ಕಳೆದ ಒಂದು ತಿಂಗಳಿನಲ್ಲಿ 13 ಹಸುಗಳನ್ನು ಕೊಂದು ತಿಂದ ನಂತರ ಕೊನೆಗೂ ಹುಲಿಯನ್ನು ಹಿಡಿದ ಅರಣ್ಯಾಧಿಕಾರಿಗಳು
ಕಳೆದ ಒಂದು ತಿಂಗಳಿನಲ್ಲಿ 13 ಹಸುಗಳನ್ನು ಕೊಂದು ತಿಂದ ನಂತರ ಕೊನೆಗೂ ಅರಣ್ಯಾಧಿಕಾರಿಗಳು ಹುಲಿಯನ್ನು ಸೆರೆ ಹಿಡಿದಿದ್ದಾರೆ.
ಕಳೆದ ಒಂದು ತಿಂಗಳಿನಿಂದ ವಯನಾಡು ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ಚೀರಾಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳಲ್ಲಿ ಭೀತಿ ಮೂಡಿಸಿದ್ದ ಹುಲಿಯನ್ನು ಇಂದು ಅರಣ್ಯಾಧಿಕಾರಿಗಳು ಬೋನು ಹಾಕಿ ಸೆರೆ ಹಿಡಿದಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಹುಲಿ 13 ಹಸುಗಳನ್ನು ಕೊಂದಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಾರ್ವಜನಿಕರಿಂದ ವ್ಯಾಪಕವಾಗಿ ದೂರುಗಳು ಬರತೊಡಗಿದ್ದುವು.
ಸರಕಾರಕ್ಕೆ ಜನರ ರಕ್ಷಣೆಗಿಂದ ಹುಲಿ, ಸಿಂಹ, ಬೀದಿನಾಯಿಗಳ ರಕ್ಷಣೆಯೇ ಮುಖ್ಯವೆಂದು ತೋರುತ್ತದೆ ಎಂದು ಸಾರ್ವಜನಿಕರು ವ್ಯಂಗ್ಯವಾಗಿ ಮಾತಾಡಿಕೊಳ್ಳುತ್ತಿದ್ದರು.
Kerala | A tiger that had created panic among local residents at Cheeral and nearby areas under the Wayanad Wildlife Sanctuary for the last one month, was captured by forest officials today after setting up a trap.
ಕನ್ನಡ ನಾಡು ಕನ್ನಡ ನುಡಿ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ವತಿಯಿಂದ ಆಯೋಜಿಸಲಾದ ಕೋಟಿ ಕಂಠ ಗಾಯನ ಕಾರ್ಯಕ್ರಮ ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 28ರಂದು ಜರಗಿತು.
ಕಾರ್ಯಕ್ರಮಕ್ಕೆ ದೀಪ ಬೆಳಗಿ ಚಾಲನೆ ನೀಡಿದ ಹೊಸದಿಗಂತ ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಕಾಶ್ ಪಿ.ಎಸ್ ಕನ್ನಡ ನಾಡು ನುಡಿಗಳ ಅವಶ್ಯಕತೆಯನ್ನು ತಿಳಿಸಿ ಶುಭ ಹಾರೈಸಿದರು.
ಬಳಿಕ ಜೈ ಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾ ಚೇತನ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಕನ್ನಡ ಹಾಡುಗಳನ್ನು ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸುಮಾರು 2000 ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ 200 ಮಂದಿ ಶಿಕ್ಷಕ ಬಂಧುಗಳು ಹಾಡಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ರೀಮತಿ ಯಶೋದ ಸ್ವಾಗತಿಸಿ, ಶ್ರೀಮತಿ ದಿವ್ಯರಾಣಿ ಸಂಕಲ್ಪ ವಿಧಿ ಬೋಧಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ಶ್ರೀ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಭೂಮಿ ಕನ್ಸ್ಟ್ರಕ್ಷನ್ ಮಾಲಕರಾದ ಶ್ರೀ ನವೀನ್ ಪ್ರಸಾದ್ ರೈ ಕೈಕಾರ, ಮೆಸ್ಕಾಂ ನಿರ್ದೇಶಕರಾದ ಶ್ರೀ ಕಿಶೋರ್ ಕುಮಾರ್ ಬೊಟ್ಯಾಡಿ, ವಿವೇಕಾನಂದ ಧ್ಯಾನ ಮಂದಿರ ನಿರ್ದೇಶಕಿ ಶ್ರೀಮತಿ ಲಕ್ಷ್ಮೀ.ವಿ.ಜಿ.ಭಟ್, ಯಕ್ಷಗಾನ ಕಲಾವಿದ ಶ್ರೀ ಭಾಸ್ಕರ ಶೆಟ್ಟಿ ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
ದೆಹಲಿ: ಅಕ್ಟೋಬರ್ 26 ರಂದು ಅಲಿಪುರ್ ಪ್ರದೇಶದಲ್ಲಿ ಬೈಕ್ ಸವಾರನೊಂದಿಗಿನ ವಾಗ್ವಾದದ ನಂತರ ಕಾರೊಂದು ಜನರ ಮೇಲೆ ಹರಿಸಲಾಗಿದೆ. 3 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಚಾಲಕ, ನಿತಿನ್ ಮಾನ್ ನನ್ನು ಬಂಧಿಸಲಾಗಿದೆ, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿದೆ.
