Saturday, August 1, 2026
Home Blog Page 116

ಚಿನ್ನದ ನಾಣ್ಯಗಳು ದೊರೆಯುವ ಎಟಿಎಂ ಯಂತ್ರ – ಭಾರತದ ಮೊದಲ ಗೋಲ್ಡ್ ಎಟಿಎಂ ಮೆಷೀನ್ ಹೈದರಾಬಾದ್ ನಲ್ಲಿ 

ಭಾರತದಲ್ಲಿ ಮೊದಲ ಬಾರಿಗೆ   ಚಿನ್ನದ ನಾಣ್ಯಗಳು ದೊರೆಯುವ ಎಟಿಎಂ ಯಂತ್ರವನ್ನು ಪರಿಚಯಿಸಲಾಗಿದೆ. 

ಹೈದರಾಬಾದ್ ನಗರದಲ್ಲಿ ಸ್ಥಾಪಿಸಲಾದ ಚಿನ್ನದ ನಾಣ್ಯಗಳನ್ನು ವಿತರಿಸುವ ನೈಜ-ಸಮಯದ ಚಿನ್ನದ ಎಟಿಎಂ ನ್ನು ಉದ್ಘಾಟಿಸಲಾಗಿದೆ. ಇದು (ಕಂಪೆನಿ) ಗೋಲ್ಡ್ಸಿಕ್ಕಾ ಅವರ ಸಾಹಸೋದ್ಯಮವಾಗಿದ್ದು, ಗ್ರಾಹಕರು ಎಟಿಎಂ ಯಂತ್ರದಿಂದ ಚಿನ್ನವನ್ನು ಖರೀದಿಸಬಹುದು.

0.5-100 ಗ್ರಾಂ ನಡುವಿನ 24-ಕ್ಯಾರೆಟ್ ಚಿನ್ನದ ನಾಣ್ಯಗಳನ್ನು ಯಂತ್ರದ ಮೂಲಕ ವಿತರಿಸಲಾಗುತ್ತದೆ ಎಂದು ಗೋಲ್ಡ್ಸಿಕ್ಕಾ ಕಂಪೆನಿಯ ಉಪಾಧ್ಯಕ್ಷ ಪ್ರತಾಪ್, ಹೇಳಿದ್ದಾರೆ.

ಈ ಎಟಿಎಂ ಯಂತ್ರದಲ್ಲಿ ಅಂತರ್ಗತ ಕ್ಯಾಮೆರಾ, ಎಚ್ಚರಿಕೆ ವ್ಯವಸ್ಥೆ, ಬಾಹ್ಯ ಸಿಸಿಟಿವಿ ಕ್ಯಾಮೆರಾಗಳಂತಹ ಸುರಕ್ಷತಾ ಕ್ರಮಗಳಿವೆ. ಪ್ರತಿ ಎಟಿಎಂ ಯಂತ್ರವು 5 ಕೆಜಿ ಚಿನ್ನವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಗ್ರಾಹಕರ ಅನುಕೂಲಕ್ಕಾಗಿ ನಾವು ಗ್ರಾಹಕ ಬೆಂಬಲ ತಂಡವನ್ನು ಸಹ ಹೊಂದಿದ್ದೇವೆ ಎಂದು ಪ್ರತಾಪ್, ಉಪಾಧ್ಯಕ್ಷ, ಗೋಲ್ಡ್ಸಿಕ್ಕಾ ಅವರು ಹೇಳಿದ್ದಾರೆ.

‘ಅನ್ವೇಷಣಾ-2022’ ಸಮಾರೋಪ
ಅಂಬಿಕಾ ನೆಲ್ಲಿಕಟ್ಟೆ ಚಾಂಪಿಯನ್, ನಿಂತಿಕಲ್ಲು ಕೆ.ಎಸ್. ಗೌಡ ಪಿ.ಯು ರನ್ನರ್ ಅಪ್

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯವು ಪಿ.ಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಅಂತರ್‌ಕಾಲೇಜು ಸಾಂಸ್ಕೃತಿಕ ಹಾಗೂ ಸೃಜನಶೀಲ ಸ್ಪರ್ಧೆ ‘ಅನ್ವೇಷಣಾ-2022’ರಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ನಿಂತಿಕಲ್ಲು ಕೆ.ಎಸ್. ಗೌಡ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.


ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದ ಶ್ರೀ ಶಂಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಭಾರತ ದೇಶ ಕಲೆ, ಸಂಸ್ಕ್ರತಿ, ಸಂಗೀತ, ಆರೋಗ್ಯ, ಆಹಾರ ಪದ್ದತಿಯ ಮೂಲಕ ವಿಶ್ವದಲ್ಲೇ ಭಿನ್ನವಾಗಿ ಗುರುತಿಸಿಕೊಂಡಿದೆ.

