ಪೆನ್ನಿ ಮೊರ್ಡಾಂಟ್ ಪ್ರಧಾನಮಂತ್ರಿ ರೇಸ್ನಿಂದ ಹೊರಗುಳಿದ ಕಾರಣ ರಿಷಿ ಸುನಕ್ ಇಂಗ್ಲೆಂಡಿನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಲಿದ್ದಾರೆ.
ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ಅವರು ಯುಕೆಯ ಮುಂದಿನ ಪ್ರಧಾನಿಯಾಗಲಿದ್ದಾರೆ. ಹಂಗಾಮಿ ಪ್ರಧಾನ ಮಂತ್ರಿ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ಅವರು ನಾಳೆ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಲಿದ್ದಾರೆ.
ಟ್ರಸ್ ತನ್ನ ರಾಜೀನಾಮೆಯನ್ನು ಔಪಚಾರಿಕವಾಗಿ ಸಲ್ಲಿಸುತ್ತಾರೆ. ಆರು ವರ್ಷಗಳಲ್ಲಿ ಸುನಕ್ ಯುಕೆ 5 ನೇ ಪ್ರಧಾನಿಯಾಗಿದ್ದಾರೆ. ಲಿಜ್ ಟ್ರಸ್ ಅವರು ಅಕ್ಟೋಬರ್ 20 ರಂದು ಬ್ರಿಟನ್ನ 56 ನೇ ಪ್ರಧಾನ ಮಂತ್ರಿಯಾಗಿ ತಮ್ಮ ರಾಜೀನಾಮೆಯನ್ನು ಘೋಷಿಸಿದರು,
ಇದು ಕನ್ಸರ್ವೇಟಿವ್ ಪಕ್ಷದ ಸದಸ್ಯರಿಗೆ ಸರ್ಕಾರವನ್ನು ಮುನ್ನಡೆಸುವ ಸವಾಲನ್ನು ತೆಗೆದುಕೊಳ್ಳಲು ಮತ್ತು ಮುಂಬರುವ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ದೂರವಿರಿಸಲು ಅವಕಾಶವನ್ನು ತೆರೆಯಿತು.
ಟ್ರಸ್ ಈಗ ಕೇವಲ 44 ದಿನಗಳ ಕಾಲ ಪ್ರಧಾನಿ ಕುರ್ಚಿಯಲ್ಲಿ ಕುಳಿತು ಅನಪೇಕ್ಷಿತ ದಾಖಲೆಯನ್ನು ಹೊಂದಿದ್ದಾರೆ.
ಪ್ರಧಾನ ಮಂತ್ರಿಯಾಗಿ ಕಡಿಮೆ ಅವಧಿಯ ದಾಖಲೆಯನ್ನು ಈ ಹಿಂದೆ ಜಾರ್ಜ್ ಕ್ಯಾನಿಂಗ್ ಹೊಂದಿದ್ದರು, ಅವರು ಆಗಸ್ಟ್ 8, 1827 ರಂದು ಸಾಯುವವರೆಗೆ 119 ದಿನಗಳವರೆಗೆ ಸೇವೆ ಸಲ್ಲಿಸಿದರು.
#CORRECTION | The visuals are from the Conservative Party Headquarters and not 10 Downing Street in London, as reported earlier. The UK PM-designate #RishiSunak arrived at the Conservative Party Headquarters. https://t.co/LccxMoO3bS
ಜನ್ಮದಾರಭ್ಯ ಬಂದಿರಬಹುದಾದ ಸಂಸ್ಕಾರ ,‘ಆಶು ಕವಿತ್ವ’ ಭಾಗವತಿಕೆಯಲ್ಲಿ ಅಸಂಖ್ಯ ಶಿಷ್ಯಂದಿರನ್ನು ತಯಾರಿಗೊಳಿಸಿದ ಒಂದು ವಿಶಿಷ್ಟ ಪ್ರತಿಭೆ ಪ್ರಸಂಗ ರಚನೆಯಲ್ಲಿ ವಿನೂತನವಾದ ಸಾಧನೆ, ರಂಗ ನಡೆಯ ಬಗ್ಗೆ ಸ್ಪಷ್ಟವಾದ ನಿಲುವು ಇವೆಲ್ಲವುಗಳು ಏಕತ್ರಗೊಂಡ ಓರ್ವ ಮಹನೀಯರ ಬಗ್ಗೆ ಈ ಲೇಖನದಲ್ಲಿ ಪ್ರಸ್ತುತಪಡಿಸಲು ಪ್ರಯತ್ನಿಸಲಾಗುತ್ತದೆ.
ಯಕ್ಷಗಾನ ರಂಗದಲ್ಲಿ ಅರ್ಥಗಾರಿಕೆ ಪ್ರಸಂಗ ರಚನೆ ಶಿಷ್ಯಂದಿರನ್ನು ಕಲಾವಿದರಾಗಿ ತಯಾರಿ ಇವುಗಳ ಮೂಲಕ ಭೂಮ ವ್ಯಕ್ತಿತ್ವವನ್ನು ಹೊಂದಿದ ಆಚಾರ್ಯ ಪುರುಷರು ಕೀರಿಕ್ಕಾಡು ಮಾಸ್ತರು ವಿಷ್ಣು ಭಟ್ ರವರು. ಇವರ ಸುಪುತ್ರರಾದ ಶ್ರೀಯುತ ವಿಶ್ವ ವಿನೋದ ಬನಾರಿಯವರು ಈ ಮೇಲಿನ ವಿಶೇಷಣಗಳಿಗೆ ಸೂಕ್ತವಾಗಿ ಹೊಂದಿಕೆಯಾಗುವ ಓರ್ವ ವಿಶಿಷ್ಟ ಸಾಧಕ. ಕೀರಿಕ್ಕಾಡು ಮಾಸ್ತರ್ ರವರ ಧರ್ಮಪತ್ನಿ ಶ್ರೀಮತಿ ಪರಮೇಶ್ವರಮ್ಮ. ಇವರ ಸುಪುತ್ರರಾಗಿ ಶ್ರೀ ಬನಾರಿಯವರು 1947ರಲ್ಲಿ ಜನ್ಮ ತಾಳುತ್ತಾರೆ.
ಬನಾರಿಯವರು ಶಾಲಾ ಹಂತದಲ್ಲಿರುವಾಗ ಯಕ್ಷಗಾನ ನಾಟಕ ಪಾತ್ರಧಾರಿ. ಇವರ ತಂದೆಯವರಿಗೆ ಇವರನ್ನು ಚಂಡೆ ಮದ್ಲೆಯಲ್ಲಿ ಪಳಗಿಸಬೇಕೆಂಬುದು ಆಶಯವಾಗಿತ್ತು .ಇದೇ ಸಂದರ್ಭದಲ್ಲಿ ಇವರ ಹಿರಿಯ ಅಣ್ಣ ಕೀರ್ತಿಶೇಷ ವನಮಾಲ ಕೇಶವಭಟ್ಟರು ನಡುಮನೆ ಜತ್ತಪ್ಪ ರೈಯವರಿಂದ ಯಕ್ಷಗಾನ ಭಾಗವತಿಕೆಯನ್ನು ಅಭ್ಯಾಸ ಮಾಡುತ್ತಿದ್ದರು. ವಿಶ್ವವಿನೋದರಿಗೆ ಚಂಡೆ ಮದ್ದಳೆಯ ನಾದಕಿಂತಲೂ ಭಾಗವತಿಕೆಯೇ ಆಪ್ಯಾಯಮಾನವಾಗಿ ಕಂಡುದು ವಿಶೇಷ.
ಆ ಸಂದರ್ಭದಲ್ಲಿ ಯಕ್ಷಗಾನದ ಸರ್ವಾಂಗಗಳನ್ನು ಬಲ್ಲ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ ಹಿಮ್ಮೇಳದ ತರಗತಿಗಳನ್ನು ನಡೆಸುತ್ತಿದ್ದರು. ಹಾಗಾಗಿ ಬನಾರಿಯವರು ಮಾಂಬಾಡಿಯವರಲ್ಲಿ ಭಾಗವತಿಗೆಯನ್ನು ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಮಾಂಬಾಡಿಯವರು ಇದನ್ನು ಪುರಸ್ಕರಿಸುತ್ತಾರೆ.
