ರಾಜ್ಕೋಟ್ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣ್ಜಿ ಕುಂದರಿಯಾ ಅವರ ಕುಟುಂಬ ಸದಸ್ಯರು ಮೊರ್ಬಿ ಸೇತುವೆ ಕುಸಿತದ ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ರಾಜ್ಕೋಟ್ನ ಬಿಜೆಪಿ ಸಂಸದ ಮೋಹನ್ಭಾಯ್ ಕಲ್ಯಾಣ್ಜಿ ಕುಂದರಿಯಾ ಅವರು ಮೋರ್ಬಿ ಸೇತುವೆ ಕುಸಿತದ ಘಟನೆಯಲ್ಲಿ ತನ್ನ 12 ಕುಟುಂಬ ಸದಸ್ಯರನ್ನೂ ಕಳೆದುಕೊಂಡಿದ್ದಾರೆ.
ಮೋಹನ್ಭಾಯ್ ಕಲ್ಯಾಣ್ಜಿ ಕುಂದರಿಯಾ, “ನಾನು ಈ ದುರ್ಘಟನೆಯಲ್ಲಿ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬದಿಂದ ಬಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ.” ಎಂದು ಹೇಳಿದ್ದಾರೆ. “ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಸ್ಥಳೀಯ ಆಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದೆ.
ಅಪಘಾತದಲ್ಲಿ ಬದುಕುಳಿದ ಎಲ್ಲರನ್ನೂ ರಕ್ಷಿಸಲಾಗಿದೆ ಮತ್ತು ಮಚ್ಚು ನದಿಯಲ್ಲಿದ್ದವರ ಶವಗಳನ್ನು ಹೊರತೆಗೆಯಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ರಕ್ಷಣಾ ದೋಣಿಗಳು ಸಹ ಸ್ಥಳದಲ್ಲಿವೆ” ಎಂದು ಬಿಪಿಪಿ ಸಂಸದರು ಹೇಳಿದರು.
ಗುಜರಾತ್ನ ಮೊರ್ಬಿ ನಗರದಲ್ಲಿ ಶತಮಾನಗಳಷ್ಟು ಹಳೆಯದಾದ ಮಚ್ಚು ನದಿಯ ತೂಗು ಸೇತುವೆ ಕುಸಿದು 132 ಜನರು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ. ಎನ್ಡಿಆರ್ಎಫ್, ಸೇನೆ, ಎಸ್ಡಿಆರ್ಎಫ್ ಮತ್ತು ಸ್ಥಳೀಯ ಆಡಳಿತದ ಐದು ತಂಡಗಳು ಯುದ್ಧದೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ಸೇತುವೆ ತೆರೆಯಲು ಅನುಮತಿ ನೀಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಸಂಸದರು, “ಈ ದುರಂತ ಹೇಗೆ ಸಂಭವಿಸಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸಲಾಗುವುದು. ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು, ಸತ್ತವರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಇದ್ದಾರೆ, ಸ್ಥಳೀಯರು ಮತ್ತು ಎನ್ಜಿಒಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ .
ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 60 ಕ್ಕೂ ಹೆಚ್ಚು ಶವಗಳನ್ನು ಹೊರತೆಗೆಯಲಾಗಿದ್ದು, ಅದರಲ್ಲಿ ಹೆಚ್ಚಿನ ಮಕ್ಕಳು, ಮಹಿಳೆಯರು ಮತ್ತು ವೃದ್ಧರು. ಉಳಿದವರನ್ನು ರಕ್ಷಿಸಲಾಗಿದೆ; NDRF ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ನಾವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ, ಇದು ತುಂಬಾ ದುಃಖಕರವಾಗಿದೆ, ”ಎಂದು ಸಚಿವರು ಭಾನುವಾರ ಹೇಳಿದರು.
ಭಾನುವಾರ ಸಂಜೆ ಗುಜರಾತ್ನ ಮೊರ್ಬಿ ಜಿಲ್ಲೆಯ ಮಚು ನದಿಯಲ್ಲಿ ನೇತಾಡುವ ತೂಗು ಸೇತುವೆ ಕುಸಿದು 140 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರವನ್ನು ಅರ್ಪಿಸಿದ್ದಾರೆ.
ಸೇತುವೆ ಕುಸಿತದ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 140 ಕ್ಕೂ ಹೆಚ್ಚಿದೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರ ಸಂಜೆ ಸೇತುವೆ ಕುಸಿದು ಬಿದ್ದ ನಂತರ ಮಚ್ಚು ನದಿಗೆ ಬಿದ್ದವರನ್ನು ರಕ್ಷಿಸಲು ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಹಲವು ತಂಡಗಳು ರಾತ್ರಿಯಿಡೀ ಶ್ರಮಿಸುತ್ತಿವೆ.
ಇದುವರೆಗೆ 177 ಜನರನ್ನು ರಕ್ಷಿಸಲಾಗಿದೆ. ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ 40 ವೈದ್ಯರು ತುರ್ತು ಚಿಕಿತ್ಸೆ ನಡೆಸುತ್ತಿದ್ದಾರೆ. ರಾಜ್ಕೋಟ್ ಮತ್ತು ಸುರೇಂದ್ರನಗರದ ಆಸ್ಪತ್ರೆಗಳು ಸೇರಿದಂತೆ ವಿವಿಧ ಆರೋಗ್ಯ ಕೇಂದ್ರಗಳ ಸುಮಾರು 40 ವೈದ್ಯರು ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಸೇವೆಯ ಚಿಕಿತ್ಸೆಯನ್ನು ಪ್ರಾರಂಭಿಸಿದರು.
19 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 3 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಜ್ಕೋಟ್ಗೆ ಕಳುಹಿಸಲಾಗಿದೆ. ಭೂಸೇನೆ, ನೌಕಾಪಡೆ, ವಾಯುಪಡೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.
ಭಾನುವಾರ ಸಂಜೆ ಸೇತುವೆ ಕುಸಿದು ಬಿದ್ದ ನಂತರ ಮಚ್ಚು ನದಿಗೆ ಬಿದ್ದವರನ್ನು ರಕ್ಷಿಸಲು ಭಾರತೀಯ ಸೇನೆ, ಭಾರತೀಯ ನೌಕಾಪಡೆ, ಭಾರತೀಯ ವಾಯುಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ಹಲವು ತಂಡಗಳು ರಾತ್ರಿಯಿಡೀ ಶ್ರಮಿಸುತ್ತಿವೆ.
ಇದುವರೆಗೆ 177 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ತಂಡದಲ್ಲಿ 110 ಅಧಿಕಾರಿಗಳು, 149 ಎಸ್ಡಿಆರ್ಎಫ್ ಅಧಿಕಾರಿಗಳು, ಜಾಮ್ನಗರ ಗರುಡ ಕಮಾಂಡೋ ತಂಡ, ಭಾರತೀಯ ಸೇನೆಯ 50 ಡೈವರ್ಗಳು ಮತ್ತು 20 ರಕ್ಷಣಾ ದೋಣಿಗಳನ್ನು ಒಳಗೊಂಡ ಐದು ಎನ್ಡಿಆರ್ಎಫ್ ತಂಡಗಳನ್ನು ಒಳಗೊಂಡಿದೆ.
ಹೆಚ್ಚುವರಿಯಾಗಿ, ವಿವಿಧೆಡೆಯಿಂದ 25 ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಬಂದವು.
ನಮ್ಮ ಅನುಮತಿಯಿಲ್ಲದೆ ಸೇತುವೆ ತೆರೆಯಲಾಗಿದೆ ಎಂದು ಮೋರ್ಬಿ ಪುರಸಭೆ ಅಧಿಕಾರಿ ಹೇಳುತ್ತಾರೆ. ಹೊಸದಾಗಿ ನವೀಕರಿಸಿದ ಕೇಬಲ್ ಸೇತುವೆಯನ್ನು ಅಧಿಕೃತ ಅನುಮತಿಯಿಲ್ಲದೆ ತೆರೆಯಲಾಗಿದೆ ಎಂದು ಮೊರ್ಬಿ ಪುರಸಭೆ ಮುಖ್ಯ ಅಧಿಕಾರಿ ಸಂದೀಪ್ ಸಿಂಗ್ ಝಾಲಾ ಹೇಳಿದ್ದಾರೆ. ಇದನ್ನು ಅಕ್ಟೋಬರ್ 26 ರಂದು ಸಾರ್ವಜನಿಕರಿಗೆ ತೆರೆಯಲಾಯಿತು.