ಸಾವಿರಾರು ವರ್ಷಗಳಿಂದ ಮಹನೀಯರ ಶ್ರಮದ ಫಲವಾಗಿ ನಾವು ಇಂದು ಉತ್ತಮ ಜೀವನವನ್ನು ಗಳಿಸಿದ್ದು, ದೇಶದ ಪರಿಕಲ್ಪನೆ ಅರಿತುಕೊಂಡು ದೇಶವನ್ನು ಉನ್ನತ ಮಟ್ಟಕ್ಕೆ ಏರಿಸಲು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ಹಳ್ಳಿಗಳ ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ ಎಂದರು.


ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸಾಮಾನ್ಯ. ಬಹುಮಾನ ಕೆಲವರು ಮಾತ್ರ ಪಡೆಯಲು ಸಾಧ್ಯ. ಆದರೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪಡೆದ ಅನುಭವ ಹೆಚ್ಚಿನ ಸಾಧನೆ ಮಾಡಲು ಸ್ಪೂರ್ತಿಯಾಗಲಿದೆ. ವಿದ್ಯಾರ್ಥಿಗಳು ಭ್ರಷ್ಟಾಚಾರ ಹಾಗೂ ಸ್ವಾರ್ಥ ರಹಿತ ನಾಯಕತ್ವದ ಗುಣ ಬೆಳೆಸಿಕೊಂಡು ರಾಷ್ಟ್ರ ವನ್ನು ಆಳುವ ನಾಯಕರಾಗಬೇಕು ಎಂದು ಕಿವಿಮಾತು ಹೇಳಿದರು.


ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊ0ಡರು. ಅನ್ವೇಷಣಾ-2022ರ ಸಂಯೋಜಕ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ವಂದಿಸಿದರು.


ಬಹುಮಾನ ವಿತರಣೆ:
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯ: ಮನೀಷ್ ಬೈಲಾಡಿ ಹಾಗೂ ಅದ್ವೀಶ್ ರೈ ಮುಖ ವರ್ಣನೆಯಲ್ಲಿ ಪ್ರಥಮ, ನವ್ಯೋತ್ಪನ್ನ ಅನಾವರಣದಲ್ಲಿ ನಾಗರತ್ನ ಎ. ಕಿಣಿ ಹಾಗೂ ಸಿಂಧೂರ್ ಡಿ.ಕೆ. ಪ್ರಥಮ, ಭಿತ್ತಿ ಪತ್ರಿಕೆ ತಯಾರಿಯಲ್ಲಿ ಶರಣ್ಯಾ ತೋಳ್ಪಾಡಿ ಹಾಗೂ ಶ್ರಿಯಾ ಭೋಜಮ್ಮ ಪ್ರಥಮ, ಸುಗಮ ಸಂಗೀತದಲ್ಲಿ ವೈಷ್ಣವಿ ಪಿ.ವಿ. ಪ್ರಥಮ, ಸೈ-ಫೈನಲ್ಲಿ ಶಿವಸ್ಕಂದ ಪ್ರಥಮ ಸ್ಥಾನ ಪಡೆದರು. ಬೆಂಕಿ ರಹಿತ ಅಡುಗೆಯಲ್ಲಿ ಅನನ್ಯಾ, ಅನುಶ್ರೀ ಡಿ.ಎಲ್. ಹಾಗೂ ಸಂಜನಾ ತಂಡ ದ್ವಿತೀಯ, ಟಿ.ವಿ ರಿಪೋರ್ಟಿಂಗ್‌ನಲ್ಲಿ ಸೇವಂತಿ ಕೆ.ಎ. ಹಾಗೂ ಚಂದು ಗೌಡ ಎಂ. ತಂಡ ದ್ವಿತೀಯ, ಸೈ-ಫೈನಲ್ಲಿ ರಿಷಿತಾ ಕೆ. ದ್ವಿತೀಯ ಸ್ಥಾನ ಗಳಿಸಿದರು.


ನಿಂತಿಕಲ್ಲು ಕೆ.ಎಸ್. ಗೌಡ ಪದವಿಪೂರ್ವ ಕಾಲೇಜು: ಟಿ.ವಿ. ವರದಿಗಾರಿಕೆಯಲ್ಲಿ ಅಬ್ದುಲ್ ರೆಹಮಾನ್ ಹಪೀಝ್ ಹಾಗೂ ಮೆಹರೂಫ್ ಬಿ. ತಂಡ ಪ್ರಥಮ, ನಿಧಿ ಶೋಧದಲ್ಲಿ ಜೀವನ್ ಹಾಗೂ ಶೋಭಿತ್ ಕುಮಾರ್ ಪ್ರಥಮ, ಗೀತ ಪ್ರಸ್ತುತಿಯಲ್ಲಿ ಪಿ. ಸಾಧನಾ ಶೆಟ್ಟಿ ದ್ವಿತೀಯ, ಮುಖ ವರ್ಣನೆಯಲ್ಲಿ ವರ್ಷಿಣಿ ಎಸ್. ಹಾಗೂ ವರ್ಷಾ ಬಿ. ತಂಡ ದ್ವಿತೀಯ, ನವ್ಯೋತ್ಪನ್ನ ಅನಾವರಣದಲ್ಲಿ ಪಾರಿತೋಷ್ ರೈ ಹಾಗೂ ರಿಫಾಸ್ ಶೇಕ್ ತಂಡ ದ್ವಿತೀಯ, ಭಾಷಣದಲ್ಲಿ ರಕ್ಷಾ ದ್ವಿತೀಯ ಸ್ಥಾನ ಪಡೆದರು.