ಹಾಗಾಗಿ ಬನಾರಿಯವರಿಂದ ಭಾಗವತಿಗೆಯ ಅಭ್ಯಾಸ ಆರಂಭವಾಯಿತು ತಂದೆಯವರ ಸಕಾಲಿಕ ಮಾರ್ಗದರ್ಶನ ನಿರಂತರ ಅಭ್ಯಾಸ ಚಿಂತನೆ ಇದರ ಫಲರೂಪವಾಗಿ ಬನಾರಿಯವರ ಹಾಡುಗಾರಿಕೆ ಪಕ್ವಗೊಂಡುದರಲ್ಲಿ ಆಶ್ಚರ್ಯವಿಲ್ಲ ಬನಾರಿ ಕಲಾಮಂದಿರದಲ್ಲಿ ನಿರಂತರ ಯಕ್ಷಗಾನ ಕಾರ್ಯಕ್ರಮಗಳು ಬನಾರಿಯವರ ಸಕ್ರಿಯ ಪಾತ್ರ ಜೊತೆಗೆ ಪರವೂರ ಕಾರ್ಯಕ್ರಮಗಳಲ್ಲೂ ಭಾಗಿ. ಮಂಗಳೂರು ಆಕಾಶವಾಣಿಯಲ್ಲಿ ಯಕ್ಷಗಾನವನ್ನು ಪ್ರಸ್ತುತಪಡಿಸಿದರು. ಒಂದರ್ಥದಲ್ಲಿ ಯಕ್ಷಗಾನ ಭಾಗವತಿಕೆಯಲ್ಲಿ ಸಾಧನೆಯ ಸೋಪಾನಗಳನ್ನು ಏರಿದರು ಎನ್ನಬಹುದು.
ಈ ಸಂದರ್ಭದಲ್ಲಿ ಜೀವನದಲ್ಲಿ ಘಟಿಸಿದ ಒಂದು ಅಪಘಾತದಿಂದ ಭಾಗವತಿಯಲ್ಲಿ ಸ್ವರ ಸಂಚಾರಕ್ಕೆ ಪೂರ್ಣವಲ್ಲದಿದ್ದರೂ ಭಾಗಶಃ ತೊಂದರೆ ಉಂಟಾಯಿತು. ಹಾಗಾಗಿ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಭಾಗವತಿಕೆ. ಈ ಸನ್ನಿವೇಶದಲ್ಲಿ ಪ್ರಸಂಗ ಸಾಹಿತ್ಯದ ರಚನೆ ಕಡೆಗೆ ಬನಾರಿಯವರು ಮನಸ್ಸು ಮಾಡುತ್ತಾರೆ “ಶ್ರೀ ಶಬರಿಮಲೆ ಅಯ್ಯಪ್ಪ” ಎನ್ನುವ ಕೃತಿಯ ಪ್ರದರ್ಶನ ರಂಗದಲ್ಲಿ ಮೊದಲೇ ಆಗುತ್ತಿದ್ದರೂ ಇಡೀ ರಾತ್ರಿಯ ಪ್ರದರ್ಶನಕ್ಕೆ ಸಾಕಾಗುವ ಪದ್ಯಗಳು ಇಲ್ಲದೆ ಇರುವ ಕೊರತೆ ಬಾಧಿಸುತ್ತಿತ್ತು.
ಹಾಗಾಗಿ ಈ ಪ್ರಸಂಗಕ್ಕೆ ಅಗತ್ಯವಾದಂತಹ ಪದ್ಯಗಳನ್ನು ಬನಾರಿಯವರು ಹೊಸೆಯುತ್ತಾರೆ ಇದಕ್ಕೆ ಮೊದಲೇ ‘ಸೌಭಾಗ್ಯ ವಿಜಯ’ ಎನ್ನುವ ಕಾಲ್ಪನಿಕ ಕಥಾಧಾರಿತ ಪ್ರಸಂಗವನ್ನು ಇವರು ಬರೆದಿದ್ದು ಆದಿ ಸುಬ್ರಹ್ಮಣ್ಯ ಮೇಳದವರಿಂದ ಸಾಕಷ್ಟು ಪ್ರದರ್ಶನ ಕೂಡ ಆಗಿದೆ ಸುಳ್ಯ ಸೀಮೆಯ ಪುರಾಣ ಪ್ರಸಿದ್ಧ ಕ್ಷೇತ್ರವಾದ ತೊಡಿಕಾನದ ಚರಿತ್ರೆ ಆಧರಿಸಿದ “ ತೊಡಿಕಾನ ಕ್ಷೇತ್ರ ಮಹಾತ್ಮೆ“ ಇವರ ಲೇಖನಿಯಿಂದ ಹೊಮ್ಮಿದ ಮತ್ತೊಂದು ಕಲಾ ಕುಸುಮ.
ಹವ್ಯಕ ಮಾತೃಭಾಷೆಯನ್ನು ಹೊಂದಿರುವ ಇವರು ತಮ್ಮ ಭಾಷೆಯಲ್ಲಿ ದಕ್ಷಾದ್ವರ ಎನ್ನುವ ಪ್ರಸಂಗವನ್ನು ಬರೆದಿದ್ದು ಬಹುಶಃ ಅದು ಈ ಭಾಷೆಯ ಪ್ರಥಮ ಪ್ರಕಟಿತ ಕೃತಿ (ಪ್ರಕಟಣೆ 1991) ‘ಮಾಗಧ ವಧೆ ‘ ಎನ್ನುವ ಮತ್ತೊಂದು ಹವ್ಯಕ ಭಾಷೆ ಕೃತಿ ಕೂಡ ಇವರ ಲೇಖನಿಯಿಂದ ಹೊರ ಹೊಮ್ಮಿದೆ. ಮೇಲೆ ಉಲ್ಲೇಖಿಸಿದ ಪ್ರಸಂಗಗಳು ಮಾತ್ರವಲ್ಲದೆ ದೂರದರ್ಶನಕ್ಕಾಗಿ ಇವರು ‘ಉಳ್ಳಾಲದ ರಾಣಿ ಅಬ್ಬಕ್ಕ’ ಮತ್ತು ‘ಕೆಳದಿ ಚೆನ್ನಮ್ಮ’ ಎಂಬ ಪ್ರಸಂಗಗಳನ್ನು ಬರೆದಿದ್ದು ಇವು ದೂರದರ್ಶನದಲ್ಲಿ ಪ್ರಸಾರಗೊಂಡಿವೆ ಇನ್ನೂ ಹಲವಾರು ಆಶು ಕವಿತ್ವವನ್ನು ಕಲಾಮಂದಿರದಲ್ಲಿ ನಡೆಯುವ ಯಕ್ಷ ಕಾರ್ಯಕ್ರಮಗಳಲ್ಲಿ ಅವರು ಪ್ರಸ್ತುತಪಡಿಸಿದ್ದಾರೆ.
ಅನುಭವಿ ಭಾಗವತರಾದ ಬನಾರಿಯವರು ತಾನು ಕಲಿತ ವಿದ್ಯೆಯನ್ನು ಅಸಂಖ್ಯ ಶಿಷ್ಯಂದಿರಿಗೆ ಕಲಿಸಿಕೊಡುವುದರ ಮೂಲಕ ಮಾದರಿ ವ್ಯಕ್ತಿತ್ವವನ್ನು ಹೊಂದಿದ್ದಾರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಎಂದರೆ ಶಿಷ್ಯಂದಿರಿಂದ ಯಾವುದೇ ಫಲಾ ಪೇಕ್ಷೆಯನ್ನು ಬಯಸದೆ ಅವರಿಗೆ ಕಲಿಸಿ ಕೊಟ್ಟಿದ್ದಾರೆ. ಉಮಾ ಪರಮೇಶ್ವರಿಯವರನ್ನು ಬಾಳ ಸಂಗಾತಿಯಾಗಿ ಪಡೆದ ಬನಾರಿಯರದು 3 ಹೆಣ್ಣು ಮತ್ತು ಒಂದು ಗಂಡು ಮಗುವಿನ ಸಂತೃಪ್ತ ಸಂಸಾರಿ.
