Saturday, August 1, 2026
Home Blog Page 100

‘ಸುದರ್ಶನ ವಿಜಯ’ ತಾಳಮದ್ದಳೆ

ಪುತ್ತೂರು ನಗರದ ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಆಶ್ರಯದಲ್ಲಿ  ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಿಂಗಳ ಸರಣಿ ತಾಳಮದ್ದಳೆ ” ಸುದರ್ಶನ ವಿಜಯ” ದಿನಾಂಕ 20.3.2023 ರಂದು ಸಂಜೆ ನಡೆಯಿತು.

ಹಿಮ್ಮೇಳದಲ್ಲಿ ಆನಂದ ಸವಣೂರು , ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ , ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ , ಶ್ರೀಪತಿ ಭಟ್ ಉಪ್ಪಿನಂಗಡಿ , ಅಚ್ಯುತ ಪಾಂಗಣ್ಣಾಯ ಸಹಕರಿಸಿದರು.

ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ಮತ್ತು ದುಗ್ಗಪ್ಪ ಯನ್ (ವಿಷ್ಣು) ಸಂಜೀವ ಪಾರೆಂಕಿ (ಲಕ್ಷ್ಮೀ) ಗುಂಡ್ಯಡ್ಕ ಈಶ್ವರ ಭಟ್ (ಶತ್ರುಪ್ರಸೂದನ) ದಿವಾಕರ ಆಚಾರ್ಯ ಗೇರುಕಟ್ಟೆ (ಸುದರ್ಶನ) ಚಂದ್ರಶೇಖರ್ ಭಟ್ ಬಡೆಕ್ಕಿಲ‌ (ದೇವೇಂದ್ರ) ಭಾಗವಹಿಸಿದ್ದರು.

 ಟಿ. ರಂಗನಾಥ ರಾವ್ ಸ್ವಾಗತಿಸಿ ರಾಜಗೋಪಾಲ್ ಭಟ್ ಬನ್ನೂರು ವಂದಿಸಿದರು. ಮಂದಿರದ ಅಧ್ಯಕ್ಷ  ವಿಶ್ವನಾಥ ಗೌಡ, ಮೋಹನ್ ಜೈನ್, ಚಂದ್ರಶೇಖರ್ ಮೊದಲಾದವರು ಸಹಕರಿಸಿದರು. ಶೇಖರ್ ಬಿರ್ವ ಬನ್ನೂರು ತಾಳಮದ್ದಳೆ ಪ್ರಾಯೋಜಿಸಿದ್ದರು.

ಯಕ್ಷ ಕಲಾ ಅಕಾಡೆಮಿಯ ಯಕ್ಷಗಾನ ಉತ್ಸವ – ಕರ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ


ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆಗಳನ್ನು ಕೈಗೊಂಡು ಜನ ಮನ್ನಣೆಗಳಿಸಿದ ಬೆಂಗಳೂರಿನ ಯಕ್ಷಕಲಾ ಅಕಾಡೆಮಿ, ರಾಜ್ಯದ ಹಲವು ಭಾಗಗಳಲ್ಲಿ ಯಕ್ಷಗಾನ ಉತ್ಸವವನ್ನು ಕೈಗೊಂಡಿದೆ.

ಅಂತೆಯೇ ಇದೀಗ ಮಾರ್ಚ್ ತಿಂಗಳ ಯಕ್ಷಗಾನ ಉತ್ಸವವು ಸಾಸ್ತನ ಯಡಬೆಟ್ಟಿನ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ , ದಿನಾಂಕ 19-03-2022ರ ಸಂಜೆ 6.00ಕ್ಕೆ ಕರ್ಣಾರ್ಜುನ ಕಾಳಗ ಎಂಬ ಯಕ್ಷಗಾನದ ಮೂಲಕ ಸಂಪನ್ನಗೊಳ್ಳಲಿದೆ.

ಕೋಟ ವಿವೇಕ ಆಂಗ್ಲ ಮಾಧ್ಯಮದ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಾಮದೇವ ಐತಾಳ, ಉಪನ್ಯಾಸಕ ಶ್ರೀ ಸುಜಯೀಂದ್ರ ಹಂದೆ, ಯಕ್ಷಗಾನ ಪ್ರೋತ್ಸಾಹಕರಾದ ವೇದಮೂರ್ತಿ ಶ್ರೀ ವೆಂಕಪ್ಪಯ್ಯ ಭಟ್ಟ, ಯಕ್ಷಗಾನ ಕಲಾವಿದರಾದ ಡಾ| ವೈಕುಂಠ ಹೇರ್ಳೆಯವರು ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಕೃಷ್ಣಮೂರ್ತಿ ತುಂಗ, ಚಿತ್ಕಲಾ ಕೆ. ತುಂಗಾ, ಉದಯ ಹೊಸಾಳ, ರಾಘವೇಂದ್ರ ಹೆಗಡೆ, ರಾಮಕೃಷ್ಣ ಮಂದರ್ತಿ, ಸುಜಯೀಂದ್ರ ಹಂದೆ, ವಾಗ್ವಿಲಾಸ ಭಟ್ಟ, ಶಶಾಂಕ, ಶಶಿರಾಜ ಸೋಮಯಾಜಿ, ಸುಹಾಸ ಕರಬ, ಆದಿತ್ಯ ಹೊಳ್ಳ, ಸದಾಶಿವ ತುಂಗ, ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಕೆ. ಅನುಸೂಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅತಿಕಾಯ ಮೋಕ್ಷ’ ಯಕ್ಷಗಾನ ಪ್ರದರ್ಶನ

ಅಮೃತ ಭಾರತಿಗೆ ಕನ್ನಡದಾರತಿಯ ಅಂಗವಾಗಿ ಈಗಾಗಲೇ ಬಹಳಷ್ಟು ಯಕ್ಷಗಾನಗಳನ್ನು ಕಲಾಪೀಠ ಕೋಟ (ರಿ) ಸಂಸ್ಥೆಯು ಆಯೋಜಿಸಿದೆ.