ಸುಳ್ಯ ನೆಹರೂ ಮೆಮೋರಿಯಲ್ ಕಾಲೇಜು: ಯಶಸ್ ಎಂ. ಗೀತ ಪ್ರಸ್ತುತಿಯಲ್ಲಿ ಪ್ರಥಮ, ಭಿತ್ತಿ ಪತ್ರಿಕಾ ತಯಾರಿಯಲ್ಲಿ ಜಿ.ಎಂ. ಸೋಹನ್ ಹಾಗೂ ಅಖಿಲೇಶ್ ಕೆ. ತಂಡ ದ್ವಿತೀಯ, ಸುಗಮ ಸಂಗೀತದಲ್ಲಿ ನಿಶ್ವಿತಾ ಕೆ. ದ್ವಿತೀಯ ಸ್ಥಾನ ಗಳಿಸಿದರು.


ವಿಠಲ ಪದವಿಪೂರ್ವ ಕಾಲೇಜು, ವಿಟ್ಲ: ಅವಾಬಿ ಶಬ್ನ ಭಾಷಣದಲ್ಲಿ ಪ್ರಥಮ, ಬೆಂಕಿ ರಹಿತ ಅಡುಗೆಯಲ್ಲಿ ಎ.ಎಲ್. ಅಬಿನಾ, ಮಲ್ಲಿಕಾ ಹಾಗೂ ಸ್ಮಿತಾ ಕೆ. ತಂಡ ಪ್ರಥಮ ಸ್ಥಾನ ಗಳಿಸಿದರು.


ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯ: ಕಿಶೋರ್ ಗೌಡ ಹಾಗೂ ಶ್ರೀಶಾಂತ್ ಜಿ. ತಂಡ ರಸಪ್ರಶ್ನೆಯಲ್ಲಿ ಪ್ರಥಮ ಸ್ಥಾನ ಪಡೆದರು.
ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು: ಶ್ರೀನಿಧಿ ಎ. ಹಾಗೂ ಸಚಿನ್ ಯು.ಆರ್. ತಂಡ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದರು.


ಹೈಸ್ಕೂಲ್ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸೈ-ಫೈ ಐಕ್ಯೂ ಟೆಸ್ಟ್ನಲ್ಲಿ ಅಂಬಿಕಾ ಸಿಬಿಎಸ್‌ಇ ವಿದ್ಯಾಲಯದ ಪ್ರಿಯಾಂಶು ರಾವ್ ಹಾಗೂ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅನ್ವಿತಾ ಎನ್. ಜಂಟಿ ಪ್ರಥಮ ಸ್ಥಾನ ಪಡೆದರು. ಅಂಬಿಕಾ ಸಿಬಿಎಸ್‌ಇಯ ಇಶಾನ್ ಎಸ್. ಭಟ್ ದ್ವಿತೀಯ ಸ್ಥಾನ ಗಳಿಸಿದರು.

ದಿ|ಎ.ಕೆ.ನಾರಾಯಣ ಶೆಟ್ಟಿ, ಮಹಾಬಲ ಶೆಟ್ಟಿ ನೆನಪಿನಲ್ಲಿ ಯಕ್ಷಾಂಗಣ ಗೌರವ – ಅನುಭವದಿಂದ ಅರ್ಥಧಾರಿಗಳಾದ ಹಿರಿಯರು: ರೊ| ಪ್ರಕಾಶ್ ಕಾರಂತ

ಮಂಗಳೂರು: ‘ಯಕ್ಷಗಾನ ತಾಳಮದ್ದಳೆಯಲ್ಲಿ ಕೃಷಿ ಮಾಡಿದ ಬಹುತೇಕ ಹಿರಿಯರು ಶಾಲಾ-ಕಾಲೇಜು ಕಲಿತು ವಿದ್ವಾಂಸರಾದವರಲ್ಲ. ಅವರು ಅನುಭವದಿಂದಲೇ ಅರ್ಥಧಾರಿಗಳಾದವರು. ಫರಂಗಿಪೇಟೆ ಪರಿಸರದಲ್ಲಿ ತಾಳಮದ್ದಳೆ ಕೂಟಗಳನ್ನು ಸಂಘಟಿಸಿ, ಕಿರಿಯರಿಗೆ ಮಾರ್ಗದರ್ಶನ ನೀಡಿದವರು ಎ.ಕೆ. ನಾರಾಯಣಶೆಟ್ಟರು. ಅವರ ಬಳಿಕ ಅದನ್ನು ಮುಂದುವರಿಸಿದವರು ಎ.ಕೆ ಮಹಾಬಲ ಶೆಟ್ಟರು’ ಎಂದು ರೋಟರಿ ಜಿಲ್ಲೆ 3181 ರಾಜ್ಯಪಾಲರಾದ ರೊ|ಎನ್. ಪ್ರಕಾಶ್ ಕಾರಂತ್ ಹೇಳಿದ್ದಾರೆ.

          ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನವೇದಿಕೆ ‘ಯಕ್ಷಾಂಗಣ ಮಂಗಳೂರು’  ವತಿಯಿಂದ ಮಂಗಳೂರು ವಿ.ವಿ. ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಸಪ್ತ ವಿಜಯ: ಯಕ್ಷಗಾನ ತಾಳಮದ್ದಳೆ ಸಪ್ತಾಹ – 2022’ ಹತ್ತನೇ ವರ್ಷದ ನುಡಿ ಹಬ್ಬದ ಅಂಗವಾಗಿ ಜರಗಿದ ದಿ. ಎ.ಕೆ. ನಾರಾಯಣಶೆಟ್ಟಿ ಮತ್ತು ಎ.ಕೆ ಮಹಾಬಲ ಶೆಟ್ಟಿ ಸಂಸ್ಮರಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ದಿ.ನಾರಾಯಣ ಶೆಟ್ಟಿಯವರ ಧರ್ಮಪತ್ನಿ 93ರ ಹರೆಯದ ಕಾವೇರಿ ಎನ್.ಶೆಟ್ಟಿ ಅವರು ಸಂಸ್ಮರಣ ಜ್ಯೋತಿ ಬೆಳಗಿದರು.

ಕೆ.ಕೆ.ಪೂಂಜಾ ಸನ್ಮಾನ:

     ಹಿರಿಯ ಸಮಾಜ ಸೇವಕ ಮತ್ತು ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಅಧ್ಯಕ್ಷ ಕೆ.ಕೆ.ಪೂಂಜಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಮಹೇಶ್ ಮೋಟಾರ್ಸ್ ಮಾಲಕ ಎ.ಕೆ.ಜಯರಾಮ ಶೇಖ ಅಭಿನಂದನಾ ಭಾಷಣ ಮಾಡಿದರು. ಕವಿ, ಸಂಘಟಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.

‘ಸಾಧಿತ – ಸಾದರ’ ಬಿಡುಗಡೆ :

      ಕಲಾವಿದ ನಂದಳಿಕೆ ಸುಬ್ರಹ್ಮಣ್ಯ ಬೈಪಾಡಿತ್ತಾಯರು ರಚಿಸಿದ ‘ಸಾಧಿತ – ಸಾದರ’ ಕೃತಿಯನ್ನು ಮುಂಡಪಳ್ಳ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಉದ್ಯಮಿ ಕೆ.ಕೆ.ಶೆಟ್ಟಿ ಅಹಮದ್ ನಗರ ಬಿಡುಗಡೆಗೊಳಿಸಿದರು.

      ಯಕ್ಷದ್ರುವ ಪಟ್ಲ ಪೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ  ಪ್ರೊ. ಶ್ರೀಪತಿ ಕಲ್ಲೂರಾಯ ಮತ್ತು ಪದ್ಮಾವತಿ ಜಯರಾಮ ಶೇಖ ಅತಿಥಿಗಳಾಗಿದ್ದರು

      ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣ ನುಡಿಯೊಂದಿಗೆ ಸ್ವಾಗತಿಸಿದರು ಸಂಚಾಲಕ ಕೆ ರವೀಂದ್ರ ರೈ ಕಲ್ಲಿ ಮಾರು ಕಾರ್ಯಕ್ರಮ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. 

ಉಪಾಧ್ಯಕ್ಷ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಮಿತಿ ಸದಸ್ಯರಾದ ಸಿದ್ದಾರ್ಥ ಅಜ್ರಿ, ಸುಜ್ಯೋತಿ ಶೇಖ ಮತ್ತು ದಿ.ನಾರಾಯಣ ಶೆಟ್ಟರ ಕುಟುಂಬಕರು ಉಪಸ್ಥಿತರಿದ್ದರು.

 ‘ವಿಕ್ರಮಾರ್ಜುನ  ವಿಜಯ’ ತಾಳಮದ್ದಳೆ:

           ‘ ಸಪ್ತ ವಿಜಯ’ ಸರಣಿಯ ಆರನೇ ದಿನ ‘ವಿಕ್ರಮಾರ್ಜುನ ವಿಜಯ’ ತಾಳಮದ್ದಳೆ ಪಟ್ಲ ಸತೀಶ್ ಶೆಟ್ಟಿ ಮತ್ತು ಹರೀಶ ಬಳಂತಿ ಮೊಗರು ಅವರ ಭಾಗವತಿಕೆಯಲ್ಲಿ ಜರಗಿತು. ಜಿಲ್ಲೆಯ ಪ್ರಸಿದ್ಧ ಕಲಾವಿದರು ಅರ್ಥದಾರಿಗಳಾಗಿದ್ದರು.