ದೇಲಂಪಾಡಿ ಪರಿಸರದಲ್ಲಿ ಖ್ಯಾತರಾದ ವೈದ್ಯರು ಆಗಿರುವ ಇವರು ಈ ಆಸುಪಾಸಿನ ಜನರ ನೋವು ನಲಿವಿಗೆ ಸ್ಪಂದಿಸುವ ಸಹೃದಯಿ ಶ್ರೀಯುತ ವಿಶ್ವ ವಿನೋದ ಬನಾರಿಯವರಿಗೆ ಈಗ 75 ರ ಹರೆಯ ಅಸಾಮಾನ್ಯ ಸಾಧಕರಾದ ಶ್ರೀಯುತ ಬನಾರಿಯವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವ ಒಂದು ಸದವಕಾಶ ಒದಗಿ ಬಂದಿರುತ್ತದೆ.
ಈಗಾಗಲೇ ಬನಾರಿಯಲ್ಲಿ ಅಭಿನಂದನಾ ಸಮಿತಿಯೊಂದನ್ನು ರಚಿಸಲಾಗಿದೆ. ಇದರ ಆಶ್ರಯದಲ್ಲಿ ಮುಂದಿನ ನವೆಂಬರ್ 13ರಂದು ಬೆಳಗ್ಗೆನಿಂದ ತೊಡಗಿ ರಾತ್ರಿಯವರೆಗೆ ವಿವಿಧ ಯಕ್ಷಗಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಮೂಡಿ ಬರಲಿವೆ.
ಯಕ್ಷಗಾನಪ್ರಿಯರಿಗೆ ಯಕ್ಷಗಾನ ಆಸ್ವಾದಿಸಲು ಒಂದು ಸುವರ್ಣಾವಕಾಶದ ಸಂದರ್ಭ ಇದೀಗ ಒದಗಿಬಂದಿದೆ.
ಸೂರಂಬೈಲಿನ (ಕುಂಬಳೆ-ಬದಿಯಡ್ಕ ರಸ್ತೆ) ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ 28ನೇ ವಾರ್ಷಿಕ ದೀಪೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಮಂದಿರದ ವಠಾರದಲ್ಲಿರುವ ರಂಗ ಮಂಟಪದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾಗವಹಿಸುವಿಕೆಯಲ್ಲಿ ‘ಸಂಪೂರ್ಣ ಕುರುಕ್ಷೇತ್ರ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ದಿನಾಂಕ 19.11.2022ನೇ ಶನಿವಾರ ರಾತ್ರಿ 10 ಘಂಟೆಗೆ ಆರಂಭವಾಗಲಿರುವ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ.
ವೀರ ವಿರಾಟ್ ಕೊಹ್ಲಿಗಾಗಿ ಭಾವನಾತ್ಮಕ ಟಿಪ್ಪಣಿ ಬರೆದ ಅನುಷ್ಕಾ ಶರ್ಮಾ – “ದೀಪಾವಳಿ ಮುನ್ನಾದಿನದಂದು ನೀವು ತುಂಬಾ ಸಂತೋಷವನ್ನು ತಂದಿದ್ದೀರಿ”
ಭಾರತ ತಂಡದ ವಿರಾಟ್ ಕೊಹ್ಲಿ ಎಮ್ಸಿಜಿಯಲ್ಲಿ ನಡೆದ ಟಿ20 ವಿಶ್ವಕಪ್ನ ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಲು ಭಾರತಕ್ಕೆ ಸಹಾಯ ಮಾಡಿದರು.
ನಟ ಅನುಷ್ಕಾ ಶರ್ಮಾ ತನ್ನ ಪತಿಯ ವೀರಾವೇಶದ ನಂತರ ಹೃದಯಸ್ಪರ್ಶಿ ಟಿಪ್ಪಣಿಯನ್ನು ಬರೆದಿದ್ದಾರೆ. ಕೊಹ್ಲಿ ಅಮೋಘ ಆಟವಾಡಿದ್ದು, ಪಾಕಿಸ್ತಾನ ವಿರುದ್ಧ 82 ರನ್ ಗಳಿಸಿ ಭಾರತವನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು.
ದೀಪಾವಳಿಯ ಮುನ್ನಾದಿನದಂದು ವಿರಾಟ್ ಕೊಹ್ಲಿ ಭಾರತೀಯ ಜನರ ಜೀವನದಲ್ಲಿ ತುಂಬಾ ಸಂತೋಷವನ್ನು ತಂದರು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ, ಆಟದ ನಂತರ, ಇನ್ಸ್ಟಾಗ್ರಾಮ್ ನಲ್ಲಿ ಸಂದೇಶವನ್ನು ಬರೆದಿದ್ದಾರೆ.
ಮತ್ತು ಪಾಕಿಸ್ತಾನದ ವಿರುದ್ಧ ವೀರೋಚಿತ ಆಟವಾಡುವ ಮೂಲಕ ಟೀಕಾಕಾರರನ್ನು ಮೌನಗೊಳಿಸಿದ ತಮ್ಮ ಪತಿಗೆ ಸಣ್ಣ, ಹೃದಯಸ್ಪರ್ಶಿ ಸಂದೇಶವನ್ನು ಬರೆದಿದ್ದಾರೆ.
ದೀಪಾವಳಿಯ ಮುನ್ನಾದಿನದಂದು ಸರಯೂ ನದಿಯ ದಡದಲ್ಲಿ 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಅಯೋಧ್ಯೆ ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ಸ್ಥಾನ ಗಳಿಸಿದೆ.
ಆರು ವರ್ಷಗಳ ಹಿಂದೆ ಪ್ರಾರಂಭವಾದ ಅಯೋಧ್ಯೆಯ ದೀಪೋತ್ಸವವು ದೀಪಾವಳಿಯ ಮುನ್ನಾದಿನದಂದು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಸರಯೂ ನದಿಯ ದಡದಲ್ಲಿ 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ.
20,000 ಕ್ಕೂ ಹೆಚ್ಚು ಸ್ವಯಂಸೇವಕರು 15,76,000 ದೀಪಗಳನ್ನು ಬೆಳಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಪಟ್ಟಣದ ಪ್ರಮುಖ ಸಂದಿ ಹಾಗೂ ಸ್ಥಳಗಳಲ್ಲಿಯೂ ದೀಪಗಳನ್ನು ಹಾಕಲಾಗಿತ್ತು. ಐದು ಅನಿಮೇಟೆಡ್ ಟ್ಯಾಬ್ಲಾಕ್ಸ್ ಮತ್ತು 11 ರಾಮ್ಲೀಲಾ ಟೇಬಲ್ಲಾಕ್ಸ್ ದೀಪೋತ್ಸವದಲ್ಲಿ ವಿವಿಧ ರಾಜ್ಯಗಳ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದವು.
ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಭಗವಾನ್ ರಾಮ ಯಾರನ್ನೂ ಬಿಡುವುದಿಲ್ಲ, ಯಾರಿಂದಲೂ ದೂರ ಸರಿಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ್ ಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು. ಆಗಸ್ಟ್ 5, 2020 ರಂದು ರಾಮ ಮಂದಿರ ನಿರ್ಮಾಣಕ್ಕಾಗಿ “ಭೂಮಿ ಪೂಜೆ” ನಂತರ ಅಯೋಧ್ಯೆಗೆ ಮೋದಿಯವರ ಮೊದಲ ಭೇಟಿ ಇದಾಗಿದೆ.
ಪ್ರಧಾನಿಯವರು ಅಯೋಧ್ಯೆಯಲ್ಲಿ ಸಾಂಕೇತಿಕ ಭಗವಾನ್ ರಾಮನ ರಾಜ್ಯಾಭಿಷೇಕವನ್ನೂ ಮಾಡಿದರು. “ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿರುವ ಸಮಯದಲ್ಲಿ ಈ ದೀಪಾವಳಿ ಬಂದಿದೆ. ಭಗವಾನ್ ರಾಮನ ‘ಸಂಕಲ್ಪ ಶಕ್ತಿ’ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.
