ ಒಂದೇ ದಿನಾಂಕದಂದು ನಿಶ್ಚಯವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. ಮೇ 5 ರಂದು ನಡೆದ ವಿವಾಹದ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.

ಸಹ-ಪ್ರಾಸಂಗಿಕವಾಗಿ ಇಬ್ಬರೂ ವಧು-ವರರು ಒಂದೇ ರೀತಿಯ ಬಟ್ಟೆಗಳನ್ನು ಧರಿಸಿದ್ದರು, ಇದು ಗೊಂದಲಕ್ಕೆ ಕಾರಣವಾಯಿತು ‘ವಧು-ವರ’ ವಿನಿಮಯಕ್ಕೆ ಕಾರಣವಾಯಿತು.

ಆದಾಗ್ಯೂ, ಬೆಳಕಿಗೆ ಬಂದೊಡನೆಯೇ ತಪ್ಪನ್ನು ಸರಿಪಡಿಸಲಾಯಿತು ಮತ್ತು ಮೂಲತಃ ಯಾರೊಂದಿಗೆ ಸಂಬಂಧವನ್ನು ನಿಗದಿಪಡಿಸಲಾಗಿದೆಯೋ ಅದೇ ವರನ ವಧುವಿನೊಂದಿಗೆ ವಿವಾಹದ ವಿಧಿಗಳನ್ನು ಪುನಃ ನಡೆಸಲಾಯಿತು.

ಅದೃಷ್ಟವಶಾತ್ ಮದುವೆ ಅಂತಿಮವಾಗಿ ಸರಿಯಾದ ಹೊಂದಾಣಿಕೆಯೊಂದಿಗೆ ನಡೆಯಿತು. ಈ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ಇಂದು ಆಟ ಎಲ್ಲೆಲ್ಲಿ? (10-05-2022)

ಮೇಳಗಳ ಇಂದಿನ (10.05.2022) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕುರಿಯಾಳ ಪಯ್ಯಡೆ ಹೌಸ್ ವಠಾರ – ಪೌರಾಣಿಕ ಪ್ರಸಂಗ 

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ 

ಕಟೀಲು ಎರಡನೇ ಮೇಳ == ನೋಂಡ ಕಂಪೌಂಡ್ ನೆಲ್ಲಿಕಟ್ಟೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು 

ಕಟೀಲು ಮೂರನೇ ಮೇಳ== ಅವರಾಲು ಕುರಂಬಿಲ್ ಗುತ್ತು ಮನೆ ವಯಾ ಪಡುಬಿದ್ರಿ 

ಕಟೀಲು ನಾಲ್ಕನೇ ಮೇಳ  == ಮಾತಾನುಗ್ರಹ, ಎಳಗೋಳಿ ಶಿವಪುರ 

ಕಟೀಲು ಐದನೇ ಮೇಳ == ಶಿಮಂತೂರು ದೇವಸ್ಥಾನದ ವಠಾರ 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಮಂದಾರ್ತಿ ಒಂದನೇ ಮೇಳ  == ಕಬ್ಬೈಲು ಹೆಂಗವಳ್ಳಿ -ಕೂಡಾಟ 

ಮಂದಾರ್ತಿ ಎರಡನೇ ಮೇಳ   == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ಮೂರನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಮಂದಾರ್ತಿ ನಾಲ್ಕನೇ ಮೇಳ   == ಕಬ್ಬೈಲು ಹೆಂಗವಳ್ಳಿ -ಕೂಡಾಟ 

ಮಂದಾರ್ತಿ ಐದನೇ ಮೇಳ  == ಶ್ರೀ ಕ್ಷೇತ್ರದಲ್ಲಿ 

ಹನುಮಗಿರಿ ಮೇಳ == ಶರವು ಶ್ರೀ ಮಹಾಗಣಪತಿ ದೇವಸ್ಥಾನ ಮಂಗಳೂರು – ಕೃಷ್ಣಾರ್ಜುನ ಕಾಳಗ, ಶ್ರೀನಿವಾಸ ಕಲ್ಯಾಣ 

ಶ್ರೀ ಸಾಲಿಗ್ರಾಮ ಮೇಳ == ನಂದಿಗದ್ದೆ ಗುಂದ – ಚಂದ್ರಹಾಸ, ಚಂದ್ರಾವಳಿ, ಚಕ್ರವ್ಯೂಹ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕಟ್ಟೆಮನೆ ಬಿಜೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಪಾವಂಜೆ ಮೇಳ == ಆನಗೋಡು ಯಲ್ಲಾಪುರ ಕಂಕುಮನೆ – ಶ್ರೀ  ದೇವಿ ಮಹಾತ್ಮೆ 