ಉಪ್ಪಿನಂಗಡಿಯಲ್ಲಿ ನಿವೃತ್ತ ಯೋಧರಿಗೆ ಅಭಿನಂದನೆ ಮತ್ತು  ತಾಳಮದ್ದಳೆ


ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಭಾರತೀಯ ಸೇನೆಯ ನಿವೃತ್ತ ಯೋಧ ಹವಾಲ್ದಾರ್ ಎನ್. ವಿಶ್ವನಾಥ್ ಶೆಣೈ ಇವರ ಅಭಿನಂದನಾ ಕಾರ್ಯಕ್ರಮದ ಪ್ರಯುಕ್ತ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಸಂಯೋಜನೆಯಲ್ಲಿ ಕವಿ ವಾಮನ ಪುರೋಹಿತ ಕೊಯ್ಯುರು ವಿರಚಿತ ವೀರವರ್ಮ ವಿಜಯ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ  ಹಿಮ್ಮೇಳದಲ್ಲಿ ಮೋಹನ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥದಾರಿಗಳಾಗಿ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ,  ಪಾತಾಳ ಅಂಬಾ ಪ್ರಸಾದ್, ಭಾಸ್ಕರ ಬಾರ್ಯ, ಸಂಜೀವ ಪಾರೆಂಕಿ, ದಿವಾಕರ ಆಚಾರ್ಯ ನೇರಂಕಿ, ಬಾಸಮೆ ನಾರಾಯಣ ಭಟ್, ರಾಘವ  ಗೇರುಕಟ್ಟೆ , ವಿಜಯಕುಮಾರ್ ಕೊಯ್ಯೂರ್ , ದಿವಾಕರ ಆಚಾರ್ಯ ಗೇರುಕಟ್ಟೆ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಾಯೋಜಕರಾದ ಉಮೇಶ್ ಶೆಣೈ ಮತ್ತು ನಿವೃತ್ತ ಯೋಧ ಹವಾಲ್ದಾರ್ ವಿಶ್ವನಾಥ ಶೆಣೈ ಕಲಾವಿದರನ್ನು ಗೌರವಿಸಿದರು.

 ಮುಂಚಿತವಾಗಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು , ವಿಧಾನಪರಿಷತ್ ಸದಸ್ಯರಾದ ಪ್ರತಾಪ ಸಿಂಹ ನಾಯಕ್, ಕರ್ನಾಟಕ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ. ಚಂದಪ್ಪ ಮೂಲ್ಯ, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾಚಂದ್ರ ಮುಳಿಯ, ಉಪ್ಪಿನಂಗಡಿ ಸಿಎ ಬ್ಯಾಂಕಿನ ನಿರ್ದೇಶಕರಾದ ಶ್ಯಾಮಲ  ಶೆಣೈ, ಸಂಘದ ಸದಸ್ಯರಾದ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಶ್ರೀಪತಿ ಭಟ್ ಉಪ್ಪಿನಂಗಡಿ, ಸಂಜೀವ ಪಾರೆಂಕಿ ಉಪಸ್ಥಿತಿಯಲ್ಲಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ನಿವೃತ್ತಯೋಧ ವಿಶ್ವನಾಥ ಶೆಣೈ ಮತ್ತು ಅವರ ಪತ್ನಿ ಶ್ರೀಮತಿ ಶೆಣೈ ಯವರನ್ನು ಗೌರವಿಸಲಾಯಿತು.

 ಶ್ರೀ ಕಾಳಿಕಾಂಬಾ ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Power cut for 4 hours in SNCU ward last night – 4 Infants died in Chhattisgarh Ambikapur Medical College

4 babies died in medical college due to power cut.

Last night there was power cut for 4 hours in the SNCU ward of Chhattisgarh Ambikapur Medical College.

This resulted in the death of 4 babies in the SNCU ward.

“I have instructed the health department to form an investigation team. I am going to Ambikapur hospital to collect more information. After the investigation, the next course of action will be decided,” said the Chhattisgarh health minister.

More details are awaited.

ನಿನ್ನೆ ರಾತ್ರಿ SNCU ವಾರ್ಡ್‌ನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಡಿತ – ಅಂಬಿಕಾಪುರ ವೈದ್ಯಕೀಯ ಕಾಲೇಜಿನಲ್ಲಿ 4 ಶಿಶುಗಳು ಸಾವು

ವಿದ್ಯುತ್ ಕಡಿತ (ಪವರ್ ಕಟ್) ಸಂಭವಿಸಿ ವೈದ್ಯಕೀಯ ಕಾಲೇಜಿನಲ್ಲಿ 4 ಶಿಶುಗಳು ಸಾವನ್ನಪ್ಪಿದ ಘಟನೆ ಸಂಭವಿಸಿದೆ.  