ಹಾಗೆಯೇ ಇದೀಗ ಮಾರ್ಚ್ ತಿಂಗಳ ಯಕ್ಷಗಾನ ಉತ್ಸವವನ್ನು ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ದಿನಾಂಕ 18-03-2023 ರ ಶನಿವಾರ ಸಂಜೆ 6.30ಕ್ಕೆ ಅತಿಕಾಯ ಮೋಕ್ಷ ಎಂಬ ಯಕ್ಷಗಾನವನ್ನು ಪ್ರದರ್ಶಿಸಲಿದೆ.

ಮುಖ್ಯ ಅಭ್ಯಾಗತರಾಗಿ, ಆಕಾಶವಾಣಿ ಮಂಗಳೂರಿನ ನಿವೃತ್ತ ಅಧಿಕಾರಿಗಳಾದ ಶ್ರೀಯುತ ಸದಾನಂದ ಹೊಳ್ಳ, ಸಾಕೇತ ಸಂಸ್ಥೆಯ ಹಿರಿಯ ಭಾಗವತರಾದ ಶ್ರೀಯುತ ಕೆ.ಜಿ. ರಾಮರಾವ್, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀಯುತ ಕೃಷ್ಣಮೂರ್ತಿ ತುಂಗರವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಕಾರ್ಯದರ್ಶಿ ಶ್ರೀಯುತ ರಾಜಶೇಖರ ಹೆಬ್ಬಾರರವರು ಉಪಸ್ಥಿತಿಯಲ್ಲಿರುವರು.

ಶಶಿಧರ ಸೋಮಯಾಜಿ, ರವಿ ಮಡೋಡಿ, ಶಶಾಂಕ ಕಾಶಿ, ಆದಿತ್ಯ ಹೊಳ್ಳ, ಅನುಷ ಉರಾಳ, ಚಿತ್ಕಲಾ ಕೆ. ತುಂಗ, ಸುಹಾಸ ಕರಬ, ರಾಘವೇಂದ್ರ ಹೆಗಡೆ ಯಲ್ಲಾಪುರ, ಸುದೀಪ ಉರಾಳ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಕಲಾಪೀಠ ಸಂಸ್ಥೆಯ ಕಾರ್ಯದರ್ಶಿ ಶ್ರೀ. ಕೆ. ನರಸಿಂಹ ತುಂಗರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

‘ಶ್ರೀ ಕೃಷ್ಣ ದೇವರೆ ಲೀಲೆ’ ಯಕ್ಷಗಾನ ಬಯಲಾಟ – ಕಲಾವಿದ ಡಿ. ಮನೋಹರ್ ಕುಮಾರ್ ಅವರಿಗೆ ಸನ್ಮಾನ

0

ಮಂಗಳೂರು: ‘ಸಮಾಜದ ವಿವಿಧ ಬಗೆಯ ಸೇವಾ ಸಂಸ್ಥೆಗಳು ಕ್ರಿಯಾಶೀಲವಾಗಿ ತೊಡಗಿಕೊಂಡಿರುವುದು ಎಲ್ಲರೂ ಹೆಮ್ಮೆಪಡುವ ಸಂಗತಿ. ಇದರೊಂದಿಗೆ ನೃತ್ಯ,ನಾಟಕ, ಯಕ್ಷಗಾನ ಮುಂತಾದ ರಂಗಕಲೆಗಳಿಗೂ ಅವು ಪ್ರೋತ್ಸಾಹ ನೀಡುತ್ತಿರುವುದು ಸ್ತುತ್ಯರ್ಹ. ಏಕೆಂದರೆ ಕಲೆ ಮತ್ತು ಕಲಾವಿದರ ಪೋಷಣೆ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೇ ಆಗಿದೆ’ ಎಂದು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. 

        ಪದವು ಫ್ರೆಂಡ್ಸ್ ಕ್ಲಬ್ (ರಿ.) ವತಿಯಿಂದ ಶಕ್ತಿನಗರ ಸರಕಾರಿ ಶಾಲಾ ಮೈದಾನದಲ್ಲಿ ಜರಗಿದ ಕಳವಾರು ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರ ಯಕ್ಷಗಾನ ಬಯಲಾಟ ಸಂದರ್ಭ ಏರ್ಪಡಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಇಂದು ಯಕ್ಷಗಾನ ಈ ಮಟ್ಟಕ್ಕೆ ಬೆಳೆಯಲು ಅನೇಕ ಹಿರಿಯ ಕಲಾವಿದರ ಕೊಡುಗೆ ಕಾರಣ. ಅಂಥವರನ್ನು ಕರೆದು ಪುರಸ್ಕರಿಸುವುದು ಕಲಾ ಸೇವೆಯ ಶೇಷ್ಠ ಮಾದರಿ’ ಎಂದವರು ನುಡಿದರು.