Over 100 people die in Morbi bridge collapse, says Gujarat Information Department
ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಬಡಗುತಿಟ್ಟು ಯಕ್ಷಗಾನ ರಂಗದ ಹಿರಿಯ ಅನುಭವೀ ಕಲಾವಿದರು. ಕಳೆದ ನಲುವತ್ತು ವರ್ಷಗಳಿಂದ ಗಂಡು ಕಲೆಯಾದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕೃಷಿ ಮತ್ತು ಯಕ್ಷಗಾನ ಹಿನ್ನೆಲೆಯುಳ್ಳ ಮನೆತನದಲ್ಲಿ ಜನಿಸಿದ ಇವರು ಕೃಷಿಕನಾಗಿ, ಯಕ್ಷಗಾನ ಕಲಾವಿದನಾಗಿ, ಸಂಘಟಕನಾಗಿಯೂ ಗುರುತಿಸಿಕೊಂಡಿದ್ದಾರೆ. ಸರಳ ಸಜ್ಜನರಾದ ಇವರು ತೆರೆದು ಕಾಣಿಸಿಕೊಳ್ಳುವ ಸ್ವಭಾವದವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವವನ್ನು ಹೊಂದಿದ ಸಾತ್ವಿಕರು.
ಒಡ್ಡೋಲಗ ವೇಷಗಳಲ್ಲಿ ಇವರಿಗೆ ಆಸಕ್ತಿ. ಹಿತಮಿತವಾದ ಕುಣಿತ ಮತ್ತು ಮಾತುಗಳಿಂದ ಪರಂಪರೆಯ ಚೌಕಟ್ಟಿನೊಳಗೆ ಪಾತ್ರಗಳನ್ನು ಚಿತ್ರಿಸುತ್ತಾರೆ. ದೇವೇಂದ್ರ, ಅರ್ಜುನ, ಧರ್ಮರಾಯ, ಶತ್ರುಘ್ನ, ಮೊದಲಾದ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇವರು ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲ ಸಮರ್ಥರು. 2003ರಿಂದ ತೊಡಗಿ ಕಳೆದ ಹತ್ತೊಂಭತ್ತು ವರ್ಷಗಳಿಂದ ಸಂಚಾಲಕರಾಗಿ, ಕಲಾವಿದರಾಗಿ ಗುಂಡಬಾಳಾ ಮೇಳವನ್ನು ಮುನ್ನಡೆಸುತ್ತಿದ್ದಾರೆ.
ಊರ, ಪರವೂರ ಅನೇಕ ಕಡೆ ಸನ್ಮಾನ, ಗೌರವಗಳನ್ನು ಸ್ವೀಕರಿಸಿದ ಶ್ರೀಯುತರು ಕಲಾವಿದನಾಗಿ, ಸಂಚಾಲಕನಾಗಿ ಕೃಷಿಕನಾಗಿ ಯಶಸ್ವಿ ಬದುಕನ್ನು ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರ ಜತೆ ಮುಂಬಯಿ, ಬೆಂಗಳೂರು ಮೊದಲಾದ ಕಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ. ಕೆರೆಮನೆ ತಂಡದ ಸದಸ್ಯನಾಗಿ ಲಡಾಕ್ ಮತ್ತು ಕಾರ್ಗಿಲ್ ಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗವಹಿಸುವ ಅವಕಾಶವು ಶ್ರೀ ಪ್ರಭಾಕರ ಚಿಟ್ಟಾಣಿಯವರಿಗೆ ಸಿಕ್ಕಿತ್ತು.
ಬಡಗು ತಿಟ್ಟಿನ ಅನುಭವೀ ಕಲಾವಿದ, ಗುಂಡಬಾಳಾ ಮೇಳದ ಸಂಚಾಲಕರಾದ ಶ್ರೀ ಪ್ರಭಾಕರ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಚಿಟ್ಟಾಣಿ. 1956ನೇ ಇಸವಿ ನವೆಂಬರ್ 18ರಂದು ಶ್ರೀ ಚಿಟ್ಟಾಣಿ ವೆಂಕಟ್ರಮಣ ಹೆಗಡೆ ಮತ್ತು ಶ್ರೀಮತಿ ಮಹಾಲಕ್ಷ್ಮಿ ದಂಪತಿಗಳ ಪುತ್ರನಾಗಿ ಜನನ. ಶ್ರೀ ಪ್ರಭಾಕರ ಚಿಟ್ಟಾಣಿ ಅವರ ಕುಟುಂಬದವರೆಲ್ಲಾ ಕಲಾವಿದರೂ, ಕಲಾಸಕ್ತರೂ ಆಗಿದ್ದರು. ತಂದೆ ಶ್ರೀ ವೆಂಕಟ್ರಮಣ ಹೆಗಡೆ ಯಕ್ಷಗಾನ ಕಲಾವಿದರು. ದೊಡ್ಡಪ್ಪ ಹಿರೇಮಕ್ಕಿ ಸುಬ್ರಾಯ ಹೆಗಡೆ ಮತ್ತು ಚಿಕ್ಕಪ್ಪ ಮಾಗೋಡು ರಾಮ ಹೆಗಡೆಯವರು ಯಕ್ಷಗಾನ ಕಲಾವಿದರಾಗಿದ್ದರು. ದೊಡ್ಡಪ್ಪ ಹಿರೇಮಕ್ಕಿ ಸುಬ್ರಾಯ ಹೆಗಡೆ ಅವರ ಪುತ್ರ ಹಿರೇಮಕ್ಕಿ ವಿಷ್ಣು ಹೆಗಡೆ ಭಾಗವತರಾಗಿ ಕಲಾಭಿಮಾನಿಗಳಿಗೆ ಪರಿಚಿತರು. ಇವರು ಪ್ರಾಚಾರ್ಯ ಭಾಗವತ ಶ್ರೀ ನಾರ್ಣಪ್ಪ ಉಪ್ಪೂರರ ಶಿಷ್ಯರಾಗಿದ್ದರು.
ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಓದಿದ್ದು ಹತ್ತನೇ ತರಗತಿ ವರೆಗೆ. 7ನೇ ತರಗತಿ ವರೆಗೆ ಭಾಸ್ಕೇರಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಕವಲಕ್ಕಿಯ ಎಸ್.ಎಸ್. ಹೈಸ್ಕೂಲಿನಲ್ಲಿ. ಇವರಿಗೆ ಯಕ್ಷಗಾನವು ರಕ್ತಗತವಾಗಿಯೇ ಬಂದಿತ್ತು. ಅದು ಹಿರಿಯರಿಂದ ಬಳುವಳಿಯಾಗಿ ಬಂದ ಕಲಾ ಸಂಪತ್ತು. ಎಳವೆಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ತಾನೂ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯುಂಟಾಗಿತ್ತು. ಶಾಲಾ ಪ್ರದರ್ಶನಗಳಲ್ಲಿ ಇವರಿಗೆ ವೇಷ ಮಾಡುವ ಅವಕಾಶವೂ ಸಿಕ್ಕಿತ್ತು.
ಎಂಟನೇ ತರಗತಿಯ ವಿದ್ಯಾರ್ಥಿಯಾಗಿರುವಾಗ ರುಕ್ಮಾಂಗದ ಚರಿತ್ರೆ ಪ್ರಸಂಗದಲ್ಲಿ ಧರ್ಮಾಂಗದನಾಗಿ ರಂಗಪ್ರವೇಶ. ಒಂಭತ್ತನೇ ತರಗತಿಯಲ್ಲಿ ಓದುತ್ತಿರುವಾಗ ಅದೇ ಪ್ರಸಂಗದಲ್ಲಿ ಬಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದಿನ ವರ್ಷ ಕರ್ಣ ಪರ್ವ ಪ್ರಸಂಗದಲ್ಲಿ ಕರ್ಣ ಪಾತ್ರವನ್ನು ನಿರ್ವಹಿಸಿದ್ದರು. ಗುಂಡಿಬೈಲು ಸುಬ್ರಾಯ ಭಟ್ಟ ಮತ್ತು ಗುಡ್ಡೆಬಾಳು ಗೋವಿಂದ ಭಟ್ಟರಿಂದ ತರಬೇತಿ ಪಡೆದು ಶಾಲಾ ಪ್ರದರ್ಶನಗಳಲ್ಲಿ ಈ ಮೂರು ಪಾತ್ರಗಳನ್ನು ಮಾಡಿದ್ದರು. ಇವರ ನಿರ್ವಹಣೆಯನ್ನು ಎಲ್ಲರೂ ಮೆಚ್ಚಿಕೊಂಡ ಕಾರಣ ಮೇಳಕ್ಕೆ ಸೇರಬೇಕೆಂಬ ಆಸೆಯುಂಟಾಗಿತ್ತು.