ನಿನ್ನೆ ರಾತ್ರಿ ಛತ್ತೀಸ್ಗಢ ಅಂಬಿಕಾಪುರ ವೈದ್ಯಕೀಯ ಕಾಲೇಜಿನ  SNCU ವಾರ್ಡ್‌ನಲ್ಲಿ 4 ಗಂಟೆಗಳ ಕಾಲ ವಿದ್ಯುತ್ ಕಡಿತ ಉಂಟಾಗಿತ್ತು. ಇದರಿಂದಾಗಿ  SNCU ವಾರ್ಡ್‌ನಲ್ಲಿದ್ದ  4 ಶಿಶುಗಳ ಸಾವು ಸಂಭವಿಸಿದೆ.

“ತನಿಖಾ ತಂಡವನ್ನು ರಚಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದೇನೆ. ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಅಂಬಿಕಾಪುರ ಆಸ್ಪತ್ರೆಗೆ ಹೋಗುತ್ತಿದ್ದೇನೆ. ತನಿಖೆಯ ನಂತರ ಮುಂದಿನ ಕ್ರಮವನ್ನು ಖಚಿತಪಡಿಸಿಕೊಳ್ಳಲಾಗುವುದು” ಎಂದು ಛತ್ತೀಸ್ಗಢ ಅರೋಗ್ಯ ಸಚಿವರು ಹೇಳಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಮದುವೆ ಮಂಟಪದಲ್ಲಿ ಹಾರ ವಿನಿಮಯವಾದ ನಂತರ  ಹೃದಯಾಘಾತದಿಂದ ಕುಸಿದು ಬಿದ್ದ 21 ವರ್ಷದ ವಧು ಸಾವು

ಮದುವೆ ಮಂಟಪದಲ್ಲಿ ಹಾರ ವಿನಿಮಯವಾದ ನಂತರ ಹೃದಯಾಘಾತದಿಂದ ಕುಸಿದು ಬಿದ್ದ 21 ವರ್ಷದ ವಧು ಮೃತಪಟ್ಟಿದ್ದಾಳೆ

ಲಕ್ನೋ: ಮಲಿಹಾಬಾದ್‌ನಲ್ಲಿ ಮದುವೆ ವೇಳೆ ಕುಸಿದು ಬಿದ್ದ 21 ವರ್ಷದ ವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ. 21 ವರ್ಷದ ಶಿವಾಂಗಿ ಶರ್ಮಾ ತನ್ನ ಮದುವೆಯ ಸಮಯದಲ್ಲಿ ಹೃದಯ ಸ್ತಂಭನದಿಂದ ನಿಧನರಾದರು, ಕಳೆದ 15-20 ದಿನಗಳಿಂದ ಅಸ್ವಸ್ಥರಾಗಿದ್ದರು, ಜ್ವರದಿಂದ ಬಳಲುತ್ತಿದ್ದರು ಮತ್ತು ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು.

ಶನಿವಾರ, ಡಿಸೆಂಬರ್ 3 ರಂದು, ಲಕ್ನೋದ ಮಲಿಹಾಬಾದ್‌ನಲ್ಲಿ ಮದುವೆಯ ಸಂಭ್ರಮಾಚರಣೆ ಶೋಕಾಚರಣೆಗೆ ತಿರುಗಿತು, ಅಲ್ಲಿ ತನ್ನ 21 ರ ಹರೆಯದ ವಧು ವೇದಿಕೆಯಲ್ಲಿ ಹಾರ ವಿನಿಮಯದ ಸಮಯದಲ್ಲಿ ಕುಸಿದುಬಿದ್ದು ಸಾವನ್ನಪ್ಪಿದಳು. ಪ್ರಾಥಮಿಕ ವರದಿಗಳ ಪ್ರಕಾರ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಶುಕ್ರವಾರ ಸಂಜೆ ಲಕ್ನೋದ ಹೊರವಲಯದಲ್ಲಿರುವ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ರಾಜ್‌ಪಾಲ್ ಅವರ ಪುತ್ರಿ 21 ವರ್ಷದ ಶಿವಂಗಿ ಶರ್ಮಾ ಅವರ ವಿವಾಹವು ಶುಕ್ರವಾರ ನಿಗದಿಯಾಗಿತ್ತು ಮತ್ತು ವರನ ತಂಡವು ತಡವಾಗಿ ಸಂಜೆ ಆಗಮಿಸಿತು.

ಮದುವೆಯ ವಿಧಿವಿಧಾನಗಳ ನಂತರ, ವಧು ಒಂದು ವೇದಿಕೆಯ ಮೇಲೆ ಹತ್ತಿದರು, ವಧುವಿನ ಮಾಲೆ ವಿನಿಮಯಕ್ಕಾಗಿ ಕಾಯುತ್ತಿದ್ದರು. ಶಿವಾಂಗಿ ಅವಳಿಗೆ ಹಾರವನ್ನು ಹಾಕಿದ ನಂತರ ವರನ ಕುತ್ತಿಗೆಗೆ ಹಾರವನ್ನು ಹಾಕಿದಳು. ಹಾರ ವಿನಿಮಯದ ನಂತರ, ವೇದಿಕೆಯಲ್ಲಿ ವಧು-ವರರ ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಾಗ, ಅವರು ವೇದಿಕೆಯ ಮೇಲೆ ಕುಸಿದುಬಿದ್ದರು,

ವಧುವನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ನಂತರ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಯಿತು, ಆದರೆ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಹೃದಯಾಘಾತದಿಂದ ಶಿವಾಂಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ 15-20 ದಿನಗಳಿಂದ ಬಾಲಕಿ ಅಸ್ವಸ್ಥಳಾಗಿದ್ದು, ಆಕೆ ಜ್ವರದಿಂದ ಬಳಲುತ್ತಿದ್ದಳು ಎಂದು ವರದಿಯಾಗಿದೆ. ಆಕೆಯ ರಕ್ತದೊತ್ತಡ ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದ್ದರು, ಆದರೆ ಅವರು ಒಂದು ವಾರದ ಹಿಂದೆ ಚೇತರಿಸಿಕೊಂಡಿದ್ದಾರೆ. ಆದರೆ ಮದುವೆಯ ದಿನದಂದು ಆಕೆ ಮತ್ತೆ ಅಸ್ವಸ್ಥಳಾಗಿದ್ದು, ಆಕೆಯನ್ನು ಮಲಿಹಾಬಾದ್ ಸಿಎಚ್‌ಸಿಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಕಂಡುಬಂದಿದೆ.

ಔಷಧಿ ಕೊಟ್ಟು ಬಿಪಿ ನಾರ್ಮಲ್ ಆದಾಗ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮದುವೆ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ವಧುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ಶನಿವಾರ ನೆರವೇರಿಸಿದ್ದು, ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಈ ಪ್ರಕರಣದಲ್ಲಿ ಯಾವುದೇ ರೀತಿಯ ವಿಚಾರಣೆಯನ್ನು ಬಯಸುವುದಿಲ್ಲ ಎಂದು ಬೋಧ್ ಕುಟುಂಬಗಳು ಹೇಳಿದ್ದಾರೆ.

ಇಂದಿನಿಂದ ಪುತ್ತೂರಿನಲ್ಲಿ ಯಕ್ಷೋತ್ಸವ – ಹನುಮಗಿರಿ ಮೇಳದವರಿಂದ ಐದು ದಿನಗಳಲ್ಲಿ ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ

ಇಂದಿನಿಂದ ಪುತ್ತೂರಿನಲ್ಲಿ ಯಕ್ಷೋತ್ಸವ ನಡೆಯಲಿದೆ. ಹನುಮಗಿರಿ ಮೇಳದವರಿಂದ ನಿರಂತರ ಐದು ದಿನಗಳ ಯಕ್ಷಗಾನ ಕಾರ್ಯಕ್ರಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ 

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ (ಹನುಮಗಿರಿ ಮೇಳ) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ನಿರಂತರ ಐದು ದಿನಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಕಾರ್ಯಕ್ರಮ ಈ ತಿಂಗಳ ಐದರಿಂದ ಅಂದರೆ ದಿನಾಂಕ 05.12.2022 ಸೋಮವಾರದಿಂದ ಆರಂಭಗೊಂಡು ದಿನಾಂಕ 09.12.2022ರ ಶುಕ್ರವಾರದ ವರೆಗೆ ನಡೆಯಲಿದೆ. ಯಕ್ಷಗಾನ ಪ್ರದರ್ಶನ 6 ಘಂಟೆಗೆ ಆರಂಭವಾಗಲಿದೆ.

ಈ ಐದು ದಿನಗಳಲ್ಲಿ ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ ಎಂಬ ಪ್ರಸಂಗಗಳನ್ನು ಆಡಿ ತೋರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 

ಹೆಚ್ಚಿನ ವಿವರಗಳಿಗೆ ಕರಪತ್ರವನ್ನು ನೋಡಿ. 

ಶಾಸಕಿಗೆ ಕಪಾಳಮೋಕ್ಷ ಮಾಡಿದ ಶಾಸಕ – ವಿರೋಧ ಪಕ್ಷದ ಶಾಸಕನಿಂದ ಆಡಳಿತ ಪಕ್ಷದ ಮಹಿಳೆಗೆ ಸಂಸತ್ತಿನಲ್ಲಿ ಹಲ್ಲೆ | ವೀಡಿಯೊ

ವಿರೋಧ ಪಕ್ಷದಲ್ಲಿರುವ ಪುರುಷ ಶಾಸಕರು ಸೆನೆಗಲ್ ಸಂಸತ್ತಿನಲ್ಲಿ ಮಹಿಳಾ ಶಾಸಕರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಬಜೆಟ್ ಅಧಿವೇಶನದಲ್ಲಿ ಸೆನೆಗಲ್ ಸಂಸತ್ತಿನಲ್ಲಿ ಶಾಸಕರೊಬ್ಬರು ಶಾಸಕಿ ಬೆನ್ನೋ ಬೊಕ್ ಯಾಕಾರ್ (BBY) ಗೆ ಕಪಾಳಮೋಕ್ಷ ಮಾಡಿದ್ದಾರೆ.