ಡಿ.ಮನೋಹರ್ ಅವರಿಗೆ ಸನ್ಮಾನ:

      ಕಾರ್ಯಕ್ರಮದಲ್ಲಿ ಬಯಲಾಟ ಮೇಳದ ಹಿರಿಯ ಕಲಾವಿದ ತುಳು ಕನ್ನಡ ಪ್ರಸಂಗಗಳ ಪ್ರಬುದ್ಧ ವೇಷಧಾರಿ ಡಿ.ಮನೋಹರ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಅವರು ‘ಯಕ್ಷಗಾನ ಸೇವೆಯೊಂದಿಗೆ ಎಲೆಮರೆಯ ಕಲಾವಿದರ ಬದುಕಿಗೆ ಆಸರೆಯಾಗಿರುವ ಕೆಲವು ಬಯಲಾಟದ ಮೇಳಗಳು ಹಣವಂತರ ಬೆಂಬಲವಿಲ್ಲದೆ ತುಂಬಾ ಪ್ರಯಾಸದಿಂದ ತಿರುಗಾಟ ನಡೆಸುತ್ತಿವೆ. ಸೇವಾದಾರರು ಮತ್ತು ಸಂಘ ಸಂಸ್ಥೆಗಳು ಅವುಗಳನ್ನು ವಿಶೇಷವಾಗಿ ಪ್ರೋತ್ಸಾಹಿಸಬೇಕು’ ಎಂದರು.

         ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಲ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಹರೀಶ್ ಕೆ.ಶಕ್ತಿನಗರ ಉಪಸ್ಥಿತರಿದ್ದರು. ಸದಸ್ಯರಾದ ರವೀಂದ್ರ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಹರೀಶ್ ಜೋಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಬಾಳ, ಕಳವಾರು ಇವರಿಂದ ಗುರುಪುರ ಸುರೇಂದ್ರ ಮಲ್ಲಿ ನೇತೃತ್ವದಲ್ಲಿ ‘ಶ್ರೀ ಕೃಷ್ಣ ದೇವರೆ ಲೀಲೆ’ ತುಳು ಪೌರಾಣಿಕ ಯಕ್ಷಗಾನ ಬಯಲಾಟ ಜರಗಿತು.

‘ಶ್ರೀರಾಮ ಪರಂಧಾಮ’ ತಾಳಮದ್ದಳೆ ಮತ್ತು ದಿ| ವಿಜಯರಾಘವ ಪಡುವೆಟ್ನಾಯ ಮತ್ತು ದಿ| ಬಲಿಪ ನಾರಾಯಣ ಭಾಗವತರಿಗೆ ನುಡಿ ನಮನ

ಕರಾಡ ಬ್ರಾಹ್ಮಣ ಸಮಾಜ(ರಿ)ಬೆಳ್ತಂಗಡಿ ವತಿಯಿಂದ ಸೋಮಂತಡ್ಕದ ಸಮೃದ್ಧಿ ಕರಾಡ ಭವನದಲ್ಲಿ ದಿ. ವಿಜಯ ರಾಘವ ಪಡುವೆಟ್ನಾಯ ಮತ್ತು ದಿ. ಬಲಿಪ ನಾರಾಯಣ ಭಾಗವತರಿಗೆ ನುಡಿ ನಮನ ಕಾರ್ಯಕ್ರಮ ಜರಗಿತು.

ಸಾಮಾಜಿಕ ,ಧಾರ್ಮಿಕ ಸಾಂಸ್ಕೃತಿಕ ಮತ್ತು ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಡುವೆಟ್ನಾಯರು ಮತ್ತು ತೆಂಕುತಿಟ್ಟು ಯಕ್ಷಗಾನದಲ್ಲಿ ಆರು ದಶಕಗಳ ಕಾಲ ಕಲಾ ಸೇವೆ ಮಾಡಿ ಭಾಗವತ ಭೀಷ್ಮರಂದೇ ಖ್ಯಾತರಾದ ನಾರಾಯಣ ಭಾಗವತರ ಬಗ್ಗೆ ಧರ್ಮಸ್ಥಳದ ಜಮಾ ಉಗ್ರಾಣದ ನಿವೃತ್ತ  ಮುತ್ಸದ್ದಿ ಮತ್ತು ಕಲಾಸಂಘಟಕ ಭುಜಬಲಿ ಧರ್ಮಸ್ಥಳ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಅವರ ಸಾಧನೆಗಳನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.