Ram Janmbhoomi all set to witness grand 'Deepotsav' setting new records
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಆರು ವರ್ಷಗಳ ಹಿಂದೆ ದೀಪೋತ್ಸವ ಮೊದಲ ಬಾರಿಗೆ ಪ್ರಾರಂಭವಾದಾಗ ಮಾರ್ಗದರ್ಶನ ಮತ್ತು ಸ್ಫೂರ್ತಿಗಾಗಿ ಪ್ರಧಾನಿ ಮೋದಿಯವರಿಗೆ ಮನ್ನಣೆ ನೀಡಿದ್ದಾರೆ. ಯುಪಿಯ ಈ ಹಬ್ಬ ದೇಶದ ಹಬ್ಬವಾಯಿತು ಎಂದರು.
ಪುತ್ತೂರು: ಪುತ್ತೂರಿನ ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಹಾಗೂ ಅವರ ಪ್ರತಿನಿಧಿಗಳ ಬಳಗದಿಂದ ಪುತ್ತೂರು ಹಾಗೂ ಕಡಬ ತಾಲೂಕಿನ ನಿವೃತ್ತ ಶಿಕ್ಷಕರಿಗೆ ‘ಗುರುವಂದನಾ ಕಾರ್ಯಕ್ರಮ’ ನಗರದ ಸೈನಿಕ ಭವನದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ. ನಾರಾಯಣ ಭಟ್ ರಾಮಕುಂಜ ಮಾತನಾಡಿ ಸೈನಿಕರು ದೇಶ ರಕ್ಷಿಸುವವರಾದರೆ ಶಿಕ್ಷಕರು ರಾಷ್ಟ್ರ ಕಟ್ಟುವವರು ಎಂದರಲ್ಲದೆ ಜೀವ ವಿಮಾ ನಿಗಮ ಬದುಕಿಗೆ ಭದ್ರತೆ ಒದಗಿಸುವ ಕಾರ್ಯ ಮಾಡುತ್ತದೆ. ನಾವು ತೊಡಗಿಸಿದ ಹಣ ನಮಗೂ ಸುಭದ್ರತೆ ನೀಡುವುದರೊಂದಿಗೆ ದೇಶದ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೂ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಜೀವವಿಮಾ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಅವರು ಮಾತನಾಡಿ ಉತ್ತಮ ಸಮಾಜಕ್ಕೆ ಕಾರಣರಾದ ನಿವೃತ್ತ ಶಿಕ್ಷಕರನ್ನು ಗೌರವಿಸುವುದು ಪುಣ್ಯಕಾರ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರದ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಪ್ರಬಂಧಕ ಬಾಲಕೃಷ್ಣ ಡಿ. ಮಾತನಾಡಿ ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಕರ ಸಮೂಹ ಎಲ್.ಐ.ಸಿ ಸಂಸ್ಥೆಯೊ0ದಿಗೆ ನಿಕಟ ಸಂಪರ್ಕ ಹೊಂದಿದೆ. ಎಲ್.ಐ.ಸಿ ಎಂಬುದು ಸಮಾಜಕ್ಕೆ ಆರ್ಥಿಕ ಭದ್ರತೆ ನೀಡುವ ಸಂಸ್ಥೆ. ಸದಾ ಉತ್ತಮ ಸೇವೆಯೊಂದಿಗೆ ಜೀವವಿಮಾ ಪ್ರತಿನಿಧಿಗಳು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಶುಭಕೋರಿದರು. ಈ ಸಂದರ್ಭದಲ್ಲಿ ಭಾರತೀಯ ಜೀವ ವಿಮಾ ನಿಗಮದ ಉಪಪ್ರಬಂಧಕ ಗುರುರಾಜ್ ಎಂ.ಯು. ಭಾರತೀಯ ಜೀವ ವಿಮಾ ನಿಗಮದಲ್ಲಿ ಹೂಡಿಕೆ ಹಾಗೂ ಉಳಿತಾಯ ಯೋಜನೆಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 35 ಮಂದಿ ವಿಶ್ರಾಂತ ಶಿಕ್ಷಕರಿಗೆ “ಗುರುವಂದನೆ” ಸಲ್ಲಿಸಲಾಯಿತು.
ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕರಲ್ಲಿ ಒಬ್ಬರಾದ ಉಪ್ಪಿನಂಗಡಿ ಮಾದರಿ ಶಾಲೆಯ ಪದವೀಧರೇತರ ಮುಖ್ಯ ಶಿಕ್ಷಕಿ ದೇವಕಿ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಪುತ್ತೂರು ಹಾಗೂ ಕಡಬ ತಾಲೂಕಿನ ನಿವೃತ್ತ ಶಿಕ್ಷಕರುಗಳಾದ ಕಮಲಾ ಕೆಎಸ್, ಶಾಂತಕುಮಾರಿ ಎನ್, ದೇವಕಿ ಯಂ, ಬಾಲಚಂದ್ರ, ಲಕ್ಷ್ಮಣ ನಾಯ್ಕ , ಲೂಸಿ ಕೆ, ತೀರ್ಥೇಶ್ ಪಿ, ಮನೋರಮ ಕೆ, ಶೀನಪ್ಪ ನಾಯ್ಕ, ಪುಷ್ಪಾವತಿ ಯಂ, ಸುಲೋಚನಾ, ಮೊಂತಿ ಮೇರಿ ರಾಡ್ರಿಗಸ್, ಹುಕ್ರಪ್ಪ ನಾಯ್ಕ, ಗೀತಾಮಣಿ ಎಸ್, ಉದಯಕುಮಾರ್, ಶ್ರೀಧರ ಬೋಳಿಲ್ಲಾಯ, ಐಡಾ ಡಿಸೋಜ, ಕಸ್ತೂರಿ ಬಿ, ಶಶಿಕಲಾ ಕೆ., ನಿರ್ಮಲಾ ಬಿ.ಕೆ, ರಿಚರ್ಡ್ ವೇಗಸ್ˌ ದಯಾನಂದ ರೈˌ ಉದಯಕುಮಾರ್ ಎಸ್., ಶಂಕರನಾರಾಯಣ, ದೇವಕಿˌ ವಿಶ್ವೇಶ್ವರ ಭಟ್, ಲಕ್ಷ್ಮಿ, ವಸಂತಿ, ಸುಲೋಚನಾ ಕೆ, ಜಾನಕಿ ಎಂ, ಪುಷ್ಪಕುಮಾರಿ, ತಾಬ್ರ, ಲಿಲ್ಲಿ ಡಿ’ಸೋಜˌ ರುಕ್ಮಿಣಿ ಡಿ., ಜೂಲಿಯಾನ ಸಿ ಗೋವಿಯಸ್ ಹಾಗೂ ಮೇರಿ ಕೆ ಎಂ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಜೀವವಿಮಾ ಪ್ರತಿನಿಧಿ ನಾರಾಯಣ ಗೌಡ ಸ್ವಾಗತಿಸಿದರು. ಪ್ರತಿನಿಧಿ ಆನಂದ ಗೌಡˌ ರಾಮಕುಂಜ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಪ್ರಸ್ತುತ ಜೀವವಿಮಾ ಪ್ರತಿನಿಧಿ ಯಶೋದಾ ಕೆ.ಎಸ್. ಮತ್ತು ಪ್ರತಿನಿಧಿ ಶುಕಲತಾರವರು ಕಾರ್ಯಕ್ರಮ ನಿರ್ವಹಿಸಿದರು.
ಪ್ರತಿನಿಧಿಗಳಾದ ವಿದ್ಯಾˌ ಪ್ರೇಮಾˌ ರಾಘವೇಂದ್ರˌ ಸುಬ್ರಹ್ಮಣ್ಯ ಭಟ್, ವಿಷ್ಣುಭಟ್, ವಸಂತಗೌಡ, ಪ್ರಶಾಂತ ಭಂಡಾರಿ, ಪ್ರಸಾದ್ ಬಿ, ಸಂಧ್ಯಾ ಬಿ, ಅನುಷಾ ಹಾಗೂ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ಬಳಗದ ಪ್ರತಿನಿಧಿ ಮಿತ್ರರು ಸಹಕರಿಸಿದರು.