ವಿರೋಧ ಪಕ್ಷದ ಶಾಸಕರಾದ ಮಸ್ಸಾತಾ ಸಾಂಬ್ ಅವರು ಆಮಿ ಎನ್ಡಿಯಾಯೆ ಗ್ನಿಬಿ ಅವರನ್ನು ತಲುಪಿ ಸಂಸತ್ತಿನಲ್ಲಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ವೀಡಿಯೊ ಕ್ಲಿಪ್ ತೋರಿಸಿದೆ. ಘಟನೆಯ ನಂತರ ಶಾಸಕರ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು.

ಗ್ನಿಬಿ ಎಡವಿ ಬೀಳುವ ಮೊದಲು ಸಾಂಬ್‌ಗೆ ಕುರ್ಚಿ ಎಸೆಯುವುದು ಕಂಡುಬಂದಿದೆ. ಶಾಸಕರು ಇಬ್ಬರನ್ನೂ ಹೋರಾಟದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.

ಶಾಸಕರು ಮಾತಿನ ಚಕಮಕಿ ನಡೆಸಿದ್ದರಿಂದ ಅಧಿವೇಶನವನ್ನು ಸ್ಥಗಿತಗೊಳಿಸಲಾಯಿತು.

ಫಾರೂಕ್ ಮತ್ತು ಅವನಿಂದ ಹಲ್ಲೆಗೊಳಗಾದ ಸಂಧ್ಯಾ ನಾಲ್ಕು ವರ್ಷಗಳ ಕಾಲ ಸಂಬಂಧದಲ್ಲಿ (ಲಿವ್ ಇನ್ ರಿಲೇಶನ್), ಕೊಲ್ಲಂನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಮಾಹಿತಿ

ಫಾರೂಕ್ ಮತ್ತು ಅವನಿಂದ ಹಲ್ಲೆಗೊಳಗಾದ ಸಂಧ್ಯಾ ನಾಲ್ಕು ವರ್ಷಗಳ ಕಾಲ ಸಂಬಂಧದಲ್ಲಿ (ಲಿವ್ ಇನ್ ರಿಲೇಶನ್), ಕೊಲ್ಲಂನಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಮಾಹಿತಿ ಹೊರಬಿದ್ದಿದೆ. ಮೊನ್ನೆ ಸಂಧ್ಯಾ ನಡೆದುಕೊಂಡು ಹೋಗುತ್ತಿರುವಾಗ ಫಾರೂಕ್ ಕತ್ತಿಯಿಂದ ಆಕೆಯ ಕುತ್ತಿಗೆಯನ್ನು ಕಡಿಯಲು ಯತ್ನಿಸಿದ್ದನು.

ಕೊಚ್ಚಿ: ಬ್ಯೂಟಿ ಪಾರ್ಲರ್ ಉದ್ಯೋಗಿಯೊಬ್ಬಳನ್ನು ಆಕೆಯ ಮಾಜಿ ಪ್ರಿಯಕರನೇ ಕತ್ತಿಯಿಂದ ಕಡಿದಿರುವ ಘಟನೆಯಲ್ಲಿ ಕೆಲ ಮಹತ್ವದ ಮಾಹಿತಿ ಹೊರಬಿದ್ದಿದೆ.

ಉತ್ತರ ಭಾರತದ ಹುಡುಗಿ ಸಂಧ್ಯಾ ಎಂಬಾಕೆಯನ್ನು ಆಕೆಯ ಮಾಜಿ ಗೆಳೆಯ ಫಾರೂಕ್ ಕತ್ತಿಯಿಂದ ಕಡಿದಿದ್ದಾನೆ. ಉತ್ತರಾಖಂಡ ಮೂಲದ ಫಾರೂಕ್ ಮತ್ತು ಸಂಧ್ಯಾ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು. ಅವರು ಕೊಲ್ಲಂನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ಸಂಧ್ಯಾ ನಂತರ ಬೇರೊಬ್ಬರ ಜೊತೆ ಸಂಬಂಧ ಹೊಂದಿ ಫಾರೂಕ್ ನಿಂದ ದೂರವಾಗಿದ್ದರು. ಇದು ಆಕೆಯ ಮೇಲೆ ಹಲ್ಲೆ ನಡೆಸಲು ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ಬೆಳಗ್ಗೆ 11 ಗಂಟೆಗೆ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.

ಕಾಲೂರು ಆಜಾದ್ ರಸ್ತೆಯಲ್ಲಿ ಸಂಧ್ಯಾ ತನ್ನ ಸ್ನೇಹಿತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ಫಾರೂಕ್ ಆಕೆಯ ಕತ್ತಿಯಿಂದ ಆಕೆಯ ಕುತ್ತಿಗೆಗೆ ಹೊಡೆಯಲು ಯತ್ನಿಸಿದ್ದಾನೆ. ದಾಳಿಯನ್ನು ತಡೆಯಲು ಯತ್ನಿಸಿದಾಗ ಆಕೆಯ ಕೈಗಳಿಗೆ ಗಾಯಗಳಾಗಿವೆ.