ಪದ್ವೆಟ್ನಾಯರು ಸರಳತೆ ಮತ್ತು ಕಾರ್ಯ ಶೈಲಿಯಿಂದ ಗಳಿಸಿದ ಗೌರವವನ್ನು ಉಳಿಸಿ ಮುಂದುವರಿಸಲು ಪ್ರಯತ್ನಿಸುವುದಾಗಿ  ಅವರ ಪುತ್ರ ಉಜಿರೆ  ಜನಾರ್ದನ ದೇವಳದ ಅನುವಂಶಿಕ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ತಿಳಿಸಿ ಮೊದಲ  ಯಕ್ಷಜನ ಪ್ರಶಸ್ತಿಯನ್ನು ಬಲಿಪ ಭಾಗವತರಿಗೆ ಅವರ ಗೃಹದಲ್ಲಿಯೆ ಪ್ರದಾನಿಸಿ  ಕ್ಷೇತ್ರದ ವತಿಯಿಂದ ಗೌರವಿಸಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ. ಪ್ರದೀಪ್ ಕುಮಾರ್ ನಾವೂರು ಸಮಾಜ ಮತ್ತು ಕಲಾಸೇವೆಯಲ್ಲಿ ಮಹಾನ್ ಸಾಧನೆ ಮಾಡಿದ ಮಹನೀಯರಿಬ್ಬರ ಆದರ್ಶಗಳು ನಮಗೆ ದಾರಿದೀಪವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಬಲಿಪ ನಾರಾಯಣ ಭಾಗವತರ ಸಹೋದರಿ ವಿದ್ಯಾಭಟ್ ,ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ರಾವ್, ಯಕ್ಷಭಾರತಿ  ಅಧ್ಯಕ್ಷ ರಾಘವೇಂದ್ರ ಭೈಪಾಡಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಉಪನ್ಯಾಸಕಿ ಕಾವ್ಯ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಬಳಿಕ ವಿಷ್ಣು ಭಟ್ ಧರ್ಮಸ್ಥಳ ಇವರ ಪ್ರಾಯೋಜಕತ್ವದಲ್ಲಿ ಯಕ್ಷಭಾರತಿ ಕನ್ಯಾಡಿ ಸದಸ್ಯರಿಂದ ಶ್ರೀರಾಮ ಪರಂಧಾಮ ತಾಳಮದ್ದಳೆ ಜರಗಿತು.

ಭಾಗವತರಾಗಿ ಮಹೇಶ್ ಕನ್ಯಾಡಿ ಹಿಮ್ಮೇಳದಲ್ಲಿ ಶ್ರೇಯಸ್ ಪಾಳ೦ದೆ, ಸುಂದರ ದೇವಾಡಿಗ ಧರ್ಮಸ್ಥಳ ಅರ್ಥದಾರಿಗಳಾಗಿ ಸುರೇಶ್ ಕುದ್ರೆಂತ್ತಾಯ ಉಜಿರೆ, ಹರಿದಾಸ್ ಗಾಂಭೀರ್ ಧರ್ಮಸ್ಥಳ, ದಿವಾಕರ ಆಚಾರ್ಯ ಗೇರುಕಟ್ಟೆ, ಸದಾನಂದ ಮುಂಡಾಜೆ, ಶಶಿಧರ ಕನ್ಯಾಡಿ, ಭವ್ಯ ಹೊಳ್ಳ ಉಜಿರೆ ಭಾಗವಹಿಸಿದ್ದರು.

ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀಮತಿ ಮಮತಾ ವಿಷ್ಣು ಭಟ್ ಧರ್ಮಸ್ಥಳ ಮತ್ತು ಡಾ.ಪ್ರದೀಪ್ ಕುಮಾರ್ ನಾವೂರು ಇವರನ್ನು ಯಕ್ಷ ಭಾರತಿ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಇಂದು ಆಟ ಎಲ್ಲೆಲ್ಲಿ? (17.03.2023, ಶುಕ್ರವಾರ)

ಮೇಳಗಳ ಇಂದಿನ (17.03.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಗರ್ತಿಕೆರೆ ಅಮೃತ ಪದವಿಪೂರ್ವ ಕಾಲೇಜಿನ ಸಮೀಪ – ಶ್ರೀ ಧರ್ಮಸ್ಥಳ  ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ 

ಕಟೀಲು ಎರಡನೇ ಮೇಳ ==  ದೇವತಾ ಭಜನಾ ಮಂದಿರ, ದೇವಗಿರಿ ತಿಂಗಳಾಡಿ ಪುತ್ತೂರು 

ಕಟೀಲು ಮೂರನೇ ಮೇಳ==  ನಂದಿನಿ ಕಟ್ಟೆ ಬಳಿ, ಕಟೀಲು ಮಲ್ಲಿಗೆ ಅಂಗಡಿ ನಡುಗೋಡು 

ಕಟೀಲು ನಾಲ್ಕನೇ ಮೇಳ  == ಸುಜ್ಯೋತಿ’ ತಾಳಿಪಾಡಿ ಬೀಡುವಿನ ಬಳಿ 

ಕಟೀಲು ಐದನೇ ಮೇಳ == ಕೈಯೂರು ಕೆರೆಮನೆ ದೇಲಂತಬೆಟ್ಟು 

ಕಟೀಲು ಆರನೇ ಮೇಳ == ಶ್ರೀ ಕಟೀಲು ಕ್ಷೇತ್ರ , ಮಹಾಲಕ್ಷ್ಮಿ ಸದನ 

ಎದೆ ಹಾಲು ಕುಡಿಯುತ್ತಿರುವಾಗ ಉಸಿರುಗಟ್ಟಿ ಮಗು ಸಾವು – ಮನನೊಂದ ತಾಯಿ ಮತ್ತು ಇನ್ನೊಬ್ಬ ಮಗ ಬಾವಿಗೆ ಹಾರಿ ಆತ್ಮಹತ್ಯೆ

ನವಜಾತ ಶಿಶು ಎದೆಹಾಲು ಕುಡಿಯುತ್ತಿರುವಾಗ ಉಸಿರುಗಟ್ಟಿ ಸಾವನ್ನಪ್ಪಿದ ಬೆನ್ನಲ್ಲೇ ಮಹಿಳೆ ಹಾಗೂ ಆಕೆಯ ಹಿರಿಯ ಮಗ ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಇಡುಕ್ಕಿಯ ಉಪ್ಪುತಾರ ಪಂಚಾಯತ್‌ನ ಕೈತಪಥಲ್‌ನಲ್ಲಿ ಈ ಘಟನೆ ನಡೆದಿದೆ.