ಬುಧವಾರ ಸಂಜೆ ದೆಹಲಿಯ ಹೊರ ಉತ್ತರದಲ್ಲಿ ನೆರೆಹೊರೆಯವರ ನಡುವೆ ಜಗಳ ವಿಕೋಪಕ್ಕೆ ಹೋಗಿದ್ದು, ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಜಗಳವಾಡಿದ ನಂತರ ಕಾರಿನ ಚಾಲಕ ಮೂವರ ಮೇಲೆ ತನ್ನ ಕಾರನ್ನು ಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾಲಕನನ್ನು ಅಲಿಪುರ ನಿವಾಸಿ ನಿತಿನ್ ಮಾನ್ ಎಂದು ಗುರುತಿಸಲಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕಿರಿದಾದ ರಸ್ತೆಯಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆಯುವುದನ್ನು ತೋರಿಸುತ್ತಿದೆ. ವಾಗ್ವಾದ ಮುಂದುವರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ.
ಸ್ವಲ್ಪ ಸಮಯದ ನಂತರ, ಕಾರಿನಲ್ಲಿದ್ದ ವ್ಯಕ್ತಿಯು ಅವನು ಹೊರಡುವಾಗ ಗುಂಪಿನ ಮೇಲೆ ಕಾರನ್ನು ಹತ್ತಿಸಿಕೊಂಡು ಹಲವಾರು ಜನರನ್ನು ಗಾಯಗೊಳಿಸಿದ್ದಾನೆ.
ಡಿಸಿಪಿ (ಔಟರ್ ನಾರ್ತ್) ದೇವೇಶ್ ಮಹಲಾ ಪ್ರಕಾರ, “ಮೂವರು ಗಾಯಾಳುಗಳನ್ನು ಅಲಿಪುರದ ನೆಹರು ಎನ್ಕ್ಲೇವ್ನಿಂದ ನರೇಲಾದ ಎಸ್ಆರ್ಹೆಚ್ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಅಲ್ಲಿ ಪೊಲೀಸರು ಅವರ ವೈದ್ಯಕೀಯ-ಕಾನೂನು ವರದಿಗಳನ್ನು ಸಂಗ್ರಹಿಸಿದ್ದಾರೆ.
ಪಿರ್ಯಾದಿದಾರರಾದ ರಾಜ್ ಕುಮಾರ್ ರವರು ಚಾಲಕನು ಯುವಕನೊಂದಿಗೆ ಜಗಳವಾಡುತ್ತಿರುವುದನ್ನು ನೋಡಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದನು ಮತ್ತು ಹಬ್ಬದ ದಿನದಂದು ಜಗಳ ಮಾಡಬೇಡಿ ಎಂದು ಹೇಳಿದ್ದಾನೆ. ಇಬ್ಬರು ಸರಳವಾದ ಗಾಯಗಳನ್ನು ಹೊಂದಿದ್ದು, ಇನ್ನೊಬ್ಬರು ಮುರಿತಕ್ಕೆ ಒಳಗಾಗಿದ್ದಾರೆ. ಅವರೆಲ್ಲರೂ ಸ್ಥಿರ ಸ್ಥಿತಿಯಲ್ಲಿದ್ದಾರೆ.