ಶ್ರೀ ಕಮಲಶಿಲೆ ಮೇಳ == ಸಾಲಿಗ್ರಾಮ 

ಶ್ರೀ ಅಮೃತೇಶ್ವರೀ ಮೇಳ, ಕೋಟ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಸೌಕೂರು ಮೇಳ == ಕೊರವಡಿ ಮಲಸಾವರಿ ಮತ್ತು ಮಾಂಕಾಳಿ ಸಪರಿವಾರ ದೈವಸ್ಥಾನ – ನೂತನ ಪ್ರಸಂಗ 

ಶ್ರೀ ಬೆಂಕಿನಾಥೇಶ್ವರ ಮೇಳ ಕಳವಾರು  == ಪೆರ್ಮುದೆ ಶ್ರೀ ಶಾರದಾ ಯಕ್ಷಗಾನ ಮಂಡಳಿ ಸೋಮನಾಥಧಾಮ – ಶಿವಭಕ್ತ ಸಿರಿಯಾಳ 

ಶ್ರೀ ಮಡಾಮಕ್ಕಿ ಮೇಳ == ಕಡ್ತೂರು ಬ್ಯಾರಳಿ (ತೀರ್ಥಹಳ್ಳಿ) ಶ್ರೀ ವಾರಾಹಿ ಪಂಜುರ್ಲಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಕುಕ್ಕೆಹಳ್ಳಿ ದೇವಸ್ಥಾನಬೆಟ್ಟು ಶಿವಸನ್ನಿಧಿ – ಶ್ರೀ ಗೋಳಿಗರಡಿ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ == ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಹಂದಟ್ಟು 

ಶ್ರೀ ಸಿಗಂದೂರು ಮೇಳ == ಸಿದ್ಧಾಪುರ ಹೂವಿನಮನೆ (ಉ.ಕ)

ಶ್ರೀ ನೀಲಾವರ ಮೇಳ  == ಬ್ರಹ್ಮಾವರ ಕೃಷಿ ಕೇಂದ್ರ ರಿಕ್ಷಾ ನಿಲ್ದಾಣ ಬಳಿ – ಸ್ವಾಮಿ ವೀರ ಕಲ್ಲುಕುಟ್ಟಿಗ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  == ಹೆದ್ದೂರು ವನಚೇತನ – ಸಪ್ತಾಹ – ಸಂಪೂರ್ಣ ರಾಮಾಯಣ 

ಶ್ರೀ ಮೇಗರವಳ್ಳಿ ಮೇಳ ==  ಶ್ರೀ ಕ್ಷೇತ್ರದಲ್ಲಿ ದೇವರ ಸೇವೆ ಆಟ 

ಶ್ರೀ ಹಟ್ಟಿಯಂಗಡಿ ಮೇಳ == ‘ಶ್ರೀ ಕಟ್ಟೆಬೊಬ್ಬರ್ಯ ದೈವಸ್ಥಾನ ಮೊಗೇರಿ ನಾಯ್ಕನಕಟ್ಟೆ – ದೀಪ ದರ್ಪಣ 

ಶ್ರೀ ಹಾಲಾಡಿ ಮೇಳ == ಹಾಲಾಡಿ ಮರ್ಲುಚಿಕ್ಕು ದೇವಸ್ಥಾನ – ಮೇಘ ರಂಜಿನಿ 

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನ

ಸಿರಿಬಾಗಿಲು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಸ್ಥೆಯ ವತಿಯಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸಿರಿಬಾಗಿಲಿನಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ.

ಭವನವನ್ನು ಜೂನ್ ತಿಂಗಳಲ್ಲಿ ಅಧಿಕೃತವಾಗಿ ಲೋಕಾರ್ಪಣೆಗೈಯಲು ಸಿದ್ದತೆ ಆರಂಭಿಸಲಾಗಿದೆ. ಲೋಕಾರ್ಪಣೆ ಸಮಾರಂಭದ ಪೂರ್ವಬಾವಿಯಾಗಿ ವೈದಿಕ, ಧಾರ್ಮಿಕ ಕಾರ್ಯಕ್ರಮಗಳು ಇತ್ತೀಚೆಗೆ ವೇದಮೂರ್ತಿ ವಾಸುದೇವ ಅಡಿಗ ಕುಂಬಳೆಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಜರಗಿತು.

ಮಹೇಶ್ವರಿ ಮಹಿಳಾ ಭಜನಾ ಮಂಡಳಿ ಮತ್ತು ಮಹಾದೇವ ಭಜನಾ ಸಂಘ ಸಿರಿಬಾಗಿಲು ತಂಡದಿಂದ, ಭಜನಾ ಕಾರ್ಯಕ್ರಮ,  ನಡೆಯಿತು. ಬಳಿಕ ಜರಗಿದ ಭವನ ಪ್ರವೇಶ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಲುವಾಗಿ ತೆಂಕುತಿಟ್ಟಿನ ಹಿರಿಯ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಾಗೂ ಹಿರಿಯ ಭಾಗವತ ಪುತ್ತಿಗೆ ರಘರಾಮ ಹೊಳ್ಳರ ನೇತೃತ್ವದಲ್ಲಿ ಪೂರ್ವರಂಗ ಕುಣಿತ ಜರಗಿತು.  