ಘಟನೆಯಿಂದ ಆಕೆ ನೊಂದಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ. ನಿನ್ನೆ ಮಗುವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು.

ಕೈತಪಾಠಾಲ್‌ನ ಲೀಜಾ (38) ಮತ್ತು ಆಕೆಯ ಏಳು ವರ್ಷದ ಮಗ ಬೆನ್ ಟಾಮ್ ಮೃತ ದುರ್ದೈವಿಗಳು. ಲಿಜಾ ಅಲಕೋಡ್ ಸರ್ವೀಸ್ ಕೋ ಆಪರೇಟಿವ್ ಬ್ಯಾಂಕ್ ಶಾಖಾ ವ್ಯವಸ್ಥಾಪಕಿಯಾಗಿದ್ದರು.

ಗುರುವಾರ ಬೆಳಗ್ಗೆ 6 ಗಂಟೆಗೆ ಈ ಘಟನೆ ನಡೆದಿದೆ. ಆಕೆಯ ಸಂಬಂಧಿಕರು ಚರ್ಚ್‌ಗೆ ತೆರಳಿದ ಬಳಿಕ ಆಕೆ ಕಠಿಣ ಕ್ರಮ ಕೈಗೊಂಡಿದ್ದಾಳೆ. ಚರ್ಚ್‌ನಿಂದ ಬಂದ ಬಳಿಕ ಸಂಬಂಧಿಕರು ನಡೆಸಿದ ಹುಡುಕಾಟದಲ್ಲಿ ಇಬ್ಬರೂ ಬಾವಿಯಲ್ಲಿ ಪತ್ತೆಯಾಗಿದ್ದಾರೆ.

ಯಕ್ಷಗಾನ ಗುರು ಕೇಶವ ಆಚಾರ್ಯರಿಗೆ ನೆರವು 

ಕಳೆದ ಒಂದು ದಶಕದಿಂದ ಯಕ್ಷಶಿಕ್ಷಣ ಟ್ರಸ್ಟ್ ನ ಅಭಿಯಾನದಲ್ಲಿ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವ ಆಚಾರ್ಯ ಇವರಿಗೆ ಎರಡು ತಿಂಗಳ ಹಿಂದೆ ಯಕ್ಷಗಾನ ತರಬೇತಿಯಿಂದ ಹಿಂತಿರುಗಿ ಮನೆಗೆ ಬರುವ ಸಂದರ್ಭದಲ್ಲಿ ವಾಹನ ಅಪಘಾತವಾಗಿ ಕುತ್ತಿಗೆಯ ಭಾಗದ ನರಕ್ಕೆ ತೀವ್ರವಾದ ಆಘಾತವಾಗಿ, ತೀರಾ ಅಸೌಖ್ಯದಲ್ಲಿದ್ದಾರೆ.

ಇವರಿಗೆ ಶಾಸಕರೂ, ಯಕ್ಷ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಕೆ.ರಘುಪತಿ ಭಟ್ 15-3-2023 ರಂದು ಹೇರಂಜೆಯಲ್ಲಿರುವ ಅವರ ಮನೆಗೆ ತೆರಳಿ ಟ್ರಸ್ಟ್ ವತಿಯಿಂದ ಒಂದು ಲಕ್ಷ ರೂಪಾಯಿ ವೈದ್ಯಕೀಯ ನೆರವನ್ನು ನೀಡಿದರು. ಮುಂದೆಯೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದರು. ಕಳೆದ ವರ್ಷ ನಾಲ್ಕುಶಾಲೆಗಳಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದ್ದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರ ಮತ್ತು ಉಡುಪಿ, ಬ್ರಹ್ಮಾವರದ ಸುತ್ತಮುತ್ತಲ ಹಲವಾರು ಸಂಘಗಳಲ್ಲಿ ನೃತ್ಯ ಗುರುಗಳಾಗಿ, ಭಾಗವತರಾಗಿ ಸೇವೆ ಸಲ್ಲಿಸುತ್ತಾ ಬಂದ ಕೇಶವಾಚಾರ್ಯರ ನಿಸ್ಪೃಹ ಸೇವೆಯನ್ನು ಟ್ರಸ್ಟ್ ಸದಾ ಸ್ಮರಿಸುತ್ತದೆ.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷರಾದ ಎಸ್. ವಿ.ಭಟ್, ವಿ.ಜಿ. ಶೆಟ್ಟಿ, ನಾರಾಯಣ ಎಂ. ಹೆಗಡೆ, ಬಿ. ಭುವನಪ್ರಸಾದ್ ಹೆಗ್ಡೆ, ನರಸಿಂಹ ತುಂಗಾ, ರಘುರಾಮ್ ಬೈಕಾಡಿ ಉಪಸ್ಥಿತರಿದ್ದರು.