ಉಡುಪಿ : ಹೆಗ್ಗುಂಜೆ ಗ್ರಾಮದ ಯಕ್ಷಗಾನ ಮದ್ದಲೆವಾದಕ ನೀರ್ಜೆಡ್ಡು ವಿಜಯ ನಾಯ್ಕ್ (ಮಡಾಮಕ್ಕಿ ಮೇಳ)ಇವರಿಗೆ ಮಣಿಪಾಲದ ಡಾ. ಸತೀಶ್ಕಾಮತ್ ಮತ್ತು ಶೀಲಾ ಕಾಮತ್ ಕುಟುಂಬಿಕರು, ಉಡುಪಿಯ ಗುರುಸ್ಮೃತಿ ಟ್ರಸ್ಟ್ ಹಾಗೂ ಗೋಕುಲ್ ಕಾಮತ್ ಇವರ ಪ್ರಾಯೋಜಕತ್ವದಲ್ಲಿ ನಿರ್ಮಿಸಿಕೊಟ್ಟ ನೂತನ ಮನೆ ‘ಕುಸುಮ್ ವಿಹಾರ್’ ಇದರ ಉದ್ಘಾಟನೆಯನ್ನು ಕಾಸರಗೋಡಿನ ಶ್ರೀ ಎನ್. ರಾಮದಾಸ್ ಕಾಮತ್ (ನಿವೃತ್ತ ಮುಖ್ಯ ಶಿಕ್ಷಕರು) ಇವರು ದಿನಾಂಕ 22-10-2022ರಂದು ನೆರವೇರಿಸಿದರು.
ಗುರುಸ್ಮೃತಿ ಟ್ರಸ್ಟ್ ವರಿಷ್ಠರಾದ ಡಾ.ದೀಪಕ್ ಪ್ರಭು ಮಾತನಾಡಿ ತಮ್ಮ ಮಾವ, ಶತಾಯುಷಿ ಶ್ರೀ ಎನ್. ರಾಮದಾಸ್ ಕಾಮತ್ರ ಗೌರವಾರ್ಥ ಅರ್ಹಕ ಲಾವಿದನಿಗೆ ಮನೆ ನಿರ್ಮಿಸಲು ಅವಕಾಶ ಕಲ್ಪಿಸಿದ ಸಂಸ್ಥೆಯನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು.
ದೈಹಿಕ ಅನನುಕೂಲತೆಯ ನಡುವೆಯೂ ಶ್ರದ್ಧೆಯಿಂದ ತನ್ನ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕುರಿತು ಪಿ.ಕಿಶನ್ ಹೆಗ್ಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಭ್ಯಾಗತರಾಗಿ ಅಜಿತ್ ಕಾಮತ್, ಡಾ. ನಮಿತ ಪ್ರಭು, ಶೇಡಿಕೋಡ್ಲು ವಿಠಲ ಶೆಟ್ಟಿ, ಬಿ. ಸೀತಾರಾಮ ಶೆಟ್ಟಿ, ಪಂಚಾಯತ್ ಸದಸ್ಯ ಸುಕುಮಾರ ಶೆಟ್ಟಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರುಗಳಾದ ಎಸ್.ವಿ. ಭಟ್,ವಿ.ಜಿ. ಶೆಟ್ಟಿ, ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಭುವನಪ್ರಸಾದ್ ಹೆಗ್ಡೆ, ಬಿ.ಸಂತೋಷ್ಕುಮಾರ್ ಶೆಟ್ಟಿ, ವಿಜಯ್ಕುಮಾರ್ ಮುದ್ರಾಡಿ, ಎಸ್. ಗಣರಾಜ ಭಟ್, ಹೆಚ್.ಎನ್ ಶೃಂಗೇಶ್ವರ, ಎ. ನಟರಾಜ ಉಪಾಧ್ಯ, ಅನಂತರಾಜ ಉಪಾಧ್ಯ, ಅಶೋಕ್.ಎಂ,ರಾಜೀವಿ, ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.
ವಿಜಯ ನಾಯ್ಕರಿಗೆ ಎಲ್ಲ ರೀತಿಯಲ್ಲಿ ಸಹಕರಿಸುತ್ತಿರುವ ಮಡಾಮಕ್ಕಿ ಮೇಳದ ಭಾಗವತ ಬಸವರಾಜ ಇವರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್ ಸ್ವಾಗತಿಸಿದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಧನ್ಯವಾದ ಸಲ್ಲಿಸಿದರು.
ಇದು ಸಂಸ್ಥೆ ದಾನಿಗಳ ನೆರವಿನಿಂದ ಈವರೆಗೆ ನಿರ್ಮಿಸಿಕೊಟ್ಟ 34ನೇಯ ಮನೆಯಾಗಿದ್ದು, ಕಲಾವಿದರಿಗೆ ನಿರ್ಮಿಸಿದ 6ನೇಯ ಮನೆಯಾಗಿದೆ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಈ ತಿಂಗಳು ಫಲದಾಯಕವಾಗಿರುತ್ತದೆ. ನಿಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳನ್ನು ಹೊಂದಿರುವಿರಿ, ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ ಮತ್ತು ತೀರ್ಥಯಾತ್ರೆಗೆ ಹೋಗಬಹುದು. ನೀವು ಧೈರ್ಯ ಮತ್ತು ಶಕ್ತಿಯಿಂದ ತುಂಬಿರುವುದರಿಂದ ಈ ತಿಂಗಳು ನಿಮ್ಮ ಅಪಾಯವನ್ನು ತೆಗೆದುಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತದೆ. ನಿಮ್ಮ ದೈಹಿಕ ಸಾಮರ್ಥ್ಯಗಳನ್ನು ಅತಿಯಾಗಿ ಅಂದಾಜು ಮಾಡುವುದನ್ನು ನೀವು ತಪ್ಪಿಸಬೇಕು.
ಸಿಂಹ ರಾಶಿಯವರಿಗೆ ವೃತ್ತಿಜೀವನದ ದೃಷ್ಟಿಯಿಂದ ನವೆಂಬರ್ ಅನುಕೂಲಕರ ತಿಂಗಳು ಆಗಿರುತ್ತದೆ, ನೀವು ಕೆಲಸದ ಮೇಲೆ ಕೇಂದ್ರೀಕರಿಸುತ್ತೀರಿ ಮತ್ತು ನಿಮ್ಮ ಕಠಿಣ ಪ್ರಯತ್ನಗಳ ಮೂಲಕ ನೀವು ಉತ್ತಮವಾಗಿ ಕಾರ್ಯನಿರ್ವಹಿಸುತ್ತೀರಿ. ನಿಮ್ಮ ಉತ್ತಮ ನಡವಳಿಕೆಯಿಂದಾಗಿ, ನಿಮ್ಮ ಸಹೋದ್ಯೋಗಿಗಳು ನಿಮ್ಮನ್ನು ಬೆಂಬಲಿಸುತ್ತಾರೆ ಮತ್ತು ನಿಮ್ಮ ವೃತ್ತಿಜೀವನದಲ್ಲಿ ನೀವು ಉತ್ತಮ ಸ್ಥಾನವನ್ನು ಪಡೆಯುತ್ತೀರಿ.
ನಿಮಗೆ ಕೆಲವು ಸವಾಲುಗಳನ್ನು ಉಂಟುಮಾಡಬಹುದು. ಕೆಲಸದ ಸ್ಥಳದಲ್ಲಿ ಅನಗತ್ಯ ವರ್ಗಾವಣೆಗಳು ಇದ್ದಕ್ಕಿದ್ದಂತೆ ಸಂಭವಿಸಬಹುದು. ಆದ್ದರಿಂದ, ನೀವು ಜಾಗರೂಕರಾಗಿರಬೇಕು ಮತ್ತು ಕೆಲಸದ ಸ್ಥಳದಲ್ಲಿ ಯಾರೊಂದಿಗೂ ಅತಿಯಾಗಿ ಮಾತನಾಡಬಾರದು, ಅಥವಾ ಯಾರಾದರೂ ಅದರ ಲಾಭವನ್ನು ಪಡೆದುಕೊಳ್ಳಬಹುದು ಮತ್ತು ನಿಮ್ಮನ್ನು ನೋಯಿಸಬಹುದು. ನೀವು ಈ ಸಣ್ಣ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ ನಿಮ್ಮ ಕಾರ್ಯಕ್ಷಮತೆ ಕೆಲಸದಲ್ಲಿ ಇನ್ನಷ್ಟು ಉತ್ತಮವಾಗಿರುತ್ತದೆ. ನಾಲ್ಕನೇ ಮನೆಯಲ್ಲಿ ಶುಕ್ರ ಮತ್ತು ಬುಧದ ನಿರ್ಗಮನದ ನಂತರ, ನಿಮಗೆ ದೊಡ್ಡ ಹುದ್ದೆಯನ್ನು ನಿಯೋಜಿಸಬಹುದು.