ಈ ಕುರಿತು ಅಲಿಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 279 (ನಿರ್ಲಕ್ಷ್ಯದ ಚಾಲನೆ) 337 (ಜೀವಕ್ಕೆ ಅಪಾಯ ತಂದೊಡ್ಡುವ ಕೃತ್ಯದಿಂದ ಗಾಯ) ಮತ್ತು 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
#WATCH | Delhi: A car ran over people in Alipur area on Oct 26 following an argument with a bike rider. 3 people injured & admitted to a hospital. Accused driver, Nitin Maan has been arrested, case registered under sec of IPC incl 307 (attempt to murder). Probe on.
ನಾಳೆ ದಿನಾಂಕ 29.10.2022ರ ಶನಿವಾರ ಕಲ್ಮಡ್ಕ ಶಾಲಾ ವಠಾರದಲ್ಲಿ ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಜನ್ಮಶತಾಬ್ದಿ ಮತ್ತು ಪದ್ಯಾಣ ಗಣಪತಿ ಭಟ್ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ.
ಅನಂತರ ಸುಪ್ರಸಿದ್ಧ ಕಲಾವಿದರಿಂದ ‘ವೀರಮಣಿ ಕಾಳಗ’ ತಾಳಮದ್ದಳೆ ಮತ್ತು ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಬಯಲಾಟ ನಡೆಯಲಿದೆ.
ಅಪರಾಹ್ನ 2 ಘಂಟೆಗೆ ದೀಪ ಪ್ರಜ್ವಲನ ಮತ್ತು ಭಾವಚಿತ್ರ ಅನಾವರಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಅನಂತರ 2.15 ಘಂಟೆಗೆ ಸರಿಯಾಗಿ ಯಕ್ಷಗಾನ ತಾಳಮದ್ದಳೆ ‘ವೀರಮಣಿ ಕಾಳಗ’ ಆರಂಭವಾಗಲಿದೆ. ತಾಳಮದ್ದಳೆ ಮುಗಿದ ನಂತರ ಸಂಜೆ 5 ಘಂಟೆಗೆ ಸಂಸ್ಮರಣಾ ಕಾರ್ಯಕ್ರಮ ನೆರವೇರಲಿದೆ.
ಸಂಸ್ಮರಣಾ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷರಾದ ಡಾ| ಟಿ. ಶ್ಯಾಮ ಭಟ್ ವಹಿಸಲಿದ್ದಾರೆ.
ಪಂಡಿತ ಕೆರೆಕ್ಕೋಡಿ ಗಣಪತಿ ಭಟ್ ಸಂಸ್ಮರಣಾ ಭಾಷಣವನ್ನು ಖ್ಯಾತ ತಾಳಮದ್ದಳೆ ಅರ್ಥಧಾರಿಗಳಾದ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯನವರು ಮಾಡಲಿದ್ದಾರೆ. ಪದ್ಯಾಣ ಸಂಸ್ಮರಣಾ ಭಾಷಣವನ್ನು ಖ್ಯಾತ ತಾಳಮದ್ದಳೆ ಅರ್ಥಧಾರಿಗಳಾದ ಶ್ರೀ ವಾಸುದೇವ ರಂಗಾ ಭಟ್ ನೆರವೇರಿಸಲಿದ್ದಾರೆ.
ಸಂಸ್ಮರಣಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಿವರಗಳಿಗೆ ಕೆಳಗಿನ ಕಾರ್ಯಕ್ರಮದ ಕರಪತ್ರವನ್ನು ನೋಡಿ.
ಕೋಝಿಕ್ಕೋಡ್ನ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಕೋಚ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ನ ಅಥ್ಲೆಟಿಕ್ಸ್ ಕೋಚ್ ಶುಕ್ರವಾರ ಇಲ್ಲಿನ ತರಬೇತಿ ಹಾಸ್ಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರು 22 ವರ್ಷದ ಜಯಂತಿ ತಮಿಳುನಾಡು ಮೂಲದವರು.
ಶುಕ್ರವಾರ ಬೆಳಗ್ಗೆ 5 ಗಂಟೆಗೆ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸ್ಪೋರ್ಟ್ಸ್ ಅಕಾಡೆಮಿಯ ಹಾಸ್ಟೆಲ್ ಕೊಠಡಿಯಲ್ಲಿ ಜಯಂತಿ ಅವರ ಮೃತದೇಹ ಪತ್ತೆಯಾಗಿದೆ.
ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಕ್ಟೋಬರ್ 27, ಗುರುವಾರದಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವು ಭಾರತದ ಬೆನ್ನಿಗೆ ಚೂರಿ ಹಾಕಿದೆ ಮತ್ತು ತಾನು ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗಗಳಲ್ಲಿ ಜನರ ಮೇಲೆ “ದೌರ್ಜನ್ಯ” ಮಾಡುತ್ತಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ತನ್ನ ಕ್ರಮಗಳ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಭಾಗಗಳನ್ನು ಹಿಂಪಡೆಯಲಾಗುವುದು ಎಂದು ಸುಳಿವು ನೀಡಿದರು.
ಅವರು ಶೌರ್ಯ ದಿವಸ್ ಸಂದರ್ಭದಲ್ಲಿ ಮಾತನಾಡುತ್ತಿದ್ದರು. 1947 ರಲ್ಲಿ ಈ ದಿನದಂದು ಭಾರತೀಯ ವಾಯುಪಡೆಯು ಶ್ರೀನಗರದಲ್ಲಿ ಲ್ಯಾಂಡಿಂಗ್ ಅನ್ನು ಮರುರೂಪಿಸಿತು. ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನ ಅವಳಿ ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ ಅಭಿವೃದ್ಧಿಯನ್ನು “ನಂತರ ಸಾಧಿಸಲಾಗುವುದು” ಎಂದು ಹೇಳಿದರು.
” ನಮ್ಮ ಸಶಸ್ತ್ರ ಪಡೆಗಳ ತ್ಯಾಗದಿಂದಾಗಿ ನಾವು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ನಮ್ಮ ಅಭಿವೃದ್ಧಿಯ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ನಾವು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ತಲುಪಿದಾಗ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ.
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ” ಎಂದು ಸಿಂಗ್ ಹೇಳಿದರು. ಪಿಒಕೆಯಲ್ಲಿ ಕಾಶ್ಮೀರಿಗಳ ನೋವನ್ನು ನಾವು ಅನುಭವಿಸುತ್ತೇವೆ.
ನಾವು ಕಾಶ್ಮೀರದ ಅಭಿವೃದ್ಧಿಯನ್ನು ಪ್ರಾರಂಭಿಸಿದ್ದೇವೆ ಮತ್ತು ನಾವು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ತಲುಪುವವರೆಗೆ ನಾವು ನಿಲ್ಲುವುದಿಲ್ಲ ಎಂದು ಅವರು ಹೇಳಿದರು.
ಭಾರತ vs ನೆದರ್ಲೆಂಡ್ಸ್: ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದ ವೇಳೆ ಭಾರತದ ಅಭಿಮಾನಿಯೊಬ್ಬ ತನ್ನ ಗೆಳತಿಗೆ ಪ್ರಪೋಸ್ ಮಾಡಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾನೆ.
ನೆರೆದಿದ್ದವರು ಜೋಡಿಗೆ ಜೈಕಾರ ಹಾಕುತ್ತಿದ್ದಂತೆ ಮಹಿಳೆ ‘ಹೌದು’ ಎಂದು ಆತನ ಪ್ರಪೋಸಲ್ ಒಪ್ಪಿಕೊಂಡದ್ದನ್ನು ತೋರಿಸಿಕೊಂಡಳು.
ಗುರುವಾರ ಎಸ್ಸಿಜಿಯಲ್ಲಿ ನಡೆದ ಭಾರತ ಮತ್ತು ನೆದರ್ಲ್ಯಾಂಡ್ ನಡುವಿನ ಟಿ 20 ವಿಶ್ವಕಪ್ ಪಂದ್ಯದ ವೇಳೆ ಭಾರತದ ಜರ್ಸಿಯನ್ನು ಧರಿಸಿದ ಅದೃಷ್ಟಶಾಲಿ ಭಾರತೀಯ ಅಭಿಮಾನಿಯೊಬ್ಬರು ತಮ್ಮ ಗೆಳತಿಗೆ ಪ್ರಪೋಸ್ ಮಾಡಿದರು ಮತ್ತು ಐಕಾನಿಕ್ ಸ್ಥಳದಲ್ಲಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡರು.