ತಿರುಗಾಟ ನಡೆಸಬೇಕೆಂಬ ಆಸೆಯಿಂದ ಗುಂಡಬಾಳಾ ಮೇಳಕ್ಕೆ. ವೇಷಭೂಷಣಗಳನ್ನು ಧರಿಸಲು ಕಷ್ಟವಾಗಿ ಹತ್ತೇ ದಿನದಲ್ಲಿ ಮನೆಗೆ ಮರಳಿದ್ದರು. ಮುಂದಿನ ವರ್ಷ ಮಾಗೋಡು ರಾಮ ಹೆಗಡೆ ಅವರ ಜತೆ ಅಮೃತೇಶ್ವರೀ ಮೇಳಕ್ಕೆ. ಅಲ್ಲಿ ಪೀಠಿಕಾ ಸ್ತ್ರೀ ವೇಷ ನಿರ್ವಹಣೆ. ಅಲ್ಲಿ ಕೇವಲ ಹದಿಮೂರು ದಿನಗಳ ತಿರುಗಾಟ ನಡೆಸಿ ಮನೆಗೆ ಮರಳಿದ್ದರು. ಬಳಿಕ ಏಳು ವರ್ಷಗಳ ಕಾಲ ಮನೆಯಲ್ಲೇ ಇದ್ದು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಸಮಯದಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ ಅಪರೂಪಕ್ಕೆ ಭಾಗವಹಿಸುತ್ತಿದ್ದರು.
1982ರಲ್ಲಿ ಮೇಳದ ತಿರುಗಾಟದಲ್ಲಿ ಮತ್ತೆ ತೊಡಗಿಸಿಕೊಳ್ಳುವ ನಿರ್ಧಾರ. ಹಡಿನಬಾಳಾ ಶ್ರೀ ಸತ್ಯ ಹೆಗಡೆಯವರ ನಾಯಕತ್ವದ ಗುಂಡಬಾಳಾ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಮೇಳಕ್ಕೆ ತೆರಳುವಾಗ ಮೂರೂರು ಶ್ರೀ ರಾಮ ಹೆಗಡೆಯವರು ಒಡ್ಡೋಲಗ ವೇಷಗಾರಿಕೆಗೆ ಬೇಕಾದ ವೇಷಭೂಷಣಗಳನ್ನು ಇವರಿಗೆ ಹಣ ತೆಗೆದುಕೊಳ್ಳದೇ ನೀಡಿದ್ದರು. ಆ ವರ್ಷ ಧರ್ಮರಾಯ, ದೇವೇಂದ್ರ ಮೊದಲಾದ ಒಡ್ಡೋಲಗದ ಪಾತ್ರಗಳನ್ನು ನಿರ್ವಹಿಸಿ ಅನುಭವವನ್ನು ಗಳಿಸಿದ್ದರು. ಈ ಸಮಯದಲ್ಲಿ ಶ್ರೀ ಪ್ರಭಾಕರ ಚಿಟ್ಟಾಣಿ ಅವರು ಒಡ್ಡೋಲಗದ ವೇಷಗಳಲ್ಲಿ ಅನುಭವಿಯಾಗಿ ಆ ಸ್ಥಾನವನ್ನು ಅರ್ಹತೆಯಿಂದ ಪಡೆದುಕೊಂಡಿದ್ದರು.
1983ರಲ್ಲಿ ಪಳ್ಳಿ ಶ್ರೀ ಸೋಮನಾಥ ಹೆಗ್ಡೆ ಮತ್ತು ಶ್ರೀ ಬಿ.ವಿ. ಶೆಟ್ಟರ ಸಂಚಾಲಕತ್ವದ ಅಮೃತೇಶ್ವರೀ ಟೆಂಟ್ ಮೇಳದಲ್ಲಿ ಒಡ್ಡೋಲಗ ವೇಷಧಾರಿಯಾಗಿ ವ್ಯವಸಾಯ. 1984ರಲ್ಲಿ ಪುರ್ಲೆ ರಾಮಚಂದ್ರ ಹೆಗಡೆ ಅವರ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ 5 ವರ್ಷ ವ್ಯವಸಾಯ. ಈ ಮೇಳದಲ್ಲಿ ಕಪ್ಪೆಕೆರೆ ಸುಬ್ರಾಯ ಭಾಗವತ, ನೆಬ್ಬೂರು ನಾರಾಯಣ ಭಾಗವತ, ಕೊಳಗಿ ಅನಂತ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಾಲ್ಕೋಡು ಗಣಪತಿ ಹೆಗಡೆ, ಕುಂಜಾಲು ರಾಮಕೃಷ್ಣ, ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ, ತೀರ್ಥಹಳ್ಳಿ ಗೋಪಾಲ ಆಚಾರ್ಯ, ಮೊದಲಾದವರ ಒಡನಾಟವು ದೊರೆತಿತ್ತು.
ಬಳಿಕ ಆರು ವರ್ಷಗಳ ಕಾಲ ಶ್ರೀ ಶುಂಠಿ ಸತ್ಯನಾರಾಯಣ ಭಟ್ಟರ ಸಂಚಾಲಕತ್ವದ ಬಚ್ಚಗಾರು ಮೇಳದಲ್ಲಿ ವ್ಯವಸಾಯ. ಇಲ್ಲಿ ಕೆರೆಮನೆ ಮಹಾಬಲ ಹೆಗಡೆ, ಕೊಳಗಿ ಅನಂತ ಹೆಗಡೆ, ಶಿರಳಗಿ ಭಾಸ್ಕರ ಜೋಶಿ, ಕುಂಜಾಲು ರಾಮಕೃಷ್ಣ, ಮಂಟಪ ಪ್ರಭಾಕರ ಉಪಾಧ್ಯ, ಕೊಳಗಿ ಕೇಶವ ಹೆಗಡೆ ಮೊದಲಾದವರ ಒಡನಾಟವು ದೊರೆತಿತ್ತು. ಬಳಿಕ ಒಂದು ವರ್ಷ ಕುಮಟಾ ಗೋವಿಂದ ನಾಯ್ಕ್ ಅವರ ಕುಮಟಾ ಮೇಳದಲ್ಲಿ ವ್ಯವಸಾಯ. ಬಳಿಕ ಎರಡು ವರ್ಷ ಕಿಶನ್ ಕುಮಾರ್ ಹೆಗ್ಡೆ ಸಂಚಾಲಕತ್ವದ ಬಚ್ಚಗಾರು ಮೇಳದಲ್ಲಿ ತಿರುಗಾಟ. ಬಳಿಕ ಕೃಷ್ಣ ನಾಯ್ಕ್ ನಾಯಕತ್ವದ ಶಿರಸಿ ಮಾರಿಕಾಂಬಾ ಮೇಳದಲ್ಲಿ ವ್ಯವಸಾಯ ಮಾಡಿ ತಿರುಗಾಟ ನಿಲ್ಲಿಸಿದ್ದರು.
ಬಳಿಕ ಎರಡು ವರ್ಷ ಮನೆಯಲ್ಲಿದ್ದು ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ೨೦೦೩ರಲ್ಲಿ ಮರಳಿ ಯಕ್ಷಗಾನ ಕಲೆಯು ಕೈಬೀಸಿ ಕರೆದಿತ್ತು. 2003ರಿಂದ ತೊಡಗಿ ಕಳೆದ ಹತ್ತೊಂಭತ್ತು ವರ್ಷಗಳಿಂದ ಗುಂಡಬಾಳಾ ಮೇಳವನ್ನು ಸಂಚಾಲಕನಾಗಿ, ಕಲಾವಿದನಾಗಿ ಮುನ್ನಡೆಸುತ್ತಿದ್ದಾರೆ. ತಾನು ಮೊತ್ತಮೊದಲು ತಿರುಗಾಟ ಮಾಡಿದ ಮೇಳವನ್ನು ಸಂಚಾಲಕನಾಗಿ ಮುನ್ನಡೆಸುವ ಭಾಗ್ಯವು ಶ್ರೀ ಪ್ರಭಾಕರ ಚಿಟ್ಟಾಣಿ ಅವರಿಗೆ ದೊರೆತಿತ್ತು.