ಆಚಾರ್ಯರ ಇಬ್ಬರು ಪುತ್ರಿಯರು (ಇಬ್ಬರೂ ಎಸ್. ಎಸ್.ಎಲ್.ಸಿ.ಯಲ್ಲಿ 95% ಕ್ಕಿಂತ ಹೆಚ್ಚು ಅಂಕಗಳಿಸಿದ್ದಾರೆ) ವಿದ್ಯಾಪೋಷಕ್‌ನಲ್ಲಿ ಫಲಾನುಭವಿಗಳಾಗಿದ್ದಾರೆ. ಇವರ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ವಿದ್ಯಾಪೋಷಕ್‌ ಭರಿಸುತ್ತದೆ ಎಂದು ಕಾರ್ಯದರ್ಶಿ ಮುರಳಿ ಕಡೆಕಾರ್ ಈ ಸಂದರ್ಭದಲ್ಲಿ ತಿಳಿಸಿದರು.

ಇಂದು ಆಟ ಎಲ್ಲೆಲ್ಲಿ? (16 – 03 – 2023, ಗುರುವಾರ) 

ಮೇಳಗಳ ಇಂದಿನ (16.03.2023) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ದೇವಂಗಿ ಬಾಣಂಕಿ – ಶ್ರೀ ಧರ್ಮಸ್ಥಳ  ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಕಲ್ಪವೃಕ್ಷ ಪೆರ್ಮುದೆ ಸೋಮನಾಥ ಧಾಮ – ಶ್ರೀ ದೇವಿ ಮಹಾತ್ಮೆ 

ಕಟೀಲು ಎರಡನೇ ಮೇಳ ==  ಕೇಬಿಲ್ಯ ಮನೆ, ಪಜೀರು ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಮೂರನೇ ಮೇಳ==  ಶ್ರೀ ಕಟೀಲು ಕ್ಷೇತ್ರ ಸರಸ್ವತಿ ಸದನ – ಶ್ರೀಕೃಷ್ಣ ಪಾರಿಜಾತ, ನರಕಾಸುರ ಮೋಕ್ಷ, ರತಿ ಕಲ್ಯಾಣ 

ಕಟೀಲು ನಾಲ್ಕನೇ ಮೇಳ  == ಪಡುಬಾಕ್ಯಾರು ಹೌಸ್ ಹೊಸಬೆಟ್ಟು ಮೂಡಬಿದ್ರಿ – ಶ್ರೀ ದೇವಿ ಮಹಾತ್ಮೆ 

ಕಟೀಲು ಐದನೇ ಮೇಳ == ಪೂವಳ ಕಡೇಶ್ವಾಲ್ಯ ವಯಾ ಮಾಣಿ ಬಂಟ್ವಾಳ – ಶ್ರೀ ದೇವಿ ಮಹಾತ್ಮೆ 

ಕಟೀಲು ಆರನೇ ಮೇಳ == ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ ==  ಕೊಲ್ಲೂರು ಸೇವೆ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==  ನಂದ್ರೊಳ್ಳಿ ಬೆಳ್ಳಾಲ 

ಶ್ರೀ ಮಾರಣಕಟ್ಟೆ ಮೇಳ ‘ಸಿ’ == ನಂದ್ರೊಳ್ಳಿ ಬೆಳ್ಳಾಲ

ಇಬ್ಬರಿಗೂ ತಿಳಿಸದೆ ಇಬ್ಬರನ್ನು ಮದುವೆಯಾದ ಸಾಫ್ಟ್ ವೇರ್ ಇಂಜಿನಿಯರ್ ಒಪ್ಪಂದ – ವಾರದ ಮೂರು ದಿನಗಳು ಮೊದಲ ಪತ್ನಿಯೊಂದಿಗೆ, ಮುಂದಿನ ಮೂರು ದಿನಗಳು ಇನ್ನೊಬ್ಬಳೊಂದಿಗೆ, ಭಾನುವಾರ ಗಂಡನಿಗೆ ಸ್ವಾತಂತ್ರ್ಯ!

28 ವರ್ಷದ ವ್ಯಕ್ತಿ ಮತ್ತು ಅವನು ಮದುವೆಯಾದ ಇಬ್ಬರು ಮಹಿಳೆಯರು (ಇಬ್ಬರಿಗೂ ಇನ್ನೊಂದು ಮದುವೆಯಾದ ಬಗ್ಗೆ ತಿಳಿದಿರಲಿಲ್ಲ) ಒಂದು ಅಸಾಮಾನ್ಯ ಒಪ್ಪಂದಕ್ಕೆ ಬಂದಿದ್ದಾರೆ, ಅವನು ತನ್ನ ಆಸ್ತಿ ಮತ್ತು ಸಮಯವನ್ನು ಇಬ್ಬರು ಹೆಂಡತಿಯರ ನಡುವೆ ಹಂಚುತ್ತಾನೆ. ಗಂಡ ವಾರದ ಮೊದಲ ಮೂರು ದಿನಗಳನ್ನು ಒಬ್ಬ ಹೆಂಡತಿಯೊಂದಿಗೆ, ಮುಂದಿನ ಮೂರು ದಿನಗಳನ್ನು ಇನ್ನೊಬ್ಬಳೊಂದಿಗೆ ಕಳೆಯಲು ಮತ್ತು ಭಾನುವಾರವನ್ನು ಸ್ವತಃ ಓರ್ವನೇ ಕಳೆಯಲು ಒಂದು ವಿಚಿತ್ರ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ.

ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ಒಪ್ಪಂದವನ್ನು ಮಾಡಲು ಸಲಹೆಗಾರರನ್ನು ನೇಮಿಸಿದ ನಂತರ ಬಂದ ಒಪ್ಪಂದದ ಪ್ರಕಾರ ನೋಯ್ಡಾದ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ತಿಂಗಳ ಸಂಬಳವನ್ನು ತನ್ನ ಇಬ್ಬರು ಹೆಂಡತಿಯರ ನಡುವೆ ಹಂಚುತ್ತಾರೆ. ಅವರು ಎರಡು ಫ್ಲಾಟ್‌ಗಳನ್ನು ಹೊಂದಿದ್ದಾರೆ ಮತ್ತು ಪ್ರತಿ ಪತ್ನಿ ಒಂದನ್ನು ಪಡೆಯುತ್ತಾರೆ. ಅವರು ಸೋಮವಾರದಿಂದ ಬುಧವಾರದವರೆಗೆ ಒಬ್ಬ ಹೆಂಡತಿಯೊಂದಿಗೆ ಮತ್ತು ಗುರುವಾರದಿಂದ ಶನಿವಾರದವರೆಗೆ ಇನ್ನೊಬ್ಬರೊಂದಿಗೆ ಕಳೆಯುತ್ತಾರೆ. ಭಾನುವಾರ , “ಅವನು ಯಾರೊಂದಿಗೂ ಬದುಕಲು ಬದ್ಧನಾಗಿಲ್ಲ” ಮತ್ತು ಎಲ್ಲಿಯಾದರೂ ವಾಸಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ.

ಒಂದು ವೇಳೆ ಅವನು ಈ ಒಪ್ಪಂದವನ್ನು ಉಲ್ಲಂಘಿಸಿದರೆ, ಮೊದಲ ಹೆಂಡತಿಯು ಪುರುಷನ ವಿರುದ್ಧ ನ್ಯಾಯಾಲಯಕ್ಕೆ ಹೋಗಬಹುದು ಎಂದು ಒಪ್ಪಂದದಲ್ಲಿ ತಿಳಿಸಲಾಗಿದೆ. ಖಚಿತವಾಗಿ ಹೇಳುವುದಾದರೆ, ದ್ವಿಪತ್ನಿತ್ವವು ಭಾರತದಲ್ಲಿ ಅಪರಾಧವಾಗಿದೆ (ಕೆಲವು ವಿನಾಯಿತಿಗಳೊಂದಿಗೆ), ಆದರೂ ಮೂವರಿಂದ ಬಂದ ಇಂತಹಾ ಒಪ್ಪಂದಗಳು ಜನರು ಶಿಕ್ಷೆಗೆ ಒಳಗಾಗುವುದನ್ನು ತಡೆಯುತ್ತದೆ.

ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಜನವರಿ 2023 ರಲ್ಲಿ ಗ್ವಾಲಿಯರ್ ಕೌಟುಂಬಿಕ ನ್ಯಾಯಾಲಯವು ನೇಮಿಸಿದ ಸಲಹೆಗಾರರಾದ ವಕೀಲ ಹರೀಶ್ ದಿವಾನ್ ಅವರ ಪ್ರಕಾರ ” ಇಂಜಿನಿಯರ್ ಒಬ್ಬರು ಮೇ 2018 ರಲ್ಲಿ 26 ವರ್ಷದ ಮಹಿಳೆಯನ್ನು ವಿವಾಹವಾದರು” ಎಂದು ಹೇಳಿದರು.

“ಅವರಿಬ್ಬರೂ ಗುರ್ಗಾಂವ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದರು. 2020 ರಲ್ಲಿ, ಮಹಿಳೆ ಗರ್ಭಿಣಿಯಾದಳು, ಮತ್ತು ಕೊರೋನಾ ಸಾಂಕ್ರಾಮಿಕ ಉಲ್ಬಣದಿಂದ, ಅವನು ಅವಳನ್ನು ಗ್ವಾಲಿಯರ್‌ನಲ್ಲಿರುವ ಅವಳ ಹೆತ್ತವರ ಮನೆಗೆ ಬಿಟ್ಟನು. “ಕೋವಿಡ್ 19 ಕಾರಣದಿಂದಾಗಿ, ಚಲನೆಯನ್ನು ನಿರ್ಬಂಧಿಸಲಾಗಿದೆ ಮತ್ತು ಪುರುಷನು ಮಹಿಳೆಯನ್ನು ತನ್ನ ಕುಟುಂಬದೊಂದಿಗೆ ಇರಲು ಕೇಳಿಕೊಂಡನು” ಎಂದು ದಿವಾನ್ ಹೇಳಿದರು.