ಭಾರತೀಯ ಅಭಿಮಾನಿ ಮೊಣಕಾಲಿನ ಕೆಳಗೆ ಹೋಗಿ ತನ್ನ ಗೆಳತಿಗೆ ಉಂಗುರವನ್ನು ಹಸ್ತಾಂತರಿಸುತ್ತಿರುವುದು ಕಂಡುಬಂದಿದೆ. ಮತ್ತು ಅವನ ಸಂತೋಷಕ್ಕೆ, ಅವನ ಮಹಿಳೆ ಹೌದು ಎಂದು ಹೇಳಿದರು. ಪ್ರಸಾರಕರು ದೊಡ್ಡ ಪರದೆಯ ಮೇಲೆ ಹೃದಯಸ್ಪರ್ಶಿ ಕ್ಷಣವನ್ನು ಸೆರೆಹಿಡಿದರು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಗಳಿಗೆ ಭಾರತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಆದರೆ ಮಾಧ್ಯಮಗಳು ಪ್ರಸಾರ ಮಾಡುವಂತೆ ಇದೇನೂ ಅನಿರೀಕ್ಷಿತ ಅಲ್ಲ. ಆಕೆಯ ಬೆರಳಿನುಂಗುರದ ಅಳತೆ ಆತನಿಗೆ ಸರಿಯಾಗಿ ಗೊತ್ತಿತ್ತು. ಪ್ರಪೋಸಲ್ ಮಾಡುತ್ತಾನೆ ಎಂದು ಹುಡುಗಿಗೂ ಮೊದಲೇ ಗೊತ್ತಿದ್ದ ಹಾಗೆ ಮೇಲ್ನೋಟಕ್ಕೆ ತೋರುತ್ತಿತ್ತು. ಟಿವಿ ಕ್ಯಾಮರಾದವರೂ ತಯಾರಾಗಿದ್ದರು.
ಗುರುವಾರ ನಡೆದ ಟಿ20 ವಿಶ್ವಕಪ್ನಲ್ಲಿ ಭಾರತ 56 ರನ್ಗಳಿಂದ ನೆದರ್ಲೆಂಡ್ಸ್ ಅನ್ನು ಸೋಲಿಸಿ ಸತತ ಎರಡನೇ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಆಯ್ದುಕೊಂಡ ಭಾರತ, 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು ಮತ್ತು ನಂತರ ನೆದರ್ಲ್ಯಾಂಡ್ಸ್ ಅನ್ನು 9 ವಿಕೆಟ್ ನಷ್ಟಕ್ಕೆ 123 ಗೆ ನಿರ್ಬಂಧಿಸಿತು.
ರೋಹಿತ್ ಶರ್ಮಾ (53), ವಿರಾಟ್ ಕೊಹ್ಲಿ (ಔಟಾಗದೆ 62) ಮತ್ತು ಸೂರ್ಯಕುಮಾರ್ ಯಾದವ್ (ಔಟಾಗದೆ 51) ಅವರೆಲ್ಲರ ಅಮೋಘ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಭಾರತವು ದೃಢವಾದ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿತು.
ಕುಮಟಾ ಶ್ರೀ ಗಣಪತಿ ನಾಯ್ಕ್ ಅವರು ಬಡಗು ತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಕಳೆದ ಮೂವತ್ತೆರಡು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ, ಭಾರತೀಯ ಸೇನೆಯಲ್ಲೂ ಸೇವೆ ಸಲ್ಲಿಸಿದ ಅನುಭವಿ ಇವರು.
ಮಾರುತಿ ಪ್ರತಾಪ, ರಾಮಾಂಜನೇಯ ಕಾಳಗ, ಮೊದಲಾದ ಅನೇಕ ಪ್ರಸಂಗಗಳಲ್ಲಿ ಹನುಮಂತನಾಗಿ ಅಭಿನಯಿಸಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ, ಈ ಪಾತ್ರವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಭೂ ಕೈಲಾಸದ ಪ್ರಸಂಗದ ರಾವಣ, ಕನಕಾಂಗಿ ಕಲ್ಯಾಣದ ಘಟೋತ್ಕಚ, ಕೀಚಕ ವಧೆ ಪ್ರಸಂಗದ ವಲಲ, ಶನೀಶ್ವರ ಮಹಾತ್ಮೆ ಪ್ರಸಂಗದ ಶನಿ ಮೊದಲಾದವು ಇವರಿಗೆ ಇಷ್ಟದ ಪಾತ್ರಗಳು. ಈ ಪಾತ್ರಗಳೆಲ್ಲಾ ಶ್ರೀ ಗಣಪತಿ ನಾಯ್ಕ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು.