ಶ್ರೀಯುತರು ಯಕ್ಷಗಾನ ಕಲಾ ವ್ಯವಸಾಯಿಯಾಗಿಯೂ ಸಾಂಸಾರಿಕವಾಗಿಯೂ ತೃಪ್ತರು. ಇವರ ಪತ್ನಿ ಶ್ರೀಮತಿ ಸುಧಾ. ಇವರು ಗೃಹಣಿ. ಪ್ರಭಾಕರ ಚಿಟ್ಟಾಣಿ, ಸುಧಾ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ನಾಗರಾಜ ಪ್ರಭಾಕರ ಹೆಗಡೆ ಬೆಂಗಳೂರಿನಲ್ಲಿ ಉದ್ಯೋಗಿ. ಕಿರಿಯ ಪುತ್ರ ಶ್ರೀ ಗಣೇಶ ಪ್ರಭಾಕರ ಹೆಗಡೆ ಕೃಷಿಕರು. ಶ್ರೀ ಪ್ರಭಾಕರ ಹೆಗಡೆ ಚಿಟ್ಟಾಣಿ ಅವರಿಗೆ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಇನ್ನಷ್ಟು ಕಲಾವ್ಯವಸಾಯವು ನಡೆಯುವಲ್ಲಿ ಅವರಿಗೆ ಕಲಾಮಾತೆಯ ಅನುಗ್ರಹವು ದೊರೆಯಲಿ ಎಂಬ ಹಾರೈಕೆಗಳು.
ನೀವು ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಟೀಕೆ ಮಾಡಬಹುದು.ರಾಜಕೀಯದವರನ್ನು, ಸಿನಿಮಾದವರನ್ನು, ಉದ್ಯಮಿಗಳನ್ನು ಟೀಕೆ, ವಿಮರ್ಶೆಗಳನ್ನೂ ಮಾಡಬಹುದು. ಆದರೆ ಸ್ಥಳೀಯ ಜನರನ್ನು, ನಮ್ಮೊಂದಿಗೆ ಬೆರೆತು ಜೀವಿಸುತ್ತಿರುವವರನ್ನು, ಯಾವಾಗಲೂ ಮುಖ ನೋಡುತ್ತಿರುವವರನ್ನು ಟೀಕೆ ಮಾಡುವುದು ಅಷ್ಟು ಸುಲಭವಲ್ಲ.
ಯಾಕೆಂದರೆ, ಇಂದು ಟೀಕೆ,ವಿಮರ್ಶೆಗಳನ್ನು ಮಾಡುವುದು ಸುಲಭವಾದರೂ ನಾಳೆ ಮುಖ ನೋಡಿ ಮಾತನಾಡಬೇಕಾಗುವ ಸಂದರ್ಭ ಬಂದೆ ಬರುತ್ತದೆ. ದಾಕ್ಷಿಣ್ಯಕ್ಕೆ ಒಳಗಾಗಿಯೇ ಕೆಲವೊಮ್ಮೆ ಸುಮ್ಮನಿರಬೇಕಾಗುತ್ತದೆ. ಆದುದರಿಂದಲೇ ಸ್ಥಳೀಯ ಕಲೆಗಳಿಗೆ ಸಂಬಂಧಪಟ್ಟ ವ್ಯಕ್ತಿಗಳನ್ನೋ ಅಥವಾ ಪ್ರದರ್ಶನಗಳನ್ನೋ ವಿಮರ್ಶೆ ಮಾಡುವ ಮೊದಲು ಸ್ವಲ್ಪ ಯೋಚಿಸಬೇಕಾಗುತ್ತದೆ.
ಕೆಲವೊಂದು ಪತ್ರಿಕೆಗಳು ನಿಷ್ಪಕ್ಷಪಾತ ಎಂದು ಘೋಷಿಸಿಕೊಂಡರೂ ಅದಕ್ಕೆ ಹೇರಳವಾಗಿ ಜಾಹೀರಾತುಗಳನ್ನು ಒದಗಿಸುವ ಸಂಸ್ಥೆ ಅಥವಾ ವ್ಯಕ್ತಿಗಳ ಹುಳುಕುಗಳನ್ನು ಎತ್ತಿ ತೋರಿಸದೆ ಮೌನದ ಹಾದಿಯನ್ನು ಹಿಡಿಯುತ್ತವೆ. ಯಾಕೆಂದರೆ ಜಾಹೀರಾತುಗಳನ್ನು ಕಳೆದುಕೊಂಡರೆ ಆದಾಯ ಕುಸಿಯುವ ಭಯ!
ಮೇಲೆ, ಮೊದಲೇ ಹೇಳಿದಂತೆ ಯಕ್ಷಗಾನವೂ ಒಂದು ಸ್ಥಳೀಯ ಕಲಾಪ್ರಕಾರ ಆದುದರಿಂದ, ಇದರಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರೂ ಪರಿಚಿತರೇ ಆದುದರಿಂದ ಕೆಲವೊಮ್ಮೆ ವಿಮರ್ಶೆಗಳನ್ನು ಮಾಡದೆ ಮೌನವಾಗಿರಬೇಕಾಗುತ್ತದೆ ಎಂದು ನನಗೆ ವಿಮರ್ಶಕರೊಬ್ಬರು ಹೇಳಿದ್ದರು. ಹಾಗೆ ದಾಕ್ಷಿಣ್ಯಕ್ಕೆ ಒಳಗಾಗಿ ಸುಮ್ಮನಿರುವವರು ಹಲವಾರು ಮಂದಿ ಇದ್ದಾರೆ. ಒಮ್ಮೆ ಪರಿಚಿತರೊಬ್ಬರು ಹೀಗೆ ಸುಮ್ಮನೆ ಮಾತನಾಡುತ್ತಿರುವಾಗ ನಾನು ಯಕ್ಷಗಾನ ಕಲೆಯು, ಕಲೆಗಳಲ್ಲಿ ಅತ್ಯುತ್ಕೃಷ್ಟ ಸ್ಥಾನವನ್ನು ಪಡೆಯುತ್ತಿರುವ ಬಗ್ಗೆ ಹೇಳಿಕೊಂಡೆ.
ಅದಕ್ಕೆ ಅವರು “ಯಕ್ಷಗಾನ ಕಲೆ ಜನಪ್ರಿಯ ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ ಇತರ ಕಲೆಗಳಿಗಿಂತ ಶ್ರೇಷ್ಠ ಎಂದು ಹೋಲಿಕೆ ಮಾಡಬಾರದು. ಎಲ್ಲಾ ಕಲೆಗಳಿಗೂ ಅದರದ್ದೇ ಆದ ಮೌಲ್ಯವಿದೆ. ಕೆಲವರು ಸಿನಿಮಾದಲ್ಲಿ ಅಶ್ಲೀಲತೆಯಿದೆ. ಇನ್ನೂ ಕೆಲವು ಪೂರ್ವ,ಉತ್ತರದ ನೃತ್ಯಕಲೆಗಳಲ್ಲಿ ಅಶ್ಲೀಲ ಭಂಗಿಗಳಿವೆ ಎಂದು ಹೇಳುತ್ತಾರೆ. ಆದರೆ ಯಕ್ಷಗಾನದಲ್ಲಿಯೂ ಅಶ್ಲೀಲ ಎಂಬುದು ಬೇಕಾದಷ್ಟು ಇದೆ” ಎಂದು ಹೇಳಿದರು.
ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳನ್ನು ಪುರುಷರೇ ಮಾಡುತ್ತಿರುವುದರಿಂದ, ಹಾಗೂ ಒಂದು ವೇಳೆ ಈಗ ಸ್ತ್ರೀಯರೂ ಯಕ್ಷಗಾನದಲ್ಲಿ ಭಾಗಿಯಾಗುತ್ತಿದ್ದರೂ ಈ ಕಲೆಯಲ್ಲಿ ಮೈಮುಚ್ಚುವ ವೇಷಭೂಷಣಗಳಿರುವುದರಿಂದ ಅಶ್ಲೀಲತೆಗೆ ಅವಕಾಶ ಇಲ್ಲ ಎಂದು ನಾನು ವಾದಿಸಿದೆ.
ಅದಕ್ಕೆ ಅವರು ಒಂದು ದೀರ್ಘವಾದ ಉಪಾನ್ಯಾಸವನ್ನೇ ಕೊಟ್ಟರು ಉದಾಹರಣೆ ಸಹಿತ ವಾದವನ್ನು ಮುಂದಿಟ್ಟರು. ಅವರ ಮಾತುಗಳ ಸಾರಾಂಶ ಹೀಗಿತ್ತು.