ದೀರ್ಘಾವಧಿಯ ಯೋಜನೆಗಳನ್ನು ಮಾಡಿ ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಸಿದ್ಧರಾಗಿ, ಇದು ದೀರ್ಘಾವಧಿಯಲ್ಲಿ ನಿಮಗೆ ಪ್ರಯೋಜನವನ್ನು ನೀಡುತ್ತದೆ. ವ್ಯಾಪಾರ-ಸಂಬಂಧಿತ ಹೂಡಿಕೆಗಳಿಂದ ನೀವು ಲಾಭ ಪಡೆಯಬಹುದು ಮತ್ತು ನಿಮ್ಮ ವ್ಯಾಪಾರವನ್ನು ವಿಸ್ತರಿಸಬಹುದು. ನಿಮ್ಮ ವ್ಯಾಪಾರವು ನಿಧಾನವಾಗಿ ಆದರೆ ಬಲವಾಗಿ ಬೆಳೆಯುತ್ತದೆ ಮತ್ತು ನಿಮ್ಮ ಉತ್ಪನ್ನಗಳಿಗೆ ಬೇಡಿಕೆಯು ಮಾರುಕಟ್ಟೆಯಲ್ಲಿ ಹೆಚ್ಚಾಗಬಹುದು. ಕಾನೂನುಬದ್ಧವಾಗಿ ತಪ್ಪಾದ ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ನೀವು ತಪ್ಪಿಸಬೇಕು, ಇಲ್ಲದಿದ್ದರೆ, ನೀವು ಅದರ ಭಾರವನ್ನು ಹೊರಬೇಕಾಗಬಹುದು.
ನಿಮ್ಮ ಆದಾಯವು ಸರಾಗವಾಗಿ ಮುಂದುವರಿಯುತ್ತದೆ. ನೀವು ಹಠಾತ್ ಮತ್ತು ಅಸ್ತವ್ಯಸ್ತವಾಗಿರುವ ಖರ್ಚುಗಳನ್ನು ಎದುರಿಸುತ್ತೀರಿ, ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಒತ್ತಡಕ್ಕೆ ಸಿಲುಕಿಸುತ್ತದೆ ಮತ್ತು ನಿಮಗೆ ಪ್ರಮುಖ ಖರ್ಚುಗಳನ್ನು ಮಾಡಲು ನಿಮ್ಮ ಉಳಿತಾಯದಿಂದ ಸ್ವಲ್ಪ ಹಣವನ್ನು ಹಿಂಪಡೆಯಲು ನೀವು ಒತ್ತಡವನ್ನು ಅನುಭವಿಸಬಹುದು. ಆದರೆ ಪರಿಸ್ಥಿತಿ ಸ್ವಲ್ಪ ಪ್ರತಿಕೂಲವಾಗಿದ್ದರೆ ತಾಳ್ಮೆ ಕಳೆದುಕೊಳ್ಳಬೇಡಿ. ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ನೀವು ಈ ತಿಂಗಳು ಬಜೆಟ್ ಅನ್ನು ಹೊಂದಿಸಬೇಕು.
ನಿಮ್ಮ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಸಹ ಕೊನೆಗೊಳ್ಳುತ್ತವೆ. ಕೆಲವರಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ದೀರ್ಘಕಾಲದ ದೈಹಿಕ ಕಾಯಿಲೆಯನ್ನು ಹೊಂದಿರಬಹುದು, ಅದಕ್ಕಾಗಿ ನೀವು ಮುಂಚಿತವಾಗಿ ಎಚ್ಚರವಾಗಿರಬೇಕು ಮತ್ತು ನಿಮ್ಮ ಜೀವನವನ್ನು ಶಿಸ್ತು ಮತ್ತು ಕ್ರಮಬದ್ಧಗೊಳಿಸಲು ಪ್ರಯತ್ನಿಸಬೇಕು. ನಿಮಗೆ ಸಮಸ್ಯೆ ಇದೆ ಎಂದು ನೀವು ಭಾವಿಸಿದರೆ, ನಿಮ್ಮ ವೈದ್ಯಕೀಯ ಪರೀಕ್ಷೆಯನ್ನು ಮಾಡಿ ಇದರಿಂದ ಸಮಸ್ಯೆಯ ಪ್ರದೇಶವನ್ನು ಗುರುತಿಸಬಹುದು ಮತ್ತು ಸಮಯಕ್ಕೆ ಚಿಕಿತ್ಸೆ ನೀಡಬಹುದು.
ಪ್ರೇಮ ಸಂಬಂಧಗಳಲ್ಲಿ ಏರಿಳಿತಗಳು ಮತ್ತು ಒತ್ತಡದ ಸಾಧ್ಯತೆಗಳಿವೆ. ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಸಾಮರಸ್ಯದ ಕೊರತೆ ಇರುತ್ತದೆ ಮತ್ತು ತಪ್ಪು ತಿಳುವಳಿಕೆಯಿಂದಾಗಿ ನಿಮ್ಮಿಬ್ಬರ ನಡುವೆ ಕೋಪ ಮತ್ತು ಕಿರಿಕಿರಿಯು ಹೆಚ್ಚಾಗಬಹುದು. ಈ ಸಮಯದಲ್ಲಿ ನಿಮ್ಮ ಸಂಬಂಧವು ಸಮಸ್ಯೆಗಳಿಂದ ಸುತ್ತುವರಿದಿರಬಹುದು. ಸಂಬಂಧದಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಬಹುದು.
ಆದ್ದರಿಂದ, ಈ ಸಮಯದಲ್ಲಿ ನಿಮ್ಮ ಸಂಬಂಧವನ್ನು ಸುರಕ್ಷಿತವಾಗಿರಿಸಲು ನೀವು ಪ್ರಯತ್ನಿಸಬೇಕು ಮತ್ತು ಘರ್ಷಣೆಗೆ ಕಾರಣವಾಗುವ ಯಾವುದೇ ಪರಿಸ್ಥಿತಿಯನ್ನು ತಪ್ಪಿಸಬೇಕು. ನೀವು ಹಾಗೆ ಮಾಡಿದರೆ ನಿಮ್ಮ ಸಂಬಂಧವನ್ನು ನೀವು ಯಶಸ್ವಿಯಾಗಿ ಉಳಿಸುತ್ತೀರಿ. ವೈವಾಹಿಕ ಜೀವನವು ಈ ತಿಂಗಳು ಒತ್ತಡದಿಂದ ಕೂಡಿರುತ್ತದೆ.
ನಿಮ್ಮ ಸಂಬಂಧಿಕರು ನಿಮ್ಮ ಬಗ್ಗೆ ಸಹಾನುಭೂತಿ ಹೊಂದುವಂತೆ ಮಾಡುತ್ತದೆ ಮತ್ತು ನಿಮ್ಮ ಸಂಬಂಧದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ, ಇದು ನಿಮ್ಮ ವೈವಾಹಿಕ ಜೀವನವನ್ನು ಉತ್ತಮಗೊಳಿಸುತ್ತದೆ. ನೀವಿಬ್ಬರೂ ಕೌಟುಂಬಿಕ ಚಟುವಟಿಕೆಗಳಲ್ಲಿ ಮುಳುಗಿರುತ್ತೀರಿ ಮತ್ತು ಸ್ವಲ್ಪ ಸಮಯದವರೆಗೆ ನಿಮ್ಮ ಸಮಸ್ಯೆಗಳಿಂದ ವಿಚಲಿತರಾಗುತ್ತೀರಿ. ಇದು ನಿಮ್ಮ ವೈವಾಹಿಕ ಜೀವನವನ್ನು ಮತ್ತೆ ಉತ್ತಮಗೊಳಿಸುತ್ತದೆ.