ಇವರು ರಂಗ ಪ್ರಸಾಧನ ವಿಭಾಗದಲ್ಲೂ ಗುರುತಿಸಿಕೊಂಡಿದ್ದಾರೆ. ವೇಷಭೂಷಣ ತಯಾರಿಕಾ ಕಲೆಯೂ ಇವರಿಗೆ ಕರಗತವಾಗಿದೆ. ಬಡಗು ತಿಟ್ಟಿನ ಎಲ್ಲಾ ತರದ ವೇಷಗಳಿಗೂ ಬೇಕಾಗುವ ಕಿರೀಟಗಳನ್ನು ಇವರು ತಯಾರು ಮಾಡುತ್ತಾರೆ. ಸರಳ,ಸಜ್ಜನ,ಶಿಸ್ತಿನ ಕಲಾವಿದರಾದ ಇವರು ಸಹಕಲಾವಿದರಿಗೆ ಮತ್ತು ಗೆಳೆಯರಿಗೆ ಪ್ರೀತಿಯ ‘ಗಂಪಣ್ಣ’.
ಶ್ರೀ ಗಣಪತಿ ನಾಯ್ಕ್ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಕುಮಟಾ. 1966 ಜುಲೈ 6ರಂದು ಕುಮಟಾ ಶ್ರೀ ಗೋವಿಂದ ನಾಯ್ಕ್ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳಿಗೆ ಪುತ್ರನಾಗಿ ಜನನ.
ಕುಮಟಾ ಗೋವಿಂದ ನಾಯ್ಕ್ ಅವರನ್ನು ಯಕ್ಷಗಾನ ಕಲಾಭಿಮಾನಿಗಳಿಗೆಲ್ಲರಿಗೂ ತಿಳಿದೇ ಇದೆ. ಬಡಗು ತಿಟ್ಟಿನ ಖ್ಯಾತ ಕಲಾವಿದರಾಗಿದ್ದ ಇವರು ಹನುಮಂತ, ವಸಂತಸೇನೆ ಪ್ರಸಂಗದ ಶಕಾರ, ಅಲ್ಲದೇ ಅನೇಕ ಪುರಾಣ ಪ್ರಸಂಗಗಳಲ್ಲಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದವರು.
ಕುಮಟಾ ಗಣಪತಿ ನಾಯ್ಕ್ ಅವರಿಗೆ ಯಕ್ಷಗಾನವು ರಕ್ತಗತವಾಗಿತ್ತು. ಕಲಾಸಕ್ತಿಯು ಹಿರಿಯರಿಂದ ಬಳುವಳಿಯಾಗಿ ಬಂದಿತ್ತು. ಇವರ ಮುತ್ತಜ್ಜ ಕುಮಟಾ ಗೋವಿಂದಪ್ಪ ನಾಯ್ಕ್, ಅಜ್ಜ ಕುಮಟಾ ಮುಕುಂದ ನಾಯ್ಕ್, ಸಣ್ಣಜ್ಜ ಕುಮಟಾ ಉತ್ತಮ ನಾಯ್ಕ್ ಅವರುಗಳು ಕಲಾವಿದರಾಗಿದ್ದರು.
ಕುಮಟಾ ಗಣಪತಿ ನಾಯ್ಕ್ ಅವರು ಓದಿದ್ದು ಹತ್ತನೇ ತರಗತಿ ವರೆಗೆ, ಕುಮಟಾ ಚಿತ್ರಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆ. ಬಾಲ್ಯದಲ್ಲಿಯೇ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದರು. ತಂದೆಯವರ ಜತೆ ತೆರಳಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಮೊತ್ತಮೊದಲು ವೇಷ ಮಾಡಿದ್ದು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗ. ಕುಮಟಾ ಕಲಭಾಗ ಶ್ರೀ ರಾಮನಾಥ ದೇವಸ್ಥಾನದಲ್ಲಿ ನಡೆದ ಪ್ರದರ್ಶನ. ವಾಲಿಮೋಕ್ಷ ಪ್ರಸಂಗದಲ್ಲಿ ಹನುಮಂತನಾಗಿ ರಂಗಪ್ರವೇಶ ಮಾಡಿದ್ದರು.