ಎಸ್ ಎನ್ ಭಟ್, ಉಪಾಸನಾ, ಕಿಶನ್ ಭಾಗವಹಿಸಿದ್ದರು. ಬಳಿಕ ಕು|ಕೀರ್ತಿ ಮೀಯಪದವು ಅವರಿಂದ ಭರತನಾಟ್ಯ, ಸಾಂದ್ರಾ ಕಾವುಮಠ ಅವರಿಂದ ಶಾಸ್ತ್ರೀಯ ಸಂಗೀತ.  ರಾಜೇಶ್ವರಿ, ರಾಧಾಮಣಿ ಬಳಗದವರಿಂದ ಭಜನೆ, ಕಾರ್ಯಕ್ರಮ ಜರಗಿತು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರ್ವಹಿಸಿದರು.

ಮೇ ಆರರಂದು ಧರ್ಮಸ್ಥಳ ಮೇಳದವರಿಂದ ಧರ್ಮಸ್ಥಳ  ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರತಿಷ್ಠಾನದ ಸೇವಾರ್ಥ ಜರಗಿತು. ಈ ಸಮಯದಲ್ಲಿ ಆಗಮಿಸಿದ ಶ್ರೀ ಶ್ರೀ ಶ್ರೀ ಸಚ್ಚಿದಾಂದ ಭಾರತಿ ಸ್ವಾಮೀಜಿ ಎಡನೀರು ಮಠ, ಶ್ರೀಶ್ರೀ ಮೋಹನದಾಸ ಸ್ವಾಮೀಜಿ ಮಾಣಿಲ ಶ್ರೀಗಳು ಆಶೀರ್ವದಿಸಿದರು.

ಕಾಸರಗೋಡು ಶಾಸಕ ನೆಲ್ಲಿಕುನ್ನು, ಪಾರ್ತಿಸುಬ್ಬ ಯಕ್ಷಗಾನ ಕಲಾಕೇಂದ್ರದ  ಅಧ್ಯಕ್ಷ ಶಂಕರ ರೈ ಮಾಸ್ತರ್ ಶುಭ ಹಾರೈಸಿದರು. ಹಾಗೂ ಮೇ ಏಳರಂದು ರಾ‍ಧಾಕೃಷ್ಣ ಕಲ್ಚಾರ್ ಹಾಗೂ ಬಳಗದವರಿಂದ ಗಂಗಾವತರಣ ಯಕ್ಷಗಾನ ತಾಳಮದ್ದಳೆ ಜರಗಿತು.ಈ ಸಂದರ್ಭ ಹಿರಿಯರಾದ ರಮೇಶ ಮಂಜೇಶ್ವರ ಶುಭ ಹಾರೈಸಿದರು.ಸತೀಶ ಅಡಪ ಸಂಕಬೈಲು ಕಾರ್ಯಕ್ರಮ ನಿರ್ವಹಿಸಿದರು.

ಸ್ಥಳೀಯ ಹಲವಾರು ಸಂಘ ಸಂಸ್ಥೆಗಳ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ಊರ ಪರವೂರ ಕಲಾಪ್ರೇಮಿಗಳು ಕಣ್ತುಂಬಿಕೊಂಡರು. ಗಡಿನಾಡು ಕಾಸರಗೋಡಿನಲ್ಲಿ ಮುಂದಿನ ದಿನಗಳಲ್ಲಿ ಇದೊಂದು ಸಾಂಸ್ಕೃತಿಕ ಚಟುವಟಿಕೆಗೆ ಪ್ರಧಾನ ಕೇಂದ್ರವಾಗಲಿದೆ.

ಕಟೀಲು ಮೇಳಗಳ ಇಂದಿನ ಪ್ರಸಂಗಗಳು – 09.05.2022

ಕಟೀಲು ಒಂದನೇ ಮೇಳ == ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ತ್ರಿಪುರ ಮಥನ 

ಕಟೀಲು ಎರಡನೇ ಮೇಳ == ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮಿ ಸದನ – ದಶಾವತಾರ 

ಕಟೀಲು ಮೂರನೇ ಮೇಳ== ಕೊಲ್ಯ ಕುಲಾಲ ಭವನದ ಬಳಿ ಕೋಟೆಕಾರ್ ಸೋಮೇಶ್ವರ – ಶ್ರೀ ದೇವಿ ಮಹಾತ್ಮೆ 

ಕಟೀಲು ನಾಲ್ಕನೇ ಮೇಳ  == ಕೂರಿಯಾಳ ಗುತ್ತು ಪಯ್ಯಡೆ ಹೌಸ್ ಬಂಟ್ವಾಳ – ದಶಾವತಾರ 

ಕಟೀಲು ಐದನೇ ಮೇಳ == ಮೇಲೆಕ್ಕಾರು ಪದವು ವಯಾ ಪೆರ್ಮುದೆ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕಜೆ ಕೊಳಂಬೆ ಬಜಪೆ – ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