“ಅಶ್ಲೀಲ ಎಂಬುದು ಯಕ್ಷಗಾನದಲ್ಲಿ ಬೇರೆಯೇ ಆದ ರೀತಿಯಲ್ಲಿ ಇದೆ. ಯಕ್ಷಗಾನದಲ್ಲಿ ಹೆಚ್ಚಾಗಿ ಕಥಾ ಸನ್ನಿವೇಶ ಮತ್ತು ಚಿತ್ರಣಗಳನ್ನು ಮಾತಿನಲ್ಲಿಯೇ ಹೊಸೆಯುತ್ತಾರೆ. ಈ ಮಾತುಗಳಲ್ಲಿಯೇ ಬೇಕಾದಷ್ಟು ದ್ವಂದ್ವಾರ್ಥ ಪದಗಳನ್ನು ಹೊಸೆಯುತ್ತಾರೆ. ಕೆಲವೊಮ್ಮೆ ನೇರವಾಗಿಯೇ ಹೇಳಿಬಿಡುತ್ತಾರೆ. ಅದು ಎಷ್ಟು ಅಶ್ಲೀಲ ಎಂದರೆ ಎದುರು ಕುಳಿತ ಹೆಣ್ಣುಮಕ್ಕಳು ತಲೆತಗ್ಗಿಸುವಷ್ಟು ಹೇಸಿಗೆಯಾಗಿರುತ್ತದೆ.
ಆ ಸನ್ನಿವೇಶ ಪ್ರಸಂಗ ಚಿತ್ರಿಸಿದ ಕವಿಯ ಭಾವನೆ ಇರಬಹುದು. ಆದರೆ ಇಂತಹಾ ಸನ್ನಿವೇಶ ಮತ್ತು ಮಾತುಗಳು ಅಗತ್ಯವೇ ಎಂದು ಯೋಚಿಸಬೇಕು. ಒಂದೆರಡು ಉದಾಹರಣೆಗಳನ್ನು ಹೇಳುತ್ತೇನೆ. ಪಂಚವಟಿ ಅಥವಾ ಶೂರ್ಪನಖಾ ಮಾನಭಂಗದ ಸನ್ನಿವೇಶದಲ್ಲಿ ಶೂರ್ಪನಖಿಯು ಲಕ್ಷ್ಮಣನಲ್ಲಿ ಹೇಳುವ ಮಾತು ಯಕ್ಷಗಾನ ಪ್ರಸಂಗ ಸಾಹಿತ್ಯದಲ್ಲಿ ಪದ್ಯದ ರೂಪದಲ್ಲಿ ಹೀಗೆ ಚಿತ್ರಣಗೊಂಡಿದೆ.
ನೆರೆ ಮನಸೆನ್ನ ಮೇಲಿಟ್ಟು । ಇಕೋ ಈ ಗುರುಕುಚ ಎರಡ ನೀ ಮುಟ್ಟು । ತೆರೆದ ಚೆಂದುಟಿಗೆ ಬಾಯಿಟ್ಟು । ಚಪ್ಪರಿಸು ಸುರತ ಸುಖಗೊಟ್ಟು ।।
ಇಲ್ಲಿ ಹೇಳಬೇಕಾದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳಲಾಗಿದೆ. ಈ ಪದ್ಯ ಈ ಸನ್ನಿವೇಶಕ್ಕೆ ಮತ್ತು ಶೂರ್ಪನಖಿಯ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದ ಹಾಗಿದೆ. ಶೂರ್ಪನಖಿಯಂತಹವಳು ಹೀಗೆ ಮಾತಾಡಲೇ ಬೇಕು. ಆದರೆ ಕೆಲವೊಮ್ಮೆ ಮಾಯಾ ಶೂರ್ಪನಖಿಯ ಪಾತ್ರ ನಿರ್ವಹಿಸಿದವರು ಈ ಪದ್ಯದಲ್ಲಿರುವುದಕ್ಕಿಂತಲೂ ಸ್ವಲ್ಪೇ ಹೆಚ್ಚೇ ಮಾತನಾಡಿದ್ದು ಉಂಟು ಎಂಬುದನ್ನು ಕೆಲವರು ಹೇಳುವುದನ್ನು ಕೇಳಿದ್ದೇನೆ.
ಆದರೆ ಈಗೀಗ ಈ ಪದ್ಯದಲ್ಲಿರುವ ಸಾಹಿತ್ಯವನ್ನು ಮನಗಂಡು ಭಾಗವತರು ಈ ಪದ್ಯವನ್ನು ಹೇಳದೆ ಬಿಡುವುದನ್ನು ನಾವು ಗಮನಿಸಬಹುದು. ಕೆಲವೊಮ್ಮೆ ಭಾಗವತರೇ ಈ ಪದ್ಯವನ್ನು ಹೇಳಲು ಮುಜುಗರಪಟ್ಟುಕೊಳ್ಳುತ್ತಾರೆ. ಇದೇ ಪ್ರಸಂಗದ ಇದಕ್ಕಿಂತ ಮೊದಲಿನ ಸನ್ನಿವೇಶದಲ್ಲಿ ಮಾಯಾ ಶೂರ್ಪನಖಿಗೆ ಶ್ರೀರಾಮಚಂದ್ರನು ಹೇಳುವ ಮಾತುಗಳು ಇನ್ನೊಂದು ಪದ್ಯದಲ್ಲಿ ಹೀಗಿದೆ.
ಒಂದು ಚೂರಿಗೆರಡು ಒರೆ। ಹೊಂದುವುದೆ ಪೇಳು|
ಈ ಸಾಲು ಸ್ವಲ್ಪ ಇರುಸುಮುರುಸನ್ನು ಉಂಟುಮಾಡುವ ಸಾಹಿತ್ಯದಿಂದ ಕೂಡಿದೆ. ವೀರನ ಖಡ್ಗದ ಒರೆ ಯಾವಾಗಲೂ ಒಂದೇ ಇರುತ್ತದೆ. ಅಂದರೆ ಸೈನಿಕನಲ್ಲಿರುವ ಒಂದು ಖಡ್ಗಕ್ಕೆ ಅಥವಾ ಕತ್ತಿಗೆ ಎರಡು ಒರೆ ಯಾಕೆ ಎಂಬರ್ಥದಲ್ಲಿ ಕೇಳುವ ಪದ್ಯ. ಯಾರು ಏನೇ ಸಮರ್ಥನೆಯನ್ನು ಕೊಡಲಿ, ಈ ಪದ್ಯದ ಅರ್ಥ ಹೇಳುವಾಗ ಹಲವಾರು ಅರ್ಥಧಾರಿಗಳು ಸ್ವಲ್ಪ ಮೇರೆಯನ್ನು ಮೀರಿ ಸಾಗುತ್ತಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪಾತ್ರಕ್ಕೆ ಇಂತಹಾ ಉದಾಹರಣೆಗಳನ್ನು ಕೊಡುವ ಪದ್ಯಗಳನ್ನು ಕೈಬಿಡಬೇಕು ಎಂದು ರಾಮನ ವ್ಯಕ್ತಿತ್ವವನ್ನು ಬಲ್ಲ ಹಲವರ ಅಂಬೋಣ.
ಆದರೂ ಪ್ರಸಂಗದಲ್ಲಿ ಉಂಟಲ್ಲ ಎಂದುಕೊಂಡು ಅರ್ಥ ಹೇಳಲೇ ಬೇಕಾಗುತ್ತದೆ ಎಂದು ಕಲಾವಿದರು ಹೇಳುತ್ತಾರೆ. ನಾವು ಎಷ್ಟೋ ಬಾರಿ ನಮಗೆ ಪ್ರಸಂಗವೇ ಆಧಾರ ಎಂದು ಮೂಲಕಥೆಗೆ ಅಪಚಾರ ಎಸಗಿದ ಉದಾಹರಣೆಗಳೂ ಉಂಟು. ಈ ಪದ್ಯಕ್ಕೆ ಕೆಲವೊಮ್ಮೆ ಒಂದೇ ಇರುವ ಕತ್ತಿಯನ್ನು ನೇತಾಡಿಸಲು ಎರಡು ಒರೆಯ ಅಗತ್ಯ ಇಲ್ಲ ಎಂದು ರಾಮನ ಪಾತ್ರಧಾರಿ ಹೇಳಿದಾಗ ಮಾಯಾ ಶೂರ್ಪನಖಿಯ ಪಾತ್ರಧಾರಿ “ಎರಡು ಒರೆಯು ಇದ್ದರೇನು? ಚೂರಿಯನ್ನು ಒಮ್ಮೆ ಆ ಒರೆಯಲ್ಲಿ, ಇನ್ನೊಮ್ಮೆ ಈ ಒರೆಯಲ್ಲಿ ಇಟ್ಟರಾಯಿತು” ಎಂದು ಅರ್ಥ ಹೇಳುವುದನ್ನೂ ಕೇಳಿದವರಿದ್ದಾರೆ.
ಇನ್ನೊಂದು ಸನ್ನಿವೇಶ ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ. ಇಲ್ಲಿ ಮೇನಕೆಯನ್ನು ವಿಶ್ವಾಮಿತ್ರ ಮೊದಲು ಕಾಣುವ ಸನ್ನಿವೇಶ.