ಮುಂದೆ ಬೆಳೆಯುತ್ತಾ ಬಂದಂತೆ ಹನುಮಂತನ ಪಾತ್ರವು ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ಬಳಿಕ ಭಾಗವತರಾದ ಶ್ರೀ ಉಮೇಶ್ ಭಟ್ ಬಾಡ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆ ಅಭ್ಯಾಸ ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶಾಲಾ ಪ್ರದರ್ಶನಗಳಲ್ಲಿ ಮತ್ತು ಊರ ಪ್ರದರ್ಶನಗಳಲ್ಲಿ ವೇಷ ಮಾಡುತ್ತಿದ್ದರು.
ಕುಮಟಾ ಗಣಪತಿ ನಾಯ್ಕ್ ಅವರಿಗೆ ಸೇನೆಗೆ ಸೇರಬೇಕೆಂಬ ಆಸೆಯೂ ಇತ್ತು. ಅದಕ್ಕೆ ಅವಕಾಶವೂ ಒದಗಿ ಬಂದಿತ್ತು. ಎಸ್ಸೆಸ್ಸೆಲ್ಸಿ ಓದಿನ ಬಳಿಕ ಕಾರವಾರದಲ್ಲಿ ನಡೆದ ಸಂದರ್ಶನದಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು. ಬೆಳಗಾವಿಯಲ್ಲಿ ತರಬೇತಿಯನ್ನು ಮುಗಿಸಿ ಭಾರತೀಯ ಶಾಂತಿಪಾಲನಾ ಪಡೆಯ ಸದಸ್ಯನಾಗಿ ಶ್ರೀಲಂಕಾ ದೇಶಕ್ಕೆ ತೆರಳಿದ್ದರು. ಅಲ್ಲಿಂದ ಮರಳಿದ ಬಳಿಕ ಯಕ್ಷಗಾನ ಕಲೆಯು ಮತ್ತೆ ಕೈಬೀಸಿ ಕರೆಯಿತು.
1990-91ರಲ್ಲಿ ಕುಮಟಾ ಶ್ರೀ ರಾಮನಾಥ ಪ್ರಸಾದಿತ ಯಕ್ಷಗಾನ ಮಂಡಳಿಯು ಕುಮಟಾ ಗೋವಿಂದ ನಾಯ್ಕ್ ಅವರ ನಾಯಕತ್ವದಲ್ಲಿ ಡೇರೆ ಮೇಳವಾಗಿ ಸಂಚಾರಕ್ಕೆ ಹೊರಟಿತ್ತು. ಸದ್ರಿ ಮೇಳವು ಮೊದಲು ಬಯಲಾಟಗಳನ್ನು ಮಾತ್ರ ಪ್ರದರ್ಶಿಸುತ್ತಿತ್ತು. ಈ ಮೇಳದಲ್ಲಿ ಎರಡು ವರ್ಷ ತಿರುಗಾಟ. ಬಳಿಕ ಬಗ್ವಾಡಿ ಮೇಳದಲ್ಲಿ ಮೂರು ವರ್ಷ ವ್ಯವಸಾಯ ಮಾಡಿದ್ದರು.
ಮುಂದಿನ ಎರಡು ವರ್ಷ ಅಮೃತೇಶ್ವರೀ ಮೇಳದಲ್ಲಿ ವ್ಯವಸಾಯ. ಬಳಿಕ ಒಂದು ವರ್ಷ ಸುರೇಂದ್ರ ಪಣಿಯೂರು ಅವರ ಸಂಚಾಲಕತ್ವದ ಗೋಳಿಗರಡಿ ಟೆಂಟ್ ಮೇಳದಲ್ಲಿ ತಿರುಗಾಟ. ಮತ್ತೆ ಎರಡು ವರ್ಷ ಗೋಳಿಗರಡಿ ಬಯಲಾಟ ಮೇಳದಲ್ಲಿ ವ್ಯವಸಾಯ. ಬಳಿಕ ನೀಲಾವರ ಮೇಳದಲ್ಲಿ ಮೂರು ವರ್ಷ, ಆಜ್ರಿ ಮೇಳದಲ್ಲಿ ಐದು ವರ್ಷ, ಸಾಲಿಗ್ರಾಮ ಮೇಳದಲ್ಲಿ ತಿರುಗಾಟ.