ಕುಟುಂಬದ ಸದಸ್ಯರು ಸೌಜನ್ಯದಿಂದ ಮಾತನಾಡುತ್ತಾರೆ, ಪರಸ್ಪರ ಸಂಬಂಧವನ್ನು ತೋರಿಸುತ್ತಾರೆ ಮತ್ತು ಕುಟುಂಬದ ಹಿತಾಸಕ್ತಿಯಲ್ಲಿ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ. ಈ ಅವಧಿಯಲ್ಲಿ ಕುಟುಂಬದ ಒಟ್ಟು ಆಂತರಿಕ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.
(ವಿ. ಸೂ.: ಮೇಲಿನ ಫಲಾಫಲಗಳು ಮೇಷ ರಾಶಿಚಕ್ರದ ಆಧಾರದ ಮೇಲೆ ಹೇಳಲಾದ ಭವಿಷ್ಯ. ನಿಖರ ವೈಯುಕ್ತಿಕ ಭವಿಷ್ಯವನ್ನು ತಿಳಿಯಲು ಉತ್ತಮ ಜ್ಯೋತಿಷಿಗಳನ್ನು ಮುಖತಃ ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ)
ಕರ್ಕಾಟಕ ರಾಶಿ: ಈ ರಾಶಿಯವರಿಗೆ ನವೆಂಬರ್ ಮಿಶ್ರ ಫಲಿತಾಂಶಗಳನ್ನು ತರುತ್ತದೆ. ರಾಹು ಮತ್ತು ಕೇತುಗಳ ಪ್ರಭಾವವು ಕೆಲಸದ ಸ್ಥಳದಲ್ಲಿ ತೊಂದರೆ ಉಂಟುಮಾಡಬಹುದು, ಆದ್ದರಿಂದ ನೀವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ನೀವು ವಿದೇಶಕ್ಕೆ ಹೋಗುವ ಉತ್ತಮ ಅವಕಾಶಗಳಿವೆ, ಆದರೆ ನಿಮಗೆ ಹೆಚ್ಚಿನ ವೆಚ್ಚಗಳು ಸಹ ಇರುತ್ತವೆ.
ಆದರೆ ನಿಮ್ಮ ಆದಾಯದಲ್ಲಿ ಯಾವುದೇ ಕೊರತೆ ಇರುವುದಿಲ್ಲವಾದ್ದರಿಂದ ನೀವು ಚಿಂತಿಸಬೇಕಾಗಿಲ್ಲ. ನೀವು ಈ ತಿಂಗಳು ಸಮೃದ್ಧವಾಗಿ ಗಳಿಸುತ್ತೀರಿ ಮತ್ತು ಖರ್ಚು ಮಾಡುತ್ತೀರಿ ಮತ್ತು ನಿಮ್ಮ ಜೀವನವನ್ನು ಆನಂದಿಸುತ್ತೀರಿ. ಕುಟುಂಬ ಜೀವನವು ಒತ್ತಡದಿಂದ ಕೂಡಿರಬಹುದು, ಆದರೆ ಅದೃಷ್ಟವು ಪ್ರತಿ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ.
ಕರ್ಕಾಟಕ ರಾಶಿಯವರು ಈ ತಿಂಗಳು ವೃತ್ತಿಯಲ್ಲಿ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ತೊಂದರೆಗೆ ಕಾರಣವಾಗಬಹುದು. ನೀವು ಕಚೇರಿಯಲ್ಲಿ ಯಾರೊಂದಿಗಾದರೂ ಜಗಳವಾಡುವ ಸಾಧ್ಯತೆಗಳಿವೆ. ಈ ಕಾರಣದಿಂದಾಗಿ, ನೀವು ಕೆಲಸದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅಥವಾ ಸಮಸ್ಯೆಯ ಕಾರಣ ನೀವು ಮನೆಗೆ ಹಿಂತಿರುಗಬಹುದು. ಈ ಪರಿಸ್ಥಿತಿಯನ್ನು ತಪ್ಪಿಸಲು ಪ್ರಯತ್ನಿಸಿ ಏಕೆಂದರೆ ಮತ್ತೆ ಕೆಲಸ ಸಿಗುವುದು ವಿಳಂಬವಾಗುತ್ತದೆ ಇದರಿಂದ ಮಾನಸಿಕವಾಗಿ ತೊಂದರೆಯಾಗುತ್ತದೆ.
ನಿಮ್ಮನ್ನು ಶಾಂತವಾಗಿ ಮತ್ತು ಸಂಯೋಜಿತವಾಗಿರಲು ಪ್ರಯತ್ನಿಸಿ ಮತ್ತು ಕೆಲಸದಲ್ಲಿ ತೊಂದರೆಗೆ ಸಿಲುಕುವುದನ್ನು ತಪ್ಪಿಸಿ. ನಿಮ್ಮ ಹಿರಿಯರು ನಿಮ್ಮ ಪರವಾಗಿರುತ್ತಾರೆ ಮತ್ತು ಅವರು ನಿಮ್ಮನ್ನು ಬೆಂಬಲಿಸುತ್ತಾರೆ, ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಮತ್ತು ನೀವು ಈಗಾಗಲೇ ಕೆಲಸದ ಹುಡುಕಾಟದಲ್ಲಿದ್ದರೆ ಈ ಸಮಯದಲ್ಲಿ ನಿಮ್ಮ ಹುಡುಕಾಟವು ಕೊನೆಗೊಳ್ಳುತ್ತದೆ.
ಪ್ರಾಮಾಣಿಕವಾಗಿರುವುದು ಒಳ್ಳೆಯದು, ಆದರೆ ಕೆಲವೊಮ್ಮೆ ನಿಮ್ಮ ಪ್ರಾಮಾಣಿಕತೆಯಲ್ಲಿನ ಕಹಿಯು ನಿಮಗೆ ಪ್ರತಿಕೂಲವಾಗಬಹುದು. ನೀವು ಅದರ ಬಗ್ಗೆ ಕಾಳಜಿ ವಹಿಸಿದರೆ ನೀವು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನಿಮ್ಮ ಆದಾಯವು ಹೆಚ್ಚಾಗುತ್ತದೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ನೀವು ಆನಂದಿಸುತ್ತೀರಿ. ನಿರಂತರ ಖರ್ಚು ಇರುತ್ತದೆ, ಆದರೆ ನಿಮ್ಮ ಆದಾಯ ಮತ್ತು ವೆಚ್ಚಗಳ ನಡುವೆ ಉತ್ತಮ ಸಮತೋಲನವೂ ಇರುತ್ತದೆ. ನಿಮ್ಮ ಗಳಿಕೆಯ ಉತ್ತಮ ಮೊತ್ತವನ್ನು ಖರ್ಚು ಮಾಡುವ ಮೂಲಕ ನಿಮ್ಮ ಸಂಪತ್ತಿನ ಲಾಭವನ್ನು ನೀವು ಪಡೆಯುವಿರಿ. ಭವಿಷ್ಯದಲ್ಲಿ ನಿಮಗೆ ಅಗತ್ಯವಿರುವಂತೆ ಸ್ವಲ್ಪ ಹಣವನ್ನು ಉಳಿಸಲು ನಿಮಗೆ ಸಲಹೆ ನೀಡಲಾಗುತ್ತದೆ.
ಕರ್ಕಾಟಕ ರಾಶಿಯವರು ಈ ತಿಂಗಳು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಗ್ರಹಗಳ ಪ್ರಭಾವವು ಆರೋಗ್ಯಕ್ಕೆ ಪ್ರತಿಕೂಲ ಫಲಿತಾಂಶಗಳನ್ನು ತರುತ್ತದೆ ಮತ್ತು ನೀವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮೊದಲ ಮನೆಯಲ್ಲಿ ಗುರುವಿನ ಅಂಶವು ಈ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಮತ್ತು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಂಗಾತಿಯಲ್ಲಿ ವಾದಗಳು ಹೆಚ್ಚಾಗಬಹುದು. ಅದರ ನಂತರ ಬುಧ ಮತ್ತು ಶುಕ್ರನ ಪ್ರಭಾವದಿಂದಾಗಿ, ನಿಮ್ಮ ಸಂಬಂಧವು ಸುಧಾರಿಸುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಪ್ರೀತಿಯಲ್ಲಿ ಕಾಣುತ್ತೀರಿ. ನಿಮ್ಮ ಪ್ರೀತಿಯ ಜೀವನವು ಆಕರ್ಷಕವಾಗಿ ಮುಂದುವರಿಯುತ್ತದೆ. ನಿಮ್ಮ ಭಾವನೆಗಳನ್ನು ಪರಸ್ಪರರ ಮುಂದೆ ವ್ಯಕ್ತಪಡಿಸುವಿರಿ, ಮತ್ತು ಸಂಬಂಧದಲ್ಲಿ ಪ್ರಣಯ ಇರುತ್ತದೆ. ನೀವು ಪ್ರವಾಸಕ್ಕೆ ಹೋಗಬಹುದು. ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ನೀವು ಎಲ್ಲವನ್ನೂ ಆನಂದಿಸುವಿರಿ.