2021 ರಲ್ಲಿ, ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಮಹಿಳೆಯನ್ನು ವಿವಾಹವಾದರು, ನಂತರ ಅವಳು ಸಹ ಸಂಬಂಧದ ನಂತರ ಅವನ ಮಗುವಿಗೆ ಗರ್ಭಿಣಿಯಾದಳು. “ಎರಡನೆಯ ಹೆಂಡತಿ ಜುಲೈ 2021 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಈ ಸಮಯದಲ್ಲಿ, ಅವನ ಮೊದಲ ಹೆಂಡತಿ ಪತಿಯ ಮನೆಗೆ ಹಿಂತಿರುಗಬೇಕೆಂದು ಬಯಸಿದಳು, ಆದರೆ ಅವನು ಅವಳನ್ನು ತಪ್ಪಿಸಲು ಪ್ರಾರಂಭಿಸಿದನು” ಎಂದು ದಿವಾನ್ ಹೇಳಿದರು.

ಜನವರಿ 2023 ರಲ್ಲಿ, ಅವರ ಮೊದಲ ಹೆಂಡತಿಯ ಕುಟುಂಬವು ಅವನನ್ನು ನೋಡಲು ನೋಯ್ಡಾಗೆ ಪ್ರಯಾಣ ಬೆಳೆಸಿತು ಮತ್ತು ಅವರು ಮಗುವನ್ನು ಹೊಂದಿರುವ ಇನ್ನೊಬ್ಬ ಹೆಂಡತಿಯೊಂದಿಗೆ ವಾಸಿಸುತ್ತಿದ್ದಾರೆಂದು ಕಂಡುಕೊಂಡರು. ವಾಗ್ವಾದದ ನಂತರ ಅವರು ನೋಯ್ಡಾದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಆದರೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

ಅದೇ ತಿಂಗಳು, ಮೊದಲ ಪತ್ನಿ ಜೀವನಾಂಶಕ್ಕಾಗಿ ಗ್ವಾಲಿಯರ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮುಂದೆ ಮೊಕದ್ದಮೆ ಹೂಡಿದರು; ಮಂಗಳವಾರ ಪ್ರಕರಣದ ವಿಚಾರಣೆಯ ಮೊದಲು ರಾಜಿ ಮಾಡಿಕೊಳ್ಳಲು ಪ್ರಯತ್ನಿಸುವಂತೆ ವಕೀಲ ಮತ್ತು ಸಲಹೆಗಾರ ಹರೀಶ್ ದಿವಾನ್ ಅವರನ್ನು ನ್ಯಾಯಾಲಯ ಕೇಳಿದೆ.

ದಿವಾನ್ ಹೇಳಿದರು, “ಸಮಾಲೋಚಕರಾಗಿರುವುದರಿಂದ, ಸಮಸ್ಯೆಯನ್ನು ಪರಿಹರಿಸಲು ಮೊದಲ ಪ್ರಯತ್ನವಾಗಿದೆ. ಮೊದಲ ಹೆಂಡತಿ ತನ್ನ ಮಗುವಿಗೆ ಭದ್ರತೆಯನ್ನು ಬಯಸಿದ್ದಳು ಮತ್ತು ತನ್ನ ಗಂಡನನ್ನು ಜೈಲಿಗೆ ಕಳುಹಿಸಲು ಬಯಸುವುದಿಲ್ಲ. ಎರಡನೆಯ ಹೆಂಡತಿ ಮೊದಲನೆಯವರೊಂದಿಗೆ ಬದುಕಲು ಸಿದ್ಧಳಾಗಿದ್ದಳು, ಆದರೆ ಪುರುಷನು ಮೊದಲನೆಯವಳೊಂದಿಗೆ ಬದುಕಲು ಬಯಸಲಿಲ್ಲ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 494 ರ ಅಡಿಯಲ್ಲಿ ದ್ವಿಪತ್ನಿತ್ವವು ಕಾನೂನುಬಾಹಿರವಾಗಿದೆ ಎಂದು ದಿವಾನ್ ಅವರು ವ್ಯಕ್ತಿಗೆ ವಿವರಿಸಿದರು. “ಪತಿಯು ನಂತರ ಇಬ್ಬರು ಹೆಂಡತಿಯರ ನಡುವೆ ಎಲ್ಲವನ್ನೂ ವಿಭಜಿಸಲು ಒಪ್ಪಿಕೊಂಡರು” ಎಂದು ಸಲಹೆಗಾರ ಹೇಳಿದರು.

“ಹಿಂದೂ ವಿವಾಹ ಕಾಯ್ದೆ ಮತ್ತು ಐಪಿಸಿ ಪ್ರಕಾರ ಇದು ಕಾನೂನುಬದ್ಧವಾಗಿಲ್ಲದಿದ್ದರೂ, ಮೂವರು ಪರಸ್ಪರ ತಿಳುವಳಿಕೆಯೊಂದಿಗೆ ಒಪ್ಪಂದದ ನಿಯಮಗಳ ಪ್ರಕಾರ ಬದುಕಬಹುದು. ಒಪ್ಪಂದವನ್ನು ಉಲ್ಲಂಘಿಸಿದರೆ, ಮೊದಲ ಪತ್ನಿ ನ್ಯಾಯಾಲಯದ ಮೊರೆ ಹೋಗಬಹುದು ಎಂದು ದಿವಾನ್ ಹೇಳಿದರು.