ಕುಮಟಾ ಗಣಪತಿ ನಾಯ್ಕ್ ಅವರು ಅತಿಥಿ ಕಲಾವಿದರಾಗಿ ಪೆರ್ಡೂರು ಮೊದಲಾದ ಹಲವು ಮೇಳಗಳಲ್ಲಿ ಕಾಣಿಸಿಕೊಂಡು ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಸಾಲಿಗ್ರಾಮ ಮೇಳದ ವ್ಯವಸಾಯದ ಬಳಿಕ ಎರಡು ವರ್ಷ ಮೇಳದ ತಿರುಗಾಟ ನಿಲ್ಲಿಸಿದ್ದರೂ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು. ಬಳಿಕ ಒಂದು ವರ್ಷ ಮತ್ತೆ ಆಜ್ರಿ ಮೇಳದಲ್ಲಿ ವ್ಯವಸಾಯ ಮಾಡಿ ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು.
ಈಗ ಅತಿಥಿ ಕಲಾವಿದರಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಕುಮಟಾ ಗಣಪತಿ ನಾಯ್ಕ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಯಕ್ಷಗಾನ ಕಿರೀಟ ಮೊದಲಾದ ಪರಿಕರಗಳನ್ನು ತಯಾರಿಸುವಲ್ಲಿ ತೊಡಗಿಸಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಮುಂಬಯಿ, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ.
ಶ್ರೀಯುತರ ಪತ್ನಿ ಶ್ರೀಮತಿ ಜಯಶ್ರೀ (2002ರಲ್ಲಿ ವಿವಾಹ) ಇವರ ಪುತ್ರಿ ಕು| ಶ್ರೀನಿಧಿ ಒಂದನೇ ತರಗತಿ ವಿದ್ಯಾರ್ಥಿನಿ. ಕುಮಟಾ ಶ್ರೀ ಗಣಪತಿ ನಾಯ್ಕ್ ಅವರಿಂದ ಯಕ್ಷಗಾನ ಕಲಾ ವ್ಯವಸಾಯಯವು ನಿರಂತರವಾಗಿ ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಯಕ್ಷಗಾನ ಸಪ್ತಾಹ (ಭೀಷ್ಮಾವಸಾನ, ಗದಾಯುದ್ಧ, ಕುಶಲವ, ಮಾಗಧವಧೆ, ವೀರಮಣಿ, ಜಾಂಬವತಿ ಕಲ್ಯಾಣ, ಕರ್ಣಪರ್ವ, ಸುಭದ್ರಾ ಕಲ್ಯಾಣ), ತಾಳಮದ್ದಳೆ, ಪ್ರಶಸ್ತಿ ಪ್ರಧಾನ (ಅಭಿನೇತ್ರಿ ಪ್ರಶಸ್ತಿ, ಬೆಳಿಯೂರು ಕೃಷ್ಣಮೂರ್ತಿ ಪ್ರಶಸ್ತಿ, ಕಣ್ಣಿ ಪ್ರಶಸ್ತಿ)
ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡು ಅರ್ಪಿಸುವ ಕಲಾಸಂಗಮ ಯಕ್ಷಗಾನ ಸಪ್ತಾಹವು ನಾಳೆ ದಿನಾಂಕ 28.10.2022ರಿಂದ 03.11.2022ರ ವರೆಗೆ ಕುಮಟಾ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಹತ್ತಿರವಿರುವ ‘ಗೋಗ್ರೀನ್’ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಿವೆ.
ಈ ಏಳು ದಿನಗಳಲ್ಲಿ ಭೀಷ್ಮಾವಸಾನ, ಗದಾಯುದ್ಧ, ಕುಶಲವ, ಮಾಗಧವಧೆ, ವೀರಮಣಿ, ಜಾಂಬವತಿ ಕಲ್ಯಾಣ, ಕರ್ಣಪರ್ವ, ಸುಭದ್ರಾ ಕಲ್ಯಾಣ ಎಂಬ ಪ್ರಸಂಗಗಳ ಪ್ರದರ್ಶನ ನಡೆಯಲಿದೆ.
ಜೊತೆಗೆ ಅಭಿನೇತ್ರಿ ಪ್ರಶಸ್ತಿ, ಬೆಳಿಯೂರು ಕೃಷ್ಣಮೂರ್ತಿ ಪ್ರಶಸ್ತಿ, ಕಣ್ಣಿ ಪ್ರಶಸ್ತಿ ಎಂಬ ಮೂರು ಪ್ರಶಸ್ತಿಗಳನ್ನೂ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ವಿವರಗಳಿಗಾಗಿ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಬೇಕಾಗಿ ಅಪೇಕ್ಷೆ.