ಸಂಬಂಧದಲ್ಲಿ ಕೆಲವು ತೊಂದರೆಗಳು ಕಂಡುಬರುತ್ತವೆ, ಆದರೆ ನೀವು ಅವುಗಳನ್ನು ನಿಮ್ಮ ಬುದ್ಧಿವಂತಿಕೆಯಿಂದ ಪರಿಹರಿಸುತ್ತೀರಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಮಾತನಾಡುತ್ತೀರಿ. ಒತ್ತಡದ ಕೌಟುಂಬಿಕ ವಾತಾವರಣವು ಒತ್ತಡದ ವೈವಾಹಿಕ ಜೀವನಕ್ಕೆ ಕಾರಣವಾಗಬಹುದು. ನಿಮ್ಮ ಜೀವನ ಸಂಗಾತಿಯು ಆರೋಗ್ಯ ಸಮಸ್ಯೆಯಿಂದ ಬಳಲಬಹುದು ಅದು ಕುಟುಂಬದ ವಾತಾವರಣವನ್ನು ಅಡ್ಡಿಪಡಿಸಬಹುದು.
ಸಂಗಾತಿಯ ನಡುವೆ ಬಹಳ ಸಮಯದಿಂದ ಘರ್ಷಣೆ ನಡೆಯುತ್ತಿದ್ದರೆ ಅದು ವಿಚ್ಛೇದನದ ಬಗ್ಗೆ ಸಂಭಾಷಣೆಯಲ್ಲಿ ಕೊನೆಗೊಳ್ಳಬಹುದು. ಗುರುಗ್ರಹದ ಅಂಶವು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಈ ಪರಿಸ್ಥಿತಿಯಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ. ನೀವು ನಿಮ್ಮ ಜೀವನ ಸಂಗಾತಿಗೆ ಹತ್ತಿರವಾಗುತ್ತೀರಿ. ಆದ್ದರಿಂದ, ನಿಮ್ಮ ಸಂಬಂಧವನ್ನು ಬಲಪಡಿಸಲು ಈ ತಿಂಗಳು ನಿಮ್ಮ ಸಂಗಾತಿಯೊಂದಿಗೆ ಯಾವುದೇ ಜಗಳ ಅಥವಾ ಘರ್ಷಣೆಯನ್ನು ತಪ್ಪಿಸಿ.
ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಗಳು ಈ ತಿಂಗಳು ನಿಮಗೆ ಸಂತೋಷವನ್ನು ನೀಡುತ್ತವೆ. ಕರ್ಕಾಟಕ ರಾಶಿಯವರ ಕುಟುಂಬ ಜೀವನವು ಉತ್ತಮವಾಗಿರುತ್ತದೆ, ನಿಮ್ಮ ಬಹಳಷ್ಟು ಹಣವನ್ನು ಕುಟುಂಬ ಚಟುವಟಿಕೆಗಳಿಗೆ ಖರ್ಚು ಮಾಡಲಾಗುವುದು. ಅದು ಮನೆಯಲ್ಲಿ ಕೆಲವು ಸಂಘರ್ಷಗಳಿಗೆ ಕಾರಣವಾಗಬಹುದು. ತಿಂಗಳ ಉತ್ತರಾರ್ಧದಲ್ಲಿ ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯುತ್ತೀರಿ ಮತ್ತು ಕುಟುಂಬದ ವಾತಾವರಣವು ಮತ್ತೆ ಉತ್ತಮವಾಗಿರುತ್ತದೆ.
(ವಿ. ಸೂ.: ಮೇಲಿನ ಫಲಾಫಲಗಳು ಮೇಷ ರಾಶಿಚಕ್ರದ ಆಧಾರದ ಮೇಲೆ ಹೇಳಲಾದ ಭವಿಷ್ಯ. ನಿಖರ ವೈಯುಕ್ತಿಕ ಭವಿಷ್ಯವನ್ನು ತಿಳಿಯಲು ಉತ್ತಮ ಜ್ಯೋತಿಷಿಗಳನ್ನು ಮುಖತಃ ಭೇಟಿಯಾಗಿ ಸಲಹೆ ಪಡೆಯುವುದು ಉತ್ತಮ)
ಛತ್ತರ್ಪುರ: ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯ ಪುರಸಭೆಯ ಕಾರ್ಯಕರ್ತರೊಬ್ಬರು ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡುತ್ತಿದ್ದ ಜಾನಪದ ನೃತ್ಯಗಾರ್ತಿಯನ್ನು ವೇದಿಕೆಯ ಮೇಲೆ ಅನುಚಿತವಾಗಿ ಸ್ಪರ್ಶಿಸಿದ ಘಟನೆ ನಡೆದಿದೆ.
ಈ ಅಸಭ್ಯ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ನಂತರ, ನೃತ್ಯ ಮಾಡುತ್ತಿದ್ದ ಹುಡುಗಿ ಅವರ ದುರ್ವರ್ತನೆಯನ್ನು ಆಕ್ಷೇಪಿಸಿ ಛತ್ತರ್ಪುರ ಪುರಸಭೆಗೆ ದೂರು ಸಲ್ಲಿಸಿದರು.
ದೂರಿನ ಮೇರೆಗೆ ನಗರಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡು ಆರೋಪಿ ಮುಖೇಶ್ ಶ್ರೀನಿವಾಸ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದಾರೆ. ಈ ಸಂಬಂಧ ನಗರಪಾಲಿಕೆ ಸಿಎಂಒ ಓಂಪಾಲ್ ಸಿಂಗ್ ಭಡೋರಿಯಾ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 18 ರಂದು ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ವಾರ್ಷಿಕ ಜಲ ವಿಹಾರ ಜಾತ್ರೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ. “ನಗರಸಭೆಯ ಸಿಬ್ಬಂದಿ ಮುಖೇಶ್ ಶ್ರೀನಿವಾಸ್ ವೇದಿಕೆಯಲ್ಲೇ ಜಾನಪದ ನರ್ತಕಿಯೊಂದಿಗೆ ಅಸಹಜ ರೀತಿಯಿಂದ ನಡೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನರ್ತಕಿ ತನ್ನ ಹೇಳಿಕೆಯಲ್ಲಿ ಸಂಸ್ಥೆಯ ಘನತೆಗೆ ಕಳಂಕ ತಂದ ಈ ಘಟನೆಯನ್ನು ವಿರೋಧಿಸಿದ್ದಾಳೆ. ಆರೋಪಿ ಸಿಬ್ಬಂದಿ. ಪ್ರಾಧಿಕಾರದ ತನಿಖೆಯ ನಂತರ ತಪ್ಪಿತಸ್ಥರೆಂದು ಕಂಡುಬಂದಿದೆ, ”ಎಂದು ಸಿಎಂಒ ಆದೇಶದಲ್ಲಿ ತಿಳಿಸಲಾಗಿದೆ.
“ಮುಕೇಶ್ ಅವರು ವೇದಿಕೆಯಲ್ಲಿ ಕಾನೂನುಬಾಹಿರವಾಗಿ ಹಾಜರಿದ್ದು, ನರ್ತಕಿಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಶಿಕ್ಷಾರ್ಹ ಅಪರಾಧವಾಗಿದೆ. ಮುಕೇಶ್ ಅವರ ಸೇವೆಯನ್ನು ತಕ್ಷಣದಿಂದಲೇ ವಜಾಗೊಳಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.