ಈ ಪದ್ಯಕ್ಕೆ ವಿಶ್ವಾಮಿತ್ರ ಪಾತ್ರಧಾರಿಗಳಿಗೆ ಬಹಳಷ್ಟು ಮಾತನಾಡಿ ಪ್ರೇಕ್ಷಕರಿಗೆ ಮುಜುಗರವನ್ನು ತರಿಸುವ ಅವಕಾಶಗಳು ಉಂಟು. ಈ ಪದ್ಯದ ದುಂಡು ಎನ್ನುವ ಶಬ್ದಕ್ಕೆ ಎರಡು ಕೈಗಳಿಂದ ಅಭಿನಯವನ್ನೂ ಮಾಡುವವರೂ ಇದ್ದಾರೆ.
ಇನ್ನು ‘ಚಂದ್ರಾವಳಿ ವಿಲಾಸ’ ಎನ್ನುವ ಪ್ರಸಂಗ ಸಮಾಜಕ್ಕೆ ಏನು ಸಂದೇಶ ಕೊಡುತ್ತದೆ ಎಂದು ಅರ್ಥವಾಗುವುದೇ ಇಲ್ಲ. ಈ ಕಥೆಯೂ ಮೂಲದಲ್ಲಿಲ್ಲ ಎಂದು ಕೆಲವರು ವಾದಿಸುವುದನ್ನು ಕೇಳಿದ್ದೇನೆ. ಅದರ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ, ಕ್ಷಮಿಸಿ. ಇಂತಹಾ ಪ್ರಸಂಗಗಳನ್ನು ಪ್ರದರ್ಶಿಸದೆ ಇದ್ದರೆ ಒಳ್ಳೆಯದು.
ಯಕ್ಷಗಾನದಲ್ಲಿಯೂ ಅಶ್ಲೀಲತೆಗೆ ಎಡೆಕೊಡುವ ಇನ್ನೂ ಅನೇಕ ಸನ್ನಿವೇಶ, ಪ್ರಸಂಗಗಳಿವೆ. ಆದರೆ ಅದನ್ನು ಬಳಸಿಕೊಳ್ಳುವವರೂ ಇದ್ದಾರೆ. ಬಳಸಿಕೊಳ್ಳದ ಕಲಾವಿದರೂ ಇದ್ದಾರೆ. ಆದ್ದರಿಂದ ನಾವು ಸಿನಿಮಾ ಮತ್ತು ಇತರ ಕಲೆಗಳನ್ನು ಮಾತ್ರ ಆಕ್ಷೇಪಿಸದೆ ಟೀಕೆಟಿಪ್ಪಣಿಗಳನ್ನು ವಿಮರ್ಶಾತ್ಮಕವಾಗಿ ಮತ್ತು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸುವುದನ್ನು ಕಲಿಯಬೇಕು. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನೂ ಪುರುಷರೇ ನಿರ್ವಹಿಸುತ್ತಿದ್ದರೂ ರಂಗದಲ್ಲಿ ಅವರ ಆಕ್ಷೇಪಾರ್ಹವಾದ ಅಭಿನಯ, ಸನ್ನಿವೇಶಗಳೂ ಹಿಂದೆ ನಡೆದಿವೆ.
ಯಕ್ಷಗಾನ ಹೆಚ್ಚು ಜನರಿಗೆ ಮುಟ್ಟುವ ಸರಳವಾದ ಕಲೆ. ಸಾಮಾನ್ಯ ಮನುಷ್ಯರನ್ನೂ ಬೇಗನೆ ತಲುಪುತ್ತದೆ ಮತ್ತು ಅರ್ಥವಾಗುತ್ತದೆ. ಇದರಲ್ಲಿ ಸ್ಪಷ್ಟತೆ ಇರುವುದರಿಂದ ಜನಸಾಮಾನ್ಯರನ್ನು ಬೇಗನೆ ಆಕರ್ಷಿಸಿತು. ಹಾಗೆಂದು ಯಕ್ಷಗಾನದಲ್ಲಿಯೂ ಕೂಡಾ ಅಗತ್ಯವಿಲ್ಲದ ಸಂದರ್ಭಗಳನ್ನು ಕತ್ತರಿಸಿ ಅದನ್ನು ಇನ್ನೂ ಹೆಚ್ಚು ಸುಂದರಗೊಳಿಸಬಹುದು ಎಂಬುದೇ ಈ ಬರಹದ ಮೂಲ ಆಶಯ.
ಒಟ್ಟಿನಲ್ಲಿ ಹೇಳುವುದಾದರೆ ಯಕ್ಷಗಾನ ಎಂಬುದು ಈ ನಾಡಿಗೆ ಹಿಂದಿನವರು ಕೊಟ್ಟ ಅಪೂರ್ವ ಕೊಡುಗೆ. ಅದನ್ನು ಉಳಿಸಿ ಬೆಳೆಸುವುದು ಪ್ರಜ್ಞಾವಂತರಾದ ಪ್ರೇಕ್ಷಕ ಮತ್ತು ಕಲಾವಿದರ ಕೈಯಲ್ಲಿದೆ.
ಇವಿಷ್ಟನ್ನಲ್ಲದೆ ಅವರು ಇನ್ನಷ್ಟು ಉದಾಹರಣೆಗಳನ್ನು ಕೊಟ್ಟರು. ನಾನಿಷ್ಟನ್ನೇ ಬರೆದೆ. ಇದು ವಿಮರ್ಶೆ ಅಲ್ಲ, ಬರೀ ವಿಶ್ಲೇಷಣೆ ಅಷ್ಟೇ.
‘ನನಗೆ ಗಂಡು ಮಗು ಬೇಡ’ ಎಂದು 20 ದಿನಗಳ ಹಸುಳೆಯನ್ನು ತಾಯಿಯೊಬ್ಬಳು ಬಾವಿಗೆ ಎಸೆದಿದ್ದಾಳೆ. ಈ ಘಟನೆ ನಡೆದದ್ದು ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದಲ್ಲಿ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಕೂತ್ಕುಂಜ (Kuthkunja) ಗ್ರಾಮದ ಬಸ್ತಿಕಾಡು (bastikadu) ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಗುವನ್ನು ಬಾವಿಗೆ ಎಸೆದ ಕರುಣೆಯಿಲ್ಲದ ತಾಯಿ ಪವಿತ್ರ (Pavithra) ಎಂದು ಗುರುತಿಸಲಾಗಿದ್ದು, ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ.
ಆಕೆ ಮಗುವನ್ನು ಬಾವಿಗೆಸೆಯುವ ಹೊತ್ತಿನಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ವರದಿಗಳ ಪ್ರಕಾರ ಪವಿತ್ರಾಳಿಗೆ ಮೊದಲೊಂದು ಮದುವೆಯಾಗಿತ್ತು. ನಾಲ್ಕು ವರ್ಷಗಳ ಹಿಂದೆ ಆದ ಮದುವೆ ಪತಿ-ಪತ್ನಿಯರ ನಡುವಿನ ಸಾಮರಸ್ಯದ ಕೊರತೆಯಿಂದ ವಿಚ್ಛೇದನದಲ್ಲಿ ಕೊನೆಗೊಂಡಿತ್ತು.
ಆಮೇಲೆ ಒಂದು ವರ್ಷದ ಹಿಂದೆ ಇನ್ನೊಬ್ಬನನ್ನು ಮದುವೆಯಾಗಿದ್ದರು. ಎರಡು ತಿಂಗಳ ನಂತರ ಗರ್ಭಿಣಿಯಾಗಿದ್ದ ಪವಿತ್ರಾ ತಾಯಿ ಮನೆಗೆ ಬಂದು ವಾಸಿಸುತ್ತಿದ್ದರು. ಆಗಲೇ ಗರ್ಭಿಣಿಯಾಗಿದ್ದ ಸಮಯದಲ್ಲೇ ತನಗೆ ಹೆಣ್ಣು ಮಗುವೆಂದರೆ ಇಷ್ಟ ಎಂದು ಆಕೆ ಹೇಳುತ್ತಿದ್ದಳಂತೆ.
ಆ ಸಮಯದಲ್ಲಿ ಮಾನಸಿಕ ಖಿನ್ನತೆಗಾಗಿ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದರು. ಅಕ್ಟೊಬರ್ 10ರಂದು ಪ್ರಸವಿಸಿದ ಆಕೆ ಗಂಡು ಮಗು ಹುಟ್ಟಿದ ನಿರಾಸೆಯಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಇಷ್ಟವಿಲ್ಲದ ಗಂಡು ಮಗು ನನಗೆ ಬೇಡ ಎಂದು ಹೇಳಿ ಆಕೆ ಮಗುವನ್ನು ನಿನ್ನೆ ಬಾವಿಗೆಸೆದಿದ್ದಳು. ಸ್ಥಳೀಯರು ಕೂಡಲೇ ಮಗುವನ್ನು ಬಾವಿಯಿಂದ ಮೇಲಕ್ಕೆತ್ತಿ ಪಂಜ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ‘ಮಗು ಈಗಾಗಲೇ ಮೃತಪಟ್ಟಿದೆ’ ಎಂದು ವೈದ್ಯರು ಹೇಳಿದ್ದಾರೆ.
ಸ್ಥಳಕ್ಕೆ ಸುಬ್ರಹ್ಮಣ್ಯ ಪೊಲೀಸರು ಧಾವಿಸಿದ್ದು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಹ್ಯಾಲೋವೀನ್ ಹಬ್ಬಗಳ ಸಂದರ್ಭದಲ್ಲಿ ದೊಡ್ಡ ಜನಸಂದಣಿಯಿಂದ ಹತ್ತಿಕ್ಕಲ್ಪಟ್ಟ ನಂತರ ಕನಿಷ್ಠ 151 ಜನರು ಸತ್ತರು ಮತ್ತು 150 ಇತರರು ಗಾಯಗೊಂಡರು.
ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನಲ್ಲಿ ಹ್ಯಾಲೋವೀನ್ ಹಬ್ಬದ ಸಂದರ್ಭದಲ್ಲಿ ಕಿರಿದಾದ ರಸ್ತೆಯಲ್ಲಿ ಮುಂದಕ್ಕೆ ತಳ್ಳುತ್ತಿದ್ದ ದೊಡ್ಡ ಜನಸಮೂಹದಿಂದ ಹತ್ತಿಕ್ಕಲ್ಪಟ್ಟ ನಂತರ ಕನಿಷ್ಠ 151 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಇತರರು ಗಾಯಗೊಂಡಿದ್ದಾರೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ ಇಟಾವಾನ್ನ ವಿರಾಮ ಜಿಲ್ಲೆಯಲ್ಲಿ ನಡೆದ ಕಾಲ್ತುಳಿತದ ನಂತರ ತುರ್ತು ಕಾರ್ಯಕರ್ತರು ಗಾಯಾಳುಗಳನ್ನು ಸಿಯೋಲ್ನಾದ್ಯಂತ ಆಸ್ಪತ್ರೆಗಳಿಗೆ ಸಾಗಿಸುವುದನ್ನು ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸಿಯೋಲ್ನ ಯೋಂಗ್ಸಾನ್ ಅಗ್ನಿಶಾಮಕ ವಿಭಾಗದ ಮುಖ್ಯಸ್ಥ ಚೋಯ್ ಸಿಯೋಂಗ್-ಬೀಮ್ ಹೇಳಿದ್ದಾರೆ.
ಮೃತ 13 ಮಂದಿಯ ಶವಗಳನ್ನು ಆಸ್ಪತ್ರೆಗಳಿಗೆ ಕಳುಹಿಸಲಾಗಿದ್ದು, ಉಳಿದ ಶವಗಳು ಇನ್ನೂ ಬೀದಿಯಲ್ಲಿವೆ ಎಂದು ಅವರು ಹೇಳಿದರು. ಸಿಯೋಲ್ನ ಪ್ರಮುಖ ಪಾರ್ಟಿ ಸ್ಥಳವಾದ ಹ್ಯಾಮಿಲ್ಟನ್ ಹೋಟೆಲ್ ಬಳಿಯ ಕಿರಿದಾದ ಅಲ್ಲೆಯಲ್ಲಿ ದೊಡ್ಡ ಜನಸಮೂಹವು ಮುಂದಕ್ಕೆ ತಳ್ಳಲು ಪ್ರಾರಂಭಿಸಿದ ನಂತರ ಜನರು ಕಾಲ್ತುಳಿತದಿಂದ ಹತ್ತಿಕ್ಕಲ್ಪಟ್ಟರು ಎಂದು ನಂಬಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ದಕ್ಷಿಣ ಕೊರಿಯಾದ ಸಿಯೋಲ್ನಲ್ಲಿ ಹ್ಯಾಲೋವೀನ್ ಆಚರಣೆಯ ಸಂದರ್ಭದಲ್ಲಿ ಹತ್ತಾರು ಜನರು ನಿಗೂಢ ಹೃದಯ ಸ್ತಂಭನ ಲಕ್ಷಣಗಳಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಸಿಯೋಲ್ನಲ್ಲಿ ಲಭ್ಯವಿರುವ ಎಲ್ಲಾ ಸಿಬ್ಬಂದಿ ಸೇರಿದಂತೆ ರಾಷ್ಟ್ರದಾದ್ಯಂತ 400 ಕ್ಕೂ ಹೆಚ್ಚು ತುರ್ತು ಕಾರ್ಯಕರ್ತರು ಮತ್ತು 140 ವಾಹನಗಳನ್ನು ಬೀದಿಗೆ ನಿಯೋಜಿಸಲಾಗಿದೆ.
ತುರ್ತು ರೋಗಿಗಳ ನಿಖರ ಸಂಖ್ಯೆಯನ್ನು ನಿರ್ಧರಿಸಲು ಅಧಿಕಾರಿಗಳು ಇನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ಪ್ರತ್ಯೇಕವಾಗಿ ಹೇಳಿಕೆಯಲ್ಲಿ ತಿಳಿಸಿದೆ. ದೃಶ್ಯದಿಂದ ಟಿವಿ ದೃಶ್ಯಗಳು ಮತ್ತು ಫೋಟೋಗಳು ಭಾರೀ ಪೊಲೀಸ್ ಉಪಸ್ಥಿತಿ ಮತ್ತು ತುರ್ತು ಕೆಲಸಗಾರರನ್ನು ಸ್ಟ್ರೆಚರ್ಗಳಲ್ಲಿ ಸ್ಥಳಾಂತರಿಸುವ ನಡುವೆ ಆಂಬ್ಯುಲೆನ್ಸ್ ವಾಹನಗಳು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿರುವುದನ್ನು ತೋರಿಸಿದೆ.
ತುರ್ತು ಕೆಲಸಗಾರರು ಮತ್ತು ಪಾದಚಾರಿಗಳು ಬೀದಿಗಳಲ್ಲಿ ಬಿದ್ದಿರುವ ಜನರ ಮೇಲೆ ಸಿಪಿಆರ್ ಅನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ. ಒಂದು ವಿಭಾಗದಲ್ಲಿ, ಅರೆವೈದ್ಯರು ನೀಲಿ ಕಂಬಳಿಗಳ ಅಡಿಯಲ್ಲಿ ಚಲನರಹಿತವಾಗಿ ಮಲಗಿರುವ ಒಂದು ಡಜನ್ ಅಥವಾ ಹೆಚ್ಚಿನ ಜನರ ಸ್ಥಿತಿಯನ್ನು ಪರಿಶೀಲಿಸುತ್ತಿರುವುದು ಕಂಡುಬಂದಿದೆ.
ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು, ಹ್ಯಾಲೋವೀನ್ ಹಬ್ಬಗಳಿಗಾಗಿ ಜನರ ಗುಂಪೊಂದು ನೆರೆದಿದ್ದ ಇಟಾವೊನ್ನ ಬೀದಿಗಳಲ್ಲಿ ಸೇರಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಲಾಗಿದೆ ಎಂದು ಹೇಳಿದರು. ಘಟನೆಯ ವಿವರಗಳು ಇನ್ನೂ ತನಿಖೆಯಲ್ಲಿದೆ ಎಂದು ಅಧಿಕಾರಿಯು ಹೇಳಿದರು.
ಅಪರಿಚಿತ ಸೆಲೆಬ್ರಿಟಿಯೊಬ್ಬರು ಅಲ್ಲಿಗೆ ಭೇಟಿ ನೀಡಿರುವುದನ್ನು ಕೇಳಿದ ನಂತರ ಹೆಚ್ಚಿನ ಸಂಖ್ಯೆಯ ಜನರು ಇಟಾವಾನ್ ಬಾರ್ಗೆ ಧಾವಿಸಿದ ನಂತರ ಕ್ರಷ್ ಸಂಭವಿಸಿದೆ ಎಂದು ಕೆಲವು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಸ್ಥಳೀಯ ಮಾಧ್ಯಮಗಳು ಹೇಳುವಂತೆ ಸುಮಾರು 100,000 ಜನರು ಹ್ಯಾಲೋವೀನ್ ಹಬ್ಬಗಳಿಗಾಗಿ ಇಟಾವಾನ್ ನ ಸಣ್ಣ ಸಣ್ಣ ಬೀದಿಗಳಲ್ಲಿ ಸೇರಿದ್ದಾರೆ.
Ready to provide any support: US on South Korea stampede as death toll rises to 149
#SouthKorea | Morning visuals from the spot of the deadly stampede in Seoul that broke out during Halloween festivities yesterday leaving 149 dead and injuring scores of people till now
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸುತ್ತಿರುವ ವಿಶಿಷ್ಟ ಅರ್ಥಪೂರ್ಣ ಕಾರ್ಯಕ್ರಮ ‘ಅರ್ಥಾಂತರಂಗ’ 14ನೇ ಸರಣಿಯು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಇಂದು (ದಿನಾಂಕ 30.10.2022ರಂದು) ನಡೆಯಲಿದೆ.
ಇಂದು ದಿನಾಂಕ 30.10.2022ರ ಆದಿತ್ಯವಾರ ಬೆಳಗ್ಗೆ 9 ಘಂಟೆಯಿಂದ ಆರಂಭವಾಗಲಿರುವ ಈ ‘ಅರ್ಥಾಂತರಂಗ – 14’ ಕಾರ್ಯಕ್ರಮದಲ್ಲಿ ‘ತಾಳಮದ್ದಳೆಯಲ್ಲಿ ಕರ್ಣಪರ್ವ’ ಎಂಬ ಬಗ್ಗೆ ಸಂವಾದ ನಡೆಯಲಿದೆ.
ಅರ್ಥಾಂತರಂಗ ಕಾರ್ಯಕ್ರಮವು ಈ ವರೆಗೆ 13 ಭಾಗಗಳನ್ನು ಕಂಡಿದೆ.
14ನೇ ಕಾರ್ಯಕ್ರಮವಾಗಿ ಖ್ಯಾತ ಪ್ರಸಂಗಕರ್ತೃ ಗೇರುಸೊಪ್ಪೆ ಶಾಂತಪ್ಪಯ್ಯ ಅವರ ‘ಕರ್ಣಪರ್ವ’ (ಕರ್ಣಾರ್ಜುನರ ಕಾಳಗ) ಪ್ರಸಂಗದ ಪ್ರಾತ್ಯಕ್ಷಿಕೆ ಸಹಿತ ಕಾರ್ಯಾಗಾರವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಆ ದಿನ ನಡೆಸಲಾಗುವುದು.
ಕಾರ್ಯಕ್ರಮದ ಸಂಪೂರ್ಣ ವಿವರಗಳಿಗೆ ಕಾರ್ಯಕ್ರಮದ ಆಹ್ವಾನಪತ್ರಿಕೆಯ ಚಿತ್ರಗಳನ್ನು ನೋಡಿ
ಶೈಕ್ಷಣಿಕ ಹಾಗೂ ಕೌಟುಂಬಿಕ ಜೀವನವನ್ನು ಹೊಂದಾಣಿಕೆ ಮಾಡಿಕೊಂಡು ನಡೆಸುವ ಜೀವನ ಮಾನವನ ಬದುಕಿನಲ್ಲಿ ಅತ್ಯಮೂಲ್ಯ ಎಂದು ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೆ.ಆರ್. ಗೋಪಾಲಕೃಷ್ಣ ಹೇಳಿದರು.
ಅವರು ಪೆರ್ನಾಜೆ ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜಿನ 1991-92ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ನಿವೃತ್ತ ಗುರುಗಳ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಮನುಷ್ಯನ ಹೃದಯ ದೇವಾಲಯ ಸಮಾನ. ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಸಮಾಜ ಮತ್ತು ಜನರು ನಮ್ಮನ್ನು ಗುರುತಿಸುತ್ತಾರೆ. ಸಮಾಜದಲ್ಲಿ ಗುರು ಮತ್ತು ಶಿಷ್ಯರ ನಡುವೆ ಬಂಧುತ್ವ ಇರಬೇಕು. ಆಗ ಗುರು ಮತ್ತು ಶಿಷ್ಯರ ಜೀವನ ಪರಿಪೂರ್ಣವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಶಿಕ್ಷಕಿ ಶ್ರೀಮತಿ ಸರೋಜಿನಿ ನಾಗಪ್ಪಯ್ಯ ಶುಭ ಹಾರೈಸಿ ಹಿರಿಯ ವಿದ್ಯಾರ್ಥಿಗಳು ಮಾಡುತ್ತಿರುವ ಈ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲರಾದ ಶ್ರೀ ಮಂಟಯ್ಯ ಮಾತನಾಡಿ ಕಿರಿಯರು ಹಿರಿಯರ ನಡೆ-ನುಡಿಗಳನ್ನು ನೋಡಿ ಅನುಸರಿಸುತ್ತಾರೆ. ಹಿರಿಯರು ತೋರಿಸಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಈ ವರ್ಷ ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಸಮಾಜ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಚಂದ್ರಮುಖಿ ಹಾಗೂ ಕಛೇರಿ ಸಹಾಯಕ ಸಿಬ್ಬಂದಿ ಶ್ರೀಮತಿ ಚಿತ್ರಾವತಿ ಇವರನ್ನು ಶಾಲು ಹೊದಿಸಿ, ಹಾರ, ಹಣ್ಣು ಹಂಪಲುಗಳನ್ನು ಸಮರ್ಪಿಸಿ ಗೌರವಿಸಲಾಯಿತು. ಶ್ರೀಮತಿ ತೇಜಕುಮಾರಿ ಮತ್ತು ಶ್ರೀಮತಿ ನಳಿನಿ ರೈ ಸನ್ಮಾನಿತರ ಪರಿಚಯ ಮಾಡಿದರು.
ಈ ಸಂದರ್ಭದಲ್ಲಿ ಸತತವಾಗಿ 47 ಬಾರಿ ರಕ್ತದಾನ ಮಾಡಿದ ಸದ್ರಿ ವಿದ್ಯಾರ್ಥಿ ಬಳಗದ ಶ್ರೀ ಪದ್ಮನಾಭ ರೈ ಅರೆಪ್ಪಾಡಿ, ಹಾಗೂ ಪ್ರಸ್ತುತ ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ಪ್ರಶಸ್ತಿ ಪುರಸ್ಕೃತ ಆರೋಗ್ಯ ಸಹಾಯಕಿ ಶ್ರೀಮತಿ ಸರಸ್ವತಿ ಇವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ವಿದ್ಯಾರ್ಥಿ ಬಳಗದ ಪರವಾಗಿ ಶ್ರೀ ದಿನೇಶ್ ಅಡ್ಕಾರು, ಶ್ರೀ ಈಶ್ವರ ಉಳಿತ್ತಾಯ, ಶ್ರೀ ಪುಷ್ಪರಾಜ್, ಶ್ರೀ ರಮೇಶ್ ರಾವ್ ಮತ್ತು ವೆಂಕಟೇಶ್ ಪ್ರಸಾದ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀ ಪ್ರಕಾಶ್ ವಾಗ್ಲೆ ಪ್ರಾರ್ಥಿಸಿದರು. ಶ್ರೀ ಜಯಪ್ರಕಾಶ್ ಬೈತಡ್ಕ ಸ್ವಾಗತಿಸಿ, ಶ್ರೀ ನವೀನ್ ರೈ ಬಿಜಳ ವಂದಿಸಿದರು. ಶ್ರೀ ಹರೀಶ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕಿ ಶ್ರೀಮತಿ ಸುಕನ್ಯ, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಜಾತ ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ 1991-92ನೇ ಸಾಲಿನ ವಿದ್ಯಾರ್ಥಿ ಬಳಗದ ಪರವಾಗಿ ಸಹ ಭೋಜನ ಏರ್ಪಡಿಸಲಾಯಿತು.
ಕಾರ್ಯಕ್ರಮಕ್ಕೆ ಹಾಜರಿದ್ದ ಹಿರಿಯ ವಿದ್ಯಾರ್ಥಿಗಳು ತಮ್ಮ ಕೈಲಾದ ರೀತಿಯಲ್ಲಿ ಸಹಕಾರ ನೀಡುವ ಭರವಸೆಯೊಂದಿಗೆ ಸಂಸ್ಥೆಯ ಅಭಿವೃದ್ಧಿ ನಿಧಿಗೆ ದೇಣಿಗೆಯನ್ನು ಸಂಗ್ರಹಿಸಿ ಪ್ರಾಂಶುಪಾಲರ ಮೂಲಕ ಹಸ್ತಾಂತರಿಸಲಾಯಿತು.